ಶುಕ್ರವಾರ, ಏಪ್ರಿಲ್ 24, 2009

ಮನಮೋಹನ್ ಸಿಂಗ್ `ದುರ್ಬಲ' ಪ್ರಧಾನಿಯೆ?

ಮನಮೋಹನ್ ಸಿಂಗ್ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ ಎಂಬುದು ಬಿಜೆಪಿಯ ಚುನಾವಣಾ ಘೋಷವಾಕ್ಯ. ಈ ಕುರಿತು ಪಕ್ಷಾತೀತವಾಗಿ ಯೋಚಿಸಬೇಕು.

ಅಟಲ ಬಿಹಾರಿ ವಾಜಪೇಯಿ ಬಗ್ಗೆಯೂ ಇಂತಹ ಆಪಾದನೆಗಳಿದ್ದವು. ಕಾಗರ್ಿಲ್ ಯುದ್ಧ ಗೆದ್ದರೂ ಪರಮಾಣು ಸ್ಫೋಟ ನಡೆಸಿದರೂ ಸಹ ಹಲವು ರಂಗಗಳಲ್ಲಿ ವಾಜಪೇಯಿ ಅವರದು ಮೃಧು ದೋರಣೆಯಾಗಿತ್ತು. ಅವರನ್ನು ಲಾಲ್ ಕೃಷ್ಣ ಆಡ್ವಾಣಿಯವರೊಂದಿಗೆ ಹೋಲಿಸಿ ವೆಂಕಯ್ಯ ನಾಯ್ಡು ಮಾಡಿದ್ದ `ವಿಕಾಸಪುರುಷ, ಲೋಹಪುರುಷ' ಎಂಬ ಬಣ್ಣನೆ ವ್ಯಾಪಕವಾಗಿ ಗಮನ ಸೆಳೆದಿತ್ತು. ತೀವ್ರ ವಿವಾದವನ್ನೂ ಸೃಷ್ಟಿಸಿತ್ತು. ಸ್ವತಃ ವಾಜಪೇಯಿ ಇದರಿಂದ ಕೋಪಗೊಂಡಿದ್ದರು.

ಇಷ್ಟಾದರೂ ವಾಜಪೇಯಿ ಅವರನ್ನು ರಿಮೋಟ್-ಕಂಟ್ರೋಲ್ಡ್ ಪ್ರಧಾನಿ ಎನ್ನಲಾಗದು. ಅವರ ಯಾವುದಾದರೂ ನಿದರ್ಿಷ್ಟ ನಿಧರ್ಾರ ದುರ್ಬಲವಾದದ್ದು ಎಂದು ಈಗ ಕೆಲವರಿಗೆ ಅನಿಸಿದರೆ ಅದಕ್ಕೆ ಕಾರಣ ವಾಜಪೇಯಿಯವರ ಸ್ವಂತ ಚಿಂತನೆಗಳೆ ಹೊರತು ಅವರು ಅನ್ಯರ ಕೈಗೊಂಬೆಯಾಗಿದ್ದುದು ಅವುಗಳಿಗೆ ಕಾರಣವಲ್ಲ. ಅವರೆಂದೂ ಸಂವಿಧಾನೇತರ ಶಕ್ತಿಗಳ ಮನೆ ಬಾಗಿಲು ಬಡಿಯಲಿಲ್ಲ. ತಮ್ಮ ಸ್ವಂತಿಕೆ, ಸ್ವಂತ ಆಡಳಿತ ವಿಧಾನ, ಸ್ವಂತ ವಿಚಾರಗಳನ್ನು ತ್ಯಜಿಸಲಿಲ್ಲ. ಎನ್ಡಿಎ ಸಭೆಯೂ ಅವರ ಮನೆಯಲ್ಲೇ ನಡೆಯುತ್ತಿತ್ತು. ಸಚಿವ ಸಂಪುಟ ಸಭೆಯ ಮತ್ತು ಎನ್ಡಿಎ ಒಕ್ಕೂಟದ ಸಭೆಯ ಅಂತಿಮ ತೀಮರ್ಾನ ಅವರದೇ ಆಗಿರುತ್ತಿತ್ತು. ಎಲ್ಲರ ಮಾತನ್ನೂ ಕೇಳಿದ ನಂತರ ಅವರು ಹೇಳುತ್ತಿದ್ದುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಿದ್ದರು.

ಆದರೆ ಪ್ರಸ್ತುತ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿಷಯ ಹಾಗಲ್ಲ. ಅವರು `ರೀಮೋಟ್-ಕಂಟ್ರೋಲ್ಡ್' ಪ್ರಧಾನಿ ಎಂಬ ಕಳಂಕ ಹೊತ್ತು ನಿಂತಿದ್ದಾರೆ. ತಾವು ದುರ್ಬಲರು, ಇತರು ತಮ್ಮನ್ನು ಆವರಿಸಿಕೊಳ್ಳಲು ಅನುಮತಿ ನೀಡಿರುವವರು ಎಂಬುದನ್ನು ಅವರು ಸಹಜವಾಗಿ ಒಪ್ಪುವುದಿಲ್ಲ. ಆ ಮಾತು ಕೇಳಿದಾಗೆಲ್ಲ ಅವರಿಗೂ ಕೋಪ ಬರುತ್ತದೆ. `ನಾನು ದುರ್ಬಲ ಪ್ರಧಾನಿ ಅಲ್ಲ' ಎಂದು ಕಿರುಚುತ್ತಾರೆ.

ಆದರೆ ಒಂದೇ ಸಮನೆ ಚೀರುವುದೇ ಪ್ರಬಲತೆಯ ಪುರಾವೆಯಲ್ಲ. ಅಷ್ಟು ಮಾತ್ರದಿಂದಲೇ ಮನಮೋಹನ್ ಅವರನ್ನು `ಪ್ರಬಲ ಪ್ರಧಾನಿ' ಎನ್ನಲಾಗದು. ಅವರವರು ನಡೆದು ಬಂದಿರುವ ದಾರಿ ಎಂತಹುದು ಎಂಬುದು ಗಮನಾರ್ಹವಾಗುತ್ತದೆ. ಇತಿಹಾಸದ ಪ್ರಾಮಾಣಿಕ ಮೌಲ್ಯಮಾಪನಕ್ಕೆ ಮನಮೋಹನ್ ತಮ್ಮನ್ನು ಒಳಪಡಿಸಿಕೊಳ್ಳಲೇಬೇಕಾಗುತ್ತದೆ.

ಮೊದಲಿಗೆ, ಅವರು ಜನರಿಂದ ಚುನಾಯಿತರಾದವರಲ್ಲ. ಅವರು ರಾಜ್ಯಸಭೆಯ ಸದಸ್ಯ. ಅವರು ಆರಿಸಿಬಂದದ್ದು ಅಸ್ಸಾಂ ರಾಜ್ಯದ ವಿಧಾನಸಭೆಯ ಕಾಂಗ್ರೆಸ್ ಸದಸ್ಯರ ಮತಗಳಿಂದ. ಅವರು ಸಾರ್ವಜನಿಕ ಜೀವನದಲ್ಲಿ ಬಹುಕಾಲದಿಂದ ನಾನಾ ಹುದ್ದೆಗಳಲ್ಲಿ ಇದ್ದಾರೆ. ಅವರು ಎಂದು ಅಸ್ಸಾಂ ರಾಜ್ಯದ ಶಾಶ್ವತ ನಿವಾಸಿಯಾಗಿದ್ದರು? ಆದರೂ `ನಾನು ಅಸ್ಸಾಂ ನಿವಾಸಿ' ಎಂದು ಸುಳ್ಳು ವಿಳಾಸ ನೀಡಿ ಆರಿಸಿ ಬಂದದ್ದು ಅವರ `ಪ್ರಾಮಾಣಿಕತೆ'ಗೆ ಕನ್ನಡಿ ಹಿಡಿಯುತ್ತದೆ. ಪದವಿ, ಅಧಿಕಾರ ಹೇಗೆ ಸಿಕ್ಕರೂ ಬೇಡ ಎನ್ನದೇ ಸ್ವೀಕರಿಸುವ ಮಾಮೂಲಿ ರಾಜಕಾರಣಿಗಿಂತಲೂ ಅವರು ಭಿನ್ನರೇನಲ್ಲ.

ಜನರ ಹಂಗೇ ಇಲ್ಲದೇ ಒಬ್ಬ ರಾಜ್ಯಸಭಾ ಸದಸ್ಯ ದೇಶದ ಪ್ರಧಾನಿಯಾದದ್ದು ಎಷ್ಟು ಸರಿ? ಸಂವಿಧಾನದಲ್ಲಿ ಇದಕ್ಕೆ ತಾಂತ್ರಿಕವಾಗಿ ಅವಕಾಶವಿದೆ. ಆದರೆ 100 ಕೋಟಿ ಜನರಿರುವ ದೊಡ್ಡ ಪ್ರಜಾತಾಂತ್ರಿಕ ದೇಶದಲ್ಲಿ ಹೀಗೆ ಮಾಡುವುದು ನೈತಿಕತೆಯೆ? ಕಾಂಗ್ರೆಸ್ ಪಕ್ಷದಲ್ಲಿ ಲೋಕಸಭೆಗೆ ಆರಿಸಿ ಬಂದಿದ್ದ ಅನೇಕ ನಾಯಕರಿದ್ದರು. ಆದರೂ ಮನಮೋಹನ್ ಸಿಂಗರೇ ಏಕೆ ದೇಶದ ಪ್ರಧಾನಿಯಾಗಬೇಕು?

ಇದಕ್ಕೆ ಉತ್ತರ ಎಲ್ಲರಿಗೂ ಗೊತ್ತು. ಅವರು ಸೋನಿಯಾ ಗಾಂಧಿಯ ಆಯ್ಕೆ. ದೇಶದ ಜನರ ಆಯ್ಕೆಯಲ್ಲ. `ಇವರು ಪ್ರಧಾನಿಯಗಲಿ' ಎಂದು ಸೋನಿಯಾ ಅಪ್ಪಣೆ ಕೊಟ್ಟರು. ಮನಮೋಹನ್ ಪ್ರಧಾನಿಯಾದರು. ಆದರೆ ಸೋನಿಯಾ ಏಕೆ ಮನಮೋಹನ್ ಸಿಂಗ್ ಅವರನ್ನೇ ಆರಿಸಿದರು? ಹೆಚ್ಚಿನ ಅನುಭವಶಾಲಿ ಪ್ರಣಬ್ ಮುಖಜರ್ಿಯವರನ್ನು ಏಕೆ ಆರಿಸಲಿಲ್ಲ? ಮನಮೋಹನ್ ಅರ್ಥಶಾಸ್ತ್ರಜ್ಞ ಎಂದೆ? ನಮ್ಮಲ್ಲಿ ಮನಮೋಹನ್ ಸೀಂಗರಿಗಿಂತಲೂ ಬುದ್ಧ್ಧಿವಂತರು ಎನಿಸಿದ ಅನೇಕ ಮಾಜಿ ರಿಸವರ್್ ಬ್ಯಾಂಕ್ ಗವರ್ನರ್ಗಳಿದ್ದಾರೆ. ಇತರ ಅಧಿಕಾರಿಗಳಿದ್ದಾರೆ. ಸ್ವತಃ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಇನ್ನೂ ಸಾಕಷ್ಟು ವಯಸ್ಸಿರುವ, ಚುರುಕಾದ, ಚಾಲಾಕಿ ಮನುಷ್ಯ. ಅವರನ್ನೇ ಆರಿಸಲಿಲ್ಲ? ಜಾತಿ ಆಧಾರದ ಮೇಲೆ ನೋಡಿದರೂ ಅವರೂ ಸಹ ಸಿಖ್ ಮತೀಯರೇ ಅಲ್ಲವೆ? ಮನಮೋಹನ್ ಆಯ್ಕೆಗೆ ಕಾರಣ ಏನು? ನಿಜವಾದ ಕಾರಣ ಅವರು ಮಾತಾಡದ ಮೂತರ್ಿ ಎಂಬುದೇ ಅಲ್ಲವೆ? ಈ ಮೂತರ್ಿಯನ್ನು ಪ್ರತಿಷ್ಠಾಪಿಸಿ, ಅದರ ಹೆಸರಿನಲ್ಲಿ, ಪ್ರತಿಷ್ಠಾಪಕರು ಆಡಳಿತ ನಡೆಸಬಹುದು! ಅದಕ್ಕೆ ಈ ಮೂತರ್ಿ ಅವಕಾಶ ನೀಡುತ್ತದೆ!

ಎಲ್ಲ ಕಾಲದಲ್ಲೂ ಖಂಡಿತವಾದಿ ಲೋಕವಿರೋಧಿಯೇ. ಯಾರನ್ನಾದರೂ ದೊಡ್ಡ ಹುದ್ದೆಗಳಿಗೆ ಆರಿಸುವಾಗ ಆರಿಸುವರು ನೋಡುವುದು ಈತ ತನಗೆ ನಿಷ್ಠನೇ ಎಂಬುದನ್ನು. ಅದೇ ಮೊದಲ ಅರ್ಹತೆ. ದಕ್ಷತೆಗಿಂತಲೂ ಬದ್ಧತೆಯೇ ಇಲ್ಲಿ ಮುಖ್ಯವಾಗುತ್ತದೆ. `ಪೀಠದಲ್ಲಿ ಕುಳಿತ ಮೇಲೂ ಈತ ದಕ್ಷನಾಗಬಾರದು. ನಮ್ಮ ಪರವಾಗಿ ಪೀಠದಲ್ಲಿರಬೇಕು ಅಷ್ಟೇ. ನಾವು ಹೇಳಿದಂತೆ ಕೇಳಬೇಕು. ನಾವು ಕೇಳಿದಾಗ ಪೀಠ ಬಿಟ್ಟುಕೊಡಲು ಸಿದ್ಧನಾಗಿರಬೇಕು' ಎಂಬುದು ಆಯ್ಕೆಗಾರರ ಅಪೇಕ್ಷೆ. ಅದಕ್ಕೆ ಯಾರು ತಕ್ಕವರೋ ಅವರಿಗೆ ಪೀಠ ಸಿಗುತ್ತದೆ. ಲಾಲೂ ಪ್ರಸಾದ್ ರಾಬ್ಡಿ ದೇವಿಯನ್ನು ಒಂದೇ ದಿನದಲ್ಲಿ ಬಿಹಾರದ ಮುಖ್ಯಮಂತ್ರಿ ಮಾಡಲಿಲ್ಲವೆ? ಸುಪ್ರೀಮ್ ಕೋಟರ್್ ಆದೇಶದಂತೆ 2001ರಲ್ಲಿ ಜಯಲಲಿತಾ ಅಧಿಕಾರ ಕಳೆದುಕೊಂಡಾಗ ಪನ್ನೀರ್ಸೆಲ್ವಮ್ ಎಂಬ ಟೀ ಅಂಗಡಿಯ ಮಾಲೀಕನನ್ನು ಏಕಾಏಕಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆರಿಬಿಟ್ಟರು! ಮರುವರ್ಷ ಕೋಟರ್ಿನ ತೀಪರ್ು ಪಡೆದು ಮತ್ತೆ ಜಯಾ ಮುಖ್ಯಮಂತ್ರಿಯಾದರು. ಇಲ್ಲಿ ಪನ್ನೀರ್ಸೆಲ್ವಮ್ ಅವರನ್ನು ಪ್ರಬಲ ಜನನಾಯಕ ಎನ್ನಲಾದೀತೆ?

ಜನರ ಹಂಗಿಲ್ಲದ ಪ್ರಜಾತಂತ್ರದಲ್ಲಿ ಬೇರೆ ಯಾರಾದರೊಬ್ಬರ ಹಂಗಿನ ದಾಸರಾಗಬೇಕಾಗುತ್ತದೆ. ಮನಮೋಹನ್ ಸಿಂಗ್ ಆಗಿದ್ದು ಇದೇ. ಪ್ರಧಾನಿಯಾದವನು ಸಂಫೂರ್ಣ ದೇಶದ ಮುಖಂಡ. 100 ಕೋಟಿ ಜನರ ನಾಯಕ. ಅದರೆ ಅಂತಹ ಯಾವುದೇ ದಕ್ಷತೆಯನ್ನು, ಕಳಕಳಿಯನ್ನು ಕಳೆದ 5 ವರ್ಷಗಳಲ್ಲಿ ಮನಮೋಹನ್ ಪ್ರದಶರ್ಿಸಿಲ್ಲ.

ಒಂದು ಅಂಕಿಅಂಶದ ಪ್ರಕಾರ ಕಳೆದ ಐದು ವರ್ಷಗಳಲ್ಲಿ 3850 ಭಾರತೀಯರು ಭಯೋತ್ಪಾದಕರಿಗೆ ಬಲಿಯಾಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 12ಕ್ಕೂ ಹೆಚ್ಚು ದೊಡ್ಡ ಜಿಹಾದಿ ದಾಳಿಗಳಾಗಿವೆ. 26/11 ಘಟನೆಯನ್ನು ಬಿಟ್ಟರೆ ಉಳಿದ ಯಾವ ಸಂದರ್ಭದಲ್ಲೂ ಮನಮೋಹನ್ ನೊಂದ ಜನರಿಗೆ ತಮ್ಮ ಮುಖವನ್ನೂ ಸರಿಯಾಗಿ ತೋರಿಸಲಿಲ್ಲ. 26/11 ಘಟನೆಯಾದಾಗಲೂ ಅವರು ಮುಂಬಯಿಗೆ ಗೃಹಮಂತ್ರಿ, ರಕ್ಷಣಾ ಮಂತ್ರಿಗಳನ್ನು ಕರೆದುಕೊಂಡು ಹೋಗದೇ ಸೋನಿಯಾ ಗಾಂಧಿ ಜೊತೆಗೆ ಹೋದರು. ಇಂತಹ ಸ್ಥಿತಿಯಲ್ಲಿ ಬರಾಕ್ ಒಬಾಮಾ ಅಥವಾ ಇತರ ರಾಷ್ಟ್ರನಾಯಕರು ಇದ್ದರೆ ಹೇಗೆ ವತರ್ಿಸುತ್ತಿದ್ದರು ಎಂಬುದು ಗಮನಾರ್ಹ. 2001ರ ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿಯ ನಂತರ ಜಾಜರ್್ ಬುಷ್ ತಮ್ಮ ರಿಪಬ್ಲಿಕನ್ ಪಕ್ಷದ ಅಧ್ಯಕ್ಷರನ್ನು ಮುಂದೆ ಬಿಟ್ಟುಕೊಂಡು ಅವರ ಹಿಂದೆ ಅಲೆಯುತ್ತಿದ್ದರೆ?

2004ರಲ್ಲಿ ಯುಪಿಎ ಸಕರ್ಾರ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಒಂದೇ ಒಂದು ಸಚಿವ ಸಂಪುಟದ ಸಭೆಗೂ ಹಿರಿಯ ಸಚಿವರೊಬ್ಬರು ಹಾಜರಾಗಿಲ್ಲ! ಅವರ ವಿರುದ್ಧ ನಮ್ಮ `ಪ್ರಬಲ' ಪ್ರಧಾನಿಗಳು ಯಾವ ಕ್ರಮ ಕೈಗೊಂಡಿದ್ದಾರೆ? ಈ ಕುರಿತು ಮನಮೋಹನ್ ಚಕಾರವೆತ್ತಿಲ್ಲ. ಏಕೆಂದರೆ ಆ ಸಚಿವರೂ 10 ಜನಪಥ್ ವಿಳಾಸದ ನಿಷ್ಠರಲ್ಲೊಬ್ಬರು!

ಸಕರ್ಾರದ ಮುಖ್ಯಸ್ಥರಾಗಿ ತಪ್ಪು ಮಾಡುವ ಸಚಿವರನ್ನು ಪ್ರಶ್ನಿಸುವ, ಅಥವಾ ಅವರನ್ನು ತೆಗೆದುಹಾಕುವ ಅಧಿಕಾರ ಪ್ರಧಾನಿಗಿದೆ. ಇರುವ ಅಧಿಕಾರವನ್ನೂ ಬಳಸದ ಇವರು ಪ್ರಬಲರೋ, ದುರ್ಬಲರೋ? ಶಿಬು ಸೋರೆನ್, ರಾಮದಾಸ್, ಅಬ್ದುಲ್ ರೆಹಮಾನ್ ಅಂತುಲೆ - ಹೀಗೆ ಅನೇಕ ಸಚಿವರು ತಮ್ಮ ಕೃತ್ಯ ಹಾಗೂ ಹೇಳಿಕೆಗಳಿಂದ ಸಕರ್ಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರೂ ಅವರ ಗೊಡವೆಗೇ ಪ್ರಧಾನಿ ಹೋಗಲಿಲ್ಲ. ಕ್ರಮ ತೆಗೆದುಕೊಳ್ಳುವ ಅಧಿಕಾರ ತಮಗಿದೆ, ಅದನ್ನು ಚಲಾಯಿಸಬೇಕಾದ್ದು ತಮ್ಮ ಕರ್ತವ್ಯ ಎಂದು ಕುಚರ್ಿಯಲ್ಲಿ ಕುಳಿತ ಒಂದು ದಿನವಾದರೂ ಅವರಿಗೆ ಅನಿಸಿದ್ದುಂಟೆ? ಪ್ರತಿಯೊಂದಕ್ಕೂ ಸೋನಿಯಾ ನಿವಾಸದತ್ತ ಮುಖ ಮಾಡುವ ಪ್ರವೃತ್ತಿ ಕೇವಲ ದೌರ್ಬಲ್ಯ ಮಾತ್ರವೇ ಅಲ್ಲ. ಪ್ರಧಾನಿ ಈ ಕುರಿತು ಜನತೆಗೆ ವಿವರಿಸಬೇಕು.

ಯುಪಿಎ ಮಿತ್ರಪಕ್ಷಗಳು ಸಹ ಪ್ರಧಾನಿಯವರನ್ನು ಗಂಭೀರವಾಗಿ ಭಾವಿಸಿಲ್ಲ. ಡಿಎಂಕೆ ಪಕ್ಷದ ರಾಜಾ ದೂರಸಂಪರ್ಕ ಖಾತೆಯ ಸಂಪುಟ ಸಚಿವರಾಗಿ ನೇಮಕಗೊಂಡಿರುವ (ದಯಾನಿಧಿ ಮಾರನ್ ರಾಜೀನಾಮೆಯ ನಂತರ) ಸಂಗತಿಯನ್ನು ಮೊದಲು ಘೋಷಿಸಿದ್ದು ಡಿಎಂಕೆ ಮುಖಂಡ ಕರುಣಾನಿಧಿ. ಪ್ರಧಾನಮಂತ್ರಿ ಕಾಯರ್ಾಲಯವಲ್ಲ! ಎಲ್ಲ ಮಿತ್ರಪಕ್ಷಗಳ ಸಚಿವರುಗಳೂ ಸೋನಿಯಾರತ್ತ ಮುಖ ಮಾಡುತ್ತಾರೆಯೇ ಮನಮೋಹನ್ ಅವರ ಕಡೆಗಲ್ಲ. ಡಿಎಂಕೆ, ಎನ್ಸಿಪಿ ಹಾಗೂ ಪಿಎಂಕೆ ಸಚಿವರುಗಳು ಸಾರ್ವಜನಿಕ ಹಣ ಬಳಸಿ ನಡೆಸಿದ ವಿದೇಶ ಯಾತ್ರೆಗಳ ಬಗ್ಗೆ ಪ್ರಧಾನಮಂತ್ರಿ ಕಾಯರ್ಾಲಯಕ್ಕೆ ಇನ್ನೂ ವರದಿ ನೀಡಿಯೇ ಇಲ್ಲ. ಸೂಕ್ತ ಕ್ರಮ ಕೈಗೊಳ್ಳಲು ನಮ್ಮ `ಪ್ರಬಲ' ಪ್ರಧಾನಿಗೆ ಇನ್ನೂ ಪುರುಸೊತ್ತು ಸಿಕ್ಕಿಲ್ಲ!

ದೇಶವನ್ನು ಕಾಡುತ್ತಿರುವ ಜಿಹಾದಿ ಭಯೋತ್ಪಾದನೆಯ ವಿರುದ್ಧವಾಗಿ ಈವರೆಗೆ ಮನಮೋಹನ್ ಸ್ಪಷ್ಟವಾದ ಒಂದು ಹೇಳಿಕೆಯನ್ನೂ ನೀಡಿಲ್ಲ. ಅವರ ಅವಧಿಯಲ್ಲಿ ಸಿಬಿಐ ಹಲವರು ಬಾರಿ ಸುಪ್ರೀಮ್ ಕೋಟರ್ಿನಿಂದ ಛೀಮಾರಿ ಹಾಕಿಸಿಕೊಂಡಿದೆ. ಸಕರ್ಾರದ ಕೈಗೊಂಬೆಯಾಗಿ ಆಪಾದಿತರನೇಕರ ಪರವಾಗಿ ವತರ್ಿಸಿದ್ದನ್ನು ಸ್ವತಃ ಸಿಬಿಐ ಮುಖ್ಯಸ್ಥರೇ ಸುಪ್ರೀಮ್ ಕೋಟರ್್ ಎದುರಿಗೆ ಒಪ್ಪಿಕೊಂಡಿರುವುದು ಮನಮೋಹನ್ ಸಿಂಗ್ ಅವರ `ದಕ್ಷತೆಗೆ' ಮತ್ತು `ಪ್ರಾಮಾಣಿಕತೆಗೆ' ಕನ್ನಡಿ ಹಿಡಿಯುತ್ತದೆ.

ಬರೀ ಪೇಲವ ನಗೆಯನ್ನು ಮತ್ತು ಸೌಮ್ಯ ಮುಖವನ್ನು ಸಜ್ಜನಿಕೆಯ ಸಂಕೇತ ಅಂದುಕೊಂಡರೆ ಮನಮೋಹನ್ ಅತ್ಯಂತ ಹೆಚ್ಚು ಸಜ್ಜನರು! ಆದರೆ ಅವರು ಖಂಡಿತಾ ದಕ್ಷರಲ್ಲ.

ಕೇಂದ್ರದಲ್ಲಿ ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಲಾಲ್ ಕೃಷ್ಣ ಆಡ್ವಾಣಿ ಪ್ರಧಾನಿ ಆಗುತ್ತಾರೆ. ಆದರೆ ಅವರು ಪ್ರಬಲ ಪ್ರಧಾನಿ ಎನಿಸುಬಲ್ಲರೆ? ಈ ಪ್ರಶ್ನೆಗೆ ಕಾಲವೇ ಉತ್ತರ ಹೇಳಬೇಕು (ಅದೂ ಅವರು ಪ್ರಧಾನಿಯಾದರೆ!).

ವಾಜಪೇಯಿ ಪ್ರಧಾನಿಯಾಗಿದ್ದಾಗ ಅವರನ್ನು ಕಾಂಗ್ರೆಸ್ ಪಕ್ಷ `ವೀಕ್-ನೀಡ್ ಪ್ರೈಮ್ ಮಿನಿಸ್ಟರ್' ಎಂದು ಛೇಡಿಸುತ್ತಿತ್ತು. ಈಗ ಮನಮೋಹನ್ ಅವರನ್ನು `ವೀಕ್-ಹಾಟರ್ೆಡ್ ಪ್ರೈಮ್ ಮಿನಿಸ್ಟರ್' ಎನ್ನಬಹುದೆ?

ಶೂ-ಎಸೆದು ಸುದ್ದಿ ಮಾಡುವ ಕಾಲ!

ಅಮೆರಿಕದ ಮಾಜಿ ಅಧ್ಯಕ್ಷ ಜಾಜರ್್ ಡಬ್ಲ್ಯೂ ಬುಷ್ ಮೇಲೆ ಇರಾಕಿ ಪತ್ರಕರ್ತನೊಬ್ಬ ಶೂಗಳನ್ನು ಎಸೆದ ಪ್ರಕರಣದಿಂದಾಗಿ ಹೊಸ ಬೆಳವಣಿಗೆಯಾದಂತಿದೆ. ಶೂಗಳನ್ನು, ಚಪ್ಪಲಿಗಳನ್ನು ಎಸೆಯುವ ಮೂಲಕ ತಮ್ಮ `ಪ್ರತಿಭಟನೆ' ವ್ಯಕ್ತಪಡಿಸುವ ಹೊಸ ಪದ್ಧತಿ ಅಥವಾ ಶಕೆ ಆರಂಭವಾಗಿರುವಂತಿದೆ.

ಇದೊಂದು ಕೆಟ್ಟ ಬೆಳವಣಿಗೆಯೇ ಸರಿ. ಆದರೆ ಖಂಡಿತಾ ಇದು ಹೊಸ ಪದ್ಧತಿಯೇನಲ್ಲ. ಶೂಸ್, ಚಪ್ಪಲಿಗಳು, ಕೊಳೆತ ಹಣ್ಣು. ಮೊಟ್ಟೆಗಳನ್ನು ಮುಖದ ಮೇಲೆ ಎಸೆದು ಪ್ರತಿಭಟನೆ ಸೂಚಿಸುವುದು ಸಣ್ಣಪುಟ್ಟ ಮಟ್ಟಗಳಲ್ಲಿ ಮೊದಲಿನಿಂದಲೂ ನಡೆದುಕೊಂಡೇ ಬಂದಿರುವಂತಹುದು. ಆದರೆ ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಸುದ್ದಿಯಾಗುವ ರೀತಿಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಹಲವಾರು ಪ್ರಮುಖ ಶೂಸ್ ಪ್ರಕರಣಗಳು ನಡೆದಿರುವುದು ಗಮನಾರ್ಹ.

ಮೊದಲ ಪ್ರಮುಖ ಪ್ರಕರಣ ನಿಮಗೆ ನೆನಪಿರಬಹುದು. 2008 ಡಿಸೆಂಬರ್ 14 ರಂದು ಜಾಜರ್್ ಬುಷ್ ಇರಾಕ್ಗೆ ಹಠಾತ್ತಾಗಿ ಭೇಟಿ ನೀಡಿದ್ದರು. ತುಂಬಿದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದಾಗ ಕೈರೋ ಮೂಲದ ಅಲ್-ಬಾಗ್ದಾದಿಯಾ ಟಿವಿಯ ಇರಾಕಿ ವರದಿಗಾರ ಮುಂತದಾರ್ ಅಲ್-ಜೈದಿ ಹಠಾತ್ತಾಗಿ ಎದ್ದುನಿಂತು `ಛೀ ನಾಯಿ' ಎಂದು ಬುಷ್ ಅವರನ್ನು ಬೈದ. ಅನಂತರ ಒಂದಾದ ನಂತರ ಒಂದರಂತೆ ತನ್ನ ಎರಡು ಶೂಗಳನ್ನೂ ಅವರ ಮುಖಕ್ಕೆ ಎಸೆದ.

ಇದಾದ ನಂತರ `ಸಾಮೂಹಿಕ ಶೂ-ಎಸೆತದ ಚಳವಳಿ'ಯನ್ನು ನಡೆಸಲಾಯಿತು. ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ನಡೆಯುತ್ತಿರುವ `ಗಾಜಾದಲ್ಲಿ ಬ್ರಿಟಿಷ್ ಸಕರ್ಾರ ನಿಷ್ಕ್ರಿಯತೆ ತೋರುತ್ತಿದೆ' ಎಂದು ಆರೋಪಿಸಿ ಸಾವಿರಾರು ಇಸ್ಲಾಮೀ ಕಾರ್ಯಕರ್ತರು ಬ್ರಿಟನ್ ಪ್ರಧಾನಿ ಗೋರ್ಡನ್ ಬ್ರೌನ್ ಅವರ ಅಧಿಕೃತ ನಿವಾಸದ ಮೇಲೆ ಸಾಮೂಹಿಕವಾಗಿ ಶೂಗಳನ್ನು ಎಸೆದರು.

ನಂತರದ ಶಿಕಾರಿ ಚೀನಾ ಪ್ರಧಾನಿ ವೆನ್ ಜಿಯಾಬಾವ್. ಇದೇ ಫೆಬ್ರವರಿ 2 ರಂದು ಅವರು ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಆಥರ್ಿಕತೆಯ ಬಗ್ಗೆ ಭಾಷಣ ಮಾಡುತ್ತಿದ್ದರು. `ಹೇ ಸವರ್ಾಧಿಕಾರಿ' ಎಂಬ ಕೂಗು ಕೇಳಿಸಿತು. ತಕ್ಷಣ ಅವರ ಮೇಲೆ ಶೂ ಎಸೆಯಲಾಯಿತು. ಅದನ್ನು ಎಸೆದದ್ದು ಜರ್ಮನಿ ಮೂಲದ ಮಾಟರ್ಿನ್ ಜಾನ್ಕ್ ಎಂಬ ಪ್ಯಾಥೋಲಜಿ ವಿದ್ಯಾಥರ್ಿ.

ಸುಪ್ರೀಂ ಕೋಟರ್ಿನ ನ್ಯಾಯಾಧೀಶ ಅರಿಜಿತ್ ಪಸಾಯತ್ ಅವರ ಮೇಲೆ ಕಟಕಟೆಯಲ್ಲಿದ್ದ ವಿದ್ಯಾವಂತ ಆರೋಪಿ ಮಹಿಳೆಯೊಬ್ಬಳು ಇದೇ ಮಾಚರ್್ 30 ರಂದು ಶೂ ಎಸೆದ ಪ್ರಸಂಗ ನಡೆಯಿತು. ಆದರೆ ಅದನ್ನು ಪಸಾಯತ್ ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. ಅಲ್ಲಿ ಟಿವಿ ಕ್ಯಾಮೆರಾಗಳು ಇರಲಿಲ್ಲ. ಹೀಗಾಗಿ ಅದು ದೊಡ್ಡ ಸುದ್ದಿಯಾಗಲಿಲ್ಲ.

ಈಚಿನ ಶಿಕಾರಿ ಭಾರತದ ಗೃಹಮಂತ್ರಿ ಪಿ. ಚಿದಂಬರಂ. ಅವರ ಮೇಲೆ `ದೈನಿಕ್ ಜಾಗರಣ್' ಪತ್ರಿಕೆಯ ವರದಿಗಾರ ಜನರ್ೈಲ್ ಸಿಂಗ್ ಶೂ ಎಸೆದದ್ದು ದೊಡ್ಡ ಸುದ್ದಿಯಾಯಿತು. 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯ ನಂತರ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಖ್ಖರ ಮೇಲೆ ನಡೆಸಿದ ಹಿಂಸಾಚಾರಕ್ಕೆ 3000 ಸಿಖ್ಖರು ಬಲಿಯಾದ ಪ್ರಕರಣ ಈ ಘಟನೆಗೆ ಕಾರಣ. ಸಿಖ್ ನರಮೇಧದ ಪ್ರಮುಖ ಆರೋಪಿ, ಕಾಂಗ್ರೆಸ್ ನಾಯಕ, ಜಗದೀಶ್ ಟೈಟ್ಲರ್ ಅವರನ್ನು `ಅಮಾಯಕ' ಎಂದು ಸಿಬಿಐ ದೋಷಮುಕ್ತಗೊಳಿಸಿದ ವಿಷಯ ಚಿದಂಬರಂ ಗೋಷ್ಠಿಯಲ್ಲಿ ಪ್ರಸ್ತಾಪವಾಯಿತು. ಸಿಖ್ಖರ ನರಮೇಧ ನಡೆಸಿದ ಕಾಂಗ್ರೆಸ್ ನಾಯಕನ ಪರವಾಗಿ ವತರ್ಿಸಲು ಸಿಬಿಐ ಮೇಲೆ ಕೇಂದ್ರ ಸಕರ್ಾರ ಒತ್ತಡ ಹೇರಿದೆಯೆ ಎಂಬ ಜನೈಲನ ಪ್ರಶ್ನೆಗೆ ಚಿದಂಬರಂ ಹಾರಿಕೆಯ ಉತ್ತರ ನೀಡಿದರು. `ಈ ವಿಷಯದಲ್ಲಿ ಚಚರ್ೆ ಬೇಕಿಲ್ಲ' ಎಂದು ಅವರು ಹೇಳುತ್ತಿದ್ದಂತೆ `ನಾನಿದನ್ನು ಪ್ರತಿಭಟಿಸುತ್ತೇನೆ' ಎಂದು ಜನರ್ೈಲ್ ಚಿದಂಬರಂ ಸಮೀಪ ಬೀಳುವಂತೆ ತನ್ನ ಶೂ ಎಸೆದ.

ಈ ಪ್ರಕರಣಗಳಲ್ಲಿ ಶೂಗಳನ್ನು ಎಸೆದವರೆಲ್ಲ ವಿದ್ಯಾವಂತರು. ತಾವೇನು ಮಾಡುತ್ತಿದ್ದೇವೆ ಎಂಬುದನ್ನು ತಿಳಿದವರು. ಅದರಲ್ಲೂ ಎರಡು ಪ್ರಕರಣಗಳಲ್ಲಿ ತಾವು ಕೇಳಿದ್ದನ್ನು ಕೇಳಿದ ಹಾಗೆಯೇ ವರದಿ ಮಾಡಬೇಕಾದ ಜವಾಬ್ದಾರಿ ಇರುವ ಪತ್ರಕರ್ತರು ಶೂ ಎಸೆದಿದ್ದಾರೆ. ಸುದ್ದಿ ನೀಡಬೇಕಾದವರು ತಾವೇ ಸುದ್ದಿಯಾಗುತ್ತಿರುವುದು ಅಪೇಕ್ಷಣೀಯ ಬೇಳವಣಿಗೆಯಲ್ಲ. ಇದರಿಂದ ಇನ್ನು ಮುಂದೆ ಮಾಧ್ಯಮಗೋಷ್ಠಿಗಳಿಗೆ ಹಾಜರಾಗುವ ಪತ್ರಕರ್ತರು ತಮ್ಮ ಪಾದರಕ್ಷೆಗಳನ್ನು ಕಳಚಿಟ್ಟು ಬರೀಗಾಲಲ್ಲಿ ಬರಬೇಕೆಂಬ ಹೊಸ ತಾಕೀತು ಶುರುವಾಗಲೂಬಹುದು. ಅವರ ಪೆನ್ನುಗಳೂ ಸುರಕ್ಷಾ ಪರಿಧಿಗೆ ಬರಬಹುದು. `ಲೇಖನಿ ಖಡ್ಗಕ್ಕಿಂತಲೂ ಹರಿತವಾದದ್ದು' ಎಂಬ ಮಾತು ಬೇರೊಂದು ವಿಚಿತ್ರ ಅರ್ಥದಲ್ಲಿ ಗಂಭೀರವಾಗಿ ಭಾವಿಸಲ್ಪಡಬಹುದು!

ಬುಷ್ ಮೇಲೆ ಶೂ ಎಸೆದ ಬಳಿಕ ಅಲ್-ಜೈದಿಯ ಬಂಧನವಾಯಿತು. ಅನಂತರ ನ್ಯಾಯಾಲಯದಲ್ಲಿ ಆತನಿಗೆ ಮೂರು ವರ್ಷಗಳ ಜೈಲು ಶಿಕ್ಷೆಯಾಯಿತು. ವೆನ್ ಜಿಯಾಬಾವ್ ಮೇಲೆ ಶೂ ಎಸೆದ ಘಟನೆಯನ್ನು ಚೀನಾದಲ್ಲಿ ವರದಿ ಮಾಡದೇ `ಸೆನ್ಸಾರ್' ಮಾಡಲಾಯಿತು! ಆದರೂ ಮಾಟರ್ಿನ್ ವಿರುದ್ಧ ಬ್ರಿಟನ್ನಿನಲ್ಲಿ ಕೇಸು ನಡೆಯುತ್ತಿದೆ. ಜನರ್ೈಲ್ ವಿರುದ್ಧ ಚಿದಂಬರಂ ದೂರು ದಾಖಲಿಸಲಿಲ್ಲ. ದೈನಿಕ್ ಜಾಗರಣ್ ಪತ್ರಿಕೆ ಆತನ ಮೇಲೆ ಶಿಸ್ತುಕ್ರಮ ತೆಗೆದುಕೊಂಡು ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ.

ಈ ಪ್ರಕರಣಗಳನ್ನು ಜಗತ್ತು ಸ್ವೀಕರಿಸಿದ ರೀತಿಯೂ ಗಮನಾರ್ಹ. ಶೂ ಎಸೆಯುವುದನ್ನು ಎಸೆದವರ ಹಿನ್ನೆಲೆ, ಉದ್ದೇಶಗಳನ್ನು ಸಮಥರ್ಿಸುವವರು ಸ್ವಾಗತಿಸಿದ್ದಾರೆ. ಇಸ್ಲಾಮೀ ತೀವ್ರವಾದಿಗಳು ಅಲ್-ಜೈದಿಯಗೆ ಹೀರೋ ಪಟ್ಟ ನೀಡಿದ್ದಾರೆ. ಮುಸ್ಲಿಂ ಶ್ರೀಮಂತನೊಬ್ಬ ಅವರಿಗೆ ತನ್ನ ಒಬ್ಬಳೇ ಮಗಳನ್ನು ಕೊಡುವ ಪ್ರಸ್ತಾಪ ಮುಂದಿಟ್ಟಿದ್ದ! ಇಂಟರ್ನೆಟ್ನಲ್ಲಿ ಬುಷ್ ಮೇಲೆ ಶೂಸ್ ಎಸೆಯುವ ಆನ್ಲೈನ್ ವಿಡೀಯೋ ಗೇಮ್ಗಳ ಸ್ಪಧರ್ೆಗಳು ನಡೆಯುತ್ತಿವೆ! ಅಕಾಲಿದಳದ ದೆಹಲಿ ಘಟಕ ಜನರ್ೈಲ್ ಅನ್ನು ಕೊಂಡಾಡಿದೆ. ಆತನಿಗೆ 2 ಲಕ್ಷ ರೂ ಬಹುಮಾನ ಘೋಷಿಸಿದೆ. ಸಿಮ್ರನ್ಜಿತ್ ಸಿಂಗ್ ಮಾನ್ ನಾಯಕತ್ವದ ಅಕಾಲಿದಳ (ಅಮೃತಸರ) ಆತನಿಗೆ ಲೋಕಸಭಾ ಟಿಕೆಟ್ ನೀಡಲು ಮುಂದೆ ಬಂದಿತ್ತು. ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಆತನಿಗೆ ಉದ್ಯೋಗ ನೀಡುವ ಪ್ರಸ್ತಾಪ ಮಾಡಿದೆ.

ಈವರೆಗಿನ ಹೆಚ್ಚಿನ `ಶೂ ಬಾಣ'ಗಳ ಗುರಿ ರಾಜಕಾರಣಿಗಳು. ಸದ್ಯದ ಪ್ರಮುಖ ಗುರಿಗಾರರೆಲ್ಲ ವಿದ್ಯಾವಂತರು. ಪತ್ರಕರ್ತರು. ಮುಂದೆ ಸಾಮಾನ್ಯ ಜನರೂ ಈ ರೀತಿಯ `ಪ್ರತಿಭಟನೆ'ಗಳಿಗೆ ಇಳಿದರೆ ರಾಜಕಾರಣಿಗಳ ಜೊತೆಗೆ ಮಿಷನರಿಗಳು, ಪೋಪ್, ಮಠಾಧೀಶರು, ಮುಲ್ಲಾಗಳು - ಹೀಗೆ ಎಲ್ಲರೂ ಗುರಿಗಳಾಗಬಹುದು! ಜಾತಿ ಮುಖಂಡರು, ಊರಿನ ಜಮೀನುದಾರರಿಂದ ಹಿಡಿದು ಸಾರ್ವಜನಿಕ ಸಂಪರ್ಕಕ್ಕೆ ಬರುವ ಎಲ್ಲರೂ ಬಹಳ ಎಚ್ಚರದಿಂದ ಇರಬೇಕಾಗುತ್ತದೆ! ಮುಂದೆ ಪ್ರತಿಕೃತಿಗಳ ದಹನದ ಬದಲು ಪ್ರತಿಕೃತಿಗಳನ್ನು ಮಾಡಿಟ್ಟು ಅವುಗಳಿಗೆ ಸಾರ್ವಜನಿಕ ಚಪ್ಪಲಿ ಸೇವೆ ಮಾಡುವುದು ಹೆಚ್ಚಾಗಬಹುದು.

ಶೂ ಎಸೆಯುವುದು ಒಳ್ಳೆಯ ಪ್ರತಿಭಟವಾ ವಿಧಾನವೆ? - ಎಂಬುದು ಮುಖ್ಯವಾದ ಪ್ರಶ್ನೆ. ಅದರಲ್ಲೂ ಪ್ರತಿಭಟನೆಯ ಸ್ಥಳ ಯಾವುದು? ಪ್ರತಿಭಟನಕಾರರು ಯಾರು? ಪ್ರತಿಭಟನೆ ಯಾರ ಮೇಲೆ? ಅದರ ಉದ್ದೇಶವೇನು? ಗಮನ ಸೆಳೆಯುವುದೇ? ಅಥವಾ ಘಾಸಿ ಮಾಡುವುದೆ? ಹಾಗೂ ಪ್ರತಿಭಟನಕಾರರ ಗುರಿಯೇನು? ಸುದ್ದಿ ಮಾಡುವುದೆ? ಸಾರ್ವಜನಿಕಮ ಹಿತಾಸಕ್ತಿಯೆ? - ಇವೆಲ್ಲ ಪ್ರಶ್ನೆಗಳೂ ಮುಖ್ಯವಾಗುತ್ತವೆ.

ಯಾವುದೇ ದೃಷ್ಟಿಯಿಂದ ನೋಡಿದರೂ ಮೇಲೆ ಉದಾಹರಿಸಿದ ಪ್ರಸಂಗಗಳು ಅಂತಹ ಪ್ರತಿಭಟನೆಗಳಿಗೆ ತಕ್ಕವುಗಳಾಗಿರಲಿಲ್ಲ ಎಂದೇ ಹೇಳಬೇಕಾಗುತ್ತದೆ. ಸುಲಭವಾಗಿ ಸುದ್ದಿ ಮಾಡಲೂ ಕೆಲವರು ಇಂತಹ ವಿನೂತನ, ವಿಚಿತ್ರ ಪ್ರತಿಭಟನೆಗೆ ಇಳಿಯುವ ಅಪಾಯ ಇದ್ದೇ ಇದೆ.

ಆದರೂ ಕೆಲವು ಪ್ರಕರಣಗಳಲ್ಲಿ (ಉದಾಹರಣೆಗೆ, ಜನರ್ೈಲ್ ಪ್ರಕರಣ) ಶೂ-ದಾಳಿಗೆ ಗುರಿಯಾದವರಿಗೆ ಸಾರ್ವಜನಿಕ ಸಹಾನುಭೂತಿ ಸಿಕ್ಕಿಲ್ಲ. ಇದಕ್ಕೆ ಕಾರಣ `ಅವರು ಇಂತಹ ಸೇವೆಗೆ ತಕ್ಕವರು' ಎಂಬ ಭಾವನೆ ಸಾರ್ವಜನಿಕರಲ್ಲಿ ಬಲವಾಗಿರುವುದು. ಉದಾಹರಣೆಗೆ, ಸಿಖ್ ನರಮೇಧದ ಪ್ರಕರಣ. ಅದು ನಡೆದು 25 ವರ್ಷಗಳಾಗುತ್ತ ಬಂದರೂ ಇನ್ನೂ ಯಾವುದೇ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಕಾಂಗ್ರೆಸ್ಸಿನ ನಾಯಕರಾದ ಸಜ್ಜನ್ ಕುಮಾರ್, ಜಗದೀಶ್ ಟೈಟ್ಲರ್ ಹಾಗೂ ಎಚ್.ಕೆ.ಎಲ್. ಭಗತ್ ಅದರ ಪ್ರಮುಖ ಆರೋಪಿಗಳು. ಈ ಪೈಕಿ ಭಗತ್ ಜೈಲು ಸೇರುವ ಮೊದಲೇ ಅಸುನೀಗಿದರು. ಉಳಿದ ಇಬ್ಬರ ತಲೆ ಕಾಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಈ ಕುರಿತ ಸಾರ್ವಜನಿಕ ಅಸಮಾಧಾನ 25 ವರ್ಷವಾದರೂ ಅಳಿದಿಲ್ಲ ಎಂಬುದಕ್ಕೆ ಪ್ರಸ್ತುತ ಪ್ರಕರಣವೇ ಸಾಕ್ಷಿ.

ಸಾಂದಭರ್ಿಕವಾಗಿ ಹೇಳುವುದಾದರೆ, ಕಲ್ಲು ಎಸೆಯುವುದು ಇಸ್ಲಾಮಿಕ್ `ಪ್ರತಿಭಟನೆ' ಹಾಗೂ `ಶಿಕ್ಷೆ'. ಮೆಕ್ಕಾಗೆ ಹೋದವರು ಅಲ್ಲಿ `ಸೈತಾನ್' ಪ್ರತಿಕೃತಿಯ ಮೇಲೆ ಕಲ್ಲೆಸೆದು ಬರುತ್ತಾರೆ. ವ್ಯಭಿಚಾರದ ಆರೋಪ ಹೊತ್ತ ಮಹಿಳೆಯರನ್ನು ಕಲ್ಲೆಸೆದು ಕೊಲ್ಲುವುದು ಶರಿಯಾ ಕಾನೂನಿನ ಒಂದು ಶಿಕ್ಷೆ. ಇನ್ನು ಶೂಗಳನ್ನು ಎಸೆಯುವ ವಿಷಯಕ್ಕೆ ಬಂದರೆ, ಶೂ-ಎಸೆತದ ರಾಷ್ಟ್ರೀಯ ಮಟ್ಟದ ಸ್ಪಧರ್ೆಯನ್ನು ಹಲವಾರು ವರ್ಷಗಳಿಂದ ನ್ಯೂಜಿಲ್ಯಾಂಡಿನಲ್ಲಿ ನಡೆಸಲಾಗುತ್ತಿದೆ! 2003ರಿಂದ ಈಚೆಗೆ ಪೂರ್ವ ಯೂರೋಪಿನ ದೇಶಗಳೂ ಇದರಲ್ಲಿ ಭಾಗಿಯಾದ ನಂತರ ಈಗ ಶೂ ಎಸೆಯುವ ಅಂತಾರಾಷ್ಟೀಯ ಚಾಂಪಿಯನ್ಶಿಪ್ ಸ್ಪಧರ್ೆಗಳನ್ನು ನಡೆಸಲಾಗುತ್ತಿದೆ!!

ಗುರುವಾರ, ಏಪ್ರಿಲ್ 09, 2009

ಭಾರತದ ಬಾಗಿಲಿಗೇ ಬಂತು ತಾಲಿಬಾನ್

ನಮ್ಮ ದೇಶದ `ಜಾತ್ಯತೀತ' ಮುಖಂಡರು ತಮ್ಮ ವೈಚಾರಿಕ ಎದುರಾಳಿಗಳ ತಲೆಯ ಮೇಲೆ `ತಾಲಿಬಾನೀಕರಣ'ದ ಗೂಬೆ ಕೂರಿಸುವುದರಲ್ಲೇ ಕಾಲ ಕಳೆಯುತಿರುವ ಸಮಯದಲ್ಲಿ ನಿಜವಾದ ತಾಲಿಬಾನ್ ಭಾರತದ ಬಾಗಿಲಿಗೇ ಬಂದು ನಿಂತಿದೆ!

ತಾಲಿಬಾನ್ ನಿಗ್ರಹದಲ್ಲಿ ಪಾಕಿಸ್ತಾನ ತೋರುತ್ತಿರುವ ಅಸಹಕಾರ ಮತ್ತು ಅಮೆರಿಕ ಕಾಣುತ್ತಿರುವ ವೈಫಲ್ಯ - ಇವುಗಳ ದೆಸೆಯಿಂದಾಗಿ ತಾಲಿಬಾನ್ ಪೂರ್ವದಿಕ್ಕಿನತ್ತ ವಕ್ಕರಿಸಿಕೊಳ್ಳುತ್ತಿದೆ.

ಜಾಜರ್್ ಬುಷ್ರ ಆಫ್ಘನ್ ನೀತಿಯನ್ನು ಟೀಕೆ ಮಾಡುತ್ತಲೇ ಅಮೆರಿಕದ ಅಧ್ಯಕ್ಷ ಪದವಿಗೇರಿದ ಬರಾಕ್ ಒಬಾಮಾ ತಾಲಿಬಾನ್ ಜೊತೆಗಿನ ಸಮರದಲ್ಲಿ ಹೈರಾಣಾಗಿರುವಂತೆ ಕಾಣುತ್ತಿದೆ. ಈಗ ಅವರು `ತಾಲಿಬಾನ್ ಒಳಗಿನ ಅತೃಪ್ತ ಮೃದುವಾದಿಗಳೊಡನೆ ಮಾತನಾಡುತ್ತೇನೆ' ಎಂಬ ಹೊಸ ವರಸೆ ತೆಗೆದಿದ್ದಾರೆ.

ತಾಲಿಬಾನ್ನಲ್ಲಿ `ಒಳ್ಳೆಯ ತಾಲಿಬಾನ್' ಮತ್ತು ಕೆಟ್ಟ ತಾಲಿಬಾನ್' ಎಂಬ ವಗರ್ೀಕರಣ ಸಾಧ್ಯವೆ? ಅದರಲ್ಲೂ ತಾಲಿಬಾನ್ ಅನ್ನು ಯಾರಾದರೂ ನಂಬಬಹುದೆ? ಅದು ಡಬಲ್ ಗೇಮ್ ಆಡುವುದಿಲ್ಲ ಎಂದು ಏನು ಖಾತ್ರಿ? ಪಾಕ್ ನೆಲದಲ್ಲಿ ಒಂದೆರಡು ಸುತ್ತು ದಾಳಿ ನಡೆಸಿದ್ದಕ್ಕೇ ಒಬಾಮಾಗೆ ಸುಸ್ತು, ಹತಾಶೆ ಆವರಿಸಿತೆ?

ಒಬಾಮಾ ಈಗ ಹಳೆಯ ಗೊಂದಲಮಯ ನೀತಿಗೆ ಶರಣಾಗಿರುವಂತಿದೆ. ಅಮೆರಿಕದ ಹಳೆಯ `ಕಂಟೇನ್ಮೆಂಟ್' ನೀತಿ ಮತ್ತೆ ಚಿಗುರುತ್ತಿದೆ. ಭಯೋತ್ಪಾದಕರನ್ನು ಸಂಪೂರ್ಣವಾಗಿ ನಿಗ್ರಹ ಮಾಡಲು ಆಗದಿದ್ದಾಗ ಅವರ ಕಾರ್ಯಕ್ಷೇತ್ರ ಬೇರೆಲ್ಲೋ ಇರುವಂತೆ ನೋಡಿಕೊಳ್ಳುವ ನೀತಿ ಇದು. ಅಂದರೆ, `ಎಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ. ನಮ್ಮ ನೇರ ಹಿತಾಸಕ್ತಿಗಳ ತಂಟೆಗೆ ಮಾತ್ರ ಬರಬೇಡಿ' ಎಂಬ ಸೂತ್ರ ಇದು. ಇದನ್ನು ಅಮೆರಿಕ ಲಾಗಾಯ್ತಿನಿಂದಲೂ ಅನುಸರಿಸಿಕೊಂಡು ಬಂದಿದೆ. ಅಲ್-ಖೈದಾ ಅಮೆರಿಕದ ಗುರಿಗಳಿಗೆ ಹೊಡೆಯುವ ತನಕ ಅಮೆರಿಕ ಖೈದಾ ಕುರಿತು ತಣ್ಣಗಿತ್ತು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿಜೃಂಭಿಸುತ್ತಿದ್ದಾಗ ಯಾರೂ ಯುದ್ಧದ ಮಾತನಾಡಲಿಲ್ಲ. ಅಮೆರಿಕದ ನೆಲ ಹಾಗೂ ಹಿತಾಸಕ್ತಿಗಳಿಗೆ ಧಕ್ಕೆಯಾದಾಗ ಮಾತ್ರವೇ ಅದು `ಯುದ್ಧ'ಕ್ಕೆ ಧುಮುಕಿದ್ದು.

ಆಪ್ಘನ್ ಯುದ್ಧ ಆರಂಭಿಸುವಾಗ `ಒಳ್ಳೆಯ ಭಯೋತ್ಪಾದಕರು ಹಾಗೂ ಕೆಟ್ಟ ಭಯೋತ್ಪಾದಕರು ಎಂಬ ವ್ಯತ್ಯಾಸವಿಲ್ಲ. ಎಲ್ಲ ಭಯೋತ್ಪಾದಕರೂ ಕೆಟ್ಟವರೇ' ಎಂದು ಬುಷ್ ಹೇಳಿಕೆ ನೀಡಿದ್ದರು. ಈಗ ಅದೇ ತಾಲಿಬಾನ್ ಹಾಗೂ ಅಲ್-ಖೈದಾಗಳು ಪಾಕಿಸ್ತಾನದಲ್ಲಿ ರಾಜಾಶ್ರಯ ಪಡೆದಿವೆ. ಪಾಕ್ ಮಿಲಿಟರಿ, ಐಎಸ್ಐ ಇವುಗಳ ಪರವಾಗಿ ಕೆಲಸ ಮಾಡುತ್ತಿವೆ. ಅಲ್ಲಿನ ಚುನಾಯಿತ ಸಕರ್ಾರ ಅಮೆರಿಕಕ್ಕೆ `ಸಹಕಾರ' ನೀಡುವ ನಾಟಕವಾಡುತ್ತಿದೆ. ಆದರೆ ಅಮೆರಿಕದ ಹಿನ್ನಡೆಯನ್ನು ಕಂಡು ಒಳಗೊಳಗೇ ನಗುವ ರಾಜಕಾರಣಿಗಳೇ ಪಾಕಿಸ್ತಾನದಲ್ಲಿ ಹೆಚ್ಚು. ಇದು ಅಮೆರಿಕಕ್ಕೂ ಗೊತ್ತು. ಆದರೆ ಅದು ಹೆಚ್ಚೇನೂ ಮಾಡಲಾರದ ಪರಿಸ್ಥಿತಿಯಲ್ಲಿದೆ. ಒಬಾಮಾಗೆ ಸರಿಯಾದ ದಿಕ್ಕು ತೋಚುತ್ತಿಲ್ಲ. ಹೀಗಿರುವಾಗ ಅವರಿಗೆ ಹೊಳೆದಿರುವುದು ತಾತ್ಕಾಲಿಕ ಸಂಧಾನ, ಕೂಟನೀತಿಯ ಮಾರ್ಗಗಳು.

ತಾಲಿಬಾನ್ ಒಳಗೆ ಮುಲ್ಲಾ ಉಮರ್ ಕುರಿತು ಅಸಮಾಧಾನ ಹೊಂದಿರುವ ಶಕ್ತಿಗಳನ್ನು ಗುರುತಿಸಿ ಮಾತನಾಡಬೇಕು ಎಂದು ಒಬಾಮಾ ಹೇಳುತ್ತಾರೆ. ಆದರೆ ಇಂತಹ ಶಕ್ತಿಗಳನ್ನು ಗುರುತಿಸುವುದು ಹೇಗೆ? ಸ್ವತಃ ತಾಲಿಬಾನ್ ನೇತಾರರೇ ಕೆಲವರನ್ನು `ಅತೃಪ್ತರು' ಎಂದು ಬಿಂಬಿಸಿ ರಹಸ್ಯವಾಗಿ ಅಮೆರಿಕದೊಡನೆ ಮಾತುಕತೆಗೆ ಕಳುಹಿಸುವ ಅಪಾಯವೂ ಇದೆ. ಈ ವಿಷಯ ಅಮೆರಿಕಕ್ಕೆ ಗೊತ್ತಿಲ್ಲವೆ?

ಅನರಿಕಕ್ಕೆ ಗೊತ್ತಿದೆ. ಹಾಗಿದ್ದರೂ ಅದು ಮತ್ತೊಂದು ತಾತ್ಕಾಲಿಕ ಕಂಟೇನ್ಮೆಂಟ್ ಪ್ರಯತ್ನಕ್ಕೆ ಮುಂದಾಗಿರಬಹುದು ಎನಿಸುತ್ತದೆ. ಇದರಿಂದ ಅಮೆರಿಕಕ್ಕೆ ಮತ್ತು ತಾಲಿಬಾನ್-ಖೈದಾಗಳಿಗೆ ಸ್ವಲ್ಪ ಸಮಯಾವಕಾಶ ಸಿಗುತ್ತದೆ. ಎಲ್ಲರೂ ತಮ್ಮ ಮುಂದಿನ ರಣತಂತ್ರ ರೂಪಿಸಲು ಈ ಸಮಯವನ್ನು ಬಳಸಿಕೊಳ್ಳುತ್ತಾರೆ. ಈ ಮಧ್ಯದ ಅವಧಿಯಲ್ಲಿ, ಕದನವಿರಾಮ ಇರುತ್ತದಲ್ಲ, ಆಗ, ಏನಾಗಬಹುದು ಎಂಬುದೇ ನಮ್ಮ ಆತಂಕ. ಒಂದು ವಾಸ್ತವವನ್ನು ಹೇಳುತ್ತೇನೆ. ಅಮೆರಿಕ ತಾಲಿಬಾನ್ ಜೊತೆ `ಮಾತನಾಡಲು' ಶುರು ಮಾಡಿದರೆ ಅದರ ನೇರ ದುಷ್ಪರಿಣಾಮ ಆಗುವುದು ಭಾರತಕ್ಕೆ. ಇದು ಅಮೆರಿಕ್ಕೂ ಗೊತ್ತು. ಭಾರತ ಸಕರ್ಾರಕ್ಕೂ ಗೊತ್ತು. ಅಮೆರಿಕಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಒಂದು `ವೀರ-ಕದನವಿರಾಮ' ಬೇಕಾಗಿದೆ.

ಪಾಕಿಸ್ತಾನ ಸೃಷ್ಟಿಯಾದ ಕ್ಷಣದಿಂದ ಮಗ್ಗುಲಲ್ಲಿ ಕೆಂಡ ಕಟ್ಟಿಕೊಂಡ ಪರಿಸ್ಥಿತಿ ಭಾರತದ್ದು. ಈಗ ತಾಲಿಬಾನ್-ಖೈದಾಗಳು ಪಾಕಿಸ್ತಾನಕ್ಕೆ ತಮ್ಮ ನೆಲೆ ಬದಲಿಸಿವೆ. ಅವು ಪೇಷಾವರ್ಬಿಂದ ಪೂರ್ವದಲ್ಲಿ ಏನು ಮಾಡಿಕೊಂಡರೂ ಅಮೆರಿಕ ಹೆಚ್ಚು ತಲೆ ಕೆಡೆಸಿಕೊಳ್ಳುವುದಿಲ್ಲ. ಅಫ್ಘಾನಿಸ್ತಾನದ ತಂಟೆಗೆ ಮಾತ್ರ ಅವು ಬರಕೂಡದು. ಈ ರೀತಿಯ ಅನಧಿಕೃತ ಹೊಂದಾಣಿಕೆ ಏನಾದರೂ ಅಮೆರಿಕ ಮತ್ತು ತಾಲಿಬಾನ್ ನಡುವೆ ಏರ್ಪಟ್ಟರೆ ಭಾರತಕ್ಕೆ ಆ ಬೆಳವಣಿಗೆ ಆತಂಕಕಾರಿಯಾಗುತ್ತದೆ. ಅ ರೀತಿಯ ಹೊಂದಾಣಿಕೆ ಏರ್ಪಡದೇ ಇರುವುದರಲ್ಲಿಯೇ ಭಾರತದ ಹಿತಾಸಕ್ತಿ ಅಡಗಿದೆ.

ಈಗಾಗಲೇ ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಸಕರ್ಾರ ನೆಲೆಗೊಂಡಿದೆ. ಇದು ಭಾರತ ಪಾಲಿಗೆ ಅಪಾಯದ ಮುನ್ಸೂಚನೆ.

ವಾಸ್ತವವಾಗಿ ಈ ಸ್ವಾತ್ ಎನ್ನುವುದು ಹಳೆಯ ಸುವಸ್ತು. ಇದೇ ಹೆಸರಿನ ನದಿ ಹಾಗೂ ಪ್ರದೇಶದ ವರ್ಣನೆ ಋಗ್ವೇದಲ್ಲಿಯೇ ಸಿಗುತ್ತದೆ. 2000 ವರ್ಷಗಳಿಂದ ಇಲ್ಲಿ ಜನವಸತಿ ಇದೆ. ಇಲ್ಲಿ ಅಲೆಕ್ಸಾಂಡರ್ ಭಾರತೀಯರೊಡನೆ ಕಾದಾಡಿದ್ದ. ನಂತರ ಇದು ಮೌರ್ಯ ಸಾಮ್ರಾಜ್ಯದ ಆಡಳಿತಕ್ಕೆ ಸೇರ್ಪಡೆಯಾಯಿತು. ತದನಂತರ ಈ ಸ್ಥಳದ ಶಾಂತಿ, ಸೌಂದರ್ಯಗಳು ಬೌದ್ಧ ಮತ್ತು ಕುಶಾನರನ್ನು ಆಕಷರ್ಿಸಿತು. ವಜ್ರಯಾನ ಬೌದ್ಧ ಮತ ಜನ್ಮ ತಳೆದದ್ದು ಈ ಸ್ಥಳದಲ್ಲಿಯೇ ಎಂಬ ಅಭಿಪ್ರಾಯವೂ ಇದೆ. ಆಗ ಇದನ್ನು `ಉದ್ಯಾನ' ಅಂತಲೂ ಕರೆಯುತ್ತಿದ್ದರು. ಅನಂತರ ಹಿಂದೂ ಶಾಹಿ ರಾಜರು ಆಳಿದ ಸ್ಥಳ ಇದು. ಸಂಸ್ಕೃತ ಇಲ್ಲಿನ ಆಡಳಿತ ಭಾಷೆಯಾಗಿತ್ತು. ಕ್ರಮೇಣ ಮಹಮ್ಮದ್ ಘಜ್ನಿಯ ಆಕ್ರಮಣಕ್ಕೆ ಸಿಲುಕಿ ಇಲ್ಲಿನ ಸಾವಿರಾರು ಹಿಂದೂ-ಬೌದ್ಧ ಮಂದಿರಗಳು ನಾಶವಾದವು. ಇವೆಲ್ಲ ಇತಿಹಾಸ.

ದೇಶ ವಿಭಜನೆಯ ನಂತರ ಸ್ವಾತ್ ಪಾಕ್ ವಶಕ್ಕೆ ಹೋಯಿತು. ಈಗ ಅಲ್ಲಿ ಪಾಕಿಸ್ತಾನ ಸಕರ್ಾರದ ಆಡಳಿತವೂ ಹೋಗಿ ತಾಲಿಬಾನ್ ಆಡಳಿತ ಬಂದಿದೆ. ಶರಿಯಾ ಮತೀಯ ಕಟ್ಟಳೆಗಳನ್ನು ಸ್ವಾತ್ನಲ್ಲಿ ಸಂಪೂರ್ಣವಾಗಿ ಅನ್ವಯಿಸಲಾಗಿದೆ. ಏಳು ಖಾಜಿ ನ್ಯಾಯಾಲಯಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ. ಮನೆಯೊಳಗೇ ಇರುವಂತೆ ಮಹಿಳೆಯರಿಗೆ ಕಟ್ಟಾಜ್ಞೆ ನೀಡಲಾಗಿದೆ (`ಬೇಗಂ ಕೀ ಜಗಾಹ್ ಘರ್ ಪೇ ಹೈ' - ಎಂಬುದು ಇಸ್ಲಾಮಿಕ್ ಚಿಂತನೆ) ಇವೆಲ್ಲ ಪಾಕ್ ಮಿಲಿಟರಿಯ ಮೂಗಿನ ನೇರದಲ್ಲೇ ನಡೆಯುತ್ತಿದೆ.

ಸ್ವಾತ್ ಜಿಲ್ಲೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೊಂದಿಕೊಂಡಿದೆ. ಇಸ್ಲಾಮಾಬಾದಿನಿಂದ ಕೇವಲ 160 ಕಿ.ಮೀ. ದೂರ. ಬೆಂಗಳೂರಿಗೂ ಶಿವಮೊಗ್ಗಕ್ಕೂ ಎಷ್ಟು ದೂರವೋ ಭಾರತದ ಒಳಭೂಮಿಗೂ ಸ್ವಾತ್ ಕಣಿವೆಗೂ ಅಷ್ಟೇ ದೂರ. ಸ್ವಾತ್ನಲ್ಲಿ ತಾಲಿಬಾನಿಗಳು ನೆಲೆಗೊಂಡರು ಎಂದರೆ ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಅವರು ಬಂದರು ಎಂದೇ ಅರ್ಥ. ಇನ್ನು ನಿಯಂತ್ರಣ ರೇಖೆಯಲ್ಲೂ ಅವರ ಉಪಟಳ ಆರಂಭವಾಗುವ ದಿನ ಬಹಳ ದೂರವೇನಿಲ್ಲ. ಅವರ ಧೈರ್ಯದಿಂದಲೇ ಈಗಾಗಲೇ ಮಾಜಿ ಜನರಲ್ ಪವರ್ೇಜ್ ಮುಷರ್ರಫ್, ಹಾಲಿ ಜನರಲ್ ಪವರ್ೇಜ್ ಕಯಾನಿ ಮತ್ತು ಇತರ ಪಾಕ್ ಮಿಲಿಟರಿ ನೇತಾರರು `ಇನ್ನೊಂದು ಕಾಗರ್ಿಲ್ ಉಂಟಾದೀತು' ಎಂದು ಧಮಕಿ ಹಾಕಲು ಆರಂಭಿಸಿದ್ದಾರೆ.

ನಮ್ಮ ಜಮ್ಮು ಮತ್ತು ಕಾಶ್ಮೀರದ ಕೆಲವು ರಾಜಕಾರಣಿಗಳಿಗೆ ತಾಲಿಬಾನ್ ಜೊತೆ ನಂಟಿರುವುದು ಗುಟ್ಟೇನಲ್ಲ. ಕಾಶ್ಮೀರದ ಇಸ್ಲಾಮೀಕರಣ ಎಂದೋ ಆರಂಭವಾಗಿದೆ. ರಾಜ್ಯದ ಸುಮಾರು 700-800 ಪ್ರಾಚೀನ ಸ್ಥಳಗಳ ಹಳೆಯ ಹೆಸರುಗಳನ್ನು ತೆಗೆದುಹಾಕಿ ಇಸ್ಲಾಮೀ ಮತೀಯ ಹೆಸರುಗಳನ್ನು ಇಡಲಾಗಿದೆ. ಈಗ ಕಾಶ್ಮೀರದ ಪ್ರಾಚೀನ ಹಿಂದೂ ಪವಿತ್ರ ತೀರ್ಥಸ್ಥಳವಾದ `ಅನಂತನಾಗ'ದ ಹೆಸರನ್ನು `ಇಸ್ಲಾಮಾಬಾದ್' ಎಂದು ಬದಲಿಸುವ ಪ್ರಯತ್ನಗಳು ಆರಂಭವಾಗಿವೆ. ಮುಫ್ತಿ ಮುಹಮ್ಮದ್ ಸಯೀದರ ಪಿಡಿಪಿ ಪಕ್ಷದ ಶಾಸಕ ಪೀರ್ಜಾದಾ ಮನ್ಜೂರ್ ಹುಸೇನ್ ಈ ಕುರಿತು ಈಚೆಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿರುವುದಾಗಿ ವರದಿಯಾಗಿದೆ.

ಈಗ ತಾಲಿಬಾನ್ ಮಗ್ಗುಲಿಗೆ ಬಂದ ನಂತರ ಕಾಶ್ಮೀರದ ತಾಲಿಬಾನೀಕರಣ ಪ್ರಕ್ರಿಯೆ ತೀವ್ರತೆ ಪಡೆದುಕೊಳ್ಳುವುದನ್ನು ನಿರೀಕ್ಷಿಸಬಹುದು. ಭಾರತದ ಇತರ ಸ್ಥಳಗಳಲ್ಲಿಯೂ ತಾಲಿಬಾನ್ ಅಟ್ಟಹಾಸ ನಿರೀಕ್ಷಿಸಬಹುದು. ಇಸ್ಲಾಮೀ ತೀವ್ರವಾದಿ ಚಟುವಟಿಕೆಗಳಿಗೆ ಹೊಸ ಗೊಬ್ಬರ, ನೀರು ಸಿಗುವುದನ್ನು ನಿರೀಕ್ಷಿಸಬಹುದು.

ಇದನ್ನು ತಡೆಯಲು ಭಾರತ ಏನು ಮಾಡಬಹುದು? ಪಾಕಿಸ್ತಾನದ ಸಕರ್ಾರ ಅಮೆರಿಕ್ಕೆ ಸಹಕಾರ ನೀಡದಿದ್ದರೂ ಹಲವು ಮುಲಾಜುಗಳಿಗೆ ತುತ್ತಾಗಿ ಅಮೆರಿಕದ ಸೈನಿಕರನ್ನು ತನ್ನ ದೇಶದೊಳಗೆ ಬಿಟ್ಟುಕೊಂಡಿದೆ. ಆದರೆ ಭಾರತದ ಸೈನಿಕರಿಗೆ ಈ ಅವಕಾಶ ಸಿಗುವುದಿಲ್ಲ. ಅವರು ತಾಲಿಬಾನ್ ಅನ್ನು ಎದುರಿಸುವ ಮೊದಲು ಪಾಕಿಸ್ತಾನವನ್ನು ಎದುರಿಸಬೇಕಾಗುತ್ತದೆ. ಆ ಧೈರ್ಯ ನಮ್ಮನ್ನು ಆಳುವವರಿಗೆ ಇದೆಯೆ?

ಮಗ್ಗುಲಿನ ಕೆಂಡವಾಗಿರುವ ತಾಲಿಬಾನ್ ಅನ್ನು ಭಾರತ ನಿಯಂತ್ರಿಸುವುದು, ಹಿಮ್ಮೆಟ್ಟಿಸುವುದು ಹೇಗೆ? ಯುದ್ಧಭೂಮಿಯಲ್ಲಿ ಅಮೆರಿಕ ಇರುವವರೆಗೆ ಪರವಾಗಿಲ್ಲ. ಒಬಾಮಾ ಮನಸ್ಸು ಬದಲಾಯಿಸಿ ತಾಲಿಬಾನ್ ಜೊತೆಗಿನ ನೇರ ಯುದ್ಧದಲ್ಲೇ ಮುಂದುವರಿದರೆ ಪರವಾಗಿಲ್ಲ. ಒಂದು ವೇಳೆ ಅವರು ಕಂಟೇನ್ಮೆಂಟ್ ನೀತಿ ಜಾರಿಗೆ ತರುವಲ್ಲಿ ಯಶಸ್ವಿಯಾದರೆ?

ನಮ್ಮ ರಾಜಕಾರಣಿಗಳು ಈ ಕುರಿತು ಗಂಭಿರವಾಗಿ ಯೋಚಿಸುತ್ತಿದ್ದಾರೆಯೆ? ಪಬ್ ಜಪ ಮಾಡುವುದನ್ನು ಬಿಟ್ಟು ನಿಜವಾದ ತಾಲಿಬಾನ್ ಅನ್ನು ಎದುರಿಸಲು ಅವರು ಸಿದ್ಧರೆ?


ವಿದೇಶಗಳಲ್ಲಿ ಭಾರತದ ಕಪ್ಪು ಹಣ: ಸರ್ಕಾರದ ಮೌನ

ಭಾರತದ ರಾಜಕಾರಣಿಗಳು, ಉದ್ಯಮಿಗಳು ಮತ್ತು ಇತರೆ ಕಪ್ಪು ಹಣದ `ಕಪ್ಪು ಶ್ರೀಮಂತ'ರು ಸ್ವಿಸ್ ಬ್ಯಾಂಕುಗಳಲ್ಲಿ, ಇತರ ವಿದೇಶಿ ಬ್ಯಾಂಕುಗಳಲ್ಲಿ ಹಣ ಇಡುವುದು ಹೊಸದೇನಲ್ಲ. ಸ್ವಿಸ್ ಬ್ಯಾಂಕುಗಳಲ್ಲಿ ಹಣವಿಟ್ಟ ಜಗತ್ತಿನ ಎಲ್ಲ ಕಪ್ಪು ಶ್ರೀಮಂತರ ಪೈಕಿ ಮೊದಲ ಸ್ಥಾನದಲ್ಲಿರುವುದು ಬಡ ಭಾರತದ ಕಪ್ಪು ಶ್ರೀಮಂತರು! `ಸ್ವಿಸ್ ಬ್ಯಾಂಕಿಂಗ್ ಅಸೋಸಿಯೇಷನ್' 2006ರಲ್ಲಿ ನೀಡಿದ ವರದಿಯ ಪ್ರಕಾರ ಸ್ವಿಸ್ ಬ್ಯಾಂಕುಗಳಲ್ಲಿರುವ ಕಪ್ಪು ಹಣದ ಭಾರತೀಯರ ಒಟ್ಟು ಹಣ 1456 ಶತಕೋಟಿ ಡಾಲರ್! ಅಂದರೆ ನಮ್ಮ ರಾಷ್ಟ್ರದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಸಮನಾದಷ್ಟು ಹಣ! ಅಂದರೆ ಸುಮಾರು 70,000 ಶತಕೋಟಿ ರೂಪಾಯಿಗಳು!!

ಆದರೂ ನಮ್ಮ ಸಕರ್ಾರ ಏಕೆ ಕಪ್ಪು ಹಣದ ವಿವರ ತರಿಸುವುದಿಲ್ಲ? ಎಲ್ಲ ಕಪ್ಪು ಶ್ರೀಮಂತರ ಬಳಿ ಲೆಕ್ಕ ಕೇಳುವುದಿಲ್ಲ? ಏಕೆ ಕಪ್ಪು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ? ಏಕೆಂದರೆ ವಿದೇಶಿ ಬ್ಯಾಂಕುಗಳಲ್ಲಿರುವವರ ಹಣದಲ್ಲಿ ಬಹುಪಾಲು ಸ್ವತಂತ್ರ ಭಾರತದ `ಸ್ವತಂತ್ರ' ರಾಜಕಾರಣಿಗಳದು! ಗಾಜಿನ ಮನೆಯಲ್ಲಿರುವವರು ಎಂದಿಗೂ ಪಕ್ಕದ ಮನೆಯ ಮೇಲೆ ಕಲ್ಲೆಸೆಯುವುದು ಸಾಧ್ಯವಿಲ್ಲ.

ನಮ್ಮ ಪ್ರಧಾನಿ ಒಬ್ಬ ಅರ್ಥಶಾಸ್ತ್ರಜ್ಞ. `ಬ್ಲ್ಯಾಕ್ ಎಕಾನಮಿ'ಯ ದುಷ್ಪರಿಣಾಮಗಳನ್ನು ಕುರಿತು ಓದಿದವರು, ಬೋಧಿಸಿದವೆರು. ಆದರೆ ಅವರು ಮಾಡಿದ್ದೇನು? ಮುಂದೆ ಓದಿ.

ಆಸ್ಟ್ರಿಯಾ ಹಾಗೂ ಸ್ವಿಡ್ಜರ್ಲ್ಯಾಂಡಿನ ಮಧ್ಯೆ ಇರುವ ಚಿಕ್ಕ ಗುಡ್ಡಗಾಡು ದೇಶದ ಹೆಸರು ಲೀಚ್ಟೆನ್ಸ್ಟೈನ್. ಮಧ್ಯಮವರ್ಗದ ಜನರು ಸಾಮಾನ್ಯವಾಗಿ ಈ ದೇಶದ ಹೆಸರನ್ನೇ ಕೇಳಿರುವುದಿಲ್ಲ. ಆದರೆ ಜಗತ್ತಿನ ಕಪ್ಪು ಶ್ರೀಮಂತರಿಗೆಲ್ಲ ಈ ದೇಶ ಸುಪರಿಚಿತ. ಇಲ್ಲಿ ನೂರಾರು ಭಾರತೀಯ ಕಪ್ಪು ಶ್ರೀಮಂತರು ಹಣ ಇಟ್ಟಿದ್ದಾರೆ. ಈಚೆಗೆ ಜರ್ಮನಿಯ ಸಕರ್ಾರ ಲೀಚ್ಟೆನ್ಸ್ಟೈನ್ ದೇಶದ ಎಲ್ಟಿಜಿ ಬ್ಯಾಂಕಿನಲ್ಲಿ ಜಗತ್ತಿನ ಯಾವ ಯಾವ ದೇಶದ ಕಪ್ಪು ಧನಿಕರು ಎಷ್ಟೆಷ್ಡು ಹಣ ಇಟ್ಟಿದ್ದಾರೆ ಎಂಬ ಪಟ್ಟಿಯನ್ನು ತರಿಸಿಕೊಂಡಿತು. `ನಮ್ಮ ಬಳಿ ಇಂತಹ ಪಟ್ಟಿ ಇದೆ. ಅದರಲ್ಲಿ ನಿಮ್ಮ ದೇಶದ ಖಾತೆದಾರರ ಬಗ್ಗೆಯೂ ಮಾಹಿತಿ ಇದೆ. ನೀವು ಅಧಿಕೃತವಾಗಿ ಕೇಳಿದರೆ ನಿಮಗೆ ಈ ಮಾಹಿತಿ ನೀಡುತ್ತೇವೆ' ಎಂದು ಜರ್ಮನ್ ಸಕರ್ಾರ ಅನೇಕ ದೇಶಗಳ ಸಕರ್ಾರಕ್ಕೆ ಸಂದೇಶ ಕಳುಹಿಸಿತು. ಭಾರತಕ್ಕೂ ಸಂದೇಶ ಬಂತು. ಅಮೆರಿಕ, ಬ್ರಿಟನ್, ಕೆನಡಾ, ಇಟಲಿ, ಸ್ವೀಡನ್, ನಾವರ್ೆ, ಫಿನ್ಲ್ಯಾಂಡ್, ಐರ್ಲ್ಯಾಂಡ್ ಮೊದಲಾದ ದೇಶಗಳು ಜರ್ಮನ್ ಸಂದೇಶಕ್ಕೆ ಪ್ರತಿಕ್ರಿಯಿಸಿದವು. ಮಾಹಿತಿ ಕೇಳಿ ತಮ್ಮ ದೇಶದ ಕಪ್ಪು ಶ್ರೀಮಂತರ ಹಣಕಾಸು ವ್ಯವಹಾರ ಕುರಿತ ಮಾಹಿತಿ ತರಿಸಿಕೊಂಡವು.

ಭಾರತ ಏನು ಮಾಡಿತು ಎಂಬ ಕಥೆ ಹೇಳುವ ಅಗತ್ಯವಿದೆಯೆ? `ಖಂಡಿತವಾಗಿಯೂ ಇದೆ, ಮುಂದೇನಾಯಿತು ಎಂದು ಊಹಿಸುವುದು ನಮ್ಮಿಂದ ಸಾಧ್ಯವಿಲ'್ಲ ಎನ್ನುವಿರಾದರೆ, ಕೇಳಿ. ಜರ್ಮನ್ ಸಕರ್ಾರಕ್ಕೆ ಯಾವ ಉತ್ತರವನ್ನೂ ಬರೆಯುವ ಗೋಜಿಗೆ ಭಾರತ ಹೋಗಿಲ್ಲ. ನಮ್ಮ ಅರ್ಥಶಾಸ್ರ್ತಜ್ಞ ಪ್ರಧಾನಿ ಬಹಳ ಬ್ಯುಸಿಯಾಗಿದ್ದಾರೆ (ಯಾವುದರಲ್ಲಿ ಎಂಬುದು ಮಾತ್ರ ಗೊತ್ತಿಲ್ಲ). ಅವರಿಗೆ ಇದಕ್ಕೆಲ್ಲ ಉತ್ತರ ಕೊಡುವಷ್ಟು ಪುರಸೊತ್ತಿಲ್ಲ. ಒಂದಿಷ್ಟು ಪುಸ್ತಕಗಳನ್ನು ಓದಲೂ ಪುರಸೊತ್ತಿಲ್ಲವಂತೆ. ಆದರೆ ಅವರ ಕಚೇರಿಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಜನಪಥದ ಹತ್ತನೇ ನಂಬರ್ ಮನೆಯನ್ನು ಕಾಯುತ್ತಿದ್ದಾರೆಯೆ?

ಈ ಹಣದ ಬಹುಪಾಲು ನಮ್ಮ ರಾಜಕಾರಣಿಗಳದು ಮತ್ತು ಅವರ ಗೆಳೆಯರದು ಎಂಬ ಸಂಶಯ ಮೂಡುವುದಿಲ್ಲವೆ? ಸ್ವಿಡ್ಜರ್ಲ್ಯಾಂಡ್, ಸೇಂ. ಕಿಟ್ಸ್, ಕ್ಯಾನರಿ ಐಲ್ಯಾಂಡ್ಸ್, ಆಂಟಿಗುವಾ, ಬಹಾಮಾಸ್, ಲೀಚ್ಟೆನ್ಸ್ಟೈನ್ - ಇವೆಲ್ಲ ನಮ್ಮ ಕಪ್ಪು ಶ್ರೀಮಂತರು ಆಗಾಗ್ಗೆ ರಜೆ ಕಳೆಯುವ ಸ್ವರ್ಗಗಳು. ಅಷ್ಟು ಮಾತ್ರವಲ್ಲ ಅವರ ಕಪ್ಪು ನಿಧಿಯನ್ನು ಕಾಯುತ್ತಿರುವ ಕುಪ್ರಸಿದ್ಧ ಬ್ಯಾಂಕಿಂಗ್ ತಾಣಗಳು. ಡ್ರಗ್ಸ್, ಟೆರರಿಸಂ, ಬ್ಲ್ಯಾಕ್ ಬಿಸಿನೆಸ್ -ಇವುಗಳಿಗೆಲ್ಲ ಹಣದ ಹೊಳೆ ಹರಿಯುವುದು ಇಲ್ಲಿನ ಬ್ಯಾಂಕ್ ಖಾತೆಗಳಿಂದಲೇ.