ಗುರುವಾರ, ಜೂನ್ 04, 2009

ರೋಹ್ ತರಹದ ಸೂಕ್ಷ್ಮ ಸಂವೇದಿಗಳು ನಮ್ಮಲ್ಲೇಕಿಲ್ಲ?

ಇದೇ ಮೇ 23, ಶನಿವಾರ, ದಕಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್ ಮೂ-ಹ್ಯೂನ್ ಆತ್ಮಹತ್ಯೆಗೆ ಶರಣಾದರು. ಭ್ರಷ್ಟಾಚಾರದ ಆರೋಪಗಳನ್ನು ಹೊತ್ತು ನಿಂತಿದ್ದ ಅವರು, ತಮ್ಮ ನೈತಿಕ ಆತ್ಮಸಾಕ್ಷಿಗೆ ಮಣಿದು, ಚೀಟಿ ಬರೆದಿಟ್ಟು, ಬೆಟ್ಟದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡರು.

ರಾಜಕಾರಣಿಗಳು ಭ್ರಷ್ಟಾಚಾರದ ಆರೋಪ ಹೊತ್ತು ಆತ್ಮಹತ್ಯೆ ಮಾಡಿಕೊಳ್ಳುವುದು ಹೊಸದೇನಲ್ಲ. ಅನೆಕ ದೇಶಗಳಲ್ಲಿ ಹೀಗೆ ನಡೆದಿದೆ. ಜಪಾನ್ನಲ್ಲಂತೂ ರಾಜಕೀಯ ನಾಯಕರ ಆತ್ಮಹತ್ಯಾ ಪರಂಪರೆಯೇ ಇದೆ. ಇದು ದುರದೃಷ್ಟವೇ ಸರಿ. ಮೊದಲಿಗೆ ಭ್ರಷ್ಟಾಚಾರ ಮಾಡುವುದೇ ಹೇಯವಾದ ಕೆಲಸ. ಅನಂತರ ಸಿಕ್ಕಿಬಿದ್ದಾಗ ಜನರಿಗೆ ಮುಖ ತೋರಿಸುವುದು ಹೇಗೆ ಎಂಬ ಒಳಗುದಿ ಬೇರೆ.

ರೂಹ್ 2003-2008ರ ಅವಧಿಯಲ್ಲಿ ದಕ್ಷಿಣ ಕೊರಿಯಾದ ಆದ್ಯಕ್ಷರಾಗಿದ್ದರು. ಅಧಿಕಾರದ ಆರಂಭದಲ್ಲಿ ಸಾಕಷ್ಟು ಭರವಸೆ ಹುಟ್ಟಿಸಿದ್ದ ಅವರು ಅದಕ್ಷತೆ, ವೈಯಕ್ತಿಯ ನಡವಳಿಕೆಯ ದೋಷಗಳಿಂದಾಗಿ ಕ್ರಮೇಣ ಜನರ ನಂಬಿಕೆ, ಆದರಗಳನ್ನು ಕಳೆದುಕೊಂಡರು. ಅಧಿಕಾರಾವಧಿ ಮುಗಿದ ನಂತರ ಭ್ರಷ್ಟಾಚಾರದ ಆರೋಪ ಅವರ ಹೆಗಲೇರಿ ಕಾಡಿತು. ಆತ್ಮಹತ್ಯೆಯೊಂದೇ ಪರಿಹಾರ ಎಂದು ಅವರಿಗನಿಸಿತು. ಆತ್ಮಹತ್ಯೆಯ ಬದಲು ಅವರು ಜನರ ಕ್ಷಮೆ ಕೇಳಬಹುದಿತ್ತು. ಶಿಕ್ಷೆ ಅನುಭವಿಸಿ `ಪರಿಶುದ್ಧ'ರಾಗಬಹುದಿತ್ತು. ಆದರೆ ಅದಕ್ಕೆ ಇನ್ನೊಂದು ರೀತಿಯ ಧೈರ್ಯ, ವಿಶಿಷ್ಟ ವ್ಯಕ್ತಿತ್ವ ಬೇಕಾಗುತ್ತವೆ.

ಆದರೆ ಇಲ್ಲಿ ನಾವು ಗಮನಿಸಬೇಕಾದ ಆಂಶ ಅದಲ್ಲ. ಸಾರ್ವಜನಿಕ ಜೀವನದ ಈ ವ್ಯಕ್ತಿ ಸಾರ್ವಜನಿಕ ಅಭಿಪ್ರಾಯಗಳಿಗೆ ಎಷ್ಟರ ಮಟ್ಟಿಗೆ ಪ್ರತಿಸ್ಪಂದನೆ ತೋರುತ್ತಾನೆ, ಎಷ್ಟು ಮಣಿಯುತ್ತಾನೆ ಎಂಬುದು ಇಲ್ಲಿ ಗಮನಾರ್ಹ. ಭಾರತೀಯ ರಾಜಕಾರಣಿಗಳ ಪಕ್ಕದಲ್ಲಿ ರೂಹ್ ಅನ್ನು ಕಲ್ಪಿಸಿಕೊಂಡು ನೋಡಿದರೆ, ಅವರು ನಿಜಕ್ಕೂ ಬೇರೆ ರೀತಿಯಲ್ಲೇ ಕಾಣುತ್ತಾರೆ.

ನಮ್ಮ ಯಾವ ರಾಜಕೀಯ ಮುಖಂಡನಿಗೆ ಇಂತಹ ಸೂಕ್ಷ್ಮ ಚರ್ಮವಿದೆ? ನಮ್ಮ ಯಾವ ಮುಖಂಡರು ತಮ್ಮ ಆತ್ಮಶೋಧನೆ ಮಾಡಿಕೊಂಡಿದ್ದಾರೆ?

ಶಿಬು ಸೊರೇನ್ ಅಂತಹವರಿಂದ ಜನರು ಎಂತಹ ಸಂವೇದನೆಯನ್ನು ನಿರೀಕ್ಷಿಸಬಹುದು? ಆತನ ಬಾಲಬಡುಕರ ಪಾಲಿಗೆ ಆತ ಈಗಲೂ `ಗುರೂಜಿ'! ಸಿಬಿಐ ಸ್ಪೆಷಲ್ ಕೋಟರ್ು `ನೀನು ತಪ್ಪಿತಸ್ಥ' ಎನ್ನುತಿದ್ದಾಗ, ಕಾಂಗ್ರೆಸ್ ನಾಯಕ ಎ. ಸುಖ್ರಾಮ್ ಅವರ ಸಂವೇದನೆ ಹೇಗಿತ್ತು ನೆನಪಿಸಿಕೊಳ್ಳಿ. ಹಿಮಾಚಲ ಪ್ರದೇಶದ ಅವರ ನಿವಾಸದಲ್ಲಿ 13 ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿಗಳಷ್ಟು ಮೌಲ್ಯದ ನೋಟಿನ ಕಟ್ಟುಗಳು ಸಿಕ್ಕಿಬಿದ್ದಿದ್ದವು. ಆ ಹಣದ ಮೂಲ ಯಾವುದು? ತಾವು ಹೇಗೆ ನಿದರ್ೋಷಿ ಎಂದು ವಿವರಿಸುವಲ್ಲಿ ಅವರು ವಿಫಲರಾದರು. ನ್ಯಾಯಾಲಯ ಈಚೆಗೆ ಅವರಿಗೆ 3 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಆದರೂ 82 ವರ್ಷದ ಸುಖರಾಮ್ ವಿಚಲಿತರಾಗಲಿಲ್ಲ. ಒಂದಿಷ್ಟೂ ಅಳುಕಿಲ್ಲದೇ `ಇವೆಲ್ಲ ನನ್ನನ್ನು ಸಿಕ್ಕಿಹಾಕಿಸಲು ನನ್ನ ಶತ್ರುಗಳು ಮಾಡಿದ ಕುತಂತ್ರ' ಎಂದುಬಿಟ್ಟರು. ಅವರ ನಿವಾಸದಲ್ಲಿದ್ದ ಹಣ ಯಾರದ್ದೇ ಆಗಿರಲಿ, ಅಷ್ಟು ಭಾರಿ ಧನರಾಶಿಯನ್ನು ತಾವು ಕಾನೂನುಬಾಹಿರವಾಗಿ ಇಟ್ಟುಕೊಂಡಿದ್ದು ತಪ್ಪು, ಕೊನೆಯ ಪಕ್ಷ ನೈತಿಕವಾಗಿಯಾದರೂ ತಾನು ತಪ್ಪಿತಸ್ಥ ಎಂಬ ಮಾತು ಅವರ ಬಾಯಿಂದ ಬರಲೇ ಇಲ್ಲ.

ಅದೇ ರೀತಿ ಬಿಜೆಪಿ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಅವರು `ತೆಹೆಲ್ಕಾ ಸ್ಟಿಂಗ್ ಆಪರೇಷನ್'ಗೆ ಬಲಿಯಾದಾಗ ಹೇಳಿದ್ದೇನು? ಲಕ್ಷ ರೂಪಾಯಿಗಳ ಕಟ್ಟನ್ನು ಅವರು ತೆಗೆದು ಇಟ್ಟುಕೊಂಡ ವೀಡಿಯೋ ಜಗಜ್ಹಾರಾಹೀರಾದ ಮೇಲೂ `ನಾನು ದಲಿತ, ಹೀಗಾಗಿ ನನ್ನನ್ನು ಶೋಷಿಸಲಾಗುತ್ತಿದೆ' ಎಂಬರ್ಥದ ಮಾತು ಅವರ ಬಾಯಿಯಿಂದ ಬಂತು! ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತು ನಿಂತಾಗ ಮಹಮ್ಮದ್ ಅಜರುದ್ದೀನ್ ಹೇಳಿದ್ದು, `ನಾನು ಮುಸ್ಲಿಂ ಎಂಬ ಪೂವರ್ಾಗ್ರಹದಿಂದ ನನ್ನನ್ನು ಸಿಕ್ಕಿಹಾಕಿಸಿದ್ದಾರೆ' ಎಂದು!

ನಮ್ಮಲ್ಲಿ ಎಲ್ಲೆಲ್ಲೂ ನೈತಿಕತೆಯ ಅಭಾವ ಎದ್ದು ಕಾಣುತ್ತ್ತಿದೆ. ಸಾರ್ವಜನಿಕ ಅಭಿಪ್ರಾಯಕ್ಕೆ ಸೂಕ್ತವಾಗಿ ಸ್ಪಂದಿಸುವ, ಸೂಕ್ತ ಸಂವೇದನೆ ತೋರುವ, ಜನರ ಭಾವನೆಗಳಿಗೆ ಮಯರ್ಾದೆ ಕೊಡುವೆ ಕನಿಷ್ಠ ಸೌಜನ್ಯವೂ ಮರೆಯಾಗಿದೆ. ಕಡೆಯ ಪಕ್ಷ ಸಿಕ್ಕಿಹಾಕಿಕೊಂಡ ಮೇಲಾದರೂ `ಜನರಿಗೆ ಮುಖ ತೋರಿಸುವುದು ಹೇಗೆ' ಎಂಬ ಪ್ರಜ್ಞೆ ನಮ್ಮ ಯಾವ ಮುಖಂಡರನ್ನೂ ಕಾಡುತ್ತಿಲ್ಲ. ಭ್ರಷ್ಟಾಚಾರಿಯೋ, ಅಲ್ಲವೋ, ಆದರೆ ರೋಹ್ ಮೂ ಹ್ಯೂನ್ ಅವರಿಗೆ ನೈತಿಕ ಪ್ರಶ್ನೆ, ಪಾಪಪ್ರಜ್ಞೆ ಕಾಡಿರಬಹುದು. ಸಾರ್ವಜನಿಕ ಅಭಿಪ್ರಾಯಕ್ಕೆ ಮಣಿದರೋ, ಕರಾಳ ವಾಸ್ತವತೆಗೆ ಸಂವೇದಿಸಿದರೋ, ಒಟ್ಟಿನಲ್ಲಿ ಅವರ ಆತ್ಮಸಾಕ್ಷಿ ಸಾಯಲಿಲ್ಲ ಎಂಬುದನ್ನು ಎಲ್ಲರೂ ಒಪ್ಪಲೇಬೇಕು.

ಎಲ್ಲ ಹಗರಣಗಳ ತಾಯಿ ಭೋಪೋಸರ್್ ವಿಷಯಕ್ಕೆ ಬರಲೇಬೇಕು. ರಾಜೀವ್ ಗಾಂಧಿ 1984ರಲ್ಲಿ ಪ್ರಧಾನಿಯಾದ ಹೊಸದರಲ್ಲಿ `ಮಿಸ್ಟರ್ ಕ್ಲೀನ್' ಎನಿಸಿದ್ದರು. ಅಂದರೆ ಅವರ ಮೇಲೆ ಯಾವುದೇ ಆರೋಪ ಇರಲಿಲ್ಲ ಎಂದಲ್ಲ. ಸೋವಿಯತ್ ಒಕ್ಕೂಟದ ಕೆಜಿಬಿ ಗೂಢಚಾರ ಏಜೆನ್ಸಿಯಿಂದ ಕೋಟಿಗಟ್ಟಲೆ ಹಣವನ್ನು ರಾಜೀವ್ ಕುಟುಂಬದವರು ಪಡೆದಿದ್ದಾರೆ ಎಂಬ ಆರೋಪ ಇತ್ತು. ಡಾ. ಯೆವ್ಗೆನಿಯಾ ಆಲ್ಬ್ಯಾಟ್ಸ್ ಅವರು ಕೆಜಿಬಿಯ ರಹಸ್ಯ ಫೈಲುಗಳನ್ನು ಪರಿಸೀಲಿಸಿ ಬರೆದ ಪುಸ್ತಕ, `ದಿ ಸ್ಟೇಟ್ ವಿದಿನ್ ಎ ಸ್ಟೇಟ್: ಕೆಜಿಬಿ ಅಂಡ್ ಇಟ್ಸ್ ಹೋಲ್ಡ್ ಆನ್ ರಷ್ಯಾ' - ಇದರಲ್ಲಿ ಸೋನಿಯಾ, ರಾಹುಲ್, ಸೋನಿಯಾ ತಾಯಿ ಪೌಲೋ ಮೈನೋ ಅವರುಗಳನ್ನು `ಕೆಜಿಬಿಯ ಫಲಾನುಭವಿಗಳು' ಎಂದು ಸ್ಪಷ್ಟವಾಗಿ ಹೆಸರಿಸಿದ್ದಾರೆ. 1992ರಲ್ಲಿ ಅವರು ಬರೆದಿರುವುದೆಲ್ಲ ಸತ್ಯ ಎಂದು ಸ್ವತಃ ರಷ್ಯಾ ಸಕರ್ಾರವೇ ದೃಢಪಡಿಸಿದೆ (ನೋಡಿ: ದಿ ಹಿಂದು, ಜುಲೈ 4, 1992).

ಆದರೂ ಮೊದಮೊದಲು ರಾಜೀವ್ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆ ಹುಟ್ಟಿಸಿದ್ದರು. ಆದರೆ ಬಹುಬೇಗ ಭೋಪೋಸರ್್ ಅವರ ಹೆಸರಿಗೆ ಮಸಿ ಬಳಿಯಿತು. ಅವರ ಪತ್ನಿಯ ಮಿತ್ರ ಒಟ್ಟಾವಿಯೋ ಕ್ವಾಟ್ರೋಚಿ ಭಾರತದ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳಲು ನೆರವಾದ ಆರೋಪವೂ ರಾಜೀವ್ ಹೆಗಲಿಗೇರಿತು. ಯಾರೇ ಅಧಿಕಾರಸ್ಥ ಪ್ರಧಾನಿಯ ಮೇಲೆ ಇಂತಹ ಗುರುತರವಾದ ಆರೋಪಗಳು ಬಂದಾಗ ಮೊದಲು ಆತ ರಾಜೀನಾಮೆ ನೀಡಬೇಕು. ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕಾದರೆ ಅದು ಅನಿವಾರ್ಯ. ಏನೇ ಆದರೂ ರಾಜೀವ್ ರಾಜೀನಾಮೆಯ ಹೆಸರೆತ್ತಲಿಲ್ಲ. ನೈತಿಕಪ್ರಜ್ಞೆ, ಆತ್ಮಸಾಕ್ಷಿಯ ರಾಜಕಾರಣ ಮಾಡಲಿಲ್ಲ.

ಹರ್ಷದ್ ಮೆಹ್ತಾ ಹಗರಣ, ಹವಾಲಾ ಹಗರಣ, ಜೆಎಂಎಂ ಲಂಚ ಪ್ರಕರಣಗಳಿಂದ ಪಿ.ವಿ. ನರಸಿಂಹರಾವ್ ಸಹ ವಿಚಲಿತರಾಗಲಿಲ್ಲ. ಅವರ `ಇನ್ಸೈಡರ್' ಆಗಿನ್ನೂ ಎಚ್ಚೆತ್ತಿರಲಿಲ್ಲ. ಕಾಗರ್ಿಲ್ ಶವಪೆಟ್ಟಿಗೆಗಳ ಖರೀದಿ ಹಗರಣ ಜಾಜರ್್ ಫನರ್ಾಂಡಿಸ್ ಹಾಗೂ ವಾಜಪೇಯಿಯರನ್ನು ವಿಚಲಿತಗೊಳಿಸಲಿಲ್ಲ.

ಮೇಲಿನ ಎಲ್ಲ ಪ್ರಕರಣಗಳಲ್ಲೂ ಆರೋಪಿಗಳೆಲ್ಲ ಅಪರಾಧಿಗಳು ಎಂದು ಇಲ್ಲಿ ನಾನು ಹೇಳುತ್ತಿಲ್ಲ. ಈ ಆರೋಪಗಳು ನಿಜವೂ ಆಗಿರಬಹುದು. ಕೆಲವು ಸಂದರ್ಭಗಳಲ್ಲಿ ಪುರಾವೆ ಇಲ್ಲದಿರಬಹುದು. ಆದರೆ ಆರೋಪಗಳು ಎದುರಾದಾಗ ನಮ್ಮ ನಾಯಕರುಗಳು ನಡೆದುಕೊಂಡ ರೀತಿ ಹೇಗಿತ್ತು? ಅವರ `ನೈತಿಕ ಪ್ರಜ್ಞೆ' ಏನಾಗಿತ್ತು? ಅವರೆಲ್ಲ ಸಾರ್ವಜನಿಕ ಅಭಿಪ್ರಾಯಕ್ಕೆ ಕಿಂಚಿತ್ತೂ ಪ್ರತಿಸ್ಪಂದನೆ ತೋರಿಸಲಿಲ್ಲವೇಕೆ? -ಎಂಬುದು ಇಲ್ಲಿನ ಚಚರ್ಾ ವಸ್ತು.

1956ರಲ್ಲಿ ರೈಲ್ವೆ ಸಚಿವರಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಮೆಹಬೂಬ್ನಗರದಲ್ಲಿ ರೈಲು ಅಪಘಾತವಾಗಿ 112 ಜನರು ಮಡಿದಾಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ ಪ್ರಧಾನ ಮಂತ್ರಿ ಜವಹರ್ಲಾಲ್ ನೆಹರೂ ಶಾಸ್ತ್ರಿಯವರ ರಾಜೀನಾಮೆಯನ್ನು ಅಂಗೀಕರಿಸಲಿಲ್ಲ. ಇದಾದ ಮೂರು ತಿಂಗಳ ಬಳಿಕ ತಮಿಳುನಾಡಿನ ಅರಿಯಲೂರಿನಲ್ಲಿ ರೈಲು ಅಪಘಾತವಾಗಿ 144 ಜನರು ಮಡಿದರು. ಈ ಬಾರಿ ಶಾಸ್ತ್ರಿಯವರು `ಇದು ನನ್ನ ಸಾಂವೈಧಾನಿಕ ಹಾಗೂ ನೈತಿಕ ಜವಾಬ್ದಾರಿಯ ಪ್ರಶ್ನೆ' ಎಂದು ವಾದಿಸಿ ರಾಜೀನಾಮೆ ಕೊಟ್ಟು ಹೊರಬಂದರು. ಜನರು ಅವರ ಕ್ರಮವನ್ನು ಮೆಚ್ಚಿ ಸ್ವಾಗತಿಸಿದರು.

ತಮ್ಮ ಮೇಲೆ ಯಾವುದೇ ನೇರ ಆರೋಪ ಇಲ್ಲದಿದ್ದಾಗಲೂ ಶಾಸ್ತ್ರಿಯವರು ನಡೆದುಕೊಂಡ ರೀತಿ ಹಾಗಿತ್ತು. ಅವರಿಗೂ ವೈಯಕ್ತಿಕ ಮಟ್ಟದಲ್ಲಿ ಗುರುತರವಾದ ಆರೋಪಗಳನ್ನು ಹೊತ್ತು ನಿಂತಿರುವ ಇತರ ಅನೇಕ `ನಾಯಕರುಗಳು' ನಡೆದುಕೊಳ್ಳುತ್ತಿರುವ ರೀತಿಗೂ ಅಜಗಜಾಂತರ.

ಭ್ರಷ್ಟಾಚಾರ ನಿಯಂತ್ರಣದ ವಿಷಯದಲ್ಲಿ ನಮ್ಮ ಯಾವ ಮುಖಂಡರೂ ದಕ್ಷತೆ, ಪ್ರಾಮಾಣಿಕತೆ ತೋರಿಸಿಕೊಂಡು ಬಂದಿಲ್ಲ. ಎಲ್ಲ ಉನ್ನತ ಸಕರ್ಾರಿ ಅಧಿಕಾರಿಗಳ ಹಾಗೂ ಅಧಿಕಾರಸ್ಥರ ಮೇಲಿನ ಭ್ರಷ್ಟಾಚಾರವನ್ನು ನಿಯಂತ್ರಿಸುವ ಉದ್ದೇಶ ಹೊತ್ತ ಲೋಕ್ಪಾಲ್ ಮಸೂದೆಗೆ 1968 ರಿಂದ ಈವರೆಗೆ ಅನುಮೋದನೆ ಲಭಿಸಿಯೇ ಇಲ್ಲ! ಅದನ್ನು ಜಾರಿಗೆ ತರಲು ಯಾವ ಸಕರ್ಾರಕ್ಕೂ ಆಸಕ್ತಿ ಇಲ್ಲ. ಭೋಪೋಸರ್್ ಹಗರಣ ಬೆಳಕಿಗೆ ಬಂದ ಮೇಲೆ ವಿ.ಪಿ. ಸಿಂಗ್ ಸಕರ್ಾರ ಲೋಕ್ಪಾಲ್ ಮಸೂದೆಯನ್ನು ಜಾರಿಗೊಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಅನಂತರ ವಾಜಪೇಯಿ ಅದನ್ನು ಜಾರಿಗೊಳಿಸುವ ಭರವಸೆ ಇತ್ತರೂ ಕಾರ್ಯತಃ ಮಾಡಲಿಲ್ಲ. 2003ರ ಹೊತ್ತಿಗೆ ಲೋಕಪಾಲರ ತನಿಖಾ ವ್ಯಾಪ್ತಿಗೆ ಪ್ರಧಾನ ಮಂತ್ರಿಯನ್ನೂ ಒಳಪಡಿಸಬೇಕು ಎಂದು ಕ್ಯಾಬಿನೆಟ್ ನಿರ್ಣಯವಾಗಿತ್ತು. ಮುಂದಿನ ಮನಮೋಹನ್ ಸಿಂಗ್ರ ಯುಪಿಎ ಸಕರ್ಾರ ಸಹ ಲೋಕ್ಪಾಲ್ ಜಪ ಮಾಡಿಕೊಂಡು ಬರುತ್ತಿದೆ. ಆದರೆ ಕಾರ್ಯತಃ ಏನನ್ನೂ ಮಾಡುತ್ತಿಲ್ಲ.

ಸಿಬಿಐ ಅನ್ನು ಸ್ಥಾಪಿಸಿದ್ದರ ಹಿಂದಿನ ಮೂಲ ಉದ್ದೇಶವೇ ಭ್ರಷ್ಟಾಚಾರ ನಿಯಂತ್ರಣ. ಆದರೆ ಅತ್ಯುನ್ನತ ಮಟ್ಟದ ಯಾವುದೇ ಭ್ರಷ್ಟಾಚಾರ ಪ್ರಕರಣದಲ್ಲೂ ಸಿಬಿಐ ಈವರೆಗೆ ಯಶಸ್ಸು ಸಾಧಿಸಿಲ್ಲ. ಸುಖ್ರಾಮ್ ಪ್ರಕರಣ ಕೆಳ ನ್ಯಾಯಾಲಯದಲ್ಲಿ ಸಾಬೀತಾಯಿತು. ಇನ್ನೊಂದು, ಕಲ್ಪನಾಥ್ ರಾಯ್ ಪ್ರಕರಣ. ಅದೂ ಕೇಲ ಹಂತಗಳಲ್ಲಿ ಸಾಬೀತಾಗಿತ್ತು. ಆದರೆ ಭೋಪೋಸರ್್ ವಿಷಯದಲ್ಲಿ ಸಿಬಿಐ ಮಯರ್ಾದೆ ಹೋಯಿತು. ಈ ತನಿಖಾ ಬ್ಯೂರೋ ಆಳುವ ಸಕರ್ಾರಗಳ ಕೈಗೊಂಬೆಯಾಗಿದೆ ಎಂದು ಸ್ವತಃ ಅದರ ನಿದರ್ೇಶಕರೇ ಈಚೆಗೆ ಸುಪ್ರೀಮ್ ಕೋಟರ್್ ಎದುರು ಅಲವತ್ತುಕೊಂಡು ಛೀಮಾರಿ ಹಾಕಿಸಿಕೊಂಡ ಪ್ರಸಂಗ ಅದರ ಪರಿಸ್ಥಿತಿಯನ್ನು ತೋರಿಸುತ್ತದೆ. ಹಲವಾರು ಪ್ರಕರಣದಲ್ಲಿ ತಾನೇ ಹೆಸರಿಸಿದ ಆರೋಪಿಯ ಪರವಾಗಿಯೇ (ಉದಾಹರಣೆಗೆ, ಒಟ್ಟಾವಿಯೋ ಕ್ವಟ್ರೋಚಿ, ಮುಲಾಯಂ ಸಿಂಗ್) ಸಿಬಿಐ ವಾದಿಸಿದ್ದೂ ಉಂಟು!

ಈಗಲೂ ನಾವು `ನಮ್ಮ ಪ್ರಜಾತಂತ್ರದ ಆದರ್ಶ ಮಂತ್ರಿ ಯಾರು?' ಎಂದ ತಕ್ಷಣ `ಶಾಸ್ತ್ರಿ' ಎನ್ನುತ್ತೇವೆ. ಅವರ ನಂತರದ ಇನ್ನೊಂದು ಶ್ರೇಷ್ಠ ಉದಾಹರಣೆ ನಮಗಿನ್ನೂ ಸಿಕ್ಕಿಲ್ಲ. ನಮ್ಮ ಸಮಕಾಲೀನ ರಾಜಕೀಯದಲ್ಲಿ ಕಳಂಕ ಮುಕ್ತ ರಾಜಕಾರಣಕ್ಕೆ ಒಂದು ಉದಾಹರಣೆಯೂ ಸಿಗುತ್ತಿಲ್ಲ.

ನಮ್ಮ ನಡುವಿನ ಭ್ರಷ್ಟ ನಾಯಕರು ರೋಹ್ ತರಹ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ. ಆದರೆ ಕಡೆಯ ಪಕ್ಷ ಸಿಕ್ಕಿಬಿದ್ದಾಗಲಾದರೂ ವಿಷಾದ ವ್ಯಕ್ತಪಡಿಸಬೇಡವೆ? ಜನರ ಕ್ಷಮೆ ಕೇಳಬೇಡವೆ? ಇವರಿಗೆಲ್ಲ ಆತ್ಮಸಾಕ್ಷಿ ಇದೆಯೆ?

ಯಾರ ಗೆಲುವು? ಯಾರ ಸೋಲು?

ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಯುಪಿಎ ಸಕರ್ಾರ ಮತ್ತೆ ವಿಜಯಿಯಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಬಲವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ನಾಮಕಾವಸ್ಥೆಯ ತೃತೀಯ ರಂಗ ಧೂಳೀಪಟವಾಗಿದೆ. ಎಡಪಕ್ಷಗಳು ಮೂಲೆಗುಂಪಾಗಿವೆ.

ಯಾವುದೇ ರೀತಿಯ `ಆ್ಯಂಟಿ ಇನ್ಕಮ್ಬೆನ್ಸಿ' (ಆಳುವವರ ಮೇಲಿನ ಅತೃಪ್ತಿ) ಈ ಚುನಾವಣೆಯಲ್ಲಿ ಕೆಲಸ ಮಾಡಿದಂತೆ ಕಾಣುತ್ತಿಲ್ಲ. ಬೆಲೆಯೇರಿಕೆ, ಭಯೋತ್ಪಾದನೆ, ಸುರಕ್ಷೆ, ಸ್ವಿಸ್ ಬ್ಯಾಂಕ್, ಕ್ವಟ್ರೋಚಿ, ಯುಪಿಎ ಒಳಜಗಳ, ಅಮರ್ ಸಿಂಗ್ ಲಂಚ ಪ್ರಕರಣ, ಮುಲಾಯಂ ಸಿಬಿಐ ಪ್ರಕರಣ, ಅಫ್ಜಲ್ ಗುರು, ಅಜ್ಮಲ್ ಕಸಬ್ - ಯಾವುದೂ ಕಾಂಗ್ರೆಸ್ ಬೆಳವಣಿಗೆಗೆ ಅಡ್ಡಿಯಾಗಿಲ್ಲ. ಇದು ಗಮನಾರ್ಹ ಸಂಗತಿ.

ಇದು ಆಶ್ಚರ್ಯಕರ ಸಂಗತಿಯೂ ಹೌದು. ಹೇಗೆ ಕಾಂಗ್ರೆಸ್ `ಆ್ಯಂಟಿ ಇನ್ಕಮ್ಬೆನ್ಸಿ' ಪಡೆಯಲಿಲ್ಲ ಎಂಬುದು ಗಂಭೀರ ಅಧ್ಯಯನವನ್ನು ಬೇಡುತ್ತದೆ. ಈ ಚುನಾವಣೆಯಲ್ಲಿ ಸಕರ್ಾರದ ವಿರುದ್ಧದ ಮತಗಳು ಅಷ್ಟಾಗಿ ಚಲಾವಣೆಯಾಗಿಲ್ಲ ಎಂದುಕೊಂಡರೆ, ಯುಪಿಎ ಒಕ್ಕೂಟದ ಸ್ಥಾನದಲ್ಲಿ ಒಂದು ಪರಿಣಾಮಕಾರಿಯಾದ ಹಾಗೂ ಆಕರ್ಷಕವಾದ ಪಯರ್ಾಯವಾಗಿ ತನ್ನನ್ನು ಬಿಂಬಿಸಿಕೊಳ್ಳುವಲ್ಲಿ ಎನ್ಡಿಎ ಅಥವಾ ಬಿಜೆಪಿ ವಿಫಲವಾಗಿದೆ ಎಂದು ಹೇಳಬೇಕಾಗುತ್ತದೆ.

ಬೆಲೆಯೇರಿಕೆಗೆ ಪ್ರತಿಯಾಗಿ ಸಕರ್ಾರದ ರೈತರ ಸಾಲಮನ್ನಾ ಯೋಜನೆ ಕೆಲಸ ಮಾಡಿರಬಹುದು. ಆದರೆ ಒಂದು ವಿರೋಧಪಕ್ಷವಾಗಿ ಬಿಜೆಪಿ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ ಎನ್ನುವುದಂತೂ ಸ್ಪಷ್ಟ. ಕಳೆದ ಐದು ವರ್ಷಗಳಲ್ಲಿ ಅದರ ಅಸ್ತಿತ್ವದ ಅರಿವೇ ಜನರಿಗೆ ತಟ್ಟಿರಲಿಲ್ಲ. `ಆ್ಯಂಟಿ ಇನ್ಕಮ್ಬೆನ್ಸಿ' ಸೃಷ್ಟಿಸುವಲ್ಲಿ ಅದು ವಿಫಲವಾಗಿದೆ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಆಡ್ವಾಣಿ ದಿಢೀರೆಂದು ಪ್ರತ್ಯಕ್ಷರಾದದ್ದು.

2004ಕ್ಕೆ ಹೋಲಿಸಿದರೆ ಯುಪಿಎ ಅಂಗಪಕ್ಷಗಳು ಅಷ್ಟಾಗಿ ಲಾಭಗಳಿಸಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಇಲ್ಲಿ ಸಾಕಷ್ಟು ಬಲವರ್ಧನೆ ಆಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಇತ್ತ ಎನ್ಡಿಎ ಒಕ್ಕೂಟದಲ್ಲಿ ಶಿವಸೇನೆಯನ್ನು ಬಿಟ್ಟು ಉಳಿದ ಬಿಜೆಪಿಯ ಮಿತ್ರಪಕ್ಷಗಳು ಅಂತಹ ನಷ್ಟವನ್ನೇನೂ ಅನುಭವಿಸಿಲ್ಲ. ಇಲ್ಲಿ ಬಿಜೆಪಿಯೇ ಹೆಚ್ಚು ನಷ್ಟ ಅನುಭವಿಸಿದೆ. ಒಂದು ಒಕ್ಕೂಟವಾಗಿ ಎನ್ಡಿಎ ಸುಮಾರು 20ಕ್ಕೂ ಕಡಿಮೆ ಸ್ಥಾನಗಳನ್ನು ಕಳೆದುಕೊಂಡಿದ್ದರೆ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿಯ ಮತ್ತು ಯುಪಿಎ ಅಂಗಪಕ್ಷಗಳ ನಷ್ಟದ ಪೂರ್ಣ ಪ್ರಯೋಜನ ಕಾಂಗ್ರೆಸ್ಸಿಗೆ ಲಭಿಸಿದೆ. ಅದು 2004ಕ್ಕಿಂತಲೂ ಈ ಬಾರಿ 50ಕ್ಕೂ ಹೆಚ್ಚು ಸ್ಥಾನಗಳನ್ನು ಹೆಚ್ಚಾಗಿ ಗಳಿಸುವ ಮೂಲಕ ಮಹತ್ವಪೂರ್ಣ ವಿಜಯ ಸಾಧಿಸಿದೆ.

ರಾಜ್ಯಗಳ ಮಟ್ಟದಲ್ಲಿ ನೋಡಿದರೆ, ದೇಶದ ಹೆಚ್ಚು ರಾಜ್ಯಗಳು ಎನ್ಡಿಎ ಆಡಳಿತವನ್ನು ಹೊಂದಿವೆ. 2004ರ ನಂತರ ಕಾಂಗ್ರೆಸ್ ಒಂದರ ನಂತರ ಒಂದು ರಾಜ್ಯವನ್ನು ಕಳೆದುಕೊಳ್ಳುತ್ತಲೇ ಬಂದಿತ್ತು. ಈ ಟ್ರೆಂಡ್ ನೋಡಿದಾಗ ಕೇಂದ್ರದಲ್ಲಿಯೂ ಅದರ ಪ್ರಾಬಲ್ಯ ಕುಂಠಿತವಾಗಬಹುದೆಂಬ ನಿರೀಕ್ಷೆ ಸಾಮಾನ್ಯವಾಗಿತ್ತು. ಆದರೆ ಕಾಂಗ್ರೆಸ್ ಈ ಬಾರಿ ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಗೆದ್ದಿದೆ. ಕನರ್ಾಟಕ, ಗುಜರಾತ್ ಹಾಗೂ ಬಿಹಾರ - ಈ ಮೂರು ರಾಜ್ಯಗಳು ಮಾತ್ರ ಬಿಜೆಪಿಯ ಪಾಲಿಗೆ ಅನುಕೂಲಕರವಾಗಿವೆ.

ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಪ್ರಚಾರ ಫಲಕೊಟ್ಟಂತೆ ಕಾಣುತ್ತದೆ. ರಾಷ್ಟ್ರೀಯ ರಾಜಕಾರಣದ ತಕ್ಕಡಿಯಲ್ಲಿ ಮಹತ್ವದ ಪಾತ್ರ ವಹಿಸುವ ಉತ್ತರ ಪ್ರದೇಶ ಕಳೆದ ದಶಕದಲ್ಲಿ ಬಿಜೆಪಿಯ ಅಡ್ಡೆಯಾಗಿತ್ತು. ನವದೆಹಲಿಯ ದಬರ್ಾರಿನಲ್ಲಿ ಬಿಜೆಪಿಯು ಕಾಂಗ್ರೆಸ್ಸಿಗೆ ಸಮಾನವಾಗಿ ಬೆಳೆಯಲು ಕಾರಣವಾಗಿದ್ದೇ ಉತ್ತರ ಪ್ರದೇಶದ ಮತದಾರರು. 1997ರಲ್ಲಿ ರಾಜ್ಯದ ಒಟ್ಟು 80 ಸ್ಥಾನಗಳ ಪೈಕಿ 50 ಸ್ಥಾನಗಳನ್ನು ಬಿಜೆಪಿ ಗಳಿಸಿತ್ತು. ಆದರೆ ಈಗ ಅದು ನಾಲ್ಕನೆಯ ಸ್ಥಾನಕ್ಕೆ ಕುಸಿದಿದೆ. ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಕ್ರಮೇಣ ಹಿಡಿತ ಸಾಧಿಸುತ್ತಿದೆ.

1999ರಲ್ಲಿ ಎನ್ಡಿಎ 24 ಪಕ್ಷಗಳ ದೊಡ್ಡ ಒಕ್ಕೂಟವಾಗಿತ್ತು. ಆದರೆ ಪ್ರಸ್ತುತ ಜೆಡಿಯು ಹಾಗೂ ಶಿವಸೇನೆಗಳನ್ನು ಬಿಟ್ಟರೆ ಅದಕ್ಕೆ ಹೇಳಿಕೊಳ್ಳುವಂತಹ ಮಿತ್ರ ಪಕ್ಷಗಳೇ ಇರಲಿಲ್ಲ. ದಕ್ಷಿಣದಲ್ಲಂತೂ (ಕನರ್ಾಟಕವನ್ನು ಬಿಟ್ಟು) ಎನ್ಡಿಎ ನಗಣ್ಯವಾಗಿದೆ. ಮಿತ್ರಪಕ್ಷಗಳನ್ನು ಕಳೆದುಕೊಂಡಿದ್ದು ಅದಕ್ಕೆ ದೊಡ್ಡ ನಷ್ಟವಾಗಿ ಪರಿಣಮಿಸಿದೆ. ಪ್ರಬಲ ರಾಜಕೀಯ ಮೈತ್ರಿಯ ಕೊರತೆ ಅರ ಸೋಲಿಗೆ ಪ್ರಮುಖ ಕಾಣಿಕೆ ಸಲ್ಲಿಸಿದೆ. ಅದರ ಬಹುತೇಕ ಮಿತ್ರಪಕ್ಷಗಳೆಲ್ಲ ತೃತೀಯ ರಂಗ ಸೇರಿ ಕಾಂಗ್ರೆಸ್ ವಿರೋಧಿ ಮತಗಳು ಹಂಚಿಹೋಗಲು ಕಾರಣವಾಗಿದ್ದರಿಂದ ಅಂತಿಮವಾಗಿ ಕಾಂಗ್ರೆಸ್ಸಿಗೇ ಅನುಕೂಲವಾಗಿದೆ.

ಆದರೆ ವೈಯಕ್ತಿಕ ಮಟ್ಟದಲ್ಲಿ ಬಿಜೆಪಿ ಗಳಿಸಿರುವ ಹಿನ್ನಡೆ ಗಮನಾರ್ಹ. ಅದಕ್ಕೆ ಸರಿಯಾದ ಕಾರಣಗಳನ್ನು ತಿಳಿಯಬೇಕಾದ ಅಗತ್ಯವಿದೆ. ಒಂದು ಆಡ್ವಾಣಿಯವರ ವಯಸ್ಸು ಹಾಗೂ ವರ್ಚಸ್ಸು ಎರಡೂ ಕೈಕೊಟ್ಟಿರಬಹುದು. ಇಂಟರ್ನೆಟ್ ಸಮೀಕ್ಷೆಗಳಲ್ಲಿ ಆಡ್ವಾಣಿ ಕೈ ಮೇಲಾಗಿಯೇ ಕಂಡುಬರುತ್ತಿತ್ತು. ಆದರೆ ಇಂಟರ್ನೆಟ್ ಚಾಟ್ ರೂಮ್ಗಳಲ್ಲಿ ಅವರೊಂದಿಗೆ ಕಾಲ ಕಳೆದವರ ಪೈಕಿ ಬಹುಮಂದಿ ಮತಗಟ್ಟೆಗೇ ಬರಲಿಲ್ಲ!

ಜಿನ್ನಾ ಪ್ರಕರಣದ ನಂತರ ಎರಡನೆ ಬಾರಿಗೆ ಆಡ್ವಾಣಿ ಹಾಗೂ ಸುಧೀಂದ್ರ ಕುಲಕಣರ್ಿ ಜೋಡಿಯ ರಣತಂತ್ರ ಕೈಕೊಟ್ಟಿದೆ. ವೈಯಕ್ತಿಕ ವೆಬ್ಸೈಟುಗಳ ಮೂಲಕ ಆಡ್ವಾಣಿ ಪ್ರಚಾರ ಹೈ-ಟೆಕ್ ಆಗಿದ್ದುದರಲ್ಲಿ ಅನುಮಾನವಿಲ್ಲ. ಅದು ಪಾರದರ್ಶಕವೂ ಆಗಿತ್ತು. ಆದರೆ ಮತಗಳನ್ನು ಸೆಳೆಯುವಲ್ಲಿ ವಿಫಲವಾಯಿತು. ಐಟಿ, ಬಿಟಿ ಹುಡುಗರ ಬೇಟೆಯ ಭರಾಟೆಯಲ್ಲಿ ಅದು ತನ್ನ ಎಂದಿನ `ಬಿಜೆಪಿತನ'ವನ್ನು ಕಳೆದುಕೊಂಡಿತ್ತು. ಯುವ, ಇಂಟರ್ನೆಟ್ ಪೀಳಿಗೆಯನ್ನು ಸೆಳೆಯುವ ಕಸರತ್ತಿನಲ್ಲಿ ಸಾರ್ವಜನಿಕರನ್ನು ಹಾಗೂ ತನ್ನ ಶಾಶ್ವತ ಮತದಾರರನ್ನು ಸೆಳೆಯುವಲ್ಲಿ ವಿಫಲವಾಯಿತು.

`ಆಡ್ವಾಣಿಯವರನ್ನು ಪ್ರಧಾನಿಯಾಗಿಸಬೇಕು' ಎನ್ನುವುದನ್ನು ಬಿಟ್ಟರೆ ಈ ಚುನಾವಣೆಯಲ್ಲಿ ಎನ್ಡಿಎ ಮುಂದೆ ಇತರ ಪ್ರಬಲ ವಿಷಯಗಳು ಇರಲಿಲ್ಲ. ಆಥರ್ಿಕತೆ ಹಾಗೂ ಸುರಕ್ಷೆ ಈ ಬಾರಿ ಪ್ರಮುಖ ಚುನಾವಣಾ ವಿಷಯಗಳಾಗಿರಲೇ ಇಲ್ಲ. `ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸಕರ್ಾರ ಯಾವ ರೀತಿ ಕೆಲಸ ಮಾಡಿತು' ಎಂಬುದು ಸಾಮಾನ್ಯ ಚಚರ್ಾವಸ್ತುವಾಗಬೇಕಿತ್ತು. ಆದರೆ ಅದಕ್ಕೆ ಬದಲು ಸ್ವಯಂ ಆಡ್ವಾಣಿಯೇ ಜನರ ಮುಂದೆ ಚಚರ್ಾವಸ್ತುವಾದರು. ಸಕರ್ಾರದ ದಕ್ಷತೆ, ಅದಕ್ಷತೆಗಳಿಗೆ ಬದಲು ಆಡ್ವಾಣಿಯ ವರ್ಚಸ್ಸು, ವಯಸ್ಸು ಸಾರ್ವಜನಿಕವಾಗಿ ಹೆಚ್ಚು ಗಮನ ಸೆಳೆಯಿತು. ಅಧ್ಯಕ್ಷೀಯ ಮಾದರಿಯ ಏಕಮುಖ ಪ್ರಚಾರತಂತ್ರ ಬಿಜೆಪಿ ಪಾಲಿಗೆ ಮುಳುವಾಗಿರಬಹುದು.

ಕಾಂಗ್ರೆಸ್ ಈ ಬಾರಿಯ ಚುನಾವಣೆಯನ್ನು ಸಾಕಷ್ಟು ಮಿತ್ರಪಕ್ಷಗಳ ಒಡಗೂಡಿಯೇ ಎದುರಿಸಿತು. ಆರ್ಜೆಡಿ ಮಾಡಿದ ತಕರಾರು ಬಿಟ್ಟರೆ ಉಳಿದಂತೆ ಹೆಚ್ಚೇನೂ ತಕರಾರು ಇರಲಿಲ್ಲ. ಬಿಜೆಪಿ ಪಾಲಿಗೆ ಗುಜರಾತಿನ ನರೇಂದ್ರ ಮೋದಿ ಇದ್ದಂತೆ ಕಾಂಗ್ರೆಸ್ ಪಾಲಿಗೆ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಮತ ಸೆಳೆಯುವ ಸೂಜಿಗಲ್ಲಾದರು. ದಕ್ಷಿಣದಲ್ಲಿ ಶ್ರೀಲಂಕಾ ತಮಿಳರ ವಿಷಯ ಕರುಣಾನಿಧಿಯನ್ನು ರಕ್ಷಿಸಿದ್ದೂ ಯುಪಿಎಗೆ ವರದಾನವಾಯಿತು. ಯುಪಿಎ ವಿರುದ್ಧದ ಮತಗಳು ಹಂಚಿಹೋಗಲು ಕಾರಣವಾಗಿದ್ದಷ್ಟೇ ತಮಿಳುನಾಡಿನ ವಿಜಯಕಾಂತ್ ಹಾಗೂ ಆಂಧ್ರದ ಚಿರಂಜೀವಿ ಮಾಡಿದ ಸಾಧನೆ.

ಒಟ್ಟಿನಲ್ಲಿ ದೇಶದ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಗಳಿಸಿರುವ ಸ್ಥಾನಗಳ ಒಟ್ಟು ಸಂಖ್ಯೆ 320ರ ಗಡಿಯನ್ನು ದಾಟುತ್ತದೆ. ಇದು ಒಳ್ಳೆಯ ಬೆಳವಣಿಗೆ. ರಾಷ್ಟ್ರೀಯ ರಾಜಕಾರಣದಲ್ಲಿ ಪ್ರಾದೇಶಿಕ, ಚಿಲ್ಲರೆ ಪಕ್ಷಗಳ ಪಾತ್ರ ಕಡಿಮೆಯಾಗುವುದು ಒಳ್ಳೆಯದು. ಆದರೆ ಅವುಗಳ ಮೈತ್ರಿ ಇಲ್ಲದೇ ಈ ಬೆಳವಣಿಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವು ಇನ್ನೂ ನಗಣ್ಯವಾಗಿಲ್ಲ.

ಅಮೆರಿಕದ ಹಣದಿಂದ ಪಾಕಿಸ್ತಾನ ಅಣು ಬಾಂಬ್ ತಯಾರಿಸುತ್ತಿದೆ!

ನಾವು ಚುನಾವಣೆಯಲ್ಲಿ ಮುಳುಗಿದ್ದಾಗ ಪಾಕಿಸ್ತಾನದಿಂದ ಎರಡು ಆಘಾತಕರ ಸುದ್ದಿಗಳು ಬಂದಿವೆ. ಒಂದು, ಆ ದೇಶ ಈಗ ಇದ್ದಕ್ಕಿದ್ದ ಹಾಗೆ ಭಾರಿ ಸಂಖ್ಯೆಯಲ್ಲಿ ಪರಮಾಣು ಬಾಂಬ್ಗಳನ್ನು ತಯಾರಿಸಲು ಆರಂಭಿಸಿದೆ. ಇನ್ನೊಂದು, ತಾಲಿಬಾನ್, ಅಲ್ ಖೈದಾ ಭಯೋತ್ಪಾದಕರ ಕೈಗೆ ಈಗಾಗಲೇ ಪರಮಾಣು ಬಾಂಬ್ಗಳು ಸಿಕ್ಕಿರಬಹುದಾದ ಸಾಧ್ಯತೆಗಳಿವೆ.

ಎರಡನೇ ಬಾರಿಗೆ ಅಧಿಕಾರ ಹಿಡಿದಿರುವ `ಪ್ರಬಲ' ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಅವರ `ಪ್ರಬಲ' ಹಾಗೂ `ಯುವ' ಸಹೋದ್ಯೋಗಿಗಳಾದ ಪಿ. ಚಿದಂಬರಂ, ಎ. ಕೆ. ಆ್ಯಂಟನಿ, ಎಸ್. ಎಂ .ಕೃಷ್ಣ - ಈ ಆತಂಕಕ್ಕೆ ಹೇಗೆ ಸ್ಪಂದಿಸುತ್ತಾರೋ ಗೊತ್ತಿಲ್ಲ.

ಅಮೆರಿಕ ಸಕರ್ಾರವೇ ದಿಕ್ಕು ತೋಚದೇ ಕೈಚೆಲ್ಲಿ ಕುಳಿತಿದೆ. ತಾಲಿಬಾನ್ ಪಾಕಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ಮುಂಚೆ ಆ ದೇಶದ ಪರಮಾಣು ಅಸ್ತ್ರಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಮೆರಿಕ ಹೆಣಗುತ್ತಿದೆ. ಈವರೆಗೆ ಪಾಕ್ ಸುಮಾರು 100 ಪರಮಾಣು ಬಾಂಬ್ಗಳನ್ನು ಹೊಂದಿದೆ ಎಂಬ ಅಂದಾಜಿದೆ. ಈ ಪೈಕಿ 2-3 ಬಾಂಬ್ಗಳು ಉಗ್ರರಿಗೆ ಸಿಕ್ಕರೂ ಭಾರಿ ಅಪಾಯ ತಪ್ಪಿದ್ದಲ್ಲ.

ಈಗ ಅಮೆರಿಕದ ಮುಂದೆ ಇರುವ ಕೆಲವು ಆಯ್ಕೆಗಳು: ಮೊದಲು ಪಾಕ್ ಸಕರ್ಾರ ಉರುಳದಂತೆ ನೋಡಿಕೊಳ್ಳುವುದು; ಅನಂತರ ತಾಲಿಬಾನ್, ಅಲ್-ಖೈದಾ ಬೆಳವಣಿಗೆ ತಡೆಯುವುದು; ತನ್ನ ಪರಮಾಣು ಅಸ್ತ್ರಗಳು ಉಗ್ರರ ಕೈಗೆ ಜಾರದಂತೆ ಭದ್ರಪಡಿಸಿಕೊಳ್ಳಲು ಪಾಕ್ ಸಕರ್ಾರಕ್ಕೆ ನೆರವಾಗುವುದು; ಹಾಗೂ ಕಡೆಯದಾಗಿ, ಮೇಲಿನ ಎಲ್ಲ ತಂತ್ರಗಳು ಕೈಕೊಟ್ಟರೆ, ಪಾಕ್ ಪರಮಾಣು ಅಸ್ತ್ರಗಳನ್ನು ಸ್ವತಃ ತನ್ನ ಕೈವಶ ಮಾಡಿಕೊಳ್ಳುವುದು.

ಯೋಜನೆ ಕೇಳಲು ಚೆನ್ನಾಗಿದೆ. ಆದರೆ ವಾಸ್ತವ ಏನೆಂದರೆ, ಈ ಯಾವುದರಲ್ಲೂ ಅಮೆರಿಕ ಯಶಸ್ಸು ಕಾಣುವ ಲಕ್ಷಣಗಳಿಲ್ಲ. ಇಲ್ಲಿ ಅಮೆರಿಕ ಪಾಕ್ ಕುರಿತುನ ಯೋಜನೆಗಳನ್ನು ಹಾಕುತ್ತಿದೆಯೋ, ಅಥವಾ ಪಾಕಿಸ್ತಾನವೇ ಅಮೆರಿಕದ ಅಸಹಾಯಕತೆಯನ್ನು ಬಳಸಿಕೊಳ್ಳುತ್ತಿದೆಯೋ ಎಂಬುದು ಚಿಂತಿಸಬೇಕಾದ ವಿಷಯ.

ಹೀಗೆ ಹೇಳಲು ಕಾರಣಗಳು ಹಲವಾರು. ಮೊದಲನೆಯದಾಗಿ, ಪಾಕಿಸ್ತಾನದ ಸಕರ್ಾರ, ಮಿಲಿಟರಿ ಹಾಗೂ ಐಎಸ್ಐ ಒಳಗೇ ತಾಲಿಬಾನ್ ಪರವಾದ ಶಕ್ತಿಗಳಿವೆ. ಈ ಶಕ್ತಿಗಳನ್ನು ಎದುರಿಸುವುದು, ಅಥವಾ ಅವುಗಳ ವಿರೋಧ ಕಟ್ಟಿಕೊಳ್ಳುವುದು ಪಾಕಿಸ್ತಾನದ ಯಾವ ರಾಜಕಾರಣಿಗೂ ಬೇಕಿಲ್ಲ. ಹೀಗಾಗಿ ತಾಲಿಬಾನ್ ಬೆಳವಣಿಗೆಯನ್ನು ತಡೆಯುವುದು ಸಕರ್ಾರಿ ಮುಖಂಡರಿಂದ ಅಸಾಧ್ಯ. ಆದರೂ ಅವರು ಅಮೆರಿಕಕ್ಕೆ, ಅಂತಾರಾಷ್ಟ್ರೀಯ ಸಮುದಾಯಕ್ಕೆ ಹುಸಿ ಭರವಸೆ ಕೊಡುತ್ತಿದ್ದಾರೆ. ಹಾಗೆ ಭರವಸೆ ಕೊಡುವ ಮೂಲಕ ಅಪಾರವಾದ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ!

ಎರಡನೆಯದಾಗಿ, ಪಾಕಿಸ್ತಾನದ ಬಳಿ ಎಷ್ಟು ಪರಮಾಣು ಅಸ್ತ್ರಗಳಿವೆ, ಅವೆಲ್ಲ ಎಲ್ಲೆಲ್ಲಿವೆ ಎಂಬ ಖಚಿತ ಮಾಹಿತಿ ಅಮೆರಿಕದ ಬಳಿ ಇಲ್ಲ. `ನಮ್ಮ ಬಳಿ ಅಂತಹ ಮಾಹಿತಿ ಇಲ್ಲ' ಎಂದು ಸ್ವತಃ ಸಿಐಎ ನಿದರ್ೇಶಕರೇ ಅಮೆರಿಕ ಸಕರ್ಾರಕ್ಕೆ ವರದಿ ಕಳುಹಿಸಿದ್ದಾರೆ. ಹೀಗಿರುವಾಗ ಅವುಗಳಲ್ಲಿ ಈ ಬಾಂಬ್ಗಳ ಪೈಕಿ ಎಷ್ಟು ಉಗ್ರರ ವಶವಾಗಿವೆ, ಎಷ್ಟು ಸುರಕ್ಷಿತವಾಗಿವೆ ಎಂದು ಹೇಳುವುದು ಕಷ್ಟ. ಸಕರ್ಾರದ ವಶದಲ್ಲಿ ಎಷ್ಟು ಅಸ್ತ್ರಗಳಿವೆ ಎಂಬ ಕುರಿತು ಯಾವುದೇ ದಾಖಲೆಗಳು ಲಭ್ಯವಿಲ್ಲದೇ ಅವುಗಳ ಹಸ್ತಾಂತರದ ಬಗ್ಗೆ ಮಾತುಕತೆ ನಡೆಸುವುದೂ ಅಸಾಧ್ಯವಾಗುತ್ತದೆ.

ಪಾಕಿಸ್ತಾನದ ಪರಮಾಣು ಅಸ್ತ್ರಗಳ ಸಂಪೂರ್ಣ ವಿವರ ತಿಳಿದಿರುವುದು ಐಎಸ್ಐಗೆ ಮಾತ್ರ. ಮಿಲಿಟರಿ ಹಾಗೂ ಐಎಸ್ಐಗಳೆರಡೂ ವೀಲಿನವಾಗಿರುವ ಒಂದು ಉನ್ನತ ವಿಭಾಗ ಈ ವಿಷಯವನ್ನು ನಿರ್ವಹಿಸುತ್ತಿದೆ. ಉಳಿದಂತೆ ಇತರ ಮಿಲಿಟರಿ ಅಧಿಕಾರಿಗಳಿಗೂ ಪೂರ್ಣ ಚಿತ್ರಣ ತಿಳಿದಿರುವ ಸಾಧ್ಯತೆಯಿಲ್ಲ. ವಾಸ್ತವದಲ್ಲಿ ಐಎಸ್ಐ ಹಾಗೂ ತಾಲಿಬಾನ್ ನಡುವಿನ ಗೆರೆ ಅಗೋಚರ. ಐಎಸ್ಐ ಒಳಗೆ ತಾಲಿಬಾನ್ ಶಕ್ತಿಗಳದೇ ಕಾರುಬಾರು.

ಪಾಕ್ ಪರಮಾಣು ಶಸ್ತ್ರಗಳನ್ನು ಕಾಪಾಡಲು ಐಎಸ್ಐ ಜೊತೆಗೇ ಅಮೆರಿಕ ಕೆಲಸ ಮಾಡಬೇಕು. ಅದು ಹೇಳುವುದನ್ನೇ ನಂಬಬೇಕು! ಈಗಾಗಲೆ ಐಎಸ್ಐಗೆ ಅಮೆರಿಕ ಸಕರ್ಾರ ಪರಮಾಣು ಬಾಂಬ್ ಸಂರಕ್ಷಣೆಯ ಆಧುನಿಕ ತಂತ್ರಜ್ಞಾನ ಒದಗಿಸಿದೆ. ಪರಮಾಣು ಶಸ್ತ್ರಗಳನ್ನು ಸುರಕ್ಷಿತವಾಗಿಡುವ ವಿಶೇಷ ಲಾಕ್ಗಳನ್ನು (ಅವುಗಳನ್ನು ಪಮರ್ಿಸಿವ್ ಆಕ್ಸೆಸ್ ಲಿಂಕ್ಸ್ ಎನ್ನುತ್ತಾರೆ) ನೀಡಿದೆ. ಜೊತೆಗೆ 10 ಕೋಟಿ ಅಮೆರಿಕನ್ ಡಾಲರ್ಗಳಷ್ಟು ಹಣದ ನೆರವನ್ನೂ ನೀಡಿದೆ.

ಮುಂಬೈ ಮೇಲೆ ಭಯೋತ್ಪಾದಕ ದಾಳಿಯಾದ ನಂತರ ಪಿ. ಚದಂಬರಂ ಫೈಲು ಹಿಡಿದುಕೊಂಡು ಅಮೆರಿಕಕ್ಕೆ ಹೋಗಿಬಂದರು. `ನೋಡುತ್ತಿರಿ, ಇನ್ನು ಪಾಕಿಸ್ತಾನಕ್ಕೆ ಯಾರೂ ಬೆಂಬಲ ನೀಡುವ ಹಾಗಿಲ್ಲ' ಎಂದು ಮನಮೋಹನ್ ಸಿಂಗ್ ಹೇಳಿದ್ದರು. ಆದರೆ 26/11ರ ನಂತರ ಯಾವ ಪರಿಸ್ಥಿತಿಯೂ ಬದಲಾಗಿಲ್ಲ. ಪಾಕಿಸ್ತಾನದ ಕೂದಲೂ ಕೊಂಕಿಲ್ಲ. ಅಂತಾರಾಷ್ಟ್ರೀಯ ಸಮುದಾಯದಿಂದ ದಿಗ್ಬಂಧನ ಎದುರಿಸುವ ಬದಲು ಪಾಕಿಸ್ತಾನ ಅಪಾರ ಹಣದ ರಾಶಿಯನ್ನೇ ಪಡೆಯುತ್ತಿದೆ.

`ಪಾಕಿಸ್ತಾನ್ ಎಕನಾಮಿಕ್ ಸವರ್ೇ' ಅಂಕಿಅಂಶಗಳ ಪ್ರಕಾರ, 1952 ರಿಂದ 2008ರ ವರೆಗಿನ 56 ವರ್ಷಗಳ ಕಾಲಾವಧಿಯಲ್ಲಿ ಪಾಕಿಸ್ತಾನ ಪಡೆದಿರುವ ಒಟ್ಟು ವಿದೇಶಿ ನೆರವು 73 ಶತಕೋಟಿ ಡಾಲರ್. ಆದರೆ ನವೆಂಬರ್ 2008ರ ಮುಂಬೈ (26/11) ಜಿಹಾದಿ ದಾಳಿಯ ನಂತರ, ಕಳೆದ 5-6 ತಿಂಗಳಷ್ಟು ಕಡಿಮೆ ಅವಧಿಯಲ್ಲಿಯೇ, ಪಾಕಿಸ್ತಾನಕ್ಕೆ 23.3 ಶತಕೋಟಿ ಡಾಲರ್ ವಿದೇಶಿ ಹಣ ಹರಿದು ಬಂದಿದೆ!!

ಇದರಲ್ಲಿ ಐಎಂಎಫ್ ನೀಡಿರುವ ಹಣವೇ 7 ಶತಕೋಟಿ ಡಾಲರ್. ಚೀನಾ ಅಂತೂ ಪಾಕಿಸ್ತಾನಕ್ಕೆ ಸಾಕಷ್ಟು ಹಣ ನೀಡುತ್ತಲೇ ಬರುತ್ತಿದೆ. ಅದನ್ನು ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿಲ್ಲ. `ಪಾಕಿಸ್ತಾನಕ್ಕೆ ಮುಂದಿನ ಐದು ವರ್ಷಗಳಲ್ಲಿ 5 ಶತಕೋಟಿ ಡಾಲರ್ ನೀಡುತ್ತೇವೆ' ಎಂದು ಒಬಾಮಾ ಆಡಳಿತ ಈಚೆಗೆ ಟೋಕ್ಯೋದಲ್ಲಿ ನಡೆದ ಡೋನರ್ಸ್ ಕಾನ್ಫರೆನ್ಸಿನಲ್ಲಿ ಒಪ್ಪಿಕೊಂಡಿದೆ. ತಕ್ಷಣಕ್ಕೆ ಒಂದು ಶತಕೋಟಿ ಡಾಲರ್ ಹಣವನ್ನೂ ಬಿಡುಗಡೆ ಮಾಡಿದೆ. `ಸಮಯ ಬಂದರೆ, ಪಾಕ್ ಸಕರ್ಾರಕ್ಕೆ ಖಾಲಿ ಚೆಕ್ ಅನ್ನು ನೀಡಲೂ ಹಿಂಜರಿಯುವುದಿಲ್ಲ' ಎಂಬ ಮಾತನ್ನೂ ಅಮೆರಿಕ ಆಡುತ್ತಿದೆ! ಆದರೆ ಈ ಹಣವೆಲ್ಲ ಹೇಗೆ ಖಚರ್ಾಗುತ್ತಿದೆ ಎಂಬುದನ್ನು ಕೇಳುವುದು ಮಾತ್ರ ಯಾರಿಂದಲೂ ಸಾಧ್ಯವಾಗಿಲ್ಲ.

`ನನ್ನ ದೌರ್ಬಲ್ಯ ಜಗತ್ತಿನ ಪಾಲಿಗೆ ಗಂಡಾಂತರಕಾರಿ. ಆದ್ದರಿಂದ ನನ್ನನ್ನು ಕೈಹಿಡಿದು ಕಾಪಾಡಿ, ನೀವೂ ಬದುಕಿಕೊಳ್ಳಿ. ಇಲ್ಲದಿದ್ದರೆ ನಿಮಗೇ ತೊಂದರೆ' ಎಂಬ ರೀತಿಯ ಸಂದೇಶಗಳನ್ನು ಬಿಂಬಿಸಿ ಹಣ ಹೊಡೆಯುವ ರಾಜತಾಂತ್ರಿಕ ಪಟ್ಟುಗಳನ್ನು ಪಾಕ್ ಎಂದೋ ಕರಗತ ಮಾಡಿಕೊಂಡಿದೆ. ಅದಕ್ಕೆ ಹಣ ಕೊಡುವುದನ್ನು ಬಿಟ್ಟು ಇತರ ಮಾರ್ಗಗಳಾವುವೂ ಅಮೆರಿಕ್ಕಾಗಲೀ, ಅಂತಾರಾಷ್ಟ್ರೀಯ ಸಮುದಾಯಕ್ಕಾಗಲೀ ಹೊಳೆಯುತ್ತಿಲ್ಲ. ಪಾಕಿಸ್ತಾನದ ಪಾಲಿಗೆ ಅದರ ದೌರ್ಬಲ್ಯವೇ ಅದರ ಶಕ್ತಿ! ಚಿನ್ನದ ಮೊಟ್ಟೆಯಿಡುವ ಕೋಳಿ.
ಈಗ ಹಣದ ರಾಶಿ ಬರುತ್ತಿರುವ ಹಾಗೆ ಪಾಕ್ ಇನ್ನೂ ಹೆಚ್ಚು ಪರಮಾಣು ಬಾಂಬ್ಗಳನ್ನು ಉತ್ಪಾದಿಸುತ್ತಿದೆ ಎಂದು ಸಿಐಎ ಹೇಳಿರುವುದು ಆತಂಕಕಾರಿ. ಇದೇ ವಿಷಯ ಅಮೆರಿಕದ ಸೆನೆಟ್ನಲ್ಲಿಯೂ ಚಚರ್ೆಗೆ ಬಂದಿತ್ತು. `ನಾವು ಕೊಡುತ್ತಿರುವ ಹಣವನ್ನು ಪಾಕ್ ಸಕರ್ಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ' ಎಂಬ ಆಕ್ಷೇಪಣೆಗಳು ಕೇಳಿಬಂದವು.

`ಪಾಕಿಸ್ತಾನಕ್ಕೆ ಹಣ ಕೊಡುವುದನ್ನು ಬಿಟ್ಟು ಬೇರೆನೂ ಜಾಜರ್್ ಬುಷ್ಗೆ ಗೊತ್ತಿಲ್ಲ' ಎಂದು ಲೇವಡಿ ಮಾಡುತ್ತ ಅಧಿಕಾರ ಹಿಡಿದ ಬರಾಕ್ ಒಬಾಮಾ, ಅನಂತರ ಬುಷ್ಗಿಂತಲೂ ಹೆಚ್ಚಿನ ಕೊಡುಗೈ ದಾನಕ್ಕೆ ಮುಂದಾಗಿದ್ದಾರೆ. ಅದೇ ಪಾಕ್ ಚಾಣಾಕ್ಷತನ.
ಈಗ ಪರಮಾಣು ಬಾಂಬ್ಗಳು ಖೈದಾ, ತಾಲಿಬಾನ್ ವಶವಾಗುತ್ತಿರಬಹುದು ಎಂಬ ವರದಿಗಳು ಭಯಾನಕವಾಗಿವೆ. ಆದರೆ ಮೊದಲು ಬೆಚ್ಚಿಬೀಳಬೇಕಾದ ಭಾರತ ಸಕರ್ಾರ ಮಾತ್ರ ಈ ಕುರಿತು ಕಳವಳವನ್ನೇ ವ್ಯಕ್ತಪಡಿಸಿಲ್ಲ. ಈ ವಿಷಯದಲ್ಲಿ ನಮ್ಮ ರಣತಂತ್ರಗಳೇನು? ಪ್ರತಿತಂತ್ರಗಳೇನು? ನಮ್ಮ ಸಿದ್ಧತೆಗಳೆಷ್ಟು? - ಎನ್ನುವುದು ತಿಳಿಯುತ್ತಿಲ್ಲ. ನಮ್ಮ ಸಕರ್ಾರದ ಯಾವ ಮುಖಂಡನೂ ದೇಶದ ಪ್ರಜೆಗಳಿಗೆ ಸುರಕ್ಷೆಯ ಭರವಸೆಯನ್ನು ನೀಡುತ್ತಿಲ್ಲ.

ಒಂದೆಡೆ ತಾಲಿಬಾನ್ ನೇರ ಪ್ರಭಾವ ಪಾಕಿಸ್ತಾನದಲ್ಲಿ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಪಾಕ್ ಸಕರ್ಾರ ಕೈಚೆಲ್ಲಿ ಕೂತಿದೆ. ಅದರ `ಅಸಹಾಯಕತೆ'ಯ ಪ್ರದರ್ಶನದಿಂದ, ಅಂತಾರಾಷ್ಟ್ರೀಯ ಸಮುದಾಯದ ರೂಪದಲ್ಲಿ, ಅದಕ್ಕೆ ಚಿನ್ನದ ಮೊಟ್ಟೆ ಇಡುವ ಕೋಳಿಯೇ ದೊರಕಿದೆ. ವಿದೇಶಗಳಿಂದ ಪಾಕಿಸ್ತಾನಕ್ಕೆ ಹಿಂದೆಂದೂ ಕಂಡರಿಯಷ್ಟು ಮಟ್ಟದಲ್ಲಿ ಹಣದ ಪ್ರವಾಹವೇ ಹರಿದು ಬರುತ್ತಿದೆ. ಅದನ್ನೇ ಬಳಸಿಕೊಂಡು ಆ ದೇಶ ಇನ್ನಷ್ಟು ಅಣು ಬಾಂಬ್ಗಳನ್ನು ತಯಾರಿಸುತ್ತಿದೆ. ಇದರಿಂದ ಅವೆಲ್ಲ ಎಲ್ಲಿ ಉಗ್ರರ ಪಾಲಾಗುತ್ತವೋ ಎಂಬ ಆತಂಕ ಶುರುವಾಗಿದೆ. ಈ ಆತಂಕ ನಿವಾರಿಸಲು ಪಾಕಿಸ್ತಾನಕ್ಕೆ ಇನ್ನಷ್ಟು ಹಣವನ್ನು ನೀಡಲಾಗುತ್ತಿದೆ. ಆ ಹಣ ಏನಾಗುತ್ತಿದೆಯೋ ಗೊತ್ತಿಲ್ಲ. ಆತಂಕವಂತೂ ಇದ್ದೇ ಇದೆ.

ಈ ವಿಷವತರ್ುಲ ಹೀಗೇ ಮುಂದುವರಿಯುತ್ತಿದ್ದರೆ, ಭಾರತ ಸಕರ್ಾರ ಮಾತ್ರ `ಇದಕ್ಕೂ ನಮಗೂ ಏನು ಸಂಬಂಧ' ಎಂದು ತಣ್ಣಗೆ ಕೂತಿದೆ.

ಪಶ್ಚಿಮದ ಮಿಷನರಿಗಳೇ ನಮ್ಮ ಅಧಿನಾಯಕರು!

ನನಗೆ ದೇಶದ ಪ್ರಬಲ ಕ್ರೈಸ್ತ ನಾಯಕರೊಬ್ಬರಿಂದ ಈಚೆಗೊಂದು ಇ-ಮೇಲ್ ಬಂದಿತ್ತು. `ಭಾರತದಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ನಮ್ಮನ್ನು ವಿಚಾರಿಸಿಕೊಳ್ಳುವವರು ಯಾರೂ ಇಲ್ಲ. ಅಮೆರಿಕ ಹಾಗೂ ಐರೋಪ್ಯ ಒಕ್ಕೂಟಗಳ ಬಳಿ ಈ ದೇಶದ ವಿರುದ್ಧ ದೂರು ನೀಡಲು ಹೋಗಬೇಕೆಂದು ತೀಮರ್ಾನಿಸಿದ್ದೇವೆ. ನಿಮ್ಮೆಲ್ಲರ ಬೆಂಬಲ ಬೇಕು' ಎಂಬುದು ಆ ಸಂದೇಶದ ಸಾರಾಂಶ.

ಇದು ಈ ದೇಶದ ದುರಂತ. ಭಾರತದ ಅನೇಕ ಕ್ರೈಸ್ತನಾಯಕರ ಪ್ರಕಾರ ಭಾರತ ಇನ್ನೂ ಸ್ವತಂತ್ರ, ಸಾರ್ವಭೌಮ ರಾಷ್ಟ್ರವಲ್ಲ. ಪಶ್ಚಿಮದ ದೇಶಗಳ ಮುಖಂಡರೇ ಇಲ್ಲಿನ ಸಕಲ ವ್ಯವಹಾರಗಳನ್ನೂ ನಿಯಂತ್ರಿಸಬೇಕಾದ ದೊಣ್ಣೆನಾಯಕರು.

ಈ ಮತೀಯ ಮುಖಂಡರು ಇನ್ನೂ ಬ್ರಿಟಿಷರ ಪ್ರಿವಿ ಕೌಂಸಿಲ್ ಕಾಲದಲ್ಲೇ ಇರುವ ಡೈನೋಸಾರ್ಗಳು. ಇವರ ಪ್ರಕಾರ ಜಗತ್ತಿನ ಸಕಲ ಕ್ರೈಸ್ತರ ನಾಯಕರು ಎಂದರೆ ಅಮೆರಿಕ ಹಾಗೂ ಇಯು! ಈ ದೇಶಗಳು ಸಮಸ್ತ ಮಿಷನರಿಗಳ ಪರವಾಗಿ ಯುದ್ಧ ಮಾಡುವ ಶಕ್ತಿಗಳು.

ಇದು ವಾಸ್ತವವಾಗಿ ಅಲ್-ಖೈದಾ ಜಿಹಾದಿಗಳ ಪ್ಯಾನ್-ಇಸ್ಲಾಮಿಸಂ ತರಹದ ಮಾನಸಿಕತೆಯಲ್ಲದೇ ಬೇರೇನೂ ಅಲ್ಲ. ಗಡಿರಹಿತ ಮತೀಯ ಸಾಮ್ರಾಜ್ಯ ಈ ಮಾನಸಿಕತೆಯ ಹಿಂದಿರುವ ಮೂಲ ಕಲ್ಪನೆ. ಈ ಮಾನಸಿಕತೆಯ ಪ್ರಕಾರ, ಪಶ್ಚಿಮದ ಬಿಳಿಯ ಕ್ರೈಸ್ತರು ಈ ಸಾಮ್ರಾಜ್ಯದ ಚಕ್ರವತರ್ಿಗಳು. ಉಳಿದವರೆಲ್ಲ ಅವರ ಪ್ರಜೆಗಳು.

ಈ ಮತೀಯ ಮುಖಂಡರ ವಿಷಯ ಹಾಗಿರಲಿ. ನಮ್ಮ ಸಕರ್ಾರಗಳೂ ಈ ರೀತಿಯ ಮಾನಸಿಕತೆಯಿಂದ ಹೊರತಾಗಿಲ್ಲ. ಗುಜರಾತ್ ಹಾಗೂ ಒರಿಸ್ಸಾಗಳಲ್ಲಿ ನಡೆದ ಹಿಂದೂ-ಕ್ರೈಸ್ತ ದಂಗೆಗಳನ್ನು ಕುರಿತು ತನಿಖೆ ನಡೆಸಲು ಅಮೆರಿಕದ ಯುಎಸ್ಸಿಐಆರ್ಎಫ್ ಸದಸ್ಯರಿಗೆ ಸೋನಿಯಾ-ಮನಮೋಹನ್ ಸಕರ್ಾರ ಅನುಮತಿ, ಆಹ್ವಾನ ನೀಡಿದ್ದು ಈ ನಿಟ್ಟಿನ ತಾಜಾ ಉದಾಹರಣೆ. ಮುಂದಿನ ತಿಂಗಳು ಈ ಸಂಸ್ಥೆಯ ಅಧಿಕಾರಿಗಳು ಭಾರತಕ್ಕೆ ಬಂದಿಳಿಯಲಿದ್ದಾರೆ. ನಮ್ಮ ದೇಶದ ಮಿಷನರಿಗಳ ನೆರವಿನಿಂದಲೇ ನಮ್ಮ ದೇಶದ, ಜನರ ಹಾಗೂ ಸಕರ್ಾರಗಳ ವಿರುದ್ಧ ವರದಿ ಸಿದ್ಧಪಡಿಸಿ ಹುಯಿಲೆಬ್ಬಿಸಲಿದ್ದಾರೆ.

ಯುಎಸ್ಸಿಐಆರ್ಎಫ್ ಅಮೆರಿಕದ ಇವ್ಯಾಂಜಲಿಸ್ಟ್ ಲಾಬಿಯ ಹಿಡನ್ ಅಜೆಂಡಾವನ್ನೇ ಪ್ರವತರ್ಿಸುತ್ತ ಬಂದಿರುವುದು ರಹಸ್ಯವೇನಲ್ಲ. `ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್' ಎಂಬುದು ಅದರ ಪೂರ್ಣ ಹೆಸರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರ ಮತೀಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದು ಅದರ ಘೋಷಿತ ಉದ್ದೇಶ. ಆದರೆ ವಾಸ್ತವದಲ್ಲಿ ಮಾಡುತ್ತಿರುವುದು ಮಿಷನರಿಗಳ, ಇವ್ಯಾಂಜಲಿಸ್ಟರ ತಲೆಕಾಯುವ ಕೆಲಸ. ಅವರ ಮತಾಂತರಗಳಿಗೆ ಅಮೆರಿಕನ್ ಸಕರ್ಾರದ ಆಶೀವರ್ಾದ ಕೊಡಿಸುವುದು, ಮತಾಂತರ ಪ್ರಯತ್ನಗಳಿಗೆ ಸ್ಥಳೀಯ ಜನಸಮುದಾಯಗಳಿಂದ, ಸಂಘಟನೆಗಳಿಂದ ಬರುವ ವಿರೋಧಗಳ ವಿರುದ್ಧ `ಮತೀಯ ಸ್ವಾತಂತ್ರ್ಯದ ಹರಣ' ಎಂಬ ಕೂಗೆಬ್ಬಿಸುವುದು ಅದರ ಕೆಲಸ. ಅದರ ಪ್ರಕರ, ಕ್ರೈಸ್ತರು ಇತರ ಮತಗಳಿಗೆ (ಉದಾಹರಣೆಗೆ, ಇಸ್ಲಾಂ) ಹೊಂದುವ ಮತಾಂತರಗಳೆಲ್ಲ, `ಬಲವಂತದ ಮತಾಂತರಗಳು', ಅಥರ್ಾತ್ ಜನರ `ಮತೀಯ ಸ್ವಾತಂತ್ರ್ಯ'ಕ್ಕೆ ವಿರುದ್ಧವಾದವುಗಳು. ಕ್ರೈಸ್ತ ಮತಕ್ಕೆ ಇತರರು ಮತಾಂತರಗೊಂಡರೆ ಅದೇ ನಿಜವಾದ `ಮತೀಯ ಸ್ವಾತಂತ್ರ್ಯ'!

1998ರಲ್ಲಿ ಅಮೆರಿಕ ಸಂಸತ್ತಿನ (ಕಾಂಗ್ರೆಸ್) ಮೂಲಕ ಶಾಸನಾತ್ಮಕವಾಗಿ ಅಸ್ತಿತ್ವಕ್ಕೆ ಬಂದ ಈ ಆಯೋಗ ಜಗತ್ತಿನ ಯಾವ ಯಾವ ದೇಶಗಳು ಜನರ ಮತೀಯ ಸ್ವಾತಂತ್ರ್ಯವನ್ನು ಹತ್ತಿಕ್ಕಿವೆ ಎಂಬ ಕುರಿತು ಅಮೆರಿಕದ ರಾಷ್ಟ್ರೀಯ ಸಕರ್ಾರಕ್ಕೆ ಪ್ರತಿವರ್ಷ ವರದಿ ನೀಡುತ್ತದೆ. ಕೆಲವು ದೇಶಗಳ ವಿರುದ್ಧ ಆಥರ್ಿಕ ದಿಗ್ಬಂಧನದಂತಹ ಕ್ರಮಗಳನ್ನು ಕೈಗೊಳ್ಳುವಂತೆಯೂ ಶಿಫಾರಸು ಮಾಡುತ್ತದೆ. ಈವರೆಗೆ ಅದು ನೀಡಿರುವ ವರದಿಗಳಲ್ಲಿ ಜಗತ್ತಿನ ಒಂದು ಕ್ರೈಸ್ತ ಚಚರ್ಿನ ವಿರುದ್ಧವೂ ಜನರ ಮತೀಯ ಸ್ವಾತಂತ್ರ್ಯದ ಹರಣ ಮಾಡಿದ ಆರೋಪದ ಸುಳಿವೂ ಇಲ್ಲ!

ಈ ಆಯೋಗದ ಹಿಂದಿರುವುದು ಅಮೆರಿಕದ ಬೃಹತ್ ಇವ್ಯಾಂಜೆಲಿಸ್ಟ್ ವ್ಯಾಪಾರಿಗಳು. ಅವರ ಪ್ರಬಲ ಲಾಬಿಯ ಫಲವಾಗಿಯೇ ಈ ಆಯೋಗದ ಸೃಷ್ಟಿಯಾಗಿದೆ. ಇದರ ಕಮಿಷನರ್ಗಳೆಲ್ಲ ಕ್ರೈಸ್ತರೇ. ಇತರ ಮತೀಯರಿಗೆ ಇದರೊಳಗೆ ಪ್ರಾತಿನಿಧ್ಯವಿಲ್ಲ. ಇದು ಕ್ರೈಸ್ತ ಉದ್ದೇಶಗಳನ್ನು ಅಮೆರಿಕದ ಸಕರ್ಾರಿ ಬಲದ ನೆರವಿನಿಂದ ಈಡೇರಿಸಿಕೊಳ್ಳಲು ಮಾಡುತ್ತಿರುವ ಒಂದು ಪ್ರಯತ್ನವಷ್ಟೇ.

1999ರಿಂದ ಯುಎಸ್ಸಿಐಆರ್ಎಫ್ ಸತತವಾಗಿ ಭಾರತವನ್ನು ಜರಿಯುತ್ತ ಬಂದಿದೆ. 1999ರ ಮತಾಂತರ ಗಲಭೆಯ ನಂತರ ಗುಜರಾತಿನ ಫಾ. ಸೆಡ್ರಿಕ್ ಪ್ರಕಾಶ್ ಮೂಲಕ `ಸ್ವತಂತ್ರ' ವರದಿಯನ್ನು ತರಿಸಿಕೊಂಡು ಭಾರತದ ವಿರುದ್ಧ ಕ್ರಮ ಕೈಗೊಳ್ಳಲು ಅಮೆರಿಕಕ್ಕೆ ಅದು ಶಿಫಾರಸು ನೀಡಿತ್ತು. ಅನಂತರ ಸತತವಾಗಿ ಭಾರತದ ಹಿಂದೂ ಸಂಘಟನೆಗಳನ್ನು ತನ್ನ ಬ್ಲ್ಯಾಕ್ಲಿಸ್ಟ್ನಲ್ಲಿ ಇಟ್ಟುಕೊಂಡಿದೆ. ಭಾರತಕ್ಕೆ ಬಂದು `ತನಿಖೆ' ಮಾಡಲು ವಾಜಪೇಯಿ ಸಕರ್ಾರ ಅದಕ್ಕೆ ಅನುಮಿತಿ ನೀಡಿರಲಿಲ್ಲ. ಅಷ್ಟೇಕೆ, ಜಗತ್ತಿನ ಯಾವುದೇ ಕ್ರೈಸ್ತೇತರ ಹಾಗೂ ಸೆಕ್ಯೂಲರ್ ದೇಶವೂ ಅದಕ್ಕೆ ಆದರ, ಮನ್ನಣೆ, ಮಹತ್ವಗಳನ್ನು ನೀಡಿಲ್ಲ. ಆದರೆ ಯಾರೂ ಮಾಡದ ಕೆಲಸವನ್ನು ಮನಮೋಹನ್ ಹಾಗೂ ಸೋನಿಯಾ ಜೋಡಿ ಮಾಡಿ ಮುಗಿಸಿದೆ.

ಪ್ರಸ್ತುತ, ಈ ವರ್ಷದ (2009) ವಾಷರ್ಿಕ ವರದಿ ಸಿದ್ಧಪಡಿಸುತ್ತಿರುವ ಯುಎಸ್ಸಿಐಆರ್ಎಫ್ ಭಾರತವನ್ನು ಕುರಿತ ಅಧ್ಯಾಯವನ್ನು ಬರೆಯದೇ ಇನ್ನೂ ಖಾಲಿ ಇಟ್ಟುಕೊಂಡಿದೆ. ಸೋನಿಯಾ ಸಹಕಾರದಿಂದ ಅದರ `ಖುದ್ದು ತನಿಖೆ' ಪೂರ್ಣವಾದ ನಂತರ ಈ ಅಧ್ಯಾಯ ಸಿದ್ಧವಾಗುತ್ತದೆ.

ಹಿಂದಿನ ಪೋಪ್. ಎರಡನೇ ಜಾನ್ ಪಾಲ್ ಭಾರತಕ್ಕೆ ಎರಡು ಬಾರಿ `ಅಧಿಕೃತ' ಭೇಟಿ ನೀಡಿದ್ದರು. ಪ್ರತಿಬಾರಿಯೂ ಅವರು ಬಂದಾಗ ರಾಷ್ಟ್ರೀಯ ಅಧ್ಯಕ್ಷನೊಬ್ಬನಿಗೆ ಸಿಗುವ ರಾಜಮಯರ್ಾದೆಯನ್ನೇ ಪಡೆದುಕೊಂಡಿದ್ದರು. ನಮ್ಮ `ಸೆಕ್ಯೂಲರ್' ಮಾಧ್ಯಮಗಳಂತೂ ಅವರಿಗೆ ಮಹಾ ಜಗದ್ಗುರುವಿನ ಪಟ್ಟವನ್ನೇ ಕಟ್ಟಿದ್ದವು. ನಮ್ಮ ಸೆಕ್ಯೂಲರ್ ಸಕರ್ಾರದ ಅತಿಥಿ (ಅಥವಾ ಅಭ್ಯಾಗತ) ಆಗಿದ್ದುಕೊಂಡೇ ಅವರು ಇಡೀ ಭಾರತವನ್ನು, ಹಾಗೂ ಏಷ್ಯಾವನ್ನು `ಕ್ರೈಸ್ತ ಭೂಮಿಯನ್ನಾಗಿ ಮಾರ್ಪಡಿಬೇಕು' ಎಂದು ಕ್ಯಾಥೋಲಿಕ್ ಮಿಷನರಿಗಳಿಗೆ ಬಹಿರಂಗ ಕರೆ ನೀಡಿ ಹೋಗಿದ್ದರು.

ಈಗಿನ ಪೋಪ್ 16ನೇ ಬೆನೆಡಿಕ್ಟ್ ಉರುಫ್ ಜೋಸೆಫ್ ರಾಟ್ಸಿಂಗರ್ ಇನ್ನೂ ಭಾರತಕ್ಕೆ ಬಂದಿಲ್ಲ. ಅವರನ್ನು ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಈ ಪೋಪ್ ಕಳೆದ ವಾರ ಪಶ್ಚಿಮ ಏಷ್ಯಾಕ್ಕೆ ಹೋಗಿದ್ದರು. ಅಲ್ಲಿನ ಮುಸ್ಲಿಂ ದೇಶಗಳನ್ನೂ ಮತಾಂತರಿಸಬೇಕು ಎಂಬುದು ಕ್ಯಾಥೋಲಿಕ್ಕರ ಬಹುಕಾಲದ ಯೋಜನೆ (ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಅವರು ಜಿಹಾದಿಗಳಿಂದ ಯೂರೋಪ್ ಅನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ, ಅದಿರಲಿ). ಆದರೆ ಅಲ್ಲಿ ಪೋಪ್ ನೀಡಿದ ಕರೆ ಏನು? `ಮುಸ್ಲಿಮರೊಡನೆ ಕ್ರೈಸ್ತರು ಹೊಂದಿಕೊಂಡು ಬಾಳಬೇಕು; ಸ್ವತಂತ್ರ ಪ್ಯಾಲೆಸ್ತೀನ್ ನಿಮರ್ಾಣವಾಗಬೇಕು'!

ಭಾರತದ ವಿಷಯದಲ್ಲಿ ಅವರು ಎಂತಹ ಕರೆ ನೀಡಬಹುದು? ಅದಕ್ಕೆ ಯಾರು ಕಾರಣ?

ಭಯೋತ್ಪಾದರಿಗಾಗಿ ಭಾರತ ನಾಯಕರ ಕಣ್ಣೀರು!

ಚಿಕ್ಕ ದೇಶವಾದ ಶ್ರೀಲಂಕಾ ಜಗತ್ತಿನ ಅತ್ಯಂತ ಸುವ್ಯವಸ್ಥಿತ, ಸೊಪೀಸ್ಟಿಕೇಟೆಡ್ ಭಯೋತ್ಪಾದಕ ಸಂಘಟನಯನ್ನು ಮಟ್ಟಹಾಕುವುದು ಸಾಧ್ಯವಾದರೆ ಭಾರತಕ್ಕೇಕೆ ನಕ್ಸಲರನ್ನು, ಎಲ್ಟಿಟಿಇಗಳನ್ನು ಹಾಗೂ ಜಿಹಾದಿಗಳನ್ನು ಮಟ್ಟಹಾಕುವುದು ಸಾಧ್ಯವಾಗುತ್ತಿಲ್ಲ?

ಆರು ದಶಕಗಳಿಂದ ಭಯೋತ್ಪಾದನೆಗೆ ಭಾರತ ಗುರಿಯಾಗಿದೆ. ವರ್ಷದಿಂದ ವರ್ಷಕ್ಕೆ ಭಯೋತ್ಪಾದಕರ ಶಕ್ತಿ ವಧರ್ಿಸುತ್ತಲೇ ಇದೆ. ಭಯೋತ್ಪಾದನಯ ವಿರುದ್ಧ ನಮ್ಮ ದೇಶ ಜಯ ಗಳಿಸುವುದು ಯಾವಾಗ?

ನಮ್ಮ ದೇಶದ ಮುಂದೆ ಎರಡು ಉದಾಹರಣೆಗಳಿವೆ. ಎರಡೂ ನಮ್ಮ ನೆರೆ ರಾಷ್ಟ್ರಗಳದು. ಒಂದು, ಅಸಾಮಾನ್ಯ ಧೈರ್ಯ ಹಾಗೂ ರಾಜಕೀಯ ಇಚ್ಛಾಶಕ್ತಿಯಿಂದ ಉಗ್ರರನ್ನು ಮಟ್ಟಹಾಕಿದ ಶ್ರೀಲಂಕಾದ ಉದಾಹರಣೆ. ಉಗ್ರರ ಮುಂದೆ ರಾಜಕೀಯ ಪಕ್ಷಗಳೆಲ್ಲ ಸೋತು ಕೈಕಟ್ಟಿ ಶರಣಾಗಿ ಉಗ್ರರಿಗೇ ಅಧಿಕಾರ ನೀಡಿದ ನೇಪಾಳದ ಉದಾಹರಣೆ ಎರಡನೆಯದು. ಈ ಎರಡರ ಪೈಕಿ ಭಾರತ ನೇಪಾಳದ ಹಾದಿ ಹಿಡಿಯುತ್ತಿರುವುದು ದುರದೃಷ್ಟ.

ಜಗತ್ತಿನ ಯಾವ ದೇಶವೂ ಇಷ್ಟು ವರ್ಷಗಳ ಕಾಲ ಭಯೋತ್ಪಾದನೆಯನ್ನು ಸಹಿಸಿಕೊಂಡಿಲ್ಲ. ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷವೂ ನಿಣರ್ಾಯಕ ಘಟ್ಟ ಮುಟ್ಟಿದೆ. ಉತ್ತರ ಐರ್ಲ್ಯಾಂಡ್ ಭಯೋತ್ಪಾದನೆ ಬಗೆಹರಿದಿದೆ. ಶ್ರೀಲಂಕಾ ಎಲ್ಟಿಟಿಇ ವಿರುದ್ಧ ವಿಜಯ ಸಾಧಿಸಿದೆ.

ಆದರೆ ಭಾರತದಲ್ಲೇನಾಗುತ್ತಿದೆ? ಎಲ್ಟಿಟಿಇ ಅನ್ನು ರಕ್ಷಿಸಬೇಕೆಂಬ ಮಾತನ್ನು ಪ್ರಮುಖ ರಾಜಕಾರಣಿಗಳೇ ಆಡುತ್ತಿದ್ದಾರೆ! ಅವರ ವಿರುದ್ಧ ಯಾರೂ ದನಿಯೆತ್ತುತ್ತಿಲ್ಲ.

`ಎಲ್ಟಿಟಿ ಪ್ರಭಾಕರನ್ ಭಯೋತಾದಕನಲ್ಲ. ಆತ ನನ್ನ ಮಿತ್ರ. ನಾನು ಭಯೋತ್ಪಾದಕನೆ? ಹಾಗೆಯೇ ಅವನೂ ಭಯೋತ್ಪಾದಕನಲ್ಲ' ಎಂದು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಊಳಿಡುತ್ತಿದ್ದರೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ತುಟಿ ಪಿಟಕ್ ಎನ್ನಲಿಲ್ಲ.

ಅದು ಯಾರೋ ಒಬ್ಬ ಕರುಣಾನಿಧಿ ಎಂಬ ಸಾಮಾನ್ಯ ವ್ಯಕ್ತಿಯ ಹೇಳಿಕೆಯಲ್ಲ. ಈ ಮನುಷ್ಯ ಒಂದು ರಾಜ್ಯದ ಮುಖ್ಯಮಂತ್ರಿ. `ಭಾರತದ ಸಂವಿಧಾನ, ಅಖಂಡತೆ ಹಾಗೂ ಸಾರ್ವಭೌಮತೆಗೆ ಬದ್ಧವಾಗಿದ್ದು ಅವುಗಳನ್ನು ಎತ್ತಿಹಿಡಿಯುತ್ತೇನೆ' ಎಂದು ಸಂವಿಧಾನಬದ್ಧವಾಗಿ ಪ್ರಮಾಣವಚನ ತೆಗೆದುಕೊಂಡು ಸಾಂವೈಧಾನಿಕ ಅಧಿಕಾರ ಹಿಡಿದ ವ್ಯಕ್ತಿ. ಎಲ್ಟಿಟಿಇ ಅನ್ನು ಜಗತ್ತಿನ 31 ದೇಶಗಳು ಭಯೋತಾದಕ ಸಂಘಟನೆ ಎಂದು ಘೋಷಿಸಿವೆ. ಭಾರತದಲ್ಲೂ ಅದು ನಿಷೇಧಿತ ಸಂಘಟನೆ. ಅದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಹತ್ಯೆ ಮಾಡಿರುವ ಸಂಘಟನೆ ಎಂದು ಸುಪ್ರೀಮ್ ಕೋಟರ್್ ಘೋಷಿಸಿದೆ. ಹೀಗಿರುವಾಗ ಸಂವೈಧಾನಿಕ ಹುದ್ದೆಯಲ್ಲಿರುವವರು ಅದರ ಪರವಾಗಿ ಹೇಳಿಕೆ ಕೊಡುತ್ತಿದ್ದರೆ ರಾಜೀವರ ಪತ್ನಿ ಮತ್ತು ಆಡಳಿತ ಮೈತ್ರಿಕೂಟದ ಅಧ್ಯಕ್ಷೆ ಎನಿಸಿಕೊಂಡಿರುವ, ಜಗತ್ತಿನ ಇತರ ವಿಷಯಗಳ ಮಾತೆಲ್ಲ ಆಡುವ, ಸೋನಿಯಾ ಹಾಗೂ ಅವರ ಪ್ರಕಾರ, `ಅತ್ಯಂತ ಪ್ರಬಲ ಹಾಗೂ ದಕ್ಷ ಪ್ರಧಾನಿ' ಎನಿಸಿದ್ದ ಮನಮೋಹನ್ ತುಟಿ ಎರಡು ಮಾಡದೇ ಏಕೆ ಸುಮ್ಮನಿದ್ದರು?

ಕರುಣಾನಿಧಿ ಸಹಕಾರದಿಂದ ಸಕರ್ಾರ ನಡೆಸಬೇಕು ಎಂಬ `ಪ್ರಬಲ' ಇಚ್ಛೆಯೆ? ಅಧಿಕಾರ ಇವತ್ತು ಇರುತ್ತದೆ, ಇನ್ನೊಮ್ಮೆ ಹೋಗುತ್ತದೆ. ಅದರ ಸಲುವಾಗಿ ದೇಶದ ಮಾಜಿ ಪ್ರಧಾನಿಯನ್ನು ಕೊಂದ, ಸಾವಿರಾರು ನಾಗರಿಕರನ್ನು ಹತ್ಯೆ ಮಾಡಿದ, ದೇಶದ ವಿರುದ್ಧ ಯುದ್ಧ ಘೋಷಿಸಿದ, ಹಾಗೂ ದೇಶದ ವಿರುದ್ಧ ಸಮರ ನಡೆಸುತ್ತಿರುವ ಇತರ ಭಯೋತ್ಪಾದಕ ಸಂಘಟನೆಗಳಿಗೆ ಸಹಕಾರ ನೀಡುತ್ತಿರುವ ಒಂದು ದೊಡ್ಡ ಭಯೋತ್ಪಾದಕ ಸಂಘಟನೆಯ ಪರವಾಗಿ ದೇಶದ ಒಬ್ಬ `ಸಂವಿಧಾನಬದ್ಧ' ಮುಖ್ಯಮಂತ್ರಿ ಹೇಳಿಕೆ ಕೊಡುತ್ತಿದ್ದರೆ ಅದನ್ನು ಕೇವಲ `ನಮಗೆ ಅಧಿಕಾರ ಸಿಗಲಿ' ಎಂಬ ಆಸೆಯಿಂದ ಸಹಿಸಬೇಕೆ?

ಇಂತಹ ಹೇಳಿಕೆ ಭಾರತೀಯ ದಂಡ ಸಂಹಿತೆ (ಐಪಿಸಿ) ಹಾಗೂ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ (ಯುಎಪಿಎ) ಪ್ರಕಾರ ದಂಡಾರ್ಹ ಅಪರಾಧ. ದೇಶದ ಯಾವುದೇ ಪ್ರಜೆಯನ್ನೂ ಇವುಗಳ ಆಧಾರದ ಮೇಲೆ ಶಿಕ್ಷಿಸಬಹುದು ಎಂದು ಕಾನೂನುಗಳು ಹೇಳುತ್ತಿವೆ. ಹೀಗಿರುವಾಗ ಸಂವಿಧಾನವನ್ನು ರಕ್ಷಿಸುವ ಹಾಗೂ ಅದನ್ನು ಜಾರಿಮಾಡುವ ಹುದ್ದೆಯಲ್ಲಿರುವ ಅಪರಾಧಿಗಳಿಗೆ ಹೆಚ್ಚಿನ ಶಿಕ್ಷೆಯಾಗಬೇಕು. ಆದರೆ ಕರುಣಾನಿಧಿಯ ಹೇಳಿಕೆಗಳನ್ನು ಮೌನವಾಗಿ ಸಹಿಸಿಕೊಂಡಿದ್ದು ಮಾತ್ರವಲ್ಲ, ಅವರ ತಾಳಕ್ಕೆ ತಕ್ಕಂತೆ ಮನಮೋಹನ್-ಸೋನಿಯಾ ಜೋಡಿ ಕುಣಿದಿದ್ದು ಏಕೆ?

ತಮಿಳು ಜನರಿಗೆ ಸಮಾನ ಹಕ್ಕುಗಳು ಬೇಕು ನಿಜ. ಆದರೆ ಎಲ್ಟಿಟಿಇ ತಮಿಳರ ಪ್ರತಿನಿಧಿಯಲ್ಲ. ಅದರದು ಅಹಿಂಸಾ ಹೋರಾಟವೂ ಅಲ್ಲ. ಅದು ಸಾಮಾಜಿಕ ಹಕ್ಕುಗಳಿಗಾಗಿ ಹೋರಾಡುತ್ತಿರುವ ನಾಗರಿಕ ಸಂಘಟನೆಯಲ್ಲ. ಚಿಕ್ಕ ದೇಶವಾದ ಶ್ರೀಲಂಕಾ ಮೊದಲಬಾರಿಗೆ ಅಷ್ಟು ದೊಡ್ಡ ಭಯೋತ್ಫಾದಕ ಸಂಘಟನೆಯನ್ನು ಬಡಿಯುತ್ತಿದ್ದರೆ ಅದನ್ನು ಮೆಚ್ಚಬೇಕಾದ್ದು ಮೊದಲ ಕರ್ತವ್ಯ. ಆದರೆ ತಮಿಳರ ಹೆಸರು ಹೇಳಿಕೊಂಡು ಪ್ರಭಾಕರನ್ ಪರವಾಗಿ ವಕಾಲತ್ತು ವಹಿಸುವ ಕರುಣಾನಿಧಿಯಂತಹವರು ಈ ದೇಶದ ನಾಯಕರೆ?

ಇದೇ ಡಿಎಂಕೆಯ ಸಕರ್ಾರಗಳನ್ನು ಹಿಂದೆ ಎರಡು ಬಾರಿ ಭ್ರಷ್ಟಾಚಾರ ಹಾಗೂ ದೇಶವಿರೋಧಿ ಚಟುವಟಿಕೆಗಳ ಕಾರಣದಿಂದ ವಜಾ ಮಾಡಲಾಗಿತ್ತು. 1991ರಲ್ಲಿ ರಾಜೀವ್ ಹತ್ಯೆ ಮಾಡಿದ ಎಲ್ಟಿಟಿಇಗೆ ಕರುಣಾನಿಧಿ ಸಕರ್ಾರ ಬಹಳ ಸಹಕಾರ ನೀಡಿತ್ತು ಎಂದು ಜೈನ್ ಆಯೋಗ ಸ್ಪಷ್ಟವಾಗಿ ಹೇಳಿದೆ. ಇಂತಹ ಡಿಎಂಕೆ ಹಾಗೂ ಕರುಣಾನಿಧಿಯನ್ನು ಗಾಂಧಿ ಕುಟುಂಬೇತರ ಕಾಂಗ್ರೆಸ್ ಅಧ್ಯಕ್ಷರುಗಳು ದೂರವಿಟ್ಟಿದ್ದರು. ಆದರೆ ಸೋನಿಯಾ ಗಾಂಧಿ ಎಲ್ಲವನ್ನೂ ಮರೆತು, ಕ್ಷಮಿಸಿ ಆದರದಿಂದ ಬರಮಾಡಿಕೊಂಡು ಅಧಿಕಾರ ಹಂಚಿಕೊಂಡರು.

ಸೋನಿಯಾರನ್ನು ಎಲ್ಟಿಟಿಇ ಭಯ ಕಾಡುತ್ತಿರಬಹುದು. ಹಾಗೆಂದ ಮಾತ್ರಕ್ಕೆ ಈ ಸಂಘಟನೆಗೆ ಹತ್ತಿರವಾದವರನ್ನು ಅವರ ಕುಟುಂಬ ಏಕೆ ಸದಾ ಕ್ಷಮಿಸುತ್ತಲೇ ಇರಬೇಕು?

ವಾಸ್ತವವಾಗಿ ಕಾಂಗ್ರೆಸ್ ಎಂದೂ ಭಯೋತ್ಪದಕರನ್ನು ಮಣಿಸಿಲ್ಲ. ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಸುಮಾರು 50 ವರ್ಷಗಳ ಕಾಲ ಆಡಳಿತ ನಡೆಸಿದೆ. ಆದರೆ ಅದರ ಅಧಿಕಾರದ ಅವಧಿಯಲ್ಲಿ ಭಯೋತ್ಫಾದನೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗಿಲ್ಲ. ಪಾಕಿಸ್ತಾನ ಪ್ರೇರಿತ ಸಿಖ್ ಭಯೋತ್ಪಾದಕರನ್ನು ಇಂದಿರಾ ಗಾಂಧಿ ಕಾಲದಲ್ಲಿ ಓಲೈಸಲಾಗಿತ್ತು. ಕಡೆಗೆ ಅದು ಅವರ ಕುತ್ತಿಗೆಗೇ ಬಂದಿತು. ಆದರೂ ಇಂದಿರಾ ಕಡೆಘಳಿಗೆಯಲ್ಲಿ ಒಂದಿಷ್ಟು ಧೈರ್ಯ ತೋರಿ ಬ್ರಿಂಧನ್ವಾಲೆಯನ್ನು ನಿನರ್ಾಮ ಮಾಡಿ ಸತ್ತರು.

ಸಾವಿರಾರು ಮುಗ್ಧ ಸಿಖ್ಖರ ನರಮೇಧದ ನಡುವೆ ಸಿಂಹಾಸನವೇರಿದ ರಾಜೀವ್ ಗಾಂಧಿ ಕಾಲದಲ್ಲಿ ಪಂಜಾಬ್ ಪ್ರತ್ಯೇಕತಾವಾದಕ್ಕೆ ಪೊಲೀಸ್ ಪರಿಹಾರವೇ ಸೂಕ್ತ ಮದ್ದಾಯಿತು. ಆದರೆ ಅವರು ಎಲ್ಟಿಟಿಇ ಅನ್ನು ಬೆಳೆಸಿದರು. ಕ್ವಾಟ್ರೋಚಿಯಂತಹ ತಮ್ಮ ಪತ್ನಿಯ ಸಂಗಾತಿಗಳನ್ನು ಓಲೈಸಿದರು. ಕಡೆಗೆ ಎಲ್ಟಿಟಿಇ ಅನ್ನು ನಿನರ್ಾಮ ಮಾಡುವ ಮೊದಲೇ ತಾವೇ ಅದಕ್ಕೆ ಬಲಿಯಾದರು.

1940 ಮತ್ತು 1960ರ ದಶಕಗಳಲ್ಲಿ ಆರಂಭವಾದ ಎಡಪಂಥೀಯ ಭಯೋತ್ಪಾದನೆಯನ್ನು, 1950ರ ದಶಕದಲ್ಲಿ ಆರಂಭವಾದ ಪಾಕ್ ಪ್ರೇರಿತ ಜಿಹಾದಿ ಭಯೋತ್ಪಾದನೆಯನ್ನು ಮಟ್ಟಹಾಕುವುದು ಕಾಂಗ್ರೆಸ್ ಸಕರ್ಾರಗಳಿಂದ ಸಾಧ್ಯವಾಗಿಲ್ಲ. ಬದಲಾಗಿ ಆಗಿಂದಾಗ್ಗೆ ಈ ಉಗ್ರವಾದಗಳ ಓಲೈಕೆ, ನವೀಕರಣಗಳೇ ನಡೆಯುತ್ತ ಬಂದಿವೆ. ಪಂಜಾಬ್ ಭಯೋತ್ಪಾದನೆ ಅತಿಯಾದಾಗ 1985ರಲ್ಲಿ ರಾಜೀವ್ ಸಕರ್ಾರ ಜಾರಿಗೆ ತಂದಿದ್ದ ಟಾಡಾ ವಿಶೇಷ ಕಾಯ್ದೆಯನ್ನು ಉಗ್ರರ ವಿರುದ್ಧ ಬಳಕೆ ಮಾಡಿದ್ದು ಬಹಳ ಕಡಿಮೆ.

ಆದರೆ ರಾಜೀವ್ ಜಾರಿಗೊಳಿಸಿದ್ದ ಟಾಡಾ ಅವರ ಹತ್ಯೆಯ ಸಂಚುಗಾರರನ್ನು ಹಿಡಿಯಲು ನೆರವಿಗೆ ಬಂದಿತು. ಈ ವಿಶೇಷ ಕಾಯ್ದೆ ಇಲ್ಲದಿದ್ದ ಪಕ್ಷದಲ್ಲಿ ರಾಜೀವ್ ಹತ್ಯೆಯ ಸಂಚಿನ ಆರೋಪಗಳ್ಯಾವುವೂ ಸಾಬೀತಾಗುತ್ತಿರಲಿಲ್ಲ. ಯಾರಿಗೂ ಶಿಕ್ಷೆಯಾಗುತ್ತಿರಲಿಲ್ಲ. ಆದರೂ ಕಾಂಗ್ರೆಸ್ಸಿನ ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯಲು ಅದನ್ನು ಬಳಸಲಾಗುತ್ತಿದೆ ಎಂಬ ತೀವ್ರ ವಿವಾದದ ನಡುವೆ 1995ರಲ್ಲಿ ಅದನ್ನು ಮುಗಿಸಲಾಯಿತು.

ಭಯೋತಾದನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕಾಂಗ್ರೆಸ್ಸು ಅತಿ ದುರ್ಬಲತೆಯನ್ನು ತೋರುತ್ತ ಬಂದಿದೆ. ನೆಹರೂ ಮತ್ತು ಇಂದಿರಾಗೆ ಎಡಪಂಥೀಯ ಒಲವು ತೀವ್ರವಾಗಿತ್ತು. ಹೀಗಾಗಿ ಅವರ ಜೊತೆ ಓಡಾಡಿಕೊಂಡಿದ್ದವರೇ ನಕ್ಸಲ್ ಉಗ್ರವಾದವನ್ನು ಬೆಳೆಸಿದರು. ತೀರಾ ಈಚಿನವರೆಗೂ, ಮತ್ತು ಈಗಲೂ, `ನಕ್ಸಲ್ವಾದ ಭಯೋತ್ಪಾದನೆಯಲ್ಲ, ಅದು ಜನಪರವಾದ ಸಾಮಾಜಿಕ ಚಳವಳಿ' ಎಂದು ವಾದಿಸುವ ಕಾಂಗ್ರೆಸ್ಸಿಗರಿದ್ದಾರೆ! ಹಾಗೆ ನೋಡಿದರೆ, ಅಲ್ ಖೈದಾ ಸಹ ಭಯೋತ್ಪಾದಕ ಸಮಘಟನೆಯಲ್ಲ. ಅದು ಧರ್ಮ ಸಂಸ್ಥಾಪನೆಗೆ ಬದ್ಧವಾಗಿರುವ ದೈವಿಕವಾದ ಸಂಘಟನೆ ಎನ್ನಬೇಕಾಗುತ್ತದೆ!

ಮುಸ್ಲಿಂ ತುಷ್ಟೀಕಕರಣಕ್ಕಾಗಿ ನೆಹರೂ, ಇಂದಿರಾ, ರಾಜೀವ್ ಹಾಗೂ ನರಸಿಂಹರಾವ್ ಜಿಹಾದಿ ಭಯೋತ್ಪಾದಕತೆಯನ್ನು ಸಹಿಸಿಕೊಂಡರು. ಅದನ್ನು ಮೃದುವಾದ ಹಸ್ತಗಳಿಂದ `ಎದುರಿಸಲಾಯಿತು'. ಆದರೆ ಸೊನಿಯಾ ಗಾಂಧಿ ಕಾಲದಲ್ಲಿ ತೋರುತ್ತಿರುವಷ್ಟು ದೌರ್ಬಲ್ಯವನ್ನು ಹಿಂದಿನ ಯಾವ ಕಾಂಗ್ರೆಸ್ ಸಕರ್ಾರವೂ ತೋರಿಸಿರಲಿಲ್ಲ ಎಂದೇ ಹೆಳಬೇಕು. ಸೋನಿಯಾ ಎಲ್ಲ ಹಳೆಯ ಕಾಂಗ್ರಸಸ್ ದಾಖಲೆಗಳನ್ನು ಮುರಿದಿದ್ದಾರೆ.

ಸೋನಿಯಾ ಕಾಲದಲ್ಲಿ ಪಾಲರ್ಿಮೆಂಟಿನ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು ನೇಣಿಗೆರುವುದನ್ನು ತಡೆಯಲಾಯಿತು. ಬೋಫೋಸರ್್ ಹಗರಣದ ಫಲಾನುಭವಿ, ಇಟಲಿಯ ಒಟ್ಟಾವಿಯೋ ಕ್ವಾಟ್ರೋಚಿಯನ್ನು ನಿರಪರಾಧಿ ಎಂದು ಸಾರಿ ಫೈಲನ್ನು ಮುಚ್ಚಲಾಯಿತು. ಯಾವುದೇ ಸರಿಯಾದ ಕಾರಣವಿಲ್ಲದೇ ಪೋಟಾ ಕಾಯ್ದೆಯನ್ನು ರದ್ದುಮಾಡಲಾಯಿತು. ಎಲ್ಟಿಟಿಇಯನ್ನು ಅವರ ಕುಟುಂಬದ ಸದಸ್ಯರು ಧಾರಾಳವಾಗಿ `ಕ್ಷಮಿಸಿದರು'. ಪ್ರಿಯಂಕಾ ನಳಿನಿಯನ್ನು ಭೇಟಿ ಮಾಡಿ ತಬ್ಬಿಕೊಂಡು ಅತ್ತರು. ಅನಂತರ ಪ್ರಭಾಕರನ್ ಅನ್ನೂ ಕ್ಷಮಿಸಿರುವುದಾಗಿ ವಿಚಿತ್ರ ಹೇಳಿಕೆ ಕೊಟ್ಟರು! (ಈಗ ಕಸಬ್ ಮುಗ್ಧ ಬಾಲಕ ಎಂದು ವಾದಿಸಲಾಗುತ್ತಿದೆ. ಅವನನ್ನು ಬಿಡಿಸಿ ಕಳುಹಿಸುವ ಏಪರ್ಾಟು ನಡೆದಿದೆ! ಅವನನ್ನು ಜೀವಂತ ಹಿಡಿದಿದ್ದೇ ದೊಡ್ಡ ತಪ್ಪ್ಪಾಯಿತಲ್ಲ ಎನ್ನುವಂತಾಗಿದೆ.)

ಇವೆಲ್ಲ ಏತಕ್ಕಾಗಿ? ಸೋನಿಯಾ ಪರಿವಾರ ವಿಚಿತ್ರ ಹಾಗೂ ಅಸಹಜವಾದ ಹೇಳಿಕೆಗಳನ್ನು ಕೊಡುತ್ತಿದೆ. ಇಲ್ಲವೇ ಮೌನಕ್ಕೆ ಶರಣಾಗಿದೆ? ಈ ಪರಿವಾರ ಯಾರಿಗೇಕೆ ಹೆದರಬೇಕು? ಇಡೀ ದೇಶವೇ ಅವರ ಜೊತೆಗಿದೆ. ತೆರಿಗೆದಾರರ ವೆಚ್ಚದಲ್ಲಿ ವೈಯಕ್ತಿಕ ಸುರಕ್ಷೆಯನ್ನೂ ಅವರಿಗೆ ನೀಡಲಾಗಿದೆ. ಉಗ್ರರ ವಿಷಯದಲ್ಲಿ ಅವರು ಧೈರ್ಯವನ್ನೇಕೆ ತೋರುತ್ತಿಲ್ಲ? ಆರ್ಎಸ್ಎಸ್ ಮುಂತದ ಹಿಂದೂ ಸಂಘಟನೆಗಳನ್ನು ವಾಚಾಮಗೋಚರವಾಗಿ ನಿಂದಿಸುವವರು ಎಲ್ಟಿಟಿಇ ಅನ್ನು ಕ್ಷಮಿಸುವುದೇಕೆ? ಅಂತಹ ಅಗತ್ಯವಾದರೂ ಏನಿದೆ? ಇಂತಹ ಹೇಳಿಕೆಗಳನ್ನು ಕೊಡದೇ ಸುಮ್ಮನೆ ಏಕಿರಬಾರದು?

ತಮಿಳುನಾಡಿನ ರಾಜಕಾರಣದ ಮೇಲೆ ಎಲ್ಟಿಟಿಇ ಛಾಯೆ ದಟ್ಟವಾಗಿದೆ. ವಾಸ್ತವವಾಗಿ ಪ್ರಭಾಕರನ್ ತಪ್ಪಿಸಿಕೊಳ್ಳಲಿ ಎಂಬುದೇ ಅಲ್ಲಿನ ಕೆಲವು ಪ್ರಮುಖ ರಾಜಕಾರಣಿಗಳ ಬಯಕೆ. ಪ್ರಭಾಕರನ್ ಸತ್ತು, ಅವನ ಯಾವುದಾದರೂ ಡೈರಿ ಸಿಕ್ಕರೆ ಏನು ಗತಿ - ಎಂಬ ಭಯ ಹಲವರಿಗೆ ಇರಬಹುದು. ಅಥವಾ ಅವನು ಸೆರೆಸಿಕ್ಕಿ ಬಾಯಿಬಿಟ್ಟರೇನು? - ಎಂಬ ಭಯವೂ ಇರಬಹುದು. ಹೀಗಾಗಿ ಅವನು ತಪ್ಪಿಕೊಳ್ಳಲಿ ಎಂದು ಹಾರೈಸುವ ರಾಜಕಾರಣಿಗಳಿಗೆ ನಮ್ಮಲ್ಲಿ ಕೊರತೆಯಿಲ್ಲ.

ನಮ್ಮಲ್ಲಿ ಬಿನ್ ಲಾಡೆನ್ಗಾಗಿ, ದಾವೂದ್ ಇಬ್ರಾಹಿಮ್ಗಾಗಿ, ಪ್ರಭಾಕರನ್ಗಾಗಿ ಕಣ್ಣೀರಿಡುವ `ನಾಯಕ'ರಿದ್ದಾರೆ. ದೇಶದಲ್ಲಿ ಇಂತಹ ನಾಯಕರು ಇರುವಾಗ, ಜನಗಳಿಗೂ ಕಣ್ಣೀರೇ ಗತಿ.

ಸ್ವಿಸ್ ಬ್ಯಾಂಕ್ ಎಂದರೆ ಮುಜುಗರ!

ಸ್ವಿಸ್ ಬ್ಯಾಂಕುಗಳು ಮತ್ತು ಇತರ ಟ್ಯಾಕ್ಸ್ ಹೆವೆನ್ಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ, ಕೊಳ್ಳೆಹಣವನ್ನು ವಾಪಸ್ಸು ತರುವ ಮಾತು ಹಾಗಿರಲಿ. ಭಾರತೀಯರು ಅಲ್ಲಿ ಹಣ ಇಟ್ಟಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವುದಕ್ಕೇ ಯುಪಿಎ ಸಕರ್ಾರ ಕೊಸರಾಡುತ್ತಿದೆ! ಸ್ವಿಸ್ ಬ್ಯಾಂಕ್ ಎಂದರೇ ಸಾಕು, ಕಾಂಗ್ರೆಸ್ಸಿಗರು ಮೈಮೇಲೆ ಹಾವು, ಚೇಳು ಹರಿದಾಡಿದಂತೆ ಆಡುತ್ತಿದ್ದಾರೆ. ಜಗತ್ತಿನ ಪ್ರಮುಖ ರಾಷ್ಟ್ರಗಳು ಈಗಾಗಲೇ ಕಾಯರ್ೋನ್ಮುಖವಾಗಿರುವಾಗ ಕಾಂಗ್ರೆಸ್ಸಿನ ದೊಡ್ಡ ಕುಟುಂಬ ಅರ್ಥಗಭರ್ಿತ ಮೌನಕ್ಕೆ ಶರಣಾಗಿದೆ.

ಈ ಕುಟುಂಬದವರನ್ನು ಮಾತನಾಡಿಸುವುದು ಬಹಳ ಕಷ್ಟ. ಅವರೇ ನಿರ್ಧರಿಸಿ ಬಾಯಿ ತೆರೆದಾಗ ಮಾತ್ರ ಕೇಳಲು ಅವಕಾಶ. ಉಳಿದಂತೆ ಸದಾ ಮೌನ, ಮೌನ, ಮೌನ. ಆದರೆ ನಮ್ಮ ಸಕರ್ಾರಕ್ಕೇಕೆ ಇಷ್ಟು ನಿಷ್ಕ್ರಿಯತೆ? ಜನಪಥದ ದೊಡ್ಡ ಕುಟುಂಬದ ವಿಷಯಗಳು ಬಯಲಾಗುತ್ತವೆ ಎಂಬ ಭಯವಿರಬಹುದು.

ಇದನ್ನು ಅಮೆರಿಕ ಸಕರ್ಾರದೊಡನೆ ಹೋಲಿಸಿ ನೋಡಿ. ಬರಾಕ್ ಒಬಾಮಾ ಸಕರ್ಾರಕ್ಕೆ ಅಂತಹ ಯಾವುದೇ ಭಯವಿಲ್ಲ. ನೀವು ಮುಚ್ಚಿಡಲು ಅಪೇಕ್ಷಿಸುವ ತಪ್ಪು ಮಾಡಿರದಿದ್ದರೆ ಮನಸ್ಸು ಯಾವಾಗಲೂ ತಿಳಿಯಾಗಿರುತ್ತದೆ. ನಿಲುವು ಸ್ಪಷ್ಟವಾಗಿರುತ್ತದೆ. `ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡ' ಎನ್ನುವ ಮನೋಭಾವ ಇರುವುದಿಲ್ಲ. ಬ್ಬೆ..ಬ್ಬೆ..ಬ್ಬೆ.. ಎನ್ನುವುದು, `ದೇಶದ ಹಣ ವಾಪಸ್ ತನ್ನಿ' ಎನ್ನುವವರನ್ನೇ ಕಚ್ಚಲು ಹೋಗುವುದು - ಇವೆಲ್ಲ ಇರುವುದಿಲ್ಲ.

ಒಬಾಮಾ ಸಕರ್ಾರ ಆಗಲೇ ತೆರಿಗೆಗಳ್ಳರನ್ನು ಹಿಡಿಯುವ ಕೆಲಸ ಆರಂಭಿಸಿದೆ. ಸ್ವಿಟ್ಜರ್ಲ್ಯಾಂಡಿನ ಬಾಸೆಲ್ ಹಾಗೂ ಜ್ಯೂರಿಚ್ ನಗರಗಳಲ್ಲಿ ಕೇಂದ್ರ ಕಚೇರಿಗಳನ್ನು ಹೊಂದಿರುವ, ಜಾಗತಿಕ ಮಟ್ಟದಲ್ಲಿ ನೂರಾರು ಶಾಖೆಗಳನ್ನು ಹೊಂದಿರುವ, `ಯುಬಿಎಸ್ ಎಜಿ' ಬ್ಯಾಂಕಿನಲ್ಲಿ ಅಪಾರ ಕಪ್ಪುಹಣ ಇಟ್ಟಿರುವ ಆರೋಪದ ಮೇಲೆ ಮೈಖೆಲ್ ಸ್ಟೀವನ್ ರೂಬಿನ್ಸ್ಟೀನ್ ಎಂಬ 55 ವರ್ಷದ ವ್ಯಕ್ತಿಯನ್ನು ಅಮೆರಿಕದಲ್ಲಿ ಈಚೆಗೆ ಬಂಧಿಸಲಾಗಿದೆ. ಜಾಗತಿಕ ಕಪ್ಪುಹಣದ ಹೊಳೆಯನ್ನು ತಡೆಯುವ ನಿಟ್ಟಿನಲ್ಲಿ ಮೊದಲ ಬಲಿ ಆತ. ಸಕರ್ಾರಕ್ಕೆ ಸುಳ್ಳು ತೆರಿಗೆ ರಿಟನರ್್ ಸಲ್ಲಿಸಿ ಯುಬಿಎಸ್ ಎಜಿ ಸ್ವಿಸ್ ಬ್ಯಾಂಕಿನಲ್ಲಿ 20 ಲಕ್ಷ ಡಾಲರ್ಗಳಷ್ಟು ಕ್ರಗೆರ್ಯಾಂಡ್ ಚಿನ್ನದ ನಾಣ್ಯಗಳನ್ನು ಇಟ್ಟಿದ್ದಾನೆ ಎಂಬ ಆರೋಪ ಅವನ ಮೇಲಿದೆ. 2001-2008ರ ಅವಧಿಯಲ್ಲಿ 45 ಲಕ್ಷ ಸ್ವಿಸ್ ಫ್ರಾಂಕ್ಗಳಷ್ಟು ಮೌಲ್ಯದ ಷೇರುಗಳನ್ನೂ ಈತ ಖರೀದಿಸಿದ್ದಾನೆ ಎನ್ನಲಾಗಿದೆ.

ಪ್ರಪಂಚದಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಚಿನ್ನದ ನಾಣ್ಯಗಳೆಂದರೆ ದಕ್ಷಿಣ ಆಪ್ರಿಕಾದ ಕ್ರಗೆರ್ಯಂಡ್ ಚಿನ್ನದ ನಾಣ್ಯಗಳು (ದಕ್ಷಿಣ ಆಪ್ರಿಕಾ ಚಿನ್ನದ ಹಾಗೂ ವಜ್ರದ ಗಣಿಗಳಿಗೆ ಜಗತ್ಪಸಿದ್ಧ). ಈ ನಾಣ್ಯಗಳು ಅಪ್ಪಟ ಚಿನ್ನ ಹೊಂದಿರುತ್ತವೆ. 22 ಮತ್ತು 24 ಕ್ಯಾರೆಟ್ಗಳಲ್ಲಿ ದೊರೆಯುತ್ತವೆ. 1967-70ರಲ್ಲಿ ಮಾರುಕಟ್ಟೆಗೆ ಬಂದ ಕ್ರಗೆರ್ಯಾಂಡ್ ಜಗತ್ತಿನ ಪ್ರಥಮ ವಾಣಿಜ್ಯಿಕ ಸುವರ್ಣ ನಾಣ್ಯ. ಈವರೆಗೆ ಸುಮಾರು 5.4 ಕೋಟಿ ಕ್ರಗೆರ್ಯಾಂಡ್ ನಾಣ್ಯಗಳು ಜಾಗತಿಕ ಮಟ್ಟದಲ್ಲಿ ಹರಿದಾಡಿವೆ ಎಂಬ ಅಂದಾಜಿದೆ. ಕ್ರಗೆರ್ಯಾಂಡ್ ಬ್ರಾಂಡಿಗೆ ಅಂತಾರಾಷ್ಟ್ರೀಯ ಮಾನ್ಯತೆ ಇದೆ. ಅದರ ಗುಣಮಟ್ಟದ ಬಗ್ಗೆ ಖಾತ್ರಿ ಇದೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದರ ಮೂಲಕ ವಹಿವಾಟುಗಳು ಹೆಚ್ಚಾಗಿ ನಡೆಯುತ್ತವೆ.

ಪ್ರಸ್ತುತ ವಿಷಯಕ್ಕೆ ಬಂದರೆ, ಅಮೆರಿಕದ ತೆರಿಗೆಗಳ್ಳ ನಾಗರಿಕರಿಂದ ಸುಮಾರು 2000 ಕೋಟಿ ಡಾಲರ್ಗಳಷ್ಟು ಹಣವನ್ನು ಸಂಗ್ರಹಿಸಿ ಅವರು ತಮ್ಮ ದೇಶವನ್ನು ವಂಚಿಸುವುದಕ್ಕೆ ನೆರವಾಗಿರುವ ಆರೋಪವನ್ನು ಯುಬಿಎಸ್ ಎಜಿ ಸಂಸ್ಥೆ ಎದುರಿಸುತ್ತಿದೆ. ಅದದ ವಿರುದ್ಧ ಅಮೆರಿಕದ ಇಂಟರ್ನಲ್ ರೆವೆನ್ಯೂ ಸವರ್ಿಸ್ (ಐ.ಆರ್.ಎಸ್) ಕ್ರಿಮಿನಲ್ ತನಿಖೆ ನಡೆಸುತ್ತಿದೆ. ಸಿಕ್ಕಿಹಾಕಿಕೊಂಡಿರುವ ಯುಬಿಎಸ್ ತನ್ನ ತಪ್ಪನ್ನು ಈಗಾಗಲೇ ಒಪ್ಪಿಕೊಂಡಿದೆ.

ಸಕರ್ಾರಗಳು ಕಾರ್ಯ ನಿರ್ವಹಿಸಬೇಕಿರುವುದು ಹೀಗೆ. ಅದನ್ನು ಬಿಟ್ಟು `ದೇಶದ ಹಣ ವಾಪಸ್ ತನ್ನಿ; ತೆರಿಗೆಗಳ್ಳರನ್ನು-ದೇಶದ್ರೋಹಿಗಳನ್ನು ಶಿಕ್ಷಿಸಿ; ಕಪ್ಪುಹಣವನ್ನು ಮುಟ್ಟುಗೋಲು ಹಾಕಿಕೊಂಡು ದೇಶದ ಆಥರ್ಿಕತೆಯನ್ನು ಉತ್ತಮಪಡಿಸಲು ಬಳಸಿಕೊಳ್ಳಿ - ಎನ್ನುವವರ ಮೇಲೇಕೆ ಹರಿಹಾಯಬೇಕು? ಈ ಮಾತನ್ನು ಬಿಜೆಪಿ ಆಡಿದರೇನು? ಎಡಪಕ್ಷಗಳು ಆಡಿದರೇನು? ಯಾರು ಆಡಿದರೂ ಇವು ಸ್ವಾಗತಾರ್ಹವಾದ ಮಾತುಗಳಲ್ಲವೆ? ಹಾಗೆ ಕೇಳುವುದೇ ಒಂದು ಅಪರಾಧ ಎನ್ನುವಂತಹ ನಿಲುವು ಏನನ್ನು ತೋರಿಸುತ್ತದೆ? ಗಾಜಿನ ಮನೆಯೊಳಗಿರುವವರು ಅತಿ ಜಾಗರೂಕತೆಯಿಂದ ವತರ್ಿಸುವಂತೆ ಕಾಂಗ್ರೆಸ್ ಪಕ್ಷ ಆಡುತ್ತಿದೆ.

ಅಮೆರಿಕದ ವಿಷಯ ಬಿಡಿ. ಕಮ್ಯೂನಿಸ್ಟ್ ಚೀನಾದ ವಿಷಯಕ್ಕೆ ಬನ್ನಿ. ಟ್ಯಾಕ್ಸ್ ಹೆವೆನ್ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಅಂತಾರಾಷ್ಟ್ರೀಯ ಸಮುದಾಯ ಮುಂದಾಗಿರುವ ಪ್ರಸ್ತುತ ಸನ್ನಿವೇಶದಿಂದ ಚೀನಾಕ್ಕೆ ಅನುಕೂಲವೇ ಹೆಚ್ಚು. ಅಮೆರಿಕ, ಮತ್ತು ಅದರ ಆಥರ್ಿಕತೆಯನ್ನು ಅವಲಂಬಿಸಿರುವ ಬಹಳ ದೇಶಗಳು, ಆಥರ್ಿಕ ಕುಸಿತದಿಂದ ನರಳುತ್ತಿರುವಾಗ ಚೀನಾ ಸಾಕಷ್ಟು ಸದೃಢ ಪರಿಸ್ಥಿತಿಯಲ್ಲಿದೆ. ಜೊತೆಗೆ ಕಪ್ಪುಹಣವೂ ವಾಪಸ್ ಸಿಕ್ಕರೆ ಆ ದೇಶ ಇನ್ನಷ್ಟು ಬೃಹತ್ ಆಥರ್ಿಕತೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.

ಚೀನಾದ ಪ್ರಭಾವಿ ವ್ಯಕ್ತಿಗಳು ಗುಟ್ಟಾಗಿ ಹಣ ಮಾಡಿಕೊಂಡು ಟ್ಯಾಕ್ಸ್ ಹೆವೆನ್ಗಳಲ್ಲಿ ಇಟ್ಟಿರುವ ಕುರಿತೂ ಕೇಳಿಬರುತ್ತದೆ. ಆದರೆ ಅವರ ತಲೆಕಾಯುವ ನೀತಿಯನ್ನು ಅಲ್ಲಿನ ಸಕರ್ಾರಿ ವ್ಯವಸ್ಥೆ ಹೊಂದಿಲ್ಲ ಎನ್ನುವುದು ಗಮನಾರ್ಹ. ಎಲ್ಲ ರೀತಿಯ ತೆರಿಗೆಗಳ್ಳತನದ ವಿರುದ್ಧ ಉಗ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಲ್ಲಿನ ಸಕರ್ಾರ ಈಗಾಗಲೇ ಸ್ಪಷ್ಟಪಡಿಸಿದೆ. ಜಿ-20 ದೇಶಗಳ ಜೊತೆ ಒಟ್ಟಾಗಿ ಕೆಲಸ ಮಾಡುವ ಉತ್ಸುಕತೆಯನ್ನು ಚೀನಾ ಉಪ ಪ್ರಧಾನಿ ಪಾಲ್ ಚಿಯು ತೋರಿದ್ದಾರೆ.

ಟ್ಯಾಕ್ಸ್ ಹೆವೆನ್ಗಳ ವಿರುದ್ಧ ಮೊದಲು ರಣಕಹಳೆ ಮೊಳಗಿಸಿದ್ದು ಜರ್ಮನಿ. ಇದುವರೆಗೂ ಲೀಚ್ಟೆನ್ಸ್ಟೈನ್ ಜರ್ಮನ್ ತೆರಿಗೆಗಳ್ಳರ ಪಾಲಿನ ಸ್ವರ್ಗವಾಗಿತ್ತು. ಆದರೆ ಇನ್ನುಮುಂದೆ ಅವರ ಪಾಲಿನ ನರಕವಾಗಿ ಮಾರ್ಪಡಲಿದೆ. ಅಲ್ಲಿ ಹಣವಿಟ್ಟಿರುವ ಸುಮಾರು 1500 ಕಪ್ಪುಶ್ರೀಮಂತರ ಪಟ್ಟಿಯನ್ನು ಉಪಾಯವಾಗಿ (ಬ್ಯಾಂಕ್ ಅಧಿಕಾರಿಗಳಿಗೆ ಲಂಚಕೊಟ್ಟು) ಜರ್ಮನ್ ಸಕರ್ಾರ ಕಳೆದ ತರಿಸಿತ್ತು. ಈ ಪೈಕಿ ಅರ್ಧದಷ್ಟು ಹೆಸರುಗಳು ಜರ್ಮನ್ ನಾಗರಿಕರದು. ಸುಮಾರು 200-300 ಭಾರತೀಯರ ಹೆಸರುಗಳೂ ಈ ಪಟ್ಟಿಯಲ್ಲಿವೆ! ಅದನ್ನು ನೀಡುವುದಾಗಿ ಜರ್ಮನಿ ಹೇಳುತ್ತಿದ್ದರೂ `ಕೊಡಿ' ಎಂಬ ಮಾತು ನಮ್ಮ ಸಕರ್ಾರದಿಂದ ಬರುತ್ತಿಲ್ಲ! `ಈ ವಿಷಯದಲ್ಲಿ ನಮಗೆ ಆಸಕ್ತಿಯಿಲ್ಲ' ಎಂಬ ಸಂದೇಶನ್ನು ಕಳೆದ ವರ್ಷ ಭಾರತ ಸಕರ್ಾರ ಜರ್ಮನ್ ಸಕರ್ಾರಕ್ಕೆ ರವಾನಿಸಿತ್ತು!! ಆದರೆ ಜರ್ಮನಿಯಿಂದ ಅನೇಕ ದೇಶಗಳು ಈ ಪಟ್ಟಿಯನ್ನು ತರಿಸಿಕೊಂಡು ಕಾಯರ್ೋನ್ಮುಖವಾಗಿವೆ.

ಹಾಗಿದ್ದರೂ ಜರ್ಮನಿಯ ಸಮ್ಮಿಶ್ರ ಸಕರ್ಾರದ ಅಂಗಪಕ್ಷಗಳಲ್ಲಿ ಟ್ಯಾಕ್ಸ್ ಹೆವೆನ್ಗಳನ್ನು ಮಟ್ಟಹಾಕುವ ಕುರಿತು ಒಮ್ಮತ ಇರಲಿಲ್ಲ. ಈಚೆಗೆ ಅವೂ ಒಮ್ಮತ ಸಾಧಿಸಿಕೊಂಡಿವೆ. ಟ್ಯಾಕ್ಸ್ ಹೆವೆನ್ಗಳ ನಿನರ್ಾಮಕ್ಕೆ ನಾಂದಿಯಾಗುವ ಕರಡು ಮಸೂದೆಯನ್ನು ತಯಾರಿಸಿವೆ. ಸದ್ಯದಲ್ಲೇ ಜರ್ಮನಿ ಈ ಕುರಿತು ಸ್ಪಷ್ಟವಾದ ಕಾನೂನನ್ನು ಜಾರಿ ಮಾಡಲಿದೆ. ಪ್ರತಿವರ್ಷ ಜರ್ಮನಿಯಿಂದ 4000 ಕೋಟಿ ಡಾಲರ್ಗಳಷ್ಟು ಕಪ್ಪುಹಣ ಹೊರಹೋಗುತ್ತಿತ್ತು. ಇನ್ನುಮುಂದೆ ಅದಕ್ಕೆ ತಡೆಹಾಕಲು ಸಕರ್ಾರ ನಿರ್ಧರಿಸಿದೆ.

ಆದರೆ ಇಂತಹ ಯಾವ ನಿಧರ್ಾರವೂ ನಮ್ಮಲ್ಲಿ ಕಾಣುತ್ತಿಲ್ಲ. ಹೊಸ ಸಕರ್ಾರ ಏನು ಮಾಡುತ್ತದೋ ನೋಡಬೇಕು.

ಕಳೆದ ಒಂದು ವರ್ಷದಿಂದ ಈ ಕುರಿತು `ಕರ್ಮವೀರ'ದಲ್ಲಿ ನಾನು ಬರೆಯುತ್ತಿರುವ ಮೂರನೆಯ ಲೇಖನ ಇದು. ಮೊದಲ ಲೇಖನ ಬರೆದಾಗ ಸೋನಿಯಾ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಬರೆದಿದ್ದೆ. ಎಷ್ಟು ಕಾಲ ಕಳೆದರೂ ಅವರ ಮೌನವ್ರತಕ್ಕೆ ಭಂಗ ಬರುತ್ತಿಲ್ಲ. ಪತ್ರಕರ್ತರ ವಿಷಯ ಹಾಗಿರಲಿ. ಬಿಜೆಪಿಯ ಎಷ್ಟು ಭಾಷಣಗಳಾದರೂ ಅವರಿಂದ ಯಾವ ಪ್ರತ್ಯುತ್ತವೂ ಇಲ್ಲ.

ಈ ವಿಷಯ ಎತ್ತಿದರೇ ಸಾಕು, ಮನಮೋಹನ್ ಮುಖ ಸಪ್ಪಗಾಗುತ್ತದೆ. ಸೋನಿಯಾ ಹಾಗೂ ಆಡ್ವಾಣಿ ಮಧ್ಯೆ ಸಿಕ್ಕಿಕೊಂಡಿರುವ ತರಗೆಲೆಯಂತೆ ಅವರು ಮಿಸುಕಾಡುತ್ತಾರೆ. ಈ ಸೌಭಾಗ್ಯಕ್ಕೆ ಅವರಿಗೆ ಏಕೆ ಬೇಕು ಅಧಿಕಾರ? ಅವರು ಸೊಗಸಾಗಿ ಹುತ್ತದ ಹಾವಾಗಿರಬಹುದಾಗಿತ್ತು. ಆದರೆ ಬಯಸಿ, ಬಯಸಿ ಹಾವಾಡಿಗರ ಕೈಯಲ್ಲಿ ಹಲ್ಲುಕಿತ್ತ ಹಾವಾಗಿ ತಲೆದೂಗುತ್ತಿದ್ದಾರೆ!

ಇನ್ನೂ ಒಂದು ಮಾತು. ಈಚಿಗೆ ನಡೆದ ಜಿ-20 ದೇಶಗಳ ಶೃಂಗಸಭೆಯಲ್ಲಿ ಟ್ಯಾಕ್ಸ್ ಹೆವೆನ್ ವಿಷಯ ಆದ್ಯತೆ ಪಡೆದುಕೊಂಡ ನಂತರ ಭಾರತದಲ್ಲಿರುವ ಸ್ವಿಸ್ ರಾಯಭಾರಿ `ನಾವು ಭಾರತ ಸಕರ್ಾರ ನಡೆಸುವ ಎಲ್ಲ ತನಿಖೆಗಳಿಗೆ ಸಹಕರಿಸುತ್ತೇವೆ' ಎಂದು ಮೂರು ಬಾರಿ ಹೇಳಿದ್ದಾರೆ. ನಮ್ಮ ಸಕರ್ಾರ ಸಂಪಕರ್ಿಸಿದ ನಂತರ ಕೊಟ್ಟ ಹೇಳಿಕೆಗಳಲ್ಲ ಇವು. ವಾಸ್ತವವಾಗಿ ಅವರನ್ನು ಕರೆಸಿಕೊಂಡು ಸಕರ್ಾರವೇ ಸಹಕಾರ ಕೇಳಬೇಕಿತ್ತು.

ಅತ್ತ ಅಮೆರಿಕ, ಜರ್ಮನಿ ಮತ್ತಿತರ ದೇಶಗಳು ಸ್ವಿಸ್ ಸಕರ್ಾರದ ಸೀಕ್ರೆಟ್ ಬ್ಯಾಂಕಿಂಗ್ ಕಾನೂನುಗಳ ವಿರುದ್ಧ ಹರಿಹಾಯುತ್ತಿವೆ. ಇತ್ತ ಸ್ವಿಸ್ ರಾಯಭಾರಿ ಸ್ವಯಂಪ್ರೇರಣೆಯೊಂದ ಬಾಯಿ ತೆರೆದರೂ ಸಾಕು, ಮನಮೋಹನ್ ಸಕರ್ಾರ ಮಹಾನ್ ಮುಜುಗರ ಅನುಭವಿಸುತ್ತಿದೆ!