ಮಂಗಳವಾರ, ಮೇ 03, 2011

ಓಸಾಮಾ ಬಿನ್ ಲಾಡೆನ್ ಅಂತ್ಯ: ಭಯೋತ್ಪಾದಕ ರಾಷ್ಟ್ರದ ಕರಿನೆರಳು

ಪಾಕಿಸ್ತಾನವು ಜಾಗತಿಕ ಭಯೋತ್ಪಾದಕ ಕೇಂದ್ರವಾಗಿರುವುದು ಈಗ ಮತ್ತೊಮ್ಮೆ ಸ್ಪಷ್ಟವಾಗಿದೆ. 9/11 `ಮಾಸ್ಟರ್ಮೈಂಡ್' ಒಸಾಮಾ ಬಿನ್ ಲಾಡೆನ್ ಹತನಾಗಿರುವ ಸಂದರ್ಭದಲ್ಲಿ ಮತ್ತೊಮ್ಮೆ ಈ ಸತ್ಯ ಮುನ್ನೆಲೆಗೆ ಬಂದಿದೆ. ಆ ದೇಶವನ್ನು `ಭಯೋತ್ಪಾದಕ ರಾಷ್ಟ್ರ' ಎಂದು ಘೋಷಿಸಲು ಇದು ಸಕಾಲ.

ಆದರೆ ಹಾಗೆಂದು ಯಾರು ಘೋಷಿಸಬೇಕು ಎಂಬುದೇ ಈಗಿನ ಪ್ರಶ್ನೆ. ಪಾಕಿಸ್ತಾನದ `ಸಹಾಯ' ಪಡೆಯುವ ನಾಟಕವಾಡುತ್ತ, ತನ್ನ ಹಿತಾಸಕ್ತಿಗೆ ಅನುಗುಣವಾಗಿಯೇ ವತರ್ಿಸುತ್ತಿರುವ ಅಮೆರಿಕ ಸದ್ಯಕ್ಕೆ ಅಂತಹ ಕೆಲಸ ಮಾಡುವುದಿಲ್ಲ. ಇನ್ನು ಪಾಕಿಸ್ತಾನದ ನೇರದಾಳಿಗೆ ಗುರಿಯಾಗಿರುವ ಭಾರತ ಪಾಕಿಸ್ತಾನದ ನೈಜ ಬಣ್ಣ ಬಯಲು ಮಾಡುವ ಜಾಗತಿಕ ಆಂದೋಲನವನ್ನು ಸೃಷ್ಟಿಸಬೇಕು. ಆದರೆ ಅದನ್ನು ಮಾಡುವ ಇಚ್ಛಾಶಕ್ತಿ ನಮಗೆ ಇದೆಯೆ?

 ಜಗತ್ತಿನಾದ್ಯಂತ ಸಕ್ರಿಯವಾಗಿರುವ ಬಹುತೇಕ ಭಯೋತ್ಪಾದಕ ಗುಂಪುಗಳು ಪಾಕಿಸ್ತಾನದಲ್ಲಿಯೇ ಬೇರುಗಳನ್ನು ಹೊಂದಿರುವುದು ಆಕಸ್ಮಿಕವಲ್ಲ. ಪಾಕಿಸ್ತಾನದ ಗೂಢಚಾರ ಏಜೆನ್ಸಿ ಐಎಸ್ಐ ಆಶ್ರಯದಲ್ಲಿ ಬಿನ್ ಲಾಡೆನ್ ಭದ್ರವಾಗಿದ್ದುದು ಸ್ಪಷ್ಟ. ಹೀಗಾಗಿಯೇ ಅವನನ್ನು ಪತ್ತೆ ಹಚ್ಚಲು ಅಮೆರಿಕಕ್ಕೆ ಇಷ್ಟು ಸಮಯ ಹಿಡಿಯಿತು. ಇದು ಅಮೆರಿಕಕ್ಕೂ ಗೊತ್ತಿತ್ತು. ಕಡೆಗೂ ಪಾಕರ್್ ಸಕರ್ಾರದ ಕಣ್ಣಿಗೆ ಮಣ್ಣೆರಚಿ, ಸ್ವಲ್ಪವೂ ಸುಳಿವು ನೀಡದೇ, ಅಮೆರಿಕ ಲಾಡೆನ್ ಮೇಲೆ ದಾಳಿ ಮಾಡಬೇಕಾಯಿತು. ಈ ದಾಳಿಯ ಸುಳಿವು ಸ್ವಲ್ಪ ಸಿಕ್ಕಿದ್ದರೂ ಆತ ಬಚಾವಾಗಿಬಿಡುತ್ತಿದ್ದ.

ಕಳೆದ 10 ವರ್ಷಗಳಿಂದ 9/11 ವಿಷಯವನ್ನು ಅಮೆರಿಕ ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎಂಬುದು ಇಲ್ಲಿ ಗಮನಾರ್ಹ. ಆದರೆ 26/11 ಮುಂಬೈ ದಾಳಿಯ ವಿಷಯಕ್ಕೆ ಬಂದಾಗ ನಮ್ಮ ಯುಪಿಎ ಸಕರ್ಾರದ ದಿವಾಳಿತನ, ಸಪ್ಪೆತನ ಎದ್ದುಕಾಣುತ್ತದೆ. ಪಾಲರ್ಿಮೆಂಟ್ ದಾಳಿಯ ರೂವಾರಿ ಅಫ್ಜಲ್ ಗುರುವಿಗೆ ನೇಣುಶಿಕ್ಷೆ ಕಾಯಂ ಆಗಿದ್ದರೂ ಅದನ್ನು ಜಾರಿಗೊಳಿಸದೇ ಅವನನ್ನು ಸಾಕಿಕೊಂಡಿರುವುದು ಎಂತಹ ಅಸಹ್ಯ? ಇಂತಹುದನ್ನು ಅಮೆರಿಕದಲ್ಲಿ ಊಹಿಸುವುದೂ ಸಾಧ್ಯವಿಲ್ಲ. ಇದು ಬರೀ ಅಹಸ್ಯವಷ್ಟೇ ಅಲ್ಲ, ಬಹಳ ಅಪಾಯಕಾರಿಯೂ ಹೌದು.

ಆದರೆ ಅಪಾಯಕಾರಿ ಆಟ ಆಡುತ್ತ, ಜನರ ಕಣ್ಣಿಗೆ ಮಣ್ಣೆರಚುವುದರಲ್ಲಿ ನಮ್ಮ ಸಕರ್ಾರ ಜಾಣ್ಮೆ ತೋರುತ್ತ ಬಂದಿದೆ. ಲಾಡೆನ್ ತರಹವೇ ದಾವೂದ್ ಇಬ್ರಾಹಿಮ್ ಅನ್ನೂ ಅಮೆರಿಕ ಸಕರ್ಾರ `ಅಂತಾರಾಷ್ಟ್ರೀಯ ಭಯೋತ್ಪಾದಕ' ಎಂದು ಘೋಷಿಸಿದೆ. ಅವನನ್ನೂ ಹುಡುಕುತ್ತಿದೆ. ಭಾರತ ಮಾತ್ರ ಈ ವಿಷಯದಲ್ಲೂ ತಾಟಸ್ಥ್ಯ ತೋರುತ್ತಿದೆ.

`ಭಾರತವನ್ನು ರಕ್ತಸಿಕ್ತವಾಗಿ ನಲುಗಿಸಿ ಗೆಲ್ಲಬೇಕು' ಎಂಬ ಉದ್ಧೇಶದಿಂದ 1988ರಲ್ಲಿ ಪಾಕಿಸ್ತಾನ `ಆಪರೇಷನ್ ಟೋಪ್ಯಾಕ್' ಎಂಬ ಭಯೋತ್ಪಾದಕ ಹಾಗೂ ಬದಲಿ (ಪ್ರಾಕ್ಸಿ) ಯುದ್ಧದ ಯೋಜನೆಯನ್ನು ಜಾರಿಗೊಳಿಸಿತು. ಜನರಲ್ ಜಿಯಾ ಉಲ್ ಹಕ್ ಅದರ ರೂವಾರಿ. ಅಂದಿನಿಂದ ಈವರೆಗೆ ಲೆಕ್ಕವಿಲ್ಲದಷ್ಟು ಭಯೋತ್ಪಾದಕ ಕೃತ್ಯಗಳನ್ನು ಭಾರತದ ವಿರುದ್ಧ ನಡೆಸಲಾಗಿದೆ. ಜಿಹಾದಿ ಗುಂಪುಗಳನ್ನು ಪಾಕಿಸ್ತಾನ ಸಕರ್ಾರ ತನ್ನ ಅನಧಿಕೃತ ಸೇನೆಯ ಹಾಗೆ ಬಳಸಿಕೊಳ್ಳುತ್ತಿರುವುದಕ್ಕೆ ಪುರಾವೆಗಳಿವೆ.

ಯಾವುದಾದರೂ ದಾಳಿಯಾದ ಸಂದರ್ಭದಲ್ಲಿ ಮಾತ್ರ ಗುಡುಗಿದಂತೆ ಮಾತನಾಡುವ ಭಾರತದ ಅಧಿಕಾರಸ್ಥರು ಸ್ವಲ್ಪ ಕಾಲ ಕಳೆದ ಮೇಲೆ ನಿಷ್ಟ್ರಿಯರಾಗುತ್ತಾರೆ. ಪಾಕಿಸ್ತಾನ ಸಕರ್ಾರವನ್ನು ತಾವೇ ಖುದ್ದಾಗಿ ಮಾತುಕತೆಗೆ ಆಹ್ವಾನಿಸುತ್ತಾರೆ. ಹಾಗೆ ಮಾಡಿದ್ದೇ ಅವರ ದೊಡ್ಡತನ ಎನ್ನುವ ಹಾಗೆ ಮಾಧ್ಯಮಗಳಲ್ಲೂ ಬಿಂಬಿತವಾಗುತ್ತದೆ. ಇತರ ಅಂಶಗಳು ಮರೆಗೆ ಹೋಗಿಬಿಡುತ್ತವೆ. ತನಿಖೆ, ವಿಚಾರಣೆ, ಭಯೋತ್ಪಾದನಾ ನಿಗ್ರಹ ಇತ್ಯಾದಿ ವಿಷಯಗಳ ಸ್ಥಳದಲ್ಲಿ `ಮಾತುಕತೆ' ಬಂದು ಕುಳಿತುಕೊಳ್ಳುತ್ತದೆ. ಈ ಪ್ರಹಸನ ಮುಗಿದ ಮೇಲೆ ಭಯೋತ್ಪಾದನೆ ಮತ್ತೆ ನಾಲಿಗೆ ಚಾಚುತ್ತದೆ. ಇದೇ ನಾಟಕ ಕಳೆದ 25 ವರ್ಷಗಳಿಂದ ನಡೆಯುತ್ತಿದೆ. 

ಈಗಾಗಲೇ 26/11 ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ  ಅಮೆರಿಕದ ಡಿಸ್ಟ್ರಿಕ್ಟ್ ನ್ಯಾಯಾಲಯಗಳಲ್ಲಿ ಐಎಸ್ಐ ವಿಚಾರಣೆಗೆ ಗುರಿಯಾಗಿದೆ. ಐಎಸ್ಐ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡುವುದೂ ನಡೆಯುತ್ತಿದೆ. 

ಹಾಗಿದ್ದರೂ ಭಾರತದ ಯುಪಿಎ ಸಕರ್ಾರ ಪಾಕ್ ವಿಷಯದಲ್ಲಿ ಮೃದು ಧೋರಣೆ ತಳೆದಿರುವುದು ವಿಚಿತ್ರ. ಪಾಕ್ ಮಂತ್ರಿಯೊಬ್ಬರ ಜೊತೆಗೆ ಉದರ್ು ಭಾಷೆಯಲ್ಲೇ ಮಾತನಾಡಬೇಕೆಂದು ಸೋನಿಯಾ ಗಾಂಧಿ ಸಾಹಸ ಮಾಡುತ್ತಾರೆ. `ಪಾಕಿಸ್ತಾನದ ಜೊತೆ ಮಾತುಕತೆಯಾಡುವುದಕ್ಕೇ ನನ್ನ ಪ್ರಥಮ ಆದ್ಯತೆ. ಅದನ್ನೇ ನನ್ನ ಪ್ರಧಾನಿಗಿರಿಯ ದೊಡ್ಡ ಸಾಧನೆ ಎಂದು ಭಾವಿಸುವೆ' ಎಂಬರ್ಥದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆ ನೀಡುತ್ತಾರೆ. ಐ. ಕೆ. ಗುಜ್ರಾಲ್ ಪ್ರಧಾನಿಯಾಗಿದ್ದ ಕಾಲದಲ್ಲಿ ಈ ಮಾನಸಿಕತೆ `ಗುಜ್ರಾಲ್ ಡಾಕ್ಟ್ರಿನ್' ಎಂದೇ ಪ್ರಸಿದ್ಧವಾಗಿತ್ತು. ಈಗ ಅದೇ ಸಾರ್ವತ್ರಿಕವಾಗಿದೆ.

ತದ್ವಿರುದ್ಧವಾಗಿ, ಅಮೆರಿಕದಲ್ಲಿ ಸ್ವದೇಶನಿಷ್ಠ ಧ್ವನಿಗಳು ಕೇಳಿಬರುತ್ತಿವೆ. `ಐಎಸ್ಐ ಅನ್ನು ಸಾರ್ವಬೌಮ ರಾಷ್ಟ್ರವೊಂದರ ಗೂಢಚಾರ ಏಜೆನ್ಸಿ ಎನ್ನುವುದಕ್ಕಿಂತಲೂ ಒಂದು ಅಂತಾರಾಷ್ಟ್ರೀಯ ಭಯೋತ್ಪಾದಕ ಏಜೆನ್ಸಿ ಎಂದೇ ಪರಿಗಣಿಸಬೇಕು' ಎಂದು ಅನೇಕ ಸುರಕ್ಷಾ ವಿಶ್ಲೇಷಕರು ಮತ್ತು ಜನಪ್ರತಿನಿಧಿಗಳು ಬರಾಕ್ ಒಬಾಮಾ ಸಕರ್ಾರದ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ.

26/11 ಉಗ್ರ ಯೋಜನೆಯಲ್ಲಿ ಸಕ್ರಿಯ ಪಾತ್ರ ವಹಿಸಿ ಬಂಧಿತನಾಗಿರುವ ಅಮೆರಿಕನ್ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಐಎಸ್ಐ ಕುರಿತು ಶಿಕಾಗೋ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾನೆ. ಲಷ್ಕರ್-ಎ-ತೋಯ್ಬಾ ಜಿಹಾದಿ ಭಯೋತ್ಪಾದಕ ಸಂಘಟನೆಯ ಎಲ್ಲ ಕೃತ್ಯಗಳ ಮೇಲ್ವಿಚಾರಣೆಯನ್ನು ಐಎಸ್ಐ ಅಧಿಕಾರಿಗಳೇ ಖುದ್ದಾಗಿ ನಡೆಸುತ್ತಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾನೆ.

ಆತನ  ಹೇಳಿಕೆಯಲ್ಲಿ 26/11 ದಾಳಿಯ ಹಿಂದಿನ ರೂವಾರಿಗಳೆಂದು ಐವರು ಪಾಕಿಸ್ತಾನಿ ವ್ಯಕ್ತಿಗಳ ಹೆಸರನ್ನು ನೀಡಲಾಗಿದೆ. ಎಫ್ಬಿಐ (ಅಮೆರಿಕದ ರಾಷ್ಟ್ರೀಯ ತನಿಖಾ ಸಂಸ್ಥೆ) ಅವರ ಹೆಸರುಗಳನ್ನು ಬಹಿರಂಗಗೊಳಿಸಿಲ್ಲ. ಮೆಂಬರ್ಸ್ ಎ, ಬಿ, ಸಿ, ಡಿ ಹಾಗೂ ಪರ್ಸನ್ ಎ ಎಂದು ಮಾತ್ರ ದಾಖಲೆಯಲ್ಲಿ ತೋರಿಸಲಾಗಿದೆ. ಈ ಐವರೂ ಪಾಕಿಸ್ತಾನೀಯರು ಎಂಬುದರಲ್ಲಿ, ಮತ್ತು, ಅವರು ಐಎಸ್ಐ ಜೊತೆಗೆ ಸಂಬಂಧ ಹೊಂದಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ.

26/11 ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನ ಸಕರ್ಾರದ ನೇರ ಪಾತ್ರವಿರುವುದು ಸ್ಪಷ್ಟವಾಗಿದ್ದರೂ ಪಾಕಿಸ್ತಾನ ಸಕರ್ಾರಕ್ಕೆ ನೇರವಾಗಿ ಮುಜುಗರವಾದೀತೆಂದು ಅವರ ಹೆಸರನ್ನು ಬಹಿರಂಗ ಪಡಿಸಲು ಅಮೆರಿಕ ಹಿಂದೇಟು ಹಾಕುತ್ತಿದೆ. ಅಂತಹ `ಮಹಾನ್' ವ್ಯಕ್ತಿಗಳು ಯಾರು ಎಂಬುದನ್ನು ತನಗೆ ತಿಳಿಸುವಂತೆ ಅಮೆರಿಕವನ್ನು ಒತ್ತಾಯಿಸುವುದು ಈ ಸಮಯದಲ್ಲಿ ಭಾರತ ಸಕರ್ಾರದ ಕರ್ತವ್ಯ. ಆದರೆ ಅಂತಹ ಪ್ರಯತ್ನಗಳು ನಡೆದ ವರದಿಗಳಿಲ್ಲ.

ಇಲಿನಾಯ್ಸ್ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವ ಹೆಡ್ಲಿಯ ಸಹವತರ್ಿ ತಹವ್ವೂರ್ ಹುಸೇನ್ ರಾಣಾ ನೀಡಿರುವ ಹೇಳಿಕೆಯೂ ಸಹ ಇಲ್ಲಿ ಮುಖ್ಯವಾದದ್ದು. ಐಎಸ್ಐ ಪರವಾಗಿ, ಅದು ಹೇಳಿದಂತೆಯೇ, ತಾನು ಭಯೋತ್ಪಾದಕ ಕೃತ್ಯ ಎಸಗಿರುವುದಾಗಿ ಆತ ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ. 26/11 ದಾಳಿಯು ಪಾಕ್ ಸಕರ್ಾರದ ಅಧಿಕೃತ ಕೃತ್ಯ ಎಂದಿದ್ದ ಅವನು, `ನಾನು ಒಂದು ದೇಶದ ಪರವಾಗಿ, ಹಾಗೂ ಇನ್ನೊಂದು ದೇಶದ ವಿರುದ್ಧವಾಗಿ ಕೆಲಸಮಾಡಿದ್ದೇನೆ. ಹೀಗಾಗಿ ನನ್ನನ್ನು ಭಯೋತ್ಪಾದಕ ಎಂದು ಪರಿಗಣಿಸದೇ ವಿಚಾರಣೆಯಿಂದ ಮುಕ್ತಗೊಳಿಸಬೇಕು' ಎಂದು ನ್ಯಾಯಾಲಯವನ್ನು ಕೋರಿದ್ದ. ಅವನ ಕೋರಿಕೆ ತಿರಸ್ಕೃತಗೊಂಡಿದೆ.

ಅಲ್ಲದೇ ಗ್ವಾಂಟಾನಮೋ ಬೇ ಕಾರಾಗೃಹದಲ್ಲಿ ಬಂದಿಗಳಾಗಿರುವ ಅಲ್ ಖೈದಾ ಉಗ್ರರೂ ಐಎಸ್ಐ ವಿರುದ್ಧ ಖಚಿತ ಪುರಾವೆಗಳನ್ನು ಒದಗಿಸಿದ್ದಾರೆ ಎಂದು ವಿಕಿಲೀಕ್ಸ್ ಮಾಹಿತಿ ನೀಡಿದೆ. ಇವೆಲ್ಲ 26/11 ದಾಳಿಯೂ  ಸೇರಿದಂತೆ ಅನೇಕ ಜಾಗತಿಕ ಭಯೋತ್ಪಾದಕ ಕೃತ್ಯಗಳ ಹಿಂದೆ ಐಎಸ್ಐ ಹಾಗೂ ಪಾಕ್ ಮಿಲಿಟರಿ ಶಕ್ತಿಗಳು ಇರುವುದನ್ನು ದೃಢಪಡಿಸುತ್ತವೆ.

ಮುಂಬೈ ನಾರಿಮನ್ ಹೌಸ್ ದಾಳಿಯ ಕುರಿತಂತೆ ವಿಚಾರಣೆ ನಡೆಸುತ್ತಿರುವ ಅಮೆರಿಕದ ನ್ಯೂಯಾಕರ್್ ಕೋಟರ್್ ನೇರವಾಗಿ ಪಾಕ್ ಸಕರ್ಾರವನ್ನೇ ದೋಷಿಯ ಸ್ಥಾನದಲ್ಲಿ ನಿಲ್ಲಿಸಿದೆ. ಲಷ್ಕರ್-ಎ-ತೋಯ್ಬಾ ಜಿಹಾದಿ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಹಫೀಸ್ ಮುಹಮ್ಮದ್ ಸಯೀದ್ ಜೊತೆಗೆ ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಶುಜತ್ ಪಾಷಾಗೂ ನ್ಯೂಯಾಕರ್್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಆದರೆ, ಭಾರತದ ಯಾವ ನ್ಯಾಯಾಲಯವೂ ಇದುವರೆಗೆ ಇಂತಹ ದಿಟ್ಟತನವನ್ನು ತೋರಿಸಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ