ಶನಿವಾರ, ಮೇ 21, 2011

ಡಾ. ಎಸ್. ಎಲ್. ಭೈರಪ್ಪ ಅವರೊಂದಿಗೆ ವಿಶೇಷ ಸಂವಾದ

ಕನ್ನಡಿಗರ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಡಾ. ಎಸ್. ಎಲ್. ಭೈರಪ್ಪ ಭಾರತದ ಶ್ರೇಷ್ಠ ಕಾದಂಬರಿಕಾರರಲ್ಲಿ ಒಬ್ಬರು. ವಿಸ್ತಾರವಾದ ಜೀವನಾನುಭವ ಹೊಂದಿರುವ ಅವರು ಪ್ರಖರ ವೈಚಾರಿಕತೆ, ತಲಸ್ಪಶರ್ಿ ಅಧ್ಯಯನ, ತಾಕರ್ಿಕ ಚಿಂತನೆ ಹಾಗೂ ಖಚಿತ ಅಭಿಪ್ರಾಯ ನಿರೂಪಣೆ - ಇವುಗಳಿಗಾಗಿ ಹೆಸರಾದವರು.

ಅಗಾಧ ಓದು ಹಾಗೂ ಜಾಗತಿಕ ಪ್ರವಾಸಗಳಿಂದ ತಮ್ಮ ಜ್ಞಾನದ ಪರಿಧಿಯನ್ನು, ಅನುಭವದ ಆಳವನ್ನು ಹೆಚ್ಚಿಸಿಕೊಂಡು ಪರಿಪಕ್ವವಾಗಿರುವ ಭೈರಪ್ಪನವರೊಂದಿಗೆ, ಮೈಸೂರಿನ ಅವರ ನಿವಾಸದಲ್ಲಿ ಫೆಬ್ರವರಿ 2011ರ ಅಂತ್ಯದಲ್ಲಿ ನಾನು ಹಾಗೂ ಲೋಕ ಶಿಕ್ಷಣ ಟ್ರಸ್ಟ್ ಕಾರ್ಯದಶರ್ಿ ಹೆಚ್. ಎಸ್. ನಾರಾಯಣ ಮೂತರ್ಿ, ಹಿರಿಯ ಪತ್ರಕರ್ತ, ವಿ. ಎನ್. ಸುಬ್ಬರಾವ್, ಸಂಯುಕ್ತ ಕನರ್ಾಟಕದ ಸಂಪಾದಕ ಹುಣಸವಾಡಿ ರಾಜನ್ಸುಮಾರು ಎರಡು ಗಂಟೆಗಳ ಕಾಲ ಭೈರಪ್ಪನವರೊಂದಿಗೆ ಸಂವಾದ ನಡೆಸಿದೆವು.

ಸಂವಾದದ ನಂತರ ಆತ್ಮೀಯ ಹರಟೆ. ಅನಂತರ ಊಟ. ಭೈರಪ್ಪನರು ಅತಿಥಿದೇವರು. ಊಟದ ಕೋಣೆಯಲ್ಲಿ ಭಾರಿ ಭೋಜನ ಅಣಿಯಾಗಿತ್ತು. ಬಿಸಿಬೇಳೆ ಭಾತ್, ರಾಯತ, ಚಪಾತಿ, ಪಲ್ಯ, ಅನ್ನ, ಸಾಂಬಾರ್, ಹಪ್ಪಳ, ಗಸಗಸೆ ಪಾಯಸ, ಮೊಸರು, ಬಾಳೆಹಣ್ಣು - ಇಷ್ಟೊಂದು ಬಗೆಯ ಭೋಜನವನ್ನು ಭೈರಪ್ಪನವರ ಪತ್ನಿ ಶ್ರೀಮತಿ ಸರಸ್ವತಿಯವರು ಸಿದ್ಧಪಡಿಸಿದ್ದರು! ಪತ್ನಿಯೊಂದಿಗೆ ಸ್ವತಃ ಭೈರಪ್ಪನವರೇ ಬಡಿಸಲು ನಿಂತರು. ನಮ್ಮ ತಟ್ಟೆಗಳು ತುಂಬಿದ ನಂತರ ಜೊತೆಯಲ್ಲಿ ಊಟಕ್ಕೆ ಕುಳಿತರು. ಇದು ವ್ಯಕ್ತಿತ್ವದ ಒಂದು ಚಿಕ್ಕ ಉದಾಹರಣೆ, ಅಷ್ಟೇ.


ಎಸ್. ಎಲ್. ಭೈರಪ್ಪನವರ ಜೊತೆ ನಡೆಸಿದ ವಿಶೇಷ ಸಂವಾದದ ಆಯ್ದ ಭಾಗಗಳು ಇಲ್ಲಿವೆ (2011ರ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ `ಸಂಯುಕ್ತ ಕನರ್ಾಟಕ' ಪತ್ರಿಕೆಯು ಹೊರತಂದಿದ್ದ `ಕನ್ನಡ ಕಲರವ' ವಿಶೇಷ ಸಂಚಿಕೆಯಲ್ಲಿ ಈ ಸಂದರ್ಶನದ ಮುದ್ರಿತ ರೂಪವನ್ನು ನೋಡಬಹುದು).

ನಿರೂಪಣೆ: ಜಿ. ಅನಿಲ್ ಕುಮಾರ್

ಓವರ್ ಟು ಭೈರಪ್ಪ ....

****

`ವಿಶ್ವ ಕನ್ನಡ ಸಮ್ಮೇಳನ' ಅನ್ನುವ ಬದಲು `ವಿಶ್ವ ಕನರ್ಾಟಕ ಸಮ್ಮೇಳನ' ಅಂತ ಕರೆಯೋದು ಹೆಚ್ಚು ಸೂಕ್ತ ಎಂದು ನನಗೆ ಅನಿಸುತ್ತದೆ.

ಕನ್ನಡ ಭಾಷೆಯ ಉಳಿವು - ಅಳಿವಿನ ಕುರಿತಂತೆ ನಾವು ಬೇಕಾದಷ್ಟು ಚಚರ್ೆ ಮಾಡಿದ್ದೀವಿ. ಪ್ರತಿಯೊಂದು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಹೇಳಿದ್ದಾರೆ. ಪತ್ರಿಕೆಗಳಲ್ಲೂ ಈ ಬಗ್ಗೆ ಬಹಳಷ್ಟು ಲೇಖನ ಬರೆದಿದ್ದಾರೆ. ಈ ಬಗ್ಗೆ ಮತ್ತೆ ಮತ್ತೆ ಹೇಳುವ ಅಗತ್ಯವಿಲ್ಲ. ಮುಖ್ಯವಾಗಿ ಆಗಬೇಕಾದದ್ದು ಕನರ್ಾಟಕ ಆಥರ್ಿಕವಾಗಿ, ರಾಜಕೀಯವಾಗಿ ಸಬಲವಾಗಬೇಕು. ಎಲ್ಲಿಯವರೆಗೆ ನಾವು ಆಥರ್ಿಕವಾಗಿ ಸದೃಢವಾಗಿರುವುದಿಲ್ಲವೋ ಅಲ್ಲಿಯವರೆಗೆ ನಾವು ಸಾಂಸ್ಕೃತಿಕವಾಗಿ ಕೂಡಾ ಸದೃಢವಾಗಲು ಸಾಧ್ಯವಿಲ್ಲ.

ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಅಥವಾ ಸ್ವಾತಂತ್ರ್ಯ ಬಂದ ಮೇಲೂ ನಾವು ರಾಜಕೀಯವಾಗಿ ಸಬಲರಾಗಿರಲಿಲ್ಲ. ಉತ್ಸಾಹ ಮೂಡಿಸಲು `ನಾವು ಗಂಡುಗಲಿಗಳು' ಹಾಗೆ ಹೀಗೆ ಅಂತ ಹೇಳಬಹುದು. ಇತ್ತೀಚಿನ ಇತಿಹಾಸ ತೆಗೆದುಕೊಂಡರೆ ಮಹಾರಾಷ್ಟ್ರದಲ್ಲಿ ಮರಾಠರು ಹಿಂದೆ ಎಷ್ಟು ಪ್ರಬಲರಾಗಿದ್ದರೋ ಅದರ ಪ್ರಾಬಲ್ಯ ಈಗಲೂ ಹಾಗೇ ಇದೆ. ಮರಾಠರ ಮನೋಭೂಮಿಕೆಯಲ್ಲಿ ಆ ಪ್ರಾಬಲ್ಯ ಇನ್ನೂ ಇದೆ. ಇನ್ನು ಉತ್ತರಕನರ್ಾಟಕವನ್ನು ತೆಗೆದುಕೊಂಡರೆ ಸ್ವಾತಂತ್ರ್ಯ ಚಳವಳಿ ಕಾಲದಲ್ಲಿ ಅಲ್ಲಿದ್ದ ನಮ್ಮ ಎಲ್ಲ ನಾಯಕರೂ ಮಹಾರಾಷ್ಟ್ರವನ್ನೇ ನೋಡುತ್ತಿದ್ದರು. ತಿಲಕ್ರನ್ನೇ ನೋಡುತ್ತಿದ್ದರು. ನಂತರ ಮಹಾತ್ಮಾ ಗಾಂಧೀ ಅವರನ್ನು ನೋಡಲು ಪ್ರಾರಂಭಿಸಿದರು. ಹಳೇಮೈಸೂರು ಪ್ರಾಂತ್ಯದಲ್ಲಂತೂ ಮಹಾರಾಜರ ಸಕರ್ಾರವಾಗಿತ್ತು. ಇವರದೇ ಬೇರೆ ಕಲ್ಚರ್ ಬಂತು. ಮತ್ತೆ ಆಮೇಲೆ ಕಾಂಗ್ರೆಸ್ ಇಲ್ಲಿಗೂ ಬಂತು.

ದೇಶಕ್ಕೆ ಸ್ವಾತಂತ್ರ ಬಂದ ಮೇಲೆ ನಾವು ಕನ್ನಡಿಗರು ರಾಜಕೀಯವಾಗಿ ಪ್ರಬಲರಾಗಿರಲಿಲ್ಲ. ತಮಿಳರು ಯಾವತ್ತೂ ಪ್ರಬಲರಾಗಿದ್ದವರೇ. ಬ್ರಿಟಷ್ರ ಕಾಲದಲ್ಲೂ ಅವರೂ ಪ್ರಬಲರೇ. ಕೇರಳದವರು
ಸೆಂಟ್ರಲ್ ಗವರ್ನಮೆಂಟ್ನಲ್ಲಿ ತಮ್ಮ ಮಾತು ಯಾವ ರೀತಿ ನಡೆಸಿಕೊಳ್ಳಬೇಕು ಅನ್ನೊದನ್ನು ಮೊದಲಿನಿಂದಲೂ ಮಾಡ್ಕೊಂಡು ಬಂದ್ರು. ಈಗಲೂ ಅವರು ಅದನ್ನೆಲ್ಲ ಮಾಡುತ್ತ ಬಂದಿದ್ದಾರೆ. ನಾವು ಕನರ್ಾಟಕದವರು ಯಾಕೆ ಇದನ್ನು ಮಾಡುವುದಿಲ್ಲ? ನಮ್ಮ ದೌರ್ಬಲ್ಯವನ್ನು ಅರ್ಥ ಮಾಡಿಕೊಳ್ಳದೇ ಹೋದರೆ ನಾವು ಸುಧಾರಿಸುವುದು ಸಾಧ್ಯವಿಲ್ಲ.

ಈ ಕುರಿತು ಯೋಚಿಸುವಾಗ ನಾವು ವೈಚಾರಿಕೆ ನೆಲೆಯಲ್ಲಿ ಅಬ್ಸ್ಟ್ರಾಕ್ಟ್ ಶಬ್ದಗಳನ್ನು ಬಳಸಿ ಉಪಯೋಗವಿಲ್ಲ. ಅವೆಲ್ಲಾ ಮಿಸ್ಲೀಡಿಂಗ್ ಶಬ್ದಗಳು. ಯಾವುದೇ ಒಂದು ಶಬ್ದ ನಾವು ಬಳಸಿಬಿಟ್ಟರೆ ಆ ಶಬ್ದದೊಳಗೆ ನಮ್ಮ ಆಲೋಚನೆ ಸಿಕ್ಕಿ ಹಾಕಿಕೊಳ್ಳುತ್ತದೆ. ಅದಲ್ಲ ಮುಖ್ಯ. ಸೆಂಟ್ರಲ್ನಲ್ಲಿ ಕಾಂಗ್ರೆಸ್ ಆಳ್ತಿದ್ದಾಗ ಇಲ್ಲೂ ಕಾಂಗ್ರೆಸ್ ಇತ್ತು. ಅದು ಹ್ಯಾಗಿತ್ತು ಅಂದರೆ ವಿಧೇಯವಾಗಿತ್ತು. ಕನರ್ಾಟಕದ ಉದ್ಧಾರದ ಪ್ರಶ್ನೆ ಬಂದಾಗ ಕನರ್ಾಟಕಕ್ಕೆ ಉಪಯೋಗವಾಗೋ ಪ್ರಶ್ನೆ ಬಂದಾಗ `ಗಲಾಟೆ ಮಾಡಬೇಡ' ಅಂತ ಅವರು ಗದರಿಸಿಬಿಟ್ಟರೆ ಇವರು ಸುಮ್ಮನಾಗಿಬಿಡುತ್ತಿದ್ದರು. ಆಮೇಲೆ ಅಲ್ಲಿ ಬೇರೆ ಪಕ್ಷವಿದ್ದು ಇಲ್ಲಿ ಇವರಿದ್ದಾಗ ಉಲ್ಟಾ ಆಗಲು ಪ್ರಾರಂಭವಾಯಿತು.

ಆಂಧ್ರಪ್ರದೇಶದಲ್ಲಿ ಏನಾಯಿತು? ಕೇಂದ್ರದಲ್ಲಿ ಎನ್ಡಿಎ ಆಳ್ವಿಕೆಯಲ್ಲಿದ್ದಾಗ ಚಂದ್ರಬಾಬು ನಾಯ್ಡು ಹೊರಗಿನಿಂದ ಬೆಂಬಲ ನೀಡ್ತಿದ್ದರು. ಆಂಧ್ರಕ್ಕೆ ಬೇಕಾದ ಸವಲತ್ತು ಪಡೆಯಲು ಅಧಿಕಾರಿಗಳನ್ನು ಕರೆದುಕೊಂಡು ಕೇಂದ್ರಕ್ಕೆ ಸ್ವತಃ ಹೋಗುತ್ತಿದ್ದರು. ಇಂತಿಷ್ಟು ಬೇಕು, ಇಷ್ಟಿಷ್ಟು ಬೇಕು ಎಂದು ಅವರು ಹೇಳಿದರೆ ಸಾಕು ಅವರು ಮಂಜೂರು ಮಾಡ್ತಿದ್ದರು. ಅವರು ತಮ್ಮ ಸ್ವಂತಕ್ಕೆ ಏನು ಮಾಡಿಕೊಂಡ್ರೋ ಗೊತ್ತಿಲ್ಲ. ಆದರೆ ಆಂಧ್ರಪ್ರದೇಶಕ್ಕಂತೂ ಬೇಕಾದಷ್ಟೂ ಸವಲತ್ತನ್ನು ಅವರು ಪಡೆದರು. ತಮಿಳುನಾಡಿನವರೂ ಇದೇ ಮಾಡ್ತಿದ್ದಾರೆ. ಮೊನ್ನೆ ನೋಡಿ ಸುನಾಮಿ ಆಯಿತು. ಆಗ ಕೇಂದ್ರದಲ್ಲಿ ಚಿದಂಬರಂ ಅವರು ಅರ್ಥಸಚಿವರಾಗಿದ್ದರು. ಆಗ ಅವರು ಒಂದೇ ಸಲಕ್ಕೆ ಹತ್ತುಸಾವಿರ ಕೋಟಿ ಹಣ ಮಂಜೂರು ಮಾಡಿಬಿಟ್ಟರು. ಮೀಡಿಯಾದವರು ಇದನ್ನು ಹೈಲೈಟ್ ಮಾಡಿದರೂ ಮತ್ತೆ ಮತ್ತೆ ಮಂಜೂರು ಆಯಿತು. ಅದೇ ಕನರ್ಾಟಕದಲ್ಲಿ ಇಂತಹದು ಏನೇ ಆದರೂ ಮೂರು ಕಾಸೂ ಕೊಡ್ತಿರಲಿಲ್ಲ. ಚೌಕಾಸಿ ಮಾಡಿದರೆ, ಒಂದು ನೂರು ಕೋಟಿ, ಐನೂರು ಕೋಟಿ ಕೊಡ್ತಾ ಇದ್ದರು. ಒಟ್ಟಿನಲ್ಲಿ ರಾಜಕಾರಣದೊಳಗೆ ತಮ್ಮ ರಾಜ್ಯಕ್ಕೆ ಏನು ಉಪಯೋಗವೋ ಅದನ್ನು ನೋಡಿ ಅವರು ರಾಜಕಾರಣ ಮಾಡಿಸ್ತಾರೆ. ಆದರೆ ಕನರ್ಾಟಕದಲ್ಲಿ ಯಾವತ್ತೂ ಇಂತಹದು ಆಗಿಲ್ಲ. ನಾವು ಆ ಪಕ್ಷ ನೀವು ಈ ಪಕ್ಷ ಅಂತ ಬರೀ ಜಗಳ ಆಡಿಕೊಂಡೇ ನಮ್ಮವರು ರಾಜಕೀಯ ನಡೆಸ್ತಾರೆ.

ಕನರ್ಾಟಕದ ಏಕೀಕರಣವಾದಾಗ ನಾವೆಲ್ಲ ಏಕೀಕರಣಕ್ಕೆ ಹೋರಾಡಿದೆವು, ಹೊಡೆದಾಡಿದೆವು ಅಂತ ಕನರ್ಾಟಕದವರು ಹೇಳ್ತಾರೆ. ಆದರೆ ಏಕೀಕರಣ ತಂದುಕೊಟ್ಟವರು ಆಂಧ್ರದ ಕೊಪ್ಪಿ ಶ್ರೀರಾಮುಲು. ಅವರು ಉಪವಾಸ ಮಾಡಿ, ಆಂಧ್ರದವರು ದಂಗೆ ಏಳ್ತಾರೆ ಅನ್ನೋ ಸಂದರ್ಭ ಬಂದಾಗ ಆ ರಾಜ್ಯದ ಬೇಡಿಕೆಯನ್ನು ಒಪ್ಪಿಕೊಂಡರು ಕೇಂದ್ರದವರು. ನಂತರ ಕನರ್ಾಟಕಕ್ಕೂ ಅದನ್ನು ಕೊಡಬೇಕಾಯಿತು. ಆಗಲೂ ಕೂಡಾ ಯಾವ ಯಾವ ಪ್ರದೇಶಗಳನ್ನು ಕನರ್ಾಟಕಕ್ಕೆ ಸೇರಿಸಬೇಕಾಗಿತ್ತೋ ಅದನ್ನು ಸೇರಿಸೋ ಶಕ್ತಿ ನಮ್ಮ ನಾಯಕರಿಗೆ ಇರಲಿಲ್ಲ.

ಇದನ್ನು ನಾವು ಸ್ಪಷ್ಟವಾಗಿ ಒಪ್ಪಿಕೊಳ್ಳಬೇಕು. ಇದೇ ವಾಸ್ತವಾಂಶ. ಅದಿಲ್ಲದಿದ್ದರೆ ಯಾಕೆ ಇಷ್ಟೊಂದು ಪ್ರದೇಶಗಳು ಕನರ್ಾಟಕದ ಹೊರಗಡೆ ಹೋಗಬೇಕಾಗಿತ್ತು? ನಾವು ಎಷ್ಟೊಂದು ಕಳೆದುಕೊಂಡಿದ್ದೀವಿ, ನೋಡಿ. ರಾಜಕೀಯವಾಗಿ ಮೊದಲಿನಿಂದಲೂ ನಾವು ದುರ್ಬಲರೇ ಎಂಬುದನ್ನು ನಾವು ಮೊದಲು ಒಪ್ಪಿಕೊಳ್ಳಬೇಕು. ಅದರರ್ಥ ನಮ್ಮನ್ನು ನಾವು ಬೈದುಕೊಳ್ಳುವುದಂತಲ್ಲ. ನಮಗೆ ಏನು ಬೇಕು ಅನ್ನೊದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ನಮ್ಮ ಜನಕ್ಕೆ, ರಾಜ್ಯಕ್ಕೆ ಏನು ಬೇಕು ಎಂಬುದನ್ನು ನಾವಿನ್ನೂ ಅರ್ಥ ಮಾಡಿಕೊಳ್ತಾನೇ ಇಲ್ಲ.

ಈಗ ಮೈಸೂರು-ಬೆಂಗಳೂರು ರೇಲ್ವೆಗೆ ಎರಡು ಲೈನ್ ಮಾಡಬೇಕು ಅಂತಿದೆ. ಆದರೆ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಆಯುಧ ಇಡಲು ಮಾಡಿದ್ದ ಕಟ್ಟಡ ಇದೆ. ಡಬಲ್ ಲೈನ್ ಹಾಕಬೇಕಾದರೆ ಅದನ್ನು ಒಡೀಬೇಕಾಗುತ್ತದೆ. ಏಕೆಂದರೆ ಬೇರೆ ಜಾಗ ಇಲ್ಲ. ಶ್ರೀರಂಗಪಟ್ಟಣ ಒಂದು ಸಣ್ಣ ದ್ವೀಪ ಅಷ್ಟೇ. ಹೀಗಾಗಿ ಅದನ್ನು ಒಡಿಲೇಬೇಕು. ಆದರೆ `ಅದನ್ನು ಒಡೀಬಾರದು ಅಂತ ಹೋರಾಡಿ' ಎಂದು ನಮ್ಮ ರಾಜಕಾರಣಿಗಳೇ ಮುಸ್ಲಿಮರಿಗೆ ಹೇಳಿಕೊಟ್ಟಿದ್ದಾರೆ. `ಅದು ಪವಿತ್ರ ಸ್ಥಳ, ಒಡೆಯಲು ಒಪ್ಪಿಗೆ ಕೊಡಬೇಡಿ' ಅಂತ ನಮ್ಮ ರಾಜಕಾರಣಿಗಳೇ ಹೇಳ್ತಾರೆ. ಅದಕ್ಕೇ ಅವರು ಕೊಡೋದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಆಳೋ ಸಕರ್ಾರಕ್ಕೆ ಎಲ್ಲಿ ತಮ್ಮ ವೋಟು ಹೋಗುತ್ತೋ ಅಂತ ಭಯ. ಇದನ್ನು ಮೊದಲು ಸರಿ ಮಾಡದೇ ಇದ್ದರೆ ಡಬಲ್ ಲೈನ್ ಬರೋದಿಕ್ಕೆ ಸಾಧ್ಯ ಇಲ್ಲ. ಅದಕ್ಕೆ ಸ್ವಲ್ಪ ಜಾಗಾ ಒತ್ತುವರಿ ಮಾಡಲೇಬೇಕಾಗುತ್ತದೆ.

ಯಾವ ರೀತಿಯ ರಾಜಕಾರಣ ನಮ್ಮಲ್ಲಿ ನಡೀತಿದೆ ನೋಡಿ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯ ಮುಂದುವರಿಯಬೇಕು ಅನ್ನೋದಾಗಲೀ, ಸಣ್ಣ ಬುದ್ಧಿಯ ರಾಜಕಾರಣ ನಾವು ಮಾಡಬಾರದು ಅನ್ನೋದಾಗಲಿ ಇಲ್ಲಿನ ಬಹುತೇಕ ರಾಜಕಾರಣಿಗಳಿಗೆ ಇಲ್ಲವೇ ಇಲ್ಲ ಅಂತ ನನಗನಿಸುತ್ತೆ.

ಕೈಗಾರಿಕೆ ಮುಂದುವರೀದೆ ಇದ್ರೆ ಯಾವ ರಾಜ್ಯವೂ ಬೆಳೆಯಲು ಸಾಧ್ಯವೇ ಇಲ್ಲ. ತಮಿಳುನಾಡಿನಲ್ಲಿ ಸಾಕಷ್ಟು ಉದ್ಯಮಿಗಳಿದ್ದಾರೆ. ಅದಲ್ಲದೇ ಹೊರಗಿನಿಂದಲೂ ಉದ್ಯಮಿಗಳು ಅಲ್ಲಿಗೆ ಬರ್ತಾರೆ. ಮೊನ್ನೆ ನನಗೆ ಒಬ್ಬರು ತಮಿಳಿನವರು ಸಿಕ್ಕಿದ್ದರು. ಅವರು ಹೇಳ್ತಿದ್ದರು, `ಕನರ್ಾಟಕಕ್ಕೆ ಹೋಲಿಸಿದರೆ ನಮ್ಮಲ್ಲಿ ಸಾಕಷ್ಟು ಬಿಸಿಲು, ಸೆಕೆ. ಬೆವರು ಯಾರಿಗೂ ತಡಿಯೋಕೆ ಆಗೋಲ್ಲ. ಆದರೂ ಉದ್ಯಮಿಗಳು ನಮ್ಮಲ್ಲಿಗೆ ಬರ್ತಾರೆ. ಏಕೆಂದರೆ ಅಷ್ಟೊಂದು ಮೂಲಭೂತ ಸೌಕರ್ಯ ಅಲ್ಲಿ ಕೊಡಲಾಗಿದೆ. ಜಯಲಲಿತಾ ಕಾಲದಿಂದಲೂ ರೈಲು, ಬಸ್ ಬೇಕಾದಷ್ಟಿವೆ' ಎಂದು.

ನಮ್ಮಲ್ಲಿ ಮೂಲಭೂತ ಸೌಕರ್ಯ ಇಲ್ಲವೇ ಇಲ್ಲ. ನಮ್ಮಲ್ಲಿ ಎಲೆಕ್ಟ್ರಿಸಿಟಿ ಅಷ್ಟಾಗಿ ಇಲ್ಲ. ಮೈಸೂರಿನಿಂದ 25 ಕಿ.ಮೀ. ದೂರದಲ್ಲಿ ಥರ್ಮಲ್ ಪವರ್ ಸ್ಟೇಷನ್ ಮಾಡ್ಬೇಕು ಅಂತಾ ಒಂದು ಪ್ರಸ್ತಾಪನೆ ಇತ್ತು. ಆದರೆ ನಮ್ಮ ಪರಿಸರವಾದಿಗಳೇ `ಅದನ್ನು ಮಾಡಿದರೆ ಪರಿಸರಕ್ಕೆ ಹಾನಿಯಾಗುತ್ತೆ, ಬೂದಿ ಬಿದ್ದುಬಿಡುತ್ತದೆ. ಮೈಸೂರಿಗೆ ಸೆಕೆ ಜಾಸ್ತಿ ಬರುತ್ತದೆ, ಶಾಖ ಹೆಚ್ಚಾಗುತ್ತದೆ' ಅಂದೆಲ್ಲ ಅಡ್ಡಗಾಲು ಹಾಕಿದರು. ಆದರೆ ಮೊನ್ನೆ ಅಂದರೆ ಕಳೆದ ವರ್ಷ ನಾನು ಅಹ್ಮದಾಬಾದ್ಗೆ ಹೋಗಿದ್ದೆ. ಆರು ವರ್ಷ ಗುಜರಾತ್ನಲ್ಲಿದ್ದೆ ನಾನು. ಆಗಾಗ್ಗೆ ಅಲ್ಲಿಗೆ ಹೋಗುತ್ತಿರುತ್ತೇನೆ. ಅಲ್ಲಿ ಎರಡು ಥರ್ಮಲ್ ಪ್ಲಾಂಟ್ಗಳೀವೆ. ಅದೂ ನಗರದ ಒಳಭಾಗದಲ್ಲಿ, ಹೊರಗಲ್ಲ. ಒಂದು ಸಬರಮತಿ ಆಶ್ರಮದ ಹತ್ತಿರ, ಇನ್ನೊಂದು ಗಾಂಧಿನಗರದಲ್ಲಿ. ಅಂಥ ಬೇಸಿಗೆಯ ಬಿಸಿ ಇರೋ ನಗರದ ಮಧ್ಯದಲ್ಲಿ ಯಾಕೆ ಅವರು ಥರ್ಮಲ್ ಪವರ್ ಪ್ಲಾಂಟ್ ಹಾಕಿದ್ರು? ಆಧುನಿಕ ತಂತ್ರಜ್ಞಾನ ಅಲ್ಲಿ ಅಭಿವೃದ್ಧಿ ಆಗಿದೆ. ಟಾಟಾ ಕಂಪೆನಿಯವರು ನ್ಯಾನೊ ಕಾರನ್ನು ಬಂಗಾಲದಿಂದ ತೆಗೆದ ಮೇಲೆ ನಮ್ಮವರು `ಧಾರವಾಡದಲ್ಲಿ ನಾವು ಜಾಗಾ ಕೊಡ್ತೀವಿ' ಅಂದ್ರು. ಜಾಗ ಎಲ್ಲಿದೆ? ಒತ್ತುವರಿ ಮಾಡಿಕೊಂಡು ನಂತರ ಕೊಡ್ತೇವೆ ಅಂದ್ರು. ಅದಕ್ಕೆ ವಿದ್ಯುತ್ ಶಕ್ತಿ ಎಲ್ಲಿಂದ ಕೊಡ್ತೀರಿ? ಯಾವಾಗ ಮೂಲಭೂತ ಸೌಕರ್ಯ ಇಲ್ಲವೋ ಅಲ್ಲಿ ಅಭಿವೃದ್ಧಿಯ ಮಾತೇ ಇಲ್ಲ.

ಅದೇ ಸಮಯದಲ್ಲಿ ಗುಜರಾತಿನ ನರೇಂದ್ರ ಮೋದಿ ಸಹ ನ್ಯಾನೋ ಕಂಪೆನಿಗೆ ಆಫರ್ ಕೊಟ್ರು. ಎರಡೂ ಕಡೆ ಪರೀಕ್ಷೆ ಮಾಡಿದ ಟಾಟಾದವರು ಗುಜರಾತ್ ಅನ್ನೇ ಆರಿಸಿದ್ರು. ಯಾಕೆ? ಭೂಸ್ವಾಧೀನ ಮಾಡಿದ ನಂತರ ಜಾಗಾ ಕೊಡ್ತೀವಿ ಅಂತು ನಮ್ಮ ಸಕರ್ಾರ. ಭೂಸ್ವಾಧೀನ ಅಂದ್ರೆ ಸುಮ್ಮನೆಯಲ್ಲ. ವಿಷಯ ಕೊಟರ್ಿಗೆ ಹೋಗುತ್ತೆ. ಕನಿಷ್ಟ 25 ವರ್ಷಗಳನ್ನು ಅದು ತಗೋಳುತ್ತೆ. ಆದ್ರೆ ಮೋದಿ ತಕ್ಷಣವೇ 1000 ಎಕರೆ ಜಮೀನು ಕೊಡಿಸಿದ್ರು. ಹೇಗೆ? ಅಲ್ಲಿನ ರೈತರಿಗೆ `ಇದ್ರಿಂದ ಇಂತಿಂಥಾ ಪ್ರಯೋಜನವಿದೆ. ಕೃಷಿಗಿಂತ ಇದರಲ್ಲಿ ಹೆಚ್ಚಿನ ಲಾಭ ಇದೆ, ನಿಮಗೂ ನೌಕರಿ, ಲಾಭ ಇದೆ' ಅಂತೆಲ್ಲ ಸರಿಯಾಗಿ ತಿಳಿಹೇಳಿದ್ರು. ಗುಜರಾತ್ ಜನ ಪಕ್ಕಾ ವ್ಯವಹಾರಸ್ಥರು. ವ್ಯಾಪಾರದಲ್ಲಿ ಮುಂದುವರೆದ ಜನರು. ತಕ್ಷಣ ಒಪ್ಪಿಕೊಂಡ್ರು. ಮತ್ತು ಇದರಲ್ಲಿ ಸಕರ್ಾರದ ಮಧ್ಯಸ್ಥಿಕೆ ಇರಲಿಲ್ಲ. ರೈತರೇ ನೇರವಾಗಿ ಟಾಟಾ ಕಂಪೆನಿಯವರೊಂದಿಗೆ ವ್ಯವಹಾರ ಮಾಡಲು ಬಿಡಲಾಯಿತು. ಇದನ್ನು ಜನರು ಅರ್ಥ ಮಾಡಕೊಂಡ್ರು. ಕಂಪೆನಿ ಜೊತೆ ನೇರವಾಗಿ ಮಾತಾಡಿ ಜಮೀನನ್ನು ಲಾಭದ ಬೆಲೆಗೆ ಮಾರಿದರು. ಈಗ ನ್ಯಾನೋ ಕಾರು ತಯಾರಾಗಿ ಹೊರಬರಲು ಪ್ರಾರಂಭಿಸಿದೆ.

ನಮ್ಮಲ್ಲಿ ಇಂತಹದ್ದೇನಿದೆ? ಇಂತಹ ನಾಯಕರು ನಮ್ಮಲ್ಲಿ ಯಾಕಿಲ್ಲ? ದಿನಾ ಕಾದಾಟ, ಕಚ್ಚಾಟ ಬಿಟ್ರೆ ಏನಿದೆ ನಮ್ಮಲ್ಲಿ? ಈಗಂತೂ ನನಗೆ ಬೆಳಗಿನ ಪೇಪರ್ ಓದಲೂ ಅಸಹ್ಯವೆನಿಸುತ್ತದೆ. ಟಿ.ವಿ. ನ್ಯೂಸ್ ನೋಡಲೂ ಬೇಸರವಾಗುತ್ತದೆ. ಏನಿದೆ ನಮ್ಮಲ್ಲಿ? ಡೆವಲಪ್ಮೆಂಟ್ ಆಗಲಿ, ಹೀಗೆ ಮಾಡಿದರೆ ಹೀಗೆ ಆಗುತ್ತದೆ ಅನ್ನೋ ಅರ್ಥಶಾಸ್ತ್ರದ ರೀತಿಯ ವಿಚಾರ ಏನಿದೆ ಇಲ್ಲಿ? ತಿಳಿದವರು ಏನು ಮಾಡಬೇಕು ಅಂತಾ ಚಚರ್ೆ ಮಾಡ್ಬೇಕು. ಆದ್ರೆ ಅದು ಆಗ್ತಿದೆಯಾ?

ವಿಶ್ವಕನ್ನಡ ಸಮ್ಮೇಳನದ ಈ ಸಂದರ್ಭದಲ್ಲಿ ನಾನು ಹೇಳೋದೇನೆಂದರೆ, ಪ್ರತಿವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ಆಗ್ತಾನೇ ಇರುತ್ತೆ. ಬೆಳಗಾವಿನಲ್ಲೂ ದೊಡ್ಡ ಪ್ರಮಾಣದಲ್ಲಿ ಈಗ ಒಂದು ಸಮ್ಮೇಳನ ಆಗುತ್ತೆ ಅಷ್ಟೆ. ನಮಗೆ ಸಾವಿರ, ಎರಡು ಸಾವಿರ ವರ್ಷದ ಇತಿಹಾಸ ಇದೆ, ಪಂಪನಿಂದ ಆರಂಭವಾಗಿದ್ದು, ಹಾಗೆ ಹೀಗೆ ಅಂತ ಹೇಳಿಕೊಳ್ಳುವುದರಿಂದ ಮಾತ್ರವೇ ಏನು ಪುರುಷಾರ್ಥ ಸಾಧಿಸಿದಂತಾಗುತ್ತೆ? ಬದಲಾಗಿ ನಮ್ಮ ಕನರ್ಾಟಕ ಈಗ ಆಥರ್ಿಕವಾಗಿ ಅಭಿವೃದ್ಧಿ ಹೊಂದಲು ಏನು ಬೇಕು ಎಂಬುದನ್ನು ಆಲೋಚನೆ ಮಾಡಬೇಕು. ಮತ್ತು ಅದಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕು. ಇದನ್ನು ಎಲ್ಲ ರಾಜಕಾರಣಿಗಳೂ ಅರ್ಥ ಮಾಡಿಕೊಳ್ಳಬೇಕು. ಈ ಥರದಲ್ಲಿ ಸೆಮಿನಾರ್ಗಳು ಆಗ್ಬೇಕು.

ಎಲ್ಲಿಯವರೆಗೆ ನಾವು ಆಥರ್ಿಕವಾಗಿ ಸದೃಢವಾಗಿರುವುದಿಲ್ಲವೋ ಅಲ್ಲಿಯವರೆಗೆ ನಾವು ಸಾಂಸ್ಕೃತಿಕವಾಗಿ ಕೂಡಾ ಸದೃಢವಾಗಲು ಸಾಧ್ಯವಿಲ್ಲ. ಈಗ ನೋಡಿ, ಹಿಂದೆ ನ್ಯಾಷನಲ್ ಹೆಲ್ತ್ ಸ್ಕೀಮಿನ ವತಿಯಿಂದ ಡಾಕ್ಟರ್ಗಳಾಗಿ ಕನರ್ಾಟಕದಿಂದ ಸುಮಾರು ಜನ ಇಂಗ್ಲೆಂಡ್ಗೆ ಹೋದರು. ಅವರು ಅಲ್ಲಿ ಸೆಟಲ್ ಆಗೋದರ ಜೊತೆಗೆ ತಮ್ಮ ಮಕ್ಕಳನ್ನೂ ಸಂಪೂರ್ಣವಾಗಿ ಬ್ರಿಟಿಷರನ್ನಾಗಿ ಮಾಡಿದರು. ಮನೆಯಲ್ಲಿ ಗಂಡ ಹೆಂಡತಿ ಸ್ವಲ್ಪ ಕನ್ನಡ ಮಾತನಾಡಿದರೂ ಮಕ್ಕಳ ಜೊತೆಗೆ ಮಾತ್ರ ಬರೀ ಇಂಗ್ಲೀಷ್. ಇದರಿಂದ ಸಂಪೂರ್ಣವಾಗಿ ಅವರು ಬ್ರಿಟಿಷರೇ ಆಗಿಬಿಟ್ಟರು. ಆದರೆ ಗುಜರಾತಿನವರು ಏನು ಮಾಡಿದ್ರು? ಅವರು ಕೇವಲ ನೌಕರಿ ನೆಚ್ಚಿಕೊಂಡು ಅಲ್ಲಿಗೆ ಹೋದವರಲ್ಲ. ಅವರು ಜೀವನೋಪಾಯಕ್ಕಾಗಿ ಸೂಪರ್ ಮಾಕರ್ೆಟ್ ಥರಾ ಎಲ್ಲಾ ತರಹದ ಸಾಮಗ್ರಿಗಳೂ ಸಿಗುವ ಕಾರ್ನರ್ ಶಾಪ್ಗಳನ್ನು ಶುರು ಮಾಡಿದರು. ನೌಕರರನ್ನು ಇಟ್ಟುಕೊಳ್ಳದೇ ಮಾಲೀಕರು ಮಧ್ಯರಾತ್ರಿಯಾದರೂ ತಾವೇ ಸ್ವತಃ ಕೆಲಸ ಮಾಡಿದರು. ಮನೆಯಿಂದಲೇ ಚಪಾತಿ ತರಿಸಿ ತಿಂದು ಅಂಗಡಿ ತೆರೆದಿಡುತ್ತಿದ್ದರು. ರಾತ್ರಿ ಎಷ್ಟೇ ತಡವಾಗಿ ಬಂದರೂ ಇವರ ಅಂಗಡಿ ತೆರೆದಿರುತ್ತದೆ ಅನ್ನೋದು ಗೊತ್ತಾದಾಗ ಗ್ರಾಹಕರು ಇಲ್ಲಿಗೆ ಬರಲಾರಂಭಿಸಿದರು. ಹೀಗಾಗಿ ಇವರು ಚೆನ್ನಾಗಿ ಸಂಪಾದನೆ ಮಾಡಲು ಆರಂಭಿಸಿ ಕ್ರಮೇಣ ರಿಯಲ್ ಎಸ್ಟೇಟ್ ಪ್ರಾಪಟರ್ಿ ಪಚರ್ೇಸ್ ಮಾಡಲು ಆರಂಭಿಸಿದರು. ನಂತರ ದೊಡ್ಡ ದೊಡ್ಡ ಅಂಗಡಿಗಳನ್ನು ತೆರೆದು ಅಥರ್ಿಕವಾಗಿ ಪ್ರಬಲರಾದರು. ಈಗ ಇಂಗ್ಲೆಂಡ್ನಂಥ ಸಣ್ಣ ದೇಶದಲ್ಲೇ ಎರಡೆರಡು ಗುಜರಾತಿ ಭಾಷೆಯ ಪತ್ರಿಕೆಗಳನ್ನು ಮೂರನೇ ಪೀಳಿಗೆಯ ಗುಜರಾತಿಗಳು ನಡೆಸುತ್ತಿದ್ದಾರೆ. ದಸರಾ ಬಂದಾಗ ಈಗಲೂ ಅಲ್ಲಿರೋ ಗುಜರಾತಿ ಮಹಿಳೆಯರು ಗಭರ್ಾ ನೃತ್ಯ ಮಾಡುತ್ತಾರೆ. ಇದರಲ್ಲಿ ಮೂರನೇ ಪೀಳಿಗೆ ಜನರೂ ಶಾಮೀಲಾಗುತ್ತಾರೆ. ಅಷ್ಟೇ ಅಲ್ಲ, ಇಂಗ್ಲೆಂಡಿನಲ್ಲಿರೋ ಗುಜರಾತಿಗಳು ಗುಜರಾತ್ಗೆ ಬರೋದು, ಗುಜರಾತ್ನಲ್ಲಿರೋರು ಇಂಗ್ಲೆಂಡ್ಗೆ ಹೋಗೋದು ತುಂಬಾ ಕಾಮನ್. ಅಹ್ಮದಾಬಾದ್ನಲ್ಲಂತೂ ಬ್ರಿಟಿಷ್ ಏರವೇಸ್ ಫ್ಲೈಟ್ ದಿನಾ ಅಲ್ಲಿಂದ ಗುಜರಾತ್ಗೆ ಹೋಗುತ್ತೆ. ಅಲ್ಲಿ ಅನೌನ್ಸ್ಮೆಂಟ್ ಎಲ್ಲಾ ಗುಜರಾತಿನಲ್ಲೇ ನಡೆಯುತ್ತೆ. ಯಾರೊಬ್ಬರೂ ಇಂಗ್ಲೀಷ್ ಮಾತಾಡೋಲ್ಲ. ವರ್ಷಕ್ಕೆ ನಾಲ್ಕು ಬಾರಿ ಭಾರತಕ್ಕೆ ಬರ್ತಾರೆ, ದಿನಕ್ಕೆ ನಾಲ್ಕು ಬಾರಿ ಭಾರತದಲ್ಲಿರೋ ಸಂಬಂಧಿಗಳಿಗೆ ಫೋನ್ ಮಾಡ್ತಾರೆ. ಆ ಖರ್ಚನ್ನೆಲ್ಲ ಅಂಗಡಿ ವೆಚ್ಚಕ್ಕೆ ಹಾಕ್ತಾರೆ. ಇಂಗ್ಲೆಂಡಿನಲ್ಲಿರೋ ಗುಜರಾತಿಗಳು ಆಥರ್ಿಕವಾಗಿ ಸದೃಢರು. ಭಾರತದಲ್ಲಿರೋರೂ ಪ್ರಬಲರೇ. ಹೀಗಾಗಿ ಸಾಂಸ್ಕೃತಿಕವಾಗಿಯೂ ಅವರು ಪ್ರಬಲರೇ ಆಗಿದ್ದಾರೆ.

ಆದರೆ ನಮ್ಮ ಕನರ್ಾಟಕದವರು ತಮ್ಮ ಮಕ್ಕಳಿಗೆ ಕನ್ನಡ ಕಲಿಸೋಲ್ಲ. ನೌಕರಿ ನೆಚ್ಚಿಕೊಂಡಿರೋ ನಮ್ಮವರಿಗೆ ವರಮಾನವೂ ಸೀಮಿತವಾಗೇ ಇರುತ್ತದೆ. ಹೀಗಾಗಿ ಅಲ್ಲಿ ವಾಸಿಸೋ ಕನ್ನಡದವರನ್ನು ಅವರ ಸಂಬಂಧಿಗಳು ಹೋಗಿ ಭೇಟಿಯಾಗೋದು ಕಷ್ಟವೇ. ಇಷ್ಟೆಲ್ಲಾ ಯಾಕೆ ಹೇಳ್ತಾ ಇದೀನಿ ಅಂದ್ರೆ ಸಾಂಸ್ಕೃತಿಕವಾಗಿ ನಾವು ಪ್ರಬಲರಾಗಬೇಕೆಂದರೆ ಮೊದಲು ನಾವು ಆಥರ್ಿಕವಾಗಿ ಸಶಕ್ತರಾಗಲೇಬೇಕು.

ಈಗ ಅವಲಂಬನೆಯಾಗ್ತಿರೋದು ಅಂದರೆ ಕೇವಲ ಸಾಫ್ಟವೇರ್. ಆದರೆ ವಿದೇಶಿ ಕಂಪೆನಿಗಳವರು ಇಂಗ್ಲೀಷ್ನಲ್ಲಿ ಮಾತಾಡಿದಾಗ ನಮ್ಮ ಹುಡುಗರೂ ಇಂಗ್ಲೀಷ್ನಲ್ಲೇ ಮಾತಾಡಬೇಕು. ಸಾಂಸ್ಕೃತಿಕವಾಗಿ ಅವರು ತಮ್ಮನ್ನು ತಾವು ಮಾರಿಕೊಂಡವರು. ಅದಕ್ಕೆ ಸಾಫ್ಟವೇರ್ ಅನ್ನುವುದು ಒಂದು ಸ್ವತಂತ್ರ ಉದ್ಯಮ ಅಲ್ಲವೇ ಅಲ್ಲ.

ಜಪಾನಿನವರು ಎರಡನೆ ವಿಶ್ವ ಸಮರವಾದ ನಂತರ ಆಥರ್ಿಕವಾಗಿ ಎಷ್ಟು ಗಟ್ಟಿಯಾದರೆಂದರೆ ಅಮೆರಿಕದ ಕಾರು ಇಂಡಸ್ಟ್ರಿ, ಎಲೆಕ್ಟ್ರಾನಿಕ್ ಇಂಡಸ್ಟ್ರಿ ಎಲ್ಲವನ್ನೂ ತಮ್ಮ ಕೈಯಲ್ಲಿ ಹಿಡಕೊಂಡ್ರು. ಅಷ್ಟೇ ಅಲ್ಲ ನ್ಯೂಯಾಕರ್ಿನ ಮ್ಯಾನಹಟನ್ ಮಲ್ಟೀಸ್ಟೋರಿ ಬಿಲ್ಡಿಂಗ್ಗಳನ್ನೆಲ್ಲ ಕೊಂಡುಕೊಂಡ್ರು. ವ್ಯವಹಾರಕ್ಕಾಗಿ ಮಾತ್ರ ಜಪಾನಿನವರು ಇಂಗ್ಲಿಷ್ ಕಲಿತರು. ಆದರೆ ಅವರು ತಮ್ಮ ಸಂಸ್ಕೃತಿಯನ್ನು ಬಿಡಲಿಲ್ಲ.

ಆದ್ದರಿಂದ ಮೊದಲು ನಾವು ಆಥರ್ಿಕವಾಗಿ ಪ್ರಬಲರಾಗುವುದು ಮುಖ್ಯ. ಅದರ ಜೊತೆಗೆ ನಮ್ಮ ಸಂಸ್ಕೃತಿಯ ಪರಿಜ್ಞಾನವೂ ನಮಗಿರಬೇಕು. ಸುಮಾರು 40 ವರ್ಷದ ಹಿಂದಿನ ಮಾತು. ಬೆಂಗಳೂರಿನಲ್ಲಿ ಕಾಟನ್ಪೇಟೆ, ಬಳೆಪೇಟೆ, ಅಕ್ಕಿಪೇಟೆ ಇದೆಯಲ್ಲ? ಅಲ್ಲಿನ ಓನರ್ಗಳೆಲ್ಲ ಗುಜರಾತಿಗಳು. ಅವರು ಲೆಕ್ಕ ಬರೆಯೋದು ಗುಜರಾತಿ ಭಾಷೆಯಲ್ಲಿ. ಲೆಕ್ಕ ಬರೆಯೋರು ಯಾರು ಗೊತ್ತೇ? ಕನ್ನಡಿಗರು! ಲೆಕ್ಕ ಬರೆಯೋವಷ್ಟು ಗುಜರಾತಿ ಭಾಷೆ ಕಲಿತು ನಮ್ಮ ಕನ್ನಡಿಗರು ಅವರ ಕೈಕೆಳಗೆ ಕೆಲಸ ಮಾಡಿ ಬರೆಯೋದು. ಹೀಗೆ ಬರೀ ಲೆಕ್ಕ ಬರೆಕೊಂಡು ಕೂರೋದು ಯಾಕೆ? ಇವತ್ತು ನಮ್ಮ ಕನರ್ಾಟಕಕ್ಕೆ ಬೇಕಾಗಿರೋದು ಆಥರ್ಿಕ ಪ್ರಾಬಲ್ಯ. ಈಗ ಟಿ.ವಿ.ನೇ ತಗೊಳ್ಳಿ. ಎಲ್ಲ ಚಾನೆಲ್ಗಳಲ್ಲೂ ಮಧ್ಯಾಹ್ನ ಅಡಿಗೆ ಬಗ್ಗೆ ಕಾರ್ಯಕ್ರಮ ಬರುತ್ತೆ. ಅದರಲ್ಲಿ ಶೇ.75ರಷ್ಟು ಇಂಗ್ಲೀಷೇ ಇರುತ್ತೆ. ಇಂಗ್ಲಿಷ್ ಬಳಸ್ಬೇಡಿ ಅಂತಾ ದಬಾಯಿಸಿ ಹೇಳೋ ಹಕ್ಕೇ ನಮಗಿಲ್ಲ. ಏಕೆಂದರೆ ಆ ಚ್ಯಾನೆಲ್ಗಳ ಓನರುಗಳು ಕನ್ನಡದವರಲ್ಲ.

ವಿಶ್ವೇಶ್ವರಯ್ಯ ದಿವಾನರಾಗಿದ್ದಾಗ ಎಕನಾಮಿಕ್ಸ್ ಕಾನ್ಫರೆನ್ಸ್ ಪ್ರಾರಂಭಿಸಿದ್ರು. ಏಕೆಂದರೆ ನಮ್ಮಲ್ಲಿ ಯಾವ ಯಾವ ರೀತಿಯ ಆಥರ್ಿಕ ಅಭಿವೃದ್ಧಿ ಆಗಬೇಕು ಅನ್ನೋದು ಜನರಿಗೆ ತಿಳಿಸಲು. ಕನ್ನಡ ಸಾಹಿತ್ಯ ಪರಿಷತ್ತನ್ನೂ ಸ್ಥಾಪನೆ ಮಾಡಿದ್ದೂ ಅವರೇ. ಆದರೆ ಅವರ ಹೆಸರನ್ನು ಇವತ್ತು ಯಾರೂ ಹೇಳೋಲ್ಲ. ಆಮೇಲೆ ಅಸೆಂಬ್ಲಿ ಅಂತ ಇತ್ತು. ಅಲ್ಲಿ ಕನ್ನಡದಲ್ಲಿ ಚಚರ್ೆ ಮಾಡಿಸಲು ಶುರು ಮಾಡಿದೋರು ವಿಶ್ವೇಶ್ವರಯ್ಯನವರು. ಕನ್ನಡಿಗರಿಗೆ ಅದೆಲ್ಲ ತಿಳೀಬೇಕು ಅಂತ. ತಿಪಟೂರಿನಲ್ಲಿ ತೆಂಗಿನ ಚಿಪ್ಪು ಸೌದೆಗೆ ಉಪಯೋಗಿಸಿ ವೇಸ್ಟ್ ಮಾಡ್ತೀರಿ ಅದರಲ್ಲಿ ಕಾಯರ್ ಇಂಡಸ್ಟ್ರಿ ಮಾಡಬಹುದು ಅಂತ ಐಡಿಯಾ ಕೊಟ್ಟವರು ವಿಶ್ವೇಶ್ವರಯ್ಯನವರು. ಅಷ್ಟೇ ಅಲ್ಲ ಜನಪ್ರತಿನಿಧಿಯಾಗಿ ಬಂದವರಿಗೆ ಹೀಗೆಲ್ಲ ಆಲೋಚನೆ ಮಾಡೋದಕ್ಕೆ ಯಾಕೆ ಬರಲ್ಲ ಎಂದೂ ಅವರು ದಬಾಯಿಸಿದ್ದರು. ಅವರ ತರಹದ ಚಿಂತನೆಗಳು ನಮಗೆ ಮಾದರಿಯಾಗಬೇಕು.

ಕನರ್ಾಟಕದವರಿಗೆ ಸಂಕೋಚದ ಸ್ವಭಾವ. ವೈಯಕ್ತಿಕವಾಗಿ ಮಾಡುವ ಸಾಮಥ್ರ್ಯವಿದ್ದರೂ ಇನ್ನೊಬ್ಬರ ಪ್ರೇರಣೆ, ಪ್ರೋತ್ಸಾಹವನ್ನು ಎದುರು ನೋಡುವ ದೌರ್ಬಲ್ಯ. ಕನರ್ಾಟಕದ ಆತ್ಮಬಲವನ್ನು ಕಂಡುಕೊಳ್ಳಲು ಇಂತಹ ಸಮ್ಮೇಳನಗಳ ಬಳಕೆಯಾಗಬೇಕು. ಮುಖ್ಯವಾಗಿ ಕನರ್ಾಟಕದ ಉದ್ಯಮಿಗಳು ಒಟ್ಟು ಸೇರಿ ನಾವು ಹೇಗೆ ಬೆಳೀಬೇಕು ಎಂಬುದನ್ನು ಚಚರ್ಿಸಲು ಮುಂದೆ ಬರಬೇಕು. ಚಚರ್ೆ ಮಾಡಿ ನಿಧರ್ಾರ ತಗೋಳ್ಳಬೇಕು. ತಮಿಳುನಾಡಿನಲ್ಲಿ ತಮಿಳು ಉದ್ಯಮಿಗಳು ತಕ್ಕಮಟ್ಟಿಗೆ ಇದ್ದರೂ ಬೇರೆ ಬೇರೆ ರಾಜ್ಯದ ಉದ್ಯಮಿಗಳೂ ಇದ್ದಾರೆ. ಅವರೂ ತಮಿಳರೇ ಆಗುತ್ತಾರೆ. ಹೊರಗಡೆಯಿಂದ ಯಾರೇ ಬಂದರೂ ಅಲ್ಲಿನ ನಾಯಕರು ಸವಲತ್ತು ಕೊಡುತ್ತಾರೆ. ಆದರೆ ಲೇಬರ್ ಫೋಸರ್್ ಮಾತ್ರ ಅವರದೇ. ಕೆಲಸಕ್ಕೆ ತಮಿಳಿನವರನ್ನೇ ತೆಗೆದುಕೊಳ್ಳುವಂಥ ಒತ್ತಡದ ಸ್ಥಿತಿಯನ್ನು ನಿಮರ್ಾಣ ಮಾಡುತ್ತಾರೆ. ಕಾನೂನು ಮಾಡೋಲ್ಲ. ಆದರೆ ಬೇರೆಯವರನ್ನು ತೆಗೆದುಕೊಳ್ಳಲು ಬಿಡುವುದಿಲ್ಲ. ಇದಕ್ಕೆಲ್ಲ ಬೇಕಾದದ್ದು ರಾಜಕೀಯ ಸಂಕಲ್ಪ ಶಕ್ತಿ ಅಷ್ಟೇ. ಇದು ನಮ್ಮಲ್ಲಿ ಯಾಕೆ ಮಾಡೋಲ್ಲ?

ದೆಹಲಿಯ ಕನರ್ಾಟಕ ಭವನದಲ್ಲಿ ನಮ್ಮ ಕನರ್ಾಟಕದ ಸಮಸ್ಯೆಗಳನ್ನು ರೆಪ್ರಸೆಂಟ್ ಮಾಡಲೋ ಅಥವಾ ಅಲ್ಲಿರುವ ಅನುಕೂಲಗಳನ್ನು ನಮಗೆ ತಿಳಿಸಲೋ ಅಲ್ಲೊಬ್ಬ ಸಕರ್ಾರಿ ಪ್ರತಿನಿಧಿ ಇರುತ್ತಾನೆ. ಆ ಥರಾನೇ ತಮಿಳು ಅಧಿಕಾರಿಗಳೂ ಸೆಂಟರ್ನಲ್ಲಿದ್ದಾರೆ. ಮಲಯಾಳಿಗಳೂ ಬೇಕಾದಷ್ಟು ಜನ ಇದ್ದಾರೆ. ಅವರು ಯಾವ ಕ್ಷೇತ್ರದಲ್ಲಿ ಎಷ್ಟು ಫಂಡ್ ಖಚರ್ಾಗದೇ ಉಳಿದಿದೆ ಇತ್ಯಾದಿಗಳನ್ನು ಸಂಗ್ರಹಿಸಿ ತಮ್ಮ ರಾಜ್ಯ ಸಕರ್ಾರಕ್ಕೆ ತಿಳಿಸಿಬಿಡುತ್ತಾರೆ. ಇವರು ಅದನ್ನು ನಮಗೆ ಕೊಡಿ ಅಂತ ಒತ್ತಡ ತರುತ್ತಾರೆ. ಇದು ಬ್ಯೂರೋಕ್ರಾಸಿ ಲೆವೆಲ್ನಲ್ಲಿ ಮಾಡಬೇಕಾದ ಕೆಲಸ. ಅದರೆ ನಮ್ಮ ಕನರ್ಾಟಕ ಭವನದ ಐಎಎಸ್ ಅಧಿಕಾರಿ ಅಂತಾ ಮಾಡಿದ್ದಾರಲ್ಲ. ಆತ ಏನು ಮಾಡ್ತಾನೆ? ಯಾವನೋ ಒಬ್ಬ ಇಲ್ಲಿನ ಚೀಫ್ ಸೆಕ್ರೆಟರಿಗೆ, `ನನಗೆ ಅಲ್ಲಿ ಹಾಕಿ. ನಂಗೆ ಸ್ವಲ್ಪ ಡೊಮೆಸ್ಟಿಕ್ ಪ್ರಾಬ್ಲಮ್ ಇದೆ' ಅಂತ ಹೇಳಿ ಅಲ್ಲಿಗೆ ಹಾಕಿಸಿಕೊಳ್ಳುತ್ತಾನೆ. ಅವನಿಗೆ ಡೆಲ್ಲಿ ವಾಸ, ಕನರ್ಾಟಕದ ಸಂಬಳ. ಅಲ್ಲಿ ಕಾರು, ಬಂಗಲೆ ಎಲ್ಲ ಪಡೀತಾನೆ ಅಷ್ಟೇ. ಆದರೆ ಆತನಿಗೆ ಕನರ್ಾಟಕದ ಬಗ್ಗೆ ಅಥವಾ ಇಲ್ಲಿನ ಸಮಸ್ಯೆಗಳ ಬಗ್ಗೆ ಏನು ತಿಳಿದಿರುತ್ತದೆ? ಅವನು ಮಾಡೋದೇನು? ಚೀಫ್ ಮಿನಿಸ್ಟರ್ ಬಂದಾಗ ಅಥವಾ ಯಾವುದೇ ಸಚಿವರು ಬಂದಾಗ ಮಾತ್ರ ಸ್ವಲ್ಪ ಕೆಲಸ ಮಾಡ್ತಾನೆ. ಇದನ್ನು ನಮ್ಮ ಮಿನಿಸ್ಟರುಗಳು, ಸಕರ್ಾರ ಯೋಚನೆ ಮಾಡಬಾರದೇ?

ಇನ್ನೊಂದು ಏನೆಂದರೆ ಇಂಜಿನಿಯರೀಂಗ್ ಕಾಲೇಜುಗಳು ನಮ್ಮಲ್ಲಿ ಜಾಸ್ತಿಯಾಗಿ ಯುವಜನತೆ ಅಲ್ಲಿ ನುಗ್ಗಲು ಶುರು ಮಾಡಿದರು. ಹೀಗಾಗಿ ಐಎಎಸ್ ಕೇಡರ್ನಲ್ಲಿ ಕನರ್ಾಟಕದವರೂ ಅಷ್ಟಾಗಿ ಇಲ್ಲವೇ ಇಲ್ಲ. ಆಡಳಿತಾತ್ಮಕ ಮಟ್ಟದಲ್ಲಿ ಕನ್ನಡದವರೇ ಇಲ್ಲ. ಹೊರಗಿನಿಂದ ಬಂದವರಿಗೆ ಏನು ಗೊತ್ತಾಗುತ್ತೆ? ಈಗ ತೆಲುಗುನವರು, ಬಿಹಾರ್ನವರು ಮುಂದೆ ಬರುತ್ತಿದ್ದಾರೆ. ಕನ್ನಡದವರು ಮಾತ್ರ ಮುಂದೆ ಬರುತ್ತಿಲ್ಲ. ತೆಲುಗಿನ ಸ್ವಾಭಿಮಾನ ಅನ್ನೋದಿದೆಯಲ್ಲ, ಎನ್ ಟಿ ರಾಮರಾವ್ ಅವರು ತೆಲುಗಿನ ಸ್ವಾಭಿಮಾನವನ್ನು ಬಡಿದೆಬ್ಬಿಸಿದರು. ದೊಡ್ಡ ಕೆಲಸ ಮಾಡಿದರು. ಒಂದೇ ಪಕ್ಷ, ಒಂದೇ ಗುಲಾಮಗಿರಿ, ಸೆಂಟ್ರಲ್ನಲ್ಲಿ ಕೈಮುಗಿದುಕೊಂಡು ದೈನೇಸಿಯಲ್ಲಿ ದೇಶ ಆಳೋದು ಯಾವ ದೇಶಕ್ಕೂ, ರಾಜ್ಯಕ್ಕೂ ಒಳ್ಳೆಯದಲ್ಲ. ಎನ್ಟಿಆರ್ ನಟನಾಗಿ ಅವರು ಜನತೆಯ ಮನಸ್ಸನ್ನು ಗೆದ್ದಿದ್ದರು. ಅಂತಹ ಶಕ್ತಿಯಾಗಲಿ, ಪರ್ಸನಾಲಿಟಿ ಸ್ಟ್ರೆಂತ್ ಆಗಲೀ ನಮ್ಮಲ್ಲಿಲ್ಲ. ನಂತರ ಅವರು ತಮ್ಮ ಅಳಿಯ ಚಂದ್ರಬಾಬು ನಾಯಿಡು ಅವರನ್ನು ಬಿಟ್ಟು ಅವರು ರಾಷ್ಟ್ರ ರಾಜಕಾರಣಕ್ಕೆ ಹೋದರು. ನಾಯಿಡು ಅತ್ಯುತ್ತಮ ಆಡಳಿತಗಾರ. ಈ ಕಾರಣದಿಂದಲೇ ಅವರು ಆಂಧ್ರವನ್ನು ಮುಂದೆ ತಂದರು. ಆದರೆ ಅವರ ಕುಟುಂಬದಲ್ಲೇ ಒಡಕು ಬಂದು ಎನ್ಟಿಆರ್ ತಮ್ಮ ಇಮೇಜ್ ಕಳೆದುಕೊಂಡರು. ಇದು ಆಂಧ್ರದ ದುರಾದೃಷ್ಟ.

ಬ್ಯೂರಾಕ್ರಸಿ ಅನ್ನೊದು ತಮಿಳುನಾಡಿನಲ್ಲಿ ಅಣ್ಣಾದೊರೈ ಆಳ್ವಿಕೆಯಲ್ಲಿದ್ದಾಗಲೂ ಕಂಡು ಬಂದಿತ್ತು. ಆಗಿನಿಂದಲೂ ಒಟ್ಟಾರೆ ಅಲ್ಲಿ ತಮಿಳು ವಾತಾವರಣ, ತಮಿಳು ಬಾಷೆಯ ಪ್ರಯೋಗ, ತಮಿಳರಿಗೆ ಆದ್ಯತೆ ಅಲ್ಲಿ ಸಿಗಲಾರಂಭಿಸಿತು. ನಂತರ ಎಲ್ಲ ಸಕರ್ಾರಗಳೂ ಅದೇ ಮಾದರಿ ಅನುಸರಿಸಿದವು. ಶಾಸನವಿಲ್ಲದೇ ತಮಿಳು ವಾತಾವರಣ ನಿಮರ್ಾಣವಾಯಿತು. ಈ ಮಾದರಿಯನ್ನು ನಾವು ಕನರ್ಾಟಕದಲ್ಲೂ ಅಳವಡಿಸಿಕೊಳ್ಳುವುದು ಈಗಿನ ಸಂದರ್ಭಕ್ಕೆ ಸೂಕ್ತವಲ್ಲವೆ?

ನಮ್ಮಲ್ಲೂ ನರೇಂದ್ರ ಮೋದಿ ತರಹಾ ಸ್ಟ್ರಾಂಗ್ ಲೀಡರ್ ಬರಬೇಕು ಅನ್ನುತ್ತಾರೆ. ಆದರೆ ನಾವು ಅಪೇಕ್ಷೆ ಪಟ್ಟಂತೆ ಲೀಡರ್ ಬರೋದಿಲ್ಲ. ಮೋದಿ ಗುಜರಾತಿನಲ್ಲಿ ಹುಟ್ಟಿದ್ದು ಒಂದು ಆಕಸ್ಮಿಕ. ನಮ್ಮಲ್ಲಿ ಹುಟ್ಟಲಿಲ್ಲ ಅನ್ನೊದೂ ಒಂದು ಆಕಸ್ಮಿಕ. ಎಲ್ಲಕ್ಕಿಂತಲೂ ಮುಖ್ಯವೆಂದರೆ ಆತ ಬ್ರಹ್ಮಚಾರಿಯಾಗಿದ್ದು ಆತನ ಇಮೇಜ್ ಬೆಳೆಯಲು ಕಾರಣವಾಯಿತು. ಸ್ವಂತಕ್ಕೆ ಏನೂ ಆಸ್ತಿ ಮಾಡಬೇಕೆಂದೇನು ಅವರಿಗಿಲ್ಲ. ಅದಕ್ಕೆ ರಾಜ್ಯಕ್ಕೆ ಏನು ಪ್ರಗತಿ ಬೇಕು ಎಂಬ ಯೋಚನೆ ಮಾಡಿದ್ದಾರೆ. ಎರಡನೆಯದಾಗಿ ಅವರು ಗಾಣಿಗರ ಸಮುದಾಯದವರು. ದೊಡ್ಡ ಉದ್ಯಮಿಯಲ್ಲ. ಬಡತನ ಕಂಡವರು, ಬಲ್ಲವರು. ಆರಂಭದೊಳಗೆ ಆತನಿಗೂ ಸೆಲ್ಫ್ ಡೆವಲಪ್ಮೆಂಟ್ ಕಷ್ಟವೇ ಆಗಿತ್ತು. ಪವರ್ ಸಿಕ್ಕ ಕೂಡಲೇ ಆತ ಡೆವಲಪ್ಮೆಂಟ್ ಶುರು ಮಾಡಿಬಿಟ್ರು. ಗುಜರಾತಿನವರು ಬುದ್ಧಿವಂತರು. ಆಥರ್ಿಕವಾಗಿ ಏನು ಮಾಡಿದರೆ ಏನಾಗುತ್ತೆ ಅನ್ನೋದು ತಿಳಕೊಂಡು ಅವನನ್ನು ನಂಬಿದರು. ಮೋದಿ ಅವರು ತಮ್ಮ ಅಧಿಕಾರವನ್ನು ಸರಿಯಾಗಿ ಬಳಸಿಕೊಂಡರು. ಆತ ನಾಲ್ಕೂವರೆಗೆ ಎದ್ದು ಯೋಗಾಸನ, ಪ್ರಾಣಾಯಾಮ ಮಾಡ್ತಾರೆ. ಸ್ನಾನಾ ಮುಗಿಸಿ ಒಂದು ಲೋಟ ಗಂಜಿ ಕುಡಿದು ಆರೂವರೆ ಹೊತ್ತಿಗೆ ಗೃಹ ಕಚೇರಿಗೆ ಬರ್ತಾರೆ. ಅಷ್ಟೊತ್ತಿಗೆ ಅವರ ಅಸಿಸ್ಟೆಂಟ್ಗಳು ಎಲ್ಲ ಪೇಪರ್ ಓದಿ ಮಾಕರ್್ ಮಾಡಿ ಇಡಬೇಕು. ಅದ್ರಲ್ಲಿ ಏನಾದರೂ ಒಂದು ಹಳ್ಳಿಯಲ್ಲಿ ಸರಿಯಾದ ವೈದ್ಯಕೀಯ ಗಮನವಿಲ್ಲದೇ ಗಭರ್ಿಣಿ ಸತ್ತುಹೋದಳು ಅನ್ನೋ ಸುದ್ದಿ ಇದ್ದರೆ ತಕ್ಷಣ ಅವರು ಸಂಬಂಧ ಪಟ್ಟ ಡೈರೆಕ್ಟರ್ ಆಫ್ ಮೆಡಿಕಲ್ ಸವರ್ಿಸ್ನ ವೈದ್ಯಕೀಯ ಅಧಿಕಾರಿಯನ್ನು ಎಬ್ಬಿಸಿ, `ನಿಮಗೆ ಕೆಲಸ ಮಾಡಲು ಆಗದಿದ್ದರೆ ಬಿಟ್ಟುಬಿಡಿ. ನಾವು ಬೇರೆ ಯಾರ ಹತ್ತಿರಾನಾದ್ರೂ ಮಾಡಿಸ್ತೀವಿ' ಅಂತ ಮುಖ ಮುರಿದ ಹಾಗೆ ಹೇಳ್ತಾರೆ. ಬೇರೆ ಯಾರು ಪತ್ರಿಕೆ ಓದಿ ಇಂಥ ಕಾರ್ಯ ಕೈಗೊಳ್ಳುತ್ತಾರೆ? ಅಂಥ ನೈತಿಕ ಹಕ್ಕನ್ನು ಅವರು ಉಳಿಸಿಕೊಂಡಿದ್ದರಿಂದಾನೇ ಅಧಿಕಾರಿಗಳೂ ಹೆದರ್ತಾರೆ. ಜನಗಳೂ ಅವರನ್ನು ಇಷ್ಟಪಡುತ್ತಾರೆ. ಅಲ್ಲಿ ಲೇಬರ್ ಕ್ಲಾಸ್ನಿಂದ ಹಿಡಿದು ಇಂಡಸ್ಟ್ರಿಯಲಿಸ್ಟ್ವರೆಗೆ ಎಲ್ಲರೂ ಅವನನ್ನು ಪ್ರಶಂಸಿಸುತ್ತಾರೆ.

ಪ್ರಾದೇಶಿಕ ಅಭಿವೃದ್ಧಿಯ ಜೊತೆಗೆ, ನಮಗೆ ಒಂದು ಒಟ್ಟಾರೆ ರಾಷ್ಟ್ರೀಯ ದೃಷ್ಟಿಯೂ ಬೇಕು. ಲಾಲು ಪ್ರಸಾದ್ ಯಾದವ್ ರೇಲ್ವೆ ಮಂತ್ರಿಯಾದಾಗ ತಮ್ಮ ರಾಜ್ಯಕ್ಕೆ ಏನು ಬೇಕೋ ಎಲ್ಲ ಮಾಡಿದ್ರು. ನೀನು ಏನ್ ಮಾಡ್ತಾ ಇದ್ದೀಯಾ ನಿನ್ನ ರಾಜ್ಯಕ್ಕೆ ಮಾತ್ರ ಫೇವರ್ ಮಾಡಿ ಪಕ್ಷಪಾತ ಮಾಡ್ತಾ ಇದ್ದೀಯಾ ಅಂತ ಕೇಳೋ ತಾಕತ್ತು ಕೇಂದ್ರಕ್ಕೆ ಇರಲಿಲ್ಲ. ಏಕೆಂದರೆ ಅವರಿಗೆ ವಿರುದ್ಧ ಹೋದರೆ ಅವರ ಸಕರ್ಾರ ಉಳೀತಿರಲಿಲ್ಲ. ಅದೇ ರೀತಿ ಈಗ ಮಮತಾ ಬ್ಯಾನಜರ್ಿ ಎಲ್ಲಾ ಕೋಲ್ಕತ್ತಾಕ್ಕೆ ಅನುಕೂಲ ಮಾಡ್ತಿದ್ದರೂ ಯಾಕೆ ಅಂತಾ ಕೇಳೋ ಶಕ್ತಿ ಮನಮೋಹನ್ ಸಿಂಗ್ ಅವರಿಗಿಲ್ಲ. ಹಾಗೆ ಮಾಡಿದರೆ ಯುಪಿಎ ಸಕರ್ಾರ ಉಳಿಯೋದು ಕಷ್ಟವೇ. ಈ ಥರದ ಸನ್ನಿವೇಶ ಇದೆಯೇ ಹೊರತು ಇಡೀ ಭಾರತದ ಸಮಗ್ರ ಬೆಳವಣಿಗೆ ದೃಷ್ಟಿಯಿಂದ ಏನಾಗಬೇಕು? ಅದು ರೈಲಾಗಿರಬಹುದು, ಇಲೆಕ್ಟ್ರಿಸಿಟಿ, ಇಂಡಸ್ಟ್ರಿಸ್ ಆಗಿರಬಹುದು. ಇದೆಲ್ಲವನ್ನೂ ಸರಿಯಾಗಿ ನೋಡುವಂಥ ರಾಷ್ಟ್ರೀಯ ದೃಷ್ಟಿ ನಮ್ಮಲ್ಲಿ ಇಲ್ಲ.

ನೆಹರೂ ಕಾಲದಲ್ಲಿ ರಷ್ಯನ್ ಮಾದರಿ ಪ್ಲಾನಿಂಗ್ ಕಮೀಷನ್ ಮಾಡಿದ್ರು. ಅದೂ ಅಷ್ಟೇನೆ. ಎಕನಾಮಿಕ್ ಥಿಂಕಿಂಗ್ ಅನ್ನೋದು ಇದ್ದರೆ ಈ ದೇಶದ ಸಮಗ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಇನ್ನು ಏನೇನು ಅಭಿವೃದ್ಧಿ ಆದರೆ ಚೆನ್ನಾಗಿರುತ್ತದೆ, ಬ್ಯಾಲೆನ್ಸ್ ಆಗುತ್ತೆ, ಅದಕ್ಕೆ ಬೇಕಾದ ಮೂಲಭೂತ ಸೌಕರ್ಯ ರಸ್ತೆ, ರೈಲು, ವಿದ್ಯುತ್ ಎಲ್ಲದರ ಅಭಿವೃದ್ಧಿ ಹೇಗೆ ಎಂಬುದನ್ನೆಲ್ಲ ಮಾಡಿ ಉದ್ಯಮಿಗಳಿಗೆ ಮತ್ತು ರಾಜ್ಯಗಳಿಗೆ ಆನೆಸ್ಟ್ ಅಡ್ವೈಸ್ ಮಾಡ್ಬೇಕು. ಇದು ಪ್ರಾಮಾಣಿಕ ಸಲಹೆ ಆಗಿರಬೇಕೇ ವಿನಾ ಸವಾರಿಯಾಗಿರಬಾರದು. ಆದರೀಗ ನಡೆತೀರೋದು ಸವಾರಿಯೇ ವಿನಾ ಸಲಹೆ ಅಲ್ಲ.

ರಾಷ್ಟ್ರೀಯ ಅನ್ನೋವಾಗ ಇನ್ನೂ ಒಂದು ವಿಷಯ ನೆನಪಿಡಬೇಕು. `ಬೇರೆ ನಾಯಕರುಗಳೆಲ್ಲ ಒಂದೊಂದು ರಾಜ್ಯಕ್ಕೆ ಸೇರಿದವರು. ಸದರ್ಾರ್ ಪಟೇಲ್ ಗುಜರಾತಿ. ಗೋವಿಂದ್ ವಲ್ಲಭ್ ಪಂತ್ ಯುಪಿಗೆ ಸೇರಿದವರು. ಯಾವುದಕ್ಕೂ ಸೇರದೇ ಇರುವವರು ನೆಹರೂ. ಅದಕ್ಕೆ ಅವರೇ ರಾಷ್ಟ್ರೀಯ ನಾಯಕರಾಗಲು ಅರ್ಹರು' - ಅನ್ನೋ ಇಮೇಜ್ ಕೊಟ್ಟವರು ನಮ್ಮ ಮೀಡಿಯಾದವರು. ಮುಂದೆ ಇಂದಿರಾ ಗಾಂಧಿಗೂ ಅಂತಹ ಇಮೇಜ್ ಕೊಟ್ಟರು. ರಾಜೀವ್ ಗಾಂಧಿಗೂ ಅದನ್ನೇ ಕೊಟ್ಟರು. ಅಂದರೆ ಏನರ್ಥ? ಎಲ್ಲಿಗೂ ಸೇರದೇ ಇರದವರೇ ಭಾರತಕ್ಕೆ ಲಾಯಕ್ಕು ಅಂತಲೆ? ಇದು ಹಾಗಲ್ಲ. ಈ ದೇಶದ ರಾಜ್ಯಕ್ಕೆ ಸೇರಿಯೂ ಇಡೀ ದೇಶವನ್ನು ದೃಷ್ಟಿಯಲ್ಲಿಟ್ಟುಕೊಂಡವರು ಆಗಬೇಕು. ವಾಜಪೇಯಿ ಅವರಿಗೆ ಅಂತಹ ಶಕ್ತಿ ಇತ್ತು. ನೆಲದ ಮಟ್ಟದಲ್ಲಿ ಅವರು ಇದನ್ನು ತಿಳಿದುಕೊಂಡಿದ್ದರು.

ಅಮೆರಿಕದಲ್ಲಿ ಇಂಡಸ್ಟ್ರಿ ಮೇಲೆ ಕೈಹಾಕೋ ಅಧಿಕಾರ ಸಕರ್ಾರಕ್ಕಿಲ್ಲ. ಅದಕ್ಕೆ ಅಲ್ಲಿ ಏನೇ ಒಂದು ಉದ್ಯಮ ಪ್ರಾರಂಭಿಸಬೇಕಾದರೆ ವೆಂಚರ್ ಫಂಡ್ ಅಂತ ಇರುತ್ತೆ. ಅಲ್ಲಿ ಪ್ಲ್ಯಾನ್ ತೋರಿಸಿದರೆ ಅವರು ಪರೀಕ್ಷೆ ಅದು ವಕರ್್ಔಟ್ ಆಗೋ ಹಾಗಿದ್ರೆ ಅವ್ರು ಅಂಗೀಕರಿಸುತ್ತಾರೆ. ಎಷ್ಟು ದುಡ್ಡು ಬೇಕೋ ತಗೋ ಅಂತ ಕೊಡ್ತಾರೆ. ಸೂಪರ್ವಿಷನ್ ತಮ್ಮ ಕೈಯಲ್ಲೇ ಇಟ್ಟುಕೊಂಡಿರ್ತಾರೆ. ಹೀಗಾಗಿ ಅಲ್ಲಿ ಉದ್ಯಮಗಳು ಬೆಳೆಯುತ್ತವೆ. ನಮ್ಮಲ್ಲಿ ಆರಂಭದ ದೆಸೆಯಲ್ಲಿ ನಮ್ಮ ಎಕಾನಮಿಯನ್ನು ಕಮ್ಯೂನಿಸ್ಟ್ ಎಕಾನಮಿಯಾಗಿ ನೆಹರೂ ಅವರು ಆರಂಭ ಮಾಡಿದರು. ಪರಿಣಾಮ ಏನಾಯಿತು ಅಂದರೆ ಪ್ರತಿಯೊಬ್ಬ ಉದ್ಯಮಿಗೂ ಸಕರ್ಾರವನ್ನೇ ಓಲೈಸುವ ಗತಿ ಬಂದಿತು. ಅದು ಇಂದಿರಾಗಾಂಧಿ ಕಾಲದೊಳಗೆ ರಾಜಕೀಯಕ್ಕೆ ತಿರುಗಿತು. 97.5 ಪಸರ್ೆಂಟ್ ಹೈಯೆಸ್ಟ್ ಲೆವೆಲ್ ಇನ್ಕಮ್ ಟ್ಯಾಕ್ಸ್ ಪ್ಲಸ್ ಸಚರ್ಾಜರ್್. ಇದರಿಂದಾಗಿ ಕಳ್ಳ ಲೆಕ್ಕ ಶುರುವಾಯಿತು. ಇಂದಿರಾಗಾಂಧಿಗೆ ಇದು ಗೊತ್ತಿರಲಿಲ್ವೆ? ಗೊತ್ತಿತ್ತು. ಅವರಿಗೆ ಪಾಟರ್ಿ ಫಂಡ್ ಸಿಕ್ತಿತ್ತು. ಆ ಕಾಲದಲ್ಲಿ ವಿರೋದಿ ಪಕ್ಷದವರಿಗೆ ಬಾವುಟ ಕೊಳ್ಳಲು ಮೂರು ಕಾಸು ಇತರ್ಿಲರ್ಿಲ್ಲ. ಈ ಪಕ್ಷ ಎಲೆಕ್ಷನ್ ಮೇಲೆ ಎಲೆಕ್ಷನ್ ಗೆಲ್ಲುತ್ತಾ ವಿಜೃಂಭಿಸುತ್ತಲೇ ಬಂತು. ಪರಿಣಾಮ ನಮ್ಮ ಉದ್ಯಮಿಗಳಿಗೆ ಸಕರ್ಾರದ ವಿರೋಧ ಕಟ್ಟಿಕೊಂಡು ಬದುಕಲು ಆಗುವುದಿಲ್ಲ ಅನ್ನೋದು ಖಾತ್ರಿಯಾಯಿತು. ಈಗ ಸ್ವಲ್ಪ ಲಿಬರಲೈಸೇಷನ್ನಿಂದ ಇದು ಸ್ವಲ್ಪ ಕಡಿಮೆಯಾಗಿದ್ದರೂ ಈಗಲೂ ಸಕರ್ಾರದ ವಿರೋಧ ಕಟ್ಟಿಕೊಳ್ಳಲು ನಮ್ಮ ಉದ್ಯಮಿಗಳು ಸಿದ್ಧವಿಲ್ಲ. ಅಮೆರಿಕದಲ್ಲಿ ಇದು ಇಲ್ಲ. ಅವರು ಯಾವ ಸಕರ್ಾರಕ್ಕೂ ಯಾವುದೇ ಪಾಟರ್ಿಗೂ ಅವರು ಕೇರ್ ಮಾಡೋಲ್ಲ.

ಬ್ರಿಟನ್ನಲ್ಲಿ ಹೌಸ್ ಆಫ್ ಲಾಡ್ಸರ್್ ಅಂತ ಇದೆ. ಲೋವರ್ ಹೌಸ್ನಲ್ಲಿ ಏನೇನು ಚಚರ್ೆ ಆಗಿರುತ್ತೆ. ಅದನ್ನೆಲ್ಲ ಎಕ್ಸಪಟರ್್ ಲೆವೆಲ್ನಲ್ಲಿ ಅಲ್ಲಿನ ಅಪ್ಪರ್ ಹೌಸ್ ಚಚರ್ೆ ನಡೆಸುತ್ತೆ. ಅಲ್ಲಿ ಹೌಸ್ ಆಫ್ ಲಾ ಅಂತ ಇರುತ್ತೆ. ಅಲ್ಲಿ ಬೇರೆ ಬೇರೆ ಸೆಕ್ಷನ್ ಇರುತ್ವೆ. ಸೀನಿಯರ್ ಮೋಸ್ಟ್ ಜಜ್ಸ್ ಆಗಿ ನಿವೃತ್ತರಾದವರು ಅಥವಾ ದೊಡ್ಡ ದೊಡ್ಡ ವಕೀಲರಾಗಿ ಪ್ರಸಿದ್ಧರಾದವರಿಗೆ ಇಲ್ಲಿ ಹುದ್ದೆ ಕೊಡಲಾಗುತ್ತದೆ. ಇವರು ಎಂ.ಪಿ.ಗೆ ಸಮಾನರು. ನಮ್ಮ ಕಾನೂನಿನಲ್ಲಿ ಏನು ಬದಲಾವಣೆ ಆಗಬೇಕು ಅನ್ನೋದಕ್ಕೆ ಅಲ್ಲಿ ಲಾ ಕಮೀಷನ್ ಅಂತ ಇರುತ್ತೆ. ಅಲ್ಲಿ ರೀಸಚರ್್ ಆಗ್ತಾನೇ ಇರುತ್ತೆ. ಅಲ್ಲಿ ಎಕನಾಮಿಸ್ಟ್, ಫ್ಯಾಮಿಲಿಗೆ ಸಂಬಂಧಪಟ್ಟವರು ಇರುತ್ತಾರೆ. ಕೋಟರ್ಿನಲ್ಲಿ ಏನೇನು ತೀಮರ್ಾನ ಆಗಿರುತ್ತದೆ ಎಲ್ಲವನ್ನೂ ಅವರು ಚಚರ್ೆ ಮಾಡುತ್ತಿರುತ್ತಾರೆ. ಕಾನೂನಿಗೆ ಸಂಬಂಧ ಪಟ್ಟದ್ದನ್ನು ಮಾಡುವ ಅವರನ್ನು ಲಾ ಲಾಡ್ಸರ್್ ಅಂತ ಕರೀತಾರೆ. ಮಾಡಿದ ಕೆಲಸದಲ್ಲಿ ಏನು ಬದಲಾವಣೆ ಮಾಡಬೇಕು ಅನ್ನೋದನ್ನು ಅವರು ಪ್ರಧಾನಿಗೆ ಕೊಡ್ತಾರೆ. ಪ್ರಧಾನಿ ಅದನ್ನು ಓದಿ ಬದಲಾವಣೆ ಮಾಡ್ತಾರೆ.

ಎಷ್ಟೋ ವಿಷಯಗಳಲ್ಲಿ ನಾವು ಡೀಜನರೇಟ್ ಆಗಿದ್ದೇವೆ ಅನಿಸುತ್ತದೆ. ಒಳ್ಳೆಯ ಸುಸಂಸ್ಕೃತ ಜನ ಭಾರತದಲ್ಲಿ ಇನ್ನೂ ಇದ್ದಾರೆ. ಆದರೆ ದೇಶದ ಜೀವನ ನೋಡಿದಾಗ ನಾವು ಬಹಳ ಡೀಜನರೇಟ್ ಸ್ಥಿತಿಯಲ್ಲಿದ್ದೇವೆ ಅನಿಸುತ್ತೆ. ಇದನ್ನು ಹೇಳಿದ್ರೆ ನಮ್ಮ `ದೇಶಭಕ್ತ'ರಿಗೆ ಕೋಪ ಬಂದುಬಿಡುತ್ತೆ. ಈಗಿನ ಸ್ಥಿತ್ಯಂತರಕ್ಕೆ ನಮ್ಮ ರಾಜಕಾರಣಿಗಳೇ ಕಾರಣ. ಈ ಮೊದಲು ನಮ್ಮ ಹಳ್ಳಿ ರೈತರು ಬೆಳಕು ಹರಿಯೋದ್ರೊಳಗೆ ಹೊಲಕ್ಕೆ ಹೋಗಿ ನೇಗಿಲು ಹೂಡಿ ಊಳೋರು, ಕೆಲಸ ಮಾಡೋವ್ರು. ಏಕೆಂದರೆ ನಮ್ಮದು ಉಷ್ಣದೇಶ. ಎಂಟು ಗಂಟೆಗೆ ಅವರಿಗೆ ಮನೆ ಜನ ಉಟಾ ತಂದು ಕೊಡೋರು. ಹನ್ನೆರಡು ಗಂಟೆಯೊಳಗೆ ಅವರು ಸಾಕಷ್ಟು ಕೆಲಸಾ ಮುಗಿಸಿಬಿಡೋರು. ಅದಕ್ಕೆ ಒಪ್ಪೊತ್ತಿನ ನೇಗಿಲು ಅಂತ ಇಂತಿಷ್ಟು ಕೂಲಿ ಕೊಡಲಾಗುತ್ತಿತ್ತು. ಇವತ್ತು ನಮ್ಮ ಹಳ್ಳಿಗಳು ಬಹಳ ಹಾಳಾಗಿವೆ ಅಂತಾರಲ್ಲ. ಇದಕ್ಕೆ ಬಹುತೇಕ ನಮ್ಮ ರಾಜಕಾರಣಿಗಳೇ ಕಾರಣ. ನಮ್ಮಲ್ಲಿ ಬಹುತೇಕ ಎಮ್ಎಲ್ಎಗಳು ಹಳ್ಳಿಯಿಂದ ಬಂದೋರೇ. ಆದರೆ ಇವರೇ ಎಲೆಕ್ಷನ್ ಸಮಯದಲ್ಲಿ ಹಳ್ಳಿಗೆ ಹೊಗಿ ಕೆಲಸಗಾರರಿಗೆ, `ಬೆಳ್ಳಂಬೆಳಿಗ್ಗೆ ಯಾಕೋ ಹೋಗ್ತಿಯಾ? ಹತ್ತು ಗಂಟೆಗೆ ಮೊದಲು ಪಟ್ಟಣದಲ್ಲಿ ಯಾರೂ ಕೆಲಸಕ್ಕೆ ಹೊಗೋದಿಲ್ಲ. ಕೂಲಿ ಒಂದು ದಿನಕ್ಕೆ ಇನ್ನೂರು ಇನ್ನೂರೈವತ್ತು ಕೊಡು ಅಂತಾ ಕೇಳೋ' ಅಂತಾ ಹೇಳಿಕೊಟ್ಟಿರ್ತಾರೆ. ಇದರಿಂದಾಗಿ ಒಂಬತ್ತು ಹತ್ತು ಗಂಟೆಗೆ ಮೊದಲು ಕೆಲಸಕ್ಕೆ ಬರೋದಿಲ್ಲ ಆಳುಗಳು. ಇದನ್ನೆಲ್ಲಾ ಹೇಳಿಕೊಡೋರು, ಇದೇ ಜನಪ್ರತಿನಿಧಿಗಳು, ಎಮ್ಎಲ್ಎಗಳು. ಡಿಜನರೇಷನ್ಗೆ ಕಾರಣವೇ ನಮ್ಮ ಜನನಾಯಕರು.

ನನಗೆ ಗೊತ್ತಿರೋ ಒಂದು ಸಾಫ್ಟವೇರ್ ಕಂಪನಿಗೆ ನಮ್ಮ ರಾಜಕಾರಣಿಯೊಬ್ಬರು ಒಂದು 75 ಮಂದಿಯ ಹೆಸರು ಬರೆದು, `ಇವರಿಗೆಲ್ಲ ಕೆಲಸ ಕೊಡಿ' ಅಂತ ಬರೆದಿದ್ದರು. ಅವರೆಲ್ಲ ಜಯಕಾರ ಹಾಕಲು ಮಾತ್ರ ಯೋಗ್ಯರೇ ವಿನಾ ಸಾಫ್ಟವೇರ್ ಕಂಪನಿಯಲ್ಲಿ ಏನು ಕೆಲಸ ಮಾಡ್ತಾರೆ? ಅವಾಗ ಕಂಪನಿಯವರು ಕೊಡೋಕಾಗೋಲ್ಲ ಅಂದ್ರು. ಅವರ ಮೇಲೆ ಈ ರಾಜಕಾರಣಿ ಈಗ ವಿಷಕಾರ್ತಿದಾರೆ. ಪರಿಸ್ಥಿತಿ ಹೀಗಿರುವಾಗ ನಾವು ಹೇಗೆ ಉದ್ಧಾರವಾಗುವುದು ಸಾಧ್ಯ?

ಈಗ ವಿಶ್ವ ಕನ್ನಡ ಸಮ್ಮೇಳನದಂಥ ಸಂದರ್ಭದಲ್ಲಿ ಮುಖ್ಯವಾದ ಒಂದು ಗುರಿ ಇಟ್ಟುಕೊಂಡು ಕೆಲಸ ಮಾಡಿದರೆ ಸಾಕು. ಮುಖ್ಯವಾಗಿ ಆಥರ್ಿಕ ಅಭಿವೃದ್ಧಿ, ಕನರ್ಾಟಕದ ರಾಜಕೀಯ ಅಭಿವೃದ್ಧಿ ಕುರಿತ ಚಚರ್ೆ ಆಗ್ಬೇಕು. ಒಬ್ಬರ ಕಾಲು ಒಬ್ಬರು ಎಳಿಯೋದು ಬಿಟ್ಟು, ಪೊಲಿಟಿಕಲ್ ಮೆಚ್ಯೂರಿಟಿ ತೋರಿಸಬೇಕು. ಬ್ರಿಟನ್ನಲ್ಲೂ ಇದೇ ಸನ್ನಿವೇಶ ಇದೆ. ಅಲ್ಲೂ ಕೊಲೀಶನ್ ಸಕರ್ಾರ ಇದೆ. ಆದರೆ ವಿರೋಧ ಪಕ್ಷ ಆಡಳಿತ ಪಕ್ಷದ ಕಾಲೆಳೆಯಲು ಜನ ಬಿಡುವುದಿಲ್ಲ. ಕಾಲೆಳೆಯಲು ಹೋದರೆ `ನೀನು ಆಡಳಿತ ನಡೆಸುವ ಮೆಜಾರಿಟಿ ನಿನ್ನಲ್ಲಿಲ,್ಲ ಸುಮ್ಮನಿರಯ್ಯಾ' ಅಂತಾ ದಬಾಯಿಸ್ತಾರೆ. ಈಗ ರೀಸೆಷನ್ ಸಂದರ್ಭದಲ್ಲಿ ಅಲ್ಲಿ ಎಷ್ಟು ಆಥರ್ಿಕ ಸಂಕಷ್ಟದಲ್ಲಿದೆ ಗೊತ್ತಾ? ಜಾಬ್ಸ್ ಕಟ್ ಮಾಡ್ತಾ ಇದ್ದಾರೆ. ಸಂಬಳ ಎಲ್ಲಾ ಕಡಿಮೆ ಮಾಡ್ತಾ ಇದ್ದಾರೆ. ಇಂಥ ಸ್ಥಿತಿಯಲ್ಲಿ ಸ್ಟೆಬಿಲಿಟಿ ಇಲ್ಲದೇ ಇದ್ದರೆ ದೇಶದ ಸ್ಥಿತಿ ಏನು ಅಂತಾ ಅಲ್ಲಿನ ಜನಗಳು, ಸಕರ್ಾರ, ಅಧಿಕಾರಿಗಳು, ಮಿಡಿಯಾದವರು ಎಲ್ಲ ಅಲ್ಲಿ ಯೋಚನೆ ಮಾಡ್ತಾ ಇದ್ದಾರೆ. ಅಷ್ಟೇ ಅಲ್ಲ ಅರಮನೆ ವಿದ್ಯುತ್ ಖರ್ಚನ್ನು ಕಡಿಮೆ ಮಾಡಬೇಕು ಅಂತಾ ಬ್ರಿಟನ್ ರಾಣಿಗೆ ಅಲ್ಲಿನ ಪ್ರಧಾನಿ ಪರ್ಸನಲ್ ಆಗಿ ಅಪೀಲ್ ಮಾಡಿದ್ದಾರೆ ಅಂದರೆ ತಿಳಿದುಕೊಳ್ಳಿ.

ನಾವು ಯಾಕೆ ಮೆಚ್ಯೂರ್ ಆಗಿ ಯೋಚನೆ ಮಾಡಬಾರದು? ಇವತ್ತು ವಿಶ್ವಕನ್ನಡ ಸಮ್ಮೇಳನದಲ್ಲಿ ಚಚರ್ಿಸಬೇಕಾದದ್ದು - ಆಥರ್ಿಕ ಸದೃಢತೆ, ಅಭಿವೃದ್ಧಿ, ಅದಕ್ಕೆ ಬೇಕಾದಂಥ ವಾತಾವರಣ ಮತ್ತು ಸಹಕಾರ. ದುರಾದೃಷ್ಟವಶಾತ್ ನಮ್ಮಲ್ಲಿ ಬಹಳ ಮಟ್ಟದ ಹಣ ಕೇಂದ್ರದ ಹತ್ತಿರವಿದೆ. ಅಲ್ಲಿಂದ ಹಣ ಪಡೆಯಲು ಏನು ಮಾಡಬೇಕು? ಏನೇನು ಪಡೆಯಬೇಕು? ಅದನ್ನು ಪಡೆಯಲು ರಾಜಕೀಯ ಭಿನ್ನಾಬಿಪ್ರಾಯ ಬರಬಾರದು ಅನ್ನೋದರ ಮಟ್ಟಿಗೆ ಸಹಕಾರ ಕೋಡೋದರ ಬಗ್ಗೆ ಯೋಚಿಸಿದರೆ ಮತ್ತು ಸ್ಪಷ್ಟವಾಗಿ ಇದ್ದುಬಿಟ್ಟರೆ ಸಂಕಷ್ಟ ಬಾರದು ಅಂತ ನನ್ನ ಅನಿಸಿಕೆ. ಮನಿ ಪವರ್ ಇಲ್ಲದೇ ಹೋದರೆ ನಮ್ಮ ಧಮರ್ಾನೂ ಉಳಿಸಿಕೊಳ್ಳಲಾಗುವುದಿಲ್ಲ. ನಮ್ಮ ಸಂಸ್ಕೃತಿನೂ ಉಳಿಸಿಕೊಳ್ಳಲು ಆಗುವುದಿಲ್ಲ. ಇದೆಲ್ಲಾ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ ವಿಶ್ವಕನ್ನಡ ಸಮ್ಮೇಳನದ ಈ ಸಂದರ್ಭದಲ್ಲಿ ಮುಖ್ಯವಾಗಿ ಹಣ ಇಲ್ಲದೇ ಹೋದಲ್ಲಿ ಯಾವುದೇ ರೀತಿಯ ದೊಡ್ಡ ದೊಡ್ಡ ಕೆಲಸಗಳನ್ನೂ ಮಾಡಲು ಸಾಧ್ಯವಿಲ್ಲ ಅನ್ನೋದೇ ಇಲ್ಲಿ ಮುಖ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ