ಗುರುವಾರ, ಜೂನ್ 04, 2009

ರೋಹ್ ತರಹದ ಸೂಕ್ಷ್ಮ ಸಂವೇದಿಗಳು ನಮ್ಮಲ್ಲೇಕಿಲ್ಲ?

ಇದೇ ಮೇ 23, ಶನಿವಾರ, ದಕಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್ ಮೂ-ಹ್ಯೂನ್ ಆತ್ಮಹತ್ಯೆಗೆ ಶರಣಾದರು. ಭ್ರಷ್ಟಾಚಾರದ ಆರೋಪಗಳನ್ನು ಹೊತ್ತು ನಿಂತಿದ್ದ ಅವರು, ತಮ್ಮ ನೈತಿಕ ಆತ್ಮಸಾಕ್ಷಿಗೆ ಮಣಿದು, ಚೀಟಿ ಬರೆದಿಟ್ಟು, ಬೆಟ್ಟದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡರು.

ರಾಜಕಾರಣಿಗಳು ಭ್ರಷ್ಟಾಚಾರದ ಆರೋಪ ಹೊತ್ತು ಆತ್ಮಹತ್ಯೆ ಮಾಡಿಕೊಳ್ಳುವುದು ಹೊಸದೇನಲ್ಲ. ಅನೆಕ ದೇಶಗಳಲ್ಲಿ ಹೀಗೆ ನಡೆದಿದೆ. ಜಪಾನ್ನಲ್ಲಂತೂ ರಾಜಕೀಯ ನಾಯಕರ ಆತ್ಮಹತ್ಯಾ ಪರಂಪರೆಯೇ ಇದೆ. ಇದು ದುರದೃಷ್ಟವೇ ಸರಿ. ಮೊದಲಿಗೆ ಭ್ರಷ್ಟಾಚಾರ ಮಾಡುವುದೇ ಹೇಯವಾದ ಕೆಲಸ. ಅನಂತರ ಸಿಕ್ಕಿಬಿದ್ದಾಗ ಜನರಿಗೆ ಮುಖ ತೋರಿಸುವುದು ಹೇಗೆ ಎಂಬ ಒಳಗುದಿ ಬೇರೆ.

ರೂಹ್ 2003-2008ರ ಅವಧಿಯಲ್ಲಿ ದಕ್ಷಿಣ ಕೊರಿಯಾದ ಆದ್ಯಕ್ಷರಾಗಿದ್ದರು. ಅಧಿಕಾರದ ಆರಂಭದಲ್ಲಿ ಸಾಕಷ್ಟು ಭರವಸೆ ಹುಟ್ಟಿಸಿದ್ದ ಅವರು ಅದಕ್ಷತೆ, ವೈಯಕ್ತಿಯ ನಡವಳಿಕೆಯ ದೋಷಗಳಿಂದಾಗಿ ಕ್ರಮೇಣ ಜನರ ನಂಬಿಕೆ, ಆದರಗಳನ್ನು ಕಳೆದುಕೊಂಡರು. ಅಧಿಕಾರಾವಧಿ ಮುಗಿದ ನಂತರ ಭ್ರಷ್ಟಾಚಾರದ ಆರೋಪ ಅವರ ಹೆಗಲೇರಿ ಕಾಡಿತು. ಆತ್ಮಹತ್ಯೆಯೊಂದೇ ಪರಿಹಾರ ಎಂದು ಅವರಿಗನಿಸಿತು. ಆತ್ಮಹತ್ಯೆಯ ಬದಲು ಅವರು ಜನರ ಕ್ಷಮೆ ಕೇಳಬಹುದಿತ್ತು. ಶಿಕ್ಷೆ ಅನುಭವಿಸಿ `ಪರಿಶುದ್ಧ'ರಾಗಬಹುದಿತ್ತು. ಆದರೆ ಅದಕ್ಕೆ ಇನ್ನೊಂದು ರೀತಿಯ ಧೈರ್ಯ, ವಿಶಿಷ್ಟ ವ್ಯಕ್ತಿತ್ವ ಬೇಕಾಗುತ್ತವೆ.

ಆದರೆ ಇಲ್ಲಿ ನಾವು ಗಮನಿಸಬೇಕಾದ ಆಂಶ ಅದಲ್ಲ. ಸಾರ್ವಜನಿಕ ಜೀವನದ ಈ ವ್ಯಕ್ತಿ ಸಾರ್ವಜನಿಕ ಅಭಿಪ್ರಾಯಗಳಿಗೆ ಎಷ್ಟರ ಮಟ್ಟಿಗೆ ಪ್ರತಿಸ್ಪಂದನೆ ತೋರುತ್ತಾನೆ, ಎಷ್ಟು ಮಣಿಯುತ್ತಾನೆ ಎಂಬುದು ಇಲ್ಲಿ ಗಮನಾರ್ಹ. ಭಾರತೀಯ ರಾಜಕಾರಣಿಗಳ ಪಕ್ಕದಲ್ಲಿ ರೂಹ್ ಅನ್ನು ಕಲ್ಪಿಸಿಕೊಂಡು ನೋಡಿದರೆ, ಅವರು ನಿಜಕ್ಕೂ ಬೇರೆ ರೀತಿಯಲ್ಲೇ ಕಾಣುತ್ತಾರೆ.

ನಮ್ಮ ಯಾವ ರಾಜಕೀಯ ಮುಖಂಡನಿಗೆ ಇಂತಹ ಸೂಕ್ಷ್ಮ ಚರ್ಮವಿದೆ? ನಮ್ಮ ಯಾವ ಮುಖಂಡರು ತಮ್ಮ ಆತ್ಮಶೋಧನೆ ಮಾಡಿಕೊಂಡಿದ್ದಾರೆ?

ಶಿಬು ಸೊರೇನ್ ಅಂತಹವರಿಂದ ಜನರು ಎಂತಹ ಸಂವೇದನೆಯನ್ನು ನಿರೀಕ್ಷಿಸಬಹುದು? ಆತನ ಬಾಲಬಡುಕರ ಪಾಲಿಗೆ ಆತ ಈಗಲೂ `ಗುರೂಜಿ'! ಸಿಬಿಐ ಸ್ಪೆಷಲ್ ಕೋಟರ್ು `ನೀನು ತಪ್ಪಿತಸ್ಥ' ಎನ್ನುತಿದ್ದಾಗ, ಕಾಂಗ್ರೆಸ್ ನಾಯಕ ಎ. ಸುಖ್ರಾಮ್ ಅವರ ಸಂವೇದನೆ ಹೇಗಿತ್ತು ನೆನಪಿಸಿಕೊಳ್ಳಿ. ಹಿಮಾಚಲ ಪ್ರದೇಶದ ಅವರ ನಿವಾಸದಲ್ಲಿ 13 ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿಗಳಷ್ಟು ಮೌಲ್ಯದ ನೋಟಿನ ಕಟ್ಟುಗಳು ಸಿಕ್ಕಿಬಿದ್ದಿದ್ದವು. ಆ ಹಣದ ಮೂಲ ಯಾವುದು? ತಾವು ಹೇಗೆ ನಿದರ್ೋಷಿ ಎಂದು ವಿವರಿಸುವಲ್ಲಿ ಅವರು ವಿಫಲರಾದರು. ನ್ಯಾಯಾಲಯ ಈಚೆಗೆ ಅವರಿಗೆ 3 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಆದರೂ 82 ವರ್ಷದ ಸುಖರಾಮ್ ವಿಚಲಿತರಾಗಲಿಲ್ಲ. ಒಂದಿಷ್ಟೂ ಅಳುಕಿಲ್ಲದೇ `ಇವೆಲ್ಲ ನನ್ನನ್ನು ಸಿಕ್ಕಿಹಾಕಿಸಲು ನನ್ನ ಶತ್ರುಗಳು ಮಾಡಿದ ಕುತಂತ್ರ' ಎಂದುಬಿಟ್ಟರು. ಅವರ ನಿವಾಸದಲ್ಲಿದ್ದ ಹಣ ಯಾರದ್ದೇ ಆಗಿರಲಿ, ಅಷ್ಟು ಭಾರಿ ಧನರಾಶಿಯನ್ನು ತಾವು ಕಾನೂನುಬಾಹಿರವಾಗಿ ಇಟ್ಟುಕೊಂಡಿದ್ದು ತಪ್ಪು, ಕೊನೆಯ ಪಕ್ಷ ನೈತಿಕವಾಗಿಯಾದರೂ ತಾನು ತಪ್ಪಿತಸ್ಥ ಎಂಬ ಮಾತು ಅವರ ಬಾಯಿಂದ ಬರಲೇ ಇಲ್ಲ.

ಅದೇ ರೀತಿ ಬಿಜೆಪಿ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಅವರು `ತೆಹೆಲ್ಕಾ ಸ್ಟಿಂಗ್ ಆಪರೇಷನ್'ಗೆ ಬಲಿಯಾದಾಗ ಹೇಳಿದ್ದೇನು? ಲಕ್ಷ ರೂಪಾಯಿಗಳ ಕಟ್ಟನ್ನು ಅವರು ತೆಗೆದು ಇಟ್ಟುಕೊಂಡ ವೀಡಿಯೋ ಜಗಜ್ಹಾರಾಹೀರಾದ ಮೇಲೂ `ನಾನು ದಲಿತ, ಹೀಗಾಗಿ ನನ್ನನ್ನು ಶೋಷಿಸಲಾಗುತ್ತಿದೆ' ಎಂಬರ್ಥದ ಮಾತು ಅವರ ಬಾಯಿಯಿಂದ ಬಂತು! ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತು ನಿಂತಾಗ ಮಹಮ್ಮದ್ ಅಜರುದ್ದೀನ್ ಹೇಳಿದ್ದು, `ನಾನು ಮುಸ್ಲಿಂ ಎಂಬ ಪೂವರ್ಾಗ್ರಹದಿಂದ ನನ್ನನ್ನು ಸಿಕ್ಕಿಹಾಕಿಸಿದ್ದಾರೆ' ಎಂದು!

ನಮ್ಮಲ್ಲಿ ಎಲ್ಲೆಲ್ಲೂ ನೈತಿಕತೆಯ ಅಭಾವ ಎದ್ದು ಕಾಣುತ್ತ್ತಿದೆ. ಸಾರ್ವಜನಿಕ ಅಭಿಪ್ರಾಯಕ್ಕೆ ಸೂಕ್ತವಾಗಿ ಸ್ಪಂದಿಸುವ, ಸೂಕ್ತ ಸಂವೇದನೆ ತೋರುವ, ಜನರ ಭಾವನೆಗಳಿಗೆ ಮಯರ್ಾದೆ ಕೊಡುವೆ ಕನಿಷ್ಠ ಸೌಜನ್ಯವೂ ಮರೆಯಾಗಿದೆ. ಕಡೆಯ ಪಕ್ಷ ಸಿಕ್ಕಿಹಾಕಿಕೊಂಡ ಮೇಲಾದರೂ `ಜನರಿಗೆ ಮುಖ ತೋರಿಸುವುದು ಹೇಗೆ' ಎಂಬ ಪ್ರಜ್ಞೆ ನಮ್ಮ ಯಾವ ಮುಖಂಡರನ್ನೂ ಕಾಡುತ್ತಿಲ್ಲ. ಭ್ರಷ್ಟಾಚಾರಿಯೋ, ಅಲ್ಲವೋ, ಆದರೆ ರೋಹ್ ಮೂ ಹ್ಯೂನ್ ಅವರಿಗೆ ನೈತಿಕ ಪ್ರಶ್ನೆ, ಪಾಪಪ್ರಜ್ಞೆ ಕಾಡಿರಬಹುದು. ಸಾರ್ವಜನಿಕ ಅಭಿಪ್ರಾಯಕ್ಕೆ ಮಣಿದರೋ, ಕರಾಳ ವಾಸ್ತವತೆಗೆ ಸಂವೇದಿಸಿದರೋ, ಒಟ್ಟಿನಲ್ಲಿ ಅವರ ಆತ್ಮಸಾಕ್ಷಿ ಸಾಯಲಿಲ್ಲ ಎಂಬುದನ್ನು ಎಲ್ಲರೂ ಒಪ್ಪಲೇಬೇಕು.

ಎಲ್ಲ ಹಗರಣಗಳ ತಾಯಿ ಭೋಪೋಸರ್್ ವಿಷಯಕ್ಕೆ ಬರಲೇಬೇಕು. ರಾಜೀವ್ ಗಾಂಧಿ 1984ರಲ್ಲಿ ಪ್ರಧಾನಿಯಾದ ಹೊಸದರಲ್ಲಿ `ಮಿಸ್ಟರ್ ಕ್ಲೀನ್' ಎನಿಸಿದ್ದರು. ಅಂದರೆ ಅವರ ಮೇಲೆ ಯಾವುದೇ ಆರೋಪ ಇರಲಿಲ್ಲ ಎಂದಲ್ಲ. ಸೋವಿಯತ್ ಒಕ್ಕೂಟದ ಕೆಜಿಬಿ ಗೂಢಚಾರ ಏಜೆನ್ಸಿಯಿಂದ ಕೋಟಿಗಟ್ಟಲೆ ಹಣವನ್ನು ರಾಜೀವ್ ಕುಟುಂಬದವರು ಪಡೆದಿದ್ದಾರೆ ಎಂಬ ಆರೋಪ ಇತ್ತು. ಡಾ. ಯೆವ್ಗೆನಿಯಾ ಆಲ್ಬ್ಯಾಟ್ಸ್ ಅವರು ಕೆಜಿಬಿಯ ರಹಸ್ಯ ಫೈಲುಗಳನ್ನು ಪರಿಸೀಲಿಸಿ ಬರೆದ ಪುಸ್ತಕ, `ದಿ ಸ್ಟೇಟ್ ವಿದಿನ್ ಎ ಸ್ಟೇಟ್: ಕೆಜಿಬಿ ಅಂಡ್ ಇಟ್ಸ್ ಹೋಲ್ಡ್ ಆನ್ ರಷ್ಯಾ' - ಇದರಲ್ಲಿ ಸೋನಿಯಾ, ರಾಹುಲ್, ಸೋನಿಯಾ ತಾಯಿ ಪೌಲೋ ಮೈನೋ ಅವರುಗಳನ್ನು `ಕೆಜಿಬಿಯ ಫಲಾನುಭವಿಗಳು' ಎಂದು ಸ್ಪಷ್ಟವಾಗಿ ಹೆಸರಿಸಿದ್ದಾರೆ. 1992ರಲ್ಲಿ ಅವರು ಬರೆದಿರುವುದೆಲ್ಲ ಸತ್ಯ ಎಂದು ಸ್ವತಃ ರಷ್ಯಾ ಸಕರ್ಾರವೇ ದೃಢಪಡಿಸಿದೆ (ನೋಡಿ: ದಿ ಹಿಂದು, ಜುಲೈ 4, 1992).

ಆದರೂ ಮೊದಮೊದಲು ರಾಜೀವ್ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆ ಹುಟ್ಟಿಸಿದ್ದರು. ಆದರೆ ಬಹುಬೇಗ ಭೋಪೋಸರ್್ ಅವರ ಹೆಸರಿಗೆ ಮಸಿ ಬಳಿಯಿತು. ಅವರ ಪತ್ನಿಯ ಮಿತ್ರ ಒಟ್ಟಾವಿಯೋ ಕ್ವಾಟ್ರೋಚಿ ಭಾರತದ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳಲು ನೆರವಾದ ಆರೋಪವೂ ರಾಜೀವ್ ಹೆಗಲಿಗೇರಿತು. ಯಾರೇ ಅಧಿಕಾರಸ್ಥ ಪ್ರಧಾನಿಯ ಮೇಲೆ ಇಂತಹ ಗುರುತರವಾದ ಆರೋಪಗಳು ಬಂದಾಗ ಮೊದಲು ಆತ ರಾಜೀನಾಮೆ ನೀಡಬೇಕು. ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕಾದರೆ ಅದು ಅನಿವಾರ್ಯ. ಏನೇ ಆದರೂ ರಾಜೀವ್ ರಾಜೀನಾಮೆಯ ಹೆಸರೆತ್ತಲಿಲ್ಲ. ನೈತಿಕಪ್ರಜ್ಞೆ, ಆತ್ಮಸಾಕ್ಷಿಯ ರಾಜಕಾರಣ ಮಾಡಲಿಲ್ಲ.

ಹರ್ಷದ್ ಮೆಹ್ತಾ ಹಗರಣ, ಹವಾಲಾ ಹಗರಣ, ಜೆಎಂಎಂ ಲಂಚ ಪ್ರಕರಣಗಳಿಂದ ಪಿ.ವಿ. ನರಸಿಂಹರಾವ್ ಸಹ ವಿಚಲಿತರಾಗಲಿಲ್ಲ. ಅವರ `ಇನ್ಸೈಡರ್' ಆಗಿನ್ನೂ ಎಚ್ಚೆತ್ತಿರಲಿಲ್ಲ. ಕಾಗರ್ಿಲ್ ಶವಪೆಟ್ಟಿಗೆಗಳ ಖರೀದಿ ಹಗರಣ ಜಾಜರ್್ ಫನರ್ಾಂಡಿಸ್ ಹಾಗೂ ವಾಜಪೇಯಿಯರನ್ನು ವಿಚಲಿತಗೊಳಿಸಲಿಲ್ಲ.

ಮೇಲಿನ ಎಲ್ಲ ಪ್ರಕರಣಗಳಲ್ಲೂ ಆರೋಪಿಗಳೆಲ್ಲ ಅಪರಾಧಿಗಳು ಎಂದು ಇಲ್ಲಿ ನಾನು ಹೇಳುತ್ತಿಲ್ಲ. ಈ ಆರೋಪಗಳು ನಿಜವೂ ಆಗಿರಬಹುದು. ಕೆಲವು ಸಂದರ್ಭಗಳಲ್ಲಿ ಪುರಾವೆ ಇಲ್ಲದಿರಬಹುದು. ಆದರೆ ಆರೋಪಗಳು ಎದುರಾದಾಗ ನಮ್ಮ ನಾಯಕರುಗಳು ನಡೆದುಕೊಂಡ ರೀತಿ ಹೇಗಿತ್ತು? ಅವರ `ನೈತಿಕ ಪ್ರಜ್ಞೆ' ಏನಾಗಿತ್ತು? ಅವರೆಲ್ಲ ಸಾರ್ವಜನಿಕ ಅಭಿಪ್ರಾಯಕ್ಕೆ ಕಿಂಚಿತ್ತೂ ಪ್ರತಿಸ್ಪಂದನೆ ತೋರಿಸಲಿಲ್ಲವೇಕೆ? -ಎಂಬುದು ಇಲ್ಲಿನ ಚಚರ್ಾ ವಸ್ತು.

1956ರಲ್ಲಿ ರೈಲ್ವೆ ಸಚಿವರಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಮೆಹಬೂಬ್ನಗರದಲ್ಲಿ ರೈಲು ಅಪಘಾತವಾಗಿ 112 ಜನರು ಮಡಿದಾಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ ಪ್ರಧಾನ ಮಂತ್ರಿ ಜವಹರ್ಲಾಲ್ ನೆಹರೂ ಶಾಸ್ತ್ರಿಯವರ ರಾಜೀನಾಮೆಯನ್ನು ಅಂಗೀಕರಿಸಲಿಲ್ಲ. ಇದಾದ ಮೂರು ತಿಂಗಳ ಬಳಿಕ ತಮಿಳುನಾಡಿನ ಅರಿಯಲೂರಿನಲ್ಲಿ ರೈಲು ಅಪಘಾತವಾಗಿ 144 ಜನರು ಮಡಿದರು. ಈ ಬಾರಿ ಶಾಸ್ತ್ರಿಯವರು `ಇದು ನನ್ನ ಸಾಂವೈಧಾನಿಕ ಹಾಗೂ ನೈತಿಕ ಜವಾಬ್ದಾರಿಯ ಪ್ರಶ್ನೆ' ಎಂದು ವಾದಿಸಿ ರಾಜೀನಾಮೆ ಕೊಟ್ಟು ಹೊರಬಂದರು. ಜನರು ಅವರ ಕ್ರಮವನ್ನು ಮೆಚ್ಚಿ ಸ್ವಾಗತಿಸಿದರು.

ತಮ್ಮ ಮೇಲೆ ಯಾವುದೇ ನೇರ ಆರೋಪ ಇಲ್ಲದಿದ್ದಾಗಲೂ ಶಾಸ್ತ್ರಿಯವರು ನಡೆದುಕೊಂಡ ರೀತಿ ಹಾಗಿತ್ತು. ಅವರಿಗೂ ವೈಯಕ್ತಿಕ ಮಟ್ಟದಲ್ಲಿ ಗುರುತರವಾದ ಆರೋಪಗಳನ್ನು ಹೊತ್ತು ನಿಂತಿರುವ ಇತರ ಅನೇಕ `ನಾಯಕರುಗಳು' ನಡೆದುಕೊಳ್ಳುತ್ತಿರುವ ರೀತಿಗೂ ಅಜಗಜಾಂತರ.

ಭ್ರಷ್ಟಾಚಾರ ನಿಯಂತ್ರಣದ ವಿಷಯದಲ್ಲಿ ನಮ್ಮ ಯಾವ ಮುಖಂಡರೂ ದಕ್ಷತೆ, ಪ್ರಾಮಾಣಿಕತೆ ತೋರಿಸಿಕೊಂಡು ಬಂದಿಲ್ಲ. ಎಲ್ಲ ಉನ್ನತ ಸಕರ್ಾರಿ ಅಧಿಕಾರಿಗಳ ಹಾಗೂ ಅಧಿಕಾರಸ್ಥರ ಮೇಲಿನ ಭ್ರಷ್ಟಾಚಾರವನ್ನು ನಿಯಂತ್ರಿಸುವ ಉದ್ದೇಶ ಹೊತ್ತ ಲೋಕ್ಪಾಲ್ ಮಸೂದೆಗೆ 1968 ರಿಂದ ಈವರೆಗೆ ಅನುಮೋದನೆ ಲಭಿಸಿಯೇ ಇಲ್ಲ! ಅದನ್ನು ಜಾರಿಗೆ ತರಲು ಯಾವ ಸಕರ್ಾರಕ್ಕೂ ಆಸಕ್ತಿ ಇಲ್ಲ. ಭೋಪೋಸರ್್ ಹಗರಣ ಬೆಳಕಿಗೆ ಬಂದ ಮೇಲೆ ವಿ.ಪಿ. ಸಿಂಗ್ ಸಕರ್ಾರ ಲೋಕ್ಪಾಲ್ ಮಸೂದೆಯನ್ನು ಜಾರಿಗೊಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಅನಂತರ ವಾಜಪೇಯಿ ಅದನ್ನು ಜಾರಿಗೊಳಿಸುವ ಭರವಸೆ ಇತ್ತರೂ ಕಾರ್ಯತಃ ಮಾಡಲಿಲ್ಲ. 2003ರ ಹೊತ್ತಿಗೆ ಲೋಕಪಾಲರ ತನಿಖಾ ವ್ಯಾಪ್ತಿಗೆ ಪ್ರಧಾನ ಮಂತ್ರಿಯನ್ನೂ ಒಳಪಡಿಸಬೇಕು ಎಂದು ಕ್ಯಾಬಿನೆಟ್ ನಿರ್ಣಯವಾಗಿತ್ತು. ಮುಂದಿನ ಮನಮೋಹನ್ ಸಿಂಗ್ರ ಯುಪಿಎ ಸಕರ್ಾರ ಸಹ ಲೋಕ್ಪಾಲ್ ಜಪ ಮಾಡಿಕೊಂಡು ಬರುತ್ತಿದೆ. ಆದರೆ ಕಾರ್ಯತಃ ಏನನ್ನೂ ಮಾಡುತ್ತಿಲ್ಲ.

ಸಿಬಿಐ ಅನ್ನು ಸ್ಥಾಪಿಸಿದ್ದರ ಹಿಂದಿನ ಮೂಲ ಉದ್ದೇಶವೇ ಭ್ರಷ್ಟಾಚಾರ ನಿಯಂತ್ರಣ. ಆದರೆ ಅತ್ಯುನ್ನತ ಮಟ್ಟದ ಯಾವುದೇ ಭ್ರಷ್ಟಾಚಾರ ಪ್ರಕರಣದಲ್ಲೂ ಸಿಬಿಐ ಈವರೆಗೆ ಯಶಸ್ಸು ಸಾಧಿಸಿಲ್ಲ. ಸುಖ್ರಾಮ್ ಪ್ರಕರಣ ಕೆಳ ನ್ಯಾಯಾಲಯದಲ್ಲಿ ಸಾಬೀತಾಯಿತು. ಇನ್ನೊಂದು, ಕಲ್ಪನಾಥ್ ರಾಯ್ ಪ್ರಕರಣ. ಅದೂ ಕೇಲ ಹಂತಗಳಲ್ಲಿ ಸಾಬೀತಾಗಿತ್ತು. ಆದರೆ ಭೋಪೋಸರ್್ ವಿಷಯದಲ್ಲಿ ಸಿಬಿಐ ಮಯರ್ಾದೆ ಹೋಯಿತು. ಈ ತನಿಖಾ ಬ್ಯೂರೋ ಆಳುವ ಸಕರ್ಾರಗಳ ಕೈಗೊಂಬೆಯಾಗಿದೆ ಎಂದು ಸ್ವತಃ ಅದರ ನಿದರ್ೇಶಕರೇ ಈಚೆಗೆ ಸುಪ್ರೀಮ್ ಕೋಟರ್್ ಎದುರು ಅಲವತ್ತುಕೊಂಡು ಛೀಮಾರಿ ಹಾಕಿಸಿಕೊಂಡ ಪ್ರಸಂಗ ಅದರ ಪರಿಸ್ಥಿತಿಯನ್ನು ತೋರಿಸುತ್ತದೆ. ಹಲವಾರು ಪ್ರಕರಣದಲ್ಲಿ ತಾನೇ ಹೆಸರಿಸಿದ ಆರೋಪಿಯ ಪರವಾಗಿಯೇ (ಉದಾಹರಣೆಗೆ, ಒಟ್ಟಾವಿಯೋ ಕ್ವಟ್ರೋಚಿ, ಮುಲಾಯಂ ಸಿಂಗ್) ಸಿಬಿಐ ವಾದಿಸಿದ್ದೂ ಉಂಟು!

ಈಗಲೂ ನಾವು `ನಮ್ಮ ಪ್ರಜಾತಂತ್ರದ ಆದರ್ಶ ಮಂತ್ರಿ ಯಾರು?' ಎಂದ ತಕ್ಷಣ `ಶಾಸ್ತ್ರಿ' ಎನ್ನುತ್ತೇವೆ. ಅವರ ನಂತರದ ಇನ್ನೊಂದು ಶ್ರೇಷ್ಠ ಉದಾಹರಣೆ ನಮಗಿನ್ನೂ ಸಿಕ್ಕಿಲ್ಲ. ನಮ್ಮ ಸಮಕಾಲೀನ ರಾಜಕೀಯದಲ್ಲಿ ಕಳಂಕ ಮುಕ್ತ ರಾಜಕಾರಣಕ್ಕೆ ಒಂದು ಉದಾಹರಣೆಯೂ ಸಿಗುತ್ತಿಲ್ಲ.

ನಮ್ಮ ನಡುವಿನ ಭ್ರಷ್ಟ ನಾಯಕರು ರೋಹ್ ತರಹ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ. ಆದರೆ ಕಡೆಯ ಪಕ್ಷ ಸಿಕ್ಕಿಬಿದ್ದಾಗಲಾದರೂ ವಿಷಾದ ವ್ಯಕ್ತಪಡಿಸಬೇಡವೆ? ಜನರ ಕ್ಷಮೆ ಕೇಳಬೇಡವೆ? ಇವರಿಗೆಲ್ಲ ಆತ್ಮಸಾಕ್ಷಿ ಇದೆಯೆ?

ಯಾರ ಗೆಲುವು? ಯಾರ ಸೋಲು?

ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಯುಪಿಎ ಸಕರ್ಾರ ಮತ್ತೆ ವಿಜಯಿಯಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಬಲವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ನಾಮಕಾವಸ್ಥೆಯ ತೃತೀಯ ರಂಗ ಧೂಳೀಪಟವಾಗಿದೆ. ಎಡಪಕ್ಷಗಳು ಮೂಲೆಗುಂಪಾಗಿವೆ.

ಯಾವುದೇ ರೀತಿಯ `ಆ್ಯಂಟಿ ಇನ್ಕಮ್ಬೆನ್ಸಿ' (ಆಳುವವರ ಮೇಲಿನ ಅತೃಪ್ತಿ) ಈ ಚುನಾವಣೆಯಲ್ಲಿ ಕೆಲಸ ಮಾಡಿದಂತೆ ಕಾಣುತ್ತಿಲ್ಲ. ಬೆಲೆಯೇರಿಕೆ, ಭಯೋತ್ಪಾದನೆ, ಸುರಕ್ಷೆ, ಸ್ವಿಸ್ ಬ್ಯಾಂಕ್, ಕ್ವಟ್ರೋಚಿ, ಯುಪಿಎ ಒಳಜಗಳ, ಅಮರ್ ಸಿಂಗ್ ಲಂಚ ಪ್ರಕರಣ, ಮುಲಾಯಂ ಸಿಬಿಐ ಪ್ರಕರಣ, ಅಫ್ಜಲ್ ಗುರು, ಅಜ್ಮಲ್ ಕಸಬ್ - ಯಾವುದೂ ಕಾಂಗ್ರೆಸ್ ಬೆಳವಣಿಗೆಗೆ ಅಡ್ಡಿಯಾಗಿಲ್ಲ. ಇದು ಗಮನಾರ್ಹ ಸಂಗತಿ.

ಇದು ಆಶ್ಚರ್ಯಕರ ಸಂಗತಿಯೂ ಹೌದು. ಹೇಗೆ ಕಾಂಗ್ರೆಸ್ `ಆ್ಯಂಟಿ ಇನ್ಕಮ್ಬೆನ್ಸಿ' ಪಡೆಯಲಿಲ್ಲ ಎಂಬುದು ಗಂಭೀರ ಅಧ್ಯಯನವನ್ನು ಬೇಡುತ್ತದೆ. ಈ ಚುನಾವಣೆಯಲ್ಲಿ ಸಕರ್ಾರದ ವಿರುದ್ಧದ ಮತಗಳು ಅಷ್ಟಾಗಿ ಚಲಾವಣೆಯಾಗಿಲ್ಲ ಎಂದುಕೊಂಡರೆ, ಯುಪಿಎ ಒಕ್ಕೂಟದ ಸ್ಥಾನದಲ್ಲಿ ಒಂದು ಪರಿಣಾಮಕಾರಿಯಾದ ಹಾಗೂ ಆಕರ್ಷಕವಾದ ಪಯರ್ಾಯವಾಗಿ ತನ್ನನ್ನು ಬಿಂಬಿಸಿಕೊಳ್ಳುವಲ್ಲಿ ಎನ್ಡಿಎ ಅಥವಾ ಬಿಜೆಪಿ ವಿಫಲವಾಗಿದೆ ಎಂದು ಹೇಳಬೇಕಾಗುತ್ತದೆ.

ಬೆಲೆಯೇರಿಕೆಗೆ ಪ್ರತಿಯಾಗಿ ಸಕರ್ಾರದ ರೈತರ ಸಾಲಮನ್ನಾ ಯೋಜನೆ ಕೆಲಸ ಮಾಡಿರಬಹುದು. ಆದರೆ ಒಂದು ವಿರೋಧಪಕ್ಷವಾಗಿ ಬಿಜೆಪಿ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ ಎನ್ನುವುದಂತೂ ಸ್ಪಷ್ಟ. ಕಳೆದ ಐದು ವರ್ಷಗಳಲ್ಲಿ ಅದರ ಅಸ್ತಿತ್ವದ ಅರಿವೇ ಜನರಿಗೆ ತಟ್ಟಿರಲಿಲ್ಲ. `ಆ್ಯಂಟಿ ಇನ್ಕಮ್ಬೆನ್ಸಿ' ಸೃಷ್ಟಿಸುವಲ್ಲಿ ಅದು ವಿಫಲವಾಗಿದೆ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಆಡ್ವಾಣಿ ದಿಢೀರೆಂದು ಪ್ರತ್ಯಕ್ಷರಾದದ್ದು.

2004ಕ್ಕೆ ಹೋಲಿಸಿದರೆ ಯುಪಿಎ ಅಂಗಪಕ್ಷಗಳು ಅಷ್ಟಾಗಿ ಲಾಭಗಳಿಸಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಇಲ್ಲಿ ಸಾಕಷ್ಟು ಬಲವರ್ಧನೆ ಆಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಇತ್ತ ಎನ್ಡಿಎ ಒಕ್ಕೂಟದಲ್ಲಿ ಶಿವಸೇನೆಯನ್ನು ಬಿಟ್ಟು ಉಳಿದ ಬಿಜೆಪಿಯ ಮಿತ್ರಪಕ್ಷಗಳು ಅಂತಹ ನಷ್ಟವನ್ನೇನೂ ಅನುಭವಿಸಿಲ್ಲ. ಇಲ್ಲಿ ಬಿಜೆಪಿಯೇ ಹೆಚ್ಚು ನಷ್ಟ ಅನುಭವಿಸಿದೆ. ಒಂದು ಒಕ್ಕೂಟವಾಗಿ ಎನ್ಡಿಎ ಸುಮಾರು 20ಕ್ಕೂ ಕಡಿಮೆ ಸ್ಥಾನಗಳನ್ನು ಕಳೆದುಕೊಂಡಿದ್ದರೆ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿಯ ಮತ್ತು ಯುಪಿಎ ಅಂಗಪಕ್ಷಗಳ ನಷ್ಟದ ಪೂರ್ಣ ಪ್ರಯೋಜನ ಕಾಂಗ್ರೆಸ್ಸಿಗೆ ಲಭಿಸಿದೆ. ಅದು 2004ಕ್ಕಿಂತಲೂ ಈ ಬಾರಿ 50ಕ್ಕೂ ಹೆಚ್ಚು ಸ್ಥಾನಗಳನ್ನು ಹೆಚ್ಚಾಗಿ ಗಳಿಸುವ ಮೂಲಕ ಮಹತ್ವಪೂರ್ಣ ವಿಜಯ ಸಾಧಿಸಿದೆ.

ರಾಜ್ಯಗಳ ಮಟ್ಟದಲ್ಲಿ ನೋಡಿದರೆ, ದೇಶದ ಹೆಚ್ಚು ರಾಜ್ಯಗಳು ಎನ್ಡಿಎ ಆಡಳಿತವನ್ನು ಹೊಂದಿವೆ. 2004ರ ನಂತರ ಕಾಂಗ್ರೆಸ್ ಒಂದರ ನಂತರ ಒಂದು ರಾಜ್ಯವನ್ನು ಕಳೆದುಕೊಳ್ಳುತ್ತಲೇ ಬಂದಿತ್ತು. ಈ ಟ್ರೆಂಡ್ ನೋಡಿದಾಗ ಕೇಂದ್ರದಲ್ಲಿಯೂ ಅದರ ಪ್ರಾಬಲ್ಯ ಕುಂಠಿತವಾಗಬಹುದೆಂಬ ನಿರೀಕ್ಷೆ ಸಾಮಾನ್ಯವಾಗಿತ್ತು. ಆದರೆ ಕಾಂಗ್ರೆಸ್ ಈ ಬಾರಿ ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಗೆದ್ದಿದೆ. ಕನರ್ಾಟಕ, ಗುಜರಾತ್ ಹಾಗೂ ಬಿಹಾರ - ಈ ಮೂರು ರಾಜ್ಯಗಳು ಮಾತ್ರ ಬಿಜೆಪಿಯ ಪಾಲಿಗೆ ಅನುಕೂಲಕರವಾಗಿವೆ.

ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಪ್ರಚಾರ ಫಲಕೊಟ್ಟಂತೆ ಕಾಣುತ್ತದೆ. ರಾಷ್ಟ್ರೀಯ ರಾಜಕಾರಣದ ತಕ್ಕಡಿಯಲ್ಲಿ ಮಹತ್ವದ ಪಾತ್ರ ವಹಿಸುವ ಉತ್ತರ ಪ್ರದೇಶ ಕಳೆದ ದಶಕದಲ್ಲಿ ಬಿಜೆಪಿಯ ಅಡ್ಡೆಯಾಗಿತ್ತು. ನವದೆಹಲಿಯ ದಬರ್ಾರಿನಲ್ಲಿ ಬಿಜೆಪಿಯು ಕಾಂಗ್ರೆಸ್ಸಿಗೆ ಸಮಾನವಾಗಿ ಬೆಳೆಯಲು ಕಾರಣವಾಗಿದ್ದೇ ಉತ್ತರ ಪ್ರದೇಶದ ಮತದಾರರು. 1997ರಲ್ಲಿ ರಾಜ್ಯದ ಒಟ್ಟು 80 ಸ್ಥಾನಗಳ ಪೈಕಿ 50 ಸ್ಥಾನಗಳನ್ನು ಬಿಜೆಪಿ ಗಳಿಸಿತ್ತು. ಆದರೆ ಈಗ ಅದು ನಾಲ್ಕನೆಯ ಸ್ಥಾನಕ್ಕೆ ಕುಸಿದಿದೆ. ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಕ್ರಮೇಣ ಹಿಡಿತ ಸಾಧಿಸುತ್ತಿದೆ.

1999ರಲ್ಲಿ ಎನ್ಡಿಎ 24 ಪಕ್ಷಗಳ ದೊಡ್ಡ ಒಕ್ಕೂಟವಾಗಿತ್ತು. ಆದರೆ ಪ್ರಸ್ತುತ ಜೆಡಿಯು ಹಾಗೂ ಶಿವಸೇನೆಗಳನ್ನು ಬಿಟ್ಟರೆ ಅದಕ್ಕೆ ಹೇಳಿಕೊಳ್ಳುವಂತಹ ಮಿತ್ರ ಪಕ್ಷಗಳೇ ಇರಲಿಲ್ಲ. ದಕ್ಷಿಣದಲ್ಲಂತೂ (ಕನರ್ಾಟಕವನ್ನು ಬಿಟ್ಟು) ಎನ್ಡಿಎ ನಗಣ್ಯವಾಗಿದೆ. ಮಿತ್ರಪಕ್ಷಗಳನ್ನು ಕಳೆದುಕೊಂಡಿದ್ದು ಅದಕ್ಕೆ ದೊಡ್ಡ ನಷ್ಟವಾಗಿ ಪರಿಣಮಿಸಿದೆ. ಪ್ರಬಲ ರಾಜಕೀಯ ಮೈತ್ರಿಯ ಕೊರತೆ ಅರ ಸೋಲಿಗೆ ಪ್ರಮುಖ ಕಾಣಿಕೆ ಸಲ್ಲಿಸಿದೆ. ಅದರ ಬಹುತೇಕ ಮಿತ್ರಪಕ್ಷಗಳೆಲ್ಲ ತೃತೀಯ ರಂಗ ಸೇರಿ ಕಾಂಗ್ರೆಸ್ ವಿರೋಧಿ ಮತಗಳು ಹಂಚಿಹೋಗಲು ಕಾರಣವಾಗಿದ್ದರಿಂದ ಅಂತಿಮವಾಗಿ ಕಾಂಗ್ರೆಸ್ಸಿಗೇ ಅನುಕೂಲವಾಗಿದೆ.

ಆದರೆ ವೈಯಕ್ತಿಕ ಮಟ್ಟದಲ್ಲಿ ಬಿಜೆಪಿ ಗಳಿಸಿರುವ ಹಿನ್ನಡೆ ಗಮನಾರ್ಹ. ಅದಕ್ಕೆ ಸರಿಯಾದ ಕಾರಣಗಳನ್ನು ತಿಳಿಯಬೇಕಾದ ಅಗತ್ಯವಿದೆ. ಒಂದು ಆಡ್ವಾಣಿಯವರ ವಯಸ್ಸು ಹಾಗೂ ವರ್ಚಸ್ಸು ಎರಡೂ ಕೈಕೊಟ್ಟಿರಬಹುದು. ಇಂಟರ್ನೆಟ್ ಸಮೀಕ್ಷೆಗಳಲ್ಲಿ ಆಡ್ವಾಣಿ ಕೈ ಮೇಲಾಗಿಯೇ ಕಂಡುಬರುತ್ತಿತ್ತು. ಆದರೆ ಇಂಟರ್ನೆಟ್ ಚಾಟ್ ರೂಮ್ಗಳಲ್ಲಿ ಅವರೊಂದಿಗೆ ಕಾಲ ಕಳೆದವರ ಪೈಕಿ ಬಹುಮಂದಿ ಮತಗಟ್ಟೆಗೇ ಬರಲಿಲ್ಲ!

ಜಿನ್ನಾ ಪ್ರಕರಣದ ನಂತರ ಎರಡನೆ ಬಾರಿಗೆ ಆಡ್ವಾಣಿ ಹಾಗೂ ಸುಧೀಂದ್ರ ಕುಲಕಣರ್ಿ ಜೋಡಿಯ ರಣತಂತ್ರ ಕೈಕೊಟ್ಟಿದೆ. ವೈಯಕ್ತಿಕ ವೆಬ್ಸೈಟುಗಳ ಮೂಲಕ ಆಡ್ವಾಣಿ ಪ್ರಚಾರ ಹೈ-ಟೆಕ್ ಆಗಿದ್ದುದರಲ್ಲಿ ಅನುಮಾನವಿಲ್ಲ. ಅದು ಪಾರದರ್ಶಕವೂ ಆಗಿತ್ತು. ಆದರೆ ಮತಗಳನ್ನು ಸೆಳೆಯುವಲ್ಲಿ ವಿಫಲವಾಯಿತು. ಐಟಿ, ಬಿಟಿ ಹುಡುಗರ ಬೇಟೆಯ ಭರಾಟೆಯಲ್ಲಿ ಅದು ತನ್ನ ಎಂದಿನ `ಬಿಜೆಪಿತನ'ವನ್ನು ಕಳೆದುಕೊಂಡಿತ್ತು. ಯುವ, ಇಂಟರ್ನೆಟ್ ಪೀಳಿಗೆಯನ್ನು ಸೆಳೆಯುವ ಕಸರತ್ತಿನಲ್ಲಿ ಸಾರ್ವಜನಿಕರನ್ನು ಹಾಗೂ ತನ್ನ ಶಾಶ್ವತ ಮತದಾರರನ್ನು ಸೆಳೆಯುವಲ್ಲಿ ವಿಫಲವಾಯಿತು.

`ಆಡ್ವಾಣಿಯವರನ್ನು ಪ್ರಧಾನಿಯಾಗಿಸಬೇಕು' ಎನ್ನುವುದನ್ನು ಬಿಟ್ಟರೆ ಈ ಚುನಾವಣೆಯಲ್ಲಿ ಎನ್ಡಿಎ ಮುಂದೆ ಇತರ ಪ್ರಬಲ ವಿಷಯಗಳು ಇರಲಿಲ್ಲ. ಆಥರ್ಿಕತೆ ಹಾಗೂ ಸುರಕ್ಷೆ ಈ ಬಾರಿ ಪ್ರಮುಖ ಚುನಾವಣಾ ವಿಷಯಗಳಾಗಿರಲೇ ಇಲ್ಲ. `ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸಕರ್ಾರ ಯಾವ ರೀತಿ ಕೆಲಸ ಮಾಡಿತು' ಎಂಬುದು ಸಾಮಾನ್ಯ ಚಚರ್ಾವಸ್ತುವಾಗಬೇಕಿತ್ತು. ಆದರೆ ಅದಕ್ಕೆ ಬದಲು ಸ್ವಯಂ ಆಡ್ವಾಣಿಯೇ ಜನರ ಮುಂದೆ ಚಚರ್ಾವಸ್ತುವಾದರು. ಸಕರ್ಾರದ ದಕ್ಷತೆ, ಅದಕ್ಷತೆಗಳಿಗೆ ಬದಲು ಆಡ್ವಾಣಿಯ ವರ್ಚಸ್ಸು, ವಯಸ್ಸು ಸಾರ್ವಜನಿಕವಾಗಿ ಹೆಚ್ಚು ಗಮನ ಸೆಳೆಯಿತು. ಅಧ್ಯಕ್ಷೀಯ ಮಾದರಿಯ ಏಕಮುಖ ಪ್ರಚಾರತಂತ್ರ ಬಿಜೆಪಿ ಪಾಲಿಗೆ ಮುಳುವಾಗಿರಬಹುದು.

ಕಾಂಗ್ರೆಸ್ ಈ ಬಾರಿಯ ಚುನಾವಣೆಯನ್ನು ಸಾಕಷ್ಟು ಮಿತ್ರಪಕ್ಷಗಳ ಒಡಗೂಡಿಯೇ ಎದುರಿಸಿತು. ಆರ್ಜೆಡಿ ಮಾಡಿದ ತಕರಾರು ಬಿಟ್ಟರೆ ಉಳಿದಂತೆ ಹೆಚ್ಚೇನೂ ತಕರಾರು ಇರಲಿಲ್ಲ. ಬಿಜೆಪಿ ಪಾಲಿಗೆ ಗುಜರಾತಿನ ನರೇಂದ್ರ ಮೋದಿ ಇದ್ದಂತೆ ಕಾಂಗ್ರೆಸ್ ಪಾಲಿಗೆ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಮತ ಸೆಳೆಯುವ ಸೂಜಿಗಲ್ಲಾದರು. ದಕ್ಷಿಣದಲ್ಲಿ ಶ್ರೀಲಂಕಾ ತಮಿಳರ ವಿಷಯ ಕರುಣಾನಿಧಿಯನ್ನು ರಕ್ಷಿಸಿದ್ದೂ ಯುಪಿಎಗೆ ವರದಾನವಾಯಿತು. ಯುಪಿಎ ವಿರುದ್ಧದ ಮತಗಳು ಹಂಚಿಹೋಗಲು ಕಾರಣವಾಗಿದ್ದಷ್ಟೇ ತಮಿಳುನಾಡಿನ ವಿಜಯಕಾಂತ್ ಹಾಗೂ ಆಂಧ್ರದ ಚಿರಂಜೀವಿ ಮಾಡಿದ ಸಾಧನೆ.

ಒಟ್ಟಿನಲ್ಲಿ ದೇಶದ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಗಳಿಸಿರುವ ಸ್ಥಾನಗಳ ಒಟ್ಟು ಸಂಖ್ಯೆ 320ರ ಗಡಿಯನ್ನು ದಾಟುತ್ತದೆ. ಇದು ಒಳ್ಳೆಯ ಬೆಳವಣಿಗೆ. ರಾಷ್ಟ್ರೀಯ ರಾಜಕಾರಣದಲ್ಲಿ ಪ್ರಾದೇಶಿಕ, ಚಿಲ್ಲರೆ ಪಕ್ಷಗಳ ಪಾತ್ರ ಕಡಿಮೆಯಾಗುವುದು ಒಳ್ಳೆಯದು. ಆದರೆ ಅವುಗಳ ಮೈತ್ರಿ ಇಲ್ಲದೇ ಈ ಬೆಳವಣಿಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವು ಇನ್ನೂ ನಗಣ್ಯವಾಗಿಲ್ಲ.

ಅಮೆರಿಕದ ಹಣದಿಂದ ಪಾಕಿಸ್ತಾನ ಅಣು ಬಾಂಬ್ ತಯಾರಿಸುತ್ತಿದೆ!

ನಾವು ಚುನಾವಣೆಯಲ್ಲಿ ಮುಳುಗಿದ್ದಾಗ ಪಾಕಿಸ್ತಾನದಿಂದ ಎರಡು ಆಘಾತಕರ ಸುದ್ದಿಗಳು ಬಂದಿವೆ. ಒಂದು, ಆ ದೇಶ ಈಗ ಇದ್ದಕ್ಕಿದ್ದ ಹಾಗೆ ಭಾರಿ ಸಂಖ್ಯೆಯಲ್ಲಿ ಪರಮಾಣು ಬಾಂಬ್ಗಳನ್ನು ತಯಾರಿಸಲು ಆರಂಭಿಸಿದೆ. ಇನ್ನೊಂದು, ತಾಲಿಬಾನ್, ಅಲ್ ಖೈದಾ ಭಯೋತ್ಪಾದಕರ ಕೈಗೆ ಈಗಾಗಲೇ ಪರಮಾಣು ಬಾಂಬ್ಗಳು ಸಿಕ್ಕಿರಬಹುದಾದ ಸಾಧ್ಯತೆಗಳಿವೆ.

ಎರಡನೇ ಬಾರಿಗೆ ಅಧಿಕಾರ ಹಿಡಿದಿರುವ `ಪ್ರಬಲ' ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಅವರ `ಪ್ರಬಲ' ಹಾಗೂ `ಯುವ' ಸಹೋದ್ಯೋಗಿಗಳಾದ ಪಿ. ಚಿದಂಬರಂ, ಎ. ಕೆ. ಆ್ಯಂಟನಿ, ಎಸ್. ಎಂ .ಕೃಷ್ಣ - ಈ ಆತಂಕಕ್ಕೆ ಹೇಗೆ ಸ್ಪಂದಿಸುತ್ತಾರೋ ಗೊತ್ತಿಲ್ಲ.

ಅಮೆರಿಕ ಸಕರ್ಾರವೇ ದಿಕ್ಕು ತೋಚದೇ ಕೈಚೆಲ್ಲಿ ಕುಳಿತಿದೆ. ತಾಲಿಬಾನ್ ಪಾಕಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ಮುಂಚೆ ಆ ದೇಶದ ಪರಮಾಣು ಅಸ್ತ್ರಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಮೆರಿಕ ಹೆಣಗುತ್ತಿದೆ. ಈವರೆಗೆ ಪಾಕ್ ಸುಮಾರು 100 ಪರಮಾಣು ಬಾಂಬ್ಗಳನ್ನು ಹೊಂದಿದೆ ಎಂಬ ಅಂದಾಜಿದೆ. ಈ ಪೈಕಿ 2-3 ಬಾಂಬ್ಗಳು ಉಗ್ರರಿಗೆ ಸಿಕ್ಕರೂ ಭಾರಿ ಅಪಾಯ ತಪ್ಪಿದ್ದಲ್ಲ.

ಈಗ ಅಮೆರಿಕದ ಮುಂದೆ ಇರುವ ಕೆಲವು ಆಯ್ಕೆಗಳು: ಮೊದಲು ಪಾಕ್ ಸಕರ್ಾರ ಉರುಳದಂತೆ ನೋಡಿಕೊಳ್ಳುವುದು; ಅನಂತರ ತಾಲಿಬಾನ್, ಅಲ್-ಖೈದಾ ಬೆಳವಣಿಗೆ ತಡೆಯುವುದು; ತನ್ನ ಪರಮಾಣು ಅಸ್ತ್ರಗಳು ಉಗ್ರರ ಕೈಗೆ ಜಾರದಂತೆ ಭದ್ರಪಡಿಸಿಕೊಳ್ಳಲು ಪಾಕ್ ಸಕರ್ಾರಕ್ಕೆ ನೆರವಾಗುವುದು; ಹಾಗೂ ಕಡೆಯದಾಗಿ, ಮೇಲಿನ ಎಲ್ಲ ತಂತ್ರಗಳು ಕೈಕೊಟ್ಟರೆ, ಪಾಕ್ ಪರಮಾಣು ಅಸ್ತ್ರಗಳನ್ನು ಸ್ವತಃ ತನ್ನ ಕೈವಶ ಮಾಡಿಕೊಳ್ಳುವುದು.

ಯೋಜನೆ ಕೇಳಲು ಚೆನ್ನಾಗಿದೆ. ಆದರೆ ವಾಸ್ತವ ಏನೆಂದರೆ, ಈ ಯಾವುದರಲ್ಲೂ ಅಮೆರಿಕ ಯಶಸ್ಸು ಕಾಣುವ ಲಕ್ಷಣಗಳಿಲ್ಲ. ಇಲ್ಲಿ ಅಮೆರಿಕ ಪಾಕ್ ಕುರಿತುನ ಯೋಜನೆಗಳನ್ನು ಹಾಕುತ್ತಿದೆಯೋ, ಅಥವಾ ಪಾಕಿಸ್ತಾನವೇ ಅಮೆರಿಕದ ಅಸಹಾಯಕತೆಯನ್ನು ಬಳಸಿಕೊಳ್ಳುತ್ತಿದೆಯೋ ಎಂಬುದು ಚಿಂತಿಸಬೇಕಾದ ವಿಷಯ.

ಹೀಗೆ ಹೇಳಲು ಕಾರಣಗಳು ಹಲವಾರು. ಮೊದಲನೆಯದಾಗಿ, ಪಾಕಿಸ್ತಾನದ ಸಕರ್ಾರ, ಮಿಲಿಟರಿ ಹಾಗೂ ಐಎಸ್ಐ ಒಳಗೇ ತಾಲಿಬಾನ್ ಪರವಾದ ಶಕ್ತಿಗಳಿವೆ. ಈ ಶಕ್ತಿಗಳನ್ನು ಎದುರಿಸುವುದು, ಅಥವಾ ಅವುಗಳ ವಿರೋಧ ಕಟ್ಟಿಕೊಳ್ಳುವುದು ಪಾಕಿಸ್ತಾನದ ಯಾವ ರಾಜಕಾರಣಿಗೂ ಬೇಕಿಲ್ಲ. ಹೀಗಾಗಿ ತಾಲಿಬಾನ್ ಬೆಳವಣಿಗೆಯನ್ನು ತಡೆಯುವುದು ಸಕರ್ಾರಿ ಮುಖಂಡರಿಂದ ಅಸಾಧ್ಯ. ಆದರೂ ಅವರು ಅಮೆರಿಕಕ್ಕೆ, ಅಂತಾರಾಷ್ಟ್ರೀಯ ಸಮುದಾಯಕ್ಕೆ ಹುಸಿ ಭರವಸೆ ಕೊಡುತ್ತಿದ್ದಾರೆ. ಹಾಗೆ ಭರವಸೆ ಕೊಡುವ ಮೂಲಕ ಅಪಾರವಾದ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ!

ಎರಡನೆಯದಾಗಿ, ಪಾಕಿಸ್ತಾನದ ಬಳಿ ಎಷ್ಟು ಪರಮಾಣು ಅಸ್ತ್ರಗಳಿವೆ, ಅವೆಲ್ಲ ಎಲ್ಲೆಲ್ಲಿವೆ ಎಂಬ ಖಚಿತ ಮಾಹಿತಿ ಅಮೆರಿಕದ ಬಳಿ ಇಲ್ಲ. `ನಮ್ಮ ಬಳಿ ಅಂತಹ ಮಾಹಿತಿ ಇಲ್ಲ' ಎಂದು ಸ್ವತಃ ಸಿಐಎ ನಿದರ್ೇಶಕರೇ ಅಮೆರಿಕ ಸಕರ್ಾರಕ್ಕೆ ವರದಿ ಕಳುಹಿಸಿದ್ದಾರೆ. ಹೀಗಿರುವಾಗ ಅವುಗಳಲ್ಲಿ ಈ ಬಾಂಬ್ಗಳ ಪೈಕಿ ಎಷ್ಟು ಉಗ್ರರ ವಶವಾಗಿವೆ, ಎಷ್ಟು ಸುರಕ್ಷಿತವಾಗಿವೆ ಎಂದು ಹೇಳುವುದು ಕಷ್ಟ. ಸಕರ್ಾರದ ವಶದಲ್ಲಿ ಎಷ್ಟು ಅಸ್ತ್ರಗಳಿವೆ ಎಂಬ ಕುರಿತು ಯಾವುದೇ ದಾಖಲೆಗಳು ಲಭ್ಯವಿಲ್ಲದೇ ಅವುಗಳ ಹಸ್ತಾಂತರದ ಬಗ್ಗೆ ಮಾತುಕತೆ ನಡೆಸುವುದೂ ಅಸಾಧ್ಯವಾಗುತ್ತದೆ.

ಪಾಕಿಸ್ತಾನದ ಪರಮಾಣು ಅಸ್ತ್ರಗಳ ಸಂಪೂರ್ಣ ವಿವರ ತಿಳಿದಿರುವುದು ಐಎಸ್ಐಗೆ ಮಾತ್ರ. ಮಿಲಿಟರಿ ಹಾಗೂ ಐಎಸ್ಐಗಳೆರಡೂ ವೀಲಿನವಾಗಿರುವ ಒಂದು ಉನ್ನತ ವಿಭಾಗ ಈ ವಿಷಯವನ್ನು ನಿರ್ವಹಿಸುತ್ತಿದೆ. ಉಳಿದಂತೆ ಇತರ ಮಿಲಿಟರಿ ಅಧಿಕಾರಿಗಳಿಗೂ ಪೂರ್ಣ ಚಿತ್ರಣ ತಿಳಿದಿರುವ ಸಾಧ್ಯತೆಯಿಲ್ಲ. ವಾಸ್ತವದಲ್ಲಿ ಐಎಸ್ಐ ಹಾಗೂ ತಾಲಿಬಾನ್ ನಡುವಿನ ಗೆರೆ ಅಗೋಚರ. ಐಎಸ್ಐ ಒಳಗೆ ತಾಲಿಬಾನ್ ಶಕ್ತಿಗಳದೇ ಕಾರುಬಾರು.

ಪಾಕ್ ಪರಮಾಣು ಶಸ್ತ್ರಗಳನ್ನು ಕಾಪಾಡಲು ಐಎಸ್ಐ ಜೊತೆಗೇ ಅಮೆರಿಕ ಕೆಲಸ ಮಾಡಬೇಕು. ಅದು ಹೇಳುವುದನ್ನೇ ನಂಬಬೇಕು! ಈಗಾಗಲೆ ಐಎಸ್ಐಗೆ ಅಮೆರಿಕ ಸಕರ್ಾರ ಪರಮಾಣು ಬಾಂಬ್ ಸಂರಕ್ಷಣೆಯ ಆಧುನಿಕ ತಂತ್ರಜ್ಞಾನ ಒದಗಿಸಿದೆ. ಪರಮಾಣು ಶಸ್ತ್ರಗಳನ್ನು ಸುರಕ್ಷಿತವಾಗಿಡುವ ವಿಶೇಷ ಲಾಕ್ಗಳನ್ನು (ಅವುಗಳನ್ನು ಪಮರ್ಿಸಿವ್ ಆಕ್ಸೆಸ್ ಲಿಂಕ್ಸ್ ಎನ್ನುತ್ತಾರೆ) ನೀಡಿದೆ. ಜೊತೆಗೆ 10 ಕೋಟಿ ಅಮೆರಿಕನ್ ಡಾಲರ್ಗಳಷ್ಟು ಹಣದ ನೆರವನ್ನೂ ನೀಡಿದೆ.

ಮುಂಬೈ ಮೇಲೆ ಭಯೋತ್ಪಾದಕ ದಾಳಿಯಾದ ನಂತರ ಪಿ. ಚದಂಬರಂ ಫೈಲು ಹಿಡಿದುಕೊಂಡು ಅಮೆರಿಕಕ್ಕೆ ಹೋಗಿಬಂದರು. `ನೋಡುತ್ತಿರಿ, ಇನ್ನು ಪಾಕಿಸ್ತಾನಕ್ಕೆ ಯಾರೂ ಬೆಂಬಲ ನೀಡುವ ಹಾಗಿಲ್ಲ' ಎಂದು ಮನಮೋಹನ್ ಸಿಂಗ್ ಹೇಳಿದ್ದರು. ಆದರೆ 26/11ರ ನಂತರ ಯಾವ ಪರಿಸ್ಥಿತಿಯೂ ಬದಲಾಗಿಲ್ಲ. ಪಾಕಿಸ್ತಾನದ ಕೂದಲೂ ಕೊಂಕಿಲ್ಲ. ಅಂತಾರಾಷ್ಟ್ರೀಯ ಸಮುದಾಯದಿಂದ ದಿಗ್ಬಂಧನ ಎದುರಿಸುವ ಬದಲು ಪಾಕಿಸ್ತಾನ ಅಪಾರ ಹಣದ ರಾಶಿಯನ್ನೇ ಪಡೆಯುತ್ತಿದೆ.

`ಪಾಕಿಸ್ತಾನ್ ಎಕನಾಮಿಕ್ ಸವರ್ೇ' ಅಂಕಿಅಂಶಗಳ ಪ್ರಕಾರ, 1952 ರಿಂದ 2008ರ ವರೆಗಿನ 56 ವರ್ಷಗಳ ಕಾಲಾವಧಿಯಲ್ಲಿ ಪಾಕಿಸ್ತಾನ ಪಡೆದಿರುವ ಒಟ್ಟು ವಿದೇಶಿ ನೆರವು 73 ಶತಕೋಟಿ ಡಾಲರ್. ಆದರೆ ನವೆಂಬರ್ 2008ರ ಮುಂಬೈ (26/11) ಜಿಹಾದಿ ದಾಳಿಯ ನಂತರ, ಕಳೆದ 5-6 ತಿಂಗಳಷ್ಟು ಕಡಿಮೆ ಅವಧಿಯಲ್ಲಿಯೇ, ಪಾಕಿಸ್ತಾನಕ್ಕೆ 23.3 ಶತಕೋಟಿ ಡಾಲರ್ ವಿದೇಶಿ ಹಣ ಹರಿದು ಬಂದಿದೆ!!

ಇದರಲ್ಲಿ ಐಎಂಎಫ್ ನೀಡಿರುವ ಹಣವೇ 7 ಶತಕೋಟಿ ಡಾಲರ್. ಚೀನಾ ಅಂತೂ ಪಾಕಿಸ್ತಾನಕ್ಕೆ ಸಾಕಷ್ಟು ಹಣ ನೀಡುತ್ತಲೇ ಬರುತ್ತಿದೆ. ಅದನ್ನು ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿಲ್ಲ. `ಪಾಕಿಸ್ತಾನಕ್ಕೆ ಮುಂದಿನ ಐದು ವರ್ಷಗಳಲ್ಲಿ 5 ಶತಕೋಟಿ ಡಾಲರ್ ನೀಡುತ್ತೇವೆ' ಎಂದು ಒಬಾಮಾ ಆಡಳಿತ ಈಚೆಗೆ ಟೋಕ್ಯೋದಲ್ಲಿ ನಡೆದ ಡೋನರ್ಸ್ ಕಾನ್ಫರೆನ್ಸಿನಲ್ಲಿ ಒಪ್ಪಿಕೊಂಡಿದೆ. ತಕ್ಷಣಕ್ಕೆ ಒಂದು ಶತಕೋಟಿ ಡಾಲರ್ ಹಣವನ್ನೂ ಬಿಡುಗಡೆ ಮಾಡಿದೆ. `ಸಮಯ ಬಂದರೆ, ಪಾಕ್ ಸಕರ್ಾರಕ್ಕೆ ಖಾಲಿ ಚೆಕ್ ಅನ್ನು ನೀಡಲೂ ಹಿಂಜರಿಯುವುದಿಲ್ಲ' ಎಂಬ ಮಾತನ್ನೂ ಅಮೆರಿಕ ಆಡುತ್ತಿದೆ! ಆದರೆ ಈ ಹಣವೆಲ್ಲ ಹೇಗೆ ಖಚರ್ಾಗುತ್ತಿದೆ ಎಂಬುದನ್ನು ಕೇಳುವುದು ಮಾತ್ರ ಯಾರಿಂದಲೂ ಸಾಧ್ಯವಾಗಿಲ್ಲ.

`ನನ್ನ ದೌರ್ಬಲ್ಯ ಜಗತ್ತಿನ ಪಾಲಿಗೆ ಗಂಡಾಂತರಕಾರಿ. ಆದ್ದರಿಂದ ನನ್ನನ್ನು ಕೈಹಿಡಿದು ಕಾಪಾಡಿ, ನೀವೂ ಬದುಕಿಕೊಳ್ಳಿ. ಇಲ್ಲದಿದ್ದರೆ ನಿಮಗೇ ತೊಂದರೆ' ಎಂಬ ರೀತಿಯ ಸಂದೇಶಗಳನ್ನು ಬಿಂಬಿಸಿ ಹಣ ಹೊಡೆಯುವ ರಾಜತಾಂತ್ರಿಕ ಪಟ್ಟುಗಳನ್ನು ಪಾಕ್ ಎಂದೋ ಕರಗತ ಮಾಡಿಕೊಂಡಿದೆ. ಅದಕ್ಕೆ ಹಣ ಕೊಡುವುದನ್ನು ಬಿಟ್ಟು ಇತರ ಮಾರ್ಗಗಳಾವುವೂ ಅಮೆರಿಕ್ಕಾಗಲೀ, ಅಂತಾರಾಷ್ಟ್ರೀಯ ಸಮುದಾಯಕ್ಕಾಗಲೀ ಹೊಳೆಯುತ್ತಿಲ್ಲ. ಪಾಕಿಸ್ತಾನದ ಪಾಲಿಗೆ ಅದರ ದೌರ್ಬಲ್ಯವೇ ಅದರ ಶಕ್ತಿ! ಚಿನ್ನದ ಮೊಟ್ಟೆಯಿಡುವ ಕೋಳಿ.
ಈಗ ಹಣದ ರಾಶಿ ಬರುತ್ತಿರುವ ಹಾಗೆ ಪಾಕ್ ಇನ್ನೂ ಹೆಚ್ಚು ಪರಮಾಣು ಬಾಂಬ್ಗಳನ್ನು ಉತ್ಪಾದಿಸುತ್ತಿದೆ ಎಂದು ಸಿಐಎ ಹೇಳಿರುವುದು ಆತಂಕಕಾರಿ. ಇದೇ ವಿಷಯ ಅಮೆರಿಕದ ಸೆನೆಟ್ನಲ್ಲಿಯೂ ಚಚರ್ೆಗೆ ಬಂದಿತ್ತು. `ನಾವು ಕೊಡುತ್ತಿರುವ ಹಣವನ್ನು ಪಾಕ್ ಸಕರ್ಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ' ಎಂಬ ಆಕ್ಷೇಪಣೆಗಳು ಕೇಳಿಬಂದವು.

`ಪಾಕಿಸ್ತಾನಕ್ಕೆ ಹಣ ಕೊಡುವುದನ್ನು ಬಿಟ್ಟು ಬೇರೆನೂ ಜಾಜರ್್ ಬುಷ್ಗೆ ಗೊತ್ತಿಲ್ಲ' ಎಂದು ಲೇವಡಿ ಮಾಡುತ್ತ ಅಧಿಕಾರ ಹಿಡಿದ ಬರಾಕ್ ಒಬಾಮಾ, ಅನಂತರ ಬುಷ್ಗಿಂತಲೂ ಹೆಚ್ಚಿನ ಕೊಡುಗೈ ದಾನಕ್ಕೆ ಮುಂದಾಗಿದ್ದಾರೆ. ಅದೇ ಪಾಕ್ ಚಾಣಾಕ್ಷತನ.
ಈಗ ಪರಮಾಣು ಬಾಂಬ್ಗಳು ಖೈದಾ, ತಾಲಿಬಾನ್ ವಶವಾಗುತ್ತಿರಬಹುದು ಎಂಬ ವರದಿಗಳು ಭಯಾನಕವಾಗಿವೆ. ಆದರೆ ಮೊದಲು ಬೆಚ್ಚಿಬೀಳಬೇಕಾದ ಭಾರತ ಸಕರ್ಾರ ಮಾತ್ರ ಈ ಕುರಿತು ಕಳವಳವನ್ನೇ ವ್ಯಕ್ತಪಡಿಸಿಲ್ಲ. ಈ ವಿಷಯದಲ್ಲಿ ನಮ್ಮ ರಣತಂತ್ರಗಳೇನು? ಪ್ರತಿತಂತ್ರಗಳೇನು? ನಮ್ಮ ಸಿದ್ಧತೆಗಳೆಷ್ಟು? - ಎನ್ನುವುದು ತಿಳಿಯುತ್ತಿಲ್ಲ. ನಮ್ಮ ಸಕರ್ಾರದ ಯಾವ ಮುಖಂಡನೂ ದೇಶದ ಪ್ರಜೆಗಳಿಗೆ ಸುರಕ್ಷೆಯ ಭರವಸೆಯನ್ನು ನೀಡುತ್ತಿಲ್ಲ.

ಒಂದೆಡೆ ತಾಲಿಬಾನ್ ನೇರ ಪ್ರಭಾವ ಪಾಕಿಸ್ತಾನದಲ್ಲಿ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಪಾಕ್ ಸಕರ್ಾರ ಕೈಚೆಲ್ಲಿ ಕೂತಿದೆ. ಅದರ `ಅಸಹಾಯಕತೆ'ಯ ಪ್ರದರ್ಶನದಿಂದ, ಅಂತಾರಾಷ್ಟ್ರೀಯ ಸಮುದಾಯದ ರೂಪದಲ್ಲಿ, ಅದಕ್ಕೆ ಚಿನ್ನದ ಮೊಟ್ಟೆ ಇಡುವ ಕೋಳಿಯೇ ದೊರಕಿದೆ. ವಿದೇಶಗಳಿಂದ ಪಾಕಿಸ್ತಾನಕ್ಕೆ ಹಿಂದೆಂದೂ ಕಂಡರಿಯಷ್ಟು ಮಟ್ಟದಲ್ಲಿ ಹಣದ ಪ್ರವಾಹವೇ ಹರಿದು ಬರುತ್ತಿದೆ. ಅದನ್ನೇ ಬಳಸಿಕೊಂಡು ಆ ದೇಶ ಇನ್ನಷ್ಟು ಅಣು ಬಾಂಬ್ಗಳನ್ನು ತಯಾರಿಸುತ್ತಿದೆ. ಇದರಿಂದ ಅವೆಲ್ಲ ಎಲ್ಲಿ ಉಗ್ರರ ಪಾಲಾಗುತ್ತವೋ ಎಂಬ ಆತಂಕ ಶುರುವಾಗಿದೆ. ಈ ಆತಂಕ ನಿವಾರಿಸಲು ಪಾಕಿಸ್ತಾನಕ್ಕೆ ಇನ್ನಷ್ಟು ಹಣವನ್ನು ನೀಡಲಾಗುತ್ತಿದೆ. ಆ ಹಣ ಏನಾಗುತ್ತಿದೆಯೋ ಗೊತ್ತಿಲ್ಲ. ಆತಂಕವಂತೂ ಇದ್ದೇ ಇದೆ.

ಈ ವಿಷವತರ್ುಲ ಹೀಗೇ ಮುಂದುವರಿಯುತ್ತಿದ್ದರೆ, ಭಾರತ ಸಕರ್ಾರ ಮಾತ್ರ `ಇದಕ್ಕೂ ನಮಗೂ ಏನು ಸಂಬಂಧ' ಎಂದು ತಣ್ಣಗೆ ಕೂತಿದೆ.

ಪಶ್ಚಿಮದ ಮಿಷನರಿಗಳೇ ನಮ್ಮ ಅಧಿನಾಯಕರು!

ನನಗೆ ದೇಶದ ಪ್ರಬಲ ಕ್ರೈಸ್ತ ನಾಯಕರೊಬ್ಬರಿಂದ ಈಚೆಗೊಂದು ಇ-ಮೇಲ್ ಬಂದಿತ್ತು. `ಭಾರತದಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ನಮ್ಮನ್ನು ವಿಚಾರಿಸಿಕೊಳ್ಳುವವರು ಯಾರೂ ಇಲ್ಲ. ಅಮೆರಿಕ ಹಾಗೂ ಐರೋಪ್ಯ ಒಕ್ಕೂಟಗಳ ಬಳಿ ಈ ದೇಶದ ವಿರುದ್ಧ ದೂರು ನೀಡಲು ಹೋಗಬೇಕೆಂದು ತೀಮರ್ಾನಿಸಿದ್ದೇವೆ. ನಿಮ್ಮೆಲ್ಲರ ಬೆಂಬಲ ಬೇಕು' ಎಂಬುದು ಆ ಸಂದೇಶದ ಸಾರಾಂಶ.

ಇದು ಈ ದೇಶದ ದುರಂತ. ಭಾರತದ ಅನೇಕ ಕ್ರೈಸ್ತನಾಯಕರ ಪ್ರಕಾರ ಭಾರತ ಇನ್ನೂ ಸ್ವತಂತ್ರ, ಸಾರ್ವಭೌಮ ರಾಷ್ಟ್ರವಲ್ಲ. ಪಶ್ಚಿಮದ ದೇಶಗಳ ಮುಖಂಡರೇ ಇಲ್ಲಿನ ಸಕಲ ವ್ಯವಹಾರಗಳನ್ನೂ ನಿಯಂತ್ರಿಸಬೇಕಾದ ದೊಣ್ಣೆನಾಯಕರು.

ಈ ಮತೀಯ ಮುಖಂಡರು ಇನ್ನೂ ಬ್ರಿಟಿಷರ ಪ್ರಿವಿ ಕೌಂಸಿಲ್ ಕಾಲದಲ್ಲೇ ಇರುವ ಡೈನೋಸಾರ್ಗಳು. ಇವರ ಪ್ರಕಾರ ಜಗತ್ತಿನ ಸಕಲ ಕ್ರೈಸ್ತರ ನಾಯಕರು ಎಂದರೆ ಅಮೆರಿಕ ಹಾಗೂ ಇಯು! ಈ ದೇಶಗಳು ಸಮಸ್ತ ಮಿಷನರಿಗಳ ಪರವಾಗಿ ಯುದ್ಧ ಮಾಡುವ ಶಕ್ತಿಗಳು.

ಇದು ವಾಸ್ತವವಾಗಿ ಅಲ್-ಖೈದಾ ಜಿಹಾದಿಗಳ ಪ್ಯಾನ್-ಇಸ್ಲಾಮಿಸಂ ತರಹದ ಮಾನಸಿಕತೆಯಲ್ಲದೇ ಬೇರೇನೂ ಅಲ್ಲ. ಗಡಿರಹಿತ ಮತೀಯ ಸಾಮ್ರಾಜ್ಯ ಈ ಮಾನಸಿಕತೆಯ ಹಿಂದಿರುವ ಮೂಲ ಕಲ್ಪನೆ. ಈ ಮಾನಸಿಕತೆಯ ಪ್ರಕಾರ, ಪಶ್ಚಿಮದ ಬಿಳಿಯ ಕ್ರೈಸ್ತರು ಈ ಸಾಮ್ರಾಜ್ಯದ ಚಕ್ರವತರ್ಿಗಳು. ಉಳಿದವರೆಲ್ಲ ಅವರ ಪ್ರಜೆಗಳು.

ಈ ಮತೀಯ ಮುಖಂಡರ ವಿಷಯ ಹಾಗಿರಲಿ. ನಮ್ಮ ಸಕರ್ಾರಗಳೂ ಈ ರೀತಿಯ ಮಾನಸಿಕತೆಯಿಂದ ಹೊರತಾಗಿಲ್ಲ. ಗುಜರಾತ್ ಹಾಗೂ ಒರಿಸ್ಸಾಗಳಲ್ಲಿ ನಡೆದ ಹಿಂದೂ-ಕ್ರೈಸ್ತ ದಂಗೆಗಳನ್ನು ಕುರಿತು ತನಿಖೆ ನಡೆಸಲು ಅಮೆರಿಕದ ಯುಎಸ್ಸಿಐಆರ್ಎಫ್ ಸದಸ್ಯರಿಗೆ ಸೋನಿಯಾ-ಮನಮೋಹನ್ ಸಕರ್ಾರ ಅನುಮತಿ, ಆಹ್ವಾನ ನೀಡಿದ್ದು ಈ ನಿಟ್ಟಿನ ತಾಜಾ ಉದಾಹರಣೆ. ಮುಂದಿನ ತಿಂಗಳು ಈ ಸಂಸ್ಥೆಯ ಅಧಿಕಾರಿಗಳು ಭಾರತಕ್ಕೆ ಬಂದಿಳಿಯಲಿದ್ದಾರೆ. ನಮ್ಮ ದೇಶದ ಮಿಷನರಿಗಳ ನೆರವಿನಿಂದಲೇ ನಮ್ಮ ದೇಶದ, ಜನರ ಹಾಗೂ ಸಕರ್ಾರಗಳ ವಿರುದ್ಧ ವರದಿ ಸಿದ್ಧಪಡಿಸಿ ಹುಯಿಲೆಬ್ಬಿಸಲಿದ್ದಾರೆ.

ಯುಎಸ್ಸಿಐಆರ್ಎಫ್ ಅಮೆರಿಕದ ಇವ್ಯಾಂಜಲಿಸ್ಟ್ ಲಾಬಿಯ ಹಿಡನ್ ಅಜೆಂಡಾವನ್ನೇ ಪ್ರವತರ್ಿಸುತ್ತ ಬಂದಿರುವುದು ರಹಸ್ಯವೇನಲ್ಲ. `ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್' ಎಂಬುದು ಅದರ ಪೂರ್ಣ ಹೆಸರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರ ಮತೀಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದು ಅದರ ಘೋಷಿತ ಉದ್ದೇಶ. ಆದರೆ ವಾಸ್ತವದಲ್ಲಿ ಮಾಡುತ್ತಿರುವುದು ಮಿಷನರಿಗಳ, ಇವ್ಯಾಂಜಲಿಸ್ಟರ ತಲೆಕಾಯುವ ಕೆಲಸ. ಅವರ ಮತಾಂತರಗಳಿಗೆ ಅಮೆರಿಕನ್ ಸಕರ್ಾರದ ಆಶೀವರ್ಾದ ಕೊಡಿಸುವುದು, ಮತಾಂತರ ಪ್ರಯತ್ನಗಳಿಗೆ ಸ್ಥಳೀಯ ಜನಸಮುದಾಯಗಳಿಂದ, ಸಂಘಟನೆಗಳಿಂದ ಬರುವ ವಿರೋಧಗಳ ವಿರುದ್ಧ `ಮತೀಯ ಸ್ವಾತಂತ್ರ್ಯದ ಹರಣ' ಎಂಬ ಕೂಗೆಬ್ಬಿಸುವುದು ಅದರ ಕೆಲಸ. ಅದರ ಪ್ರಕರ, ಕ್ರೈಸ್ತರು ಇತರ ಮತಗಳಿಗೆ (ಉದಾಹರಣೆಗೆ, ಇಸ್ಲಾಂ) ಹೊಂದುವ ಮತಾಂತರಗಳೆಲ್ಲ, `ಬಲವಂತದ ಮತಾಂತರಗಳು', ಅಥರ್ಾತ್ ಜನರ `ಮತೀಯ ಸ್ವಾತಂತ್ರ್ಯ'ಕ್ಕೆ ವಿರುದ್ಧವಾದವುಗಳು. ಕ್ರೈಸ್ತ ಮತಕ್ಕೆ ಇತರರು ಮತಾಂತರಗೊಂಡರೆ ಅದೇ ನಿಜವಾದ `ಮತೀಯ ಸ್ವಾತಂತ್ರ್ಯ'!

1998ರಲ್ಲಿ ಅಮೆರಿಕ ಸಂಸತ್ತಿನ (ಕಾಂಗ್ರೆಸ್) ಮೂಲಕ ಶಾಸನಾತ್ಮಕವಾಗಿ ಅಸ್ತಿತ್ವಕ್ಕೆ ಬಂದ ಈ ಆಯೋಗ ಜಗತ್ತಿನ ಯಾವ ಯಾವ ದೇಶಗಳು ಜನರ ಮತೀಯ ಸ್ವಾತಂತ್ರ್ಯವನ್ನು ಹತ್ತಿಕ್ಕಿವೆ ಎಂಬ ಕುರಿತು ಅಮೆರಿಕದ ರಾಷ್ಟ್ರೀಯ ಸಕರ್ಾರಕ್ಕೆ ಪ್ರತಿವರ್ಷ ವರದಿ ನೀಡುತ್ತದೆ. ಕೆಲವು ದೇಶಗಳ ವಿರುದ್ಧ ಆಥರ್ಿಕ ದಿಗ್ಬಂಧನದಂತಹ ಕ್ರಮಗಳನ್ನು ಕೈಗೊಳ್ಳುವಂತೆಯೂ ಶಿಫಾರಸು ಮಾಡುತ್ತದೆ. ಈವರೆಗೆ ಅದು ನೀಡಿರುವ ವರದಿಗಳಲ್ಲಿ ಜಗತ್ತಿನ ಒಂದು ಕ್ರೈಸ್ತ ಚಚರ್ಿನ ವಿರುದ್ಧವೂ ಜನರ ಮತೀಯ ಸ್ವಾತಂತ್ರ್ಯದ ಹರಣ ಮಾಡಿದ ಆರೋಪದ ಸುಳಿವೂ ಇಲ್ಲ!

ಈ ಆಯೋಗದ ಹಿಂದಿರುವುದು ಅಮೆರಿಕದ ಬೃಹತ್ ಇವ್ಯಾಂಜೆಲಿಸ್ಟ್ ವ್ಯಾಪಾರಿಗಳು. ಅವರ ಪ್ರಬಲ ಲಾಬಿಯ ಫಲವಾಗಿಯೇ ಈ ಆಯೋಗದ ಸೃಷ್ಟಿಯಾಗಿದೆ. ಇದರ ಕಮಿಷನರ್ಗಳೆಲ್ಲ ಕ್ರೈಸ್ತರೇ. ಇತರ ಮತೀಯರಿಗೆ ಇದರೊಳಗೆ ಪ್ರಾತಿನಿಧ್ಯವಿಲ್ಲ. ಇದು ಕ್ರೈಸ್ತ ಉದ್ದೇಶಗಳನ್ನು ಅಮೆರಿಕದ ಸಕರ್ಾರಿ ಬಲದ ನೆರವಿನಿಂದ ಈಡೇರಿಸಿಕೊಳ್ಳಲು ಮಾಡುತ್ತಿರುವ ಒಂದು ಪ್ರಯತ್ನವಷ್ಟೇ.

1999ರಿಂದ ಯುಎಸ್ಸಿಐಆರ್ಎಫ್ ಸತತವಾಗಿ ಭಾರತವನ್ನು ಜರಿಯುತ್ತ ಬಂದಿದೆ. 1999ರ ಮತಾಂತರ ಗಲಭೆಯ ನಂತರ ಗುಜರಾತಿನ ಫಾ. ಸೆಡ್ರಿಕ್ ಪ್ರಕಾಶ್ ಮೂಲಕ `ಸ್ವತಂತ್ರ' ವರದಿಯನ್ನು ತರಿಸಿಕೊಂಡು ಭಾರತದ ವಿರುದ್ಧ ಕ್ರಮ ಕೈಗೊಳ್ಳಲು ಅಮೆರಿಕಕ್ಕೆ ಅದು ಶಿಫಾರಸು ನೀಡಿತ್ತು. ಅನಂತರ ಸತತವಾಗಿ ಭಾರತದ ಹಿಂದೂ ಸಂಘಟನೆಗಳನ್ನು ತನ್ನ ಬ್ಲ್ಯಾಕ್ಲಿಸ್ಟ್ನಲ್ಲಿ ಇಟ್ಟುಕೊಂಡಿದೆ. ಭಾರತಕ್ಕೆ ಬಂದು `ತನಿಖೆ' ಮಾಡಲು ವಾಜಪೇಯಿ ಸಕರ್ಾರ ಅದಕ್ಕೆ ಅನುಮಿತಿ ನೀಡಿರಲಿಲ್ಲ. ಅಷ್ಟೇಕೆ, ಜಗತ್ತಿನ ಯಾವುದೇ ಕ್ರೈಸ್ತೇತರ ಹಾಗೂ ಸೆಕ್ಯೂಲರ್ ದೇಶವೂ ಅದಕ್ಕೆ ಆದರ, ಮನ್ನಣೆ, ಮಹತ್ವಗಳನ್ನು ನೀಡಿಲ್ಲ. ಆದರೆ ಯಾರೂ ಮಾಡದ ಕೆಲಸವನ್ನು ಮನಮೋಹನ್ ಹಾಗೂ ಸೋನಿಯಾ ಜೋಡಿ ಮಾಡಿ ಮುಗಿಸಿದೆ.

ಪ್ರಸ್ತುತ, ಈ ವರ್ಷದ (2009) ವಾಷರ್ಿಕ ವರದಿ ಸಿದ್ಧಪಡಿಸುತ್ತಿರುವ ಯುಎಸ್ಸಿಐಆರ್ಎಫ್ ಭಾರತವನ್ನು ಕುರಿತ ಅಧ್ಯಾಯವನ್ನು ಬರೆಯದೇ ಇನ್ನೂ ಖಾಲಿ ಇಟ್ಟುಕೊಂಡಿದೆ. ಸೋನಿಯಾ ಸಹಕಾರದಿಂದ ಅದರ `ಖುದ್ದು ತನಿಖೆ' ಪೂರ್ಣವಾದ ನಂತರ ಈ ಅಧ್ಯಾಯ ಸಿದ್ಧವಾಗುತ್ತದೆ.

ಹಿಂದಿನ ಪೋಪ್. ಎರಡನೇ ಜಾನ್ ಪಾಲ್ ಭಾರತಕ್ಕೆ ಎರಡು ಬಾರಿ `ಅಧಿಕೃತ' ಭೇಟಿ ನೀಡಿದ್ದರು. ಪ್ರತಿಬಾರಿಯೂ ಅವರು ಬಂದಾಗ ರಾಷ್ಟ್ರೀಯ ಅಧ್ಯಕ್ಷನೊಬ್ಬನಿಗೆ ಸಿಗುವ ರಾಜಮಯರ್ಾದೆಯನ್ನೇ ಪಡೆದುಕೊಂಡಿದ್ದರು. ನಮ್ಮ `ಸೆಕ್ಯೂಲರ್' ಮಾಧ್ಯಮಗಳಂತೂ ಅವರಿಗೆ ಮಹಾ ಜಗದ್ಗುರುವಿನ ಪಟ್ಟವನ್ನೇ ಕಟ್ಟಿದ್ದವು. ನಮ್ಮ ಸೆಕ್ಯೂಲರ್ ಸಕರ್ಾರದ ಅತಿಥಿ (ಅಥವಾ ಅಭ್ಯಾಗತ) ಆಗಿದ್ದುಕೊಂಡೇ ಅವರು ಇಡೀ ಭಾರತವನ್ನು, ಹಾಗೂ ಏಷ್ಯಾವನ್ನು `ಕ್ರೈಸ್ತ ಭೂಮಿಯನ್ನಾಗಿ ಮಾರ್ಪಡಿಬೇಕು' ಎಂದು ಕ್ಯಾಥೋಲಿಕ್ ಮಿಷನರಿಗಳಿಗೆ ಬಹಿರಂಗ ಕರೆ ನೀಡಿ ಹೋಗಿದ್ದರು.

ಈಗಿನ ಪೋಪ್ 16ನೇ ಬೆನೆಡಿಕ್ಟ್ ಉರುಫ್ ಜೋಸೆಫ್ ರಾಟ್ಸಿಂಗರ್ ಇನ್ನೂ ಭಾರತಕ್ಕೆ ಬಂದಿಲ್ಲ. ಅವರನ್ನು ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಈ ಪೋಪ್ ಕಳೆದ ವಾರ ಪಶ್ಚಿಮ ಏಷ್ಯಾಕ್ಕೆ ಹೋಗಿದ್ದರು. ಅಲ್ಲಿನ ಮುಸ್ಲಿಂ ದೇಶಗಳನ್ನೂ ಮತಾಂತರಿಸಬೇಕು ಎಂಬುದು ಕ್ಯಾಥೋಲಿಕ್ಕರ ಬಹುಕಾಲದ ಯೋಜನೆ (ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಅವರು ಜಿಹಾದಿಗಳಿಂದ ಯೂರೋಪ್ ಅನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ, ಅದಿರಲಿ). ಆದರೆ ಅಲ್ಲಿ ಪೋಪ್ ನೀಡಿದ ಕರೆ ಏನು? `ಮುಸ್ಲಿಮರೊಡನೆ ಕ್ರೈಸ್ತರು ಹೊಂದಿಕೊಂಡು ಬಾಳಬೇಕು; ಸ್ವತಂತ್ರ ಪ್ಯಾಲೆಸ್ತೀನ್ ನಿಮರ್ಾಣವಾಗಬೇಕು'!

ಭಾರತದ ವಿಷಯದಲ್ಲಿ ಅವರು ಎಂತಹ ಕರೆ ನೀಡಬಹುದು? ಅದಕ್ಕೆ ಯಾರು ಕಾರಣ?

ಭಯೋತ್ಪಾದರಿಗಾಗಿ ಭಾರತ ನಾಯಕರ ಕಣ್ಣೀರು!

ಚಿಕ್ಕ ದೇಶವಾದ ಶ್ರೀಲಂಕಾ ಜಗತ್ತಿನ ಅತ್ಯಂತ ಸುವ್ಯವಸ್ಥಿತ, ಸೊಪೀಸ್ಟಿಕೇಟೆಡ್ ಭಯೋತ್ಪಾದಕ ಸಂಘಟನಯನ್ನು ಮಟ್ಟಹಾಕುವುದು ಸಾಧ್ಯವಾದರೆ ಭಾರತಕ್ಕೇಕೆ ನಕ್ಸಲರನ್ನು, ಎಲ್ಟಿಟಿಇಗಳನ್ನು ಹಾಗೂ ಜಿಹಾದಿಗಳನ್ನು ಮಟ್ಟಹಾಕುವುದು ಸಾಧ್ಯವಾಗುತ್ತಿಲ್ಲ?

ಆರು ದಶಕಗಳಿಂದ ಭಯೋತ್ಪಾದನೆಗೆ ಭಾರತ ಗುರಿಯಾಗಿದೆ. ವರ್ಷದಿಂದ ವರ್ಷಕ್ಕೆ ಭಯೋತ್ಪಾದಕರ ಶಕ್ತಿ ವಧರ್ಿಸುತ್ತಲೇ ಇದೆ. ಭಯೋತ್ಪಾದನಯ ವಿರುದ್ಧ ನಮ್ಮ ದೇಶ ಜಯ ಗಳಿಸುವುದು ಯಾವಾಗ?

ನಮ್ಮ ದೇಶದ ಮುಂದೆ ಎರಡು ಉದಾಹರಣೆಗಳಿವೆ. ಎರಡೂ ನಮ್ಮ ನೆರೆ ರಾಷ್ಟ್ರಗಳದು. ಒಂದು, ಅಸಾಮಾನ್ಯ ಧೈರ್ಯ ಹಾಗೂ ರಾಜಕೀಯ ಇಚ್ಛಾಶಕ್ತಿಯಿಂದ ಉಗ್ರರನ್ನು ಮಟ್ಟಹಾಕಿದ ಶ್ರೀಲಂಕಾದ ಉದಾಹರಣೆ. ಉಗ್ರರ ಮುಂದೆ ರಾಜಕೀಯ ಪಕ್ಷಗಳೆಲ್ಲ ಸೋತು ಕೈಕಟ್ಟಿ ಶರಣಾಗಿ ಉಗ್ರರಿಗೇ ಅಧಿಕಾರ ನೀಡಿದ ನೇಪಾಳದ ಉದಾಹರಣೆ ಎರಡನೆಯದು. ಈ ಎರಡರ ಪೈಕಿ ಭಾರತ ನೇಪಾಳದ ಹಾದಿ ಹಿಡಿಯುತ್ತಿರುವುದು ದುರದೃಷ್ಟ.

ಜಗತ್ತಿನ ಯಾವ ದೇಶವೂ ಇಷ್ಟು ವರ್ಷಗಳ ಕಾಲ ಭಯೋತ್ಪಾದನೆಯನ್ನು ಸಹಿಸಿಕೊಂಡಿಲ್ಲ. ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷವೂ ನಿಣರ್ಾಯಕ ಘಟ್ಟ ಮುಟ್ಟಿದೆ. ಉತ್ತರ ಐರ್ಲ್ಯಾಂಡ್ ಭಯೋತ್ಪಾದನೆ ಬಗೆಹರಿದಿದೆ. ಶ್ರೀಲಂಕಾ ಎಲ್ಟಿಟಿಇ ವಿರುದ್ಧ ವಿಜಯ ಸಾಧಿಸಿದೆ.

ಆದರೆ ಭಾರತದಲ್ಲೇನಾಗುತ್ತಿದೆ? ಎಲ್ಟಿಟಿಇ ಅನ್ನು ರಕ್ಷಿಸಬೇಕೆಂಬ ಮಾತನ್ನು ಪ್ರಮುಖ ರಾಜಕಾರಣಿಗಳೇ ಆಡುತ್ತಿದ್ದಾರೆ! ಅವರ ವಿರುದ್ಧ ಯಾರೂ ದನಿಯೆತ್ತುತ್ತಿಲ್ಲ.

`ಎಲ್ಟಿಟಿ ಪ್ರಭಾಕರನ್ ಭಯೋತಾದಕನಲ್ಲ. ಆತ ನನ್ನ ಮಿತ್ರ. ನಾನು ಭಯೋತ್ಪಾದಕನೆ? ಹಾಗೆಯೇ ಅವನೂ ಭಯೋತ್ಪಾದಕನಲ್ಲ' ಎಂದು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಊಳಿಡುತ್ತಿದ್ದರೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ತುಟಿ ಪಿಟಕ್ ಎನ್ನಲಿಲ್ಲ.

ಅದು ಯಾರೋ ಒಬ್ಬ ಕರುಣಾನಿಧಿ ಎಂಬ ಸಾಮಾನ್ಯ ವ್ಯಕ್ತಿಯ ಹೇಳಿಕೆಯಲ್ಲ. ಈ ಮನುಷ್ಯ ಒಂದು ರಾಜ್ಯದ ಮುಖ್ಯಮಂತ್ರಿ. `ಭಾರತದ ಸಂವಿಧಾನ, ಅಖಂಡತೆ ಹಾಗೂ ಸಾರ್ವಭೌಮತೆಗೆ ಬದ್ಧವಾಗಿದ್ದು ಅವುಗಳನ್ನು ಎತ್ತಿಹಿಡಿಯುತ್ತೇನೆ' ಎಂದು ಸಂವಿಧಾನಬದ್ಧವಾಗಿ ಪ್ರಮಾಣವಚನ ತೆಗೆದುಕೊಂಡು ಸಾಂವೈಧಾನಿಕ ಅಧಿಕಾರ ಹಿಡಿದ ವ್ಯಕ್ತಿ. ಎಲ್ಟಿಟಿಇ ಅನ್ನು ಜಗತ್ತಿನ 31 ದೇಶಗಳು ಭಯೋತಾದಕ ಸಂಘಟನೆ ಎಂದು ಘೋಷಿಸಿವೆ. ಭಾರತದಲ್ಲೂ ಅದು ನಿಷೇಧಿತ ಸಂಘಟನೆ. ಅದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಹತ್ಯೆ ಮಾಡಿರುವ ಸಂಘಟನೆ ಎಂದು ಸುಪ್ರೀಮ್ ಕೋಟರ್್ ಘೋಷಿಸಿದೆ. ಹೀಗಿರುವಾಗ ಸಂವೈಧಾನಿಕ ಹುದ್ದೆಯಲ್ಲಿರುವವರು ಅದರ ಪರವಾಗಿ ಹೇಳಿಕೆ ಕೊಡುತ್ತಿದ್ದರೆ ರಾಜೀವರ ಪತ್ನಿ ಮತ್ತು ಆಡಳಿತ ಮೈತ್ರಿಕೂಟದ ಅಧ್ಯಕ್ಷೆ ಎನಿಸಿಕೊಂಡಿರುವ, ಜಗತ್ತಿನ ಇತರ ವಿಷಯಗಳ ಮಾತೆಲ್ಲ ಆಡುವ, ಸೋನಿಯಾ ಹಾಗೂ ಅವರ ಪ್ರಕಾರ, `ಅತ್ಯಂತ ಪ್ರಬಲ ಹಾಗೂ ದಕ್ಷ ಪ್ರಧಾನಿ' ಎನಿಸಿದ್ದ ಮನಮೋಹನ್ ತುಟಿ ಎರಡು ಮಾಡದೇ ಏಕೆ ಸುಮ್ಮನಿದ್ದರು?

ಕರುಣಾನಿಧಿ ಸಹಕಾರದಿಂದ ಸಕರ್ಾರ ನಡೆಸಬೇಕು ಎಂಬ `ಪ್ರಬಲ' ಇಚ್ಛೆಯೆ? ಅಧಿಕಾರ ಇವತ್ತು ಇರುತ್ತದೆ, ಇನ್ನೊಮ್ಮೆ ಹೋಗುತ್ತದೆ. ಅದರ ಸಲುವಾಗಿ ದೇಶದ ಮಾಜಿ ಪ್ರಧಾನಿಯನ್ನು ಕೊಂದ, ಸಾವಿರಾರು ನಾಗರಿಕರನ್ನು ಹತ್ಯೆ ಮಾಡಿದ, ದೇಶದ ವಿರುದ್ಧ ಯುದ್ಧ ಘೋಷಿಸಿದ, ಹಾಗೂ ದೇಶದ ವಿರುದ್ಧ ಸಮರ ನಡೆಸುತ್ತಿರುವ ಇತರ ಭಯೋತ್ಪಾದಕ ಸಂಘಟನೆಗಳಿಗೆ ಸಹಕಾರ ನೀಡುತ್ತಿರುವ ಒಂದು ದೊಡ್ಡ ಭಯೋತ್ಪಾದಕ ಸಂಘಟನೆಯ ಪರವಾಗಿ ದೇಶದ ಒಬ್ಬ `ಸಂವಿಧಾನಬದ್ಧ' ಮುಖ್ಯಮಂತ್ರಿ ಹೇಳಿಕೆ ಕೊಡುತ್ತಿದ್ದರೆ ಅದನ್ನು ಕೇವಲ `ನಮಗೆ ಅಧಿಕಾರ ಸಿಗಲಿ' ಎಂಬ ಆಸೆಯಿಂದ ಸಹಿಸಬೇಕೆ?

ಇಂತಹ ಹೇಳಿಕೆ ಭಾರತೀಯ ದಂಡ ಸಂಹಿತೆ (ಐಪಿಸಿ) ಹಾಗೂ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ (ಯುಎಪಿಎ) ಪ್ರಕಾರ ದಂಡಾರ್ಹ ಅಪರಾಧ. ದೇಶದ ಯಾವುದೇ ಪ್ರಜೆಯನ್ನೂ ಇವುಗಳ ಆಧಾರದ ಮೇಲೆ ಶಿಕ್ಷಿಸಬಹುದು ಎಂದು ಕಾನೂನುಗಳು ಹೇಳುತ್ತಿವೆ. ಹೀಗಿರುವಾಗ ಸಂವಿಧಾನವನ್ನು ರಕ್ಷಿಸುವ ಹಾಗೂ ಅದನ್ನು ಜಾರಿಮಾಡುವ ಹುದ್ದೆಯಲ್ಲಿರುವ ಅಪರಾಧಿಗಳಿಗೆ ಹೆಚ್ಚಿನ ಶಿಕ್ಷೆಯಾಗಬೇಕು. ಆದರೆ ಕರುಣಾನಿಧಿಯ ಹೇಳಿಕೆಗಳನ್ನು ಮೌನವಾಗಿ ಸಹಿಸಿಕೊಂಡಿದ್ದು ಮಾತ್ರವಲ್ಲ, ಅವರ ತಾಳಕ್ಕೆ ತಕ್ಕಂತೆ ಮನಮೋಹನ್-ಸೋನಿಯಾ ಜೋಡಿ ಕುಣಿದಿದ್ದು ಏಕೆ?

ತಮಿಳು ಜನರಿಗೆ ಸಮಾನ ಹಕ್ಕುಗಳು ಬೇಕು ನಿಜ. ಆದರೆ ಎಲ್ಟಿಟಿಇ ತಮಿಳರ ಪ್ರತಿನಿಧಿಯಲ್ಲ. ಅದರದು ಅಹಿಂಸಾ ಹೋರಾಟವೂ ಅಲ್ಲ. ಅದು ಸಾಮಾಜಿಕ ಹಕ್ಕುಗಳಿಗಾಗಿ ಹೋರಾಡುತ್ತಿರುವ ನಾಗರಿಕ ಸಂಘಟನೆಯಲ್ಲ. ಚಿಕ್ಕ ದೇಶವಾದ ಶ್ರೀಲಂಕಾ ಮೊದಲಬಾರಿಗೆ ಅಷ್ಟು ದೊಡ್ಡ ಭಯೋತ್ಫಾದಕ ಸಂಘಟನೆಯನ್ನು ಬಡಿಯುತ್ತಿದ್ದರೆ ಅದನ್ನು ಮೆಚ್ಚಬೇಕಾದ್ದು ಮೊದಲ ಕರ್ತವ್ಯ. ಆದರೆ ತಮಿಳರ ಹೆಸರು ಹೇಳಿಕೊಂಡು ಪ್ರಭಾಕರನ್ ಪರವಾಗಿ ವಕಾಲತ್ತು ವಹಿಸುವ ಕರುಣಾನಿಧಿಯಂತಹವರು ಈ ದೇಶದ ನಾಯಕರೆ?

ಇದೇ ಡಿಎಂಕೆಯ ಸಕರ್ಾರಗಳನ್ನು ಹಿಂದೆ ಎರಡು ಬಾರಿ ಭ್ರಷ್ಟಾಚಾರ ಹಾಗೂ ದೇಶವಿರೋಧಿ ಚಟುವಟಿಕೆಗಳ ಕಾರಣದಿಂದ ವಜಾ ಮಾಡಲಾಗಿತ್ತು. 1991ರಲ್ಲಿ ರಾಜೀವ್ ಹತ್ಯೆ ಮಾಡಿದ ಎಲ್ಟಿಟಿಇಗೆ ಕರುಣಾನಿಧಿ ಸಕರ್ಾರ ಬಹಳ ಸಹಕಾರ ನೀಡಿತ್ತು ಎಂದು ಜೈನ್ ಆಯೋಗ ಸ್ಪಷ್ಟವಾಗಿ ಹೇಳಿದೆ. ಇಂತಹ ಡಿಎಂಕೆ ಹಾಗೂ ಕರುಣಾನಿಧಿಯನ್ನು ಗಾಂಧಿ ಕುಟುಂಬೇತರ ಕಾಂಗ್ರೆಸ್ ಅಧ್ಯಕ್ಷರುಗಳು ದೂರವಿಟ್ಟಿದ್ದರು. ಆದರೆ ಸೋನಿಯಾ ಗಾಂಧಿ ಎಲ್ಲವನ್ನೂ ಮರೆತು, ಕ್ಷಮಿಸಿ ಆದರದಿಂದ ಬರಮಾಡಿಕೊಂಡು ಅಧಿಕಾರ ಹಂಚಿಕೊಂಡರು.

ಸೋನಿಯಾರನ್ನು ಎಲ್ಟಿಟಿಇ ಭಯ ಕಾಡುತ್ತಿರಬಹುದು. ಹಾಗೆಂದ ಮಾತ್ರಕ್ಕೆ ಈ ಸಂಘಟನೆಗೆ ಹತ್ತಿರವಾದವರನ್ನು ಅವರ ಕುಟುಂಬ ಏಕೆ ಸದಾ ಕ್ಷಮಿಸುತ್ತಲೇ ಇರಬೇಕು?

ವಾಸ್ತವವಾಗಿ ಕಾಂಗ್ರೆಸ್ ಎಂದೂ ಭಯೋತ್ಪದಕರನ್ನು ಮಣಿಸಿಲ್ಲ. ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಸುಮಾರು 50 ವರ್ಷಗಳ ಕಾಲ ಆಡಳಿತ ನಡೆಸಿದೆ. ಆದರೆ ಅದರ ಅಧಿಕಾರದ ಅವಧಿಯಲ್ಲಿ ಭಯೋತ್ಫಾದನೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗಿಲ್ಲ. ಪಾಕಿಸ್ತಾನ ಪ್ರೇರಿತ ಸಿಖ್ ಭಯೋತ್ಪಾದಕರನ್ನು ಇಂದಿರಾ ಗಾಂಧಿ ಕಾಲದಲ್ಲಿ ಓಲೈಸಲಾಗಿತ್ತು. ಕಡೆಗೆ ಅದು ಅವರ ಕುತ್ತಿಗೆಗೇ ಬಂದಿತು. ಆದರೂ ಇಂದಿರಾ ಕಡೆಘಳಿಗೆಯಲ್ಲಿ ಒಂದಿಷ್ಟು ಧೈರ್ಯ ತೋರಿ ಬ್ರಿಂಧನ್ವಾಲೆಯನ್ನು ನಿನರ್ಾಮ ಮಾಡಿ ಸತ್ತರು.

ಸಾವಿರಾರು ಮುಗ್ಧ ಸಿಖ್ಖರ ನರಮೇಧದ ನಡುವೆ ಸಿಂಹಾಸನವೇರಿದ ರಾಜೀವ್ ಗಾಂಧಿ ಕಾಲದಲ್ಲಿ ಪಂಜಾಬ್ ಪ್ರತ್ಯೇಕತಾವಾದಕ್ಕೆ ಪೊಲೀಸ್ ಪರಿಹಾರವೇ ಸೂಕ್ತ ಮದ್ದಾಯಿತು. ಆದರೆ ಅವರು ಎಲ್ಟಿಟಿಇ ಅನ್ನು ಬೆಳೆಸಿದರು. ಕ್ವಾಟ್ರೋಚಿಯಂತಹ ತಮ್ಮ ಪತ್ನಿಯ ಸಂಗಾತಿಗಳನ್ನು ಓಲೈಸಿದರು. ಕಡೆಗೆ ಎಲ್ಟಿಟಿಇ ಅನ್ನು ನಿನರ್ಾಮ ಮಾಡುವ ಮೊದಲೇ ತಾವೇ ಅದಕ್ಕೆ ಬಲಿಯಾದರು.

1940 ಮತ್ತು 1960ರ ದಶಕಗಳಲ್ಲಿ ಆರಂಭವಾದ ಎಡಪಂಥೀಯ ಭಯೋತ್ಪಾದನೆಯನ್ನು, 1950ರ ದಶಕದಲ್ಲಿ ಆರಂಭವಾದ ಪಾಕ್ ಪ್ರೇರಿತ ಜಿಹಾದಿ ಭಯೋತ್ಪಾದನೆಯನ್ನು ಮಟ್ಟಹಾಕುವುದು ಕಾಂಗ್ರೆಸ್ ಸಕರ್ಾರಗಳಿಂದ ಸಾಧ್ಯವಾಗಿಲ್ಲ. ಬದಲಾಗಿ ಆಗಿಂದಾಗ್ಗೆ ಈ ಉಗ್ರವಾದಗಳ ಓಲೈಕೆ, ನವೀಕರಣಗಳೇ ನಡೆಯುತ್ತ ಬಂದಿವೆ. ಪಂಜಾಬ್ ಭಯೋತ್ಪಾದನೆ ಅತಿಯಾದಾಗ 1985ರಲ್ಲಿ ರಾಜೀವ್ ಸಕರ್ಾರ ಜಾರಿಗೆ ತಂದಿದ್ದ ಟಾಡಾ ವಿಶೇಷ ಕಾಯ್ದೆಯನ್ನು ಉಗ್ರರ ವಿರುದ್ಧ ಬಳಕೆ ಮಾಡಿದ್ದು ಬಹಳ ಕಡಿಮೆ.

ಆದರೆ ರಾಜೀವ್ ಜಾರಿಗೊಳಿಸಿದ್ದ ಟಾಡಾ ಅವರ ಹತ್ಯೆಯ ಸಂಚುಗಾರರನ್ನು ಹಿಡಿಯಲು ನೆರವಿಗೆ ಬಂದಿತು. ಈ ವಿಶೇಷ ಕಾಯ್ದೆ ಇಲ್ಲದಿದ್ದ ಪಕ್ಷದಲ್ಲಿ ರಾಜೀವ್ ಹತ್ಯೆಯ ಸಂಚಿನ ಆರೋಪಗಳ್ಯಾವುವೂ ಸಾಬೀತಾಗುತ್ತಿರಲಿಲ್ಲ. ಯಾರಿಗೂ ಶಿಕ್ಷೆಯಾಗುತ್ತಿರಲಿಲ್ಲ. ಆದರೂ ಕಾಂಗ್ರೆಸ್ಸಿನ ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯಲು ಅದನ್ನು ಬಳಸಲಾಗುತ್ತಿದೆ ಎಂಬ ತೀವ್ರ ವಿವಾದದ ನಡುವೆ 1995ರಲ್ಲಿ ಅದನ್ನು ಮುಗಿಸಲಾಯಿತು.

ಭಯೋತಾದನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕಾಂಗ್ರೆಸ್ಸು ಅತಿ ದುರ್ಬಲತೆಯನ್ನು ತೋರುತ್ತ ಬಂದಿದೆ. ನೆಹರೂ ಮತ್ತು ಇಂದಿರಾಗೆ ಎಡಪಂಥೀಯ ಒಲವು ತೀವ್ರವಾಗಿತ್ತು. ಹೀಗಾಗಿ ಅವರ ಜೊತೆ ಓಡಾಡಿಕೊಂಡಿದ್ದವರೇ ನಕ್ಸಲ್ ಉಗ್ರವಾದವನ್ನು ಬೆಳೆಸಿದರು. ತೀರಾ ಈಚಿನವರೆಗೂ, ಮತ್ತು ಈಗಲೂ, `ನಕ್ಸಲ್ವಾದ ಭಯೋತ್ಪಾದನೆಯಲ್ಲ, ಅದು ಜನಪರವಾದ ಸಾಮಾಜಿಕ ಚಳವಳಿ' ಎಂದು ವಾದಿಸುವ ಕಾಂಗ್ರೆಸ್ಸಿಗರಿದ್ದಾರೆ! ಹಾಗೆ ನೋಡಿದರೆ, ಅಲ್ ಖೈದಾ ಸಹ ಭಯೋತ್ಪಾದಕ ಸಮಘಟನೆಯಲ್ಲ. ಅದು ಧರ್ಮ ಸಂಸ್ಥಾಪನೆಗೆ ಬದ್ಧವಾಗಿರುವ ದೈವಿಕವಾದ ಸಂಘಟನೆ ಎನ್ನಬೇಕಾಗುತ್ತದೆ!

ಮುಸ್ಲಿಂ ತುಷ್ಟೀಕಕರಣಕ್ಕಾಗಿ ನೆಹರೂ, ಇಂದಿರಾ, ರಾಜೀವ್ ಹಾಗೂ ನರಸಿಂಹರಾವ್ ಜಿಹಾದಿ ಭಯೋತ್ಪಾದಕತೆಯನ್ನು ಸಹಿಸಿಕೊಂಡರು. ಅದನ್ನು ಮೃದುವಾದ ಹಸ್ತಗಳಿಂದ `ಎದುರಿಸಲಾಯಿತು'. ಆದರೆ ಸೊನಿಯಾ ಗಾಂಧಿ ಕಾಲದಲ್ಲಿ ತೋರುತ್ತಿರುವಷ್ಟು ದೌರ್ಬಲ್ಯವನ್ನು ಹಿಂದಿನ ಯಾವ ಕಾಂಗ್ರೆಸ್ ಸಕರ್ಾರವೂ ತೋರಿಸಿರಲಿಲ್ಲ ಎಂದೇ ಹೆಳಬೇಕು. ಸೋನಿಯಾ ಎಲ್ಲ ಹಳೆಯ ಕಾಂಗ್ರಸಸ್ ದಾಖಲೆಗಳನ್ನು ಮುರಿದಿದ್ದಾರೆ.

ಸೋನಿಯಾ ಕಾಲದಲ್ಲಿ ಪಾಲರ್ಿಮೆಂಟಿನ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು ನೇಣಿಗೆರುವುದನ್ನು ತಡೆಯಲಾಯಿತು. ಬೋಫೋಸರ್್ ಹಗರಣದ ಫಲಾನುಭವಿ, ಇಟಲಿಯ ಒಟ್ಟಾವಿಯೋ ಕ್ವಾಟ್ರೋಚಿಯನ್ನು ನಿರಪರಾಧಿ ಎಂದು ಸಾರಿ ಫೈಲನ್ನು ಮುಚ್ಚಲಾಯಿತು. ಯಾವುದೇ ಸರಿಯಾದ ಕಾರಣವಿಲ್ಲದೇ ಪೋಟಾ ಕಾಯ್ದೆಯನ್ನು ರದ್ದುಮಾಡಲಾಯಿತು. ಎಲ್ಟಿಟಿಇಯನ್ನು ಅವರ ಕುಟುಂಬದ ಸದಸ್ಯರು ಧಾರಾಳವಾಗಿ `ಕ್ಷಮಿಸಿದರು'. ಪ್ರಿಯಂಕಾ ನಳಿನಿಯನ್ನು ಭೇಟಿ ಮಾಡಿ ತಬ್ಬಿಕೊಂಡು ಅತ್ತರು. ಅನಂತರ ಪ್ರಭಾಕರನ್ ಅನ್ನೂ ಕ್ಷಮಿಸಿರುವುದಾಗಿ ವಿಚಿತ್ರ ಹೇಳಿಕೆ ಕೊಟ್ಟರು! (ಈಗ ಕಸಬ್ ಮುಗ್ಧ ಬಾಲಕ ಎಂದು ವಾದಿಸಲಾಗುತ್ತಿದೆ. ಅವನನ್ನು ಬಿಡಿಸಿ ಕಳುಹಿಸುವ ಏಪರ್ಾಟು ನಡೆದಿದೆ! ಅವನನ್ನು ಜೀವಂತ ಹಿಡಿದಿದ್ದೇ ದೊಡ್ಡ ತಪ್ಪ್ಪಾಯಿತಲ್ಲ ಎನ್ನುವಂತಾಗಿದೆ.)

ಇವೆಲ್ಲ ಏತಕ್ಕಾಗಿ? ಸೋನಿಯಾ ಪರಿವಾರ ವಿಚಿತ್ರ ಹಾಗೂ ಅಸಹಜವಾದ ಹೇಳಿಕೆಗಳನ್ನು ಕೊಡುತ್ತಿದೆ. ಇಲ್ಲವೇ ಮೌನಕ್ಕೆ ಶರಣಾಗಿದೆ? ಈ ಪರಿವಾರ ಯಾರಿಗೇಕೆ ಹೆದರಬೇಕು? ಇಡೀ ದೇಶವೇ ಅವರ ಜೊತೆಗಿದೆ. ತೆರಿಗೆದಾರರ ವೆಚ್ಚದಲ್ಲಿ ವೈಯಕ್ತಿಕ ಸುರಕ್ಷೆಯನ್ನೂ ಅವರಿಗೆ ನೀಡಲಾಗಿದೆ. ಉಗ್ರರ ವಿಷಯದಲ್ಲಿ ಅವರು ಧೈರ್ಯವನ್ನೇಕೆ ತೋರುತ್ತಿಲ್ಲ? ಆರ್ಎಸ್ಎಸ್ ಮುಂತದ ಹಿಂದೂ ಸಂಘಟನೆಗಳನ್ನು ವಾಚಾಮಗೋಚರವಾಗಿ ನಿಂದಿಸುವವರು ಎಲ್ಟಿಟಿಇ ಅನ್ನು ಕ್ಷಮಿಸುವುದೇಕೆ? ಅಂತಹ ಅಗತ್ಯವಾದರೂ ಏನಿದೆ? ಇಂತಹ ಹೇಳಿಕೆಗಳನ್ನು ಕೊಡದೇ ಸುಮ್ಮನೆ ಏಕಿರಬಾರದು?

ತಮಿಳುನಾಡಿನ ರಾಜಕಾರಣದ ಮೇಲೆ ಎಲ್ಟಿಟಿಇ ಛಾಯೆ ದಟ್ಟವಾಗಿದೆ. ವಾಸ್ತವವಾಗಿ ಪ್ರಭಾಕರನ್ ತಪ್ಪಿಸಿಕೊಳ್ಳಲಿ ಎಂಬುದೇ ಅಲ್ಲಿನ ಕೆಲವು ಪ್ರಮುಖ ರಾಜಕಾರಣಿಗಳ ಬಯಕೆ. ಪ್ರಭಾಕರನ್ ಸತ್ತು, ಅವನ ಯಾವುದಾದರೂ ಡೈರಿ ಸಿಕ್ಕರೆ ಏನು ಗತಿ - ಎಂಬ ಭಯ ಹಲವರಿಗೆ ಇರಬಹುದು. ಅಥವಾ ಅವನು ಸೆರೆಸಿಕ್ಕಿ ಬಾಯಿಬಿಟ್ಟರೇನು? - ಎಂಬ ಭಯವೂ ಇರಬಹುದು. ಹೀಗಾಗಿ ಅವನು ತಪ್ಪಿಕೊಳ್ಳಲಿ ಎಂದು ಹಾರೈಸುವ ರಾಜಕಾರಣಿಗಳಿಗೆ ನಮ್ಮಲ್ಲಿ ಕೊರತೆಯಿಲ್ಲ.

ನಮ್ಮಲ್ಲಿ ಬಿನ್ ಲಾಡೆನ್ಗಾಗಿ, ದಾವೂದ್ ಇಬ್ರಾಹಿಮ್ಗಾಗಿ, ಪ್ರಭಾಕರನ್ಗಾಗಿ ಕಣ್ಣೀರಿಡುವ `ನಾಯಕ'ರಿದ್ದಾರೆ. ದೇಶದಲ್ಲಿ ಇಂತಹ ನಾಯಕರು ಇರುವಾಗ, ಜನಗಳಿಗೂ ಕಣ್ಣೀರೇ ಗತಿ.

ಸ್ವಿಸ್ ಬ್ಯಾಂಕ್ ಎಂದರೆ ಮುಜುಗರ!

ಸ್ವಿಸ್ ಬ್ಯಾಂಕುಗಳು ಮತ್ತು ಇತರ ಟ್ಯಾಕ್ಸ್ ಹೆವೆನ್ಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ, ಕೊಳ್ಳೆಹಣವನ್ನು ವಾಪಸ್ಸು ತರುವ ಮಾತು ಹಾಗಿರಲಿ. ಭಾರತೀಯರು ಅಲ್ಲಿ ಹಣ ಇಟ್ಟಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವುದಕ್ಕೇ ಯುಪಿಎ ಸಕರ್ಾರ ಕೊಸರಾಡುತ್ತಿದೆ! ಸ್ವಿಸ್ ಬ್ಯಾಂಕ್ ಎಂದರೇ ಸಾಕು, ಕಾಂಗ್ರೆಸ್ಸಿಗರು ಮೈಮೇಲೆ ಹಾವು, ಚೇಳು ಹರಿದಾಡಿದಂತೆ ಆಡುತ್ತಿದ್ದಾರೆ. ಜಗತ್ತಿನ ಪ್ರಮುಖ ರಾಷ್ಟ್ರಗಳು ಈಗಾಗಲೇ ಕಾಯರ್ೋನ್ಮುಖವಾಗಿರುವಾಗ ಕಾಂಗ್ರೆಸ್ಸಿನ ದೊಡ್ಡ ಕುಟುಂಬ ಅರ್ಥಗಭರ್ಿತ ಮೌನಕ್ಕೆ ಶರಣಾಗಿದೆ.

ಈ ಕುಟುಂಬದವರನ್ನು ಮಾತನಾಡಿಸುವುದು ಬಹಳ ಕಷ್ಟ. ಅವರೇ ನಿರ್ಧರಿಸಿ ಬಾಯಿ ತೆರೆದಾಗ ಮಾತ್ರ ಕೇಳಲು ಅವಕಾಶ. ಉಳಿದಂತೆ ಸದಾ ಮೌನ, ಮೌನ, ಮೌನ. ಆದರೆ ನಮ್ಮ ಸಕರ್ಾರಕ್ಕೇಕೆ ಇಷ್ಟು ನಿಷ್ಕ್ರಿಯತೆ? ಜನಪಥದ ದೊಡ್ಡ ಕುಟುಂಬದ ವಿಷಯಗಳು ಬಯಲಾಗುತ್ತವೆ ಎಂಬ ಭಯವಿರಬಹುದು.

ಇದನ್ನು ಅಮೆರಿಕ ಸಕರ್ಾರದೊಡನೆ ಹೋಲಿಸಿ ನೋಡಿ. ಬರಾಕ್ ಒಬಾಮಾ ಸಕರ್ಾರಕ್ಕೆ ಅಂತಹ ಯಾವುದೇ ಭಯವಿಲ್ಲ. ನೀವು ಮುಚ್ಚಿಡಲು ಅಪೇಕ್ಷಿಸುವ ತಪ್ಪು ಮಾಡಿರದಿದ್ದರೆ ಮನಸ್ಸು ಯಾವಾಗಲೂ ತಿಳಿಯಾಗಿರುತ್ತದೆ. ನಿಲುವು ಸ್ಪಷ್ಟವಾಗಿರುತ್ತದೆ. `ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡ' ಎನ್ನುವ ಮನೋಭಾವ ಇರುವುದಿಲ್ಲ. ಬ್ಬೆ..ಬ್ಬೆ..ಬ್ಬೆ.. ಎನ್ನುವುದು, `ದೇಶದ ಹಣ ವಾಪಸ್ ತನ್ನಿ' ಎನ್ನುವವರನ್ನೇ ಕಚ್ಚಲು ಹೋಗುವುದು - ಇವೆಲ್ಲ ಇರುವುದಿಲ್ಲ.

ಒಬಾಮಾ ಸಕರ್ಾರ ಆಗಲೇ ತೆರಿಗೆಗಳ್ಳರನ್ನು ಹಿಡಿಯುವ ಕೆಲಸ ಆರಂಭಿಸಿದೆ. ಸ್ವಿಟ್ಜರ್ಲ್ಯಾಂಡಿನ ಬಾಸೆಲ್ ಹಾಗೂ ಜ್ಯೂರಿಚ್ ನಗರಗಳಲ್ಲಿ ಕೇಂದ್ರ ಕಚೇರಿಗಳನ್ನು ಹೊಂದಿರುವ, ಜಾಗತಿಕ ಮಟ್ಟದಲ್ಲಿ ನೂರಾರು ಶಾಖೆಗಳನ್ನು ಹೊಂದಿರುವ, `ಯುಬಿಎಸ್ ಎಜಿ' ಬ್ಯಾಂಕಿನಲ್ಲಿ ಅಪಾರ ಕಪ್ಪುಹಣ ಇಟ್ಟಿರುವ ಆರೋಪದ ಮೇಲೆ ಮೈಖೆಲ್ ಸ್ಟೀವನ್ ರೂಬಿನ್ಸ್ಟೀನ್ ಎಂಬ 55 ವರ್ಷದ ವ್ಯಕ್ತಿಯನ್ನು ಅಮೆರಿಕದಲ್ಲಿ ಈಚೆಗೆ ಬಂಧಿಸಲಾಗಿದೆ. ಜಾಗತಿಕ ಕಪ್ಪುಹಣದ ಹೊಳೆಯನ್ನು ತಡೆಯುವ ನಿಟ್ಟಿನಲ್ಲಿ ಮೊದಲ ಬಲಿ ಆತ. ಸಕರ್ಾರಕ್ಕೆ ಸುಳ್ಳು ತೆರಿಗೆ ರಿಟನರ್್ ಸಲ್ಲಿಸಿ ಯುಬಿಎಸ್ ಎಜಿ ಸ್ವಿಸ್ ಬ್ಯಾಂಕಿನಲ್ಲಿ 20 ಲಕ್ಷ ಡಾಲರ್ಗಳಷ್ಟು ಕ್ರಗೆರ್ಯಾಂಡ್ ಚಿನ್ನದ ನಾಣ್ಯಗಳನ್ನು ಇಟ್ಟಿದ್ದಾನೆ ಎಂಬ ಆರೋಪ ಅವನ ಮೇಲಿದೆ. 2001-2008ರ ಅವಧಿಯಲ್ಲಿ 45 ಲಕ್ಷ ಸ್ವಿಸ್ ಫ್ರಾಂಕ್ಗಳಷ್ಟು ಮೌಲ್ಯದ ಷೇರುಗಳನ್ನೂ ಈತ ಖರೀದಿಸಿದ್ದಾನೆ ಎನ್ನಲಾಗಿದೆ.

ಪ್ರಪಂಚದಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಚಿನ್ನದ ನಾಣ್ಯಗಳೆಂದರೆ ದಕ್ಷಿಣ ಆಪ್ರಿಕಾದ ಕ್ರಗೆರ್ಯಂಡ್ ಚಿನ್ನದ ನಾಣ್ಯಗಳು (ದಕ್ಷಿಣ ಆಪ್ರಿಕಾ ಚಿನ್ನದ ಹಾಗೂ ವಜ್ರದ ಗಣಿಗಳಿಗೆ ಜಗತ್ಪಸಿದ್ಧ). ಈ ನಾಣ್ಯಗಳು ಅಪ್ಪಟ ಚಿನ್ನ ಹೊಂದಿರುತ್ತವೆ. 22 ಮತ್ತು 24 ಕ್ಯಾರೆಟ್ಗಳಲ್ಲಿ ದೊರೆಯುತ್ತವೆ. 1967-70ರಲ್ಲಿ ಮಾರುಕಟ್ಟೆಗೆ ಬಂದ ಕ್ರಗೆರ್ಯಾಂಡ್ ಜಗತ್ತಿನ ಪ್ರಥಮ ವಾಣಿಜ್ಯಿಕ ಸುವರ್ಣ ನಾಣ್ಯ. ಈವರೆಗೆ ಸುಮಾರು 5.4 ಕೋಟಿ ಕ್ರಗೆರ್ಯಾಂಡ್ ನಾಣ್ಯಗಳು ಜಾಗತಿಕ ಮಟ್ಟದಲ್ಲಿ ಹರಿದಾಡಿವೆ ಎಂಬ ಅಂದಾಜಿದೆ. ಕ್ರಗೆರ್ಯಾಂಡ್ ಬ್ರಾಂಡಿಗೆ ಅಂತಾರಾಷ್ಟ್ರೀಯ ಮಾನ್ಯತೆ ಇದೆ. ಅದರ ಗುಣಮಟ್ಟದ ಬಗ್ಗೆ ಖಾತ್ರಿ ಇದೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದರ ಮೂಲಕ ವಹಿವಾಟುಗಳು ಹೆಚ್ಚಾಗಿ ನಡೆಯುತ್ತವೆ.

ಪ್ರಸ್ತುತ ವಿಷಯಕ್ಕೆ ಬಂದರೆ, ಅಮೆರಿಕದ ತೆರಿಗೆಗಳ್ಳ ನಾಗರಿಕರಿಂದ ಸುಮಾರು 2000 ಕೋಟಿ ಡಾಲರ್ಗಳಷ್ಟು ಹಣವನ್ನು ಸಂಗ್ರಹಿಸಿ ಅವರು ತಮ್ಮ ದೇಶವನ್ನು ವಂಚಿಸುವುದಕ್ಕೆ ನೆರವಾಗಿರುವ ಆರೋಪವನ್ನು ಯುಬಿಎಸ್ ಎಜಿ ಸಂಸ್ಥೆ ಎದುರಿಸುತ್ತಿದೆ. ಅದದ ವಿರುದ್ಧ ಅಮೆರಿಕದ ಇಂಟರ್ನಲ್ ರೆವೆನ್ಯೂ ಸವರ್ಿಸ್ (ಐ.ಆರ್.ಎಸ್) ಕ್ರಿಮಿನಲ್ ತನಿಖೆ ನಡೆಸುತ್ತಿದೆ. ಸಿಕ್ಕಿಹಾಕಿಕೊಂಡಿರುವ ಯುಬಿಎಸ್ ತನ್ನ ತಪ್ಪನ್ನು ಈಗಾಗಲೇ ಒಪ್ಪಿಕೊಂಡಿದೆ.

ಸಕರ್ಾರಗಳು ಕಾರ್ಯ ನಿರ್ವಹಿಸಬೇಕಿರುವುದು ಹೀಗೆ. ಅದನ್ನು ಬಿಟ್ಟು `ದೇಶದ ಹಣ ವಾಪಸ್ ತನ್ನಿ; ತೆರಿಗೆಗಳ್ಳರನ್ನು-ದೇಶದ್ರೋಹಿಗಳನ್ನು ಶಿಕ್ಷಿಸಿ; ಕಪ್ಪುಹಣವನ್ನು ಮುಟ್ಟುಗೋಲು ಹಾಕಿಕೊಂಡು ದೇಶದ ಆಥರ್ಿಕತೆಯನ್ನು ಉತ್ತಮಪಡಿಸಲು ಬಳಸಿಕೊಳ್ಳಿ - ಎನ್ನುವವರ ಮೇಲೇಕೆ ಹರಿಹಾಯಬೇಕು? ಈ ಮಾತನ್ನು ಬಿಜೆಪಿ ಆಡಿದರೇನು? ಎಡಪಕ್ಷಗಳು ಆಡಿದರೇನು? ಯಾರು ಆಡಿದರೂ ಇವು ಸ್ವಾಗತಾರ್ಹವಾದ ಮಾತುಗಳಲ್ಲವೆ? ಹಾಗೆ ಕೇಳುವುದೇ ಒಂದು ಅಪರಾಧ ಎನ್ನುವಂತಹ ನಿಲುವು ಏನನ್ನು ತೋರಿಸುತ್ತದೆ? ಗಾಜಿನ ಮನೆಯೊಳಗಿರುವವರು ಅತಿ ಜಾಗರೂಕತೆಯಿಂದ ವತರ್ಿಸುವಂತೆ ಕಾಂಗ್ರೆಸ್ ಪಕ್ಷ ಆಡುತ್ತಿದೆ.

ಅಮೆರಿಕದ ವಿಷಯ ಬಿಡಿ. ಕಮ್ಯೂನಿಸ್ಟ್ ಚೀನಾದ ವಿಷಯಕ್ಕೆ ಬನ್ನಿ. ಟ್ಯಾಕ್ಸ್ ಹೆವೆನ್ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಅಂತಾರಾಷ್ಟ್ರೀಯ ಸಮುದಾಯ ಮುಂದಾಗಿರುವ ಪ್ರಸ್ತುತ ಸನ್ನಿವೇಶದಿಂದ ಚೀನಾಕ್ಕೆ ಅನುಕೂಲವೇ ಹೆಚ್ಚು. ಅಮೆರಿಕ, ಮತ್ತು ಅದರ ಆಥರ್ಿಕತೆಯನ್ನು ಅವಲಂಬಿಸಿರುವ ಬಹಳ ದೇಶಗಳು, ಆಥರ್ಿಕ ಕುಸಿತದಿಂದ ನರಳುತ್ತಿರುವಾಗ ಚೀನಾ ಸಾಕಷ್ಟು ಸದೃಢ ಪರಿಸ್ಥಿತಿಯಲ್ಲಿದೆ. ಜೊತೆಗೆ ಕಪ್ಪುಹಣವೂ ವಾಪಸ್ ಸಿಕ್ಕರೆ ಆ ದೇಶ ಇನ್ನಷ್ಟು ಬೃಹತ್ ಆಥರ್ಿಕತೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.

ಚೀನಾದ ಪ್ರಭಾವಿ ವ್ಯಕ್ತಿಗಳು ಗುಟ್ಟಾಗಿ ಹಣ ಮಾಡಿಕೊಂಡು ಟ್ಯಾಕ್ಸ್ ಹೆವೆನ್ಗಳಲ್ಲಿ ಇಟ್ಟಿರುವ ಕುರಿತೂ ಕೇಳಿಬರುತ್ತದೆ. ಆದರೆ ಅವರ ತಲೆಕಾಯುವ ನೀತಿಯನ್ನು ಅಲ್ಲಿನ ಸಕರ್ಾರಿ ವ್ಯವಸ್ಥೆ ಹೊಂದಿಲ್ಲ ಎನ್ನುವುದು ಗಮನಾರ್ಹ. ಎಲ್ಲ ರೀತಿಯ ತೆರಿಗೆಗಳ್ಳತನದ ವಿರುದ್ಧ ಉಗ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಲ್ಲಿನ ಸಕರ್ಾರ ಈಗಾಗಲೇ ಸ್ಪಷ್ಟಪಡಿಸಿದೆ. ಜಿ-20 ದೇಶಗಳ ಜೊತೆ ಒಟ್ಟಾಗಿ ಕೆಲಸ ಮಾಡುವ ಉತ್ಸುಕತೆಯನ್ನು ಚೀನಾ ಉಪ ಪ್ರಧಾನಿ ಪಾಲ್ ಚಿಯು ತೋರಿದ್ದಾರೆ.

ಟ್ಯಾಕ್ಸ್ ಹೆವೆನ್ಗಳ ವಿರುದ್ಧ ಮೊದಲು ರಣಕಹಳೆ ಮೊಳಗಿಸಿದ್ದು ಜರ್ಮನಿ. ಇದುವರೆಗೂ ಲೀಚ್ಟೆನ್ಸ್ಟೈನ್ ಜರ್ಮನ್ ತೆರಿಗೆಗಳ್ಳರ ಪಾಲಿನ ಸ್ವರ್ಗವಾಗಿತ್ತು. ಆದರೆ ಇನ್ನುಮುಂದೆ ಅವರ ಪಾಲಿನ ನರಕವಾಗಿ ಮಾರ್ಪಡಲಿದೆ. ಅಲ್ಲಿ ಹಣವಿಟ್ಟಿರುವ ಸುಮಾರು 1500 ಕಪ್ಪುಶ್ರೀಮಂತರ ಪಟ್ಟಿಯನ್ನು ಉಪಾಯವಾಗಿ (ಬ್ಯಾಂಕ್ ಅಧಿಕಾರಿಗಳಿಗೆ ಲಂಚಕೊಟ್ಟು) ಜರ್ಮನ್ ಸಕರ್ಾರ ಕಳೆದ ತರಿಸಿತ್ತು. ಈ ಪೈಕಿ ಅರ್ಧದಷ್ಟು ಹೆಸರುಗಳು ಜರ್ಮನ್ ನಾಗರಿಕರದು. ಸುಮಾರು 200-300 ಭಾರತೀಯರ ಹೆಸರುಗಳೂ ಈ ಪಟ್ಟಿಯಲ್ಲಿವೆ! ಅದನ್ನು ನೀಡುವುದಾಗಿ ಜರ್ಮನಿ ಹೇಳುತ್ತಿದ್ದರೂ `ಕೊಡಿ' ಎಂಬ ಮಾತು ನಮ್ಮ ಸಕರ್ಾರದಿಂದ ಬರುತ್ತಿಲ್ಲ! `ಈ ವಿಷಯದಲ್ಲಿ ನಮಗೆ ಆಸಕ್ತಿಯಿಲ್ಲ' ಎಂಬ ಸಂದೇಶನ್ನು ಕಳೆದ ವರ್ಷ ಭಾರತ ಸಕರ್ಾರ ಜರ್ಮನ್ ಸಕರ್ಾರಕ್ಕೆ ರವಾನಿಸಿತ್ತು!! ಆದರೆ ಜರ್ಮನಿಯಿಂದ ಅನೇಕ ದೇಶಗಳು ಈ ಪಟ್ಟಿಯನ್ನು ತರಿಸಿಕೊಂಡು ಕಾಯರ್ೋನ್ಮುಖವಾಗಿವೆ.

ಹಾಗಿದ್ದರೂ ಜರ್ಮನಿಯ ಸಮ್ಮಿಶ್ರ ಸಕರ್ಾರದ ಅಂಗಪಕ್ಷಗಳಲ್ಲಿ ಟ್ಯಾಕ್ಸ್ ಹೆವೆನ್ಗಳನ್ನು ಮಟ್ಟಹಾಕುವ ಕುರಿತು ಒಮ್ಮತ ಇರಲಿಲ್ಲ. ಈಚೆಗೆ ಅವೂ ಒಮ್ಮತ ಸಾಧಿಸಿಕೊಂಡಿವೆ. ಟ್ಯಾಕ್ಸ್ ಹೆವೆನ್ಗಳ ನಿನರ್ಾಮಕ್ಕೆ ನಾಂದಿಯಾಗುವ ಕರಡು ಮಸೂದೆಯನ್ನು ತಯಾರಿಸಿವೆ. ಸದ್ಯದಲ್ಲೇ ಜರ್ಮನಿ ಈ ಕುರಿತು ಸ್ಪಷ್ಟವಾದ ಕಾನೂನನ್ನು ಜಾರಿ ಮಾಡಲಿದೆ. ಪ್ರತಿವರ್ಷ ಜರ್ಮನಿಯಿಂದ 4000 ಕೋಟಿ ಡಾಲರ್ಗಳಷ್ಟು ಕಪ್ಪುಹಣ ಹೊರಹೋಗುತ್ತಿತ್ತು. ಇನ್ನುಮುಂದೆ ಅದಕ್ಕೆ ತಡೆಹಾಕಲು ಸಕರ್ಾರ ನಿರ್ಧರಿಸಿದೆ.

ಆದರೆ ಇಂತಹ ಯಾವ ನಿಧರ್ಾರವೂ ನಮ್ಮಲ್ಲಿ ಕಾಣುತ್ತಿಲ್ಲ. ಹೊಸ ಸಕರ್ಾರ ಏನು ಮಾಡುತ್ತದೋ ನೋಡಬೇಕು.

ಕಳೆದ ಒಂದು ವರ್ಷದಿಂದ ಈ ಕುರಿತು `ಕರ್ಮವೀರ'ದಲ್ಲಿ ನಾನು ಬರೆಯುತ್ತಿರುವ ಮೂರನೆಯ ಲೇಖನ ಇದು. ಮೊದಲ ಲೇಖನ ಬರೆದಾಗ ಸೋನಿಯಾ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಬರೆದಿದ್ದೆ. ಎಷ್ಟು ಕಾಲ ಕಳೆದರೂ ಅವರ ಮೌನವ್ರತಕ್ಕೆ ಭಂಗ ಬರುತ್ತಿಲ್ಲ. ಪತ್ರಕರ್ತರ ವಿಷಯ ಹಾಗಿರಲಿ. ಬಿಜೆಪಿಯ ಎಷ್ಟು ಭಾಷಣಗಳಾದರೂ ಅವರಿಂದ ಯಾವ ಪ್ರತ್ಯುತ್ತವೂ ಇಲ್ಲ.

ಈ ವಿಷಯ ಎತ್ತಿದರೇ ಸಾಕು, ಮನಮೋಹನ್ ಮುಖ ಸಪ್ಪಗಾಗುತ್ತದೆ. ಸೋನಿಯಾ ಹಾಗೂ ಆಡ್ವಾಣಿ ಮಧ್ಯೆ ಸಿಕ್ಕಿಕೊಂಡಿರುವ ತರಗೆಲೆಯಂತೆ ಅವರು ಮಿಸುಕಾಡುತ್ತಾರೆ. ಈ ಸೌಭಾಗ್ಯಕ್ಕೆ ಅವರಿಗೆ ಏಕೆ ಬೇಕು ಅಧಿಕಾರ? ಅವರು ಸೊಗಸಾಗಿ ಹುತ್ತದ ಹಾವಾಗಿರಬಹುದಾಗಿತ್ತು. ಆದರೆ ಬಯಸಿ, ಬಯಸಿ ಹಾವಾಡಿಗರ ಕೈಯಲ್ಲಿ ಹಲ್ಲುಕಿತ್ತ ಹಾವಾಗಿ ತಲೆದೂಗುತ್ತಿದ್ದಾರೆ!

ಇನ್ನೂ ಒಂದು ಮಾತು. ಈಚಿಗೆ ನಡೆದ ಜಿ-20 ದೇಶಗಳ ಶೃಂಗಸಭೆಯಲ್ಲಿ ಟ್ಯಾಕ್ಸ್ ಹೆವೆನ್ ವಿಷಯ ಆದ್ಯತೆ ಪಡೆದುಕೊಂಡ ನಂತರ ಭಾರತದಲ್ಲಿರುವ ಸ್ವಿಸ್ ರಾಯಭಾರಿ `ನಾವು ಭಾರತ ಸಕರ್ಾರ ನಡೆಸುವ ಎಲ್ಲ ತನಿಖೆಗಳಿಗೆ ಸಹಕರಿಸುತ್ತೇವೆ' ಎಂದು ಮೂರು ಬಾರಿ ಹೇಳಿದ್ದಾರೆ. ನಮ್ಮ ಸಕರ್ಾರ ಸಂಪಕರ್ಿಸಿದ ನಂತರ ಕೊಟ್ಟ ಹೇಳಿಕೆಗಳಲ್ಲ ಇವು. ವಾಸ್ತವವಾಗಿ ಅವರನ್ನು ಕರೆಸಿಕೊಂಡು ಸಕರ್ಾರವೇ ಸಹಕಾರ ಕೇಳಬೇಕಿತ್ತು.

ಅತ್ತ ಅಮೆರಿಕ, ಜರ್ಮನಿ ಮತ್ತಿತರ ದೇಶಗಳು ಸ್ವಿಸ್ ಸಕರ್ಾರದ ಸೀಕ್ರೆಟ್ ಬ್ಯಾಂಕಿಂಗ್ ಕಾನೂನುಗಳ ವಿರುದ್ಧ ಹರಿಹಾಯುತ್ತಿವೆ. ಇತ್ತ ಸ್ವಿಸ್ ರಾಯಭಾರಿ ಸ್ವಯಂಪ್ರೇರಣೆಯೊಂದ ಬಾಯಿ ತೆರೆದರೂ ಸಾಕು, ಮನಮೋಹನ್ ಸಕರ್ಾರ ಮಹಾನ್ ಮುಜುಗರ ಅನುಭವಿಸುತ್ತಿದೆ!

ಸೋಮವಾರ, ಮೇ 04, 2009

ಬಿಜೆಪಿ ಕಟ್ಟರ್ವಾದಿ ಇಮೇಜಿನ ಪುಕ್ಕಲು ಪಕ್ಷವೆ?

`ನಾವು ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕುಗಳಲ್ಲಿ ಹಾಗೂ ಇತರ ಟ್ಯಾಕ್ಸ್ ಹೆವೆನ್ಗಳಲ್ಲಿ ಭಾರತಿಯರು ಇಟ್ಟಿರುವ 70 ಲಕ್ಷಕೋಟಿ ರೂಪಾಯಿ ಕಪ್ಪುಹಣವನ್ನು ದೇಶಕ್ಕೆ ವಾಪಸ್ಸು ತರಲು ಯತ್ನಿಸುತ್ತೇವೆ' ಎಂದು ಲಾಲ್ ಕೃಷ್ಣ ಆಡ್ವಾಣಿ ಹೇಳುತ್ತಿರುವುದು ಸ್ವಾಗತಾರ್ಹ.

2005ರಲ್ಲಿ ರೇಮಂಡ್ ಡಬ್ಲ್ಯೂ ಬೇಕರ್ ತನಿಖೆ ಮಾಡಿ ಬರೆದ `ಕ್ಯಾಪಿಟಲಿಸಮ್ಸ್ ಅಚಿಲಸ್ ಹೀಲ್' ಪುಸ್ತಕ ಜಗತ್ತಿನ ಕಳ್ಳಹಣದ ಬಗ್ಗೆ ಬೆಳಕು ಚೆಲ್ಲಿತ್ತು. ಜಗತ್ತಿನ ರಾಜಕಾರಣಿಗಳು, ಸವರ್ಾಧಿಕಾರಿಗಳು, ಡ್ರಗ್ ಡೀಲರ್ಗಳು, ಕಳ್ಳಸಾಗಣಿಕೆದಾರರು, ಭಯೋತ್ಪಾದಕರು, ವ್ಯಾಪಾರಿಗಳು, ಉದ್ಯಮಿಗಳು ಜಗತ್ತಿನಾದ್ಯಂತ 70ಕ್ಕೂ ಹೆಚ್ಚು ಕಡೆಗಳಲ್ಲಿ ಹರಡಿರುವ ಟ್ಯಾಕ್ಸ್ ಹೆವೆನ್ಗಳಲ್ಲಿ ಈವರೆಗೆ ಇಟ್ಟಿರುವ ಹಣ ಸುಮಾರು 13-15 ಟ್ರಿಲಿಯನ್ ಡಾಲರ್! ಇದರಲ್ಲಿ ಭಾರತೀಯರ ಪಾಲು 1.4 ಟ್ರಿಲಿಯನ್ ಡಾಲರ್. 2006ರಲ್ಲಿ ಸ್ವಿಸ್ಬ್ಯಾಂಕಿಂಗ್ ಅಸೋಸಿಯೇಷನ್ ಈ ಅಂಕಿಅಂಶಗಳ ಸತ್ಯಾಸತ್ಯತೆಯನ್ನು ದೃಢಪಡಿಸಿದೆ. ಈ ಕುರಿತು ಒಂದು ವರ್ಷದ ಹಿಂದೆ ನನ್ನ ಕರ್ಮವೀರದ `ಲೌಕಿಕ' ಅಂಕಣದಲ್ಲಿ ವಿವರವಾಗಿ ಬರೆದಿದ್ದೆ.

ಈಗ ಈ ವಿಷಯವನ್ನು ಜಗತ್ತಿನ ಬಲಾಢ್ಯ ದೇಶಗಳ ಸಕರ್ಾರಗಳು ಗಂಭೀರವಾಗಿ ಪರಿಗಣಿಸಿವೆ. ಈಚೆಗೆ ನಡೆದ ಜಿ-20 ಶೃಂಗಸಭೆಯಲ್ಲಿ ಇದೇ ಪ್ರಮುಖ ವಿಷಯವಾಗಿತ್ತು. ಜಾಗತಿಕ ಆಥರ್ಿಕ ಹಿನ್ನಡೆ ಹಾಗೂ ಹೆಚ್ಚುತ್ತಿರುವ ಭಯೋತ್ಪಾದನೆಯನ್ನು ತಡೆಯಲು ಕಳ್ಳಹಣದ ಹುಚ್ಚುಹೊಳೆಯನ್ನು ತಡೆಯಲೇಬೇಕು ಎಂಬುದು ತಡವಾಗಿಯಾದರೂ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಆಗಿದೆ. ಜಿ-20 ದೇಶಗಳ ಗುಂಪಿನಲ್ಲಿ ಈಗ ಬರೀ ಇದರದೇ ಮಾತು. ಈ ವಿಷಯದಲ್ಲಿ ಆಸಕ್ತಿ ತೋರದ, ವಾಸ್ತವವಾಗಿ ಭಯಬೀತವಾಗಿರುವ ಒಂದೇ ಒಂದು ಸಕರ್ಾರವೆಂದರೆ ನಮ್ಮ ಕಾಂಗ್ರೆಸ್ ನೇತೃತ್ವದ ಸಕರ್ಾರ! ಟ್ಯಾಕ್ಸ್ ಹೆವೆನ್ಗಳಲ್ಲಿ ಅತಿ ಹೆಚ್ಚು ಹಣವಿಟ್ಟಿರುವವರು ಭಾರತೀಯರು; ಇದರಲ್ಲಿ ನಮ್ಮ ದೇಶದ ಪ್ರಮುಖ ರಾಜಕೀಯ ಕುಟುಂಬದ ಹಣವೂ ಬಹಳ ಇದೆ; ಆದ್ದರಿಂದಲೇ ನಮ್ಮ ಸಕರ್ಾರ ಈ ವಿಷಯದಲ್ಲಿ ಭೀತವಾಗಿದೆ ಎಂಬ ಮಾತಿದೆ. ಈ ಕುರಿತು ತನಿಖೆಯಾಗಬೇಕು.

ಆದರೆ ಇದು ಕಾರ್ಯಸಾಧ್ಯವೇ ಎಂಬ ಅನುಮಾನ ಮೂಡದೇ ಇರದು. ಬಿಜೆಪಿ ಸಕರ್ಾರ ಇಂತಹ ತನಿಖೆಯನ್ನು ಮಾಡಬಲ್ಲುದೇ ಎಂಬುದೇ ಈಗಿನ ಪ್ರಶ್ನೆ. ಈ ಪಕ್ಷ ಈವರೆಗೆ ದೊಡ್ಡ ದೊಡ್ಡ ಮಾತುಗಳನ್ನು ಆಡಿದೆಯೇ ಹೊರತು ಯಾವುದನ್ನೂ ಕಾರ್ಯಗತವಾಗಿ ಮಾಡಿ ತೋರಿಸಿಲ್ಲ. 1992ರಲ್ಲಿ ಪ್ರಕಟವಾದ ಸೋವಿಯತ್ ರಷ್ಯಾದ ರಹಸ್ಯ ದಾಖಲೆಗಳ ಸಂಗ್ರಹ `ಮಿತ್ರೋಕಿನ್ ಆಕ್ವರ್ೈಸ್ಸ್' ಕೆಜಿಬಿ ಗೂಢಚಾರ ಏಜೆನ್ಸಿಯಿಂದ ಹಣ ಪಡೆದವರ ಕುರಿತು ಅನೇಕ ಮಾಹಿತಿ ನೀಡಿತ್ತು. ಅದರಲ್ಲಿ ನಮ್ಮ ದೇಶದ ದೊಡ್ಡ ಕುಟುಂಬದ ವಿಷಯವೂ ಇತ್ತು. ಆದರೆ 6 ವರ್ಷ ದೇಶ ಆಳಿದ ಎನ್ಡಿಎ ಸಕರ್ಾರ ಈ ಕುರಿತು ತನಿಖೆ ಮಾಡಿತೆ?

ಆಡ್ವಾಣಿ ವೈಯಕ್ತಿಕವಾಗಿ ಹಾಡರ್್ಲೈನರ್ ಎನಿಸಿಕೊಂಡವರು. ಆದರೆ ಬರೀ ಹಾಗೆ ಅನಿಸಿಕೊಂಡವರು ಮಾತ್ರ. ಅಂತರಂಗದಲ್ಲಿ ಅವರು ಒಂದು ರೀತಿಯ ಮೃದು ವ್ಯಕ್ತಿ ಎಂದು ಬಲ್ಲವರು ಹೇಳುತ್ತಾರೆ. ಇಂತಹ ವ್ಯಕ್ತಿಗಳು ಸಂದರ್ಭ ಬಂದಾಗ ಎಷ್ಟರ ಮಟ್ಟಿಗೆ ಕಠಿಣ ನಿಧರ್ಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದೇ ಅನುಮಾನಾಸ್ಪದ. ಆದರೆ ಮನಮೋಹನ್ ಸಿಂಗ್ ಅಂತಹವರಿಗೆ ಹೋಲಿಸಿದರೆ ಆಡ್ವಾಣಿ ಉತ್ತಮ ನಾಯಕ, ಸ್ವತಂತ್ರ ಚಿಂತಕ ಎಂದೇ ಹೇಳಬೇಕು.

ಕನ್ನಡದಲ್ಲಿ ಒಂದು ಗಾದೆ ಮಾತಿದೆ. `ಬೊಗಳುವ ನಾಯಿ ಕಚ್ಚುವುದಿಲ್ಲ. ಕಚ್ಚುವ ನಾಯಿ ಬೊಗಳುವುದಿಲ್ಲ'. ಈ ಮಾತು ಕಟ್ಟರ್ವಾದಿಗಳಿಗೆ ಅನ್ವಯವಾಗುವಷ್ಟು ಇನ್ಯಾರಿಗೂ ಆಗದು. ಮೊದಲಿನಿಂದಲೂ ಆರ್ಭಟಿಸಿಕೊಂಡೇ ಬರುವ ಅನೇಕರು ಅಧಿಕಾರ ಸಿಕ್ಕ ತಕ್ಷಣ ತಣ್ಣಗಾದ ಬಹಳ ಉದಾಹರಣೆಗಳನ್ನು ಇತಿಹಾಸದಲ್ಲಿ ನೋಡುತ್ತೇವೆ. ಸೌಮ್ಯವಾಗಿ ತೋರಿಸಿಕೊಳ್ಳುವವರು ಅಂತರಂಗದಲ್ಲಿ ಬಹಳ ಕ್ರೂರ ಹಾಗೂ ಕಠಿಣರಾಗಿರುವುದೂ ಉಂಟು.

`ಸೌಮ್ಯ' ಇಮೇಜ್ ಬೆಳೆಸಿಕೊಂಡಿರುವ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಹೇಗೆ? ಸೀತಾರಾಮ ಕೇಸರಿಯನ್ನು ಶೌಚಾಲಯದಲ್ಲಿ ಕೂಡಿಹಾಕಿಸಿ ಅಧ್ಯಕ್ಷ ಪೀಠ ಅಲಂಕರಿಸಿದರು ಎಂಬ ಆರೋಪ ಅವರ ಮೇಲಿದೆ. ಆಡ್ವಾಣಿ ಹೀಗೆಲ್ಲ ಎಂದೂ ಮಾಡಲಾರರು!

ಸ್ವಾದ್ವಿ ಪ್ರಜ್ಞಾ ವಿರುದ್ಧ ಯಾವ ಆರೋಪವೂ ನ್ಯಾಯಾಲಯದಲ್ಲಿ ರುಜುವಾತಾಗಿಲ್ಲ. ಆದರೆ ಅವರನ್ನು ಕಾರಾಗೃಹದಲ್ಲಿ ಭೇಟಿ ಮಾಡುವ ದೈರ್ಯ ಬಿಜೆಪಿ ನಾಯಕರಿಗೆ ಇದೆಯೆ? ಅದೇ ಸೋನಿಯಾ ಗಾಂಧಿ ಎಲ್ಟಿಟಿಇಯ ನಳಿನಿಯ ಪರವಾಗಿ ವಕಾಲತ್ತು ವಹಿಸಿ ದಕ್ಕಿಸಿಕೊಂಡರು. ಪ್ರಿಯಾಂಕ ಗಾಂಧಿ ನಳಿನಿಯನ್ನು ಭೇಟಿ ಮಾಡಿ ತಬ್ಬಿಕೊಂಡು ಕೂತಿದ್ದು ಯಾವ ವಿವಾದಕ್ಕೂ ಗುರಿಯಾಗದೇ ಜೀಣರ್ಿಸಿಕೊಂಡರು. ಸೋನಿಯಾ-ಮನಮೋಹನ್ ಸಕರ್ಾರ `ಶ್ರೀರಾಮ ಐತಿಹಾಸಿಕ ಪುರುಷನೇ ಅಲ್ಲ, ರಾಮಾಯಣ ಎಂದೂ ನಡೆದೇ ಇಲ್ಲ' ಎಂದು ಹೇಳುವ ದೈರ್ಯ ಹಾಗೂ ದಾಷ್ಟ್ರ್ಯ ತೋರಿದ್ದಲ್ಲದೇ ಅದನ್ನು ಜೀಣರ್ಿಸಿಕೊಂಡಿತು. ಒಳ್ಳೆಯ ಉದ್ದೇಶದಿಂದಲೇ ಐಐಟಿ, ಐಐಎಂಗಳ ಫೀಸು ಕಡಿಮೆ ಮಾಡಲು ಹೋದ ಮುರಳಿ ಮನೋಹರ ಜೋಷಿ ತೀವ್ರ ವಿವಾದಕ್ಕೆ ಗುರಿಯಾದರು. ಈ ಸಂಸ್ಥೆಗಳ ಸ್ವಾಯತ್ತತೆಯನ್ನು ಹಾಳು ಮಾಡುತ್ತಿದ್ದಾರೆ ಎಂಬ ಸರ್ವತ್ರ ಟೀಕೆಗೆ ಗುರಿಯಗಿ ಕಡೆಗೆ ಹಿಂಜರಿದರು. ಆದರೆ ಅಜರ್ುನ್ ಸಿಂಗ್ ಈ ಸಂಸ್ಥೆಗಳ ಸ್ವಾಯತ್ತತೆಯನ್ನು ಮಾತ್ರವೇ ಅಲ್ಲ, ಬುನಾದಿಯನ್ನೇ ಅಲ್ಲಾಡಿಸಿಬಿಟ್ಟರು. ಜಾತಿ ವಿಷಬೀಜ ಬಿತ್ತಿ ಈ ಸಂಸ್ಥೆಗಳ ಮೂಲ ಉದ್ದೇಶ ಹಾಗೂ ಸ್ವರೂಪಗಳನ್ನೇ ಮಾರ್ಪಡಿಸಿಬಿಟ್ಟರು. ಯಾರದೂ ತಕರಾರಿಲ್ಲ!

ಬಿಜೆಪಿ ಈ ಬಾರಿ ವಿರೋಧಪಕ್ಷವಾಗಿಯೂ ದಕ್ಷವಾಗಿ, ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ.

ಮಾಯಾವತಿ ಜಾತಿ ರಾಜಕಾರಣಕ್ಕೆ ವ್ಯವಸ್ಥಿತ ರೂಪ ನೀಡಿದವರು. ಅವರ ಮೇಲೆ ಹತ್ತಾರು ಭ್ರಷ್ಟಾಚಾರದ ಆರೋಪಗಳಿವೆ. ಈ ಆರೋಪಗಳು ತನಿಖೆಯ ಹಂತಕ್ಕೆ ಬಂದಾಗಲೆಲ್ಲ ಕೇಂದ್ರದ ಸಕರ್ಾರಕ್ಕೆ ಬೆಂಬಲ ಘೊಷಿಸುವುದು, ಕಾಂಗ್ರೆಸ್, ಬಿಜೆಪಿ ಹೀಗೆ ಯಾರೆಂದರೆ ಅವರ ಜೊತೆ ಸಖ್ಯ ಸಾಧಿಸಿಕೊಳ್ಳುವುದು ಅವರು ಅನುಸರಿಸಿಕೊಂಡು ಬಂದಿರುವ ಕ್ರಮ. ಯುಪಿಎ ಸಕರ್ಾರಕ್ಕೆ ಬೆಂಬಲ ಕೊಡುವವರೆಗೆ `ಭ್ರಷ್ಟಾಚಾರಿ' ಎಂಬ ಆರೋಪ ಹೊತ್ತಿದ್ದ ಮುಲಾಯಂ ಸಿಂಗ್ ಯಾದವ್ ಯುಪಿಎ ಜೊತೆ ಸೇರಿಕೊಂಡ ತಕ್ಷಣ ಏಕಾಯೇಕಿ ಕಳಂಕಮುಕ್ತರಾದರು. ಅವರ ಪರವಾಗಿ ಸ್ವಯಂ ಸಿಬಿಐ ಮೂಲಕವೇ ಹೇಳಿಸಲಾಯಿತು. ಇದು `ಸಭ್ಯ' ಮನಮೋಹನ್ ಸಕರ್ಾರದ `ದೊಡ್ಡಸ್ಥಿಕೆ'. ಯಾರ ಹಂಗಿನಲ್ಲೂ, ಯಾರ ಮುಲಾಜಿನಲ್ಲೂ ಕಾರ್ಯನಿರ್ವಹಿಸದೇ, `ಸ್ವತಂತ್ರ'ವಾಗಿ `ದಕ್ಷವಾದ' ಆಡಳಿತ ಕೊಟ್ಟ ಈ `ಪ್ರಬಲ' ಪ್ರಧಾನಿ ಇಟಲಿಯ ಭೋಫೋಸರ್್ ಫಲಾನುಭವಿ ಒಟ್ಟಾವಿಯೋ ಕ್ವಾಟ್ರೋಚಿಯನ್ನು ಅಜರ್ೆಂಟೀನಾದಲ್ಲಿ ಬಂಧಿಸಿದಾಗ ದೆಹಲಿಯಲ್ಲೇಕೆ ತುತರ್ು ಸಭೆ ಕರೆದರು? ಲಂಡನ್ನಿನಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಕ್ವಾಟ್ರೋಚಿಯ ಬ್ಯಾಂಕ್ ಖಾತೆಗಳನ್ನು ತೆರವು ಮಾಡಿಸಿಕೊಟ್ಟ `ಪುಣ್ಯಾತ್ಮ'ರು ಯಾರು?

ಮನಮೋಹನ್ ಅವಧಿಯಲ್ಲಿ ಸಿಬಿಐ ಮಯರ್ಾದೆ ಸಂಪೂರ್ಣವಾಗಿ ಹೋಯಿತು. ಅದು ತಾನೇ ಕೇಸು ಹಾಕಿದ್ದ ಆರೋಪಿಗಳ ಪರವಾಗಿ ತಾನೇ ನಿಂತು ನಾಲ್ಕಾರು ಬಾರಿ ಸುಪ್ರೀಂ ಕೋಟರ್ಿನಿಂದ ಛೀಮಾರಿ ಹಾಕಿಸಿಕೊಂಡ ಪ್ರಸಂಗ ನಡೆಯಿತು. ಒಂದು ಹಂತದಲ್ಲಿ ಸಿಬಿಐ ತಾನೇ ತಪ್ಪಿತಸ್ಥನ ಸ್ಥಾನದಲ್ಲಿ ನಿಂತು ಹೇಳಿಕೆ ನೀಡಬೆಕಾಯಿತು. ಕೇಂದ್ರದ ಆಳುವ ಪಕ್ಷಗಳ ಗುಲಾಮರಂತೆ ನಾವು ವತರ್ಿಸುತ್ತ ಬಂದಿದ್ದೇವೆ ಎಂದು ಸ್ವತಃ ಅದರ ನಿದರ್ೇಶಕರೇ ಸುಪ್ರೀಂ ಕೋಟರ್ಿನಲ್ಲಿ ಹೇಳಿಕೆ ಕೊಟ್ಟು ಸಿಬಿಐ ಅಂದರೆ `ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್' ಎಂಬ ಬಿರುದನ್ನು ಖಚಿತಪಡಿಸಿದರು. ಆದರೆ ಬಿಜೆಪಿ ಈ ಕುರಿತು ಎಷ್ಟರ ಮಟ್ಟಿಗೆ ಜನರ ಗಮನ ಸೆಳೆದಿದೆ?

ಈಗಾಗಲೇ ವರುಣ್ ಗಾಂಧಿ ವಿಷಯದಲ್ಲಿ ಚುನಾವಣಾ ಆಯೋಗ ನಡೆದುಕೊಂಡ ರೀತಿಯಲ್ಲಿ ಪಕ್ಷಪಾತದ ಛಾಯೆ ಇದೆ. ಅವರನ್ನು ಹೊಡೆಯಿರಿ, ಇವರನ್ನು ಕಡಿಯಿರಿ ಎಂದು ಲಾಲೂ ಪ್ರಸಾದ್, ಮುಲಾಯಂ, ಮಾಯಾವತಿ, ಮುಸ್ಲಿಂ ಲೀಗ್, ಮಾಕ್ಸರ್್ವಾದಿ ಪಕ್ಷಗಳು ಲಾಗಾಯ್ತಿನಿಂದಲೂ ಹೇಳಿಕೊಂಡು ಬರುತ್ತಲೆ ಇವೆ. ಇಂತಹ ಬೆದರಿಕೆ ಒಡ್ಡುವ ಸ್ಲೋಗನ್ನುಗಳ ಕೇಸೊಂದು 1970ರ ದಶಕದಲ್ಲಿ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು. ಜಾತಿ ಜಾತಿಗಳ ನಡುವೆ ಸಂಘರ್ಷದ ವಿಷ ಹರಡಿದ ಮಾಯಾವತಿಯ ನೆಚ್ಚಿನ ಸ್ಲೋಗನ್ `ತಿಲಕ್, ತರ್ಜು ಔರ್ ತಲ್ವಾರ್, ಇಸ್ಕೋ ಮಾರೋ ಜೂತಾ ಚಾರ್'. ಮೇಲ್ಜಾತಿಯವರಿಗೆಲ್ಲ ಜಪ್ಪಲಿಯಲ್ಲಿ ಬಾರಿಸಿ ಎಂದು ಅವರು ಸಾರ್ವಜನಿಕವಾಗಿ ಕರೆ ನೀಡುತ್ತಿದ್ದಾಗ ಯಾರಿಗೂ ನ್ಯಾಷನಲ್ ಸೆಕ್ಯೂರಿಟಿ ಆಕ್ಟ್ ನೆನಪಾಗಲಿಲ್ಲ!

ಬಿಜೆಪಿ ಈವರೆಗೆ ಕಡಿದು ಕಟ್ಟಿಹಾಕಿರುವುದಾದರೂ ಏನನ್ನು? ಅದನ್ನು ಐಡಿಯಾಲಜಿಕಲ್ ಪಾಟರ್ಿ ಎಂದು ಅದ್ಯಾರು ಕರೆದರೋ ಗೊತ್ತಿಲ್ಲ. ರಾಮಜನ್ಮಭೂಮಿ ವಿಷಯದಲ್ಲಿ ಹಿಂಜರಿದ ಪಕ್ಷ ವಾಜಪೇಯಿ ಕಾಲದಲ್ಲಿ ಸೇತುಸಮುದ್ರಂ ಯೋಜನೆಗೆ ಅಡಿಪಾಯ ಹಾಕಿ ರಾಮಸೇತುವಿನ ವಿಷಯದಲ್ಲೂ ಗೊಂದಲ ಸೃಷ್ಟಿಸಿತು.

ವರುಣ್ ಗಾಂಧಿಯನ್ನು ನ್ಯಾಷನಲ್ ಸೆಕ್ಯೂರಿಟಿ ಆಕ್ಟ್ ಅಡಿ ಬಂಧಿಸಿದಾಗ ಅವರ ನೆರವಿಗೆ ಧಾವಿಸಲು ಹಿಂದೆ-ಮುಂದೆ ನೋಡಿದ ಬಿಜೆಪಿ ನಾಯಕರು ಸದ್ದಿಲ್ಲದೇ ರಾಹುಲ್ ಗಾಂಧಿ ನೆರವಿಗೆ ದಾವಿಸಿದ್ದರು! ಹೌದು, ರಾಹುಲ್ ಗಾಂಧಿ ಅಮೆರಿಕದ ನ್ಯಾಷನಲ್ ಸೆಕ್ಯೂರಿಟಿ ರೂಲ್ಸ್ ಅಡಿ ಎಫ್ಬಿಐ ವಶದಲ್ಲಿದ್ದಾಗ ಅವರ ನೆರವಿಗೆ ಬಂದವರಾರು ಗೊತ್ತೆ? ಮಾಧ್ಯಮ ವರದಿಗಳ ಪಕಾರ, 2001ರ ಸೆಪ್ಟೆಂಬರ್ ಕಡೆಯ ವಾರದಲ್ಲಿ ಅಮೆರಿಕದ ಬಾಸ್ಟನ್ ನಗರದಿಂದ ವಾಷಿಂಗ್ಟನ್ ಡಿ.ಸಿ.ಗೆ ರಾಹುಲ್ ಪ್ರಯಾಣಿಸುತ್ತಿದ್ದರು. ಅವರನ್ನು ಎಫ್ಬಿಐ ತನಿಖಾಧಿಕಾರಿಗಳು ಬಾಸ್ಟನ್ ವಿಮಾನನಿಲ್ದಾಣದಲ್ಲಿ ಬಂಧಿಸಿದರು. ವಿಷಯ ತಿಳಿದ ಸೋನಿಯಾ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದ ಲಲಿತ್ ಮಾನ್ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿದರು. ಅವರು ಮಧ್ಯಸ್ಥಿಕೆ ವಹಿಸಿ ರಾಹುಲ್ ಅವರನ್ನು ಬಿಡಿಸಿ ಪ್ರಯಾಣ ಮುಂದುವರಿಸಲು ಅವಕಾಶ ಮಾಡಿಕೊಟ್ಟರು ಎನ್ನಲಾಗುತ್ತದೆ. ರಾಜತಾಂತ್ರಿಕ ಮೂಲಗಳು ಸೋನಿಯಾ ಲಲಿತ್ ಮಾನ್ಸಿಂಗ್ ಅವರನ್ನು ಸಂಪಕರ್ಿಸಲಿಲ್ಲ ಎಂದೂ ಹೇಳುತ್ತವೆ (ನೋಡಿ: ದಿ ಹಿಂದೂ, ಸೆಪ್ಟೆಂಬರ್ 30, 2001). ಕೆಲವರ ಪ್ರಕಾರ, ಸೋನಿಯಾ ಸಂಪಕರ್ಿಸಿದ್ದು ಬ್ರಜೇಶ್ ಮಿಶ್ರಾ ಅವರನ್ನು. ಅಂದಿನ ಪ್ರಧಾನಿ ಅಟಲ ಬಿಹಾರಿ ವಾಜಪೇಯಿಯ ಪ್ರಧಾನ ಕಾರ್ಯದಶರ್ಿಯಾಗಿದ್ದ ಬ್ರಜೇಶ್ ಮಧ್ಯಸ್ಥಿಕೆಯಲ್ಲಿ ರಾಹುಲ್ ಅನ್ನು ಬಂಧಮುಕ್ತಿಗೊಳಿಸಿದ್ದು ವಾಜಪೇಯಿ ಸಕರ್ಾರ ಎಂದೂ ಹೇಳಲಾಗುತ್ತದೆ.

ಮೊದಲನೆಯದಾಗಿ 2001ರ ಸೆಪ್ಟೆಂಬರ್ ಕಡೆಯ ವಾರದಲ್ಲಿ ಬಾಸ್ಟನ್ ವಿಮಾನನಿಲ್ದಾಣದಲ್ಲಿ ನೂರಾರು ಭಾರತೀಯರು ಓಡಾಡಿದ್ದರು. ಅವರೆಲ್ಲರನ್ನೂ ಬಿಟ್ಟು ರಾಹುಲ್ ಗಾಂಧಿಯನ್ನೇ ಏಕೆ ಎಫ್ಬಿಐ ತನ್ನ ವಶಕ್ಕೆ ತೆಗೆದುಕೊಂಡಿತ್ತು ಎಂಬ ಪ್ರಶ್ನೆಯನ್ನು ಸಾರ್ವಜನಿಕವಾಗಿ ಮೊದಲು ಎತ್ತಿದವರು ಬಿಜೆಪಿ ನಾಯಕರಲ್ಲ, ಜನತಾ ಪಕ್ಷದ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ ಅವರು. ಅವರ ಪ್ರಶ್ನೆಗೆ ಯಾರೂ ಈವರೆಗೂ ಉತ್ತರಿಸಲು ಹೋಗಿಲ್ಲ. ಒಂದು ವೇಳೆ ಬಂಧನದ ವರದಿಯೇ ಸುಳ್ಳಾಗಿದ್ದರೆ ದೇಶವಿದೇಶಗಳ ಮಾಧ್ಯಮಗಳ ವಿರುದ್ಧ ಯಾರೂ ಏಕೆ ಮಾನನಷ್ಟ ಮೊಕದ್ದಮೆ ಹಾಕಿಲ್ಲ?

ಈ ವಿಷಯದಲ್ಲಿ ವಾಜಪೇಯಿ ಏಕೆ ಮಧ್ಯಸ್ಥಿಕೆ ವಹಿಸಬೇಕಿತ್ತು ಎಂಬ ಪ್ರಶ್ನೆಯೂ ಇಲ್ಲಿ ಮುಖ್ಯವಾಗುತ್ತದೆ (ಈ ಸಹಾಯಕ್ಕಾಗಿ ಅನಂತರ ಅವರು ಸೋನಿಯಾ ಗಾಂಧಿಯಿಂದ `ಗದ್ಧಾರ್' ಎಂಬ ಮಹಾನ್ ಬಿರುದನ್ನೂ ಪಡೆದರು ಬಿಡಿ!) ಅವರು ಬೋಫೊಸರ್್ ಹಗರಣದ ವಿಷಯದಲ್ಲೂ ನೇತಾಜಿನ ಸುಭಾಷ್ ಚಂದ್ರ ಬೋಸರ ಸಾವಿನ ತನಿಖೆಯ ವಿಷಯದಲ್ಲೂ ಜನರಿಗೆ ನಿರಾಶೆಯನ್ನೇ ಮೂಡಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಎಷ್ಟೋ ಹಳೆಯ ಹಗರಣಗಳ ತನಿಖೆ ಸರಿಯಾದ ರೀತಿಯಲ್ಲಿ ಆಗುತ್ತದೆ ಎಂಬ ಜನರ ನಿರೀಕ್ಷೆ ಸುಳ್ಳಾಯಿತು. ಒಂದು ಪಕ್ಕಾ ಕಾಂಗ್ರೆಸ್ಸೇತರ ಸಕರ್ಾರ ಎಷ್ಟು ಪ್ರಾಮಾಣಿಕತೆಯಿಂದ ನಡೆದುಕೊಳ್ಳಬೇಕೋ ಅಷ್ಟು ಪ್ರಾಮಾಣಿಕತೆಯನ್ನು ತನ್ನ 6 ವರ್ಷಗಳ ಆಳ್ವಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸಕರ್ಾರ ಪ್ರದಶರ್ಿಸಲಿಲ್ಲ. `ರಾಜಕಾರಣಿಗಳೆಲ್ಲ ಒಂದೇ, ಪರಸ್ಪರ ರಕ್ಷಣೆ ಮಾಡಿಕೊಳ್ಳುವುದೇ ಅವರ ಕ್ರಮ' ಎಂಬ ಹಳೆಯ ಮಾತು ಮತ್ತೊಮ್ಮೆ ಸಾಬೀತಾಯಿತು.

ಅಟಲ್ ಬಿಹಾರಿ ವಾಜಪೇಯಿ ತರಹವೇ ಲಾಲ್ ಕೃಷ್ಣ ಆಡ್ವಾಣಿಯೂ ಸಹ ಎನ್ನಲಾಗದು. ಇಬ್ಬರ ಕಾರ್ಯವೈಖರಿಗಳು ಭಿನ್ನವಾಗಿಯೇ ಇವೆ. ಆದರೆ `ಬಿಜೆಪಿ ಜೊತೆ ವ್ಯವಹಾರ ಕುದುರಿಸಿಕೊಳ್ಳಬಹುದು' ಎಂಬ ಇಮೇಜೂ ಸಹ ಆ ಪಕ್ಷಕ್ಕಿದೆ. ಅದನ್ನು ಮೊದಲು ಆ ಪಕ್ಷ ಸರಿಪಡಿಸಿಕೊಳ್ಳಬೇಕು.

ಶುಕ್ರವಾರ, ಏಪ್ರಿಲ್ 24, 2009

ಮನಮೋಹನ್ ಸಿಂಗ್ `ದುರ್ಬಲ' ಪ್ರಧಾನಿಯೆ?

ಮನಮೋಹನ್ ಸಿಂಗ್ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ ಎಂಬುದು ಬಿಜೆಪಿಯ ಚುನಾವಣಾ ಘೋಷವಾಕ್ಯ. ಈ ಕುರಿತು ಪಕ್ಷಾತೀತವಾಗಿ ಯೋಚಿಸಬೇಕು.

ಅಟಲ ಬಿಹಾರಿ ವಾಜಪೇಯಿ ಬಗ್ಗೆಯೂ ಇಂತಹ ಆಪಾದನೆಗಳಿದ್ದವು. ಕಾಗರ್ಿಲ್ ಯುದ್ಧ ಗೆದ್ದರೂ ಪರಮಾಣು ಸ್ಫೋಟ ನಡೆಸಿದರೂ ಸಹ ಹಲವು ರಂಗಗಳಲ್ಲಿ ವಾಜಪೇಯಿ ಅವರದು ಮೃಧು ದೋರಣೆಯಾಗಿತ್ತು. ಅವರನ್ನು ಲಾಲ್ ಕೃಷ್ಣ ಆಡ್ವಾಣಿಯವರೊಂದಿಗೆ ಹೋಲಿಸಿ ವೆಂಕಯ್ಯ ನಾಯ್ಡು ಮಾಡಿದ್ದ `ವಿಕಾಸಪುರುಷ, ಲೋಹಪುರುಷ' ಎಂಬ ಬಣ್ಣನೆ ವ್ಯಾಪಕವಾಗಿ ಗಮನ ಸೆಳೆದಿತ್ತು. ತೀವ್ರ ವಿವಾದವನ್ನೂ ಸೃಷ್ಟಿಸಿತ್ತು. ಸ್ವತಃ ವಾಜಪೇಯಿ ಇದರಿಂದ ಕೋಪಗೊಂಡಿದ್ದರು.

ಇಷ್ಟಾದರೂ ವಾಜಪೇಯಿ ಅವರನ್ನು ರಿಮೋಟ್-ಕಂಟ್ರೋಲ್ಡ್ ಪ್ರಧಾನಿ ಎನ್ನಲಾಗದು. ಅವರ ಯಾವುದಾದರೂ ನಿದರ್ಿಷ್ಟ ನಿಧರ್ಾರ ದುರ್ಬಲವಾದದ್ದು ಎಂದು ಈಗ ಕೆಲವರಿಗೆ ಅನಿಸಿದರೆ ಅದಕ್ಕೆ ಕಾರಣ ವಾಜಪೇಯಿಯವರ ಸ್ವಂತ ಚಿಂತನೆಗಳೆ ಹೊರತು ಅವರು ಅನ್ಯರ ಕೈಗೊಂಬೆಯಾಗಿದ್ದುದು ಅವುಗಳಿಗೆ ಕಾರಣವಲ್ಲ. ಅವರೆಂದೂ ಸಂವಿಧಾನೇತರ ಶಕ್ತಿಗಳ ಮನೆ ಬಾಗಿಲು ಬಡಿಯಲಿಲ್ಲ. ತಮ್ಮ ಸ್ವಂತಿಕೆ, ಸ್ವಂತ ಆಡಳಿತ ವಿಧಾನ, ಸ್ವಂತ ವಿಚಾರಗಳನ್ನು ತ್ಯಜಿಸಲಿಲ್ಲ. ಎನ್ಡಿಎ ಸಭೆಯೂ ಅವರ ಮನೆಯಲ್ಲೇ ನಡೆಯುತ್ತಿತ್ತು. ಸಚಿವ ಸಂಪುಟ ಸಭೆಯ ಮತ್ತು ಎನ್ಡಿಎ ಒಕ್ಕೂಟದ ಸಭೆಯ ಅಂತಿಮ ತೀಮರ್ಾನ ಅವರದೇ ಆಗಿರುತ್ತಿತ್ತು. ಎಲ್ಲರ ಮಾತನ್ನೂ ಕೇಳಿದ ನಂತರ ಅವರು ಹೇಳುತ್ತಿದ್ದುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಿದ್ದರು.

ಆದರೆ ಪ್ರಸ್ತುತ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿಷಯ ಹಾಗಲ್ಲ. ಅವರು `ರೀಮೋಟ್-ಕಂಟ್ರೋಲ್ಡ್' ಪ್ರಧಾನಿ ಎಂಬ ಕಳಂಕ ಹೊತ್ತು ನಿಂತಿದ್ದಾರೆ. ತಾವು ದುರ್ಬಲರು, ಇತರು ತಮ್ಮನ್ನು ಆವರಿಸಿಕೊಳ್ಳಲು ಅನುಮತಿ ನೀಡಿರುವವರು ಎಂಬುದನ್ನು ಅವರು ಸಹಜವಾಗಿ ಒಪ್ಪುವುದಿಲ್ಲ. ಆ ಮಾತು ಕೇಳಿದಾಗೆಲ್ಲ ಅವರಿಗೂ ಕೋಪ ಬರುತ್ತದೆ. `ನಾನು ದುರ್ಬಲ ಪ್ರಧಾನಿ ಅಲ್ಲ' ಎಂದು ಕಿರುಚುತ್ತಾರೆ.

ಆದರೆ ಒಂದೇ ಸಮನೆ ಚೀರುವುದೇ ಪ್ರಬಲತೆಯ ಪುರಾವೆಯಲ್ಲ. ಅಷ್ಟು ಮಾತ್ರದಿಂದಲೇ ಮನಮೋಹನ್ ಅವರನ್ನು `ಪ್ರಬಲ ಪ್ರಧಾನಿ' ಎನ್ನಲಾಗದು. ಅವರವರು ನಡೆದು ಬಂದಿರುವ ದಾರಿ ಎಂತಹುದು ಎಂಬುದು ಗಮನಾರ್ಹವಾಗುತ್ತದೆ. ಇತಿಹಾಸದ ಪ್ರಾಮಾಣಿಕ ಮೌಲ್ಯಮಾಪನಕ್ಕೆ ಮನಮೋಹನ್ ತಮ್ಮನ್ನು ಒಳಪಡಿಸಿಕೊಳ್ಳಲೇಬೇಕಾಗುತ್ತದೆ.

ಮೊದಲಿಗೆ, ಅವರು ಜನರಿಂದ ಚುನಾಯಿತರಾದವರಲ್ಲ. ಅವರು ರಾಜ್ಯಸಭೆಯ ಸದಸ್ಯ. ಅವರು ಆರಿಸಿಬಂದದ್ದು ಅಸ್ಸಾಂ ರಾಜ್ಯದ ವಿಧಾನಸಭೆಯ ಕಾಂಗ್ರೆಸ್ ಸದಸ್ಯರ ಮತಗಳಿಂದ. ಅವರು ಸಾರ್ವಜನಿಕ ಜೀವನದಲ್ಲಿ ಬಹುಕಾಲದಿಂದ ನಾನಾ ಹುದ್ದೆಗಳಲ್ಲಿ ಇದ್ದಾರೆ. ಅವರು ಎಂದು ಅಸ್ಸಾಂ ರಾಜ್ಯದ ಶಾಶ್ವತ ನಿವಾಸಿಯಾಗಿದ್ದರು? ಆದರೂ `ನಾನು ಅಸ್ಸಾಂ ನಿವಾಸಿ' ಎಂದು ಸುಳ್ಳು ವಿಳಾಸ ನೀಡಿ ಆರಿಸಿ ಬಂದದ್ದು ಅವರ `ಪ್ರಾಮಾಣಿಕತೆ'ಗೆ ಕನ್ನಡಿ ಹಿಡಿಯುತ್ತದೆ. ಪದವಿ, ಅಧಿಕಾರ ಹೇಗೆ ಸಿಕ್ಕರೂ ಬೇಡ ಎನ್ನದೇ ಸ್ವೀಕರಿಸುವ ಮಾಮೂಲಿ ರಾಜಕಾರಣಿಗಿಂತಲೂ ಅವರು ಭಿನ್ನರೇನಲ್ಲ.

ಜನರ ಹಂಗೇ ಇಲ್ಲದೇ ಒಬ್ಬ ರಾಜ್ಯಸಭಾ ಸದಸ್ಯ ದೇಶದ ಪ್ರಧಾನಿಯಾದದ್ದು ಎಷ್ಟು ಸರಿ? ಸಂವಿಧಾನದಲ್ಲಿ ಇದಕ್ಕೆ ತಾಂತ್ರಿಕವಾಗಿ ಅವಕಾಶವಿದೆ. ಆದರೆ 100 ಕೋಟಿ ಜನರಿರುವ ದೊಡ್ಡ ಪ್ರಜಾತಾಂತ್ರಿಕ ದೇಶದಲ್ಲಿ ಹೀಗೆ ಮಾಡುವುದು ನೈತಿಕತೆಯೆ? ಕಾಂಗ್ರೆಸ್ ಪಕ್ಷದಲ್ಲಿ ಲೋಕಸಭೆಗೆ ಆರಿಸಿ ಬಂದಿದ್ದ ಅನೇಕ ನಾಯಕರಿದ್ದರು. ಆದರೂ ಮನಮೋಹನ್ ಸಿಂಗರೇ ಏಕೆ ದೇಶದ ಪ್ರಧಾನಿಯಾಗಬೇಕು?

ಇದಕ್ಕೆ ಉತ್ತರ ಎಲ್ಲರಿಗೂ ಗೊತ್ತು. ಅವರು ಸೋನಿಯಾ ಗಾಂಧಿಯ ಆಯ್ಕೆ. ದೇಶದ ಜನರ ಆಯ್ಕೆಯಲ್ಲ. `ಇವರು ಪ್ರಧಾನಿಯಗಲಿ' ಎಂದು ಸೋನಿಯಾ ಅಪ್ಪಣೆ ಕೊಟ್ಟರು. ಮನಮೋಹನ್ ಪ್ರಧಾನಿಯಾದರು. ಆದರೆ ಸೋನಿಯಾ ಏಕೆ ಮನಮೋಹನ್ ಸಿಂಗ್ ಅವರನ್ನೇ ಆರಿಸಿದರು? ಹೆಚ್ಚಿನ ಅನುಭವಶಾಲಿ ಪ್ರಣಬ್ ಮುಖಜರ್ಿಯವರನ್ನು ಏಕೆ ಆರಿಸಲಿಲ್ಲ? ಮನಮೋಹನ್ ಅರ್ಥಶಾಸ್ತ್ರಜ್ಞ ಎಂದೆ? ನಮ್ಮಲ್ಲಿ ಮನಮೋಹನ್ ಸೀಂಗರಿಗಿಂತಲೂ ಬುದ್ಧ್ಧಿವಂತರು ಎನಿಸಿದ ಅನೇಕ ಮಾಜಿ ರಿಸವರ್್ ಬ್ಯಾಂಕ್ ಗವರ್ನರ್ಗಳಿದ್ದಾರೆ. ಇತರ ಅಧಿಕಾರಿಗಳಿದ್ದಾರೆ. ಸ್ವತಃ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಇನ್ನೂ ಸಾಕಷ್ಟು ವಯಸ್ಸಿರುವ, ಚುರುಕಾದ, ಚಾಲಾಕಿ ಮನುಷ್ಯ. ಅವರನ್ನೇ ಆರಿಸಲಿಲ್ಲ? ಜಾತಿ ಆಧಾರದ ಮೇಲೆ ನೋಡಿದರೂ ಅವರೂ ಸಹ ಸಿಖ್ ಮತೀಯರೇ ಅಲ್ಲವೆ? ಮನಮೋಹನ್ ಆಯ್ಕೆಗೆ ಕಾರಣ ಏನು? ನಿಜವಾದ ಕಾರಣ ಅವರು ಮಾತಾಡದ ಮೂತರ್ಿ ಎಂಬುದೇ ಅಲ್ಲವೆ? ಈ ಮೂತರ್ಿಯನ್ನು ಪ್ರತಿಷ್ಠಾಪಿಸಿ, ಅದರ ಹೆಸರಿನಲ್ಲಿ, ಪ್ರತಿಷ್ಠಾಪಕರು ಆಡಳಿತ ನಡೆಸಬಹುದು! ಅದಕ್ಕೆ ಈ ಮೂತರ್ಿ ಅವಕಾಶ ನೀಡುತ್ತದೆ!

ಎಲ್ಲ ಕಾಲದಲ್ಲೂ ಖಂಡಿತವಾದಿ ಲೋಕವಿರೋಧಿಯೇ. ಯಾರನ್ನಾದರೂ ದೊಡ್ಡ ಹುದ್ದೆಗಳಿಗೆ ಆರಿಸುವಾಗ ಆರಿಸುವರು ನೋಡುವುದು ಈತ ತನಗೆ ನಿಷ್ಠನೇ ಎಂಬುದನ್ನು. ಅದೇ ಮೊದಲ ಅರ್ಹತೆ. ದಕ್ಷತೆಗಿಂತಲೂ ಬದ್ಧತೆಯೇ ಇಲ್ಲಿ ಮುಖ್ಯವಾಗುತ್ತದೆ. `ಪೀಠದಲ್ಲಿ ಕುಳಿತ ಮೇಲೂ ಈತ ದಕ್ಷನಾಗಬಾರದು. ನಮ್ಮ ಪರವಾಗಿ ಪೀಠದಲ್ಲಿರಬೇಕು ಅಷ್ಟೇ. ನಾವು ಹೇಳಿದಂತೆ ಕೇಳಬೇಕು. ನಾವು ಕೇಳಿದಾಗ ಪೀಠ ಬಿಟ್ಟುಕೊಡಲು ಸಿದ್ಧನಾಗಿರಬೇಕು' ಎಂಬುದು ಆಯ್ಕೆಗಾರರ ಅಪೇಕ್ಷೆ. ಅದಕ್ಕೆ ಯಾರು ತಕ್ಕವರೋ ಅವರಿಗೆ ಪೀಠ ಸಿಗುತ್ತದೆ. ಲಾಲೂ ಪ್ರಸಾದ್ ರಾಬ್ಡಿ ದೇವಿಯನ್ನು ಒಂದೇ ದಿನದಲ್ಲಿ ಬಿಹಾರದ ಮುಖ್ಯಮಂತ್ರಿ ಮಾಡಲಿಲ್ಲವೆ? ಸುಪ್ರೀಮ್ ಕೋಟರ್್ ಆದೇಶದಂತೆ 2001ರಲ್ಲಿ ಜಯಲಲಿತಾ ಅಧಿಕಾರ ಕಳೆದುಕೊಂಡಾಗ ಪನ್ನೀರ್ಸೆಲ್ವಮ್ ಎಂಬ ಟೀ ಅಂಗಡಿಯ ಮಾಲೀಕನನ್ನು ಏಕಾಏಕಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆರಿಬಿಟ್ಟರು! ಮರುವರ್ಷ ಕೋಟರ್ಿನ ತೀಪರ್ು ಪಡೆದು ಮತ್ತೆ ಜಯಾ ಮುಖ್ಯಮಂತ್ರಿಯಾದರು. ಇಲ್ಲಿ ಪನ್ನೀರ್ಸೆಲ್ವಮ್ ಅವರನ್ನು ಪ್ರಬಲ ಜನನಾಯಕ ಎನ್ನಲಾದೀತೆ?

ಜನರ ಹಂಗಿಲ್ಲದ ಪ್ರಜಾತಂತ್ರದಲ್ಲಿ ಬೇರೆ ಯಾರಾದರೊಬ್ಬರ ಹಂಗಿನ ದಾಸರಾಗಬೇಕಾಗುತ್ತದೆ. ಮನಮೋಹನ್ ಸಿಂಗ್ ಆಗಿದ್ದು ಇದೇ. ಪ್ರಧಾನಿಯಾದವನು ಸಂಫೂರ್ಣ ದೇಶದ ಮುಖಂಡ. 100 ಕೋಟಿ ಜನರ ನಾಯಕ. ಅದರೆ ಅಂತಹ ಯಾವುದೇ ದಕ್ಷತೆಯನ್ನು, ಕಳಕಳಿಯನ್ನು ಕಳೆದ 5 ವರ್ಷಗಳಲ್ಲಿ ಮನಮೋಹನ್ ಪ್ರದಶರ್ಿಸಿಲ್ಲ.

ಒಂದು ಅಂಕಿಅಂಶದ ಪ್ರಕಾರ ಕಳೆದ ಐದು ವರ್ಷಗಳಲ್ಲಿ 3850 ಭಾರತೀಯರು ಭಯೋತ್ಪಾದಕರಿಗೆ ಬಲಿಯಾಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 12ಕ್ಕೂ ಹೆಚ್ಚು ದೊಡ್ಡ ಜಿಹಾದಿ ದಾಳಿಗಳಾಗಿವೆ. 26/11 ಘಟನೆಯನ್ನು ಬಿಟ್ಟರೆ ಉಳಿದ ಯಾವ ಸಂದರ್ಭದಲ್ಲೂ ಮನಮೋಹನ್ ನೊಂದ ಜನರಿಗೆ ತಮ್ಮ ಮುಖವನ್ನೂ ಸರಿಯಾಗಿ ತೋರಿಸಲಿಲ್ಲ. 26/11 ಘಟನೆಯಾದಾಗಲೂ ಅವರು ಮುಂಬಯಿಗೆ ಗೃಹಮಂತ್ರಿ, ರಕ್ಷಣಾ ಮಂತ್ರಿಗಳನ್ನು ಕರೆದುಕೊಂಡು ಹೋಗದೇ ಸೋನಿಯಾ ಗಾಂಧಿ ಜೊತೆಗೆ ಹೋದರು. ಇಂತಹ ಸ್ಥಿತಿಯಲ್ಲಿ ಬರಾಕ್ ಒಬಾಮಾ ಅಥವಾ ಇತರ ರಾಷ್ಟ್ರನಾಯಕರು ಇದ್ದರೆ ಹೇಗೆ ವತರ್ಿಸುತ್ತಿದ್ದರು ಎಂಬುದು ಗಮನಾರ್ಹ. 2001ರ ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿಯ ನಂತರ ಜಾಜರ್್ ಬುಷ್ ತಮ್ಮ ರಿಪಬ್ಲಿಕನ್ ಪಕ್ಷದ ಅಧ್ಯಕ್ಷರನ್ನು ಮುಂದೆ ಬಿಟ್ಟುಕೊಂಡು ಅವರ ಹಿಂದೆ ಅಲೆಯುತ್ತಿದ್ದರೆ?

2004ರಲ್ಲಿ ಯುಪಿಎ ಸಕರ್ಾರ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಒಂದೇ ಒಂದು ಸಚಿವ ಸಂಪುಟದ ಸಭೆಗೂ ಹಿರಿಯ ಸಚಿವರೊಬ್ಬರು ಹಾಜರಾಗಿಲ್ಲ! ಅವರ ವಿರುದ್ಧ ನಮ್ಮ `ಪ್ರಬಲ' ಪ್ರಧಾನಿಗಳು ಯಾವ ಕ್ರಮ ಕೈಗೊಂಡಿದ್ದಾರೆ? ಈ ಕುರಿತು ಮನಮೋಹನ್ ಚಕಾರವೆತ್ತಿಲ್ಲ. ಏಕೆಂದರೆ ಆ ಸಚಿವರೂ 10 ಜನಪಥ್ ವಿಳಾಸದ ನಿಷ್ಠರಲ್ಲೊಬ್ಬರು!

ಸಕರ್ಾರದ ಮುಖ್ಯಸ್ಥರಾಗಿ ತಪ್ಪು ಮಾಡುವ ಸಚಿವರನ್ನು ಪ್ರಶ್ನಿಸುವ, ಅಥವಾ ಅವರನ್ನು ತೆಗೆದುಹಾಕುವ ಅಧಿಕಾರ ಪ್ರಧಾನಿಗಿದೆ. ಇರುವ ಅಧಿಕಾರವನ್ನೂ ಬಳಸದ ಇವರು ಪ್ರಬಲರೋ, ದುರ್ಬಲರೋ? ಶಿಬು ಸೋರೆನ್, ರಾಮದಾಸ್, ಅಬ್ದುಲ್ ರೆಹಮಾನ್ ಅಂತುಲೆ - ಹೀಗೆ ಅನೇಕ ಸಚಿವರು ತಮ್ಮ ಕೃತ್ಯ ಹಾಗೂ ಹೇಳಿಕೆಗಳಿಂದ ಸಕರ್ಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರೂ ಅವರ ಗೊಡವೆಗೇ ಪ್ರಧಾನಿ ಹೋಗಲಿಲ್ಲ. ಕ್ರಮ ತೆಗೆದುಕೊಳ್ಳುವ ಅಧಿಕಾರ ತಮಗಿದೆ, ಅದನ್ನು ಚಲಾಯಿಸಬೇಕಾದ್ದು ತಮ್ಮ ಕರ್ತವ್ಯ ಎಂದು ಕುಚರ್ಿಯಲ್ಲಿ ಕುಳಿತ ಒಂದು ದಿನವಾದರೂ ಅವರಿಗೆ ಅನಿಸಿದ್ದುಂಟೆ? ಪ್ರತಿಯೊಂದಕ್ಕೂ ಸೋನಿಯಾ ನಿವಾಸದತ್ತ ಮುಖ ಮಾಡುವ ಪ್ರವೃತ್ತಿ ಕೇವಲ ದೌರ್ಬಲ್ಯ ಮಾತ್ರವೇ ಅಲ್ಲ. ಪ್ರಧಾನಿ ಈ ಕುರಿತು ಜನತೆಗೆ ವಿವರಿಸಬೇಕು.

ಯುಪಿಎ ಮಿತ್ರಪಕ್ಷಗಳು ಸಹ ಪ್ರಧಾನಿಯವರನ್ನು ಗಂಭೀರವಾಗಿ ಭಾವಿಸಿಲ್ಲ. ಡಿಎಂಕೆ ಪಕ್ಷದ ರಾಜಾ ದೂರಸಂಪರ್ಕ ಖಾತೆಯ ಸಂಪುಟ ಸಚಿವರಾಗಿ ನೇಮಕಗೊಂಡಿರುವ (ದಯಾನಿಧಿ ಮಾರನ್ ರಾಜೀನಾಮೆಯ ನಂತರ) ಸಂಗತಿಯನ್ನು ಮೊದಲು ಘೋಷಿಸಿದ್ದು ಡಿಎಂಕೆ ಮುಖಂಡ ಕರುಣಾನಿಧಿ. ಪ್ರಧಾನಮಂತ್ರಿ ಕಾಯರ್ಾಲಯವಲ್ಲ! ಎಲ್ಲ ಮಿತ್ರಪಕ್ಷಗಳ ಸಚಿವರುಗಳೂ ಸೋನಿಯಾರತ್ತ ಮುಖ ಮಾಡುತ್ತಾರೆಯೇ ಮನಮೋಹನ್ ಅವರ ಕಡೆಗಲ್ಲ. ಡಿಎಂಕೆ, ಎನ್ಸಿಪಿ ಹಾಗೂ ಪಿಎಂಕೆ ಸಚಿವರುಗಳು ಸಾರ್ವಜನಿಕ ಹಣ ಬಳಸಿ ನಡೆಸಿದ ವಿದೇಶ ಯಾತ್ರೆಗಳ ಬಗ್ಗೆ ಪ್ರಧಾನಮಂತ್ರಿ ಕಾಯರ್ಾಲಯಕ್ಕೆ ಇನ್ನೂ ವರದಿ ನೀಡಿಯೇ ಇಲ್ಲ. ಸೂಕ್ತ ಕ್ರಮ ಕೈಗೊಳ್ಳಲು ನಮ್ಮ `ಪ್ರಬಲ' ಪ್ರಧಾನಿಗೆ ಇನ್ನೂ ಪುರುಸೊತ್ತು ಸಿಕ್ಕಿಲ್ಲ!

ದೇಶವನ್ನು ಕಾಡುತ್ತಿರುವ ಜಿಹಾದಿ ಭಯೋತ್ಪಾದನೆಯ ವಿರುದ್ಧವಾಗಿ ಈವರೆಗೆ ಮನಮೋಹನ್ ಸ್ಪಷ್ಟವಾದ ಒಂದು ಹೇಳಿಕೆಯನ್ನೂ ನೀಡಿಲ್ಲ. ಅವರ ಅವಧಿಯಲ್ಲಿ ಸಿಬಿಐ ಹಲವರು ಬಾರಿ ಸುಪ್ರೀಮ್ ಕೋಟರ್ಿನಿಂದ ಛೀಮಾರಿ ಹಾಕಿಸಿಕೊಂಡಿದೆ. ಸಕರ್ಾರದ ಕೈಗೊಂಬೆಯಾಗಿ ಆಪಾದಿತರನೇಕರ ಪರವಾಗಿ ವತರ್ಿಸಿದ್ದನ್ನು ಸ್ವತಃ ಸಿಬಿಐ ಮುಖ್ಯಸ್ಥರೇ ಸುಪ್ರೀಮ್ ಕೋಟರ್್ ಎದುರಿಗೆ ಒಪ್ಪಿಕೊಂಡಿರುವುದು ಮನಮೋಹನ್ ಸಿಂಗ್ ಅವರ `ದಕ್ಷತೆಗೆ' ಮತ್ತು `ಪ್ರಾಮಾಣಿಕತೆಗೆ' ಕನ್ನಡಿ ಹಿಡಿಯುತ್ತದೆ.

ಬರೀ ಪೇಲವ ನಗೆಯನ್ನು ಮತ್ತು ಸೌಮ್ಯ ಮುಖವನ್ನು ಸಜ್ಜನಿಕೆಯ ಸಂಕೇತ ಅಂದುಕೊಂಡರೆ ಮನಮೋಹನ್ ಅತ್ಯಂತ ಹೆಚ್ಚು ಸಜ್ಜನರು! ಆದರೆ ಅವರು ಖಂಡಿತಾ ದಕ್ಷರಲ್ಲ.

ಕೇಂದ್ರದಲ್ಲಿ ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಲಾಲ್ ಕೃಷ್ಣ ಆಡ್ವಾಣಿ ಪ್ರಧಾನಿ ಆಗುತ್ತಾರೆ. ಆದರೆ ಅವರು ಪ್ರಬಲ ಪ್ರಧಾನಿ ಎನಿಸುಬಲ್ಲರೆ? ಈ ಪ್ರಶ್ನೆಗೆ ಕಾಲವೇ ಉತ್ತರ ಹೇಳಬೇಕು (ಅದೂ ಅವರು ಪ್ರಧಾನಿಯಾದರೆ!).

ವಾಜಪೇಯಿ ಪ್ರಧಾನಿಯಾಗಿದ್ದಾಗ ಅವರನ್ನು ಕಾಂಗ್ರೆಸ್ ಪಕ್ಷ `ವೀಕ್-ನೀಡ್ ಪ್ರೈಮ್ ಮಿನಿಸ್ಟರ್' ಎಂದು ಛೇಡಿಸುತ್ತಿತ್ತು. ಈಗ ಮನಮೋಹನ್ ಅವರನ್ನು `ವೀಕ್-ಹಾಟರ್ೆಡ್ ಪ್ರೈಮ್ ಮಿನಿಸ್ಟರ್' ಎನ್ನಬಹುದೆ?

ಶೂ-ಎಸೆದು ಸುದ್ದಿ ಮಾಡುವ ಕಾಲ!

ಅಮೆರಿಕದ ಮಾಜಿ ಅಧ್ಯಕ್ಷ ಜಾಜರ್್ ಡಬ್ಲ್ಯೂ ಬುಷ್ ಮೇಲೆ ಇರಾಕಿ ಪತ್ರಕರ್ತನೊಬ್ಬ ಶೂಗಳನ್ನು ಎಸೆದ ಪ್ರಕರಣದಿಂದಾಗಿ ಹೊಸ ಬೆಳವಣಿಗೆಯಾದಂತಿದೆ. ಶೂಗಳನ್ನು, ಚಪ್ಪಲಿಗಳನ್ನು ಎಸೆಯುವ ಮೂಲಕ ತಮ್ಮ `ಪ್ರತಿಭಟನೆ' ವ್ಯಕ್ತಪಡಿಸುವ ಹೊಸ ಪದ್ಧತಿ ಅಥವಾ ಶಕೆ ಆರಂಭವಾಗಿರುವಂತಿದೆ.

ಇದೊಂದು ಕೆಟ್ಟ ಬೆಳವಣಿಗೆಯೇ ಸರಿ. ಆದರೆ ಖಂಡಿತಾ ಇದು ಹೊಸ ಪದ್ಧತಿಯೇನಲ್ಲ. ಶೂಸ್, ಚಪ್ಪಲಿಗಳು, ಕೊಳೆತ ಹಣ್ಣು. ಮೊಟ್ಟೆಗಳನ್ನು ಮುಖದ ಮೇಲೆ ಎಸೆದು ಪ್ರತಿಭಟನೆ ಸೂಚಿಸುವುದು ಸಣ್ಣಪುಟ್ಟ ಮಟ್ಟಗಳಲ್ಲಿ ಮೊದಲಿನಿಂದಲೂ ನಡೆದುಕೊಂಡೇ ಬಂದಿರುವಂತಹುದು. ಆದರೆ ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಸುದ್ದಿಯಾಗುವ ರೀತಿಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಹಲವಾರು ಪ್ರಮುಖ ಶೂಸ್ ಪ್ರಕರಣಗಳು ನಡೆದಿರುವುದು ಗಮನಾರ್ಹ.

ಮೊದಲ ಪ್ರಮುಖ ಪ್ರಕರಣ ನಿಮಗೆ ನೆನಪಿರಬಹುದು. 2008 ಡಿಸೆಂಬರ್ 14 ರಂದು ಜಾಜರ್್ ಬುಷ್ ಇರಾಕ್ಗೆ ಹಠಾತ್ತಾಗಿ ಭೇಟಿ ನೀಡಿದ್ದರು. ತುಂಬಿದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದಾಗ ಕೈರೋ ಮೂಲದ ಅಲ್-ಬಾಗ್ದಾದಿಯಾ ಟಿವಿಯ ಇರಾಕಿ ವರದಿಗಾರ ಮುಂತದಾರ್ ಅಲ್-ಜೈದಿ ಹಠಾತ್ತಾಗಿ ಎದ್ದುನಿಂತು `ಛೀ ನಾಯಿ' ಎಂದು ಬುಷ್ ಅವರನ್ನು ಬೈದ. ಅನಂತರ ಒಂದಾದ ನಂತರ ಒಂದರಂತೆ ತನ್ನ ಎರಡು ಶೂಗಳನ್ನೂ ಅವರ ಮುಖಕ್ಕೆ ಎಸೆದ.

ಇದಾದ ನಂತರ `ಸಾಮೂಹಿಕ ಶೂ-ಎಸೆತದ ಚಳವಳಿ'ಯನ್ನು ನಡೆಸಲಾಯಿತು. ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ನಡೆಯುತ್ತಿರುವ `ಗಾಜಾದಲ್ಲಿ ಬ್ರಿಟಿಷ್ ಸಕರ್ಾರ ನಿಷ್ಕ್ರಿಯತೆ ತೋರುತ್ತಿದೆ' ಎಂದು ಆರೋಪಿಸಿ ಸಾವಿರಾರು ಇಸ್ಲಾಮೀ ಕಾರ್ಯಕರ್ತರು ಬ್ರಿಟನ್ ಪ್ರಧಾನಿ ಗೋರ್ಡನ್ ಬ್ರೌನ್ ಅವರ ಅಧಿಕೃತ ನಿವಾಸದ ಮೇಲೆ ಸಾಮೂಹಿಕವಾಗಿ ಶೂಗಳನ್ನು ಎಸೆದರು.

ನಂತರದ ಶಿಕಾರಿ ಚೀನಾ ಪ್ರಧಾನಿ ವೆನ್ ಜಿಯಾಬಾವ್. ಇದೇ ಫೆಬ್ರವರಿ 2 ರಂದು ಅವರು ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಆಥರ್ಿಕತೆಯ ಬಗ್ಗೆ ಭಾಷಣ ಮಾಡುತ್ತಿದ್ದರು. `ಹೇ ಸವರ್ಾಧಿಕಾರಿ' ಎಂಬ ಕೂಗು ಕೇಳಿಸಿತು. ತಕ್ಷಣ ಅವರ ಮೇಲೆ ಶೂ ಎಸೆಯಲಾಯಿತು. ಅದನ್ನು ಎಸೆದದ್ದು ಜರ್ಮನಿ ಮೂಲದ ಮಾಟರ್ಿನ್ ಜಾನ್ಕ್ ಎಂಬ ಪ್ಯಾಥೋಲಜಿ ವಿದ್ಯಾಥರ್ಿ.

ಸುಪ್ರೀಂ ಕೋಟರ್ಿನ ನ್ಯಾಯಾಧೀಶ ಅರಿಜಿತ್ ಪಸಾಯತ್ ಅವರ ಮೇಲೆ ಕಟಕಟೆಯಲ್ಲಿದ್ದ ವಿದ್ಯಾವಂತ ಆರೋಪಿ ಮಹಿಳೆಯೊಬ್ಬಳು ಇದೇ ಮಾಚರ್್ 30 ರಂದು ಶೂ ಎಸೆದ ಪ್ರಸಂಗ ನಡೆಯಿತು. ಆದರೆ ಅದನ್ನು ಪಸಾಯತ್ ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. ಅಲ್ಲಿ ಟಿವಿ ಕ್ಯಾಮೆರಾಗಳು ಇರಲಿಲ್ಲ. ಹೀಗಾಗಿ ಅದು ದೊಡ್ಡ ಸುದ್ದಿಯಾಗಲಿಲ್ಲ.

ಈಚಿನ ಶಿಕಾರಿ ಭಾರತದ ಗೃಹಮಂತ್ರಿ ಪಿ. ಚಿದಂಬರಂ. ಅವರ ಮೇಲೆ `ದೈನಿಕ್ ಜಾಗರಣ್' ಪತ್ರಿಕೆಯ ವರದಿಗಾರ ಜನರ್ೈಲ್ ಸಿಂಗ್ ಶೂ ಎಸೆದದ್ದು ದೊಡ್ಡ ಸುದ್ದಿಯಾಯಿತು. 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯ ನಂತರ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಖ್ಖರ ಮೇಲೆ ನಡೆಸಿದ ಹಿಂಸಾಚಾರಕ್ಕೆ 3000 ಸಿಖ್ಖರು ಬಲಿಯಾದ ಪ್ರಕರಣ ಈ ಘಟನೆಗೆ ಕಾರಣ. ಸಿಖ್ ನರಮೇಧದ ಪ್ರಮುಖ ಆರೋಪಿ, ಕಾಂಗ್ರೆಸ್ ನಾಯಕ, ಜಗದೀಶ್ ಟೈಟ್ಲರ್ ಅವರನ್ನು `ಅಮಾಯಕ' ಎಂದು ಸಿಬಿಐ ದೋಷಮುಕ್ತಗೊಳಿಸಿದ ವಿಷಯ ಚಿದಂಬರಂ ಗೋಷ್ಠಿಯಲ್ಲಿ ಪ್ರಸ್ತಾಪವಾಯಿತು. ಸಿಖ್ಖರ ನರಮೇಧ ನಡೆಸಿದ ಕಾಂಗ್ರೆಸ್ ನಾಯಕನ ಪರವಾಗಿ ವತರ್ಿಸಲು ಸಿಬಿಐ ಮೇಲೆ ಕೇಂದ್ರ ಸಕರ್ಾರ ಒತ್ತಡ ಹೇರಿದೆಯೆ ಎಂಬ ಜನೈಲನ ಪ್ರಶ್ನೆಗೆ ಚಿದಂಬರಂ ಹಾರಿಕೆಯ ಉತ್ತರ ನೀಡಿದರು. `ಈ ವಿಷಯದಲ್ಲಿ ಚಚರ್ೆ ಬೇಕಿಲ್ಲ' ಎಂದು ಅವರು ಹೇಳುತ್ತಿದ್ದಂತೆ `ನಾನಿದನ್ನು ಪ್ರತಿಭಟಿಸುತ್ತೇನೆ' ಎಂದು ಜನರ್ೈಲ್ ಚಿದಂಬರಂ ಸಮೀಪ ಬೀಳುವಂತೆ ತನ್ನ ಶೂ ಎಸೆದ.

ಈ ಪ್ರಕರಣಗಳಲ್ಲಿ ಶೂಗಳನ್ನು ಎಸೆದವರೆಲ್ಲ ವಿದ್ಯಾವಂತರು. ತಾವೇನು ಮಾಡುತ್ತಿದ್ದೇವೆ ಎಂಬುದನ್ನು ತಿಳಿದವರು. ಅದರಲ್ಲೂ ಎರಡು ಪ್ರಕರಣಗಳಲ್ಲಿ ತಾವು ಕೇಳಿದ್ದನ್ನು ಕೇಳಿದ ಹಾಗೆಯೇ ವರದಿ ಮಾಡಬೇಕಾದ ಜವಾಬ್ದಾರಿ ಇರುವ ಪತ್ರಕರ್ತರು ಶೂ ಎಸೆದಿದ್ದಾರೆ. ಸುದ್ದಿ ನೀಡಬೇಕಾದವರು ತಾವೇ ಸುದ್ದಿಯಾಗುತ್ತಿರುವುದು ಅಪೇಕ್ಷಣೀಯ ಬೇಳವಣಿಗೆಯಲ್ಲ. ಇದರಿಂದ ಇನ್ನು ಮುಂದೆ ಮಾಧ್ಯಮಗೋಷ್ಠಿಗಳಿಗೆ ಹಾಜರಾಗುವ ಪತ್ರಕರ್ತರು ತಮ್ಮ ಪಾದರಕ್ಷೆಗಳನ್ನು ಕಳಚಿಟ್ಟು ಬರೀಗಾಲಲ್ಲಿ ಬರಬೇಕೆಂಬ ಹೊಸ ತಾಕೀತು ಶುರುವಾಗಲೂಬಹುದು. ಅವರ ಪೆನ್ನುಗಳೂ ಸುರಕ್ಷಾ ಪರಿಧಿಗೆ ಬರಬಹುದು. `ಲೇಖನಿ ಖಡ್ಗಕ್ಕಿಂತಲೂ ಹರಿತವಾದದ್ದು' ಎಂಬ ಮಾತು ಬೇರೊಂದು ವಿಚಿತ್ರ ಅರ್ಥದಲ್ಲಿ ಗಂಭೀರವಾಗಿ ಭಾವಿಸಲ್ಪಡಬಹುದು!

ಬುಷ್ ಮೇಲೆ ಶೂ ಎಸೆದ ಬಳಿಕ ಅಲ್-ಜೈದಿಯ ಬಂಧನವಾಯಿತು. ಅನಂತರ ನ್ಯಾಯಾಲಯದಲ್ಲಿ ಆತನಿಗೆ ಮೂರು ವರ್ಷಗಳ ಜೈಲು ಶಿಕ್ಷೆಯಾಯಿತು. ವೆನ್ ಜಿಯಾಬಾವ್ ಮೇಲೆ ಶೂ ಎಸೆದ ಘಟನೆಯನ್ನು ಚೀನಾದಲ್ಲಿ ವರದಿ ಮಾಡದೇ `ಸೆನ್ಸಾರ್' ಮಾಡಲಾಯಿತು! ಆದರೂ ಮಾಟರ್ಿನ್ ವಿರುದ್ಧ ಬ್ರಿಟನ್ನಿನಲ್ಲಿ ಕೇಸು ನಡೆಯುತ್ತಿದೆ. ಜನರ್ೈಲ್ ವಿರುದ್ಧ ಚಿದಂಬರಂ ದೂರು ದಾಖಲಿಸಲಿಲ್ಲ. ದೈನಿಕ್ ಜಾಗರಣ್ ಪತ್ರಿಕೆ ಆತನ ಮೇಲೆ ಶಿಸ್ತುಕ್ರಮ ತೆಗೆದುಕೊಂಡು ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ.

ಈ ಪ್ರಕರಣಗಳನ್ನು ಜಗತ್ತು ಸ್ವೀಕರಿಸಿದ ರೀತಿಯೂ ಗಮನಾರ್ಹ. ಶೂ ಎಸೆಯುವುದನ್ನು ಎಸೆದವರ ಹಿನ್ನೆಲೆ, ಉದ್ದೇಶಗಳನ್ನು ಸಮಥರ್ಿಸುವವರು ಸ್ವಾಗತಿಸಿದ್ದಾರೆ. ಇಸ್ಲಾಮೀ ತೀವ್ರವಾದಿಗಳು ಅಲ್-ಜೈದಿಯಗೆ ಹೀರೋ ಪಟ್ಟ ನೀಡಿದ್ದಾರೆ. ಮುಸ್ಲಿಂ ಶ್ರೀಮಂತನೊಬ್ಬ ಅವರಿಗೆ ತನ್ನ ಒಬ್ಬಳೇ ಮಗಳನ್ನು ಕೊಡುವ ಪ್ರಸ್ತಾಪ ಮುಂದಿಟ್ಟಿದ್ದ! ಇಂಟರ್ನೆಟ್ನಲ್ಲಿ ಬುಷ್ ಮೇಲೆ ಶೂಸ್ ಎಸೆಯುವ ಆನ್ಲೈನ್ ವಿಡೀಯೋ ಗೇಮ್ಗಳ ಸ್ಪಧರ್ೆಗಳು ನಡೆಯುತ್ತಿವೆ! ಅಕಾಲಿದಳದ ದೆಹಲಿ ಘಟಕ ಜನರ್ೈಲ್ ಅನ್ನು ಕೊಂಡಾಡಿದೆ. ಆತನಿಗೆ 2 ಲಕ್ಷ ರೂ ಬಹುಮಾನ ಘೋಷಿಸಿದೆ. ಸಿಮ್ರನ್ಜಿತ್ ಸಿಂಗ್ ಮಾನ್ ನಾಯಕತ್ವದ ಅಕಾಲಿದಳ (ಅಮೃತಸರ) ಆತನಿಗೆ ಲೋಕಸಭಾ ಟಿಕೆಟ್ ನೀಡಲು ಮುಂದೆ ಬಂದಿತ್ತು. ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಆತನಿಗೆ ಉದ್ಯೋಗ ನೀಡುವ ಪ್ರಸ್ತಾಪ ಮಾಡಿದೆ.

ಈವರೆಗಿನ ಹೆಚ್ಚಿನ `ಶೂ ಬಾಣ'ಗಳ ಗುರಿ ರಾಜಕಾರಣಿಗಳು. ಸದ್ಯದ ಪ್ರಮುಖ ಗುರಿಗಾರರೆಲ್ಲ ವಿದ್ಯಾವಂತರು. ಪತ್ರಕರ್ತರು. ಮುಂದೆ ಸಾಮಾನ್ಯ ಜನರೂ ಈ ರೀತಿಯ `ಪ್ರತಿಭಟನೆ'ಗಳಿಗೆ ಇಳಿದರೆ ರಾಜಕಾರಣಿಗಳ ಜೊತೆಗೆ ಮಿಷನರಿಗಳು, ಪೋಪ್, ಮಠಾಧೀಶರು, ಮುಲ್ಲಾಗಳು - ಹೀಗೆ ಎಲ್ಲರೂ ಗುರಿಗಳಾಗಬಹುದು! ಜಾತಿ ಮುಖಂಡರು, ಊರಿನ ಜಮೀನುದಾರರಿಂದ ಹಿಡಿದು ಸಾರ್ವಜನಿಕ ಸಂಪರ್ಕಕ್ಕೆ ಬರುವ ಎಲ್ಲರೂ ಬಹಳ ಎಚ್ಚರದಿಂದ ಇರಬೇಕಾಗುತ್ತದೆ! ಮುಂದೆ ಪ್ರತಿಕೃತಿಗಳ ದಹನದ ಬದಲು ಪ್ರತಿಕೃತಿಗಳನ್ನು ಮಾಡಿಟ್ಟು ಅವುಗಳಿಗೆ ಸಾರ್ವಜನಿಕ ಚಪ್ಪಲಿ ಸೇವೆ ಮಾಡುವುದು ಹೆಚ್ಚಾಗಬಹುದು.

ಶೂ ಎಸೆಯುವುದು ಒಳ್ಳೆಯ ಪ್ರತಿಭಟವಾ ವಿಧಾನವೆ? - ಎಂಬುದು ಮುಖ್ಯವಾದ ಪ್ರಶ್ನೆ. ಅದರಲ್ಲೂ ಪ್ರತಿಭಟನೆಯ ಸ್ಥಳ ಯಾವುದು? ಪ್ರತಿಭಟನಕಾರರು ಯಾರು? ಪ್ರತಿಭಟನೆ ಯಾರ ಮೇಲೆ? ಅದರ ಉದ್ದೇಶವೇನು? ಗಮನ ಸೆಳೆಯುವುದೇ? ಅಥವಾ ಘಾಸಿ ಮಾಡುವುದೆ? ಹಾಗೂ ಪ್ರತಿಭಟನಕಾರರ ಗುರಿಯೇನು? ಸುದ್ದಿ ಮಾಡುವುದೆ? ಸಾರ್ವಜನಿಕಮ ಹಿತಾಸಕ್ತಿಯೆ? - ಇವೆಲ್ಲ ಪ್ರಶ್ನೆಗಳೂ ಮುಖ್ಯವಾಗುತ್ತವೆ.

ಯಾವುದೇ ದೃಷ್ಟಿಯಿಂದ ನೋಡಿದರೂ ಮೇಲೆ ಉದಾಹರಿಸಿದ ಪ್ರಸಂಗಗಳು ಅಂತಹ ಪ್ರತಿಭಟನೆಗಳಿಗೆ ತಕ್ಕವುಗಳಾಗಿರಲಿಲ್ಲ ಎಂದೇ ಹೇಳಬೇಕಾಗುತ್ತದೆ. ಸುಲಭವಾಗಿ ಸುದ್ದಿ ಮಾಡಲೂ ಕೆಲವರು ಇಂತಹ ವಿನೂತನ, ವಿಚಿತ್ರ ಪ್ರತಿಭಟನೆಗೆ ಇಳಿಯುವ ಅಪಾಯ ಇದ್ದೇ ಇದೆ.

ಆದರೂ ಕೆಲವು ಪ್ರಕರಣಗಳಲ್ಲಿ (ಉದಾಹರಣೆಗೆ, ಜನರ್ೈಲ್ ಪ್ರಕರಣ) ಶೂ-ದಾಳಿಗೆ ಗುರಿಯಾದವರಿಗೆ ಸಾರ್ವಜನಿಕ ಸಹಾನುಭೂತಿ ಸಿಕ್ಕಿಲ್ಲ. ಇದಕ್ಕೆ ಕಾರಣ `ಅವರು ಇಂತಹ ಸೇವೆಗೆ ತಕ್ಕವರು' ಎಂಬ ಭಾವನೆ ಸಾರ್ವಜನಿಕರಲ್ಲಿ ಬಲವಾಗಿರುವುದು. ಉದಾಹರಣೆಗೆ, ಸಿಖ್ ನರಮೇಧದ ಪ್ರಕರಣ. ಅದು ನಡೆದು 25 ವರ್ಷಗಳಾಗುತ್ತ ಬಂದರೂ ಇನ್ನೂ ಯಾವುದೇ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಕಾಂಗ್ರೆಸ್ಸಿನ ನಾಯಕರಾದ ಸಜ್ಜನ್ ಕುಮಾರ್, ಜಗದೀಶ್ ಟೈಟ್ಲರ್ ಹಾಗೂ ಎಚ್.ಕೆ.ಎಲ್. ಭಗತ್ ಅದರ ಪ್ರಮುಖ ಆರೋಪಿಗಳು. ಈ ಪೈಕಿ ಭಗತ್ ಜೈಲು ಸೇರುವ ಮೊದಲೇ ಅಸುನೀಗಿದರು. ಉಳಿದ ಇಬ್ಬರ ತಲೆ ಕಾಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಈ ಕುರಿತ ಸಾರ್ವಜನಿಕ ಅಸಮಾಧಾನ 25 ವರ್ಷವಾದರೂ ಅಳಿದಿಲ್ಲ ಎಂಬುದಕ್ಕೆ ಪ್ರಸ್ತುತ ಪ್ರಕರಣವೇ ಸಾಕ್ಷಿ.

ಸಾಂದಭರ್ಿಕವಾಗಿ ಹೇಳುವುದಾದರೆ, ಕಲ್ಲು ಎಸೆಯುವುದು ಇಸ್ಲಾಮಿಕ್ `ಪ್ರತಿಭಟನೆ' ಹಾಗೂ `ಶಿಕ್ಷೆ'. ಮೆಕ್ಕಾಗೆ ಹೋದವರು ಅಲ್ಲಿ `ಸೈತಾನ್' ಪ್ರತಿಕೃತಿಯ ಮೇಲೆ ಕಲ್ಲೆಸೆದು ಬರುತ್ತಾರೆ. ವ್ಯಭಿಚಾರದ ಆರೋಪ ಹೊತ್ತ ಮಹಿಳೆಯರನ್ನು ಕಲ್ಲೆಸೆದು ಕೊಲ್ಲುವುದು ಶರಿಯಾ ಕಾನೂನಿನ ಒಂದು ಶಿಕ್ಷೆ. ಇನ್ನು ಶೂಗಳನ್ನು ಎಸೆಯುವ ವಿಷಯಕ್ಕೆ ಬಂದರೆ, ಶೂ-ಎಸೆತದ ರಾಷ್ಟ್ರೀಯ ಮಟ್ಟದ ಸ್ಪಧರ್ೆಯನ್ನು ಹಲವಾರು ವರ್ಷಗಳಿಂದ ನ್ಯೂಜಿಲ್ಯಾಂಡಿನಲ್ಲಿ ನಡೆಸಲಾಗುತ್ತಿದೆ! 2003ರಿಂದ ಈಚೆಗೆ ಪೂರ್ವ ಯೂರೋಪಿನ ದೇಶಗಳೂ ಇದರಲ್ಲಿ ಭಾಗಿಯಾದ ನಂತರ ಈಗ ಶೂ ಎಸೆಯುವ ಅಂತಾರಾಷ್ಟೀಯ ಚಾಂಪಿಯನ್ಶಿಪ್ ಸ್ಪಧರ್ೆಗಳನ್ನು ನಡೆಸಲಾಗುತ್ತಿದೆ!!

ಗುರುವಾರ, ಏಪ್ರಿಲ್ 09, 2009

ಭಾರತದ ಬಾಗಿಲಿಗೇ ಬಂತು ತಾಲಿಬಾನ್

ನಮ್ಮ ದೇಶದ `ಜಾತ್ಯತೀತ' ಮುಖಂಡರು ತಮ್ಮ ವೈಚಾರಿಕ ಎದುರಾಳಿಗಳ ತಲೆಯ ಮೇಲೆ `ತಾಲಿಬಾನೀಕರಣ'ದ ಗೂಬೆ ಕೂರಿಸುವುದರಲ್ಲೇ ಕಾಲ ಕಳೆಯುತಿರುವ ಸಮಯದಲ್ಲಿ ನಿಜವಾದ ತಾಲಿಬಾನ್ ಭಾರತದ ಬಾಗಿಲಿಗೇ ಬಂದು ನಿಂತಿದೆ!

ತಾಲಿಬಾನ್ ನಿಗ್ರಹದಲ್ಲಿ ಪಾಕಿಸ್ತಾನ ತೋರುತ್ತಿರುವ ಅಸಹಕಾರ ಮತ್ತು ಅಮೆರಿಕ ಕಾಣುತ್ತಿರುವ ವೈಫಲ್ಯ - ಇವುಗಳ ದೆಸೆಯಿಂದಾಗಿ ತಾಲಿಬಾನ್ ಪೂರ್ವದಿಕ್ಕಿನತ್ತ ವಕ್ಕರಿಸಿಕೊಳ್ಳುತ್ತಿದೆ.

ಜಾಜರ್್ ಬುಷ್ರ ಆಫ್ಘನ್ ನೀತಿಯನ್ನು ಟೀಕೆ ಮಾಡುತ್ತಲೇ ಅಮೆರಿಕದ ಅಧ್ಯಕ್ಷ ಪದವಿಗೇರಿದ ಬರಾಕ್ ಒಬಾಮಾ ತಾಲಿಬಾನ್ ಜೊತೆಗಿನ ಸಮರದಲ್ಲಿ ಹೈರಾಣಾಗಿರುವಂತೆ ಕಾಣುತ್ತಿದೆ. ಈಗ ಅವರು `ತಾಲಿಬಾನ್ ಒಳಗಿನ ಅತೃಪ್ತ ಮೃದುವಾದಿಗಳೊಡನೆ ಮಾತನಾಡುತ್ತೇನೆ' ಎಂಬ ಹೊಸ ವರಸೆ ತೆಗೆದಿದ್ದಾರೆ.

ತಾಲಿಬಾನ್ನಲ್ಲಿ `ಒಳ್ಳೆಯ ತಾಲಿಬಾನ್' ಮತ್ತು ಕೆಟ್ಟ ತಾಲಿಬಾನ್' ಎಂಬ ವಗರ್ೀಕರಣ ಸಾಧ್ಯವೆ? ಅದರಲ್ಲೂ ತಾಲಿಬಾನ್ ಅನ್ನು ಯಾರಾದರೂ ನಂಬಬಹುದೆ? ಅದು ಡಬಲ್ ಗೇಮ್ ಆಡುವುದಿಲ್ಲ ಎಂದು ಏನು ಖಾತ್ರಿ? ಪಾಕ್ ನೆಲದಲ್ಲಿ ಒಂದೆರಡು ಸುತ್ತು ದಾಳಿ ನಡೆಸಿದ್ದಕ್ಕೇ ಒಬಾಮಾಗೆ ಸುಸ್ತು, ಹತಾಶೆ ಆವರಿಸಿತೆ?

ಒಬಾಮಾ ಈಗ ಹಳೆಯ ಗೊಂದಲಮಯ ನೀತಿಗೆ ಶರಣಾಗಿರುವಂತಿದೆ. ಅಮೆರಿಕದ ಹಳೆಯ `ಕಂಟೇನ್ಮೆಂಟ್' ನೀತಿ ಮತ್ತೆ ಚಿಗುರುತ್ತಿದೆ. ಭಯೋತ್ಪಾದಕರನ್ನು ಸಂಪೂರ್ಣವಾಗಿ ನಿಗ್ರಹ ಮಾಡಲು ಆಗದಿದ್ದಾಗ ಅವರ ಕಾರ್ಯಕ್ಷೇತ್ರ ಬೇರೆಲ್ಲೋ ಇರುವಂತೆ ನೋಡಿಕೊಳ್ಳುವ ನೀತಿ ಇದು. ಅಂದರೆ, `ಎಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ. ನಮ್ಮ ನೇರ ಹಿತಾಸಕ್ತಿಗಳ ತಂಟೆಗೆ ಮಾತ್ರ ಬರಬೇಡಿ' ಎಂಬ ಸೂತ್ರ ಇದು. ಇದನ್ನು ಅಮೆರಿಕ ಲಾಗಾಯ್ತಿನಿಂದಲೂ ಅನುಸರಿಸಿಕೊಂಡು ಬಂದಿದೆ. ಅಲ್-ಖೈದಾ ಅಮೆರಿಕದ ಗುರಿಗಳಿಗೆ ಹೊಡೆಯುವ ತನಕ ಅಮೆರಿಕ ಖೈದಾ ಕುರಿತು ತಣ್ಣಗಿತ್ತು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿಜೃಂಭಿಸುತ್ತಿದ್ದಾಗ ಯಾರೂ ಯುದ್ಧದ ಮಾತನಾಡಲಿಲ್ಲ. ಅಮೆರಿಕದ ನೆಲ ಹಾಗೂ ಹಿತಾಸಕ್ತಿಗಳಿಗೆ ಧಕ್ಕೆಯಾದಾಗ ಮಾತ್ರವೇ ಅದು `ಯುದ್ಧ'ಕ್ಕೆ ಧುಮುಕಿದ್ದು.

ಆಪ್ಘನ್ ಯುದ್ಧ ಆರಂಭಿಸುವಾಗ `ಒಳ್ಳೆಯ ಭಯೋತ್ಪಾದಕರು ಹಾಗೂ ಕೆಟ್ಟ ಭಯೋತ್ಪಾದಕರು ಎಂಬ ವ್ಯತ್ಯಾಸವಿಲ್ಲ. ಎಲ್ಲ ಭಯೋತ್ಪಾದಕರೂ ಕೆಟ್ಟವರೇ' ಎಂದು ಬುಷ್ ಹೇಳಿಕೆ ನೀಡಿದ್ದರು. ಈಗ ಅದೇ ತಾಲಿಬಾನ್ ಹಾಗೂ ಅಲ್-ಖೈದಾಗಳು ಪಾಕಿಸ್ತಾನದಲ್ಲಿ ರಾಜಾಶ್ರಯ ಪಡೆದಿವೆ. ಪಾಕ್ ಮಿಲಿಟರಿ, ಐಎಸ್ಐ ಇವುಗಳ ಪರವಾಗಿ ಕೆಲಸ ಮಾಡುತ್ತಿವೆ. ಅಲ್ಲಿನ ಚುನಾಯಿತ ಸಕರ್ಾರ ಅಮೆರಿಕಕ್ಕೆ `ಸಹಕಾರ' ನೀಡುವ ನಾಟಕವಾಡುತ್ತಿದೆ. ಆದರೆ ಅಮೆರಿಕದ ಹಿನ್ನಡೆಯನ್ನು ಕಂಡು ಒಳಗೊಳಗೇ ನಗುವ ರಾಜಕಾರಣಿಗಳೇ ಪಾಕಿಸ್ತಾನದಲ್ಲಿ ಹೆಚ್ಚು. ಇದು ಅಮೆರಿಕಕ್ಕೂ ಗೊತ್ತು. ಆದರೆ ಅದು ಹೆಚ್ಚೇನೂ ಮಾಡಲಾರದ ಪರಿಸ್ಥಿತಿಯಲ್ಲಿದೆ. ಒಬಾಮಾಗೆ ಸರಿಯಾದ ದಿಕ್ಕು ತೋಚುತ್ತಿಲ್ಲ. ಹೀಗಿರುವಾಗ ಅವರಿಗೆ ಹೊಳೆದಿರುವುದು ತಾತ್ಕಾಲಿಕ ಸಂಧಾನ, ಕೂಟನೀತಿಯ ಮಾರ್ಗಗಳು.

ತಾಲಿಬಾನ್ ಒಳಗೆ ಮುಲ್ಲಾ ಉಮರ್ ಕುರಿತು ಅಸಮಾಧಾನ ಹೊಂದಿರುವ ಶಕ್ತಿಗಳನ್ನು ಗುರುತಿಸಿ ಮಾತನಾಡಬೇಕು ಎಂದು ಒಬಾಮಾ ಹೇಳುತ್ತಾರೆ. ಆದರೆ ಇಂತಹ ಶಕ್ತಿಗಳನ್ನು ಗುರುತಿಸುವುದು ಹೇಗೆ? ಸ್ವತಃ ತಾಲಿಬಾನ್ ನೇತಾರರೇ ಕೆಲವರನ್ನು `ಅತೃಪ್ತರು' ಎಂದು ಬಿಂಬಿಸಿ ರಹಸ್ಯವಾಗಿ ಅಮೆರಿಕದೊಡನೆ ಮಾತುಕತೆಗೆ ಕಳುಹಿಸುವ ಅಪಾಯವೂ ಇದೆ. ಈ ವಿಷಯ ಅಮೆರಿಕಕ್ಕೆ ಗೊತ್ತಿಲ್ಲವೆ?

ಅನರಿಕಕ್ಕೆ ಗೊತ್ತಿದೆ. ಹಾಗಿದ್ದರೂ ಅದು ಮತ್ತೊಂದು ತಾತ್ಕಾಲಿಕ ಕಂಟೇನ್ಮೆಂಟ್ ಪ್ರಯತ್ನಕ್ಕೆ ಮುಂದಾಗಿರಬಹುದು ಎನಿಸುತ್ತದೆ. ಇದರಿಂದ ಅಮೆರಿಕಕ್ಕೆ ಮತ್ತು ತಾಲಿಬಾನ್-ಖೈದಾಗಳಿಗೆ ಸ್ವಲ್ಪ ಸಮಯಾವಕಾಶ ಸಿಗುತ್ತದೆ. ಎಲ್ಲರೂ ತಮ್ಮ ಮುಂದಿನ ರಣತಂತ್ರ ರೂಪಿಸಲು ಈ ಸಮಯವನ್ನು ಬಳಸಿಕೊಳ್ಳುತ್ತಾರೆ. ಈ ಮಧ್ಯದ ಅವಧಿಯಲ್ಲಿ, ಕದನವಿರಾಮ ಇರುತ್ತದಲ್ಲ, ಆಗ, ಏನಾಗಬಹುದು ಎಂಬುದೇ ನಮ್ಮ ಆತಂಕ. ಒಂದು ವಾಸ್ತವವನ್ನು ಹೇಳುತ್ತೇನೆ. ಅಮೆರಿಕ ತಾಲಿಬಾನ್ ಜೊತೆ `ಮಾತನಾಡಲು' ಶುರು ಮಾಡಿದರೆ ಅದರ ನೇರ ದುಷ್ಪರಿಣಾಮ ಆಗುವುದು ಭಾರತಕ್ಕೆ. ಇದು ಅಮೆರಿಕ್ಕೂ ಗೊತ್ತು. ಭಾರತ ಸಕರ್ಾರಕ್ಕೂ ಗೊತ್ತು. ಅಮೆರಿಕಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಒಂದು `ವೀರ-ಕದನವಿರಾಮ' ಬೇಕಾಗಿದೆ.

ಪಾಕಿಸ್ತಾನ ಸೃಷ್ಟಿಯಾದ ಕ್ಷಣದಿಂದ ಮಗ್ಗುಲಲ್ಲಿ ಕೆಂಡ ಕಟ್ಟಿಕೊಂಡ ಪರಿಸ್ಥಿತಿ ಭಾರತದ್ದು. ಈಗ ತಾಲಿಬಾನ್-ಖೈದಾಗಳು ಪಾಕಿಸ್ತಾನಕ್ಕೆ ತಮ್ಮ ನೆಲೆ ಬದಲಿಸಿವೆ. ಅವು ಪೇಷಾವರ್ಬಿಂದ ಪೂರ್ವದಲ್ಲಿ ಏನು ಮಾಡಿಕೊಂಡರೂ ಅಮೆರಿಕ ಹೆಚ್ಚು ತಲೆ ಕೆಡೆಸಿಕೊಳ್ಳುವುದಿಲ್ಲ. ಅಫ್ಘಾನಿಸ್ತಾನದ ತಂಟೆಗೆ ಮಾತ್ರ ಅವು ಬರಕೂಡದು. ಈ ರೀತಿಯ ಅನಧಿಕೃತ ಹೊಂದಾಣಿಕೆ ಏನಾದರೂ ಅಮೆರಿಕ ಮತ್ತು ತಾಲಿಬಾನ್ ನಡುವೆ ಏರ್ಪಟ್ಟರೆ ಭಾರತಕ್ಕೆ ಆ ಬೆಳವಣಿಗೆ ಆತಂಕಕಾರಿಯಾಗುತ್ತದೆ. ಅ ರೀತಿಯ ಹೊಂದಾಣಿಕೆ ಏರ್ಪಡದೇ ಇರುವುದರಲ್ಲಿಯೇ ಭಾರತದ ಹಿತಾಸಕ್ತಿ ಅಡಗಿದೆ.

ಈಗಾಗಲೇ ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಸಕರ್ಾರ ನೆಲೆಗೊಂಡಿದೆ. ಇದು ಭಾರತ ಪಾಲಿಗೆ ಅಪಾಯದ ಮುನ್ಸೂಚನೆ.

ವಾಸ್ತವವಾಗಿ ಈ ಸ್ವಾತ್ ಎನ್ನುವುದು ಹಳೆಯ ಸುವಸ್ತು. ಇದೇ ಹೆಸರಿನ ನದಿ ಹಾಗೂ ಪ್ರದೇಶದ ವರ್ಣನೆ ಋಗ್ವೇದಲ್ಲಿಯೇ ಸಿಗುತ್ತದೆ. 2000 ವರ್ಷಗಳಿಂದ ಇಲ್ಲಿ ಜನವಸತಿ ಇದೆ. ಇಲ್ಲಿ ಅಲೆಕ್ಸಾಂಡರ್ ಭಾರತೀಯರೊಡನೆ ಕಾದಾಡಿದ್ದ. ನಂತರ ಇದು ಮೌರ್ಯ ಸಾಮ್ರಾಜ್ಯದ ಆಡಳಿತಕ್ಕೆ ಸೇರ್ಪಡೆಯಾಯಿತು. ತದನಂತರ ಈ ಸ್ಥಳದ ಶಾಂತಿ, ಸೌಂದರ್ಯಗಳು ಬೌದ್ಧ ಮತ್ತು ಕುಶಾನರನ್ನು ಆಕಷರ್ಿಸಿತು. ವಜ್ರಯಾನ ಬೌದ್ಧ ಮತ ಜನ್ಮ ತಳೆದದ್ದು ಈ ಸ್ಥಳದಲ್ಲಿಯೇ ಎಂಬ ಅಭಿಪ್ರಾಯವೂ ಇದೆ. ಆಗ ಇದನ್ನು `ಉದ್ಯಾನ' ಅಂತಲೂ ಕರೆಯುತ್ತಿದ್ದರು. ಅನಂತರ ಹಿಂದೂ ಶಾಹಿ ರಾಜರು ಆಳಿದ ಸ್ಥಳ ಇದು. ಸಂಸ್ಕೃತ ಇಲ್ಲಿನ ಆಡಳಿತ ಭಾಷೆಯಾಗಿತ್ತು. ಕ್ರಮೇಣ ಮಹಮ್ಮದ್ ಘಜ್ನಿಯ ಆಕ್ರಮಣಕ್ಕೆ ಸಿಲುಕಿ ಇಲ್ಲಿನ ಸಾವಿರಾರು ಹಿಂದೂ-ಬೌದ್ಧ ಮಂದಿರಗಳು ನಾಶವಾದವು. ಇವೆಲ್ಲ ಇತಿಹಾಸ.

ದೇಶ ವಿಭಜನೆಯ ನಂತರ ಸ್ವಾತ್ ಪಾಕ್ ವಶಕ್ಕೆ ಹೋಯಿತು. ಈಗ ಅಲ್ಲಿ ಪಾಕಿಸ್ತಾನ ಸಕರ್ಾರದ ಆಡಳಿತವೂ ಹೋಗಿ ತಾಲಿಬಾನ್ ಆಡಳಿತ ಬಂದಿದೆ. ಶರಿಯಾ ಮತೀಯ ಕಟ್ಟಳೆಗಳನ್ನು ಸ್ವಾತ್ನಲ್ಲಿ ಸಂಪೂರ್ಣವಾಗಿ ಅನ್ವಯಿಸಲಾಗಿದೆ. ಏಳು ಖಾಜಿ ನ್ಯಾಯಾಲಯಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ. ಮನೆಯೊಳಗೇ ಇರುವಂತೆ ಮಹಿಳೆಯರಿಗೆ ಕಟ್ಟಾಜ್ಞೆ ನೀಡಲಾಗಿದೆ (`ಬೇಗಂ ಕೀ ಜಗಾಹ್ ಘರ್ ಪೇ ಹೈ' - ಎಂಬುದು ಇಸ್ಲಾಮಿಕ್ ಚಿಂತನೆ) ಇವೆಲ್ಲ ಪಾಕ್ ಮಿಲಿಟರಿಯ ಮೂಗಿನ ನೇರದಲ್ಲೇ ನಡೆಯುತ್ತಿದೆ.

ಸ್ವಾತ್ ಜಿಲ್ಲೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೊಂದಿಕೊಂಡಿದೆ. ಇಸ್ಲಾಮಾಬಾದಿನಿಂದ ಕೇವಲ 160 ಕಿ.ಮೀ. ದೂರ. ಬೆಂಗಳೂರಿಗೂ ಶಿವಮೊಗ್ಗಕ್ಕೂ ಎಷ್ಟು ದೂರವೋ ಭಾರತದ ಒಳಭೂಮಿಗೂ ಸ್ವಾತ್ ಕಣಿವೆಗೂ ಅಷ್ಟೇ ದೂರ. ಸ್ವಾತ್ನಲ್ಲಿ ತಾಲಿಬಾನಿಗಳು ನೆಲೆಗೊಂಡರು ಎಂದರೆ ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಅವರು ಬಂದರು ಎಂದೇ ಅರ್ಥ. ಇನ್ನು ನಿಯಂತ್ರಣ ರೇಖೆಯಲ್ಲೂ ಅವರ ಉಪಟಳ ಆರಂಭವಾಗುವ ದಿನ ಬಹಳ ದೂರವೇನಿಲ್ಲ. ಅವರ ಧೈರ್ಯದಿಂದಲೇ ಈಗಾಗಲೇ ಮಾಜಿ ಜನರಲ್ ಪವರ್ೇಜ್ ಮುಷರ್ರಫ್, ಹಾಲಿ ಜನರಲ್ ಪವರ್ೇಜ್ ಕಯಾನಿ ಮತ್ತು ಇತರ ಪಾಕ್ ಮಿಲಿಟರಿ ನೇತಾರರು `ಇನ್ನೊಂದು ಕಾಗರ್ಿಲ್ ಉಂಟಾದೀತು' ಎಂದು ಧಮಕಿ ಹಾಕಲು ಆರಂಭಿಸಿದ್ದಾರೆ.

ನಮ್ಮ ಜಮ್ಮು ಮತ್ತು ಕಾಶ್ಮೀರದ ಕೆಲವು ರಾಜಕಾರಣಿಗಳಿಗೆ ತಾಲಿಬಾನ್ ಜೊತೆ ನಂಟಿರುವುದು ಗುಟ್ಟೇನಲ್ಲ. ಕಾಶ್ಮೀರದ ಇಸ್ಲಾಮೀಕರಣ ಎಂದೋ ಆರಂಭವಾಗಿದೆ. ರಾಜ್ಯದ ಸುಮಾರು 700-800 ಪ್ರಾಚೀನ ಸ್ಥಳಗಳ ಹಳೆಯ ಹೆಸರುಗಳನ್ನು ತೆಗೆದುಹಾಕಿ ಇಸ್ಲಾಮೀ ಮತೀಯ ಹೆಸರುಗಳನ್ನು ಇಡಲಾಗಿದೆ. ಈಗ ಕಾಶ್ಮೀರದ ಪ್ರಾಚೀನ ಹಿಂದೂ ಪವಿತ್ರ ತೀರ್ಥಸ್ಥಳವಾದ `ಅನಂತನಾಗ'ದ ಹೆಸರನ್ನು `ಇಸ್ಲಾಮಾಬಾದ್' ಎಂದು ಬದಲಿಸುವ ಪ್ರಯತ್ನಗಳು ಆರಂಭವಾಗಿವೆ. ಮುಫ್ತಿ ಮುಹಮ್ಮದ್ ಸಯೀದರ ಪಿಡಿಪಿ ಪಕ್ಷದ ಶಾಸಕ ಪೀರ್ಜಾದಾ ಮನ್ಜೂರ್ ಹುಸೇನ್ ಈ ಕುರಿತು ಈಚೆಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿರುವುದಾಗಿ ವರದಿಯಾಗಿದೆ.

ಈಗ ತಾಲಿಬಾನ್ ಮಗ್ಗುಲಿಗೆ ಬಂದ ನಂತರ ಕಾಶ್ಮೀರದ ತಾಲಿಬಾನೀಕರಣ ಪ್ರಕ್ರಿಯೆ ತೀವ್ರತೆ ಪಡೆದುಕೊಳ್ಳುವುದನ್ನು ನಿರೀಕ್ಷಿಸಬಹುದು. ಭಾರತದ ಇತರ ಸ್ಥಳಗಳಲ್ಲಿಯೂ ತಾಲಿಬಾನ್ ಅಟ್ಟಹಾಸ ನಿರೀಕ್ಷಿಸಬಹುದು. ಇಸ್ಲಾಮೀ ತೀವ್ರವಾದಿ ಚಟುವಟಿಕೆಗಳಿಗೆ ಹೊಸ ಗೊಬ್ಬರ, ನೀರು ಸಿಗುವುದನ್ನು ನಿರೀಕ್ಷಿಸಬಹುದು.

ಇದನ್ನು ತಡೆಯಲು ಭಾರತ ಏನು ಮಾಡಬಹುದು? ಪಾಕಿಸ್ತಾನದ ಸಕರ್ಾರ ಅಮೆರಿಕ್ಕೆ ಸಹಕಾರ ನೀಡದಿದ್ದರೂ ಹಲವು ಮುಲಾಜುಗಳಿಗೆ ತುತ್ತಾಗಿ ಅಮೆರಿಕದ ಸೈನಿಕರನ್ನು ತನ್ನ ದೇಶದೊಳಗೆ ಬಿಟ್ಟುಕೊಂಡಿದೆ. ಆದರೆ ಭಾರತದ ಸೈನಿಕರಿಗೆ ಈ ಅವಕಾಶ ಸಿಗುವುದಿಲ್ಲ. ಅವರು ತಾಲಿಬಾನ್ ಅನ್ನು ಎದುರಿಸುವ ಮೊದಲು ಪಾಕಿಸ್ತಾನವನ್ನು ಎದುರಿಸಬೇಕಾಗುತ್ತದೆ. ಆ ಧೈರ್ಯ ನಮ್ಮನ್ನು ಆಳುವವರಿಗೆ ಇದೆಯೆ?

ಮಗ್ಗುಲಿನ ಕೆಂಡವಾಗಿರುವ ತಾಲಿಬಾನ್ ಅನ್ನು ಭಾರತ ನಿಯಂತ್ರಿಸುವುದು, ಹಿಮ್ಮೆಟ್ಟಿಸುವುದು ಹೇಗೆ? ಯುದ್ಧಭೂಮಿಯಲ್ಲಿ ಅಮೆರಿಕ ಇರುವವರೆಗೆ ಪರವಾಗಿಲ್ಲ. ಒಬಾಮಾ ಮನಸ್ಸು ಬದಲಾಯಿಸಿ ತಾಲಿಬಾನ್ ಜೊತೆಗಿನ ನೇರ ಯುದ್ಧದಲ್ಲೇ ಮುಂದುವರಿದರೆ ಪರವಾಗಿಲ್ಲ. ಒಂದು ವೇಳೆ ಅವರು ಕಂಟೇನ್ಮೆಂಟ್ ನೀತಿ ಜಾರಿಗೆ ತರುವಲ್ಲಿ ಯಶಸ್ವಿಯಾದರೆ?

ನಮ್ಮ ರಾಜಕಾರಣಿಗಳು ಈ ಕುರಿತು ಗಂಭಿರವಾಗಿ ಯೋಚಿಸುತ್ತಿದ್ದಾರೆಯೆ? ಪಬ್ ಜಪ ಮಾಡುವುದನ್ನು ಬಿಟ್ಟು ನಿಜವಾದ ತಾಲಿಬಾನ್ ಅನ್ನು ಎದುರಿಸಲು ಅವರು ಸಿದ್ಧರೆ?


ವಿದೇಶಗಳಲ್ಲಿ ಭಾರತದ ಕಪ್ಪು ಹಣ: ಸರ್ಕಾರದ ಮೌನ

ಭಾರತದ ರಾಜಕಾರಣಿಗಳು, ಉದ್ಯಮಿಗಳು ಮತ್ತು ಇತರೆ ಕಪ್ಪು ಹಣದ `ಕಪ್ಪು ಶ್ರೀಮಂತ'ರು ಸ್ವಿಸ್ ಬ್ಯಾಂಕುಗಳಲ್ಲಿ, ಇತರ ವಿದೇಶಿ ಬ್ಯಾಂಕುಗಳಲ್ಲಿ ಹಣ ಇಡುವುದು ಹೊಸದೇನಲ್ಲ. ಸ್ವಿಸ್ ಬ್ಯಾಂಕುಗಳಲ್ಲಿ ಹಣವಿಟ್ಟ ಜಗತ್ತಿನ ಎಲ್ಲ ಕಪ್ಪು ಶ್ರೀಮಂತರ ಪೈಕಿ ಮೊದಲ ಸ್ಥಾನದಲ್ಲಿರುವುದು ಬಡ ಭಾರತದ ಕಪ್ಪು ಶ್ರೀಮಂತರು! `ಸ್ವಿಸ್ ಬ್ಯಾಂಕಿಂಗ್ ಅಸೋಸಿಯೇಷನ್' 2006ರಲ್ಲಿ ನೀಡಿದ ವರದಿಯ ಪ್ರಕಾರ ಸ್ವಿಸ್ ಬ್ಯಾಂಕುಗಳಲ್ಲಿರುವ ಕಪ್ಪು ಹಣದ ಭಾರತೀಯರ ಒಟ್ಟು ಹಣ 1456 ಶತಕೋಟಿ ಡಾಲರ್! ಅಂದರೆ ನಮ್ಮ ರಾಷ್ಟ್ರದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಸಮನಾದಷ್ಟು ಹಣ! ಅಂದರೆ ಸುಮಾರು 70,000 ಶತಕೋಟಿ ರೂಪಾಯಿಗಳು!!

ಆದರೂ ನಮ್ಮ ಸಕರ್ಾರ ಏಕೆ ಕಪ್ಪು ಹಣದ ವಿವರ ತರಿಸುವುದಿಲ್ಲ? ಎಲ್ಲ ಕಪ್ಪು ಶ್ರೀಮಂತರ ಬಳಿ ಲೆಕ್ಕ ಕೇಳುವುದಿಲ್ಲ? ಏಕೆ ಕಪ್ಪು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ? ಏಕೆಂದರೆ ವಿದೇಶಿ ಬ್ಯಾಂಕುಗಳಲ್ಲಿರುವವರ ಹಣದಲ್ಲಿ ಬಹುಪಾಲು ಸ್ವತಂತ್ರ ಭಾರತದ `ಸ್ವತಂತ್ರ' ರಾಜಕಾರಣಿಗಳದು! ಗಾಜಿನ ಮನೆಯಲ್ಲಿರುವವರು ಎಂದಿಗೂ ಪಕ್ಕದ ಮನೆಯ ಮೇಲೆ ಕಲ್ಲೆಸೆಯುವುದು ಸಾಧ್ಯವಿಲ್ಲ.

ನಮ್ಮ ಪ್ರಧಾನಿ ಒಬ್ಬ ಅರ್ಥಶಾಸ್ತ್ರಜ್ಞ. `ಬ್ಲ್ಯಾಕ್ ಎಕಾನಮಿ'ಯ ದುಷ್ಪರಿಣಾಮಗಳನ್ನು ಕುರಿತು ಓದಿದವರು, ಬೋಧಿಸಿದವೆರು. ಆದರೆ ಅವರು ಮಾಡಿದ್ದೇನು? ಮುಂದೆ ಓದಿ.

ಆಸ್ಟ್ರಿಯಾ ಹಾಗೂ ಸ್ವಿಡ್ಜರ್ಲ್ಯಾಂಡಿನ ಮಧ್ಯೆ ಇರುವ ಚಿಕ್ಕ ಗುಡ್ಡಗಾಡು ದೇಶದ ಹೆಸರು ಲೀಚ್ಟೆನ್ಸ್ಟೈನ್. ಮಧ್ಯಮವರ್ಗದ ಜನರು ಸಾಮಾನ್ಯವಾಗಿ ಈ ದೇಶದ ಹೆಸರನ್ನೇ ಕೇಳಿರುವುದಿಲ್ಲ. ಆದರೆ ಜಗತ್ತಿನ ಕಪ್ಪು ಶ್ರೀಮಂತರಿಗೆಲ್ಲ ಈ ದೇಶ ಸುಪರಿಚಿತ. ಇಲ್ಲಿ ನೂರಾರು ಭಾರತೀಯ ಕಪ್ಪು ಶ್ರೀಮಂತರು ಹಣ ಇಟ್ಟಿದ್ದಾರೆ. ಈಚೆಗೆ ಜರ್ಮನಿಯ ಸಕರ್ಾರ ಲೀಚ್ಟೆನ್ಸ್ಟೈನ್ ದೇಶದ ಎಲ್ಟಿಜಿ ಬ್ಯಾಂಕಿನಲ್ಲಿ ಜಗತ್ತಿನ ಯಾವ ಯಾವ ದೇಶದ ಕಪ್ಪು ಧನಿಕರು ಎಷ್ಟೆಷ್ಡು ಹಣ ಇಟ್ಟಿದ್ದಾರೆ ಎಂಬ ಪಟ್ಟಿಯನ್ನು ತರಿಸಿಕೊಂಡಿತು. `ನಮ್ಮ ಬಳಿ ಇಂತಹ ಪಟ್ಟಿ ಇದೆ. ಅದರಲ್ಲಿ ನಿಮ್ಮ ದೇಶದ ಖಾತೆದಾರರ ಬಗ್ಗೆಯೂ ಮಾಹಿತಿ ಇದೆ. ನೀವು ಅಧಿಕೃತವಾಗಿ ಕೇಳಿದರೆ ನಿಮಗೆ ಈ ಮಾಹಿತಿ ನೀಡುತ್ತೇವೆ' ಎಂದು ಜರ್ಮನ್ ಸಕರ್ಾರ ಅನೇಕ ದೇಶಗಳ ಸಕರ್ಾರಕ್ಕೆ ಸಂದೇಶ ಕಳುಹಿಸಿತು. ಭಾರತಕ್ಕೂ ಸಂದೇಶ ಬಂತು. ಅಮೆರಿಕ, ಬ್ರಿಟನ್, ಕೆನಡಾ, ಇಟಲಿ, ಸ್ವೀಡನ್, ನಾವರ್ೆ, ಫಿನ್ಲ್ಯಾಂಡ್, ಐರ್ಲ್ಯಾಂಡ್ ಮೊದಲಾದ ದೇಶಗಳು ಜರ್ಮನ್ ಸಂದೇಶಕ್ಕೆ ಪ್ರತಿಕ್ರಿಯಿಸಿದವು. ಮಾಹಿತಿ ಕೇಳಿ ತಮ್ಮ ದೇಶದ ಕಪ್ಪು ಶ್ರೀಮಂತರ ಹಣಕಾಸು ವ್ಯವಹಾರ ಕುರಿತ ಮಾಹಿತಿ ತರಿಸಿಕೊಂಡವು.

ಭಾರತ ಏನು ಮಾಡಿತು ಎಂಬ ಕಥೆ ಹೇಳುವ ಅಗತ್ಯವಿದೆಯೆ? `ಖಂಡಿತವಾಗಿಯೂ ಇದೆ, ಮುಂದೇನಾಯಿತು ಎಂದು ಊಹಿಸುವುದು ನಮ್ಮಿಂದ ಸಾಧ್ಯವಿಲ'್ಲ ಎನ್ನುವಿರಾದರೆ, ಕೇಳಿ. ಜರ್ಮನ್ ಸಕರ್ಾರಕ್ಕೆ ಯಾವ ಉತ್ತರವನ್ನೂ ಬರೆಯುವ ಗೋಜಿಗೆ ಭಾರತ ಹೋಗಿಲ್ಲ. ನಮ್ಮ ಅರ್ಥಶಾಸ್ರ್ತಜ್ಞ ಪ್ರಧಾನಿ ಬಹಳ ಬ್ಯುಸಿಯಾಗಿದ್ದಾರೆ (ಯಾವುದರಲ್ಲಿ ಎಂಬುದು ಮಾತ್ರ ಗೊತ್ತಿಲ್ಲ). ಅವರಿಗೆ ಇದಕ್ಕೆಲ್ಲ ಉತ್ತರ ಕೊಡುವಷ್ಟು ಪುರಸೊತ್ತಿಲ್ಲ. ಒಂದಿಷ್ಟು ಪುಸ್ತಕಗಳನ್ನು ಓದಲೂ ಪುರಸೊತ್ತಿಲ್ಲವಂತೆ. ಆದರೆ ಅವರ ಕಚೇರಿಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಜನಪಥದ ಹತ್ತನೇ ನಂಬರ್ ಮನೆಯನ್ನು ಕಾಯುತ್ತಿದ್ದಾರೆಯೆ?

ಈ ಹಣದ ಬಹುಪಾಲು ನಮ್ಮ ರಾಜಕಾರಣಿಗಳದು ಮತ್ತು ಅವರ ಗೆಳೆಯರದು ಎಂಬ ಸಂಶಯ ಮೂಡುವುದಿಲ್ಲವೆ? ಸ್ವಿಡ್ಜರ್ಲ್ಯಾಂಡ್, ಸೇಂ. ಕಿಟ್ಸ್, ಕ್ಯಾನರಿ ಐಲ್ಯಾಂಡ್ಸ್, ಆಂಟಿಗುವಾ, ಬಹಾಮಾಸ್, ಲೀಚ್ಟೆನ್ಸ್ಟೈನ್ - ಇವೆಲ್ಲ ನಮ್ಮ ಕಪ್ಪು ಶ್ರೀಮಂತರು ಆಗಾಗ್ಗೆ ರಜೆ ಕಳೆಯುವ ಸ್ವರ್ಗಗಳು. ಅಷ್ಟು ಮಾತ್ರವಲ್ಲ ಅವರ ಕಪ್ಪು ನಿಧಿಯನ್ನು ಕಾಯುತ್ತಿರುವ ಕುಪ್ರಸಿದ್ಧ ಬ್ಯಾಂಕಿಂಗ್ ತಾಣಗಳು. ಡ್ರಗ್ಸ್, ಟೆರರಿಸಂ, ಬ್ಲ್ಯಾಕ್ ಬಿಸಿನೆಸ್ -ಇವುಗಳಿಗೆಲ್ಲ ಹಣದ ಹೊಳೆ ಹರಿಯುವುದು ಇಲ್ಲಿನ ಬ್ಯಾಂಕ್ ಖಾತೆಗಳಿಂದಲೇ.

ಮಂಗಳವಾರ, ಮಾರ್ಚ್ 31, 2009

ಕನ್ನಡಕ್ಕೆ ಯುವ ಸಾಹಿತಿಗಳ ಬರ!

ಭಾರತೀಯ ಭಾಷೆಗಳಿಗೆ ಯುವ ಸಾಹಿತಿಗಳ ಬರ ಬಂದಿದೆ! ಇದನ್ನು ಓದಿ:

ಕಿರಣ್ ದೇಸಾಯಿ. 37 ವರ್ಷ. ಕಾದಂಬರಿಗಾತರ್ಿ. ಬ್ರಿಟನ್ನಿನ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿ ವಿಜೇತೆ! ಅರವಿಂದ್ ಅಡಿಗ. 35 ವರ್ಷ, ಅವನ ಮೊದಲ ಕಾದಂಬರಿಗೇ ಮ್ಯಾನ್ ಬುಕರ್! ಝುಂಫಾ ಲಾಹಿರಿ. 36 ವರ್ಷ. ಕಾದಂಬರಿ ಹಾಗೂ ಕಥೆಗಾತರ್ಿ. ಅಮೆರಿಕದ ಪ್ರತಿಷ್ಠಿತ ಪುಲಿಟ್ಜರ್ ಬಹುಮಾನ ವಿಜೇತೆ! ಅಶೊಕ್ ಬ್ಯಾಂಕರ್. 40 ವರ್ಷ. ಹಲವು ಕಾದಂಬರಿಗಳ ಜೊತೆಗೆ ಇಂಗ್ಲಿಷ್ನಲ್ಲಿ ರಾಮಾಯಣ ಸರಣಿ ಪುಸ್ತಕಗಳನ್ನು ಬರೆಯಲು ಮಿಲಿಯನ್ ಡಾಲರ್ ಆಫರ್!! ಚೇತನ್ ಭಗತ್. 34 ವರ್ಷ. ಅವನ ಮೂರು ಕಾದಂಬರಿಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಅಗ್ರಸ್ಥಾನ. ಇವರೆಲ್ಲ ಇಂಗ್ಲಿಷಿನಲ್ಲಿ ಬರೆಯುತ್ತಿರುವ ಸಮಕಾಲೀನ ಪ್ರತಿಭಾವಂತ ಭಾರತೀಯರು, ಭಾರತೀಯ ಮೂಲದವರು.

ಭಾರತೀಯ ಭಾಷೆಗಳ ಸಾಹಿತ್ಯದ ಗತಿ ಏನಾಗಿದೆ? ಕನ್ನಡದ ಸಂದರ್ಭದಲ್ಲಿ ದೃಷ್ಟಿ ಹರಿಸುವುದು ನನಗೆ ಹೆಚ್ಚು ಸುಲಭ. ಕನ್ನಡದ ಶ್ರೇಷ್ಠ ಕಾದಂಬರಿಕಾರನ್ನು ಹೆಸರಿಸಿ? ಎಂದರೆ ತಕ್ಷಣ ಕಾರಂತರು, ಭೈರಪ್ಪ ಇತ್ಯಾದಿ ನಾಲ್ಕಾರು ಹೆಸರು ತಕ್ಷಣ ಎಲ್ಲರ ನಾಲಿಗೆಯಲ್ಲಿ ನಲಿಯುತ್ತದೆ. ಕವಿಗಳ ಬಗ್ಗೆ ಕೇಳಿದರೆ ಬೇಂದ್ರೆ, ಕುವೆಂಪು, ಅಡಿಗರು, ನರಸಿಂಹ ಸ್ವಾಮಿ, ಹೀಗೆ ಕೆಲವು ಹೆಸರು ಹೇಳಬಹುದು. ಸಮಕಾಲೀನ ಹಾಗೂ `ಯುವ' ಶುದ್ಧ ಸಾಹಿತಿಗಳ ಬಗ್ಗೆ ಕೇಳಿದರೆ?

ಹೌದು, ನಮ್ಮಲ್ಲಿ ಶ್ರೇಷ್ಠತೆ ಹಾಗೂ ಶುದ್ಧತೆಯ ಭರವಸೆ ಮೂಡಿಸುವ ಯುವ ಸಾಹಿತಿಗಳು ಇದ್ದಾರೆಯೆ? ಇದ್ದರೆ ದಯವಿಟ್ಟು ತಿಳಿಸಿ. ನನಗಂತೂ ಅಂತಹ ಯಾರ ಬಗ್ಗೆಯೂ ಗೊತ್ತಿಲ್ಲ. ಸಾಹಿತ್ಯದ ಶ್ರೇಷ್ಠತೆಯ ಬಗ್ಗೆ ವಿಮಶರ್ೆ ಪಕ್ಕಕಿಡೋಣ. ಈವರೆಗೆ ಹೆಸರು ಮಾಡಿರುವ (ಹೇಗಾದರೂ ಸರಿ!) ಕನ್ನಡ ಸಾಹಿತಿಗಳಿಗೆಲ್ಲ ವಯಸ್ಸಾಗಿದೆ. ಕನಿಷ್ಠವೆಂದರೂ 55 ದಾಟಿದೆ. ಜನರು ಕೊಂಡು ಓದಲು ಹಾತೊರೆಯುವ ಸಾಹಿತಿಗಳಿಗಂತೂ ಬರವಿದ್ದೇ ಇದೆ. ಜೊತೆಗೆ ಈಗಂತೂ ಭರವಸೆ ಉಕ್ಕಿಸುವ ಯುವ ಸಾಹಿತಿಗಳ ಬರ ಕನ್ನಡವನ್ನು ಕಾಡುತ್ತಿದೆ!

``ಏಕೆ ಹೀಗಾಯಿತು? ನಿಮಗೇನನಿಸುತ್ತದೆ'' ಎಂದು ಈಚೆಗೆ ನಾನೊಬ್ಬ ಕನ್ನಡ ಸಾಹಿತಿಗಳನ್ನು ಕೇಳಿದೆ. ``ವಿವಿಧ ರಾಜಕೀಯ (ಅಂದರೆ ಸಾಹಿತ್ಯದ ಮೂಲಕ ರಾಜಕೀಯ ಸಿದ್ಧಾಂತ ಮುನ್ನಡೆಸುವ) ಚಳವಳಿಗಳು ಜನರನ್ನು ತಪ್ಪುದಾರಿಗೆ ಎಳೆದಿವೆ. ವಾಸ್ತವ ರಾಜಕೀಯದ ಪ್ರಭಾವವೇ ಜಾಸ್ತಿಯಾಗಿ ಸೃಜನಶಕ್ತಿ ನಶಿಶಿದೆ. ಇದು ಸರಿಯಾಗಬೇಕಾದರೆ ಇನ್ನೂ ಕನಿಷ್ಠ 30 ವರ್ಷಗಳಾದರೂ ಬೇಕು. ಆಗ ಹೊಸ ಪ್ರತಿಭಾವಂತ, ಸ್ವತಂತ್ರ ಮನೋಭಾವದ ಕನ್ನಡಿಗ ಪೀಳಿಗೆ ಉದಿಸುತ್ತದೆ'' ಎಂದರು.

ಈ ಮಾತು ಎಷ್ಟು ನಿಜ! ನವ್ಯ, ನವ್ಯೋತ್ತರ, ಮಾಕ್ಸರ್್ವಾದಿ, ಬಂಡಾಯ, ದಲಿತ ಎಂದು ಜಾತಿ-ಮತ-ಸಿದ್ದಾಂತಗಳ ಹೆಸರಿನಲ್ಲಿ ಸಾಹಿತ್ಯ ಚಳವಳಿ ಮಾಡುತ್ತೇವೆಂದು ಹೊರಟವರು ಒಂದು ಇಡೀ ಪೀಳಿಗೆಯನ್ನೇ ದಾರಿತಪ್ಪಿಸಿದ್ದಾರೆ. ಒಂದು ಪೀಳಿಗೆಯ ಸೃಜನಶಕ್ತಿಯನ್ನೇ ನಾಶಮಾಡಿದ್ದಾರೆ. ತಾವೂ ಶ್ರೇಷ್ಠ ಸಾಧನೆ ಮಾಡದೇ ಇತರರನ್ನೂ ಹಾಳುಮಾಡಿದ್ದಾರೆ. ಡಿವಿಜಿ, ಬೇಂದ್ರೆ, ಕುವೆಂಪು, ಕಾರಂತ, ಮಾಸ್ತಿ, ಭೈರಪ್ಪ, ಅಡಿಗ ಹೀಗೆ ಅನೇಕರು ತಮ್ಮ ಮೂವತ್ತರ ಹರೆಯದಲ್ಲೇ ಭರವಸೆ ಹುಟ್ಟಿಸಿದ್ದರು. ಮುಂದೆ ಸಾಹಿತ್ಯ ಲೋಕ ಸಮೃದ್ಧವಾಗುತ್ತದೆ ಎನಿಸುವಂತೆ ಮಾಡಿದ್ದರು. ಹಳಬರಷ್ಟೇ ಅಥವಾ ಹಳಬರಿಗಿಂತ `ಮೌಲಿಕ' ಎನಿಸುವಂತೆ ಬರೆಯತೊಡಗಿದ್ದರು. ಈಗ ಭವಿಷ್ಯದ ಕಾರಂತ, ಅಡಿಗ, ಬೇಂದ್ರೆ, ಭೈರಪ್ಪ ಎಲ್ಲಿ? ಶುದ್ಧ ಸಾಹಿತ್ಯ ಎಲ್ಲಿ ಹೋಯಿತು?

ಈ ಸಮಸ್ಯೆಗೆ ನಮ್ಮ ರಾಜಕಾರಣಿಗಳೂ ಕಾರಣ. ಜಾಗತೀಕರಣ, ಉದ್ಯೋಗಾವಕಾಶಗಳು ಇಂಗ್ಲಿಷ್ ಅನ್ನು ಆಕರ್ಷಕ ಹಾಗೂ ಅನಿವಾರ್ಯವಾಗಿಸಿದವು ಎಂದು ನಾನಾ ಕಾರಣಗಳನ್ನು ಕೊಡಬಹುದು. ಆದರೆ ಕನ್ನಡ ತನ್ನ ಆಕರ್ಷಣೆ ಕಳೆದುಕೊಳ್ಳಬೇಕೆಂದೇನೂ ಇಲ್ಲ. ಹಾಗೆ ನೋಡಿದರೆ, ಮೇಲೆ ಹೆಸರಿಸಿದ ಕನ್ನಡ ಸಾಹಿತಿಗಳು ಇಂಗ್ಲಿಷ್ನಲ್ಲೇ ಶಿಕ್ಷಣ ಪಡೆದವರು. ಅದೂ ಬ್ರಿಟಿಷರ ಕಾಲದಲ್ಲಿ. ಆದರೆ ಅವರಿಗೆಲ್ಲ ಅತ್ಯುತ್ತಮ, ಸಂಸ್ಕಾರವಂತ, ಸುಸಂಸ್ಕೃತ ಕನ್ನಡ ಶಿಕ್ಷಕರ, ಶಿಕ್ಷಣದ ಭಾಗ್ಯ ಲಭಿಸಿತ್ತು. ಶಿಕ್ಷಣ ಕ್ಷೇತ್ರದಲ್ಲಿ ಯಾವಾಗ ರಾಜಕೀಯದ ಪ್ರವೇಶವಾಯಿತೋ ಆಗಲೇ ಸಮಸ್ಯೆಗಳು ಆರಂಭವಾದವು.

ಶಿಕ್ಷಕರ ಆಯ್ಕೆಯಲ್ಲಿ ಜಾತೀಯತೆ, ವಿದ್ಯಾಥರ್ಿ ವೇತನದಲ್ಲಿ ಜಾತಿಯತೆ, ಯೋಗ್ಯತೆಗೆ ಯಾವ ಬೆಲೆಯೂ ಇಲ್ಲ. ಹಿಂದೆ ತಮ್ಮ ಮನೆಯಲ್ಲಿ ಊಟಹಾಕಿಸಿ ವಿದ್ಯಾಥರ್ಿಗಳನ್ನು ಓದಿಸುವ ಸಕರ್ಾರಿ ಮೇಷ್ಟ್ರುಗಳಿದ್ದರು. ಈಗ ಶಾಲೆಯಲ್ಲಿ, ಪಠ್ಯಕ್ರಮದಲ್ಲಿ ಅನೇಕ ರಾಜಕೀಯ ಹೊಳಹುಗಳು. ಕನ್ನಡ ಬೋಧನೆಯಲ್ಲಿ (ಹಾಗೆಂದರೇನು? ಎನ್ನುವಂತಾಗಿದೆೆ) ನಿರಾಸಕ್ತಿ. ಬೋಧಕರಿಗೇ ಕನ್ನಡದ ಶುದ್ಧ ಉಚ್ಛಾರಣೆ ಬರದ ಸ್ಥಿತಿ.

ಒಂದು ಸ್ವತಂತ್ರ ಸಮೀಕ್ಷೆ ಪ್ರಕಾರ ಇಂದು ಭಾರತದ ಬಹುತೇಕ ಗ್ರಾಮಗಳಲ್ಲಿ ಸಕರ್ಾರೀ ಶಾಲಾ ಶಿಕ್ಷಕರೇ ರಾಜಕೀಯ ಪಕ್ಷಗಳ ಸ್ಥಳೀಯ ಏಜೆಂಟರು! ಪಕ್ಷಗಳ ಸಕ್ರಿಯ ಕಾರ್ಯಕರ್ತರಿಗೆ ಬೇಕೆಂದೇ ಶಿಕ್ಷಕ ಹುದ್ದೆ ದಯಪಾಲಿಸಲಾಗಿದೆ ಎಂದಿದೆ ಸಮೀಕ್ಷೆ. ಹೀಗಿರುವಾಗ ತಮ್ಮ ಮಕ್ಕಳಿಗೆ ತಕ್ಕ ಮಟ್ಟಿಗೆ ಬುದ್ದಿ, ಪ್ರತಿಭೆಗಳಿವೆ ಎಂದುಕೊಂಡ ಯಾರೇ ಆಗಲೀ (ನಮ್ಮ ರಾಜಕಾರಣಿಗಳೂ ಸಹ!) ಅವರನ್ನು ಇಂತಹ ಶಾಲೆಗಳಿಗೆ ಕಳಿಸುವುದಿಲ್ಲ.

ಮಕ್ಕಳ ಕೈಲಿ `ಅಲಿಸ್ ಇನ್ ದಿ ವಂಡರ್ಲ್ಯಾಂಡ್' ಅಥವಾ `ಹ್ಯಾರಿ ಪಾಟರ್..' ಓದಿಸುವ ಅನೇಕ `ಎಲೀಟ್' ಬಿರುದಾಂಕಿತ ಶಾಲೆಗಳಿವೆ. ಈ ಶಾಲೆಗಳ ಪುಟ್ಟ ಮಕ್ಕಳೂ `ಫೇರಿ ಟೇಲ್ಸ್' ಓದುತ್ತವೆ. ಅಮೆರಿಕದಲ್ಲಿ ಹಾಗೂ ಅನೇಕ ಐರೋಪ್ಯ ದೇಶದಲ್ಲಿ ಶಾಲಾ ಶಿಕ್ಷಣದಲ್ಲಿ ಶುದ್ಧ ಸಾಹಿತ್ಯ ಅಧ್ಯಯನ ವಿಜ್ಞಾನ ವಿದ್ಯಾಥರ್ಿಗಳಿಗೂ ಕಡ್ಡಾಯ. ನಮ್ಮ ಕನ್ನಡ ಶಾಲೆಗಳಲ್ಲಿ ಮೊದಲಿಗೆ ಗ್ರಂಥ ಭಂಡಾರವಿಲ್ಲ. ಇದ್ದರೂ ಪುಸ್ತಕಗಳನ್ನು ಕಪಾಟಿನಿಂದ ಹೊರತೆಗೆಯುವುದೇ ಇಲ್ಲ! ಮಕ್ಕಳಿಗೆ ಕೊಟ್ಟು ಓದಿಸುವ ಮತು ಹಾಗಿರಲಿ, ಶಿಕ್ಷಕರೇ ಓದಿರುವುದಿಲ್ಲ (ಅತಿ ಕಡಿಮೆ ಸಂಖ್ಯೆಯಲ್ಲಿರುವ ಕೆಲವರನ್ನು ಹೊರತುಪಡಿಸಿ). ಮಕ್ಕಳ ಅಡಿಪಾಯವೇ ಭದ್ರವಿಲ್ಲ. ಕನ್ನಡ ಶಾಲೆಗಳಲ್ಲಿ ತಯಾರಾದವರಿಗೆ ಸರಿಯಾಗಿ ಕನ್ನಡ ಬರದ ಸ್ಥಿತಿ ನಿಮರ್ಾಣವಾಗಿದೆ. ಅವರಿಗೆ ಇಂಗ್ಲಿಷೂ ಬರುವುದಿಲ್ಲ. ಅದನ್ನು ಆಡುವವರ ಎದುರು ಹಿಂಜರಿಕೆ, ಕೀಳರಿಮೆ. ಇಂಗ್ಲಿಷ್ ಶಾಲಗಳಲ್ಲಿ ಭಾರತೀಯ ಭಾಷಾ ಕಲಿಕೆ ಸಮರ್ಪಕವಾಗಿಲ್ಲ.

ಇವೆಲ್ಲದರ ಜೊತೆಗೆ ರಾಜಕೀಯ ಸಾಹಿತಿಗಳ ಕಾಟ. ಅವರಿಂದ ಸಾಹಿತ್ಯಕ್ಕೊಂದು ವ್ಯಾಖ್ಯೆ, ನಿದರ್ೇಶನ, ಚೌಕಟ್ಟುಗಳು ಪ್ರಾಪ್ತವಾಗಿವೆ. ಪ್ರತಿಭಾವಂತ ಯುವಜನರಿಗೆ ಈಗ ಕನ್ನಡದಲ್ಲಿ ಶುದ್ಧಸಾಹಿತ್ಯ ಸೃಷ್ಟಿಸಲು ಭಯ! ಯಾವುದಾದರೊಂದು ರಾಜಕೀಯ ಸಿದ್ಧಾಂತದ ಉದ್ದೇಶವಿಲ್ಲದಿದ್ದರೆ ಅದು ಸಾಹಿತ್ಯವೇ ಅಲ್ಲ ಎಂದು ಈ ರಾಜಕೀಯ ಸಾಹಿತಿಗಳು ಭಾವನೆ ಸೃಷ್ಟಿಸಿಬಿಟ್ಟಿದ್ದಾರೆ. ಕಟು ವಿಮಶರ್ೆ ಹಾಗೂ ಗುಂಪುಗಾರಿಕೆ ಮೂಲಕ ಜನರ ಉತ್ಸಾಹ ಮತ್ತು ಸೃಜನ ಶಕ್ತಿಯನ್ನೇ ನಾಶಮಾಡಿದ್ದಾರೆ. ಭಾವನೆಗಳು ಬರಡಾದಾಗ ಅಥವಾ ಗೊಂದಲ ಕಾಡಿದಾಗ, ಭಾಷೆಯ ಹದ, ತಳಪಾಯ ಗಟ್ಟಿಗೊಳ್ಳದಿದ್ದಾಗ ಸಾಹಿತ್ಯ ಎಲ್ಲಿ ಹುಟ್ಟುತ್ತದೆ? ಸಂಶೋಧನೆ, ಅಧ್ಯಯನ, ಪ್ರವಾಸ, ಹಾಗೂ ಸಾಹಿತ್ಯಿಕ ಚಿಂತನೆ ಮತ್ತು ಸ್ಫೂತರ್ಿ ಎಲ್ಲಿರುತ್ತದೆ?

ಏನಂತೀರಿ?


ಹಜ್ ಅನುದಾನ ಕೊಟ್ಟಮೇಲೆ ಹನಿಮೂನಿಗೂ ಕೊಡಬಹುದು!

ಹಜ್ ಸಹಾಯಧನ ದೇಶದ `ಸೆಕ್ಯುಲರ್ ಆದರ್ಶ'ಗಳಿಗೆ ಅನುಗುಣವಾಗಿಯೇ ಇದೆ ಎಂಬುದು ಕೇಂದ್ರದ ಯುಪಿಎ ಸಕರ್ಾರದ ವಾದ. ಈ ರೀತಿಯಲ್ಲೇ ಅದು ಸುಪ್ರೀಂ ಕೋಟರ್ಿನಲ್ಲಿಯೂ ವಾದ ಮಾಡಿಕೊಂಡು ಬಂದಿದೆ.

ಹಜ್ ಸಹಾಯಧನ ವ್ಯವಸ್ಥೆ ಅಸಾಂವಿಧಾನಿಕ; ಅದನ್ನು ರದ್ದುಪಡಿಸಬೇಕು ಎಂದು ಕೋರಿ ಎರಡು ವರ್ಷಗಳ ಹಿಂದೆ ಅಲಹಾಬಾದ್ ಹೈಕೋಟರ್್ ಸಾರ್ವಜನಿಕ ಹಿತಾಸಕ್ತಿ ಅಜರ್ಿ ಸಲ್ಲಿಸಲಾಗಿತ್ತು. ಹೈಕೋಟರ್್ ಅಜರ್ಿದಾರರ ವಾದವನ್ನು ಎತ್ತಿಹಿಡಿದಿತ್ತು. ಹಜ್ ಸಹಾಯಧನ ನೀಡಿಕೆಯನ್ನು ಸಕರ್ಾರ ತಕ್ಷಣ ನಿಲ್ಲಿಸಬೇಕೆಂಬ ಅದರ ಆದೇಶಕ್ಕೆ ಸುಪ್ರೀಂ ಕೋಟರ್್ ತಡೆಯಾಜ್ಞೆ ನೀಡಿದೆ. ವಿಚಾರಣೆ ಮುಂದುವರಿದಿದೆ.

ಒಂದು ಕೋಮಿನವರಿಗೆ ಮಾತ್ರ ಸಹಾಯಧನ ನೀಡುವುದು ಸೆಕ್ಯುಲರಿಸಂಗೆ ವಿರುದ್ಧ ಎಂಬುದು ಅಜರ್ಿದಾರರ ವಾದ. ಆದರೆ ಅಂತಹ ಕ್ರಮ ಸೆಕ್ಯುಲರಿಸಂ ಪರವಾಗಿಯೇ ಇದೆ ಎಂಬುದು ಸಕರ್ಾರದ ವಿತಂಡವಾದ.

ಆದರೆ ನ್ಯಾಯಪೀಠ ಸುಮ್ಮನಿರಲಿಲ್ಲ. ಸೌದಿ ಅರೇಬಿಯಾದ ಮೆಕ್ಕಾಗೆ ಹಜ್ ಯಾತ್ರೆ ನಡೆಸಲು ಮುಸ್ಲಿಮರಿಗೆ ಹಣ ಕೊಡುತ್ತಿರುವ ಕೇಂದ್ರ ಸಕರ್ಾರ, ಪಾಕಿಸ್ತ್ತಾನದಲ್ಲಿರುವ ನಂಕಾನ ಸಾಹಿಬ್ನ ವಾಷರ್ಿಕ ಪರ್ವಕ್ಕೆ ತೆರಳಲು ಸಿಖ್ಖರಿಗೆ ಎಂದಾದರೂ ಸಹಾಯಧನ ನೀಡಿದೆಯೆ?

1954ರಿಂದ ಭಾರತ ಸಕರ್ಾರ ಏರ್ ಇಂಡಿಯಾ ಮೂಲಕ ಹಜ್ ವಿಶೇಷ ವಿಮಾನಸೇವೆ ನಡೆಸುತ್ತಿದೆ. ಚಿಕ್ಕ ವಿಮಾನದಿಂದ ಆರಂಭವಾದ ಈ `ಸೇವೆ' ಅನಂತರ ಬೋಯಿಂಗ್ 747 ವಿಮಾನಗಳನ್ನು ಒಳಗೊಂಡಿತು. ಮೊದಲು ಮುಂಬೈ-ಜೆದ್ದಾ ಮಾರ್ಗ ಮಾತ್ರ ಇತ್ತು. ಅನಂತರ ದೆಹಲಿಯನ್ನೂ ಯೋಜನೆಗೆ ಸೇರಿಸಲಾಯಿತು. 1984ರಲ್ಲಿ ಸೌದಿ ಅರೇಬಿಯಾದ `ಸೌದಿಯಾ' ವಿಮಾನ ಸೇವೆಯನ್ನೂ ಏರ್ ಇಂಡಿಯಾ ಜೊತೆಗೆ 50/50 ಸಮಪಾಲು ಆಧಾರದ ಮೇಲೆ ಸೇರಿಸಿಕೊಳ್ಳಲಾಗಿದೆ.

ವಿದೇಶಾಂಗ ಸಚಿವಾಲಯ ಈ ಹಜ್ ಯಾತ್ರೆಯ ಮುಖ್ಯ ಆಯೋಜಕ. ಕೇಂದ್ರೀಯ ಹಜ್ ಸಮಿತಿ ಯಾತ್ರಾ ಯೋಜನೆ ರೂಪಿಸಿ, ಅದನ್ನು ಜಾರಿಗೆ ತರುವ ಮತ್ತು ನಿರ್ವಹಿಸುವ ಅಧಿಕೃತ ಜವಾಬ್ದಾರಿ ಹೊಂದಿದೆ. ಈ ಉದ್ದೇಶಕ್ಕಾಗಿಯೇ ವಿಶೇಷ ಹಜ್ ಕಾಯ್ದೆ (2002) ರೂಪಿಸಲಾಗಿದೆ.

ವರ್ಷದಿಂದ ವರ್ಷಕ್ಕೆ ಸಕರ್ಾರಿ ಅನುದಾನ ಪಡೆದು ಕೇಂದ್ರೀಯ ಹಜ್ ಸಮಿತಿ ಮೂಲಕ ಯಾತ್ರೆ ನಡೆಸುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಅವರಿಗೆ ನೀಡುವ ಸಹಾಯಧನದ ಪ್ರಮಾಣವೂ ಏರುತ್ತಲೇ ಇದೆ. 1995ರಲ್ಲಿ 31,000; 1996ರಲ್ಲಿ 50,347; 1998ರಲ್ಲಿ 63,648; 2006ರಲ್ಲಿ 99926 ಅಥವಾ ಒಂದು ಲಕ್ಷ ಮುಸ್ಲಿಮರು ಕೇಂದ್ರೀಯ ಹಜ್ ಸಮಿತಿ ಮೂಲಕ ಹಜ್ ಯಾತ್ರೆ ನಡೆಸಿದ್ದಾರೆ.

ಹಜ್ ಸಹಾಯಧನ ಎಷ್ಟು ನೀಡಲಾಗುತ್ತಿದೆ? 1991ರಲ್ಲಿ ಪ್ರತಿ ಹಜ್ ಯಾತ್ರಿಗೂ 4,056 ರೂಪಾಯಿ ಸಹಾಯಧನ ಸಕರ್ಾರದಿಂದ ಉಚಿತವಾಗಿ ಸಿಗುತ್ತಿತ್ತು. 2006ರಲ್ಲಿ ಪ್ರತಿ ಹಾಜಿಗೂ 28,000 ರೂಪಾಯಿ ನೀಡಲಾಯಿತು. ಅಂದರೆ ಬೊಕ್ಕಸದ ಒಟ್ಟು ಖಚರ್ು 280 ಕೋಟಿ ರೂಪಾಯಿ!!

ಮತೀಯ ಯಾತ್ರೆಗಳಿಗೆ ಸಕರ್ಾರಿ ಬೊಕ್ಕಸದಿಂದ ಹಣ ಕೊಡುವುದು ಸಾಂವಿದಾನಿಕವೇ ಅಲ್ಲವೇ ಎಂಬುದು ಈ ಹೊತ್ತಿನ ಮುಖ್ಯ ಪ್ರಶ್ನೆ. ತೀರ್ಥಯಾತ್ರೆ ಎನ್ನುವುದು ಜನರ ವೈಯಕ್ತಿಕ ಧಾಮರ್ಿಕ ಶ್ರದ್ಧೆಗೆ ಸಂಬಂಧಿಸಿದ ವಿಷಯವಲ್ಲವೆ? ಅದಕ್ಕಾಗಿ ಅಧಿಕೃತ ಬೊಕ್ಕಸದಿಂದ ಹಣ ನೀಡುವುದು `ಸೆಕ್ಯೂಲರ್' ಎನಿಸಿಕೊಂಡಿರುವ ಸಕರ್ಾರದ ಕರ್ತವ್ಯವೆ?

ವಾಸ್ತವವಾಗಿ ಹಜ್ ಸಹಾಯಧನ ಇಸ್ಲಾಮೀ ಮತೀಯ ಕಾನೂನಾದ `ಶರಿಯತ್'ಗೂ ವಿರುದ್ಧ. ಇತರರಿಂದ ದಾನ, ಸಹಾಯ ತೆಗೆದುಕೊಂಡು ಹಜ್ ಯಾತ್ರೆ ನಡೆಸುವಂತಿಲ್ಲ. ಆದರೆ, ``ಸಹಾಯಧನ ನೀಡುತ್ತಿರುವುದು ಯಾರೋ ಅಲ್ಲ, ಸಕರ್ಾರ. ಮುಸ್ಲಿಮರೂ ದೇಶದ ಪ್ರಜೆಗಳೇ. ಆದುದರಿಂದ ಸಕರ್ಾರದಿಂದ ಹಣ ಪಡೆಯಬಹುದು'' ಎನ್ನುವುದು `ಸಹಾಯಧನ ಬೇಕು' ಎನ್ನುವ ಮುಸ್ಲಿಂ ವರ್ಗದ ವಾದ. ಆದರೆ ಇಸ್ಲಾಮೀ ಕಾನೂನು ತಿಳಿದವರ ವಾದದಂತೆ ಹಜ್ ಸಹಾಯಧನ ಇಸ್ಲಾಂ ವಿರೋಧಿ.

ಭಾರತ ಏನು ಮಾಡಿದರೂ ಅದನ್ನು ತಾನೂ ಮಾಡಹೊರಡುವ ಪಾಕಿಸ್ತಾನದಲ್ಲೂ ಹಜ್ ಸಹಾಯಧನ ವ್ಯವಸ್ಥೆ ಇತ್ತು. ಆದರೆ ಅದು ಇಸ್ಲಾಂ ಪರವೊ ಅಥವಾ ವಿರೋಧವೋ ಎಂಬ ಪ್ರಶ್ನೆ 1997ರಲ್ಲಿ ತೀವ್ರಗೊಂಡು ಲಾಹೋರ್ ಹೈಕೋಟರ್ಿನ ನ್ಯಾಯಾಧೀಶ ತನ್ವೀರ್ ಅಹ್ಮದ್, ``ಹಜ್ ಸಹಾಯಧನ ಶರಿಯತ್ ಆದೇಶಗಳಿಗೆ ವಿರುದ್ಧ. ಅದನ್ನು ತಕ್ಷಣ ನಿಲ್ಲಿಸಬೇಕು'' ಎಂದು ಸ್ಪಷ್ಟವಾಗಿ ತೀಪರ್ಿತ್ತಿದ್ದಾರೆ.

ನಿಮಗೆ ಗೊತ್ತೆ? ಜಗತ್ತಿನ ಯಾವುದೇ ಇಸ್ಲಾಮಿಕ್ ದೇಶದ ಸಕರ್ಾರವೂ ಹಜ್ ಯಾತ್ರೆ ಮಾಡಲು ತನ್ನ ಕಡು ಬಡವ ಮುಸ್ಲಿಂ ಪ್ರಜೆಗಳಿಗೂ ಸಹಾಯಧನ ನೀಡುವುದಿಲ್ಲ! ಇಸ್ಲಾಮೀ ಸಕರ್ಾರಗಳೂ ಮಾಡದ ಕೆಲಸವನ್ನು ನಮ್ಮ `ಜಾತ್ಯತೀತ' ಸಕರ್ಾರ ಮಾಡಿಕೊಂಡು ಬರುತ್ತಿದೆ. ಮುಸ್ಲಿಮರು ತಮ್ಮ ಸ್ವಂತ ದುಡಿಮೆಯಿಂದ ಹಜ್ ಯಾತ್ರೆ ಮಾಡಿದಾಗ ಮಾತ್ರ ಅದು ಅಲ್ಲಾಹನಿಗೆ ಪ್ರಿಯವಾಗುತ್ತದೆ ಎನ್ನುವುದು ಇಸ್ಲಾಂ ಮತದ ನಿಲುವು. ಹಾಗಿದ್ದರೂ ಹಾಜಿಗಳಿಗೆ ಹೇಗಾದರೂ `ಸೇವೆ' ಸಲ್ಲಿಸಲೇಬೇಕೆಂಬ ಅಪಾರ ಶ್ರದ್ಧೆ ನಮ್ಮ ಸೆಕ್ಯೂಲರಿಸ್ಟರದು.

ಸಂವಿಧಾನದ 282ನೇ ವಿಧಿ ಸಾರ್ವಜನಿಕ ಉದ್ದೇಶಗಳಿಗೆ ಸಕರ್ಾರ ಹಣ ಖಚರ್ು ಮಾಡಬಹುದು; ಆ ಕುರಿತು ಕಾನೂನು ರೂಪಿಸಬಹುದು ಎಂದು ಅನುಮತಿ ನೀಡಿದೆ. ಆದ್ದರಿಂದ ನ್ಯಾಯಾಲಯ ಮಧ್ಯಪ್ರವೇಶ ಮಾಡುವಂತಿಲ್ಲ ಎನ್ನುವುದು ಯುಪಿಎ ಮುಖಂಡರ ವಾದ. ಆದರೆ ಇಲ್ಲಿ `ಸಾರ್ವಜನಿಕ' ಉದ್ದೇಶ ಎಂದರೆ ಏನು?

ಸಂವಿಧಾನದಲ್ಲಿ ಈ ಬಗ್ಗೆ ಸ್ಪಷ್ಟ ನಿದರ್ೇಶನ ಇಲ್ಲ. ಅದರ ಅಗತ್ಯವೂ ಇಲ್ಲ. ಸಂವಿಧಾನ ಎಲ್ಲವನ್ನೂ ವಿವರಿಸುವುದು ಅಸಾಧ್ಯ. ಅನೇಕ ವಿಷಯಗಳನ್ನು ವಿವೇಕ ಬಳಸಿ ನಿರ್ಧರಿಸಬೇಕಾಗುತ್ತದೆ. ಯಾರಾದರೂ ಒಬ್ಬ ವ್ಯಕ್ತಿ ತೀರ್ಥಯಾತ್ರೆ ಮಾಡುವುದು `ಸಾರ್ವಜನಿಕ' ಉದ್ದೇಶ ಹೇಗಾಗುತ್ತದೆ? ತೀರ್ಥಯಾತ್ರೆ ಎನ್ನುವುದು ವೈಯಕ್ತಿಕವಾದ, ತೀರಾ ಖಾಸಗಿ ವಿಷಯ. ನಾಳೆ ಜನರು `ಹನೀಮೂನ್'ಗೂ ಸಕರ್ಾರದಿಂದ ಹಣ ಕೇಳಬಹುದು! ಸಕರ್ಾರ ಕೊಡುತ್ತದೆಯೆ? ಮುಸ್ಲಿಮರ ಮತೀಯ ಶ್ರದ್ಧೆ ಹೆಚ್ಚಿಸುವ ಕೆಲಸ ಸೆಕ್ಯುಲರ್ ಸಕರ್ಾರದ್ದಲ್ಲ ಅಲ್ಲವೆ?

ಆದರೆ ಮುಸ್ಲಿಮರು ಬೇಕೇಬೇಕೆಂದು ಕೇಳಿದರೆ ನಮ್ಮ ಯುಪಿಎ ಸಕರ್ಾರ ಅವರ ಹನೀಮೂನ್ಗೂ ಹಣ ಕೊಟ್ಟೀತೇನೋ!!


ಮಾವೋ ವಾರ್ಫೇರ್ ಫಾರ್ ಡಮ್ಮಿಸ್

ಮಾವೋವಾದಿಗಳ ಗೆರಿಲ್ಲಾ ಯುದ್ಧ ಪುರಾಣಗಳ ಮಾಯಯುದ್ಧದ ಹಾಗೆ. ಇಲ್ಲಿ ಶತ್ರು ಭೌತಿಕವಾಗಿ ಮುಖಾಮುಖಿಯಾಗುವುದಿಲ್ಲ. ಆದರೂ ಪೆಟ್ಟು ಕೊಡುತ್ತಾನೆ.

ಇದು `ಮೊಬೈಲ್' ಯುದ್ಧ ತಂತ್ರ (ಮಾವೋ ಭಾಷೆಯಲ್ಲಿ `ಯುಂಡಾಂಗ್ ಝಾನ್'). ಇದರಲ್ಲಿ `ಅಧಿಕೃತ' ಸಮರಾಂಗಣವಿಲ್ಲ. ಗಡಿ ಬಳಿ ಸೈನ್ಯ ಜಮಾವಣೆಯಿಲ್ಲ. ಶತ್ರುಗಳು ಉಪಗ್ರಹಗಳಿಗೆ ಕಾಣ ಸಿಗುವುದಿಲ್ಲ. ಅವರ ಮೇಲೆ ವೈಮಾನಿಕ ದಾಳಿ ಸಾಧ್ಯವಿಲ್ಲ. ಹಠಾತ್ ದಾಳಿ ಮಾಡಿ ಜೀವಹಾನಿ, ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುವುದು; ಅನಂತರ ಕಣ್ಮರೆಯಾಗುವುದು ಗೆರಿಲ್ಲಾಗಳ ಕ್ರಮ.

ನಮ್ಮ ಸುರಕ್ಷಾ ಯೋಧರು ಹಾಗಲ್ಲ. ಅವರ ನೆಲೆಗಳು ಕಣ್ಣಿಗೆ ಕಾಣುತ್ತವೆ. ಅವರು ಅಗೋಚರರಲ್ಲ, `ಮೊಬೈಲ್' ಅಲ್ಲ. ಹೀಗಾಗಿ ಗೆರಿಲ್ಲಾಗಳು ಪೊಲೀಸರ ಮೇಲೂ ದಾಳಿ ಮಾಡುವ ದಾಷ್ಟ್ರ್ಯ ತೋರುತ್ತಾರೆ.

ಇಲ್ಲಿ `ಯುದ್ಧಭೂಮಿ' ಯಾವುದಾಗಿರಬೇಕು ಎಂಬುದನ್ನು ನಿರ್ಧರಿಸುವವರೂ ಗೆರಿಲ್ಲಾಗಳೇ. ಅವರು ತಮಗೆ ಅನುಕೂಲವಾದ ಯಾವುದೋ ಕಾಡಿನಲ್ಲೋ, ಗುಡ್ಡಪ್ರದೇಶದಲ್ಲೋ ಘರ್ಷಣೆ ಸೃಷ್ಟಿಸುತ್ತಾರೆ. ಈ ಕಾಡು, ಈ ಪ್ರದೇಶ ಪೊಲೀಸರಿಗೆ ಅಪರಿಚಿತ. ಇಂತಹ ಕಡೆಗಳಲ್ಲಿ ಹೋರಾಡುವ ತರಬೇತಿಯೂ ಅನೇಕ ಯೋಧರಿಗೆ ಇರುವುದಿಲ್ಲ. ಆದರೂ ದೇಶಭಕ್ತಿಯಿಂದ, ರಾಷ್ಟ್ರನಿಷ್ಠೆಯಿಂದ ನಮ್ಮ ಸುರಕ್ಷಾ ಯೋಧರು ಹೋರಾಡುತ್ತಿದ್ದಾರೆ. ಇದು ಶ್ಲéಾಘನೀಯ.

ಎದುರಾಳಿಗಳಿಗೆ ಅನಾನುಕೂಲಕರವಾದ ಸ್ಥಳಗಳಲ್ಲಿಯೇ ಸಂಘರ್ಷ ನಡೆಯುವಂತೆ ಮಾಡುವುದು, ದುರ್ಬಲ ಗುರಿಗಳನ್ನು ಗುರುತಿಸಿ ಹಠಾತ್ ದಾಳಿ ಮಾಡಿ ಅನಂತರ ತಲೆತಪ್ಪಿಸಿಕೊಳ್ಳುವುದು ಸ್ಟ್ಯಾಂಡಡರ್್ ಗೆರಿಲ್ಲಾ ತಂತ್ರ. ಅದರ ಜೊತೆಗೆ ಪ್ರಾಪಗ್ಯಾಂಡಾ ವಾರ್, ಸೈಕಲಾಜಿಕಲ್ ವಾರ್ -ಇವೆಲ್ಲ ಗೆರಿಲ್ಲಾ ಯುದ್ಧ ಸಿದ್ಧಾಂತಗಳ ಅವಿಭಾಜ್ಯ ಅಂಗಗಳು. ಈ ಕುರಿತು ಮಾವೋ, ಚೆ ಗೆವಾರಾ, ಕಾಲರ್ೋಸ್, ಹೊ ಚಿ ಮಿನ್ಹ್ ಮೊದಲಾದವರು ವಿವರಿಸಿದ್ದಾರೆ.

`ಆನ್ ಗೆರಿಲ್ಲಾ ವಾರ್ಫೇರ್' (`ಯೂಜಿ ಝಾನ್') ಎಂಬುದು ಮಾವೋನ ಕುಖ್ಯಾತ ಪುಸ್ತಕ. ಅವನ ಪ್ರಕಾರ, ಗೆರಿಲ್ಲಾ ಸಮರಕ್ಕೆ ಮೂರು ಹಂತಗಳಿರುತ್ತವೆ. ಮೊದಲ ಹಂತದಲ್ಲಿ ಗೆರಿಲ್ಲಾಗಳು ಪ್ರಚಾರ ತಂತ್ರಗಳನ್ನು ಬಳಸಿ ಜನರ ಬೆಂಬಲ ಗಳಿಸಿಕೊಳ್ಳಲು ಪ್ರಯತ್ನಿಸಬೇಕು. ಅಂದರೆ, ನಕ್ಸಲರು ಬಡವರ ಪರ; ಶ್ರೀಮಂತರ ವಿರುದ್ಧ; ಆಥರ್ಿಕ, ಸಾಮಾಜಿಕ ಅಸಮಾನತೆ ವಿರುದ್ಧ ಅವರ ಹೋರಾಟ; ಅವರು ದೇಶದ್ರೋಹಿಗಳಲ್ಲ; ಆಳುವ ವರ್ಗದವರೇ ದೇಶದ್ರೋಹಿಗಳು; ನಕ್ಸಲರು ಅನ್ಯಾಯ ಕಂಡು ಕ್ರೋಧದಿಂದ ಗನ್ನು ಎತ್ತಿಕೊಂಡಿದ್ದಾರೆ; ಅನ್ಯಾಯ ಸರಿಪಡಿಸಿದರೆ ಶಾಂತರಾಗುತ್ತಾರೆ -ಹೀಗೆ ಸುಳ್ಳುಗಳನ್ನೇ ನಿಜ ಎಂದು ನಂಬಿಸುವ ಪ್ರಚಾರ ತಂತ್ರ ಸಾಗುತ್ತದೆ.

ಈ ಪ್ರಚಾರ ಯುದ್ಧ ಗೆರಿಲ್ಲಾಗಳು ಮಾಡಲೇಬೇಕಾದ ಕರ್ತವ್ಯ. ಅದನ್ನು ಮಾವೋ ಸ್ಪಷ್ಟವಾಗಿ ಹೇಳಿದ್ದಾನೆ. ಜನರ ಬ್ರೈನ್ವಾಷ್ ಮಾಡದೇ ಗೆರಿಲ್ಲಾಗಳಿಗೆ ಯಶಸ್ಸು ಸಾಧ್ಯವಿಲ್ಲ. ಕಡೆಯ ಪಕ್ಷ ತಾವು ನೆಲೆಸಿರುವ ಪ್ರದೇಶದ ಜನರ ತಲೆ ಕೆಡಿಸುವ ಪ್ರಯತ್ನವನ್ನಾದರೂ ಮಾವೋಗಳು ಮಾಡೇ ಮಾಡುತ್ತಾರೆ.

ಈ (ಅಪ)ಪ್ರಚಾರಕ್ಕಾಗಿ ಸಮಾಜದ ಗಣ್ಯರ, ಪ್ರಭಾವಿಗಳ ನೆರವನ್ನೂ ತೆಗೆದುಕೊಳ್ಳಲಾಗುತ್ತದೆ. ಹಲವರ ನೆರವನ್ನು ಅವರಿಗೆ ಅರಿವಿಲ್ಲದಂತೆ ಪಡೆದುಕೊಳ್ಳಲೂಬಹುದು! ಉದಾಹರಣೆಗೆ, ಜಾಗತೀಕರಣದ ವಿರುದ್ಧ ಆಂದೋಲನ ಎಂದರೆ ಹಲವರು ಬರುತ್ತಾರೆ. ಅದನ್ನೇ ನಕ್ಸಲರ ಪರವಾದ ಇಮೇಜು ಸೃಷ್ಟಿಸಲು ಬಳಸಿಕೊಂಡರೆ ಅವರಿಗೆ ತಿಳಿಯುವುದೇ ಇಲ್ಲ!!

ಪುಸ್ತಕಗಳು, ಪತ್ರಿಕೆಗಳು, ಇತರ ಮಾಧ್ಯಮ, ಹಾಡುಗಳು, ನಾಟಕಗಳು, ಬೀದಿ ನಾಟಕಗಳು, ಚಲನಚಿತ್ರಗಳು, ಜನಪ್ರಿಯ ಚಲನಚಿತ್ರ ನಟರುಗಳ ಇಮೇಜು, ವಿಶ್ವವಿದ್ಯಾಲಯಗಳು, ಹೊಲಿಗೆ ತರಬೇತಿ ಶಾಲೆಗಳು, ಮಹಿಳಾ ಸಮಾಜಗಳು, ಕಾಖರ್ಾನೆಗಳು, ಸೆಮಿನಾರುಗಳು -ಹೀಗೆ ಸಾಧ್ಯವಾಗುವ ಎಲ್ಲವನ್ನೂ ಗೆರಿಲ್ಲಾಗಳ ಅನುಕೂಲಕ್ಕಾಗಿ, ಅವರ ಬಗ್ಗೆ ಒಳ್ಳೆಯ ಇಮೇಜು ಸೃಷ್ಟಿಸಲು ಬಳಸಿಕೊಳ್ಳಲಾಗುತ್ತದೆ.

ಸಕರ್ಾರದ ಗುರಿಗಳ ಮೇಲೆ ದಾಳಿ ಮಾಡುವುದೂ (ಉದಾಹರಣೆಗೆ ಪೊಲೀಸ್ ಸ್ಟೇಷನ್) ಸಹ ಮಾವೋ ತಂತ್ರದ ಪ್ರಕಾರ ಮೊದಲ ಹಂತದ ಕೆಲಸವೇ. ಯಾವುದೋ ಪೊಲೀಸ್ ಅಧಿಕಾರಿ ಮೇಲೆ ಕೋಪವಿರುವ ಕೆಲವು ಸ್ಥಳೀಯ ಮುಗ್ಧರಿಗೆ ಇಂತಹ ಕೆಲಸಗಳಿಂದ ಖುಷಿಯಾಗುತ್ತದೆ. ಈ ಕೆಲಸ ಮಾಡಿದವರನ್ನು ಅವರು ಭಯಭಕ್ತಿಯಿಂದ ಕಾಣುತ್ತಾರೆ. ಹಾಗೆ ಸಹಾನುಭೂತಿ ಉಳ್ಳವರನ್ನು ಸೃಷ್ಟಿಸಿಕೊಳ್ಳಬೇಕು ಎಂದು ಮಾವೋ ಸ್ಪಷ್ಟ ಸೂಚನೆ ನೀಡಿದ್ದಾನೆ. ಇದು ಕೇವಲ ಒಂದು ತಂತ್ರ. ಎಷ್ಟೋ ಮುಗ್ಧ ಜನರು ತಮಗರಿವಿಲ್ಲದೆಯೇ ಈ ತಂತ್ರಗಾರರನ್ನು ನಂಬುತ್ತಾರೆ!

ಎರಡನೇ ಹಂತದಲ್ಲಿ ಸಕರ್ಾರದ ಗುರಿಗಳ ಮೇಲಿನ, ಮಿಲಿಟರಿ, ಪೊಲೀಸ್ ಗುರಿಗಳ, ಪ್ರಮುಖ ವ್ಯವಸ್ಥೆಗಳ (ಉದಾಹರಣೆಗೆ, ರೈಲ್ವೆ ಸೇತುವೆ ಇತ್ಯಾದಿ) ಮೇಲಿನ ದಾಳಿ ಇನ್ನಷ್ಟು ತೀವ್ರವಾಗುತ್ತದೆ. ಜನರ ಮೇಲೂ ದಾಳಿಗಳಾಗುತ್ತವೆ. ಮೂರನೇ ಹಂತದಲ್ಲಿ ಸಾಂಪ್ರದಾಯಿಕ, ಪೂರ್ಣ ಪ್ರಮಾಣದ ಸಮರವನ್ನೇ ನಡೆಸಿ ನಗರಗಳನ್ನು, ಭೂಪ್ರದೇಶಗಳನ್ನು ವಶಕ್ಕೆ ತೆಗೆದುಕೊಳ್ಳಬೇಕೆಂದು ಮಾವೋ ಹೇಳುತ್ತಾನೆ.

ಅವನ `ಆನ್ ಗೆರಿಲ್ಲಾ ವಾರ್ಫೇರ್' ಪುಸ್ತಕವನ್ನು ವಿಯೆಟ್ನಾಂನಲ್ಲಿ ವ್ಯಾಪಕವಾಗಿ ವಿತರಿಸಿ ಅದರ ತಂತ್ರಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಯಿತು. ಅಲ್ಲಿನ ವೋ ಗುಯೆನ್ ಜಿಯಾಪ್ ಸ್ಥಾಪಿಸಿರುವ `ಪೀಪಲ್ಸ್ ವಾರ್, ಪೀಪಲ್ಸ್ ಆಮರ್ಿ' ಸಂಘಟನೆ ಮಾವೋ ತಂತ್ರಗಳನ್ನು ವ್ಯಾಪಕವಾಗಿ, ಸೂಕ್ತ ಸಾಂಧಭರ್ಿಕ ಮಾಪರ್ಾಡಿನೊಡನೆ, ಈಗಲೂ ಬಳಸಿಕೊಳ್ಳುತ್ತಿದೆ.

ಕೆಲವು ಮಾವೋ ಬಣಗಳು ಮಾವೋ ತಂತ್ರಗಳಲ್ಲಿ ತಮ್ಮ ಸಂದರ್ಭ ಹಾಗೂ ಚಿಂತನೆಗೆ ತಕ್ಕ ಹಾಗೆ ಕೆಲವು ಬದಲಾವಣೆ ಮಾಡಿಕೊಳ್ಳುವುದು ಮಾಮೂಲು.

ಮಾವೋ ಗೆರಿಲ್ಲಾಗಳಲ್ಲಿ ಪ್ರಧಾನ ಪಡೆ -ಮೇಯ್ನ್ ಫೋಸರ್್ ರೆಗ್ಯುಲರ್ಸ್; ಪ್ರ್ರಾದೇಶಿಕ ಹೋರಾಟಗಾರರು -ರೀಜನಲ್ ಫೈಟರ್ಸ್; ಅರೆಕಾಲಿಕ ಗೆರಿಲ್ಲಾಗಳು -ಪಾಟರ್್ ಟೈಮ್ ಗೆರಿಲ್ಲಾಗಳು ಎಂಬ ಮೂರು ವಿಧವಾದ ಉಗ್ರಪಡೆಗಳಿವೆ. ಮೂರು ಹಂತದ, ಮೂರು ವಿಧದ ಪಡೆಗಳ, ಮೂರು ಪದರಗಳ ಸಮರ ತಂತ್ರ ಇದು.

ಜನರ ಜೊತೆಗಿನ ಸಂಬಂಧ ಹೇಗಿರಬೇಕು ಎಂಬುದನ್ನು ಗೆರಿಲ್ಲಾ ಸಿದ್ಧಾಂತವೀರರೆಲ್ಲರೂ ವಿವರಿಸಿದ್ದಾರೆ. ಅಮೆರಿಕ-ವಿಯೆಟ್ನಾಂ ಯುದ್ಧ ಸಮಯದಲ್ಲಿ ಗೆರಿಲ್ಲಾಗಳಿಗೆ ಜನರ ಅಪಾರ ಬೆಂಬಲ ದೊರಕಿತು. ಆಶ್ರಯ, ಆಹಾರ ಎಲ್ಲವೂ ಲಭಿಸಿದವು. ಜನರ ಬೆಂಬಲ ಇಲ್ಲದ ಕಡೆಗಳಲ್ಲಿ ಅದನ್ನು ಸೃಷ್ಟಿಸಿಕೊಳ್ಳಲು ಮಾವೋಗಳು ಹೆಣಗುತ್ತಾರೆ. ಏಕೆಂದರೆ ಸ್ಥಳಿಯ ಜನರಿಂದ ಆಶ್ರಯ, ಆಹಾರ ಸಿಗದೇ ಹೋದರೆ ಅವರ ಆಟ ನಡೆಯುವುದು ಬಹಳ ಕಷ್ಟ. ಹೀಗಾಗಿ ಜನರ ಬೆಂಬಲ ಪಡೆಯಲು ತಾವು `ಜನಪರ' ಎಂಬ ಸೋಗು, ನಾಟಕ ಆಡಬೇಕಾಗುತ್ತದೆ. `ಜನರ ವಿಮೋಚನೆಗಾಗಿಯೇ' ತಮ್ಮ ಹೋರಾಟ ಎಂಬ ಆಟ ಕಟ್ಟಬೇಕಾಗುತ್ತದೆ. ಅದು ಫಲಕೊಡದಿದ್ದಾಗ ಜನರನ್ನು ಹೆದರಿಸಿ ಅಂಕೆಯಲ್ಲಿಕೊಂಡು ಸಹಕಾರ ಪಡೆಯುವ ಯತ್ನಗಳೂ ನಡೆಯುತ್ತವೆ. ಇವೆಲ್ಲಾ ಮಾವೋಗಳ ಯೋಜನಾಬದ್ಧ ತಂತ್ರಗಳು.

ಮಾವೋ ಪ್ರಕಾರ, ಗೆರಿಲ್ಲಾಗಳು ತಮ್ಮ ಸಶಸ್ತ್ರ ಚಟುವಟಿಕೆಗಳನ್ನು ಗ್ರಾಮೀಣ, ಗುಡ್ಡಗಾಡು ಪ್ರದೇಶಗಳಲ್ಲೇ ಆರಂಭಿಸಬೇಕು. ಆದರೆ ನಗರ, ಪಟ್ಟಣಗಳಲ್ಲಿ ಗಣ್ಯ, ಬುದ್ಧಿಜೀವಿ ಬೆಂಬಲಿಗರು ಇರುತ್ತಾರೆ. ಒಂದು ಕಡೆ ಗನ್ನುಗಳು, ಇನ್ನೊಂದು ಕಡೆ ಸ್ಲೋಗನ್ನುಗಳು ಏಕಕಾಲಕ್ಕೆ ಮೊರೆಯುತ್ತವೆ!!

ಮಾವೋಗಳ ದಮನಕ್ಕೆ ಅವರ ಗನ್ನುಗಳ ಜೊತೆಗೆ ಅವರ ಸ್ಲೋಗನ್ನುಗಳನ್ನೂ ಸಮರ್ಥವಾಗಿ ಎದುರಿಸಬೇಕು. ಇದು ಎಲ್ಲ ಭಯೋತ್ಪಾದಕರ ವಿಷಯದಲ್ಲೂ ಅನ್ವಯಿಸಬೇಕಾದ ಮಾತು. ಉಗ್ರರ ದಮನವಾಗಬೇಕು; ಪ್ರಚಾರಯುದ್ಧದಲ್ಲಿಯೂ ಅವರನ್ನು ಸೋಲಿಸಬೇಕು; ಗದ್ದರ್ನಂತಹ ಉಗ್ರವಾದಿ ಪ್ರಚಾರಕರನ್ನು ಸರಿಯಾಗಿ, ದಕ್ಷವಾಗಿ ಸೂಕ್ತರೀತಿಯಲ್ಲಿ ನಿಭಾಯಿಸಬೇಕು. ಪರೋಕ್ಷ್ಷ ಮಾರ್ಗಗಳಿಂದ ಉಗ್ರರ ಪರವಾಗಿ ಕೆಲಸಮಾಡುವ ಪ್ರೊಫೆಸರುಗಳು ಹಾಗೂ ಇತರ ಬುದ್ಧಿಜೀವಿಗಳನ್ನು ಮಟ್ಟಹಾಕುವ ತಂತ್ರಗಳನ್ನೂ ಸಕರ್ಾರ ರೂಪಿಸಬೇಕು.

ಆದರೆ ಗದ್ದರ್ಗೆ ನಮ್ಮ ಮುರುಘರಾಜೇಂದ್ರ ಮಠಾಧಿಪತಿ `ಬಸವಶ್ರೀ' ಪ್ರಶಸಿ ಕೊಡುತ್ತಾರೆ! ಮಾವೋ ಉಗ್ರರ ಬೆಂಬಲಿಗ ಬುಧ್ಧಿಜೀವಿಗಳ ಪರವಾಗಿ ರಾಜಕಾರಣಿಗಳು ಹೇಳಿಕೆ ನೀಡುತ್ತಾರೆೆ! ವಾಸ್ತವ ಹೇಗಿದೆ ಎಂಬುದನ್ನು ಅರಿಯಲು ಕನರ್ಾಟಕದ ಈ ಎರಡು ಉದಾಹರಣೆಗಳು ಸಾಕು.

ರಾಜಕಾರಣಿಗಳ, ಸಮುದಾಯಗಳ ಮತ್ತು ಸಮಾಜದ ಪ್ರಮುಖರ ಬೆಂಬಲ ಅಥವಾ ನಿರ್ಲಕ್ಷ್ಯಗಳಿಲ್ಲದೇ ಭಯೋತ್ಪಾದನೆ ಬೇರೂರುವುದು ಕಷ್ಟ. ಇದನ್ನು ಭಯೋತ್ಪಾದಕರು ಚೆನ್ನಾಗಿ ಅರಿತಿದ್ದಾರೆ. ಮತದ ನಾಮಬಲ ಇರದ ಮಾವೋಗಳು ಜನಬೆಂಬಲ ಗಳಿಸಲು `ಜನಪರ'ರಾಗುತ್ತಾರೆ! ತಮ್ಮ ಭಯೋತ್ಪಾದನೆಯನ್ನು `ಪೀಪಲ್ಸ್ ವಾರ್' ಎನ್ನುತ್ತಾರೆ. ಮಾವೋ ಜೆಡಾಂಗ್ 1920ರ ಮತ್ತು 30ರ ದಶಕದಲ್ಲಿ ಗ್ರಾಮೀಣ ಚೀನಾದಲ್ಲಿ ತನ್ನ `ಪ್ರೊಟ್ರ್ಯಾಕ್ಟೆಡ್ ಪೀಪಲ್ಸ್ ವಾರ್' ತಂತ್ರಗಳನ್ನು ಅನುಸರಿಸಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾದ. ರೈತ ಸಮುದಾಯವನ್ನು ತನ್ನ ರಣತಂತ್ರದ ಸಾಧನವಾಗಿ ಬಳಸಿಕೊಂಡ ಪರಿಣಾಮವಾಗಿ ಸಿಸಿಪಿ ಚೀನಾದ ಅಧಿಕಾರ ಸೂತ್ರವನ್ನು ತನ್ನ ಕೈವಶ ಮಾಡಿಕೊಂಡಿತು.

``ರಾಜಕೀಯ ಅಧಿಕಾರ ಸಿಗುವುದೇ ಗನ್ ಬ್ಯಾರೆಲ್ಲುಗಳ ಮೂಲಕ'' ಎಂಬುದು ಮಾವೋನ (ಕು)ಪ್ರಸಿದ್ಧ ಹೇಳಿಕೆ. ಅವನ ಸಿದ್ಧಾಂತಗಳ ಕಿರುಸಂಗ್ರಹವಾದ `ಲಿಟಲ್ ರೆಡ್ ಬುಕ್' ಅನ್ನು ಚೀನಾದಲ್ಲಿ ಶಿಕ್ಷಣದ ಅಂಗವಾಗಿ ಎಲ್ಲರೂ ಕಡ್ಡಾಯವಾಗಿ ಓದಲೇಬೇಕು. ಸೌದಿ ಅರೇಬಿಯಾದ ಮದರಸಾಗಳಿಗೂ ಚೀನಾದ ಕಮ್ಯೂನಿಸ್ಟ್ ಮದರಸಾಗಳಿಗೂ ನೀತಿರಚನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅವನ `ಗೆರಿಲ್ಲಾ ವಾರ್ಫೇರ್' ಪುಸ್ತಕವನ್ನು ಎಲ್ಲ ಮಾವೋ ಉಗ್ರರೂ ಓದಿರುತ್ತಾರೆ. ಅವರನ್ನು ದಮನಿಸಬೇಕಾದವರೂ ಅದನ್ನು ಓದಬೇಕಾಗುತ್ತದೆ.

ನೆನಪಿಡಿ, ನಕ್ಸಲೀಯರು ಬಡವರನ್ನು ಕಾಪಾಡಲು ಆಕಾಶದಿಂದ ಉದುರಿಬಿದ್ದವರಲ್ಲ. ಸೋವಿಯತ್ ಮತ್ತು ಚೀನಾಗಳ ಹಣಾಹಣಿಯ ಫಲಿತವಾಗಿ ಭಾರತದ ಕಮ್ಯೂನಿಸ್ಟ್ ಪಾಳೆಯದಲ್ಲಿ ಉಂಟಾದ ಒಡಕಿನ ಫಲವಾಗಿ ಉದಿಸಿದ ಚೀನಾ ಬೀಜಾಸುರರು ಅವರು. ವೈಚಾರಿಕವಾಗಿ ಅವರು ವಿವಿಧ ಮಾವೋ ಬಣಗಳನ್ನು ಪ್ರತಿನಿಧಿಸುತ್ತಾರೆ.

ಆರಂಭದಲ್ಲಿ ಪಶ್ಚಿಮ ಬಂಗಾಲ ನಕ್ಸಲ್ ಚಟುವಟಿಕೆಗಳ ಕೇಂದ್ರವಾಗಿತ್ತು. ಈಗ ನಕ್ಸಲರು ಭಾರತದ 18 ರಾಜ್ಯಗಳ 180 ಜಿಲ್ಲೆಗಳನ್ನು ವ್ಯಾಪಿಸಿದ್ದಾರೆ. 15000-20000 ಬಲದ ಉಗ್ರಪಡೆ ಹೊಂದಿದ್ದಾರೆ. ಭಾರತದ ಅರಣ್ಯಗಳಲ್ಲಿ ಐದನೇ ಒಂದು ಭಾಗ ನಕ್ಸಲ್ ನಿಯಂತ್ರಣದಲ್ಲಿದೆ. ಕಮ್ಯೂನಿಸ್ಟ್ ಪಾಟರ್ಿ ಆಫ್ ಇಂಡಿಯಾ -ಮಾಕ್ಸರ್ಿಸ್ಟ್,ಲೆನಿನಿಸ್ಟ್ (ಸಿಪಿಐ-ಎಂಎಲ್), ಪೀಪಲ್ಸ್ ವಾರ್ ಗ್ರೂಪ್ (ಪಿಡಬ್ಲೂಜಿ), ಮಾವೋಯಿಸ್ಟ್ ಕಮ್ಯೂನಿಸ್ಟ್ ಸೆಂಟರ್ (ಎಂಸಿಸಿ) ಗಳು 2004ರ ಸೆಪ್ಟೆಂಬರ್ 21ರಂದು ವಿಲೀನವಾಗಿ ಕಮ್ಯೂನಿಸ್ಟ್ ಪಾಟರ್ಿ ಆಫ್ ಇಂಡಿಯಾ (ಮಾವೋಯಿಸ್ಟ್) ಎಂಬ ಹೆಸರಿನಲ್ಲಿ ಸಕ್ರಿಯವಾಗಿ (ಇದು ನಿಷೇಧಿತ ಸಂಘಟನೆ) `ಪ್ರೊಟ್ರ್ಯಾಕ್ಟೆಡ್ ವಾರ್' ಮುಂದುವರಿಸಿವೆ. ಸಿಪಿಐ (ಮಾವೋ) ಉಗ್ರರು ಸಾವಿರಾರು ಸಂಖ್ಯೆಯಲ್ಲಿ ದಾಳಿ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ (ಉದಾ: ಜೆಹಾನಾಬಾದ್ ಜೈಲು ದಾಳಿ ಪ್ರಕರಣ). ಈ ಸಂಘಟನೆ `ದೇಶದ ಅತಿದೊಡ್ಡ ಆಂತರಿಕ ಸುರಕ್ಷಾ ಆತಂಕ'ವಾಗಿ ಮಾರ್ಪಟ್ಟಿದೆ ಎಂದು ಸ್ವತಃ `ಶಾಂತಿದೂತ' ಪ್ರಧಾನಿ ಮನಮೋಹನ್ ಸಿಂಗ್ ಒಪ್ಪಿಕೊಂಡಿದ್ದಾರೆ.

ಆದರೂ ನಕ್ಸಲರು ಭಯೋತ್ಪಾದಕರೇ ಅಲ್ಲವೇ ಎಂಬ ಅರ್ಥಹೀನ (ಹಾಗೂ ಅಪಾಯಕಾರಿ) ಚಚರ್ೆಗಳು ಇನ್ನೂ ಜಾರಿಯಲ್ಲಿವೆ! ಅನೇಕ ರಾಜಕೀಯ ಪ್ರಮುಖರುಗಳೇ ಗೊಂದಲಮಯ ಹೇಳಿಕೆ ನೀಡುತ್ತಾ ಜನರನ್ನು ದಾರಿತಪ್ಪಿಸುತ್ತಿದ್ದಾರೆ.

ಕೇರಳದಿಂದ ನೇಪಾಳದವರೆಗೆ ಭೂಭಾಗಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು `ರೆಡ್ ಕಾರಿಡಾರ್' (ಕೆಂಪು ಪಟ್ಟಿ) ಅಥವಾ `ಕಾಂಪ್ಯಾಕ್ಟ್ ರೆವೆಲ್ಯೂಷನರಿ ಝೋನ್' ಸ್ಥಾಪಿಸುವುದು; ಅನಂತರ ಅದನ್ನು ಸಂಪೂರ್ಣವಾಗಿ ಗೆದ್ದುಕೊಳ್ಳುವುದು ಮಾವೋ ಉಗ್ರರಿಗೆ ಪ್ರಿಯವಾದ ಯೋಜನೆ. ಈ ಕೆಂಪು ಪಟ್ಟಿಯಡಿ ಬಿಹಾರ, ಜಾರ್ಖಂಡ್, ಒರಿಸ್ಸಾ, ಮಧ್ಯಪ್ರದೇಶ, ಆಂಧ್ರ್ರಪ್ರದೇಶ, ಕನರ್ಾಟಕ, ತಮಿಳುನಾಡು ಹಾಗೂ ಕೇರಳಗಳು ಬರುತ್ತವೆ.

ಆದರೆ ಈಗ ಮಾವೋಗಳ ಈ ರಣತಂತ್ರ ಬದಲಾಗಿದೆ ಎನ್ನಲಾಗುತ್ತಿದೆ. ಕೆಂಪುಪಟ್ಟಿಗೆ ಬದಲು ಇಡೀ ಭಾರತವನ್ನು ಹಂತಹಂತವಾಗಿ ಆವರಿಸಿಕೊಂಡು ಆಕ್ರಮಿಸುವ ಯೋಜನೆ ರೂಪಿಸಲಾಗಿದೆ ಎನ್ನಲಾಗುತ್ತಿದೆ. ನಗರ ಪ್ರದೇಶಗಳ ಮಧ್ಯಮ ವರ್ಗದ ಜನರಿಗೂ ಮಂಕುಬೂದಿ ಎರಚಿ ನಗರಗಳಲ್ಲೂ ಬೇರುಗಳನ್ನು ಹುಡುಕುವತ್ತ ತಾವು ಗಮನ ಹರಿಸಿರುವುದಾಗಿ ಸಿಪಿಐ (ಮಾವೋ) ಮುಖ್ಯಸ್ಥ ಗಣಪತಿ ಸ್ವತಃ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. `ನಾವು ಹಿಂಸಾತ್ಮಕ ಹಾಗೂ ಅಹಿಂಸಾತ್ಮಕ ಎರಡೂ ರೀತಿಯ ಹೋರಾಟ ಮಾಡುತ್ತೇವೆ' ಎಂದು ಆತ ಹೇಳಿದ್ದಾನೆ.

ಫೆಬ್ರವರಿ 2007ರಲ್ಲಿ ನಡೆದ ಮಾವೋವಾದಿಗಳ ಒಂಬತ್ತನೇ ಮಹಾಧಿವೇಶನ ಸಂದರ್ಭದ ವರದಿಗಳ ಪ್ರಕಾರ, ಹೊಸ ಮಾವೋ ರಣತಂತ್ರಗಳು ಯೋಜನಾ ಹಂತವನ್ನು ದಾಟಿ ಅನುಷ್ಠಾನದ ಹಂತವನ್ನು ಎಂದೋ ತಲುಪಿವೆ. ಮಾವೋಗಳು ನೇಪಾಳದಲ್ಲಿ ಕಂಡ ಯಶಸ್ಸು ಅನೇಕ ಹೊಸ ಕ್ರಮಗಳಿಗೆ ಚಾಲನೆ ನೀಡಿದೆ. ``ಭಾರತ ಸಕರ್ಾರದ ಶಕ್ತಿ ಹಾಗೂ ದೌರ್ಬಲ್ಯಗಳೆರಡನ್ನೂ ಆಳವಾಗಿ ಅಧ್ಯಯನ ಮಾಡಿದ್ದೇವೆ. ಎಂತಹ ಶಕ್ತಿಶಾಲಿ ಶತ್ರುವಿಗೂ ಕೆಲವು ದುರ್ಬಲ ಅಂಶಗಳು ಇದ್ದೇ ಇರುತ್ತವೆ. ಅವುಗಳನ್ನು ನಾವು ಸರಿಯಾಗಿ ಗುರುತಿಸಿ ಭಾರಿ ಹೊಡೆತಗಳನ್ನು ಕೊಟ್ಟರೆ ವಿಜಯ ಸಿಕ್ಕೇ ಸಿಗುತ್ತದೆ'' ಎಂದು ಗಣಪತಿ ಹೇಳಿರುವುದಾಗಿ ಉದ್ಧರಿಸಲಾಗಿದೆ. ಈಗಾಗಲೇ ಮಾವೋ ಉಗ್ರರು ಭಾರಿ ದಾಳಿಯ ಸಂಪ್ರದಾಯ ಆರಂಭಿಸಿದ್ದಾರೆ. ಇದು ನೇಪಾಳದ ಮಾದರಿಯ ಅನುಕರಣೆ. 2004ರಲ್ಲಿ ಒರಿಸ್ಸಾದ ಕೋರಾಪಟ್ನಲ್ಲಿ ಭಾರಿ ದಾಳಿ ನಡೆಯಿತು. 2005ರಲ್ಲಿ 3 ದಾಳಿ ನಡೆಯಿತು. 2006ರಲ್ಲಿ 9 ದಾಳಿ ನಡೆದಿದೆ. ಜೂನ್ 2007ರ ಹೊತ್ತಿಗೆ 12 ಭಾರಿ ದಾಳಿಗಳು ನಡೆದಿವೆ. ಇದು ಹೊಸ ಮಾವೋ ಟ್ರೆಂಡ್. ಇವನ್ನೆಲ್ಲ ಗೃಹ ಸಚಿವಾಲಯ ಜೂನ್ 28, 2007ರಲ್ಲಿ ಸಿದ್ಧಪಡಿಸಿರುವ ವರದಿಯಲ್ಲಿಯೇ ವಿಶ್ಲೇಷಿಸಲಾಗಿದೆ.

ವಾಸ್ತವ ನಮಗೆ ಗೊತ್ತೇ ಇದೆ. ಸುರಕ್ಷಾ ತಜ್ಷರೇನೋ ವರದಿ ಸಿದ್ಧಪಡಿಸುತ್ತಾರೆ. ಆದರೆ ರಾಜಕಾರಣಿಗಳು ಅದರ ಮೇಲೆ ಭದ್ರವಾಗಿ, ಅಲ್ಲಾಡದೇ ಕುಳಿತುಬಿಡುತ್ತಾರೆ.

ಇಂತಹ ಮುಖಂಡರಿರುವ ದೇಶಕ್ಕೆ ಬೇರೆ ಶತ್ರುಗಳೇಕೆ ಬೇಕು?

ಇವರೇ ಸಾಕು.

ಸೋಮವಾರ, ಮಾರ್ಚ್ 30, 2009

`ಮುಜಾಹಿದ್ದೀನ್' ತಾಳಕ್ಕೆ ವಿಶ್ವಸಂಸ್ಥೆಯ ಹೆಜ್ಜೆ!!

ಮಹತ್ವದ ಘಟನೆಯೊಂದು ಸದ್ದಿಲ್ಲದೇ ನಡೆಯುತ್ತಿದೆ. ಅದು ನಡೆಯುತ್ತಿರುವ ಸ್ಥಳ ವಿಶ್ವಸಂಸ್ಥೆಯ ಸಾಮಾನ್ಯ ಸಭೆ. ಅದೇನಾದರೂ ಯಶಸ್ವಿಯಾದರೆ ಜಗತ್ತಿನ ವಿವೇಚನಾಶೀಲ ಜನರನೇಕರು ಹಿಂದೆಂದೂ ಕಾಣದ ರೀತಿಯಲ್ಲಿ ಮಾನವಹಕ್ಕು ಕಳೆದುಕೊಳ್ಳುತ್ತಾರೆ. ಅನೇಕ ದೇಶಗಳ ಜನರ ಬೌದ್ಧಿಕ ಚಿಂತನೆಯ ಹಕ್ಕು ಮೊಟಕುಗೊಳ್ಳುತ್ತದೆ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತದೆ. ಮನಃಸಾಕ್ಷಿ ಮೂಲೆಗುಂಪಾಗುತ್ತದೆ.

ಆದರೂ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವೀರರು ತುಟಿ ಎರಡು ಮಾಡುತ್ತಿಲ್ಲ. ಕಾರಣ ಅದು ನಡೆಯುತ್ತಿರುವುದು ಇಸ್ಲಾಮಿನ ಹೆಸರಿನಲ್ಲಿ. ಅದನ್ನು ನಡೆಸುತ್ತಿರುವುದು ಆರ್ಗನೈಸೇಷನನ್ ಆಫ್ ದಿ ಇಸ್ಲಾಮಿಕ್ ಕಾನ್ಫರೆನ್ಸ್ (ಒವೈಸಿ) - 56 ಮುಸ್ಲಿಂ ದೇಶಗಳ ಒಕ್ಕೂಟ. ನಮ್ಮ `ಸೆಕ್ಯೂಲರ್'ಗಳು ಓವೈಸಿಯನ್ನು ಎದುರಿಸಿ ನಿಲ್ಲುವುದು ಎಲ್ಲಾದರೂ ಉಂಟೆ?

ಯಾವುದು ಆ ಮಹಾ ಘಟನೆ? ಮೊದಲು ಒಂದಿಷ್ಟು ಹಿನ್ನೆಲೆಯ ಮೂಲಕ ವಿಷಯಕ್ಕೆ ಬರೋಣ.

1979ರ ಇರಾನ್ ಇಸ್ಲಾಮೀ ಕ್ರಾಂತಿಯ ನಂತರ ಜಗತ್ತಿನಲ್ಲಿ ಇಸ್ಲಾಮೀ ಭಯೋತ್ಪಾದನೆ ಮೊದಲಿಗಿಂತಲೂ ಬಹಳ ತೀವ್ರಗೊಂಡಿದ್ದು ಹಾಗೂ ಕ್ರಮೇಣ ಜಾಗತಿಕ ಮಟ್ಟದ ಜಿಹಾದ್ಗಳು ಘೊಷಣೆಯಾಗಿದ್ದು ಬಹಳ ಜನರಿಗೆ ಗೊತ್ತಿರುವ ವಿಷಯವೇ. ಆದರೆ ಈ ಬೆಳವಣಿಗೆಗಳ ಫಲಿತವಾಗಿ ಇಸ್ಲಾಮ್ ಮತವನ್ನು ಸಾರ್ವತ್ರಿಕ ವಿಮಶರ್ೆಗೆ ಒಳಪಡಿಸುವ ಬೆಳವಣಿಗೆಳೂ ಆದವು. ಪರಿಣಾಮವಾಗಿ ಇಸ್ಲಾಮ್ ಚಚರ್ಾವಸ್ತುವಾಯಿತು. ಇದು ಮೂಲಭೂತವಾದಿಗಳಿಗೆ ನುಂಗಲಾರದ ತುತ್ತಾಯಿತು.

`ಇಸ್ಲಾಮ್ ಎಂದೂ ಸಹ ಚಚರ್ಿಸಲ್ಪಡಕೂಡದು. ಅದನ್ನು ಸಮಗ್ರವಾಗಿ ಎಲ್ಲರೂ ಸ್ವೀಕರಿಸಬೇಕು. ಉಲೇಮಾಗಳು, ಮೌಲಾನಾಗಳು ಕಾಲಕಾಲಕ್ಕೆ ತಿಳಿಸುವ ಹಾಗೆ ನಡೆದುಕೊಳ್ಳುತ್ತಾ ಹೋಗಬೇಕು' ಎಂಬುದು ಮೂಲಭೂತವಾದಿಗಳ ಲಾಗಾಯ್ತಿನ ನಿಲುವು. ಮಧ್ಯಯುಗದಲ್ಲಿ ಮತ್ತು ತೀರಾ ಈಚಿನವರೆಗೂ ಈ ರೀತಿ ಮಾಡುವಲ್ಲಿ ಈ ಮುಜಾಹಿದ್ದೀನ್ಗಳು (ಮತದ ಪರವಾದ ಹೋರಾಟಗಾರರು, ಸೈನಿಕರು) ಯಶಸ್ವಿಯಾಗಿದ್ದರು. ಔರಂಗಜೇಬನ ಅಟ್ಟಹಾಸದ ನಡುವೆಯೂ ಇಸ್ಲಾಮ್ ವಿಮಶರ್ಾ ವಸ್ತುವಾಗಲೇ ಇಲ್ಲ, ಎಂಬುದು ಗಮನಾರ್ಹ.

ಆದರೆ ಇದು ಮಾಹಿತಿ ಯುಗ. ಜೊತೆಗೆ ವಿವೇಚನಾಶೀಲತೆಯ ಕ್ರಾಂತಿ 19-20ನೇ ಶತಮಾನಗಳಲ್ಲಿ ಆಗಿಹೋಗಿದೆ. ಹಿಂದೂ ಧರ್ಮ, ಕ್ರೈಸ್ತ ಮತ - ಎಲ್ಲವೂ ವಿಚಾರವಿಮಶರ್ೆಗೆ ಒಳಗಾಗಿವೆ, ಆಗುತ್ತಲೇ ಇವೆ. ಇಂತಹ ವೈಚಾರಿಕತೆಯ ಫಲಿತವಾಗಿ ನಮ್ಮಲ್ಲಿ ಸಾಕಷ್ಟು ಸುಧಾರಣೆಗಳೂ ಆಗುತ್ತಿವೆ.

ಈಗ ವಿಚಾರ-ವಿಮಶರ್ೆಗಳನ್ನು ತಡೆಯುವುದು ಅಸಾಧ್ಯ. ಒಂದೆಡೆ ಜಿಹಾದಿ ಗುಂಪುಗಳು ಬಹಿರಂಗವಾಗಿ ಇಸ್ಲಾಮಿನ ಆಡಳಿತ ಸ್ಥಾಪನೆಗಾಗಿ ಕರೆಕೊಡುತ್ತಿದ್ದರೆ, ಈ ಮಾಹಿತಿ ಯುಗದಲ್ಲಿ ಜನರು `ಹೌದಾ, ಇಸ್ಲಾಮಿನಲ್ಲಿ ಹಾಗೆ ಹೇಳಲಾಗಿದೆಯಾ?' ಎಂಬ ಕುತೂಹಲದಿಂದ ಅಧ್ಯಯನ ಮಾಡೇ ಮಾಡುತ್ತಾರೆ. ತಮ್ಮ ಅಭಿಪ್ರಾಯ ಹೇಳೇಹೇಳುತ್ತಾರೆ. ವಾಸ್ತವವಾಗಿ ನಡೆಯುತ್ತಿರುವುದು ಇದೇ.

ಆದರೆ ಚಚರ್್ಗಳಿಗೆ ಮತ್ತು ಮೌಲಾನಾಗಳಿಗೆ ತಮ್ಮ ಮತಗಳ ವಿಚಾರ-ವಿಮಶರ್ೆ ಬೇಕಿಲ್ಲ. ಮತಗಳ ಸಂಪೂರ್ಣ ಹೂರಣ ಬಟಾಬಯಲಾಗಿ ಚಚರ್ಿಸಲ್ಪಡುತ್ತಿದ್ದರೆ ಅವರಿಗೇನು ಕಿಮ್ಮತ್ತು ಸಿಗುತ್ತದೆ? ಯಾವಾಗ ಮತೀಯ ವಿಚಾರವಿಮಶರ್ೆ ತೀವ್ರವಾಯಿತೋ ಆಗ `ಇಸ್ಲಾಮ್ ಮತಕ್ಕೂ ಜಿಹಾದಿ ಗುಂಪುಗಳ ಕ್ರಿಯೆಗಳಿಗೂ ಸಂಬಂಧವಿಲ್ಲ' ಎಂಬ ಪ್ರಚಾರವನ್ನು ನಡೆಸಬೇಕಾದ ಅನಿವಾರ್ಯತೆ ಕೆಲವರಿಗೆ ಉಂಟಾಯಿತು. `ಹಾಗಾದರೆ ಅದು ಹೇಗೆ? ಇಲ್ಲಿ ಹೀಗೆ ಹೇಳಿದೆಯಲ್ಲ? - ಎಂಬ ಪ್ರಶ್ನೆಗಳೂ ಎದುರಾದವು. ಎಷ್ಟೋ ಧೈರ್ಯವಂತ ಸ್ವಮತೀಯರೂ ಸುಧಾರಣೆಯ ಕುರಿತು ಬಹಿರಂಗವಾಗಿ ಮಾತನಾಡತೊಡಗಿದರು.

ಸಮಸ್ಯೆ ಶುರುವಾಗಿದ್ದೇ ಇಲ್ಲಿ. ಮತಧರ್ಮಗಳನ್ನು ಕುರಿತ, ಅದರಲ್ಲೂ ಇಸ್ಲಾಮ್ ಮತವನ್ನು ಕುರಿತ ವಿಚಾರವಿಮಶರ್ೆಗಳಿಗೆ ಹೇಗಾದರೂ ಮಂಗಳ ಹಾಡಬೇಕು ಎಂಬ ಪ್ರಯತ್ನವನ್ನು ಓವೈಸಿ 1999ರಲ್ಲಿ ಆರಂಭಿಸಿತು. `ಇಸ್ಲಾಮಿನ ಅವಹೇಳನ ನಡೆಯುತ್ತಿದೆ' ಎಂದು 56 ದೇಶಗಳು ಒಟ್ಟಾಗಿ ಬೊಬ್ಬೆಯಿಟ್ಟವು. ಈಗ ನಿಷ್ಕ್ರಿಯವಾಗಿರುವ ಮಾವನಹಕ್ಕು ಆಯೋಗದಲ್ಲಿ ಪ್ರತಿ ವರ್ಷವೂ ಇಸ್ಲಾಮಿನ ಪರವಾಗಿ ನಿರ್ಣಯಗಳನ್ನು ಮಂಡಿಸಿ ಅನುಮೋದಿಸಲಾಯಿತು. ಈ ಪ್ರಕ್ರಿಯೆ 2001ರ ಸೆಪ್ಟೆಂಬರ್ 11ರ ಭಯೋತ್ಪಾದಕ ಕೃತ್ಯದ ನಂತರದ ಸ್ವಲ್ಪ ಕಳೆಗುಂದಿತು. ಆದರೆ 2005ರ ಡ್ಯಾನಿಷ್ ಪತ್ರಿಕೆಯ ಮುಹಮ್ಮದ್ ವ್ಯಂಗ್ಯಚಿತ್ರಗಳ ಗಲಾಟೆಯ ನಂತರ ಮತ್ತೆ ಹೊಸ ಹುರುಪು ಪಡೆಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ಲಾಮ್ ಕುರಿತ ವಿಮಶರ್ೆಗಳಿಗೆ ಸಂಪೂರ್ಣ ನಿಷೇಧ ಹಾಕಿಸಲು ರಾಜತಾಂತ್ರಿಕ ಚಟುವಟಿಕೆಗಳು ಬಿರುಸುಗೊಂಡವು. ಈ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಜನರಲ್ ಅಸೆಂಬ್ಲಿ) ನಿರ್ಣಯಗಳನ್ನು ಮಂಡಿಸಲಾಯಿತು.

`ಜಗತ್ತಿನಲ್ಲಿ ಮತ-ಧರ್ಮಗಳ ನಿಂದನೆ, ಅವಹೇಳನ ತೀವ್ರವಾಗುತ್ತಿದೆ. ಅದನ್ನು ತಡೆಗಟ್ಟಬೇಕು. ಈ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಷೇಧ ಹಾಕಬೇಕು. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಈ ಕುರಿತು ಕಾನೂನುಗಳನ್ನು ಸೃಷ್ಟಿಸಲು ಅವುಗಳ ಮೇಲೆ ಒತ್ತಡ ಹಾಕಬೇಕು' ಎಂಬ ಧ್ವನಿಯುಳ್ಳ ಈಚಿನ ನಿರ್ಣಯದ ಕರಡನ್ನು ( ಈ ಕರಡಿನ ಪ್ರತಿ ನನ್ನ ಬಳಿ ಇದೆ) ಓವೈಸಿ ಪರವಾಗಿ ಪಾಕಿಸ್ತಾನ ಸಿದ್ಧಪಡಿಸಿದೆ. 2008ರ ಡಿಸೆಂಬರ್ನಲ್ಲಿ ಮತಕ್ಕೆ ಹಾಕಿದಾಗ ಈ ನಿರ್ಣಯವನ್ನು ಅಂಗೀಕರಿಸಿದ ರಾಷ್ಟಗಳದೇ ಮೇಲುಗೈ ಆಗಿದೆ!

ಇದು ಆಘಾತಕಾರಿ ಸುದ್ದಿ. ಈಚೆಗೆ ಈ ನಿರ್ಣಯದ ಹೊಸ ಕರಡನ್ನು ಪಾಕಿಸ್ತಾನ ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ (ಯೂಎನ್ ಹ್ಯೂಮನ್ ರೈಟ್ಸ್ ಕೌಂಸಿಲ್) ರಾಜತಾಂತ್ರಿಕರಿಗೆ ವಿತರಿಸಿದೆ. ಮಾಚರ್್ ಅಂತ್ಯದಲ್ಲಿ (ನೀವು ಈ ಲೇಖನ ಓದುವ ಹೊತ್ತಿಗೆ) ಅದನ್ನು ಮತಕ್ಕೆ ಹಾಕುವ ನಿರೀಕ್ಷೆ ಇದೆ.

ಇನ್ನೂ ಒಂದು ಆಘಾತಕಾರಿ ಸುದ್ದಿಯಿದೆ. ಕಳೆದ ಡಿಸೆಂಬರ್ನಲ್ಲಿ ಇದನ್ನು ಮತಕ್ಕೆ ಹಾಕಿದಾಗ ಎಮ್. ಎಫ್. ಹುಸೇನನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದ್ದ `ಮಹಾನ್' ಭಾರತ ಸಕರ್ಾರ ಈ ನಿರ್ಣಯವನ್ನು ವಿರೋಧಿಸಲಿಲ್ಲ. ಕಡೇ ಘಳಿಗೆಯಲ್ಲಿ ಯಾವ ಪಕ್ಷಕ್ಕೂ ಮತ ಹಾಕದೇ ತಟಸ್ಥವಾಗಿ ಉಳಿಯಿತು. ಇದರಿಂದ ಅದು ನಿರ್ಣಯವನ್ನು ಪರೋಕ್ಷವಾಗಿ ಬೆಂಬಲಿಸದಂತೆಯೇ ಆಯಿತು.

ಓವೈಸಿಯ 56 ದೇಶಗಳ ಜೊತೆಗೆ ಕಮ್ಯೂನಿಸ್ಟ್ ಚೀನಾ, ಕ್ಯೂಬಾ ಹಾಗೂ ರಷ್ಯಾ ಸಿಂಗಪುರ, ಥಾಯ್ಲ್ಯಾಂಡ್, ನಿಕಾರಾಗುವಾ, ವೆನಿಜ್ಯೂಯೇಲಾ, ದಕ್ಷಿಣ ಆಫ್ರಿಕಾ ಮೊದಲಾದ ದೇಶಗಳು ನಿರ್ಣಯದ ಪರವಾಗಿ ಮತ ಹಾಕಿದವು. ಪಶ್ಚಿಮದ ದೇಶಗಳು, ಆಸ್ಟ್ರೇಲಿಯಾ, ಉಕ್ರೇನ್ ವಿರುದ್ಧವಾಗಿ ಮತ ಹಾಕಿದವು. ಭಾರತ, ಜಪಾನ್, ಬ್ರೆಜಿಲ್, ಮೆಕ್ಸಿಕೋ ಮೊದಲಾದ ಕೆಲವು ದೇಶಗಳು ತಟಸ್ಥ (ಶಿಖಂಡಿ) ಮಾರ್ಗ ಹಿಡಿದವು. ನ್ಯೂಜಿಲೆಂಡ್ ಮತ್ತು ಕೆಲವು ಚಿಲ್ಲರೆ ದೇಶಗಳು ಗೈರುಹಾಜರಾಗುವ ಮೂಲಕ ಪರೋಕ್ಷವಾಗಿ ನಿರ್ಣಯದ ಪರವಾದ ಬಲವನ್ನೇ ಹೆಚ್ಚಿಸಿದವು.

ಆದರೆ ಈ ನಿರ್ಣಯ ಮತದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ, ಭಯೋತ್ಪಾದನೆಯ ಕುರಿತು ಮೌನವಹಿಸಿದೆ. ಪಾಕಿಸ್ತಾನದ ಮಾನವಹಕ್ಕುವಾದಿಗಳೂ ಸೇರಿದಂತೆ ವಿಶ್ವಾದ್ಯಂತ ಮಾನವಹಕ್ಕುವಾದಿಗಳು ಅದನ್ನು ವಿರೋಧಿಸಿದ್ದಾರೆ. ಮಹಿಳೆಯರ ಸ್ಥಾನಮಾನದ ಬಗ್ಗೆಯೂ ಅದು ಚಕಾರವೆತ್ತಿಲ್ಲ. ಕುರಾನ್ ಸೇರಿದಂತೆ ಎಷ್ಟೋ ಮತೀಯ ಗ್ರಂಥಗಳಲ್ಲೇ ಇತರ ಮತಧರ್ಮಗಳ ನಿಂದನೆ, ಟೀಕೆ ಕಂಡುಬರುತ್ತದೆ. ಕುರಾನ್ನಲ್ಲಿ ಕ್ರೈಸ್ತರನ್ನು ಟೀಕಿಸಲಾಗಿದೆ. ಯಹೂದ್ಯ ಮತವನ್ನು ವಾಚಾರಗೋಚರವಾಗಿ ನಿಂದಿಸಲಾಗಿದೆ. ಎಲ್ಲಕ್ಕಿಂತಲೂ ತೀವ್ರವಾಗಿ ವಿಗ್ರಹಪೂಜೆ ಮಾಡುವ ಹಿಂದೂ ಧರ್ಮದಂತಹ ಧರ್ಮಗಳನ್ನು ಅವಹೇಳನ ಮಾಡಿ, ಖಂಡಿಸಿದ್ದಲ್ಲದೇ ಅವುಗಳ ಮೇಲೆ ಯುದ್ಧವನ್ನೂ ಸಾರಲಾಗಿದೆ. ಹೀಗಿರುವಾಗ ಈ ಕುರಿತು ಓವೈಸಿ ನಿರ್ಣಯ ಏನನ್ನೂ ಹೇಳದೇ ಮಣವವಾಗಿರುವುದು ಏಕೆ?

ಮತಗಳ ಅವಹೇಳವನ್ನು ತಡೆಯಬೇಕಾದರೆ ಮೊದಲು ಮತೀಯ ಗ್ರಂಥಗಳ ಮೂಲವೇ ಆರಂಭಿಸಬೇಕಾಗುತ್ತದೆ. ಅನ್ಯಮತಗಳ ವಿಮಶರ್ೆ ಮಾಡದ ಹೊಸ ಮತಗಳು ಯಾವುವು? ಹಳೆಯ ಮತಗಳ ಅವಹೇಳನ, ಮೂದಲಿಕೆ ಮಾಡದ ಹೊಸ ಪ್ರವಾದಿಗಳು ಯಾರು? ಹೀಗಾಗಿ ಮತೀಯ ಗ್ರಂಥಗಳ ಪರಿಷ್ಕಾರ ಹಾಗೂ ಪುನರ್ ಸಂಕಲನದ ಮೂಲಕವೇ ಮತಗಳ ಅವಹೇಳನ ತಡೆಯುವುದು ಒಳ್ಳೆಯ ಕ್ರಮ, ಅಲ್ಲವೆ?

ಒಂದುವೇಳೆ ಈ ನಿರ್ಣಯ ಸಂಪೂರ್ಣವಾಗಿ ಜಾರಿಗೆ ಬಂದಲ್ಲಿ ಏನಾಗುತ್ತದೆ? ಪಾಕಿಸ್ತಾನದಲ್ಲಿರುವ ಮತೀಯ ಕಾನೂನುಗಳು ಇನ್ನಷ್ಟು ಬಿಗಿಯಾಗುತ್ತವೆ. ಅಲ್ಲಿನ ಸಾಮಾನ್ಯ ಜನರು ತಾಲಿಬಾನ್ ಅನ್ನು ನಿಂದಿಸುವುದೂ ಅಸಾಧ್ಯವಾಗುತ್ತದೆ. ಸೌದಿ ಅರೇಬಿಯಾ ಇನ್ನಷ್ಟು ಅಧ್ವಾನವೆದ್ದು ಹೋಗುತ್ತದೆ. `ಸೆಕ್ಯೂಲರ್' ಭಾರತದಲ್ಲಿ ಮೊದಲೇ ಸಾಚಾರ್ ಶಕೆ ಆರಂಭವಾಗಿದೆ. ಜೊತೆಗೆ ದೇವಬಂದ್ ಫತ್ವಾಗಳೂ ಸೆಕ್ಯೂಲರ್ ಧುರಿಣರೂ ಸೇರಿಕೊಂಡು ಏನೇನು ಹೊಸ ಕಾನೂನುಗಳನ್ನು ಮಾಡುತ್ತಾರೋ ಹೇಳಲಾಗದು.

ಅಂದಹಾಗೆ, ಜೀನಿವಾದ `ಹ್ಯೂಮನ್ ರೈಟ್ಸ್ ಕೌಂಸಿಲ್'ನಲ್ಲಿ ಇಸ್ಲಾಮಿಕ್ ರಾಷ್ಟ್ರಗಳದೇ ಮೆಜಾರಿಟಿ! ಜೊತೆಗೆ ರಷ್ಯಾ, ಚೀನಾ, ಕ್ಯೂಬಾಗಳಂತಹ ಪ್ರಜಾತಂತ್ರ ವಿರೋಧಿ ರಾಷ್ಟ್ರಗಳ ಬೆಂಬಲದಿಂದ ನಿರ್ಣಯ ಅಂಗೀಕಾರವಾಗುವುದರಲ್ಲಿ ಸಂಶಯವೇ ಇಲ್ಲ.

ಇದರಿಂದ ಕ್ರಮೇಣ ಏನಾಗುತ್ತದೆ? ಒಂದು ಬೆಳವಣಿಗೆ ಎಂದರೆ, ಎಷ್ಟೋ ದೇಶಗಳಲ್ಲಿ `ಮಾನವ ಹಕ್ಕು' ಮತ್ತು `ಮುಕ್ತ ವಿವೇಚನಾ ಸ್ವಾತಂತ್ರ್ಯ' ಎಂಬ ಪರಿಕಲ್ಪನೆಗಳೇ ಮಾಯವಾಗುತ್ತವೆ; `ಮತಗಳ ಮಾನನಷ್ಟ' ತಡೆಯಲು ಹೋಗಿ ಮನುಷ್ಯರ ಮನುಷ್ಯತ್ವಕ್ಕೇ ಭಂಗ ಬರಬಹುದು. ಇನ್ನೊಂದು ಬೆಳವಣಿಗೆ ಎಂದರೆ ಕೆಲವು ಬಿಡಿ ಬಿಡಿ ದೇಶಗಳು ಮನುಷ್ಯತ್ವವನ್ನೇ ಎತ್ತಿಹಿಡಿಯಲು ನಿರ್ಧರಿಸುತ್ತವೆ; ಇದರಿಂದ ಕೋಮುವಾದಿಗಳ ಜೊತೆಗಿನ ವೈರತ್ವ ಹೆಚ್ಚಾಗುತ್ತದೆ; ಮತೀಯ ಸಂಘರ್ಷ ಇನ್ನಷ್ಟು ತೀವ್ರವಾಗುತ್ತದೆ.
ವಿಷಮ ಪರಿಸ್ಥಿತಿಗಳಿಗೆ ಕಾರಣವಾಗುವ ಇಂತಹ ಒಂದು ಮತೀಯ ನಿರ್ಣಯ ಬೇಕಿತ್ತೆ? `ಹೌದು' ಎಂಬುದೇ ಮೂಲಭೂತವಾದಿಗಳು ಕೊಡುವ ಉತ್ತರ. ಅದು ನಿರೀಕ್ಷಿತವೇ. ಆದರೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಅದನ್ನು ವಿಶ್ವಸಂಸ್ಥೆಯ ಅಂಗಳದಲ್ಲಿ ಬೆಂಬಲಿಸುತ್ತಿರುವ ಇತರ ದೇಶಗಳನ್ನು ಏನೆಂದು ಕರೆಯಬೇಕೋ ತಿಳಿಯುತ್ತಿಲ್ಲ. ದುರದೃಷ್ಟವೆಂದರೆ ಈ ಗುಂಪಿನಲ್ಲಿ ಭಾರತವೂ ಸೇರಿಕೊಂಡಿರುವುದು.


ವರುಣ್ ವಿರುದ್ಧ `ಸೆಕ್ಯೂಲರ್' ಮಾಧ್ಯಮಗಳ ಸಮರ?

ವರುಣ್ ಗಾಂಧಿ ಈಗ `ಸೆಕ್ಯುಲರ್' ಮಾಧ್ಯಮಗಳ ಬಲಿಪಶು ಎನ್ನುವುದರಲ್ಲಿ ಸಂಶಯವೇ ಇಲ್ಲ. ಅಫ್ಜಲ್ ಗುರುವಿಗೆ ಕ್ಷಮಾದಾನ ನೀಡಬೇಕೆಂದು ವದಿಸುವ ಸೆಕ್ಯೂಲರ್ ಬುದ್ಧಿಜೀವಿಗಳು ವರುಣ್ ವಿರುದ್ಧ ರಾಷ್ಟ್ರೀಯ ಸುರಕ್ಷಾ ಕಾಯ್ದೆಯನ್ನು ಅನ್ವಯಿಸಿರುವುದನ್ನು ಸ್ವಾಗತಿಸಿದ್ದಾರೆ. ಅವರ ನೆಚ್ಚಿನ ಯುವನೇತಾರ ರಾಹುಲ್ ಗಾಂಧಿ. ಇದು ಮಹಾಭಾರತ ಕುರುಕ್ಷೇತ್ರ ಸಮಯದ ದಾಯಾದಿ ಕಲಹದ ವಾತಾವರಣವನ್ನೇ ಹೋಲುತ್ತದೆ.

ನಮ್ಮ ಸೆಕ್ಯುಲರ್ ಚಾನೆಲ್ಗಳ ದ್ವಿಮುಖ ನೀತಿ ತಿಳಿಯಲೊಂದು ಉದಾಹರಣೆ ನೋಡೋಣ. ವರುಣ್ ಮಾಡಿದರೆನ್ನಲಾದ ವಿವಾದಿತ (ಹಾಗೂ ಆಪಾದಿತ) ಭಾಷಣದ ವೀಡಿಯೋ ತೋರಿಸುವ ಮೊದಲು ಸಿಎನ್ಎನ್-ಐಬಿಎನ್ ಚಾನೆಲ್ ಒಂದು ಸ್ವಲ್ಪವೂ ಹಿಂಜರಿಯಲಿಲ್ಲ. ಆದರೆ ಮನಮೋಹನ್ ಸಿಂಗ್ ಸಕರ್ಾರ ಈಚೆಗೆ ವಿಶ್ವಾಸ ಮತ ಯಾಚಿಸಿದ್ದಾಗ ನಡೆಸಲಾದ `ಸ್ಟಿಂಗ್ ಆಪರೇಷನ್'ನಲ್ಲಿ ಭಾಗಿಯಾಗಿದ್ದೂ ಸಹ ಅಮರ್ ಸಿಂಗ್ ಲಂಚಾವತರಾದ ವೀಡಿಯೋ ತೋರಿಸಲು ಚಾನೆಲ್ ನಿರಾಕರಿಸಿತ್ತು!

ಸಕರ್ಾರದ ಪರವಾಗಿ ಮತಹಾಕಲು ಅಥವಾ ಮತದಾನದಲ್ಲಿ ಪಾಲುಗೊಳ್ಳದೇ ಇರಲು ತನ್ನ ಸಂಸದರಿಗೆ ಅಮರ್ ಸಿಂಗ್ ಕೋಟಿ ರೂಪಾಯಿ ಲಂಚ ನೀಡಿದರೆಂದು ಬಿಜೆಪಿ ಲೋಕಸಭಾಧ್ಯಕ್ಷ ಸೋಮನಾಥ ಚಟಜರ್ಿಗೆ ಅಧಿಕೃತವಾಗಿ ದೂರು ನೀಡಿ ಕೋಟಿ ರೂಪಾಯಿಗಳ ನೋಟಿನ ಕಟ್ಟುಗಳನ್ನು ಲೋಖಸಭೆಯಲ್ಲಿ ತೋರಿಸಿತ್ತು. `ಲಂಚದ ಘಟನಾವಳಿಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಸಿಎನ್ನ್-ಐಬಿಎನ್ ವಾಹಿನಿಯಲ್ಲಿ ಬರುತ್ತೆ, ನೋಡುತ್ತಿರಿ' ಎಂದು ಬಿಜೆಪಿ ಒಂದು ಹಂತದಲ್ಲಿ ಪ್ರಕಟಿಸಿತ್ತು. ಆದರೆ ಟಿವಿ ವಾಹಿನಿ ಈ ದೃಶ್ಯಗಳನ್ನು ಪ್ರಸಾರ ಮಾಡಲೇ ಇಲ್ಲ!

ರಾಜದೀಪ್ ಹಾಗೆ ಮಾಡಿದ್ದರೆ ಇಡೀ ದೇಶದ ತುಂಬಾ ಲಂಚಾವತಾರದ ದೃಶ್ಯಗಳು ರಾರಾಜಿಸುತ್ತಿದ್ದವು. ಮನಮೋಹನ್ ಸಕರ್ಾರ ಗೆಲ್ಲುವುದು ಕಷ್ಟವಾಗುತ್ತಿತ್ತು. ಅವರು ಹಾಗೆ ಮಾಡದಿದ್ದುದರಿಂದ ಸಕರ್ಾರಕ್ಕೆ ಅನುಕೂಲವಾಯಿತು. ಬಿಜೆಪಿ ಬಹಳ ಕಷ್ಟಪಟ್ಟು ಸ್ಟಿಂಗ್ ಆಪರೇಷನ್ ನಡೆಸಿತ್ತು. ಅದರ ಚಿತ್ರೀಕರಣದ ಹೊಣೆಯನ್ನು ಐಬಿನ್ ಮುಖ್ಯ ಸಂಪಾದಕ ಸದರ್ೇಸಾಯಿಗೆ ವಹಿಸಲಾಗಿತ್ತು. ಹಾಗಿದ್ದರೂ ಆ ದೃಶ್ಯಗಳನ್ನು ಟಿವಿಯಲ್ಲಿ ತೋರಿಸಲಿಲ್ಲ! `ಈ ಸ್ಟಿಂಗ್ ಆಪರೇಷನ್ನಲ್ಲಿ ನಾವು `ಗೋಡೆಯ ಮೇಲಿನ ನೊಣಗಳು' ಅಷ್ಟೇ. ನಡೆಯುತ್ತಿದ್ದ ಘಟನೆಗಳನ್ನು ಮೂರನೆಯವರಾಗಿ ಚಿತ್ರೀಕರಿಸಿದ್ದೇವೆ. ನಾವು ಘಟನೆಯಲ್ಲಿ ಭಾಗಿಗಳಲ್ಲ. ನಮ್ಮ ತನಿಖೆ ಅಪೂರ್ಣವಾಗಿತ್ತು, ಟೇಪು ಮತ್ತು ಅದರ ಲಿಪ್ಯಂತರ ಪ್ರತಿಗಳನ್ನು ವಕೀಲ ಹರೀಶ್ ಸಾಳ್ವೆಗೆ ತೋರಿಸಿದೆವು. ಅವರು ತನಿಖೆ ಅಪೂರ್ಣವಾಗಿದೆ, ಇದನ್ನು ಪ್ರಸಾರ ಮಾಡಬೇಡಿ ಎಂದು ಸಲಹೆ ನೀಡಿದರು. ಆದ್ದರಿಂದ ನಾವದನ್ನು ಪ್ರಸಾರ ಮಾಡಲಿಲ್ಲ. ಒಂದು ಸ್ವಲ್ಪವೂ ಎಡಿಟಿಂಗ್ ಮಾಡದೇ ಎಲ್ಲ ಟೇಪುಗಳನ್ನೂ ಸ್ಪೀಕರ್ಗೆ ಪ್ರಾಮಾಣಿಕವಾಗಿ ಕೊಟ್ಟಿದ್ದೇವೆ. ನಾವು ತನಿಖೆ ಮುಗಿಸುವವರೆಗೂ ಬಿಜೆಪಿಯವರು ಕಾಯದೇ ಲೋಕಸಭೆಯಲ್ಲಿ ಹಣದ ಕಟ್ಟುಗಳನ್ನು ತೋರಿಸಿಬಿಟ್ಟರು'' ಎಂಬುದು ರಾಜದೀಪ್ ಚಾನೆಲ್ ನೀಡಿದ ಸಮಜಾಯಿಷಿ. ಆದರೆ ಇಂತಹ ಯಾವುದೇ ಸಬೂಬುಗಳನ್ನು ವರುಣ್ ಗಾಂಧಿ ವಿಷಯದಲ್ಲಿ ಮಾತ್ರ ಅವರು ನೀಡಲಿಲ್ಲ! ಚುನಾವಣಾ ಆಯೋಗಕ್ಕೆ ಸಿಡಿ ಕೊಡುತ್ತೇವೆ, ಟಿವಿಯಲ್ಲಿ ತೋರಿಸುವುದಿಲ್ಲ ಎಂದು ಹೇಳಲಿಲ್ಲ. ಸಂಸದರ ಲಂಚಾವತಾರದ ಪ್ರಕರಣ ಸಕರ್ಾರದ ಪಾಲಿಗೆ ಮುಳುವಾಗುವ ಸಾಧ್ಯತೆ ಇದ್ದಾಗ ಸಿಡಿಯನ್ನು ಪ್ರಸಾರ ಮಾಡದೇ ಸಕರ್ಾರಕ್ಕೆ ನೆರವಾದ ರಾಜ್ದೀಪ್ ವರುಣ್ ವಿಷಯದಲ್ಲಿ ಸಿಡಿಯನ್ಬು ಪ್ರಸಾರ ಮಾಡುವ ಮೂಲಕ ಕಾಂಗ್ರೆಸ್ಸಿಗೆ ನೆರವಾದರು.

ಬಿಜೆಪಿಯ ನೈತಿಕತೆ ಕುರಿತೂ ಪ್ರಶ್ನೆಗಳಿವೆ. ಅದು ಬೇರೆ ವಿಷಯ. ಆದರೆ ಯಾರ ಹೊಲಸು ಸಿಕ್ಕರೂ ಅದನ್ನು ಬಹಿರಂಗ ಪಡಿಸಬೇಕಾದ್ದು ಸಾರ್ವಜನಿಕ ಹಿತಾಸಕ್ತಿಗೆ ಬದ್ಧವಾದ ಪತ್ರಿಕೋದ್ಯಮ. ಸಾರ್ವಜನಿಕ ಹಿತಾಸಕ್ತಿಯೇ ಪತ್ರಿಕೋದ್ಯಮದ ಮೂಲ ಉದ್ದೇಶ. ಪತ್ರಕರ್ತರಿಗೆ ಯಾವ ಪಕ್ಷದ ಮುಲಾಜೂ ಇರಕೂಡದು. ಹಾಗೇ ಇನ್ಯಾವ ಪಕ್ಷದ ಮೇಲೆ ದ್ವೇಷವೂ ಇರಬಾರದು. ಕಂಡಿದ್ದನ್ನು ಕಂಡ ಹಾಗೆ ವರದಿ ಮಾಡುವುದು ಪತ್ರಕರ್ತರ ಧರ್ಮ. ಆದರೆ ಲಭ್ಯವಾದ ಮಾಹಿತಿ ಸತ್ಯವೋ ಅಲ್ಲವೋ ಎಂಬ ಪರಿಶೀಲನೆ ಖಂಡಿತ ಬೇಕು. ವರುಣ್ ವಿಷಯದಲ್ಲೇಕೆ ಕಾನೂನು ತಜ್ಞರ ಸಲಹಯನ್ನು ನಮ್ಮ ಸೆಕ್ಯೂಲರ್ ಮಾಧ್ಯಮ ಮಿತ್ರರು ಕೇಳಲಿಲ್ಲ?

ವರುಣ್ ವಿಷಯದಲ್ಲಿ ಇವರುಗಳು ಕಾಂಗ್ರೆಸ್ಸಿಗೆ ಎರಡು ಉಪಕಾರಗಳನ್ನು ಮಾಡಿದ್ದಾರೆ. ಮೊದಲನೆಯದಾಗಿ, ರಾಹುಲ್ ಮತ್ತು ವರುಣ್ - ನೆಹರೂ/ಗಾಂಧಿ ಪರಿವಾರದ ಈ ದಾಯಾದಿಗಳ ಕಲಹದಲ್ಲಿ, ದಾಯಾದಿಗಳ ರಾಜಕೀಯ ಮೇಲಾಟದಲ್ಲಿ ಪಾತ್ರವಹಿಸಿದ್ದಾರೆ. ಎರಡನೆಯದು ಕಾಂಗ್ರೆಸ್ಸಿಗೆ ಮುಸ್ಲಿಂ ವೋಟ್ ಬ್ಯಾಂಕ್ ಕೈತಪ್ಪದೇ ಇರುವಂತೆ ಸಹಕರಿಸಿದ್ದಾರೆ.


ಸೋಮವಾರ, ಮಾರ್ಚ್ 23, 2009

ವ್ಯಾಪಾರ `ಸತ್ಯಂ', ರಾಜಕೀಯ `ಸುಂದರಂ'!

ಸತ್ಯಂ ಕಂಪೆನಿ ದೇಶದಲ್ಲಿ ಸಾರ್ವಜನಿಕವಾಗಿ ಕಳಂಕ ಹೊತ್ತ ಮೊದಲ ಸಂಸ್ಥೆಯಲ್ಲ. ಕೊನೆಯದೂ ಅಲ್ಲ. ದೇಶದ ದೊಡ್ಡ ಕಳಂಕಿತ ವ್ಯವಸ್ಥೆ ಎಂದರೆ ನಮ್ಮ ರಾಜಕೀಯ. ಆಯಕಟ್ಟಿನ ಸ್ಥಳದಲ್ಲಿರುವ ರಾಜಕಾರಣಿಗಳ ಕೃಪೆ ಇಲ್ಲದೇ ನಮ್ಮಲ್ಲಿ ಒಂದು ತರಗೆಲೆಯೂ ಅಲುಗುವುದಿಲ್ಲ. ಕಾಪರ್ೋರೇಷನ್ ಅಧಿಕಾರಿಗಳ ಕೃಪೆ ಇಲ್ಲದೇ ಇದ್ದರೆ ಕತ್ತಲಲ್ಲಿ ಒಂದು ನಾಯಿಯೂ ಬೊಗಳುವುದಿಲ್ಲ.

`ಕಂಪೆನಿಯ ವ್ಯವಹಾರಗಳನ್ನು ಮುನ್ನಡೆಸಲು ಕೆಲವು ಭರವಸೆಗಳನ್ನು ಕೊಟ್ಟು 1230 ಕೋಟಿ ರೂಪಾಯಿ ಹಣವನ್ನು ಪಡೆದೆ' ಎಂದು ಸತ್ಯಂ ಆಡಳಿತ ಮಂಡಳಿಗೆ ಜನವರಿ 7, 2009ರಲ್ಲಿ ರಂದು ಬರೆದ ಪತ್ರದಲ್ಲಿ ರಾಮಲಿಂಗ ರಾಜು ತಿಳಿಸಿದ್ದಾರೆ. ಈ ಹಣವನ್ನು ಬ್ಯಾಂಕುಗಳು ಕೊಟ್ಟಿಲ್ಲ. ಹಾಗಾದರೆ ಕೊಟ್ವವರು ಯಾರು? ರಾಜಕಾರಣಿಗಳ ಕಪ್ಪು ಹಣವೇನಾದರೂ ಹರಿದುಬಂದಿದೆಯೆ? ಅವರಿಗೆ ಯಾವ ಯಾವ ಭರವಸೆಗಳನ್ನು ನೀಡಲಾಯಿತು? ಇದು ತನಿಖೆಯಾಗಬೇಕಾದ ಅಂಶ.

ಭ್ರಷ್ಟ ರಾಜಕಾರಣಿಗಳು, ಮಾಫಿಯಾ-ಕ್ರಿಮಿನಲ್-ಭೂಗತ ದೊರೆಗಳು, ಭ್ರಷ್ಟ ಸಕರ್ಾರಿ ಅಧಿಕಾರಿಗಳು ತಮ್ಮ ಕಪ್ಪು ಹಣವನ್ನು ಮುಖ್ಯವಾಹಿನಿಯಲ್ಲಿರುವ `ಪ್ರತಿಷ್ಠಿತ' ಉದ್ಯಮಗಳಲ್ಲಿ ಹರಿಯಬಿಡುವುದು ಹೊಸ ಸಂಗತಿ ಏನಲ್ಲ. ಈ ಕುರಿತು ಅಸಂಖ್ಯಾತ ವರದಿಗಳು ಸಿಗುತ್ತವೆ.

ಒಂದು ಉದಾಹರಣೆ. `ಅಬು ಸಲೇಂ, ದಾವೂದ್ ಇಬ್ರಾಹಿಂ ಮುಂತಾದ ದುಬೈ ಮೂಲದ ಭೂಗತ ದೊರೆಗಳು ತಮ್ಮ ಕಪ್ಪು (ಹಾಗೂ ಕ್ರಿಮಿನಲ್) ಹಣವನ್ನು ಭಾರತದ ಜೆಟ್ ಏರ್ವೇಸ್ ಕಂಪೆನಿಯಲ್ಲಿ ತೊಡಗಿಸಿದ್ದಾರೆ ಎಂಬ ಗುಪ್ತಚಾರ ಮಾಹಿತಿ ಸಕರ್ಾರಕ್ಕೆ ಬಂದಿದೆ' ಎಂದು 2002ರ ಏಪ್ರಿಲ್ನಲ್ಲಿ ಪತ್ರಿಕೆಗಳು ವರದಿ ಮಾಡಿದ್ದವು. ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಇಂಟೆಲಿಜೆನ್ಸ್ ಬ್ಯೂರೋ ಈ ಕುರಿತು ಸೂಚನೆ ನೀಡಿತ್ತು. ಗೃಹ ಸಚಿವಾಲಯದೊಡನೆ ಸಮಾಲೋಚಿಸಿ ಮುಂದಿನ ಕ್ರಮದ ಬಗ್ಗೆ ಯೋಚಿಸುವುದಾಗಿ ವಿಮಾನಯಾನ ಸಚಿವಾಲಯ ತಿಳಿಸಿತ್ತು. ಮುಂದೇನಾಯಿತು? ಜೆಟ್ ಏರ್ವೇಸ್ ಮೇಲಿನ ಆಪಾದನೆ ರುಜುವಾತಾಯಿತೆ? ಉತ್ತರ ನಿಮಗೂ ಗೊತ್ತು. ನಮಗೂ ಗೊತ್ತು. ಒಂದು ವೇಳೆ ಇಂಟೆಲಿಜೆನ್ಸ್ ಬ್ಯೂರೋ ಸುಳ್ಳು ಮಾಹಿತಿ ನೀಡಿತ್ತೆ? ಹಾಗಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಕೇಳಲಾಯಿತೆ? ಆ ಕುರಿತು ಯಾವುದೇ ವರದಿಗಳನ್ನು ಓದಿದ ನೆನಪು ನನಗಿಲ್ಲ. ಒಂದು ವಿಷಯ ಗಮನಾರ್ಹ. ಸತ್ಯ ಹೇಳಿದ್ದಕ್ಕಾಗಿ ಮಾರ್ಗರೇಟ್ ಆಳ್ವ ಪದವಿ ಕಳೆದುಕೊಂಡರು. ಸುಳ್ಳು ಹೇಳಿದರೂ ಅಬ್ದುಲ್ ರೆಹಮಾನ್ ಅಂತುಲೆ ತಮ್ಮ ಅಧಿಕಾರ ಉಳಿಸಿಕೊಂಡರು. ಇದು ನಮ್ಮ ದೇಶದ ಸ್ಥಿತಿ.

ಪ್ರತಿ ಉದ್ಯಮಿಗೂ ರಾಜಕೀಯ ನಾಯಕರ ಗೆಳೆತನ ಇದ್ದೇ ಇರುತ್ತದೆ. ಆಳುವವರನ್ನು ಯಾವ ಉದ್ಯಮಿಯೂ ಎದುರು ಹಾಕಿಕೊಳ್ಳುವುದಿಲ್ಲ. ಹಾಗೆಯೇ ಕೆಲವರ ನಡುವೆ ಎವರ್ಗ್ರೀನ್ ಸಂಬಂಧ ಇರುತ್ತದೆ. ಅಂಬಾನಿ, ಸುಬ್ರತೋ ರಾಯ್, ಅಮರ್ ಸಿಂಗ್ ಮುಂತಾದವರ ಗೆಳೆತನ ರಜತ ಪರದೆಯ ಮೇಲೆಯೇ ಕಂಗೊಳಿಸಿದರೆ ಅನೇಕರ ಗೆಳೆತನ `ಪೇಜ್ 3' ಸರಕು. ಇಂತಹ ಗೆಳೆತನ-ನಂಬಿಕೆಗಳಿಕೆ ಕಾನೂನಿನ ತೊಡಕೇನಿಲ್ಲ. ಸ್ನೇಹದಲ್ಲಿ ಯಾವ ತಪ್ಪೂ ಇಲ್ಲ. ಆದರೆ ಇದು ಬರೀ ಕಾಫಿ-ಚಿಪ್ಸ್ ಗೆಳೆತನ ಎಂದುಕೊಳ್ಳುವವರು ಮಧ್ಯಮವರ್ಗದ ಸಂಬಳಗಾರರು ಮಾತ್ರ.

ಭಾರತದ ರಾಜಕಾರಣಿಗಳು, ಉದ್ಯಮಿಗಳು ಮತ್ತು ಇತರೆ ಕಪ್ಪು ಹಣದ `ಕಪ್ಪು ಶ್ರೀಮಂತ'ರು ಸ್ವಿಸ್ ಬ್ಯಾಂಕುಗಳಲ್ಲಿ, ಇತರ ವಿದೇಶಿ ಬ್ಯಾಂಕುಗಳಲ್ಲಿ ಹಣ ಇಡುವುದು ಹೊಸದೇನಲ್ಲ. ಸ್ವಿಸ್ ಬ್ಯಾಂಕುಗಳಲ್ಲಿ ಹಣವಿಟ್ಟ ಜಗತ್ತಿನ ಎಲ್ಲ ಕಪ್ಪು ಶ್ರೀಮಂತರ ಪೈಕಿ ಮೊದಲ ಸ್ಥಾನದಲ್ಲಿರುವುದು ಬಡ ಭಾರತದ ಕಪ್ಪು ಶ್ರೀಮಂತರು! `ಸ್ವಿಸ್ ಬ್ಯಾಂಕಿಂಗ್ ಅಸೋಸಿಯೇಷನ್' 2006ರಲ್ಲಿ ನೀಡಿದ ವರದಿಯ ಪ್ರಕಾರ ಸ್ವಿಸ್ ಬ್ಯಾಂಕುಗಳಲ್ಲಿರುವ ಕಪ್ಪು ಹಣದ ಭಾರತೀಯರ ಒಟ್ಟು ಹಣ 1456 ಶತಕೋಟಿ ಡಾಲರ್! ಅಂದರೆ ನಮ್ಮ ರಾಷ್ಟ್ರದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಸಮನಾದಷ್ಟು ಹಣ! ಅಂದರೆ ಸುಮಾರು 70,000 ಶತಕೋಟಿ ರೂಪಾಯಿಗಳು!!

ಆದರೂ ನಮ್ಮ ಸಕರ್ಾರ ಏಕೆ ಕಪ್ಪು ಹಣದ ವಿವರ ತರಿಸುವುದಿಲ್ಲ? ಎಲ್ಲ ಕಪ್ಪು ಶ್ರೀಮಂತರ ಬಳಿ ಲೆಕ್ಕ ಕೇಳುವುದಿಲ್ಲ? ಏಕೆ ಕಪ್ಪು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ? ಏಕೆಂದರೆ ವಿದೇಶಿ ಬ್ಯಾಂಕುಗಳಲ್ಲಿರುವವರ ಹಣದಲ್ಲಿ ಬಹುಪಾಲು ಸ್ವತಂತ್ರ ಭಾರತದ `ಸ್ವತಂತ್ರ' ರಾಜಕಾರಣಿಗಳದು! ಗಾಜಿನ ಮನೆಯಲ್ಲಿರುವವರು ಎಂದಿಗೂ ಪಕ್ಕದ ಮನೆಯ ಮೇಲೆ ಕಲ್ಲೆಸೆಯುವುದು ಸಾಧ್ಯವಿಲ್ಲ.

ನಮ್ಮ ಪ್ರಧಾನಿ ಒಬ್ಬ ಅರ್ಥಶಾಸ್ತ್ರಜ್ಞ. `ಬ್ಲ್ಯಾಕ್ ಎಕಾನಮಿ'ಯ ದುಷ್ಪರಿಣಾಮಗಳನ್ನು ಕುರಿತು ಓದಿದವರು, ಬೋಧಿಸಿದವೆರು. ಆದರೆ ಅವರು ಮಾಡಿದ್ದೇನು? ಮುಂದೆ ಓದಿ.

ಆಸ್ಟ್ರಿಯಾ ಹಾಗೂ ಸ್ವಿಡ್ಜರ್ಲ್ಯಾಂಡಿನ ಮಧ್ಯೆ ಇರುವ ಚಿಕ್ಕ ಗುಡ್ಡಗಾಡು ದೇಶದ ಹೆಸರು ಲೀಚ್ಟೆನ್ಸ್ಟೈನ್. ಮಧ್ಯಮವರ್ಗದ ಜನರು ಸಾಮಾನ್ಯವಾಗಿ ಈ ದೇಶದ ಹೆಸರನ್ನೇ ಕೇಳಿರುವುದಿಲ್ಲ. ಆದರೆ ಜಗತ್ತಿನ ಕಪ್ಪು ಶ್ರೀಮಂತರಿಗೆಲ್ಲ ಈ ದೇಶ ಸುಪರಿಚಿತ. ಇಲ್ಲಿ ನೂರಾರು ಭಾರತೀಯ ಕಪ್ಪು ಶ್ರೀಮಂತರು ಹಣ ಇಟ್ಟಿದ್ದಾರೆ. ಈಚೆಗೆ ಜರ್ಮನಿಯ ಸಕರ್ಾರ ಲೀಚ್ಟೆನ್ಸ್ಟೈನ್ ದೇಶದ ಎಲ್ಟಿಜಿ ಬ್ಯಾಂಕಿನಲ್ಲಿ ಜಗತ್ತಿನ ಯಾವ ಯಾವ ದೇಶದ ಕಪ್ಪು ಧನಿಕರು ಎಷ್ಟೆಷ್ಡು ಹಣ ಇಟ್ಟಿದ್ದಾರೆ ಎಂಬ ಪಟ್ಟಿಯನ್ನು ತರಿಸಿಕೊಂಡಿತು.
`ನಮ್ಮ ಬಳಿ ಇಂತಹ ಪಟ್ಟಿ ಇದೆ. ಅದರಲ್ಲಿ ನಿಮ್ಮ ದೇಶದ ಖಾತೆದಾರರ ಬಗ್ಗೆಯೂ ಮಾಹಿತಿ ಇದೆ. ನೀವು ಅಧಿಕೃತವಾಗಿ ಕೇಳಿದರೆ ನಿಮಗೆ ಈ ಮಾಹಿತಿ ನೀಡುತ್ತೇವೆ' ಎಂದು ಜರ್ಮನ್ ಸಕರ್ಾರ ಅನೇಕ ದೇಶಗಳ ಸಕರ್ಾರಕ್ಕೆ ಸಂದೇಶ ಕಳುಹಿಸಿತು. ಭಾರತಕ್ಕೂ ಸಂದೇಶ ಬಂತು. ಅಮೆರಿಕ, ಬ್ರಿಟನ್, ಕೆನಡಾ, ಇಟಲಿ, ಸ್ವೀಡನ್, ನಾವರ್ೆ, ಫಿನ್ಲ್ಯಾಂಡ್, ಐರ್ಲ್ಯಾಂಡ್ ಮೊದಲಾದ ದೇಶಗಳು ಜರ್ಮನ್ ಸಂದೇಶಕ್ಕೆ ಪ್ರತಿಕ್ರಿಯಿಸಿದವು. ಮಾಹಿತಿ ಕೇಳಿ ತಮ್ಮ ದೇಶದ ಕಪ್ಪು ಶ್ರೀಮಂತರ ಹಣಕಾಸು ವ್ಯವಹಾರ ಕುರಿತ ಮಾಹಿತಿ ತರಿಸಿಕೊಂಡವು.

ಭಾರತ ಏನು ಮಾಡಿತು ಎಂಬ ಕಥೆ ಹೇಳುವ ಅಗತ್ಯವಿದೆಯೆ? `ಖಂಡಿತವಾಗಿಯೂ ಇದೆ, ಮುಂದೇನಾಯಿತು ಎಂದು ಊಹಿಸುವುದು ನಮ್ಮಿಂದ ಸಾಧ್ಯವಿಲ'್ಲ ಎನ್ನುವಿರಾದರೆ, ಕೇಳಿ. ಜರ್ಮನ್ ಸಕರ್ಾರಕ್ಕೆ ಯಾವ ಉತ್ತರವನ್ನೂ ಬರೆಯುವ ಗೋಜಿಗೆ ಭಾರತ ಹೋಗಿಲ್ಲ. ನಮ್ಮ ಅರ್ಥಶಾಸ್ರ್ತಜ್ಞ ಪ್ರಧಾನಿ ಬಹಳ ಬ್ಯುಸಿಯಾಗಿದ್ದಾರೆ (ಯಾವುದರಲ್ಲಿ ಎಂಬುದು ಮಾತ್ರ ಗೊತ್ತಿಲ್ಲ). ಅವರಿಗೆ ಇದಕ್ಕೆಲ್ಲ ಉತ್ತರ ಕೊಡುವಷ್ಟು ಪುರಸೊತ್ತಿಲ್ಲ. ಒಂದಿಷ್ಟು ಪುಸ್ತಕಗಳನ್ನು ಓದಲೂ ಪುರಸೊತ್ತಿಲ್ಲವಂತೆ. ಆದರೆ ಅವರ ಕಚೇರಿಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಜನಪಥದ ಹತ್ತನೇ ನಂಬರ್ ಮನೆಯನ್ನು ಕಾಯುತ್ತಿದ್ದಾರೆಯೆ?

ಹೀಗಿದೆ ಪರಿಸ್ಥಿತಿ. ಹೀಗಿರುವಾಗ ಈ ಹಣದ ಬಹುಪಾಲು ನಮ್ಮ ರಾಜಕಾರಣಿಗಳದು ಮತ್ತು ಅವರ ಗೆಳೆಯರದು ಎಂಬ ಸಂಶಯ ಮೂಡುವುದಿಲ್ಲವೆ? ಸ್ವಿಡ್ಜರ್ಲ್ಯಾಂಡ್, ಸೇಂ. ಕಿಟ್ಸ್, ಕ್ಯಾನರಿ ಐಲ್ಯಾಂಡ್ಸ್, ಆಂಟಿಗುವಾ, ಬಹಾಮಾಸ್, ಲೀಚ್ಟೆನ್ಸ್ಟೈನ್ - ಇವೆಲ್ಲ ನಮ್ಮ ಕಪ್ಪು ಶ್ರೀಮಂತರು ಆಗಾಗ್ಗೆ ರಜೆ ಕಳೆಯುವ ಸ್ವರ್ಗಗಳು. ಅಷ್ಟು ಮಾತ್ರವಲ್ಲ ಅವರ ಕಪ್ಪು ನಿಧಿಯನ್ನು ಕಾಯುತ್ತಿರುವ ಕುಪ್ರಸಿದ್ಧ ಬ್ಯಾಂಕಿಂಗ್ ತಾಣಗಳು. ಡ್ರಗ್ಸ್, ಟೆರರಿಸಂ, ಬ್ಲ್ಯಾಕ್ ಬಿಸಿನೆಸ್ -ಇವುಗಳಿಗೆಲ್ಲ ಹಣದ ಹೊಳೆ ಹರಿಯುವುದು ಇಲ್ಲಿನ ಬ್ಯಾಂಕ್ ಖಾತೆಗಳಿಂದಲೇ.

ರಾಜು ಪುತ್ರರ ಮೇಟಾಸ್ ಕಂಪೆನಿ ಹೈದರಾಬಾದ್ ಮೆಟ್ರೋ ಯೋಜನೆಯಲ್ಲಿ ಅವವ್ಯಹಾರ ನಡೆಸಿದ ಬಗ್ಗೆ ಎಂದು ದೆಹಲಿ ಮೆಟ್ರೋ ಮುಖ್ಯಸ್ಥ, ಪ್ರಾಮಾಣಿಕ ಎಂಜಿನಿಯರ್, ಇ. ಶ್ರೀಧರನ್ ಕಳೆದ ವಷರ್ಾರಂಭದಲ್ಲೇ ಕಹಳೆ ಊದಿ ಆಂಧ್ರ ಸಕರ್ಾರದ ಅವಕೃಪೆಗೆ ಪಾತ್ರರಾಗಿದ್ದರು. ಮೇಟಾಸ್ ಪರವಾಗಿ ನಿಂತ ಆಂಧ್ರದ ವೈಎಸ್ಆರ್ ಸಕರ್ಾರ ಶ್ರೀಧರನ್ ವಿರುದ್ಧವೇ ಆಪಾದನೆಗಳ ಮಳೆ ಸುರಿಸಿ ರಣಕಹಳೆ ಊದಿತ್ತು!

ಸುಬ್ರತೋ ರಾಯ್ನ ಸಹಾರಾ ಇಂಡಿಯಾದಲ್ಲಿ ರಾಜಕಾರಣಿಗಳ ಕಪ್ಪು ದುಡ್ಡಿದೆ ಎಂಬ ಗುಲ್ಲು ಬಹಳ ಹಿಂದಿನಿಂದ ಇದೆ. ಇಂತಹ ಯಾವ ಆಪಾದನೆಗಳೂ ಸಾಬೀತಾಗಿಲ್ಲ. ಏಕೆಂದರೆ ಯಾರ ವಿರುದ್ಧವೂ ಸರಿಯಾದ ಕಾನೂನು ಕ್ರಮಗಳನ್ನು ಜರುಗಿಸಿಯೇ ಇಲ್ಲ!


ವಾಹ್! ಕಡೆಗೂ ಭಾರತ್ ಮಹಾನ್!

ಭಾರತ ವಿಶ್ವದ ಡಯಾಬಿಟಿಸ್ ಕೇಂದ್ರ; ಹೃದ್ರೋಗಿಗಳು ಭಾರತದಲ್ಲೇ ಜಾಸ್ತಿ; ಭಾರತದಲ್ಲಿ ಕುರುಡರು ಜಾಸ್ತಿ -ಇವೆಲ್ಲ ಆಗಾಗ್ಗೆ ಪತ್ರಿಕೆಗಳಲ್ಲಿ ಕಂಡುಬರುವ ಹೇಳಿಕೆಗಳು. ಈ ಮಾತುಗಳು ಎಷ್ಟು ನಿಜ, ಎಷ್ಟು ಉತ್ಪ್ರೇಕ್ಷೆ ಎಂಬುದು ಚಚರ್ಾವಿಷಯ. ಆದರೆ ಈಗ ಒಂದಂತೂ ನೂರಕ್ಕೆ ನೂರು ಸತ್ಯ. ಅದು- `ವಿಶ್ವದಲ್ಲೇ ಅತಿಹೆಚ್ಚು ಅಪರಾಧ ಜರುಗುತ್ತಿರುವ ದೇಶ ಭಾರತ'! ಋಷಿಗಳ ನಾಡು ಈಗ ಅಪರಾಧಿಗಳ ತವರಾಗಿದೆ.

ಈ ಅಂಕಿಅಂಶ ಗಮನಿಸಿ: 2006ರಲ್ಲಿ ಭಾರತದಲ್ಲಿ ನಡೆದ ಕೊಲೆಗಳ ಸಂಖ್ಯೆ 32,481. ಅಂದರೆ, ಪ್ರತಿ ಗಂಟೆಗೆ 3-4 ಕೊಲೆಗಳು! ರಷ್ಯಾದಲ್ಲಿ ನಡೆದ ಕೊಲೆಗಳ ಸಂಖ್ಯೆ 28,904. ಕೊಲಂಬಿಯಾದಲ್ಲಿ 26,539. ದಕ್ಷಿಣ ಆಫ್ರಿಕಾದಲ್ಲಿ 21,995, ಮೆಕ್ಸಿಕೋದಲ್ಲಿ 13,828 ಹಾಗೂ ಅಮೆರಿಕದಲ್ಲಿ 12,658. ಅಂದರೆ, ಜಗತ್ತಿನ ಎಲ್ಲ ದೇಶಗಳಿಗಿಂತಲೂ ಅತಿ ಹೆಚ್ಚು ಕೊಲೆಗಳು ನಡೆದಿರುವುದು ಭಾರತದಲ್ಲಿ!

ಇದು ವಿಮಾನಗಳ ಬಿಸಿನೆಸ್ ಕ್ಲಾಸ್ನಲ್ಲಿ ಹಾರಾಡಿಕೊಂಡು, ಪಂಚತಾರಾ ಹೊಟೇಲುಗಳಲ್ಲಿ ಬಡತನದ ಬಗ್ಗೆ ಸೆಮಿನಾರ್ ನಡೆಸುವ ಎನ್ಜಿಒ `ತಜ್ಞ'ರ ಅಂಕಿಅಂಶವಲ್ಲ. ಭಾರತ ಸಕರ್ಾರದ ಗೃಹ ಸಚಿವಾಲಯ ಅಧಿಕೃತವಾಗಿ ಕಲೆಹಾಕಿರುವ ಅಂಕಿಅಂಶ. ದೇಶದ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಅಪರಾಧ ಪ್ರಕರಣ ದಾಖಲೆಗಳ ಬ್ಯೂರೋ (ಡಿಸಿಆರ್ಬಿ) ಕೆಲಸಮಾಡುತ್ತಿದೆ. ಇಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಸಕಲ ದೂರುಗಳನ್ನೂ, ಎಲ್ಲ ರೀತಿಯ ಅಪರಾಧ ಪ್ರಕರಣಗಳನ್ನೂ ಕಂಪ್ಯೂಟರ್ ಸಾಫ್ಟ್ವೇರ್ ನೆರವಿನಿಂದ ವಗರ್ೀಕರಿಸಿ, ಸಂಸ್ಕರಿಸಿ ದಾಖಲಿಸಲಾಗುತ್ತದೆ. ಜಿಲ್ಲೆಗಳ ಮಾಹಿತಿ ರಾಜ್ಯ ಅಪರಾಧ ದಾಖಲೆಗಳ ಬ್ಯೂರೋಗೆ ಹೋಗುತ್ತದೆ. ರಾಜ್ಯಮಟ್ಟದ ಅಂಕಿಅಂಶ ಇಲ್ಲಿ ಸಿಗುತ್ತದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್ಸಿಆರ್ಬಿ) ಇಡೀ ದೇಶದ ಅಪರಾಧ ಚಿತ್ರಣವನ್ನು ತಯಾರಿಸಿ ಪ್ರಕಟಿಸುತ್ತದೆ. ಈಚೆಗೆ 2006ಕ್ಕೆ ಸಂಬಂಧಿಸಿದ `ಕ್ರೈಮ್ ಇನ್ ಇಂಡಿಯಾ' ವಾಷರ್ಿಕ ವರದಿ ಪ್ರಕಟವಾಗಿದೆ. ಅದು ನೀಡುತ್ತಿರುವ ದೇಶದ ಅಪರಾದ ಚಿತ್ರಣ ದಿಗಿಲು ಹುಟ್ಟಿಸುವಂತಿದೆ.

ಮೊದಲ `ಕ್ರೈಮ್ ಇನ್ ಇಂಡಿಯಾ' ವಾಷರ್ಿಕ ವರದಿ ಸಿದ್ಧವಾಗಿದ್ದು 1953ರಲ್ಲಿ. ಇತ್ತೀಚಿನ ವರದಿ 54ನೆಯದು. ಅದು ಕೇವಲ ದಾಖಲಿತ ಅಪರಾಧ ಪ್ರಕರಣಗಳ ಬಗ್ಗೆ ಮಾತ್ರ ವಿವರ ನೀಡುತ್ತದೆ. ಆದರೆ ದಾಖಲೆಗೆ ಸಿಗದೇ ಹೋದ ಅಪರಾಧ ಪ್ರಕರಣಗಳು ನಮ್ಮ ದೇಶದಲ್ಲಿ ಸಾಕಷ್ಟಿವೆ ಎನ್ನುವುದು ಸರ್ವವಿದಿತ. ಅದೇನೇ ಇದ್ದರೂ ಅಧಿಕೃತ ವರದಿಯ ಪ್ರಕಾರವೇ ದೇಶದಲ್ಲಿ ವರ್ಷಕ್ಕೆ 32 ಸಾವಿರ ಕೊಲೆಗಳಾಗುತ್ತಿವೆ ಎಂದರೆ ಏನರ್ಥ?

2006ಕ್ಕೆ ಸಂಬಂಧಿಸಿದ ಕೆಲವು ಅಪರಾಧ ವಿವರಗಳನ್ನು ನೋಡೋಣ. ದೇಶದಲ್ಲಿ ನಡೆದ ಒಟ್ಟು ಅಪರಾಧಗಳ ಸಂಖ್ಯೆ 51,02,460!! ಅಂದರೆ, ಪ್ರತಿ 200 ಜನರ ಮಧ್ಯದಲ್ಲೊಂದು ಅಪರಾಧ ಪ್ರಕರಣ! ಇದರಲ್ಲಿ ಇಂಡಿಯನ್ ಪೀನಲ್ ಕೋಡ್ (ಭಾರತೀಯ ದಂಡ ಸಂಹಿತೆ) ಅಡಿ ಬರುವ ಅಪರಾಧಗಳು, ಇತರ ಕಾನೂನುಗಳ ಅಡಿ ಬರುವ ಅಪರಾಧಗಳು (ಮಹಿಳೆಯರ ಮೇಲಿನ ದೌರ್ಜನ್ಯಗಳು, ಆಥರ್ಿಕ ಅಪರಾದಗಳು, ಆಸ್ತಿ ಅಪರಾಧಗಳು, ಜಾತಿ ಆಧಾರಿತ ಅಪರಾಧಗಳು, ಮಕ್ಕಳ ಮೇಲಿನ ಅಪರಾಧಗಳು) -ಹೀಗೆ ವಿವಿಧ ರೀತಿಯ ವಗರ್ೀಕರಣಗಳಿವೆ. ಇ ಪೈಕಿ 18,78,293 ಐಪಿಸಿ ಅಪರಾಧಗಳು ನಡೆದಿವೆ.

ಇಲ್ಲಿ ಎಲ್ಲ ಅಪರಾದಗಳ ಪಟ್ಟಿ ಹಾಕುವುದು ಕಷ್ಟ. ಹಿಂಸಾ ಅಪರಾದಗಳ ಪೈಕಿ: ಕೊಲೆಗಳು 32,481. ಕೊಲೆಯ ಪ್ರಯತ್ನಗಳು 27,230 (ಕೊಲೆಯ ಪ್ರಯತ್ನಗಳಿಗಿಂತಲೂ ಕೊಲೆಗಳೇ ಜಾಸ್ತಿ. ಅಂದರೆ ಕೊಲೆಗಾರರ ಸಕ್ಸ್ಸ್ ರೇಟ್ ಹೆಚ್ಚು!). ಕಲ್ಪಬಲ್ ಹೋಮಿಸೈಡ್ (ಕೊಲೆಯಲ್ಲದ ಹತ್ಯೆಗಳು) 3,535. ಅಪಹರಣ 23,991. ಡಕಾಯಿತಿ 4747. ಡಕಾಯಿತಿ ಪ್ರಯತ್ನ 3129. ದರೋಡೆ 18,456. ದಂಗೆ, ದೊಂಬಿ 56,641. ದಾಳಿ 8480. ವರದಕ್ಷಿಣೆ ಸಾವು 7618.

ಉಳಿದಂತೆ ಕೆಲವನ್ನು ಮಾತ್ರ ನೋಡೋಣ. ಅತ್ಯಾಚಾರ (ರೇಪ್) 19,348. ಮಹಿಳೆ, ಹುಡುಗಿಯರ ಅಪಹರಣ 17,414. ಲೈಂಗಿಕ ಚೇಷ್ಟೆ 36,617. ಲೈಂಗಿಕ ಕಿರುಕುಳ 9,966. ಮೋಸಗಾರಿಕೆ 58,076. ಕನ್ನಗಳ್ಳತನ 91,666. ಕಳ್ಳತನ 2,74,354. ಮಕ್ಕಳ ಮೇಲಿನ ಅಪರಾಧಗಳು 18,967.

ಮಧ್ಯಪ್ರದೇಶ ದೇಶದಲ್ಲೇ ಅತಿ ಹೆಚ್ಚು ಅಪರಾಧ ದಾಖಲಿಸಿರುವ (ಶೇ. 10.4 - ಇದು ಸಾಧನೆಯಲ್ಲ, ನಾಚಿಕೆಗೇಡಿನ ವಿಷಯ) ರಾಜ್ಯ. ಅನಂತರದ ಸ್ಥಾನ ಮಹಾರಾಷ್ಟದ್ದು (ಶೇ. 10.2) ಅನಂತರ ಆಂಧ್ರಪ್ರದೇಶ (ಶೇ. 9.3). ನಗರಗಳ ಪೈಕಿ ಮೊದಲ ಮೂರು ನಗರಗಳು ದೆಹಲಿ, ಮುಂಬೈ ಹಾಗೂ ಬೆಂಗಳೂರು. ದೇಶದ ಒಟ್ಟು ಅಪರಾಧಗಳ ಪೈಕಿ ಶೇ. 16.2 ರಷ್ಟು ಅಪರಾಧಗಳು ಈ ಮೂರು ನಗರಗಳಲ್ಲಿ ನಡೆದಿವೆ! ಈಶಾನ್ಯ ರಾಜ್ಯಗಳಲ್ಲಿ ಅತಿ ಕಡಿಮೆ ಅಪರಾಧಗಳು ದಾಖಲಾಗಿವೆ!

2006ರಲ್ಲಿ ಬಂಧಿಸಲ್ಪಟ್ಟ ಆಪಾದಿತರ ಸಂಖ್ಯೆ 62,07,945!! ಅಂದರೆ, ದೇಶದ ಒಟ್ಟು ಜನರ ಪೈಕಿ ಪ್ರತಿ 160 ಜನರಿಗೆ ಒಬ್ಬರು ಬಂಧನಕ್ಕೆ ಒಳಗಾಗಿದ್ದಾರೆ!!

ನನ್ನ ಬಳಿ 1953ರಿಂದ ಈಚೆಗಿನ ಅಂಕಿಅಂಶಗಳೆಲ್ಲ ಇವೆ. 1953ರಲ್ಲಿ ದಾಖಲಾದ ಅಪರಾಧಗಳು 6 ಲಕ್ಷ. ಈಗ ಹತ್ತು ಪಟ್ಟು ಹೆಚ್ಚು ಅಪರಾಧಗಳು ದಾಖಲಾಗಿವೆ! ಅಪರಾಧ ಪ್ರಕರಣಗಳು ಏರುಗತಿಯಲ್ಲಿದ್ದು ಪ್ರತಿ ವರ್ಷವೂ ಹೆಚ್ಚಿನ ಪ್ರಗತಿ, ಹೆಚ್ಚಿನ ಬೆಳವಣಿಗೆ ತೋರಿಸುತ್ತಿವೆ! ಇದಕ್ಕಿಂತ ಹೆಚ್ಚಿನ ಅಂಕಿಅಂಶಗಳ ಗೋಜಲು ಈಗ ಬೇಡ.

`ಭಾರತ ಅತ್ಯಂತ ಸಭ್ಯರ ನಾಡು, ಇಲ್ಲಿ ಅಪರಾಧ ಪ್ರಕರಣಗಳು ಯೂರೋಪಿನಷ್ಟಿಲ್ಲ. ಇಲ್ಲಿನ ಕಳ್ಳರೂ ಪ್ರಾಮಾಣಿಕರೇ' ಎಂದು 18ನೇ ಶತಮಾನದ ಪೋಚರ್ುಗೀಸ್ ದಾಖಲೆಗಳಲ್ಲಿ ವಿವರಿಸಲಾಗಿದೆ. ಚಿಕ್ಕ ಅಪರಾಧಗಳಿಗೆ ಬಂಧನಕ್ಕೊಳಗಾದ ವ್ಯಕ್ತಿಗಳು ಪೊಲೀಸರಿಂದ ಅನುಮತಿ ಪಡೆದು ಕಾಡುಗಳ ಮಾರ್ಗದಲ್ಲಿ ಅನೇಕ ದಿನಗಳು ನಡೆದುಹೋಗಿ ತಮ್ಮ ಮನೆಯವರಿಗೆ ವಿಷಯ ತಿಳಿಸಿ ಅನಂತರ ಪೊಲೀಸ್ ಠಾಣೆಗೆ ಮರಳಿ ಬಂದು ಬಂಧನಕ್ಕೊಳಗಾಗುತ್ತಿದ್ದರು (ಹೋದರೆ ಹೋಗಲಿ ಎಂದೇ ಇವರನ್ನು ಬಿಟ್ಟಿದ್ದರೂ!) ಎನ್ನುತ್ತವೆ ಕೆಲವು ಪೋಚರ್ುಗೀಸ್ ದಾಖಲೆಗಳು!!

ಇಂತಹ ದೇಶವನ್ನು ಈಗ ಯಾವ ಮಟ್ಟಕ್ಕೆ ತರಲಾಗಿದೆ ನೋಡಿದಿರಾ? ಕಾನೂನು ಸುವ್ಯವಸ್ಥೆ ಎಲ್ಲಿದೆ?

ಕೋಟರ್ುಗಳಲ್ಲಿ ಪ್ರಕರಣಗಳ ಇತ್ಯರ್ಥ ವಿಳಂಬವಾಗಿ ಆಪಾದಿತರಿಗೆ ಶಿಕ್ಷೆ ವಿಧಿಸುವುದು ಸಮರ್ಪಕವಾಗಿ ನಡೆಯುತ್ತಿಲ್ಲ. ಅಪರಾದ ಹೆಚ್ಚಲು ಇದೂ ಕಾರಣ. 1961ರಲ್ಲಿ ದಾಖಲಾದ ಪ್ರಕರಣಗಳ ಪೈಕಿ ಶೇ. 30ರಷ್ಟು ಪ್ರಕರಣಗಳ ವಿಚಾರಣೆ ಮಾತ್ರ ಮುಗಿದಿತ್ತು. ಅವುಗಳ ಪೈಕಿ ಶೇ. 61ರಷ್ಟು ಪ್ರಕರಣಗಳಲ್ಲಿ ಮಾತ್ರ ಆಪಾದಿತರಿಗೆ ಶಿಕ್ಷೆ ವಿಧಿಸಲಾಗಿದೆ. 2006ರಲ್ಲಿ ಶೇ. 15.5ರಷ್ಟು ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲಾಗಿದೆ. ಈ ಪೈಕಿ ಶಿಕ್ಷಾಪ್ರಮಾಣ ಶೇ. 42 ಅಷ್ಟೇ. ಇದರರ್ಥ ಏನು? ಎಲ್ಲ ದಾಖಲಿತ ಪ್ರಕರಣಗಳ ವಿಚಾರಣೆ ಕೋಟರ್ಿನಲ್ಲಿ ಸಂಪೂರ್ಣವಾಗಿ ನಡೆಯುವುದಿಲ್ಲ ಎನ್ನುವುದೇ ವಾಸ್ತವ. ಒಂದೆಡೆ ದಿನದಿನಕ್ಕೆ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಅವುಗಳ ವಿಚಾರಣೆ ನಡೆಸುವುದು ಕಷ್ಟವಾಗುತ್ತಿದೆ. ಈ ಇಳಿಮುಖದ ಟ್ರೆಂಡಿನಿಂದಾಗಿ ನ್ಯಾಯಾಲಯಕ್ಕೆ ಹೋದರೆ ತಮಗೆ ಶಿಕ್ಷೆ ಖಾತ್ರಿ ಎಂದು ಯಾರೂ ಹೆದರುತ್ತಿಲ್ಲ.

ನ್ಯಾಯಾಂಗದ, ಪೊಲೀಸ್ ವ್ಯವಸ್ಥೆಯ ಸುಧಾರಣೆ ಶಾಶ್ವತವಾಗಿ ನೆನೆಗುದಿಗೆ ಬಿದ್ದಿರುವುದು ಅಪರಾಧಿಗಳಿಗೆ ವರವಾಗಿ ಪರಿಣಮಿಸಿದೆ. ನ್ಯಾಯಾಂಗದ ಅನೇಕರ, ಪೊಲೀಸ್ ವ್ಯವಸ್ಥೆಯ ಹಲವರ ಭ್ರಷ್ಟಾಚಾರ ಅಪರಾದ ಹೆಚ್ಚಳಕ್ಕೆ ಇನ್ನೊಂದು ಕಾರಣ. ಅರಾಧಿಗಳಿಗೂ ರಾಜಕಾರಣಿಗಳಿಗೂ ನಡುವಿನ ಅಂತರ ಕಿರಿದಾಗುತ್ತಿರುವುದು ಅತ್ಯಂತ ಪ್ರಮುಖ ಕಾರಣ. ವಾಸ್ತವವಾಗಿ ಅಪರಾಧಿಗಳೇ ಆಳುವವರಾಗುತ್ತಿದ್ದಾರೆ ಎನ್ನುವುದೇ ಈ ಹೊತ್ತಿನ ಸತ್ಯ. ಎನ್.ಎನ್. ವೋಹ್ರಾ ಸಮಿತಿಯ ವರದಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ನಾಳೆ ಮುತ್ತುಲಕ್ಷ್ಮೀ, ನಳಿನಿ, ಅಫ್ಜಲ್ ಗುರು, ದಾವೂದ್ ಇಬ್ರಾಹಿಮ್ ಚುನಾವಣೆಗೆ ನಿಂತರೂ ಆಶ್ವರ್ಯವಿಲ್ಲ. ಭಾರತದಲ್ಲಿ ಇಂತಹ `ಪವಾಡ'ಗಳಿಗೆ ಬರವಿಲ್ಲ!