ಗುರುವಾರ, ಜೂನ್ 04, 2009

ಪಶ್ಚಿಮದ ಮಿಷನರಿಗಳೇ ನಮ್ಮ ಅಧಿನಾಯಕರು!

ನನಗೆ ದೇಶದ ಪ್ರಬಲ ಕ್ರೈಸ್ತ ನಾಯಕರೊಬ್ಬರಿಂದ ಈಚೆಗೊಂದು ಇ-ಮೇಲ್ ಬಂದಿತ್ತು. `ಭಾರತದಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ನಮ್ಮನ್ನು ವಿಚಾರಿಸಿಕೊಳ್ಳುವವರು ಯಾರೂ ಇಲ್ಲ. ಅಮೆರಿಕ ಹಾಗೂ ಐರೋಪ್ಯ ಒಕ್ಕೂಟಗಳ ಬಳಿ ಈ ದೇಶದ ವಿರುದ್ಧ ದೂರು ನೀಡಲು ಹೋಗಬೇಕೆಂದು ತೀಮರ್ಾನಿಸಿದ್ದೇವೆ. ನಿಮ್ಮೆಲ್ಲರ ಬೆಂಬಲ ಬೇಕು' ಎಂಬುದು ಆ ಸಂದೇಶದ ಸಾರಾಂಶ.

ಇದು ಈ ದೇಶದ ದುರಂತ. ಭಾರತದ ಅನೇಕ ಕ್ರೈಸ್ತನಾಯಕರ ಪ್ರಕಾರ ಭಾರತ ಇನ್ನೂ ಸ್ವತಂತ್ರ, ಸಾರ್ವಭೌಮ ರಾಷ್ಟ್ರವಲ್ಲ. ಪಶ್ಚಿಮದ ದೇಶಗಳ ಮುಖಂಡರೇ ಇಲ್ಲಿನ ಸಕಲ ವ್ಯವಹಾರಗಳನ್ನೂ ನಿಯಂತ್ರಿಸಬೇಕಾದ ದೊಣ್ಣೆನಾಯಕರು.

ಈ ಮತೀಯ ಮುಖಂಡರು ಇನ್ನೂ ಬ್ರಿಟಿಷರ ಪ್ರಿವಿ ಕೌಂಸಿಲ್ ಕಾಲದಲ್ಲೇ ಇರುವ ಡೈನೋಸಾರ್ಗಳು. ಇವರ ಪ್ರಕಾರ ಜಗತ್ತಿನ ಸಕಲ ಕ್ರೈಸ್ತರ ನಾಯಕರು ಎಂದರೆ ಅಮೆರಿಕ ಹಾಗೂ ಇಯು! ಈ ದೇಶಗಳು ಸಮಸ್ತ ಮಿಷನರಿಗಳ ಪರವಾಗಿ ಯುದ್ಧ ಮಾಡುವ ಶಕ್ತಿಗಳು.

ಇದು ವಾಸ್ತವವಾಗಿ ಅಲ್-ಖೈದಾ ಜಿಹಾದಿಗಳ ಪ್ಯಾನ್-ಇಸ್ಲಾಮಿಸಂ ತರಹದ ಮಾನಸಿಕತೆಯಲ್ಲದೇ ಬೇರೇನೂ ಅಲ್ಲ. ಗಡಿರಹಿತ ಮತೀಯ ಸಾಮ್ರಾಜ್ಯ ಈ ಮಾನಸಿಕತೆಯ ಹಿಂದಿರುವ ಮೂಲ ಕಲ್ಪನೆ. ಈ ಮಾನಸಿಕತೆಯ ಪ್ರಕಾರ, ಪಶ್ಚಿಮದ ಬಿಳಿಯ ಕ್ರೈಸ್ತರು ಈ ಸಾಮ್ರಾಜ್ಯದ ಚಕ್ರವತರ್ಿಗಳು. ಉಳಿದವರೆಲ್ಲ ಅವರ ಪ್ರಜೆಗಳು.

ಈ ಮತೀಯ ಮುಖಂಡರ ವಿಷಯ ಹಾಗಿರಲಿ. ನಮ್ಮ ಸಕರ್ಾರಗಳೂ ಈ ರೀತಿಯ ಮಾನಸಿಕತೆಯಿಂದ ಹೊರತಾಗಿಲ್ಲ. ಗುಜರಾತ್ ಹಾಗೂ ಒರಿಸ್ಸಾಗಳಲ್ಲಿ ನಡೆದ ಹಿಂದೂ-ಕ್ರೈಸ್ತ ದಂಗೆಗಳನ್ನು ಕುರಿತು ತನಿಖೆ ನಡೆಸಲು ಅಮೆರಿಕದ ಯುಎಸ್ಸಿಐಆರ್ಎಫ್ ಸದಸ್ಯರಿಗೆ ಸೋನಿಯಾ-ಮನಮೋಹನ್ ಸಕರ್ಾರ ಅನುಮತಿ, ಆಹ್ವಾನ ನೀಡಿದ್ದು ಈ ನಿಟ್ಟಿನ ತಾಜಾ ಉದಾಹರಣೆ. ಮುಂದಿನ ತಿಂಗಳು ಈ ಸಂಸ್ಥೆಯ ಅಧಿಕಾರಿಗಳು ಭಾರತಕ್ಕೆ ಬಂದಿಳಿಯಲಿದ್ದಾರೆ. ನಮ್ಮ ದೇಶದ ಮಿಷನರಿಗಳ ನೆರವಿನಿಂದಲೇ ನಮ್ಮ ದೇಶದ, ಜನರ ಹಾಗೂ ಸಕರ್ಾರಗಳ ವಿರುದ್ಧ ವರದಿ ಸಿದ್ಧಪಡಿಸಿ ಹುಯಿಲೆಬ್ಬಿಸಲಿದ್ದಾರೆ.

ಯುಎಸ್ಸಿಐಆರ್ಎಫ್ ಅಮೆರಿಕದ ಇವ್ಯಾಂಜಲಿಸ್ಟ್ ಲಾಬಿಯ ಹಿಡನ್ ಅಜೆಂಡಾವನ್ನೇ ಪ್ರವತರ್ಿಸುತ್ತ ಬಂದಿರುವುದು ರಹಸ್ಯವೇನಲ್ಲ. `ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್' ಎಂಬುದು ಅದರ ಪೂರ್ಣ ಹೆಸರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರ ಮತೀಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದು ಅದರ ಘೋಷಿತ ಉದ್ದೇಶ. ಆದರೆ ವಾಸ್ತವದಲ್ಲಿ ಮಾಡುತ್ತಿರುವುದು ಮಿಷನರಿಗಳ, ಇವ್ಯಾಂಜಲಿಸ್ಟರ ತಲೆಕಾಯುವ ಕೆಲಸ. ಅವರ ಮತಾಂತರಗಳಿಗೆ ಅಮೆರಿಕನ್ ಸಕರ್ಾರದ ಆಶೀವರ್ಾದ ಕೊಡಿಸುವುದು, ಮತಾಂತರ ಪ್ರಯತ್ನಗಳಿಗೆ ಸ್ಥಳೀಯ ಜನಸಮುದಾಯಗಳಿಂದ, ಸಂಘಟನೆಗಳಿಂದ ಬರುವ ವಿರೋಧಗಳ ವಿರುದ್ಧ `ಮತೀಯ ಸ್ವಾತಂತ್ರ್ಯದ ಹರಣ' ಎಂಬ ಕೂಗೆಬ್ಬಿಸುವುದು ಅದರ ಕೆಲಸ. ಅದರ ಪ್ರಕರ, ಕ್ರೈಸ್ತರು ಇತರ ಮತಗಳಿಗೆ (ಉದಾಹರಣೆಗೆ, ಇಸ್ಲಾಂ) ಹೊಂದುವ ಮತಾಂತರಗಳೆಲ್ಲ, `ಬಲವಂತದ ಮತಾಂತರಗಳು', ಅಥರ್ಾತ್ ಜನರ `ಮತೀಯ ಸ್ವಾತಂತ್ರ್ಯ'ಕ್ಕೆ ವಿರುದ್ಧವಾದವುಗಳು. ಕ್ರೈಸ್ತ ಮತಕ್ಕೆ ಇತರರು ಮತಾಂತರಗೊಂಡರೆ ಅದೇ ನಿಜವಾದ `ಮತೀಯ ಸ್ವಾತಂತ್ರ್ಯ'!

1998ರಲ್ಲಿ ಅಮೆರಿಕ ಸಂಸತ್ತಿನ (ಕಾಂಗ್ರೆಸ್) ಮೂಲಕ ಶಾಸನಾತ್ಮಕವಾಗಿ ಅಸ್ತಿತ್ವಕ್ಕೆ ಬಂದ ಈ ಆಯೋಗ ಜಗತ್ತಿನ ಯಾವ ಯಾವ ದೇಶಗಳು ಜನರ ಮತೀಯ ಸ್ವಾತಂತ್ರ್ಯವನ್ನು ಹತ್ತಿಕ್ಕಿವೆ ಎಂಬ ಕುರಿತು ಅಮೆರಿಕದ ರಾಷ್ಟ್ರೀಯ ಸಕರ್ಾರಕ್ಕೆ ಪ್ರತಿವರ್ಷ ವರದಿ ನೀಡುತ್ತದೆ. ಕೆಲವು ದೇಶಗಳ ವಿರುದ್ಧ ಆಥರ್ಿಕ ದಿಗ್ಬಂಧನದಂತಹ ಕ್ರಮಗಳನ್ನು ಕೈಗೊಳ್ಳುವಂತೆಯೂ ಶಿಫಾರಸು ಮಾಡುತ್ತದೆ. ಈವರೆಗೆ ಅದು ನೀಡಿರುವ ವರದಿಗಳಲ್ಲಿ ಜಗತ್ತಿನ ಒಂದು ಕ್ರೈಸ್ತ ಚಚರ್ಿನ ವಿರುದ್ಧವೂ ಜನರ ಮತೀಯ ಸ್ವಾತಂತ್ರ್ಯದ ಹರಣ ಮಾಡಿದ ಆರೋಪದ ಸುಳಿವೂ ಇಲ್ಲ!

ಈ ಆಯೋಗದ ಹಿಂದಿರುವುದು ಅಮೆರಿಕದ ಬೃಹತ್ ಇವ್ಯಾಂಜೆಲಿಸ್ಟ್ ವ್ಯಾಪಾರಿಗಳು. ಅವರ ಪ್ರಬಲ ಲಾಬಿಯ ಫಲವಾಗಿಯೇ ಈ ಆಯೋಗದ ಸೃಷ್ಟಿಯಾಗಿದೆ. ಇದರ ಕಮಿಷನರ್ಗಳೆಲ್ಲ ಕ್ರೈಸ್ತರೇ. ಇತರ ಮತೀಯರಿಗೆ ಇದರೊಳಗೆ ಪ್ರಾತಿನಿಧ್ಯವಿಲ್ಲ. ಇದು ಕ್ರೈಸ್ತ ಉದ್ದೇಶಗಳನ್ನು ಅಮೆರಿಕದ ಸಕರ್ಾರಿ ಬಲದ ನೆರವಿನಿಂದ ಈಡೇರಿಸಿಕೊಳ್ಳಲು ಮಾಡುತ್ತಿರುವ ಒಂದು ಪ್ರಯತ್ನವಷ್ಟೇ.

1999ರಿಂದ ಯುಎಸ್ಸಿಐಆರ್ಎಫ್ ಸತತವಾಗಿ ಭಾರತವನ್ನು ಜರಿಯುತ್ತ ಬಂದಿದೆ. 1999ರ ಮತಾಂತರ ಗಲಭೆಯ ನಂತರ ಗುಜರಾತಿನ ಫಾ. ಸೆಡ್ರಿಕ್ ಪ್ರಕಾಶ್ ಮೂಲಕ `ಸ್ವತಂತ್ರ' ವರದಿಯನ್ನು ತರಿಸಿಕೊಂಡು ಭಾರತದ ವಿರುದ್ಧ ಕ್ರಮ ಕೈಗೊಳ್ಳಲು ಅಮೆರಿಕಕ್ಕೆ ಅದು ಶಿಫಾರಸು ನೀಡಿತ್ತು. ಅನಂತರ ಸತತವಾಗಿ ಭಾರತದ ಹಿಂದೂ ಸಂಘಟನೆಗಳನ್ನು ತನ್ನ ಬ್ಲ್ಯಾಕ್ಲಿಸ್ಟ್ನಲ್ಲಿ ಇಟ್ಟುಕೊಂಡಿದೆ. ಭಾರತಕ್ಕೆ ಬಂದು `ತನಿಖೆ' ಮಾಡಲು ವಾಜಪೇಯಿ ಸಕರ್ಾರ ಅದಕ್ಕೆ ಅನುಮಿತಿ ನೀಡಿರಲಿಲ್ಲ. ಅಷ್ಟೇಕೆ, ಜಗತ್ತಿನ ಯಾವುದೇ ಕ್ರೈಸ್ತೇತರ ಹಾಗೂ ಸೆಕ್ಯೂಲರ್ ದೇಶವೂ ಅದಕ್ಕೆ ಆದರ, ಮನ್ನಣೆ, ಮಹತ್ವಗಳನ್ನು ನೀಡಿಲ್ಲ. ಆದರೆ ಯಾರೂ ಮಾಡದ ಕೆಲಸವನ್ನು ಮನಮೋಹನ್ ಹಾಗೂ ಸೋನಿಯಾ ಜೋಡಿ ಮಾಡಿ ಮುಗಿಸಿದೆ.

ಪ್ರಸ್ತುತ, ಈ ವರ್ಷದ (2009) ವಾಷರ್ಿಕ ವರದಿ ಸಿದ್ಧಪಡಿಸುತ್ತಿರುವ ಯುಎಸ್ಸಿಐಆರ್ಎಫ್ ಭಾರತವನ್ನು ಕುರಿತ ಅಧ್ಯಾಯವನ್ನು ಬರೆಯದೇ ಇನ್ನೂ ಖಾಲಿ ಇಟ್ಟುಕೊಂಡಿದೆ. ಸೋನಿಯಾ ಸಹಕಾರದಿಂದ ಅದರ `ಖುದ್ದು ತನಿಖೆ' ಪೂರ್ಣವಾದ ನಂತರ ಈ ಅಧ್ಯಾಯ ಸಿದ್ಧವಾಗುತ್ತದೆ.

ಹಿಂದಿನ ಪೋಪ್. ಎರಡನೇ ಜಾನ್ ಪಾಲ್ ಭಾರತಕ್ಕೆ ಎರಡು ಬಾರಿ `ಅಧಿಕೃತ' ಭೇಟಿ ನೀಡಿದ್ದರು. ಪ್ರತಿಬಾರಿಯೂ ಅವರು ಬಂದಾಗ ರಾಷ್ಟ್ರೀಯ ಅಧ್ಯಕ್ಷನೊಬ್ಬನಿಗೆ ಸಿಗುವ ರಾಜಮಯರ್ಾದೆಯನ್ನೇ ಪಡೆದುಕೊಂಡಿದ್ದರು. ನಮ್ಮ `ಸೆಕ್ಯೂಲರ್' ಮಾಧ್ಯಮಗಳಂತೂ ಅವರಿಗೆ ಮಹಾ ಜಗದ್ಗುರುವಿನ ಪಟ್ಟವನ್ನೇ ಕಟ್ಟಿದ್ದವು. ನಮ್ಮ ಸೆಕ್ಯೂಲರ್ ಸಕರ್ಾರದ ಅತಿಥಿ (ಅಥವಾ ಅಭ್ಯಾಗತ) ಆಗಿದ್ದುಕೊಂಡೇ ಅವರು ಇಡೀ ಭಾರತವನ್ನು, ಹಾಗೂ ಏಷ್ಯಾವನ್ನು `ಕ್ರೈಸ್ತ ಭೂಮಿಯನ್ನಾಗಿ ಮಾರ್ಪಡಿಬೇಕು' ಎಂದು ಕ್ಯಾಥೋಲಿಕ್ ಮಿಷನರಿಗಳಿಗೆ ಬಹಿರಂಗ ಕರೆ ನೀಡಿ ಹೋಗಿದ್ದರು.

ಈಗಿನ ಪೋಪ್ 16ನೇ ಬೆನೆಡಿಕ್ಟ್ ಉರುಫ್ ಜೋಸೆಫ್ ರಾಟ್ಸಿಂಗರ್ ಇನ್ನೂ ಭಾರತಕ್ಕೆ ಬಂದಿಲ್ಲ. ಅವರನ್ನು ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಈ ಪೋಪ್ ಕಳೆದ ವಾರ ಪಶ್ಚಿಮ ಏಷ್ಯಾಕ್ಕೆ ಹೋಗಿದ್ದರು. ಅಲ್ಲಿನ ಮುಸ್ಲಿಂ ದೇಶಗಳನ್ನೂ ಮತಾಂತರಿಸಬೇಕು ಎಂಬುದು ಕ್ಯಾಥೋಲಿಕ್ಕರ ಬಹುಕಾಲದ ಯೋಜನೆ (ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಅವರು ಜಿಹಾದಿಗಳಿಂದ ಯೂರೋಪ್ ಅನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ, ಅದಿರಲಿ). ಆದರೆ ಅಲ್ಲಿ ಪೋಪ್ ನೀಡಿದ ಕರೆ ಏನು? `ಮುಸ್ಲಿಮರೊಡನೆ ಕ್ರೈಸ್ತರು ಹೊಂದಿಕೊಂಡು ಬಾಳಬೇಕು; ಸ್ವತಂತ್ರ ಪ್ಯಾಲೆಸ್ತೀನ್ ನಿಮರ್ಾಣವಾಗಬೇಕು'!

ಭಾರತದ ವಿಷಯದಲ್ಲಿ ಅವರು ಎಂತಹ ಕರೆ ನೀಡಬಹುದು? ಅದಕ್ಕೆ ಯಾರು ಕಾರಣ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ