ಮಂಗಳವಾರ, ಆಗಸ್ಟ್ 03, 2010

ಕಸಬ್ ಇನ್ನೊಬ್ಬ ಅಫ್ಜಲ್ ಗುರು ಆಗಬಾರದು



ಅಜ್ಮಲ್ ಕಸಬ್ಗೆ ನೇಣು ಶಿಕ್ಷೆಯನ್ನು ವಿಧಿಸಿದ್ದು ಸಂತೋಷ. ಲೋಕಕಂಟಕರಿಗೆ ಮರಣದಂಡನೆಯೇ ಅತ್ಯಂತ ಸಹಜವಾದ ಶಿಕ್ಷೆ. ಸೈತಾನರಿಗೆ ಮಾನವ ಹಕ್ಕುಗಳು ಅನ್ವಯವಾಗುವುದಿಲ್ಲ. ಅಪರಾಧಕ್ಕೆ ತಕ್ಕ ಶಿಕ್ಷೆ ವಿಧಿಸುವುದೇ ಸರಿಯಾದ ನ್ಯಾಯಶಾಸ್ತ್ರ. ಆದರೆ ಈ ಶಿಕ್ಷೆಯನ್ನು ಎಷ್ಟು ದಕ್ಷತೆಯಿಂದ ಮತ್ತು ಪ್ರಾಮಾಣಿಕತೆಯಿಂದ ಜಾರಿಗೊಳಿಸಲಾಗುತ್ತದೆ ಎಂಬುದು ಮಾತ್ರ ಕಾದು ನೋಡಬೇಕಾದ ಅಂಶ.

ಪಾಕಿಸ್ತಾನದ ಜಿಹಾದಿ ಭಯೋತ್ಪಾದಕನೊಬ್ಬ ತನ್ನ ಕಾಯರ್ಾಚರಣೆಯಲ್ಲಿ ನಿರತನಾಗಿರುವಾಗ ಜೀವಂತವಾಗಿ ಸೆರೆಸಿಕ್ಕಿರುವುದು ಇದೇ ಮೊದಲು. ಪಾಕಿ ಉಗ್ರನೊಬ್ಬನ ಅಪರಾಧ ಭಾರತದ ನ್ಯಾಯಾಲಯದಲ್ಲಿ ಸಾಬೀತಾಗಿರುವುದೂ ಇದೇ ಮೊದಲು. ಆದರೆ ಭಯೋತ್ಪಾದನಾ ಕೃತ್ಯ ನ್ಯಾಯಾಲಯದಲ್ಲಿ ಸಾಬೀತಾಗಿದ್ದು ಇದೇ ಮೊದಲಲ್ಲ. ಉಗ್ರನೊಬ್ಬನಿಗೆ ನೇಣು ಶಿಕ್ಷೆ ವಿಧಿಸಿದ್ದೂ ಇದೇ ಮೊದಲೇನಲ್ಲ.

ಸಂಸತ್ ಭವನದ ಮೇಲೆ ದಾಳಿ ಮಾಡಿದ ಆರೋಪ ಸಾಬೀತಾಗಿ ಸುಪ್ರೀಂ ಕೋಟರ್್ ಎರಡು ಬಾರಿ ಗಲ್ಲು ಶಿಕ್ಷೆಯನ್ನು ಖಾಯಂ ಮಾಡಿದ್ದರೂ ಅಫ್ಜಲ್ ಗುರುವನ್ನು ಯುಪಿಎ ಸಕರ್ಾರ ಇನ್ನೂ ಗಲ್ಲಿಗೇರಿಸಿಲ್ಲ. ಹಾಗೆಯೇ ರಾಜೀವ್ ಗಾಂಧಿ ಹತ್ಯೆಯಲ್ಲಿ ಭಾಗಿಯಾಗಿದ್ದ ಮುರುಗನ್ಗೂ ಗಲ್ಲು ವಿಧಿಸಲ್ಪಟ್ಟಿದೆ. ಆದರೂ ಅವನನ್ನು ಎರಡು ದಶಕಗಳಿಂದ ಇನ್ನೂ ಜೀವಂತವಾಗಿ ಇಡಲಾಗಿದೆ. ಆತನ ಪತ್ನಿ ನಳಿನಿಗೆ ಜೀವದಾನ ನೀಡಲಾಗಿದೆ.
  
ಭಾರತದೊಳಗೆ ಯಾರು ನೆರವು ನೀಡದೇ ಲಷ್ಕರ್-ಎ-ತೋಯ್ಬಾದ ಸೈತಾನರು ಮುಂಬೈಗೆ ಬಂದಿಳಿದು ದಾಳಿ ಮಾಡುವುದು ಅಸಾಧ್ಯ ಎಂಬುದು ಎಲ್ಲರಿಗೂ ಗೊತ್ತು. ಆದರೆ ಈ ಕುರಿತ ತನಿಖೆ ಸಮರ್ಪಕವಾಗಿಲ್ಲ, ಪ್ರಾಮಾಣಿಕವಾಗಿಲ್ಲ. ದೋಷಾರೋಪ ಮಾಡಿದ್ದ ಇಬ್ಬರು ಭಾರತೀಯರ ಬಿಡುಗಡೆಯಾಗಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. `ಪೋಟಾ'ದಂತಹ ವಿಶೇಷ ಕಾನೂನು ಇದ್ದಿದ್ದರೆ ಅವರು ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತಿತ್ತು.
  
ಅಜ್ಮಲ್ ಕಸಬ್ ಸಿಕ್ಕಿಹಾಕಿಕೊಳ್ಳದೇ ಇದ್ದಿದ್ದರೆ ಈ ಕೇಸಿನ ಸ್ವರೂಪವೇ ಬದಲಾಗಿರುತ್ತಿತ್ತು. ಅವನು ಜೀವಂತವಾಗಿ ಸೆರೆ ಸಿಕ್ಕಿದ್ದೇ ಇಲ್ಲಿ ಮಹತ್ವವಾದ ಸಂಗತಿ. ಪಾಕಿಸ್ತಾನಕ್ಕೆ ಹಾಗೂ ಜಿಹಾದಿ ಪರವಾದ ಶಕ್ತಿಗಳ ಪಾಲಿಗೆ ಇದು ಪೇಚಿನ ಸಂಗತಿಯೂ ಹೌದು. ಅವನೂ ಉಳಿದ ಉಗ್ರರಂತೆ ಹತನಾಗಿದ್ದರೆ ಪಾಕಿಸ್ತಾನದ ಕೆಲಸ ಸುಲಭವಾಗುತ್ತಿತ್ತು. ಆತ ಪಾಕಿಸ್ತಾನದವನೇ ಅಲ್ಲ, ಲಷ್ಟರ್-ಎ-ತೋಯ್ಬಾದವನೂ ಅಲ್ಲ ಎಂದು ವಾದಿಸುವುದು ಸುಲಭವಾಗುತ್ತಿತ್ತು. ಭಾರತದಲ್ಲೂ ಇಷ್ಟು ದೊಡ್ಡ ಸಂಚಲನ ಸೃಷ್ಟಿಯಾಗುತ್ತಿರಲಿಲ್ಲ. ನಮ್ಮ ಮಂತ್ರಿಗಳು ಪಾಕಿಸ್ತಾನವನ್ನು `ಪರೋಕ್ಷವಾಗಿ' ಉಲ್ಲೇಖಿಸಿ ಸುಮ್ಮನಾಗುತ್ತಿದ್ದರು. ಪಾಕ್ ಸಕರ್ಾರ `ಇದು ಹುರುಳಿಲ್ಲದ ಆರೋಪ' ಎಂದು ತೊಪ್ಪೆಸಾರಿಸಿ ಮೌನವಾಗುತ್ತಿತ್ತು. ದಾಖಲೆಗಳು, ಪುರಾವೆಗಳು ಹೀಗೆ ಎಲ್ಲವನ್ನೂ `ಇದು ಸರಿಯಿಲ್ಲ, ಇದು ಸಾಕಾಗುವುದಿಲ್ಲ' ಎಂದು ತಿರಸ್ಕರಿಸುವುದು ಸುಲಭ. ಆದರೆ ಕೊಲ್ಲಲು ಬಂದ ಭಯೋತ್ಪಾದಕನೇ ಸಿಕ್ಕಿಬಿದ್ದರೆ ಅದನ್ನು ಅಲ್ಲಗಳೆಯುವುದು ಸುಲಭವಲ್ಲ. ಕಸಬ್ನನ್ನು ಹಿಡಿದು ಹುತಾತ್ಮನಾದ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ತುಕಾರಾಮ್ ಉಂಬಳೆಗೆ ದೇಶದ ಜನರೆಲ್ಲ ಚಿರಋಣಿಗಳು.
  
ಇಲ್ಲಿ ಪತ್ರಕರ್ತರ ಸಾಹಸ ಹಾಗೂ ಪ್ರಾಮಾಣಿಕತೆಗಳು ಮಹತ್ವದ ಪಾತ್ರ ವಹಿಸಿವೆ. ಈ ಪ್ರಕರಣದ ಇತ್ಯರ್ಥಕ್ಕೆ ತುಂಬ ಸಹಕಾರಿಯಾಗಿವೆ. ಈ ಪೈಕಿ ಮೊದಲನೆಯದು ಕಸಬ್ ಗನ್ ಹಿಡಿದು ಹತ್ಯೆಗೆ ಸಜ್ಜಾಗಿ ನಿಂತಿದ್ದ ಫೋಟೋ. ವ್ಯಾಪಕ ಪ್ರಸಾರ ಕಂಡಿರುವ ಅದನ್ನು ತೆಗೆದದ್ದು `ಮುಂಬೈ ಮಿರರ್' ಪತ್ರಿಕೆಯ ಫೋಟೋ ಎಡಿಟರ್ ಸೆಬಾಸ್ಟಿಯನ್ ಡಿ ಸೋಜಾ. ಅವರು ಮಾಡಿರುವ ಸಾಹಸ ಈ ಸಮಯದಲ್ಲಿ ಮೆಚ್ಚುವಂತಹುದು.
  
`ನನ್ನ ಕೈಲಿ ಕ್ಯಾಮೆರಾ ಬದಲು ಗನ್ ಇದ್ದಿದ್ದರೆ ಅವನನ್ನು ಅಲ್ಲೇ ಕೊಂದು ಹಾಕುತ್ತಿದ್ದೆ' ಎಂದು ಅವರು ಆ ಸಂದರ್ಭದಲ್ಲಿ ಉದ್ಘರಿಸಿದ್ದರು. ಬಹುಶಃ ಅವರ ಬಳಿ ಗನ್ ಇದ್ದಿದ್ದರೆ ಒಂದಿಷ್ಟು ಜನರ ಜೀವ ಉಳಿಸಲು ನೆರವಾಗುತ್ತಿತ್ತು. ಈಗ ಅವರ ಕ್ಯಾಮೆರಾ ಬಹಳ ಮಹತ್ವವಾದದ್ದನ್ನು ಸಾಧಿಸಿದೆ. ಪಾಕಿಸ್ತಾನದ ಸೈತಾನ ರೂಪವನ್ನು ಜಗತ್ತಿಗೆ ಹಸಿಹಸಿಯಾಗಿ ತೋರಿಸಿಕೊಟ್ಟಿದೆ.
  
ಈ ಪ್ರಕರಣದಲ್ಲಿ ಪತ್ರಕರ್ತರು ನಿರ್ವಹಿಸಿದ ಇನ್ನೊಂದು ಮುಖ್ಯ ಭೂಮಿಕೆ ಎಂದರೆ, ಪಾಕಿಸ್ತಾನದಲ್ಲಿ ಕಸಬ್ನ ವಿಳಾಸ ಏನು? ಅವನ ಹಿನ್ನೆಲೆ ಏನು? ಅವನ ಕುಟುಂಬ ಎಲ್ಲಿದೆ? - ಎಂಬುದನ್ನು ಪತ್ತೆಹಚ್ಚಿದ್ದು. ಅಜ್ಮಲ್ ಕಸಬ್ ಪಾಕಿಸ್ತಾನದ ಪಂಜಾಬ್ ರಾಜ್ಯದ ಒಕಾರಾ ಜಿಲ್ಲೆಯ ಫರೀದ್ಕೋಟ್ ಗ್ರಾಮದವನು; ಅವನ ಅಪ್ಪ ದಹೀ ಪೂರಿ ಮಾರುವವನು; ಅವನ ಅಣ್ಣ ಅಫ್ಜಲ್ ಕಸಬ್ ಲಾಹೋರ್ನಲ್ಲಿ ಇದ್ದಾನೆ. ಅವನ ಅಕ್ಕ ರುಕಯ್ಯಾ, ತಂಗಿ ಸುರಯ್ಯಾ ಹಾಗೂ ತಮ್ಮ ಮುನೀರ್ ಎಲ್ಲ ಫರೀದ್ಕೋಟ್ನಲ್ಲೇ ಇದ್ದಾರೆ' - ಇದು ಪಾಕಿಸ್ತಾನದ ಕೆಲವು ಪತ್ರಕರ್ತರು ಹೊರಗೆಡವಿದ ಮಾಹಿತಿ. ಈ ವಿವರಗಳು ಪಾಕಿಸ್ತಾನ ಸಕರ್ಾರವನ್ನು ದಂಗು ಬಡಿಸಲು ಸಾಕಾಯಿತು. ಕಸಬ್ ಪಾಕಿಸ್ತಾನದವನೇ ಅಲ್ಲ ಎಂದು ವಾದಿಸಿಕೊಂಡು ಬರುತ್ತಿದ್ದ ಪಾಕ್ ಸಕರ್ಾರ 2009ರ ಜನವರಿಯಲ್ಲಿ `ಕಸಬ್ ಪಾಕಿಸ್ತಾನದವನು' ಎಂಬುದನ್ನು ಒಪ್ಪಿಕೊಳ್ಳಬೇಕಾಯಿತು.
  
`ಮುಂದೇನು?' ಎಂಬುದು ಈಗ ಜನಸಾಮನ್ಯರ ಮನಸ್ಸಿನಲ್ಲಿ ಏಳುವ ಪ್ರಶ್ನೆ. ಇಲ್ಲಿ ಎರಡು ಹಂತಗಳಿವೆ. ಒಂದು ಕಸಬ್ನನ್ನು ಶಿಕ್ಷಿಸುವುದು. ಇನ್ನೊಂದು ಪಾಕಿಸ್ತಾನದ ಭಯೋತಾದಕ ವ್ಯವಸ್ಥೆಯನ್ನು ನಿಮರ್ೂಲನೆ ಮಾಡುವುದು. ಮೊದಲನೆಯದರ ವಿಷಯದಲ್ಲಿ ನಮ್ಮ ಸಕರ್ಾರ ಯಾವ ರೀತಿ ನಡೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕು. ಎರಡನೆಯದು ಭಾರತೀಯರ ಪಾಲಿಗೆ ಯಾವಾಗ ನನಸಾಗುತ್ತದೋ ಗೊತ್ತಿಲ್ಲ.
  
ಕಸಬ್ ವಿಷಯಕ್ಕೆ ಬಂದರೆ, ಆತ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು. ಸುಪ್ರೀಮ್ ಕೋಟರ್ಿನಲ್ಲಿ ಪ್ರಕರಣ ಇತ್ಯರ್ಥವಾಗಲು ಇನ್ನೂ ಕೆಲವರ್ಷಗಳು ಬೇಕಾಗುತ್ತವೆ. ಅಲ್ಲಿಯವರೆಗೆ ಆತ ಜೀವಂತವಾಗಿಯೇ ಇರುತ್ತಾನೆ. ಸುಪ್ರೀಮ್ ಕೋಟರ್ು ಅವನ ಮರಣ ದಂಡನೆಯನ್ನು ಖಾಯಂಗೊಳಿಸಿದರೆ ಆತ ಕ್ಷಮಾದಾನಕ್ಕಾಗಿ ರಾಷ್ಟ್ರಪತಿಗೆ ಮನವಿ ಸಲ್ಲಿಸಬಹುದು. ನಮ್ಮ ರಾಷ್ಟ್ರಪತಿಗಳು ಹಾಗೂ ಕೇಂದ್ರ ಸಚಿವ ಸಂಪುಟ ಈ ವಿಷಯದಲ್ಲಿ ನಿಧರ್ಾರಕ್ಕೆ ಬರಬೇಕಾಗುತ್ತದೆ. ಅವರುಗಳು ಇನ್ನಷ್ಟು ವರ್ಷಗಳನ್ನು ಉರುಳಿಸಬಹುದು.

   ಈವರೆಗೆ 27 ಕ್ಷಮಾದಾನದ ಅಜರ್ಿಗಳು ರಾಷ್ಟ್ರಪತಿ ಭವನದ ಮಂದಿವೆ. ಅವುಗಳನ್ನು ಸೀನಿಯಾರಿಟಯ ಪ್ರಕಾರ ಇತ್ಯರ್ಥ ಮಾಡಲು ಹೊರಟರೆ (ಇದೂ ಅನುಮಾನವೇ!) ಕಸಬ್ ಜೈಲಿನಲ್ಲೇ ಮುದುಕನಾಗುತ್ತಾನೆ. ಭಾರತದ ಮೇಲೆ ಯುದ್ಧ ಸಾರತಿದ ವಿದೇಶಿ ಉಗ್ರನ ವಿಷಯದಲ್ಲಿ ವಿಶೇಷ ಆದ್ಯತೆ ನೀಡಿ ಬೇಗ ತೀಮರ್ಾನ ತೆಗೆದುಕೊಳ್ಳಬೇಕಾಗುತ್ತದೆ. ಈ ವಿಷಯದಲ್ಲಿ ನಮ್ಮ ಯುಪಿಎ ಸಕರ್ಾರದ ಟ್ರ್ಯಾಕ್ ರೆಕಾಡರ್್ ಅಷ್ಟಾಗಿ ಸರಿಯಿಲ್ಲ. ಅದು ಪಾಕಿಸ್ತಾನದ ರಾಜತಾಂತ್ರಿಕ ಒತ್ತಡಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬುದೂ ಗಮನಾರ್ಹ ಸಂಗತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ