ಮಂಗಳವಾರ, ಆಗಸ್ಟ್ 03, 2010

`ಕಿಂದರಿ ಜೋಗಿ' ಹಾಗೂ `ಕಿಂದರಿ ಜೋಗಿ ಹಬ್ಬ'

* ಕನರ್ಾಟಕದ ಇತಿಹಾಸದಲ್ಲಿ ಹಲವು ಪ್ರಥಮಗಳನ್ನು ಸೃಷ್ಟಿಸಿರುವ ಹೆಗ್ಗಳಿಕೆ ನಾಡಿನ ಹಿರಿಯ ಪತ್ರಿಕೆಯಾದ `ಸಂಯುಕ್ತ ಕನರ್ಾಟಕ'ದ್ದು. 2007ರಲ್ಲಿ ನಾವು ಆರಂಭಿಸಿದ ಮಕ್ಕಳ ವಿಶೇಷ ಪುರವಣಿ `ಕಿಂದರಿ ಜೋಗಿ' ಇಂದು ನಾಡೆಲ್ಲ ಮನೆಮಾತಾಗಿದೆ. ಪ್ರತಿ ಶನಿವಾರ ಪ್ರಕಟವಾಗುವ ಇದು ನಾಡಿನಲ್ಲೇ ವಿಶಿಷ್ಟ ಪುರವಣಿ ಎನಿಸಿದೆ. ಕನ್ನಡದ ಯಾವ ಪತ್ರಿಕೆಯೂ ಮಕ್ಕಳಿಗಾಗಿ ಇಂತಹ ಒಂದು ಅತ್ಯುಪಯುಕ್ತ ಪುರವಣಿಯನ್ನು ಇದುವರೆಗೆ ಆರಂಭಿಸಿಲ್ಲ, ಇಷ್ಟು ಯಶಸ್ವಿಯಾಗಿ ನಡೆಸಿಲ್ಲ.

* ಪ್ರತಿವಾರ ಸುಮಾರು 10-12 ಲಕ್ಷ ಮಕ್ಕಳು `ಕಿಂದರಿ ಜೋಗಿ' ಪುರವಣಿಯನ್ನು ಓದುತ್ತಾರೆ. ಅವರ ಪಠ್ಯಕ್ಕೆ ಪೂರಕವಾದ ಹಾಗೂ ಪಠ್ಯವನ್ನು ಮೀರಿದ ಅದ್ಭುತ ಮಾಹಿತಿ ಹಾಗೂ ಮನೋರಂಜನೆಗಳನ್ನು ಪಡೆಯುತ್ತಿದ್ದಾರೆ.

* 12 ವರ್ಣಮಯ ಪುಟಗಳು, ಆಕರ್ಷಕ ವಿನ್ಯಾಸ ಹೊಂದಿರುವ `ಕಿಂದರಿ ಜೋಗಿ'ಯಲ್ಲಿ ಪ್ರತಿವಾರವೂ ಹೊಸ ಹೊಸ ವೈಜ್ಞಾನಿಕ ಸಂಶೋಧನೆಗಳು, ಆಯಾ ವಾರದ ವೈಜ್ಞಾನಿಕ ಕ್ಷೇತ್ರದ ಬೆಳವಣಿಗೆಗಳು, ಬುದ್ಧಿಗೆ ಕಸರತ್ತು ಕೊಡುವ ಆಟಗಳು, ನೈತಿಕ ಶಿಕ್ಷಣ, ವಿಶ್ವಕೋಶ, ವ್ಯಕ್ತಿತ್ವ ಬೆಳವಣಿಗೆಯ ಮಾರ್ಗದರ್ಶನ, ವೈವಿಧ್ಯಮಯ ವಿಷಯಗಳನ್ನು ತಿಳಿಸುವ `ಸಂಜೀವನ' ಅಂಕಣ, ಕಥೆ-ಕವನ, ಸಂಸೃತಿ, ಇತಿಹಾಸ - ಇವೆಲ್ಲ ಇರುತ್ತವೆ. ಆದರೆ ಇವು ಪಠ್ಯಪುಸ್ತಕದ ರೀತಿ ಇರದೇ, ಮಕ್ಕಳೇ ಮುಗಿಬಿದ್ದು ಓದಲು ತವಕ ಪಡುವ ಹಾಗಿರುವುದು `ಕಿಂದರಿ ಜೋಗಿ'ಯ ವಿಶೇಷತೆ.

* ಮಕ್ಕಳ ಶಿಕ್ಷಣ, ಜ್ಞಾನ ಹಾಗೂ ಮನೋರಂಜನೆಗಳಿಗೆ ಇಷ್ಟೆಲ್ಲ ವಿಷಯಗಳನ್ನು ಒಂದೇ ಪುರವಣಿಯಲ್ಲಿ ನೀಡುತ್ತಿರುವುದು ಕೇವಲ ನಾವು ಮಾತ್ರ. ಇದರ ಜೊತೆಗೆ ಮಕ್ಕಳು ತಮ್ಮ ಸ್ವಂತ ಬರಹಗಾರಿಕೆ ಹಾಗೂ ಚಿತ್ರರಚನೆಯ ಪ್ರತಿಭೆಯನ್ನು ತೋರಲೂ ಸಹ ಪುರವಣಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

* ನಮಗೆ ತಿಳಿದಿರುವ ಹಾಗೆ, ದೇಶವ್ಯಾಪಿ ಪ್ರಸಾರವಿರುವ ಕೆಲವು ಹಿಂದಿ ಹಾಗೂ ಇಂಗ್ಲಿಷ್ ಪತ್ರಿಕೆಗಳು ಮಕ್ಕಳ ಪುರವಣಿಗಳನ್ನು ಹೊರತರುತ್ತಿವೆ. ಆದರೆ ಈ ಪೈಕಿ ಬಹುತೇಕ ಪತ್ರಿಕೆಗಳು ತಾವೇ ನೇರವಾಗಿ ಈ ಪುರವಣಿಗಳನ್ನು ತಯಾರಿಸುತ್ತಿಲ್ಲ. ಇತರ ವೃತ್ತಿಪರ ವ್ಯಾಪಾರೀ ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡಿ ತಮ್ಮ ಬ್ರಾಂಡ್ ನೇಮ್ನಲ್ಲಿ ತಯಾರಿಸಿಕೊಳ್ಳುತ್ತಿವೆ. ಆದರೆ `ಕಿಂದರಿ ಜೋಗಿ' ನೂರಕ್ಕೆ ನೂರರಷ್ಟು ನಮ್ಮ ಸ್ವಂತ ತಯಾರಿಕೆ. ಸಂಪಾದಕೀಯ, ವಿನ್ಯಾಸ ಹಾಗೂ ಮುದ್ರಣ - ಎಲ್ಲವೂ ನಮ್ಮದೇ ಎಂದು ಈ ಸಂದರ್ಭದಲ್ಲಿ ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ.

* ಪ್ರತಿದಿನ ನಮ್ಮ ಕಾಯರ್ಾಲಯಕ್ಕೆ ವಿದ್ಯಾಥರ್ಿಗಳಿಂದ ನೂರಾರು ಪತ್ರಗಳು ಬರುತ್ತವೆ. ಚಿತ್ರಗಳು, ಲೇಖನಗಳು, ಕವನಗಳು ಬರುತ್ತವೆ. ಅಷ್ಟರ ಮಟ್ಟಿಗೆ ಪುರವಣಿಯು ಜನಪ್ರಿಯತೆ ಗಳಿಸಿದೆ.

* `ಕಿಂದರಿ ಜೋಗಿ'ಗೆ ಇನ್ನೂ ಒಂದು ವಿಶೇಷತೆಯಿದೆ. ಇದು ಬಹಳ ಮುಖ್ಯವಾದದ್ದು. ಅದೇನೆಂದರೆ, ಈ ಪುರವಣಿ ಕನರ್ಾಟಕದಾದ್ಯಂತ ನೇರವಾಗಿ ಶಾಲೆಗಳನ್ನು, ಶಾಲೆಯ ಮೂಲಕ ಮಕ್ಕಳನ್ನು ತಲುಪುತ್ತಿರುವುದು.

* ಶಾಲೆಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ನಾವು ಪ್ರತಿ ಶನಿವಾರ `ಸಂಯುಕ್ತ ಕನರ್ಾಟಕ'ವನ್ನು ನೀಡುತ್ತಿದ್ದೇವೆ. ಅನೇಕ ಬಡವಿದ್ಯಾಥರ್ಿಗಳಿಗೆ ಉಚಿತವಾಗಿಯೂ ತಲುಪಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾಡಿನ ಹಲವು ಗಣ್ಯರ ಹಾಗೂ ಸಂಸ್ಥೆಗಳ ನೆರವು ನಮಗೆ ಸಿಕ್ಕಿದೆ.

* ಶಾಲೆಗಳನ್ನು ತಲುಪುವುದೆಂದರೆ, ಶಾಲೆಯ ಲೈಬ್ರರಿಯನ್ನೋ, ಪ್ರಿನ್ಸಿಪಾಲರ ಕೋಣೆಯನ್ನೋ ತಲುಪುವುದಲ್ಲ. ಪ್ರತಿ ಶಾಲೆಗೂ ನಾವು ರಿಯಾಯಿತಿ ದರದಲ್ಲಿ ನೂರಾರು ಪ್ರತಿಗಳನ್ನು ಕಳುಹಿಸುತ್ತೇವೆ. ಅವುಗಳನ್ನು ವಿದ್ಯಾಥರ್ಿಗಳು ಶಾಲೆಯಿಂದ ಪಡೆದುಕೊಂಡು ಮನೆಗೆ ತೆಗೆದುಕೊಂಡು ಹೋಗಿ ಇಟ್ಟುಕೊಳ್ಳುತ್ತಾರೆ. ಈ ಪ್ರಸರಣಾ ಮಾದರಿ ತುಂಬ ಯಶಸ್ವಿಯಾಗಿದೆ.

* `ಸಂಯುಕ್ತ ಕನರ್ಾಟಕ'ವು ತನ್ನ ದೈನಂದಿನ ಪ್ರಸಾರ ಸಂಖ್ಯೆಗಿಂತಲೂ ಶನಿವಾರದಂದು ಸುಮಾರು 54,000 ದಷ್ಟು ಹೆಚ್ಚಿನ ಪ್ರಸಾರ ಸಂಖ್ಯೆಯನ್ನು ಹೊಂದಿದೆ. ಇದು ಶನಿವಾರಗಳಲ್ಲಿ ನಾವು ಹೊಂದಿರುವ ಹೆಚ್ಚುವರಿ ಪ್ರಸರಣೆ. ಇದಕ್ಕೆ ಕಾರಣ, `ಕಿಂದರಿ ಜೋಗಿ'ಯು ಹೊಂದಿರುವ ವಿಶೇಷ ಆಕರ್ಷಣೆ.




* ಈ ಕುರಿತ ನಿಖರವಾದ ಅಂಕಿಅಂಶವನ್ನು ನೋಡೋಣ. `ಸಂಯುಕ್ತ ಕನರ್ಾಟಕ'ವು ಪ್ರತಿದಿನ ಐದು ಭಿನ್ನ ಆವೃತ್ತಿಗಳಲ್ಲಿ ರಾಜ್ಯದ 5 ಸ್ಥಳಗಳಿಂದ ಪ್ರಕಟವಾಗುತ್ತದೆ. ಬೆಂಗಳೂರು, ಹುಬ್ಬಳ್ಳಿ, ಗುಲ್ಬಗರ್ಾ, ದಾವಣಗೆರೆ ಹಾಗೂ ಮಂಗಳುರು - ಇವೇ ಆ 5 ಕೇಂದ್ರಗಳು. ಈ ಎಲ್ಲ 5 ಘಟಕಗಳಲ್ಲೂ `ಕಿಂದರಿ ಜೋಗಿ'ಗೆ ವಿಶೇಷ ಪ್ರಸರಣೆ ಇದೆ. ಈ ಘಟಕಗಳ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಿಗೆ, ಬಹುತೇಕ ತಾಲ್ಲೂಕುಗಳಿಗೆ ಹಾಗೂ ಅಸಂಖ್ಯಾತ ಗ್ರಾಮಗಳಿಗೆ ಪುರವಣಿಯನ್ನು ತಲುಪಿಸುತ್ತಿದ್ದೇವೆ.

* ಬೆಂಗಳೂರು ನಗರದಲ್ಲಿ 69 ಶಾಲೆಗಳಿಗೆ ಹಾಗೂ ಸಂಸ್ಥೆಗಳಿಗೆ ನಾವು `ಕಿಂದರಿ ಜೋಗಿ'ಯನ್ನು ಸರಬರಾಜು ಮಾಡುತ್ತಿದ್ದೇವೆ. ಇಲ್ಲಿ 15,116 ಪ್ರತಿಗಳು ಸರಬರಾಜಾಗುತ್ತಿವೆ. ಮಂಗಳೂರಿಗೂ ಬೆಂಗಳೂರಿನ  ಘಟಕದಿಂದಲೇ `ಕಿಂದರಿ ಜೋಗಿ'ಯ ಪ್ರತಿಗಳು ಹೋಗುತ್ತವೆ (ದೈನಿಕದ ಮಂಗಳೂರು ಆವೃತ್ತಿ ಅಲ್ಲೇ ಮುದ್ರಣಗೊಳ್ಳುತ್ತದೆ). ಮಂಗಳೂರು ವಿಭಾಗದಲ್ಲಿ 109 ಶಾಲೆಗಳಿಗೆ ಒಟ್ಟು 7,918 ಪ್ರತಿಗಳು ಹೋಗುತ್ತಿವೆ. ಒಟ್ಟಾರೆಯಾಗಿ ನಮ್ಮ ಬೆಂಗಳೂರಿನ ಘಟಕದಿಂದ 23,034 ಪ್ರತಿಗಳು ಪ್ರಸಾರಗೊಳ್ಳುತ್ತಿವೆ. ಹಾಗೆಯೇ ನಮ್ಮ ಹುಬ್ಬಳ್ಳಿ ಕೇಂದ್ರದಿಂದ 409 ಶಾಲೆಗಳಿಗೆ 23,322 ಪ್ರತಿಗಳು ಹೋಗುತ್ತಿವೆ. ದಾವಣಗೆರೆ ಕೇಂದ್ರದಿಂದ 14 ಶಾಲೆಗಳಿಗೆ 1,258 ಪ್ರತಿಗಳನ್ನು ಕಳುಹಿಸುತ್ತಿದ್ದೇವೆ. ಒಟ್ಟಾರೆಯಾಗಿ ಹುಬ್ಬಳ್ಳಿಯ ಘಟಕದಿಂದ 454 ಶಾಲೆಗಳಿಗೆ 24,580 ಪ್ರತಿಗಳು ಹೋಗುತ್ತಿವೆ. ಗುಲ್ಬಗರ್ಾ ಘಟಕದಿಂದ 283 ಶಾಲೆಗಳಿಗೆ 7,343 `ಕಿಂದರಿ ಜೋಗಿ'ಯ ಪ್ರತಿಗಳು ರವಾನೆಯಾಗುತ್ತಿವೆ.

* ಒಟ್ಟಾರೆಯಾಗಿ ರಾಜ್ಯಮಟ್ಟದಲ್ಲಿ ಹೇಳುವುದಾರೆ, ಪ್ರತಿ ಶನಿವಾರ ರಾಜ್ಯದ 915 ಶಾಲೆಗಳಿಗೆ ಒಟ್ಟು 54,957 `ಕಿಂದರಿ ಜೋಗಿ'ಯ ಪ್ರತಿಗಳು ಸರಬರಾಜಾಗುತ್ತಿವೆ. ಅಂದರೆ ಇದು ಶನಿವಾರ ಮಾತ್ರ ಸಂಯುಕ್ತ ಕನರ್ಾಟಕ ಕೊಳ್ಳುವವರನ್ನು ಕುರಿತ ಮಾಹಿತಿ. ಇದರ ಜೊತೆಗೆ ನಮ್ಮ ದೈನಂದಿನ ಪ್ರಸಾರ ಸಂಖ್ಯೆಯನ್ನು ಸೇರಿಸಿಕೊಳ್ಳಬೇಕು.

* ಒಟ್ಟಾರೆಯಾಗಿ ರಾಜ್ಯಮಟ್ಟದಲ್ಲಿ ಹೇಳುವುದಾರೆ, ಪ್ರತಿ ಶನಿವಾರ ರಾಜ್ಯದ 915 ಶಾಲೆಗಳಿಗೆ ಒಟ್ಟು 54,957 `ಕಿಂದರಿ ಜೋಗಿ'ಯ ಪ್ರತಿಗಳು ಸರಬರಾಜಾಗುತ್ತಿವೆ. ಅಂದರೆ ಇದು ಶನಿವಾರ ಮಾತ್ರ ಸಂಯುಕ್ತ ಕನರ್ಾಟಕ ಕೊಳ್ಳುವವರನ್ನು ಕುರಿತ ಮಾಹಿತಿ. ಇದರ ಜೊತೆಗೆ ನಮ್ಮ ದೈನಂದಿನ ಪ್ರಸಾರ ಸಂಖ್ಯೆಯನ್ನು ಸೇರಿಸಿಕೊಳ್ಳಬೇಕು.

* ಇನ್ನು `ಕಿಂದರಿ ಜೋಗಿ ಹಬ್ಬ'ದ ವಿಷಯ. ಬರೀ ಓದುವ ಸಾಮಗ್ರಿಯನ್ನು ಮಾತ್ರ ನೀಡದೇ, `ಕಿಂದರಿ ಜೋಗಿ ಹಬ್ಬ'ಗಳ ಮೂಲಕ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಹೊಸ ಆಂದೋಲನವನ್ನೇ ನಾವೀಗ ಆರಂಭಿಸಿದ್ದೇವೆ. 2009 ರಿಂದ ಈ ಆಂದೋಲನ ಆರಂಭವಾಗಿದೆ. ಇದನ್ನು ನಿರಂತರವಾಗಿ ನಡೆಸಿಕೊಂಡು ಹೋಗಬೇಕು ಎಂಬ ಇಚ್ಛೆ ನಮ್ಮದು.

* ಕಳೆದ ಶೈಕ್ಷಣಿಕ ವರ್ಷದಲ್ಲಿ `ಕಿಂದರಿ ಜೋಗಿ ಹಬ್ಬ'ದ ಮೂಲಕ ರಾಜ್ಯದ ಪ್ರೌಢಶಾಲಾ ವಿದ್ಯಾಥರ್ಿಗಳಿಗಾಗಿ ರಾಜ್ಯದ 12 ಮುಖ್ಯ ಸ್ಥಳಗಳಲ್ಲಿ ಜಿಲ್ಲಾ/ವಲಯ ಮಟ್ಟದ ಚಚರ್ಾಸ್ಪಧರ್ೆಗಳನ್ನು ನಾವು ನಡೆಸಿದ್ದೇವೆ.

* 30-8-2009 ರಂದು ಬಿಜಾಪುರದಲ್ಲಿ ಈ ಸ್ಪಧರ್ೆಗಳು ಆರಂಭವಾದವು. ಅನಂತರ ಕ್ರಮವಾಗಿ ಗುಲ್ಬಗರ್ಾ, ಕೋಲಾರ, ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು, ಬಳ್ಳಾರಿ, ದಾವಣಗೆರೆ, ಹಾಸನ, ತುಮಕೂರು, ಮಂಗಳೂರು ಹಾಗೂ ಮೈಸೂರುಗಳಲ್ಲಿ ಸ್ಪಧರ್ೆಗಳನ್ನು ನಡೆಸಲಾಯಿತು. ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸೇರಿದ ಒಟ್ಟು 278 ಶಾಲೆಗಳ 392 ಸ್ಪಧರ್ಿಗಳು ವಲಯ ಮಟ್ಟದ ಸ್ಪಧರ್ೆಗಳಲ್ಲಿ ಪಾಲ್ಗೊಂಡರು.

* ಇದಲ್ಲದೇ ಶಿಕ್ಷಣ ಇಲಾಖೆಯ ಸಹಕಾರದಿಂದ ತಾಲ್ಲೂಕು ಮಟ್ಟಗಳಲ್ಲೂ ನೂರಾರು ಸ್ಪಧರ್ೆಗಳು ನಡೆದವು. ಅಲ್ಲಿ ಆಯ್ಕೆಯಾದವರು ವಲಯ ಮಟ್ಟಗಳಲ್ಲಿ ಪಾಲ್ಗೊಂಡರು. ವಲಯ ಮಟ್ಟಗಳಲ್ಲಿ ಆಯ್ಕೆಯಾದ 28 ಸ್ಪಧರ್ಿಗಳು 27-02-2010ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪದರ್ೆಯಲ್ಲಿ ಪಾಲ್ಗೊಂಡರು. ಆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ. ಎಸ್, ಯಡಿಯೂರಪ್ಪ ಉದ್ಘಾಟಿಸಿದರು.

* ಇದು ಕನ್ನಡ ಭಾಷೆಯಲ್ಲಿ ನಡೆದ/ನಡೆಯುವ ಚಚರ್ಾಸ್ಪಧರ್ೆಯಾದರೂ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಮಾಧ್ಯಮಗಳ ಶಾಲೆಗಳು ಇದರಲ್ಲಿ ಭಾಗವಹಿಸಿದ್ದು ವಿಶೇಷ. ಗ್ರಾಮೀಣ/ನಗರ/ಸಕರ್ಾರಿ/ಅನುದಾನಿತ/ಖಾಸಗಿ - ಹೀಗೆ ಎಲ್ಲ ರೀತಿಯ ಶಾಲೆಗಳೂ ಇದರಲ್ಲಿ ಭಾಗವಹಿಸಿದ್ದವು. ಸಾಮಯಿಕ, ರಾಷ್ಟ್ರೀಯ ಹಾಗೂ ಶೈಕ್ಷಣಿಕ ಮಹತ್ವವುಳ್ಳ ಅನೇಕ ಉತ್ತಮ ವಿಷಯಗಳನ್ನು ಚಚರ್ೆಗೆ ಇಡಲಾಗಿತ್ತು.

* ಮಕ್ಕಳಲ್ಲಿ ಓದುವ ಅಭ್ಯಾಸ ಕಡಿಮೆಯಾಗುತ್ತಿದೆ ಎಂಬುದನ್ನು `ಕಿಂದರಿ ಜೋಗಿ' ಸುಳ್ಳಾಗಿಸಿದೆ. ಪತ್ರಿಕೆಗಳು ಹೇಗೆ ಸಮಾಜಮುಖಿಗಳಾಗಬೇಕು ಎಂಬುದನ್ನು `ಕಿಂದರಿ ಜೋಗಿ ಹಬ್ಬ'ದ ಮೂಲಕ  ತೋರಿಸಿಕೊಟ್ಟಿದ್ದೇವೆ. ಭವಿಷ್ಯದ ಪೀಳಿಗೆಯತ್ತ ಅಗತ್ಯ ಗಮನ ಹರಿಸುವ ಮೂಲಕ `ಲೋಕ ಶಿಕ್ಷಣ ಟ್ರಸ್ಟ್' ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ