ಸೋಮವಾರ, ಮಾರ್ಚ್ 23, 2009

`ಅಲ್ಲಾಹ್' ಎಂದರೆ ಜೈಲು! `ಕಾಬಾಹ್' ಎಂದರೆ...

ಮಲೇಶಿಯಾದಲ್ಲಿ ಮುಸ್ಲಿಮೇತರರು `ಅಲ್ಲಾಹ್' ಎಂಬ ಪದವನ್ನೇ ಬಳಸುವಂತಿಲ್ಲ ಎಂಬ ನಿಯಮ ಜಾರಿಗೆ ಬಂದಿದೆ! ವಿಮಶರ್ೆ ಮಾಡಲು ಅಥವಾ ಹೊಗಳಲೂ ಸಹ ಈ ಪದವನ್ನು ಮುಸ್ಲಿಮೇತರರು ಬಳಸುವಂತಿಲ್ಲ!

ಮಲೇಶೀಯಾದ 11 ರಾಜ್ಯಗಳು - ಜೋಹರ್, ಮಲಕ್ಕಾ, ನೇಗ್ರಿ, ಸೆಂಬಿಲನ್, ಪಹಾಂಗ್, ಪೇರಕ್, ಕೇಲಂತನ್, ತೇರಂಗಾನು, ಕೇದಾಹ್, ಪಲರ್ಿಸ್ ಹಾಗೂ ಸೆಲಾಂಗೂರ್ - ಈ ಕುರಿತು ಆದೇಶ ಹೊರಡಿಸಿ ಗೆಜೆಟ್ನಲ್ಲಿ ಪ್ರಕಟಿಸಿವೆ! ಉಳಿದ 4 ನಾಲ್ಕು ರಾಜ್ಯಗಳು - ಪೆನಾಂಗ್, ಫೆಡರಲ್ ಟೆರಿಟರಿ, ಸಬಾಹ್ ಹಾಗೂ ಸರಾವಾಕ್ ಇನ್ನೇನು ಸದ್ಯದಲ್ಲೇ ಈ ಬಗ್ಗೆ ಆದೇಶ ಹೊರಡಿಸಿ ಗೆಜೆಟ್ ಪ್ರಕಟಣೆ ನೀಡಲಿವೆ. ನೀವು ಈ ಲೇಖನ ಓದುವ ವೇಳೆಗೆ ಗೆಜೆಟ್ ಪ್ರಕಟಣೆ ಆಗಿರಲೂಬಹುದು.

ಮುಸ್ಲಿಮೇತರರ ಪ್ರಕಟಣೆಗಳಲ್ಲಿ `ಅಲ್ಲಾಹ್', `ಕಾಬಾಹ್', `ಸೋಲಾತ್' ಮತ್ತು `ಬೈತುಲ್ಲಹ್' - ಈ ನಾಲ್ಕು ಪದಗಳನ್ನು ಬಳಸುವಂತೆಯೇ ಇಲ್ಲ ಎಂದೂ ಫತ್ವಾ ಹೊರಡಿಸಲಾಗಿದೆ.

`ಕೆಲವು ಕ್ಯಾಥೋಲಿಕ್ ಮಿಷನರಿ ಸಂಘಟನೆಗಳು ತಮ್ಮ ಪ್ರಕಟಣೆಗಳಲ್ಲಿ ಅಲ್ಲಾಹ್ ಕುರಿತು ವಿಚಿತ್ರ ಕಥೆಗಳನ್ನು ಬರೆದು ನಾನಾ ರೀತಿಯ ಆರೋಪಗಳನ್ನು ಮಾಡುತ್ತಿರುವುದು ಈ ಕ್ರಮವನ್ನು ನಾವು ತೆಗೆದುಕೊಳ್ಳಲು ಕಾರಣ' ಎಂದು ಮಲೇಶೀಯಾದ ಮುಸ್ಲಿಂ ಉಲೇಮಾಗಳು ಹಾಗೂ ಮಂತ್ರಿಗಳು ವಿವರಣೆ ನೀಡುತ್ತಾರೆ.

ಇನ್ನು ಮುಂದೆ ನೀವು ಮಲೇಶಿಯಾದಲ್ಲಿ `ಈಶ್ವರ ಅಲ್ಲಾಹ್ ತೇರೋ ನಾಮ್' ಎಂದೂ ಸಹ ಹೇಳುವಂತಿಲ್ಲ!
ಮುಂದೆ ಭಾರತದಲ್ಲೂ ಈ ಕಾನೂನು ಬಂದರೆ ಆಶ್ಚರ್ಯ ಪಡಬೇಕಿಲ್ಲ!

`ಈಶ್ವರ ಅಲ್ಲಾಹ್ ತೇರೋ ನಾಮ್' ಎಂಬುದು ಗಾಂಧಿಯವರ ಎಲ್ಲ ಸಭೆಗಳಲ್ಲೂ ಅನುರಣಿಸುತ್ತಿದ್ದ ಪ್ರಾರ್ಥನೆ. ಆದರೆ ಅವರ ಈ ಹಾಡನ್ನು ಮುಸ್ಲಿಮರು ಹಾಡಿದ್ದು ಬಹಳ ಬಹಳ ಕಡಿಮೆ! ಇದೇ ಪ್ರಾರ್ಥನೆಯನ್ನು ಮುಸ್ಲಿಮರ ತುಷ್ಟೀಕರಣ ಮಾಡಲು ಮತ್ತು ಹಿಂದೂಗಳ ಪುನರುತ್ಥಾನವನ್ನು ಬಗ್ಗುಬಡಿಯಲು ನಮ್ಮ `ಸೆಕ್ಯೂಲರ್' ರಾಜಕಾರಣಿಗಳು ನಾನಾ ರೀತಿಗಳಲ್ಲಿ ಬಳಸುತ್ತಿದ್ದುದು ಇತಿಹಾಸ. ಆದರೆ ಕ್ರಮೇಣ ಈ ಪ್ರಾರ್ಥನೆಯ ಬಳಕೆ ಸಾರ್ವಜನಿಕ ಸ್ಥಳಗಳಲ್ಲಿ ಕಡಿಮೆಯಾಗುತ್ತ ಹೋಯಿತು. ಸೆಕ್ಯೂಲರಿಸ್ಟರು ಅದನ್ನು ಹಾಡುವುದನ್ನೇ ಕಡಿಮೆ ಮಾಡತೊಡಗಿದರು. ಕಾಂಗ್ರೆಸ್ಸು ಉಪಾಯವಾಗಿ ಅದನ್ನು ಮರೆತೇಬಿಟ್ಟಿತು. ಏಕೆ ಈ ಪ್ರಾರ್ಥನೆ ನಿಲ್ಲಿಸಿದೆವು ಎಂದು ಯಾರೂ ವಿವರಣೆ ನೀಡಲು ಹೋಗಲಿಲ್ಲ!

ಏಕೆಂದರೆ ಸ್ವಯಂ ಮುಸ್ಲಿಮರಿಗೆ ಈ ಪ್ರಾರ್ಥನೆಯಲ್ಲಿ ಆಸಕ್ತಿ ಇರಲಿಲ್ಲ! ಕೇವಲ ಆಸಕ್ತಿ ಮಾತ್ರವೇ ಅಲ್ಲ, ಈ ಪ್ರಾರ್ಥನೆಯ ಬಗ್ಗೆ ಅನೇಕ ಮುಸ್ಲಿಂ ಉಲೇಮಾಗಳು ಸಾರ್ವಜನಿಕವಾಗಿ ಕ್ರೋಧವನ್ನೂ ವ್ಯಕ್ತಪಡಿಸಿದ್ದುಂಟು. ಈಗ `ಈಶ್ವರ..ಅಲ್ಲಾಹ್' ಜಪವನ್ನು ಬರೀ ಕೆಲವು ಹಳೆಯ ತಲೆಮಾರಿನ ಹಿಂದೂಗಳು ಮಾಡುತ್ತಾರೆಯೇ ಹೊರತು ಮುಸ್ಲಿಮರಲ್ಲ.

`ಅದು ಹೇಗೆ ನಿಜವಾದ ದೇವರಾದ ಅಲ್ಲಾಹ್ನನ್ನು ದೇವರಲ್ಲದ, ಮುಸ್ಲಿಮೇತರ ಕಾಫೀರ್ ರಾಮನಿಗೆ ಹೋಲಿಸಿದಿರಿ? ಇದು ಇಸ್ಲಾಮಿಗೆ ಮಾಡುತ್ತಿರುವ ಅವಹೇಳನ', ಇಸ್ಲಾಂ ಅಲ್ಲಾಹ್ ಅನ್ನು ಬಿಟ್ಟು ಉಳಿದ ಯಾರನ್ನೂ ದೇವರೆಂದು ಒಪ್ಪಿಕೊಳ್ಳುವುದಿಲ್ಲ (ಲಾ ಇಲಾಹಿ ಇಲ್ಲಲ್ಲಾಹ್.. ) ಎಂಬುದು ಅವರ ವಾದ. ಈ ವಾದಕ್ಕೆ ಕಾಂಗ್ರೆಸ್ಸಿಗರೂ ಸೇರಿದಂತೆ ಎಲ್ಲ ಸೆಕ್ಯೂಲರಿಸ್ಟರೂ ಚಕಾರವೆತ್ತದೇ ತಲೆಬಾಗಿದ್ದಾರೆ. ಇದೇ ಭಾರತದ ಸೆಕ್ಯೂಲರಿಸಂ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇತರರಿಗೆ `ಕೋಮುವಾದಿಗಳು' ಎಂಬ ಹಣೆಪಟ್ಟಿ ಹಚ್ಚುತ್ತ ತಾವು ಮಿಲಿಟೆಂಟ್ ಇಸ್ಲಾಮಿನ ಸೇವೆ ಮಾಡಿಕೊಂಡಿರುವುದನ್ನೇ ಭಾರತದಲ್ಲಿ `ಸೆಕ್ಯೂಲರಿಸಂ' ಎನ್ನುತ್ತಾರೆ. ಅದು ಬಹುತೇಕ ಎಲ್ಲರಿಗೂ ಗೊತ್ತು.

ಒಂದು ವಿಷಯ ಮರೆಯಬಾರದು. ದೇವರು, ಧರ್ಮ, ಅಧ್ಯಾತ್ಮ ಇವೆಲ್ಲ ಬಹಳ ಸೂಕ್ಷ್ಮ ವಿಷಯಗಳು. ಈ ಕುರಿತು ಯಾವ ದೊಣ್ಣೆ ನಾಯಕರೂ ಇರಬಾರದು. ಈ ವಿಷಯದಲ್ಲಿ ಜನರಿಗೆ ಸ್ವಾತಂತ್ರ್ಯವೂ ಇರಬೇಕು. ಒಂದಿಷ್ಟು ನೈತಿಕ ನಿಯಮಾವಳಿಗಳೂ ಇರಬೇಕು.

ನನ್ನ ಪ್ರಕಾರ, ದೇವರನ್ನು ನಂಬುವ ಸ್ತಾತಂತ್ರ್ಯ ಎಲ್ಲರಿಗೂ ಇರಬೇಕು. ಹಾಗೆಯೇ ಎಲ್ಲರಿಗೂ ದೇವರನ್ನು ನಂಬದಿರುವ ಸ್ವ್ತಾತಂತ್ರ್ಯವೂ ಇರಬೇಕು.

ತನಗೆ ಒಪ್ಪಿಗೆಯಾಗುವ ದೇವರನ್ನು ಮುಕ್ತವಾಗಿ ಆರಾಧಿಸುವ ಸ್ವಾತಂತ್ರ್ಯವೂ ಇರಬೇಕು.

ಹಾಗೆಯೇ ಕೆಲವು ಸ್ವಾತಂತ್ರ್ಯ ಯಾರಿಗೂ ಇರಬಾರದು. ಒಂದು, ತನಗೆ ಒಪ್ಪಿಗೆಯಾಗದಿರುವ ದೇವರನ್ನು ಅವಹೇಳನ ಮಾಡುವ ಸ್ವಾತಂತ್ರ್ಯ ಯಾರಿಗೂ ಇರಬಾರದು. ಆದರೆ ಮತಗಳ ಇತಿಹಾಸ, ಸ್ವರೂಪಗಳನ್ನು ವಿಮಶರ್ಿಸುವ ಹಕ್ಕು ಇರಬೇಕು. ಎರಡು, ತನಗೆ ಒಪ್ಪಿಗೆಯಾದ ದೇವರ ಆರಾಧನೆಯನ್ನು ಇತರರು ಮಾಡದಂತೆ ತಡೆಯುವ ಸ್ವಾತಂತ್ರ್ಯ ಯಾರಿಗೂ ಎಂದಿಗೂ ಇರಬಾರದು. ಮೂರನೆಯದಾಗಿ, ನೀವು ಇಂತಹ ದೇವರನ್ನು ಮಾತ್ರ ನಂಬಬೇಕು ಎಂದು ಆದೇಶಿಸುವ ಸ್ವಾತಂತ್ರ್ಯವೂ ಇರಬಾರದು.

ಆದರೆ ಬಾರತದಲ್ಲಿ ಕ್ರೈಸ್ತ ಮಿಷನರಿಗಳು ಹಿಂದೂ ದೇವರುಗಳನ್ನು ಅವ್ಯಾಹತವಾಗಿ, ವಾಚಾಮಗೋಚರವಾಗಿ ಅವಹೇಳನ ಮಾಡುತ್ತಾರೆ. ಆವರ ಭಾಷಣಗಳಲ್ಲಿ, ಪ್ರಕಟಣೆಗಳಲ್ಲಿ ಇಂತಹ ಅವಹೇಳಕಾರಿ ಹೇಳಿಕೆಗಳು ಸಮೃದ್ಧವಾಗಿ ಸಿಗುತ್ತವೆ. ಇದನ್ನು ಕೇಳುವವರು ಯಾರೂ ಇಲ್ಲ. ಏಕೆಂದರೆ ನಮ್ಮ `ಸೆಕ್ಯೂರಿಸಂ' ಪ್ರಕಾರ ಭಾರತದ ಸಮಸ್ತ ಮತೀಯ `ಅಲ್ಪಸಂಖ್ಯಾತ'ರಿಗೆ ಹಿಂದೂ ದೇವರುಗಳನ್ನು ನಿಂದಿಸುವ ಸ್ವಾತಂತ್ರ್ಯ ಇದೆ. ಎಂ. ಎಫ್. ಹುಸೇನ್ ಎಂಬ ಕಲಾರಂಗದ ಜಿಹಾದಿ ಹಿಂದೂ ದೇವರುಗಳನ್ನು ಮಾತ್ರ ಆಯ್ದುಕೊಂಡು ತನ್ನ ಹೀನ `ಅಭಿವ್ಯಕ್ತಿ' ಪ್ರದಶರ್ಿಸುವುದು ಅವನ ಸ್ವಾತಂತ್ರ್ಯ! ಈ ತಾಲಿಬಾನ್ ಮಾನಸಿಕತೆಯನ್ನು, `ಜಿಹಾದ್-ಬಿಲ್-ಕಲಮ್' ಪ್ರಣಾಳಿಕೆಯನ್ನು ಯಾರಾದರೂ ಪ್ರಶ್ನಿಸಿದರೆ ಅವರಿಗೇ `ತಾಲಿಬಾನಿಗಳು' ಎಂಬ ಹಣೆಪಟ್ಟಿ!

ಅದಿರಲಿ, ಈಗ ಜಗತ್ತಿನಲ್ಲೆಲ್ಲ ಮುಸ್ಲಿಮರ ಹಕ್ಕುಗಳದೇ ಕಾರುಬಾರು. ಮುಸ್ಲಿಮರಿಗೆ ಇತರರ ದೇವರುಗಳನ್ನು ಅವಹೇಳನ ಮಾಡುವ ಹಕ್ಕೂ ಇದೆ; ತಮ್ಮ ದೇವರನ್ನು ಇತರರು ಅವಹೇಳನ ಮಾಡುವುದಿರಲಿ, ಪೂಜಿಸುವುದನ್ನು ತಡೆಯುವ ಹಕ್ಕೂ ಅವರಿಗೆ ಇದೆ! `ನೀವು ಅಲ್ಲಾಹ್ನ್ನು ಬಿಟ್ಟು ದೇವರನ್ನು ನಂಬುವಂತಿಲ್ಲ' ಎಂದು `ತಮ್ಮವರಿಗೆ' ಆದೇಶ ಕೊಡುವ ಹಕ್ಕೂ ಮೊದಲಿನಿಂದಲೂ ಇದೆ!

ಯಾರಾದರೂ `ನಾನು ರಾಮನನ್ನು ಪೂಜಿಸುತ್ತೇನೆ' ಎಂದರೆ `ಬೇಡ' ಎನ್ನುವ ಅಧಿಕಾರ ಹಿಂದೂಗಳಿಗಿಲ್ಲ (ಆದರೆ `ನಾನು ರಾಮನನ್ನು ನಿಂದಿಸುತ್ತೇನೆ' ಎಂಬುದಕ್ಕೂ `ಬೇಡ' ಎನ್ನುವ ಅಧಿಕಾರ ಅವರಿಗಿಲ್ಲ ಎಂಬುದು ಸೆಕ್ಯೂಲರಿಸ್ಟ ವಾದ). ಹರಿಜನರಿಗೆ ದೇವಾಲಯ ಪ್ರವೇಶವನ್ನು ನಿರಾಕರಿಸಿದ್ದ ಕಾಲದಲ್ಲಿ ಹಿಂದೂ ಸಮಾಜಕ್ಕೆ ನಿಷೇಧಾತ್ಮಕ ಸ್ವರೂಪದ ಮೌಢ್ಯ ಆವರಿಸಿತ್ತು. ಅಂತಹ ಮೌಢ್ಯ ಮೂಲ ಹಿಂದೂ ಸಿದ್ಧಾಂತಗಳಲ್ಲಿ ಇರಲಿಲ್ಲ. ಅದು ಮಧ್ಯಯುಗೀನ ಇಸ್ಲಾಮಿಕ್ ನಿಷೇಧಾತ್ಮತ ಚಿಂತನೆಗಳ ಅನುಕರಣೆ ಅಷ್ಟೇ.

ದೇವರುಗಳು ಕೆಲವು ನಿದರ್ಿಷ್ಟ ಮಾನವರ ಖಾಸಗಿ ಸ್ವತ್ತಲ್ಲ. ದೇವರ ಮೇಲಿನ ಪೇಟೆಂಟ್ ಯಾರಿಗೂ ಇಲ್ಲ. ಇದನ್ನು ನಾವು ಮರೆಯಬಾರದು. ಆದರೆ ಈಗ ಮಲೇಶಿಯಾ ಮಾಡಿದ್ದೇನು? ನೀವು ಅಧಿಕೃತವಾಗಿ ಮುಸ್ಲಿಮರಲ್ಲದಿದ್ದರೆ `ಅಲ್ಲಾಹ್' ಎಂಬ ಹೆಸರನ್ನೇ ಎತ್ತುವಂತಿಲ್ಲ. `ಮುಸ್ಲಿಮರು ಅಲ್ಲಾಹ್ ಎಂಬ ದೇವರನ್ನು ನಂಬುತ್ತಾರೆ' ಎಂದು ಬರೆದರೇ ಸಾಕು, ನಿಮಗೆ ಜೈಲು!

ಏನಿದು ವಿಪರೀತ? ಜಗತ್ತು ಏನಾಗುತ್ತಿದೆ?


2 ಕಾಮೆಂಟ್‌ಗಳು:

  1. Sir, What you are telling about muslims is exactly right. Islam is like cancer. Ali Sina said" I thought terrosist understood quaran wrongly but when I read Quaran myself, I realised they were following what is told in the Quaran." A muslim is a muslim he has no respect for the country.

    ಪ್ರತ್ಯುತ್ತರಅಳಿಸಿ