ಮಂಗಳವಾರ, ಮಾರ್ಚ್ 31, 2009

ಹಜ್ ಅನುದಾನ ಕೊಟ್ಟಮೇಲೆ ಹನಿಮೂನಿಗೂ ಕೊಡಬಹುದು!

ಹಜ್ ಸಹಾಯಧನ ದೇಶದ `ಸೆಕ್ಯುಲರ್ ಆದರ್ಶ'ಗಳಿಗೆ ಅನುಗುಣವಾಗಿಯೇ ಇದೆ ಎಂಬುದು ಕೇಂದ್ರದ ಯುಪಿಎ ಸಕರ್ಾರದ ವಾದ. ಈ ರೀತಿಯಲ್ಲೇ ಅದು ಸುಪ್ರೀಂ ಕೋಟರ್ಿನಲ್ಲಿಯೂ ವಾದ ಮಾಡಿಕೊಂಡು ಬಂದಿದೆ.

ಹಜ್ ಸಹಾಯಧನ ವ್ಯವಸ್ಥೆ ಅಸಾಂವಿಧಾನಿಕ; ಅದನ್ನು ರದ್ದುಪಡಿಸಬೇಕು ಎಂದು ಕೋರಿ ಎರಡು ವರ್ಷಗಳ ಹಿಂದೆ ಅಲಹಾಬಾದ್ ಹೈಕೋಟರ್್ ಸಾರ್ವಜನಿಕ ಹಿತಾಸಕ್ತಿ ಅಜರ್ಿ ಸಲ್ಲಿಸಲಾಗಿತ್ತು. ಹೈಕೋಟರ್್ ಅಜರ್ಿದಾರರ ವಾದವನ್ನು ಎತ್ತಿಹಿಡಿದಿತ್ತು. ಹಜ್ ಸಹಾಯಧನ ನೀಡಿಕೆಯನ್ನು ಸಕರ್ಾರ ತಕ್ಷಣ ನಿಲ್ಲಿಸಬೇಕೆಂಬ ಅದರ ಆದೇಶಕ್ಕೆ ಸುಪ್ರೀಂ ಕೋಟರ್್ ತಡೆಯಾಜ್ಞೆ ನೀಡಿದೆ. ವಿಚಾರಣೆ ಮುಂದುವರಿದಿದೆ.

ಒಂದು ಕೋಮಿನವರಿಗೆ ಮಾತ್ರ ಸಹಾಯಧನ ನೀಡುವುದು ಸೆಕ್ಯುಲರಿಸಂಗೆ ವಿರುದ್ಧ ಎಂಬುದು ಅಜರ್ಿದಾರರ ವಾದ. ಆದರೆ ಅಂತಹ ಕ್ರಮ ಸೆಕ್ಯುಲರಿಸಂ ಪರವಾಗಿಯೇ ಇದೆ ಎಂಬುದು ಸಕರ್ಾರದ ವಿತಂಡವಾದ.

ಆದರೆ ನ್ಯಾಯಪೀಠ ಸುಮ್ಮನಿರಲಿಲ್ಲ. ಸೌದಿ ಅರೇಬಿಯಾದ ಮೆಕ್ಕಾಗೆ ಹಜ್ ಯಾತ್ರೆ ನಡೆಸಲು ಮುಸ್ಲಿಮರಿಗೆ ಹಣ ಕೊಡುತ್ತಿರುವ ಕೇಂದ್ರ ಸಕರ್ಾರ, ಪಾಕಿಸ್ತ್ತಾನದಲ್ಲಿರುವ ನಂಕಾನ ಸಾಹಿಬ್ನ ವಾಷರ್ಿಕ ಪರ್ವಕ್ಕೆ ತೆರಳಲು ಸಿಖ್ಖರಿಗೆ ಎಂದಾದರೂ ಸಹಾಯಧನ ನೀಡಿದೆಯೆ?

1954ರಿಂದ ಭಾರತ ಸಕರ್ಾರ ಏರ್ ಇಂಡಿಯಾ ಮೂಲಕ ಹಜ್ ವಿಶೇಷ ವಿಮಾನಸೇವೆ ನಡೆಸುತ್ತಿದೆ. ಚಿಕ್ಕ ವಿಮಾನದಿಂದ ಆರಂಭವಾದ ಈ `ಸೇವೆ' ಅನಂತರ ಬೋಯಿಂಗ್ 747 ವಿಮಾನಗಳನ್ನು ಒಳಗೊಂಡಿತು. ಮೊದಲು ಮುಂಬೈ-ಜೆದ್ದಾ ಮಾರ್ಗ ಮಾತ್ರ ಇತ್ತು. ಅನಂತರ ದೆಹಲಿಯನ್ನೂ ಯೋಜನೆಗೆ ಸೇರಿಸಲಾಯಿತು. 1984ರಲ್ಲಿ ಸೌದಿ ಅರೇಬಿಯಾದ `ಸೌದಿಯಾ' ವಿಮಾನ ಸೇವೆಯನ್ನೂ ಏರ್ ಇಂಡಿಯಾ ಜೊತೆಗೆ 50/50 ಸಮಪಾಲು ಆಧಾರದ ಮೇಲೆ ಸೇರಿಸಿಕೊಳ್ಳಲಾಗಿದೆ.

ವಿದೇಶಾಂಗ ಸಚಿವಾಲಯ ಈ ಹಜ್ ಯಾತ್ರೆಯ ಮುಖ್ಯ ಆಯೋಜಕ. ಕೇಂದ್ರೀಯ ಹಜ್ ಸಮಿತಿ ಯಾತ್ರಾ ಯೋಜನೆ ರೂಪಿಸಿ, ಅದನ್ನು ಜಾರಿಗೆ ತರುವ ಮತ್ತು ನಿರ್ವಹಿಸುವ ಅಧಿಕೃತ ಜವಾಬ್ದಾರಿ ಹೊಂದಿದೆ. ಈ ಉದ್ದೇಶಕ್ಕಾಗಿಯೇ ವಿಶೇಷ ಹಜ್ ಕಾಯ್ದೆ (2002) ರೂಪಿಸಲಾಗಿದೆ.

ವರ್ಷದಿಂದ ವರ್ಷಕ್ಕೆ ಸಕರ್ಾರಿ ಅನುದಾನ ಪಡೆದು ಕೇಂದ್ರೀಯ ಹಜ್ ಸಮಿತಿ ಮೂಲಕ ಯಾತ್ರೆ ನಡೆಸುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಅವರಿಗೆ ನೀಡುವ ಸಹಾಯಧನದ ಪ್ರಮಾಣವೂ ಏರುತ್ತಲೇ ಇದೆ. 1995ರಲ್ಲಿ 31,000; 1996ರಲ್ಲಿ 50,347; 1998ರಲ್ಲಿ 63,648; 2006ರಲ್ಲಿ 99926 ಅಥವಾ ಒಂದು ಲಕ್ಷ ಮುಸ್ಲಿಮರು ಕೇಂದ್ರೀಯ ಹಜ್ ಸಮಿತಿ ಮೂಲಕ ಹಜ್ ಯಾತ್ರೆ ನಡೆಸಿದ್ದಾರೆ.

ಹಜ್ ಸಹಾಯಧನ ಎಷ್ಟು ನೀಡಲಾಗುತ್ತಿದೆ? 1991ರಲ್ಲಿ ಪ್ರತಿ ಹಜ್ ಯಾತ್ರಿಗೂ 4,056 ರೂಪಾಯಿ ಸಹಾಯಧನ ಸಕರ್ಾರದಿಂದ ಉಚಿತವಾಗಿ ಸಿಗುತ್ತಿತ್ತು. 2006ರಲ್ಲಿ ಪ್ರತಿ ಹಾಜಿಗೂ 28,000 ರೂಪಾಯಿ ನೀಡಲಾಯಿತು. ಅಂದರೆ ಬೊಕ್ಕಸದ ಒಟ್ಟು ಖಚರ್ು 280 ಕೋಟಿ ರೂಪಾಯಿ!!

ಮತೀಯ ಯಾತ್ರೆಗಳಿಗೆ ಸಕರ್ಾರಿ ಬೊಕ್ಕಸದಿಂದ ಹಣ ಕೊಡುವುದು ಸಾಂವಿದಾನಿಕವೇ ಅಲ್ಲವೇ ಎಂಬುದು ಈ ಹೊತ್ತಿನ ಮುಖ್ಯ ಪ್ರಶ್ನೆ. ತೀರ್ಥಯಾತ್ರೆ ಎನ್ನುವುದು ಜನರ ವೈಯಕ್ತಿಕ ಧಾಮರ್ಿಕ ಶ್ರದ್ಧೆಗೆ ಸಂಬಂಧಿಸಿದ ವಿಷಯವಲ್ಲವೆ? ಅದಕ್ಕಾಗಿ ಅಧಿಕೃತ ಬೊಕ್ಕಸದಿಂದ ಹಣ ನೀಡುವುದು `ಸೆಕ್ಯೂಲರ್' ಎನಿಸಿಕೊಂಡಿರುವ ಸಕರ್ಾರದ ಕರ್ತವ್ಯವೆ?

ವಾಸ್ತವವಾಗಿ ಹಜ್ ಸಹಾಯಧನ ಇಸ್ಲಾಮೀ ಮತೀಯ ಕಾನೂನಾದ `ಶರಿಯತ್'ಗೂ ವಿರುದ್ಧ. ಇತರರಿಂದ ದಾನ, ಸಹಾಯ ತೆಗೆದುಕೊಂಡು ಹಜ್ ಯಾತ್ರೆ ನಡೆಸುವಂತಿಲ್ಲ. ಆದರೆ, ``ಸಹಾಯಧನ ನೀಡುತ್ತಿರುವುದು ಯಾರೋ ಅಲ್ಲ, ಸಕರ್ಾರ. ಮುಸ್ಲಿಮರೂ ದೇಶದ ಪ್ರಜೆಗಳೇ. ಆದುದರಿಂದ ಸಕರ್ಾರದಿಂದ ಹಣ ಪಡೆಯಬಹುದು'' ಎನ್ನುವುದು `ಸಹಾಯಧನ ಬೇಕು' ಎನ್ನುವ ಮುಸ್ಲಿಂ ವರ್ಗದ ವಾದ. ಆದರೆ ಇಸ್ಲಾಮೀ ಕಾನೂನು ತಿಳಿದವರ ವಾದದಂತೆ ಹಜ್ ಸಹಾಯಧನ ಇಸ್ಲಾಂ ವಿರೋಧಿ.

ಭಾರತ ಏನು ಮಾಡಿದರೂ ಅದನ್ನು ತಾನೂ ಮಾಡಹೊರಡುವ ಪಾಕಿಸ್ತಾನದಲ್ಲೂ ಹಜ್ ಸಹಾಯಧನ ವ್ಯವಸ್ಥೆ ಇತ್ತು. ಆದರೆ ಅದು ಇಸ್ಲಾಂ ಪರವೊ ಅಥವಾ ವಿರೋಧವೋ ಎಂಬ ಪ್ರಶ್ನೆ 1997ರಲ್ಲಿ ತೀವ್ರಗೊಂಡು ಲಾಹೋರ್ ಹೈಕೋಟರ್ಿನ ನ್ಯಾಯಾಧೀಶ ತನ್ವೀರ್ ಅಹ್ಮದ್, ``ಹಜ್ ಸಹಾಯಧನ ಶರಿಯತ್ ಆದೇಶಗಳಿಗೆ ವಿರುದ್ಧ. ಅದನ್ನು ತಕ್ಷಣ ನಿಲ್ಲಿಸಬೇಕು'' ಎಂದು ಸ್ಪಷ್ಟವಾಗಿ ತೀಪರ್ಿತ್ತಿದ್ದಾರೆ.

ನಿಮಗೆ ಗೊತ್ತೆ? ಜಗತ್ತಿನ ಯಾವುದೇ ಇಸ್ಲಾಮಿಕ್ ದೇಶದ ಸಕರ್ಾರವೂ ಹಜ್ ಯಾತ್ರೆ ಮಾಡಲು ತನ್ನ ಕಡು ಬಡವ ಮುಸ್ಲಿಂ ಪ್ರಜೆಗಳಿಗೂ ಸಹಾಯಧನ ನೀಡುವುದಿಲ್ಲ! ಇಸ್ಲಾಮೀ ಸಕರ್ಾರಗಳೂ ಮಾಡದ ಕೆಲಸವನ್ನು ನಮ್ಮ `ಜಾತ್ಯತೀತ' ಸಕರ್ಾರ ಮಾಡಿಕೊಂಡು ಬರುತ್ತಿದೆ. ಮುಸ್ಲಿಮರು ತಮ್ಮ ಸ್ವಂತ ದುಡಿಮೆಯಿಂದ ಹಜ್ ಯಾತ್ರೆ ಮಾಡಿದಾಗ ಮಾತ್ರ ಅದು ಅಲ್ಲಾಹನಿಗೆ ಪ್ರಿಯವಾಗುತ್ತದೆ ಎನ್ನುವುದು ಇಸ್ಲಾಂ ಮತದ ನಿಲುವು. ಹಾಗಿದ್ದರೂ ಹಾಜಿಗಳಿಗೆ ಹೇಗಾದರೂ `ಸೇವೆ' ಸಲ್ಲಿಸಲೇಬೇಕೆಂಬ ಅಪಾರ ಶ್ರದ್ಧೆ ನಮ್ಮ ಸೆಕ್ಯೂಲರಿಸ್ಟರದು.

ಸಂವಿಧಾನದ 282ನೇ ವಿಧಿ ಸಾರ್ವಜನಿಕ ಉದ್ದೇಶಗಳಿಗೆ ಸಕರ್ಾರ ಹಣ ಖಚರ್ು ಮಾಡಬಹುದು; ಆ ಕುರಿತು ಕಾನೂನು ರೂಪಿಸಬಹುದು ಎಂದು ಅನುಮತಿ ನೀಡಿದೆ. ಆದ್ದರಿಂದ ನ್ಯಾಯಾಲಯ ಮಧ್ಯಪ್ರವೇಶ ಮಾಡುವಂತಿಲ್ಲ ಎನ್ನುವುದು ಯುಪಿಎ ಮುಖಂಡರ ವಾದ. ಆದರೆ ಇಲ್ಲಿ `ಸಾರ್ವಜನಿಕ' ಉದ್ದೇಶ ಎಂದರೆ ಏನು?

ಸಂವಿಧಾನದಲ್ಲಿ ಈ ಬಗ್ಗೆ ಸ್ಪಷ್ಟ ನಿದರ್ೇಶನ ಇಲ್ಲ. ಅದರ ಅಗತ್ಯವೂ ಇಲ್ಲ. ಸಂವಿಧಾನ ಎಲ್ಲವನ್ನೂ ವಿವರಿಸುವುದು ಅಸಾಧ್ಯ. ಅನೇಕ ವಿಷಯಗಳನ್ನು ವಿವೇಕ ಬಳಸಿ ನಿರ್ಧರಿಸಬೇಕಾಗುತ್ತದೆ. ಯಾರಾದರೂ ಒಬ್ಬ ವ್ಯಕ್ತಿ ತೀರ್ಥಯಾತ್ರೆ ಮಾಡುವುದು `ಸಾರ್ವಜನಿಕ' ಉದ್ದೇಶ ಹೇಗಾಗುತ್ತದೆ? ತೀರ್ಥಯಾತ್ರೆ ಎನ್ನುವುದು ವೈಯಕ್ತಿಕವಾದ, ತೀರಾ ಖಾಸಗಿ ವಿಷಯ. ನಾಳೆ ಜನರು `ಹನೀಮೂನ್'ಗೂ ಸಕರ್ಾರದಿಂದ ಹಣ ಕೇಳಬಹುದು! ಸಕರ್ಾರ ಕೊಡುತ್ತದೆಯೆ? ಮುಸ್ಲಿಮರ ಮತೀಯ ಶ್ರದ್ಧೆ ಹೆಚ್ಚಿಸುವ ಕೆಲಸ ಸೆಕ್ಯುಲರ್ ಸಕರ್ಾರದ್ದಲ್ಲ ಅಲ್ಲವೆ?

ಆದರೆ ಮುಸ್ಲಿಮರು ಬೇಕೇಬೇಕೆಂದು ಕೇಳಿದರೆ ನಮ್ಮ ಯುಪಿಎ ಸಕರ್ಾರ ಅವರ ಹನೀಮೂನ್ಗೂ ಹಣ ಕೊಟ್ಟೀತೇನೋ!!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ