ಬುಧವಾರ, ಸೆಪ್ಟೆಂಬರ್ 21, 2011

ಜನರು ಇನ್ನೆಷ್ಟು ದಿನ ಸಹಿಸಬೇಕು?

ಮುಂಬೈ ಜವೇರಿ ಬಜಾರ್ ತರಹದ ಸರಣಿ ಬಾಂಬ್ ಸ್ಫೋಟ ನಡೆದಿದ್ದರೆ ಅಮೆರಿಕದ ಬರಾಕ್ ಒಬಾಮಾ, ಬ್ರಿಟನ್ನಿನ ಡೇವಿಡ್ ಕ್ಯಾಮರೂನ್, ರಷ್ಯಾದ ವ್ಲಾದಿಮೀರ್ ಪುಟಿನ್ - ಇವರೆಲ್ಲರ ಸಕರ್ಾರಗಳು ಹೇಗೆ ವತರ್ಿಸುತ್ತಿದ್ದವು ಎಂಬುದು ಸರ್ವವಿದಿತ. 9/11 ನಂತರ ಅಮೆರಿಕದಲ್ಲಿ ಈವರೆಗೂ ಮತ್ತೊಂದು ದಾಳಿ ನಡೆದಿಲ್ಲ ಎಂಬುದು ಕೇವಲ ಆಕಸ್ಮಿಕವಲ್ಲ.

1993ರ ಸರಣಿ ಸ್ಫೋಟದ ನಂತರ ಈಗಿನ 13/7 ದಾಳಿಯವರೆಗೆ ಮುಂಬೈ ನಗರದಲ್ಲಿ 14 ಭಯೋತ್ಪಾದಕ ದಾಳಿಗಳು ನಡೆದಿವೆ. ಒಟ್ಟು 443 ಮಂದಿ ಬಲಿಯಾಗಿದ್ದಾರೆ. 2383 ಮಂದಿ ಗಾಯಾಳುಗಳಾಗಿದ್ದಾರೆ.

ಆದರೆ, `ಶೇ. 99 ದಾಳಿಗಳನ್ನು ಯಶಸ್ವಿಯಾಗಿ ತಡೆಯಲಾಗಿದೆ. ಇದು ಕೇವಲ ಶೇ. 1ರ ಅಡಿ ಬರುವ ದಾಳಿ. ಇಂತಹುದನ್ನು ಏನೂ ಮಾಡಲಾಗದು' ಎಂಬುದು ರಾಹುಲ್ ಗಾಂಧಿಯ ನುಡಿಮುತ್ತು. `ಹಠಾತ್ತಾಗಿ ಅಚ್ಚರಿ ಹುಟ್ಟಿಸುವ ರೀತಿ ದಾಳಿ ಮಾಡುವುದೇ ಭಯೋತ್ಪಾದಕರಿಗೆ ಇರುವ ಅನುಕೂಲತೆ' ಎಂಬುದು ಸ್ವಯಂ ಪ್ರಧಾನಿಯ ಹೇಳಿಕೆ! ಇದೇ ಪ್ರಧಾನಿ 26/11 ದಾಳಿಯ ನಂತರ, `ಇನ್ನೆಂದೂ ಇಂತಹ ದಾಳಿ ಮರುಕಳಿಸದ ಹಾಗೆ ಮಾಡುತ್ತೇವೆ ನೋಡುತ್ತಿರಿ' ಎಂದಿದ್ದರು.

ಜನ ನೋಡುತ್ತಲೇ ಇದ್ದಾರೆ. ಒಳಗೆ ನೋವಿದ್ದರೂ ಹೊರ-ಆಕ್ರೋಶಕ್ಕೆ ತ್ರಾಣವಿಲ್ಲದವರಾಗಿದ್ದಾರೆ. ಇಂದು ಬೀದಿಗಿಳಿದು `ಸ್ಲಟ್ ವಾಕ್' ಮಾಡಲು ಸಮೃದ್ಧವಾಗಿ ಜನರು ಸಿಗುತ್ತಾರೆ. ಆದರೆ, ಭ್ರಷ್ಟಾಚಾರ, ಭಯೋತ್ಪಾದನೆಯ ವಿಷಯದಲ್ಲಿ ಎಂತಹುದೋ ಮಂಕುಮೌನ ಆವರಿಸಿಕೊಂಡಿದೆ.

ಇದೀಗ ಬಿಡುಗಡೆಯಾಗಿರುವ ತಮ್ಮ ಹೊಸ ಪುಸ್ತಕ `ಡಸ್ ಹಿ ನೋ ಎ ಮದರ್ಸ್ ಹಾಟರ್್?'ನಲ್ಲಿ ಅರುಣ್ ಶೌರಿ, ವೈಯಕ್ತಿಕ ನೆಲೆಯ ನೋವು-ಸಂಕಟಗಳಿಗೆ ಏನು ಕಾರಣ ಎಂದು ವಿಶ್ಲೇಷಿಸಿದ್ದಾರೆ. ಪಾಪ ಸಿದ್ಧಾಂತ - ಕರ್ಮ ಸಿದ್ಧಾಂತ ಸೇರಿದಂತೆ ಎಲ್ಲ ಮತಧರ್ಮಗಳನ್ನು ಜಾಲಾಡಿದ್ದಾರೆ. ಹಾಗೇ ರಾಷ್ಟ್ರವನ್ನು ಸಮಷ್ಟಿ ನೆಲೆಯಲ್ಲಿ ಭ್ರಷ್ಟರು, ಭಯೋತ್ಪಾದಕರು ಸಂಕಟ, ನರಳಾಟಗಳಿಗೆ ಸಿಲುಕಿಸಿರಲು ಏನು ಕಾರಣ? ಸಮಾಜವು ಸಮಷ್ಟಿ ನೆಲೆಯಲ್ಲಿ ಯಾವ ಪಾಪವನ್ನು ಮಾಡಿತ್ತು - ಎಂಬುದನ್ನೆಲ್ಲ ಜಾಲಾಡುವವರಾರು?

ಭಯೋತ್ಪಾದಕರ ಹಾವಳಿಯಿಂದ ಮಾತ್ರವೇ ಅಲ್ಲದೇ, ಆಳುವ ರಾಜಕಾರಣಿಗಳ ನಿಷ್ಕ್ರಿಯತೆ ಹಾಗೂ ಭ್ರಷ್ಟಾಚಾರದಿಂದಲೂ ದೇಶವನ್ನು ಉಳಿಸು ದೇವರೇ ಎಂದು ಜನರು ಪ್ರಾಥರ್ಿಸಬೇಕಾದ ಕಾಲ ಇದು. `ಪರಿಹಾರ' ಆಗಬೇಕಿದ್ದ ಸಕರ್ಾರ, ತಾನೇ ಒಂದು `ಸಮಸ್ಯೆ' ಆಗುತ್ತಿರುವುದು ಈ ಹೊತ್ತಿನ ವಾಸ್ತವ.
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ