ಬುಧವಾರ, ಸೆಪ್ಟೆಂಬರ್ 21, 2011

ನ್ಯಾಯಪ್ರಕ್ರಿಯೆಗೆ ಅಡ್ಡಗಾಲು

ಈ ದೇಶದಲ್ಲಿ ಭಾರಿ ಕೊಲೆಗಡುಕರಿಗೆ, ಭಯೋತ್ಪಾದಕರಿಗೆ ಅಪರಿಮಿತ ಅನುಕಂಪ ತೋರಿಸುವ ಮುಖಂಡರು ಇರುವುದು ನಿಜಕ್ಕೂ ಆಶ್ಚರ್ಯಕಾರಿ. ಕಾನೂನು ವ್ಯವಸ್ಥೆ. ಕೋಟರ್ು, ವಿಚಾರಣೆ, ಶಿಕ್ಷೆ ಇವೆಲ್ಲ `ಸಾಮಾನ್ಯ' ಜನರಿಗೆ ಮಾತ್ರ ಮೀಸಲೇನೋ ಎನಿಸುತ್ತದೆ.

ಘೋರ ಅಪರಾಧ ಮಾಡಿ ಬಂದಿತರಾದ ಉಗ್ರರನ್ನು ಮುಗ್ದರೆಂದು ಬಿಂಬಿಸುವ ಪ್ರಯತ್ನಗಳು ಭಾರತದಲ್ಲಿ ರಾಜಾರೋಷವಾಗಿಯೇ ನಡೆಯುತ್ತಿರುವುದು ನಾಚಿಕೆಗೇಡಿನ ವಿಷಯ. ಕೆಲವು ರಾಜಕಾರಣಿಗಳು, ಮಾಧ್ಯಮದ ಒಂದು ವರ್ಗದವರು ತಮ್ಮದೇ ಆದ `ಗುಡ್ ಟೆರರಿಸ್ಟ್' ಪಟ್ಟಿಯನ್ನು ಹೊಂದಿರುವ ಹಾಗೆ ಕಾಣುತ್ತದೆ.

ಐದು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ದಿ. ರಾಜೀವ್ ಗಾಂಧಿ ಹತ್ಯೆಯ ವಿಷಯವನ್ನು ರಾಜಕೀಯ ರಾಢಿ ಆವರಿಸಿದೆ. ಆರೋಪಿಗಳ ಅಪರಾಧ ಸಾಬೀತಾಗಿ ಸುಪ್ರೀಮ್ ಕೋಟರ್್ ಗಲ್ಲು ಶಿಕ್ಷೆ ವಿಧಿಸಿದ್ದರೂ ಉಗ್ರರನ್ನು ಶಿಕ್ಷಿಸಲು ನಮ್ಮ ರಾಜಕೀಯ ಮುಖಂಡರು ತಯಾರಿಲ್ಲ. ಮೊದಲಿಗೆ, ನಳಿನಿಗೆ ಕ್ಷಮಾದಾನ ಕೊಡಿಸಲು ಸ್ವಯಂ ಸೋನಿಯಾ ಗಾಂಧಿಯವರೇ ಬಹಳ ಶ್ರಮಪಟ್ಟು ಯಶಸ್ವಿಯಾದರು. `ನಳಿನಿಗೆ ಮಗುವಿಗೆ' ಎಂಬುದು ಕ್ಷಮಾದಾನಕ್ಕೆ ಅವರು ಕೊಟ್ಟ ಕಾರಣ! ಮುರುಗನ್ ಮತ್ತಿತರ ಆರೋಪಿಗಳಿಗೂ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿಗಳನ್ನು ಅವರು ಕೋರಿದ್ದರು.

ಈಚೆಗೆ ಅವರುಗಳಿಗೆ ಕ್ಷಮಾದಾನವನ್ನು ನಿರಾಕರಿಸಲಾಯಿತು. ನಂತರ ಗಲ್ಲು ಶಿಕ್ಷೆ ಜಾರಿಮಾಡುವ ದಿನಾಂಕವೂ ನಿಗದಿಯಾಯಿತು. ಇದ್ದಕ್ಕಿದ್ದ ಹಾಗೆ ಮರುಗನ್ ಪರ ಅಲೆಯೆದ್ದಿತು! ಮದ್ರಾಸ್ ಹೈಕೋಟರ್ು ಗಲ್ಲುಶಿಕ್ಷೆ ಜಾರಿಗೆ 8 ವಾರಗಳ ತಾತ್ಕಾಲಿಕ ತಡೆಯಾಜ್ಞೆ ನೀಡಿತು! ಮುರುಗನ್ ಮತ್ತಿತರ ಪುರುಷ ಅಪರಾಧಿಗಳ ಗಲ್ಲು ರದ್ಧತಿಯನ್ನು ಕೋರಿ ತಮಿಳುನಾಡು ವಿಧಾನಸಭೆಯಲ್ಲಿ ಅವಿರೋಧ ನಿರ್ಣಯವನ್ನು ಅಂಗೀಕರಿಸಲಾಯಿತು!

ಈಗ ಅಫ್ಜಲ್ ಗುರು ಪರವಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಧಾನಸಭೆಯಲ್ಲಿ ನಿರ್ಣಯವನ್ನು ಅನುಮೋದಿಸುವ ಪ್ರಯತ್ನಗಳು ನಡೆಯುತ್ತಿವೆ! ತಮ್ಮ ತಮ್ಮ ರಾಜ್ಯದ ಮಹಾ ಪಾತಕಿಗಳ ಪರವಾಗಿ ಆಯಾ ರಾಜ್ಯದ ರಾಜಕಾರಣಿಗಳು ವಕಾಲತ್ತು ಹಾಕುತ್ತಿದ್ದಾರೆ! ಇಷ್ಟಕ್ಕೂ ರಾಜೀವ್ ಗಾಂಧಿ ಹತ್ಯೆಗೂ ತಮಿಳುನಾಡು ವಿಧಾನಸಭೆಗೂ ಯಾವ ಕಾನೂನಾತ್ಮಕ ಸಂಬಂಧವಿದೆ? ದೇಶದ ಸಾಂವಿಧಾನಿಕ ನ್ಯಾಯಪ್ರಕ್ರಿಯೆಯಲ್ಲಿ ರಾಜಕೀಯ ಮುಖಂಡರು ಅನಾವಶ್ಯಕವಾಗಿ ಮೂಗು ತೂರಿಸುವುದು ಏಕೆ? ಇದನ್ನೆಲ್ಲ ದೇಶದ ಯಾವ ಪ್ರಭಾವಿ ಧ್ವನಿಯೂ ಪ್ರಶ್ನಿಸುತ್ತಿಲ್ಲ.

ರಾಜೀವ್ ಗಾಂಧಿ ದೇಶದ ಪ್ರಧಾನಿಯಾಗಿದ್ದವರು. ಅವರು ದೇಶಕ್ಕೇ ಸಂಬಂಧಿಸಿದ ವ್ಯಕ್ತಿ. ಕೇವಲ ಒಂದು ಕುಟುಂಬದ ವ್ಯಕ್ತಿ ಮಾತ್ರವೇ ಅಲ್ಲ ಎನ್ನುವುದನ್ನು ಮರೆಯಬಾರದು. ರಾಜೀವ್ ಜೊತೆಗೆ 18 ಮಂದಿ ಸಾಮಾನ್ಯರು ಹತ್ಯೆಯಾದರು. ಅವರ ಕುಟುಂಬದವರಾರೂ ಉಗ್ರರ ಪರವಾಗಿ ನಿಂತಿಲ್ಲ ಎನ್ನುವುದು ಗಮನಾರ್ಹ.

ಅಫ್ಜಲ್ ಗುರು, ಎಲ್ಟಿಟಿಇ ಉಗ್ರರು, ಅಜ್ಮಲ್ ಕಸಬ್, ನಕ್ಸಲೀಯರು - ಇವರೆಲ್ಲರಿಗೂ ಸಹಾನುಭೂತಿ ತೋರಿಸುವ ಪ್ರಭಾವಿ ಜನರು ನಮ್ಮ ದೇಶದಲ್ಲಿ ಇದ್ದಾರೆ. ಆದರೆ ಸಣ್ಣಪುಟ್ಟ ಅಪರಾಧಗಳ ಆರೋಪ ಹೊತ್ತು ಹತ್ತಾರು ವರ್ಷಗಳಿಂದ ವಿಚಾರಣಾಧೀನ ಕೈದಿಗಳಾಗಿ ಜೈಲುಗಳಲ್ಲಿ ಕೊಳೆಯುತ್ತಿರುವ ಸಾಮಾನ್ಯರನ್ನು ಕೇಳುವವರೇ ಇಲ್ಲ. ಅವರ್ಯಾರಿಗೂ ಮಗು, ಮಕ್ಕಳು, ಕುಟುಂಬಗಳು ಇಲ್ಲವೆ? ಅವರ ಪರವಾಗಿ ಈ ರಾಜಕಾರಣಿಗಳು ಏಕೆ ಮಾತನಾಡುವುದಿಲ್ಲ?

ರಾಜಕಾರಣಿಗಳ ವಕಾಲತ್ತನ್ನು ಮತ್ತು ಅಪರಾಧಿಗಳ-ಬಲಿಪಶುಗಳ ಕುಟುಂಬದವರು ಹೇಳಿದ್ದನ್ನು ಕೇಳಿಕೊಂಡು ನ್ಯಾಯದಾನ ಮಾಡುವ ಹಾಗಿದ್ದರೆ ದೇಶದಲ್ಲಿ ಸಂವಿಧಾನ ವ್ಯವಸ್ಥೆ, ಕೋಟರ್ು, ಕಾನೂನು ಕಟ್ಟಳೆಗಳಾದರೂ ಏಕಿರಬೇಕು?
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ