ಬುಧವಾರ, ಸೆಪ್ಟೆಂಬರ್ 21, 2011

ಯಡಿಯೂರಪ್ಪ ಪತನಕ್ಕೆ ಕಾರಣವೇನು?

ಬಿ. ಎಸ್. ಯಡಿಯೂರಪ್ಪನವರ ಆಡಳಿತ 38 ತಿಂಗಳಿಗೇ ಪತನವಾಗಿದ್ದರ ಮಥಿತಾರ್ಥವೇನು? ಇದು ಒಂದು ಗ್ರಂಥಕ್ಕಾಗುವಷ್ಟು ಸಂಕೀರ್ಣ ವಿಷಯ. ಅಭಿವೃದ್ಧಿಯ ಕಿರೀಟಕ್ಕಾಗಿ ಹರಸಾಹಸ ಪಡುವಾಗಲೇ ಹಗರಣಗಳ ಉರುಳು ಅವರಿಗೆ ಸುತ್ತಿಕೊಂಡಿದ್ದು ವಿಪಯರ್ಾಸ.

ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಮಯದಲ್ಲಿ, ಹಾಗೂ ಅನಂತರ ಹಲವು ಬಾರಿ, `ಗುಜರಾತ್ ಮಾದರಿಯ ಆಡಳಿತ ನೀಡುತ್ತೇನೆ' ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಅದು ಪೂರ್ಣವಾಗಿ ಸಾಧ್ಯವಾಗಲಿಲ್ಲ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯ ರೀತಿಯಲ್ಲೇ ಯಡಿಯೂರಪ್ಪನವರು ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕಿದ್ದು ವಾಸ್ತವ. ಆದರೆ ಈ ಹೋಲಿಕೆ ಅಲ್ಲಿಗೇ ನಿಂತಿದ್ದೂ ವಾಸ್ತವ. ಮೋದಿಗಿಲ್ಲದ ಸಮಸ್ಯೆಗಳು ಯಡಿಯೂರಪ್ಪನವರನ್ನು ಮುತ್ತಿಕೊಂಡವು. ವೈಯಕ್ತಿಕ ಮಟ್ಟದ ಆರೋಪಗಳು ಬರದಂತೆ ಅವರು ಎಚ್ಚರವಹಿಸಬೇಕಿತ್ತು.

ಯಾವುದೇ ನಿದರ್ಿಷ್ಟ ಆರೋಪದ ಸತ್ಯಾಸತ್ಯತೆ ಎಷ್ಟಿದೆ ಎಂಬುದು ಬೇರೆಯದೇ ವಿಷಯ. ಇದಕ್ಕೆ ಲೋಕಾಯುಕ್ತ ವರದಿಯೂ ಸೇರುತ್ತದೆ. ಇಂತಹ ವಿಷಯಗಳು ನ್ಯಾಯಾಲಯಗಳ ಕಕ್ಷೆಗೆ ಬರುತ್ತವೆ. ಅಲ್ಲಿನ ತೀಮರ್ಾನಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ.

ಯಾವುದೇ ದೊಡ್ಡ ಕಳಂಕ ಸುತ್ತಿಕೊಳ್ಳದಂತೆ ನೋಡಿಕೊಳ್ಳುವುದು ಆಯಾ ನಾಯಕರ ಕೈಯಲ್ಲೇ ಇದೆ. ನರೇಂದ್ರ ಮೋದಿಗೂ ಆಂತರಿಕ ಹಾಗೂ ಬಾಹ್ಯ ಶತ್ರುಗಳಿದ್ದಾರೆ. ಆದರೂ ಭ್ರಷ್ಟಾಚಾರ ಹಗರಣಗಳು ಅವರ ಕತ್ತಿಗೆ ಸುತ್ತಿಕೊಂಡಿಲ್ಲ. ಹಗರಣಗಳಿಲ್ಲದ, ಅಭಿವೃದ್ಧಿಯೇ ಮಂತ್ರವಾಗಿರುವ ಆಡಳಿತವನ್ನು ಈವರೆಗೆ ನೀಡಲು ಸಾದ್ಯವಾಗಿರುವುದೇ ಅವರ ಯಶಸ್ಸಿನ ಗುಟ್ಟು. ಅದರಿಂದಲೇ ಅವರಿಗೆ ಜಾತಿಯ ಬಣ್ಣವಿಲ್ಲದ, ವರ್ಗಗಳ ಹಂಗಿಲ್ಲದ ಜನಬೆಂಬಲ ಲಭಿಸಿದೆ. ಕಟ್ಟುನಿಟ್ಟಿನ, ಕಳಂಕರಹಿತ ಆಡಳಿತದಿಂದಲೇ ಪಕ್ಷದ ಒಳಗಿನ ಹಾಗೂ ಹೊರಗಿನ ವಿರೋಧಿಗಳನ್ನು ನಿರ್ವಹಿಸುವುದು ಅವರಿಗೆ ಸಾಧ್ಯವಾಗಿದೆ.

ಎಲ್ಲರಿಗೂ ತಿಳಿದಿರುವ ಹಾಗೆ ಇಂದು ರಚನಾತ್ಮಕ ವಿರೋಧಪಕ್ಷಗಳ ವ್ಯವಸ್ಥೆ ಕಾಣಸಿಗುವುದು ಬರೀ ಪಠ್ಯಪುಸ್ತಕಗಳಲ್ಲಿ ಮಾತ್ರ. ಯಾವುದೇ ಆಡಳಿತವಾದರೂ ವಿಧ್ವಂಸಕ ವಿರೋಧಪಕ್ಷಗಳ ನಡುವೆಯೇ ಕೆಲಸ ಮಾಡಬೇಕಾಗಿರುವುದು ಈ ಕಾಲದ ಕರ್ಮ. ಏಕಪಕ್ಷದ ಆಡಳಿವಿದ್ದರೂ ಭಿನ್ನಮತದ ಕಾಟ ಯಾರಿಗೂ ತಪ್ಪಿದ್ದಲ್ಲ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಆಳುವ ಪಕ್ಷಗಳು ಬೇರೆಬೇರೆಯಾಗಿದ್ದರೆ ರಾಜ್ಯ ಸಕರ್ಾರದ ಪಾಲಿಗೆ ರಾಜ್ಯಪಾಲರೂ ವಿರೋಧ ಪಕ್ಷದ ನಾಯಕರಂತೆಯೇ ಆಗಬಹುದು. ಇವೆಲ್ಲದರ ಮಧ್ಯೆ ಕೆಲಸ ಮಾಡಿ, ಉತ್ತಮ ಫಲಿತಾಂಶ ತೋರಿಸಬೇಕಾದರೆ ಅಪರಿಮಿತ ತಾಳ್ಮೆ ಬೇಕಾಗುತ್ತದೆ. ವೈಯಕ್ತಿಕ ನಯಗಾರಿಕೆಯೂ ಬೇಕು. ಸಮ್ಮಿಶ್ರ ಸಕರ್ಾರವನ್ನು ತೂಗಿಸಿಕೊಂಡು ನಡೆಸಲು ಅಗತ್ಯವಾದ ಕಸರತ್ತು ಭಿನ್ನಮತೀಯರು ತುಂಬಿಕೊಂಡಿರುವ ಏಕಪಕ್ಷದ ಸಕರ್ಾರವನ್ನು ನಡೆಸುವಾಗಲೂ  ಅಗತ್ಯವಾಗುತ್ತದೆ.

ಯಡಿಯೂರಪ್ಪನವರನ್ನು ಮೇಲಿನ ಎಲ್ಲ ಅಂಶಗಳೂ ಋಣಾತ್ಮಕ ಸ್ವರೂಪದಲ್ಲಿ ಕಾಡಿದ್ದು ಗಮನಾರ್ಹ ಸಂಗತಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ