ಬುಧವಾರ, ಸೆಪ್ಟೆಂಬರ್ 21, 2011

ಸಂತಶಕ್ತಿಯ ಕಾಲಘಟ್ಟ

ಬಾಬಾ ರಾಮ್ದೇವ್ ಸತ್ಯಾಗ್ರಹವು ಸಮಾಜದಲ್ಲಿ ಸಾಧುಸಂತರ ಪಾತ್ರದ ಬಗ್ಗೆ ಚಚರ್ೆಯನ್ನು ಹುಟ್ಟುಹಾಕಿದೆ. `ಸ್ವಘೋಷಿತ' ಸಂತರ ಸಾಮಾಜಿಕ, ರಾಜಕೀಯ ಕ್ರಿಯಾಶೀಲತೆಯ ಬಗ್ಗೆ ಆಳುವ ಪಕ್ಷಗಳ ರಾಜಕಾರಣಿಗಳು ಪ್ರಶ್ನೆಗಳೆನ್ನತ್ತಿದ್ದಾರೆ.

ಸಂತರ ಸಾಮಾಜಿಕ ಕ್ರಿಯಾಶೀಲತೆ ಹೊಸ ಬೆಳವಣಿಗೆಯಲ್ಲ. ಅವದೂತರಾಗಿದ್ದರೂ ಲೋಕಸಂಗ್ರಹದ ದೃಷ್ಟಿಯಿಂದ ಕರ್ಮದಲ್ಲಿ ತೊಡಗಬೇಕು ಎಂಬುದು ಭಗವದ್ಗೀತೆಯ ಸಂದೇಶ. ಸಂತರಿಗೆ ಕರ್ಮ ತ್ಯಾಗಕ್ಕಿಂತಲೂ ಕರ್ಮಫಲದ ತ್ಯಾಗವೇ ಸಂತರ ಹೆಗ್ಗುರುತು.

ಯಾವ ಪ್ರಾಚೀನ ಸಂಪ್ರದಾಯದೊಂದಿಗೂ ಗುರುತಿಸಿಕೊಳ್ಳದ ಹೊಸ ಸಂತಸಮೂಹ ಸ್ವಾಮಿ ದಯಾನಂದರ ಕಾಲದಲ್ಲಿ ತಳವೂರಿತು. ಸ್ವಾಮಿ ವಿವೇಕಾನಂದರ ಕಾಲದಲ್ಲಿ ಪ್ರಬಲವಾದ ದನಿಯನ್ನು ಪಡೆದುಕೊಂಡಿತು. ಶ್ರೀ ಅರಬಿಂದೋ ಕಾಲದಲ್ಲಿ ಜಾಗತೀಕರಣದ ಸೌಧವನ್ನು ನಿಮರ್ಿಸಿತು. ನಂತರ ಮಹೇಶ್ ಯೋಗಿ, ಶ್ರೀ ಪ್ರಭುಪಾದ ಮುಂತಾದವರು ವಿದೇಶಗಳನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ಹೊಸ ಪರಂಪರೆಯ ಈ ಹೊಸ ಗುರುಗಳು ಸಾರ್ವತ್ರಿಕ ಹಿತದ ಗುರಿ ಇಟ್ಟುಕೊಂಡಿದ್ದವರು. ಭಾಷೆ, ಪಂಥ, ಒಳಪಂಥಗಳ ಪರಿಧಿಯನ್ನೆಲ್ಲ ಅವರು ದಾಟಿದ್ದರು.

ತಮ್ಮ ಕಾಲದ ಸಾಮಾಜಿಕ ಅಗತ್ಯಗಳನ್ನು ಸಾಂಪ್ರದಾಯಿಕ ಮಠಗಳು ಗುರುತಿಸಿಸದೇ ಇದ್ದ ಅವಧಿ ಅದು. ಈಗ ಸಾಂಪ್ರದಾಯಿಕ ಮಠಗಳೂ ಸಕ್ರಿಯವಾಗಿವೆ. ಹೊಸ ರೀತಿಯ ಮಠಗಳೂ ತಲೆಯೆತ್ತುತ್ತಿವೆ. ಆದರೂ ಅವುಗಳಲ್ಲಿ `ಯೂನಿವರ್ಸಲ್ ಅಪೀಲ್' ಎನ್ನುವುದು ಇನ್ನೂ ಇಲ್ಲ. ಅವುಗಳನ್ನು ಪೂರ್ಣವಾಗಿ ಧಾಮರ್ಿಕ, ಆಧ್ಯಾತ್ಮಿಕ ಎನ್ನುವ ಹಾಗೂ ಇಲ್ಲ, ಇತ್ತ ಸಮಾಜಮುಖಿ ಎನ್ನುವಂತೆಯೂ ಇಲ್ಲ. ಅಂತಹ ಸ್ಥಿತಿಯಲ್ಲಿದ್ದು ರಾಜಕೀಯ ಹೋರಾಟಗಳಿಂದ, ಸಾಮಾಜಿಕ ಆಂದೋಲನಗಳಿಂದ ಹಾಗೂ ಅಭಿವೃದ್ಧಿ ಯೋಜನೆಗಳಿಂದ ಒಂದಿಷ್ಟು ಅಂತರದಲ್ಲೇ ಉಳಿದುಕೊಂಡು ತಟಸ್ಥವಾಗಿವೆ ಎನ್ನಬಹುದು. ಆಧುನಿಕ ಮ್ಯಾನೇಜ್ಮೆಂಟ್ ಪರಿಭಾಷೆಯ `ಬಿಗ್ ಥಿಂಕಿಂಗ್' ಅನ್ನು ಸಾಮಾಜಿಕ, ಧಾಮರ್ಿಕ ರಂಗದಲ್ಲಿ ತರುವುದು ಅವುಗಳಿಂದ ಅಷ್ಟಾಗಿ ಸಾಧ್ಯವಾಗಿಲ್ಲ.

ರಾಜಕೀಯದಂತೆ ಧಾಮರ್ಿಕ ಜಗತ್ತಿನಲ್ಲೂ ಪರಂಪರೆಗಿಂತಲೂ ವೈಯಕ್ತಿಕ ವರ್ಚಸ್ಸಿನ ಪಾಲೇ ಹೆಚ್ಚಿನದು. ಹೀಗಾಗಿ ಈಗ ಜನರ ಗಮನ ಹೆಚ್ಚಾಗಿ ಪಬ್ಲಿಕ್ ರಿಲೇಷನ್ಸ್, ಮಾಕರ್ೆಟಿಂಗ್ ಚೆನ್ನಾಗಿ ತಿಳಿದಿರುವ, ಅವುಗಳನ್ನು ರಣತಾಂತ್ರಿಕ ನಿಖರತೆಯೊಂದಿಗೆ ಪ್ರಯೋಗಿಸುವ ಸಾಮಥ್ರ್ಯವುಳ್ಳ, ಆಧುನಿಕ ಸಂತರೆಡೆಗೆ ತಿರುಗುತ್ತಿರುವುದು ಸುಳ್ಳಲ್ಲ. ಇದರಿಂದ ಜನರಿಗೆ ಎಷ್ಟು ಅಧ್ಯಾತ್ಮ ಸಿದ್ಧಿಸುತ್ತದೆ ಎಂಬುದು ಬೇರೆ ಮಾತು. ನವಗುರುಗಳ ಪ್ರಭಾವವಂತೂ ಹೆಚ್ಚುತ್ತಿದೆ.

ಆಧುನಿಕ ಗುರುಗಳ, ಸಂತರ ಪರಂಪರೆ ಬಹಳ ವೇಗವಾಗಿ ಬೆಳೆಯುತ್ತಿದೆ. ಈ ಪೈಕಿ ಕೆಲವು ಗಟ್ಟಿ ವ್ಯಕ್ತಿತ್ವದ ಸಂತರೂ ಇದ್ದಾರೆ. ಅವರು ತಮ್ಮ ವೈಯಕ್ತಿಕ ವರ್ಚಸ್ಸನ್ನು, ಪ್ರಭಾವವಲಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ತಮ್ಮ ಸುತ್ತಲಿನ ಸಮಾಜದ ಅಭಿವೃದ್ಧಿಯತ್ತಲೂ ಗಮನ ನೀಡಿದ್ದಾರೆ. ದೇಶವಿದೇಶಗಳ ಆಗುಹೋಗುಗಳಲ್ಲಿ ಪಾತ್ರವಹಿಸಲೂ ಸಿದ್ಧರಿದ್ದಾರೆ. ಜನಪರ ಕಾಳಜಿಯನ್ನೂ ವ್ಯಕ್ತಪಡಿಸುತ್ತಾರೆ. ಕೆಲವರು ಗಿಮಿಕ್ಗಳನ್ನೂ ಮಾಡುತ್ತಾರೆ. ಜನರನ್ನು (ಹಣವನ್ನು?) ಆಕಷರ್ಿಸುವಲ್ಲಿ ಅವರವರಲ್ಲೇ ಪರಸ್ಪರ ಪೈಪೋಟಿ ನಡೆಯುತ್ತಿದೆ ಎನ್ನುವ ಮಾತೂ ಇದೆ. ಇಂತಹವರ ಮಧ್ಯೆ ಪೂರ್ಣ ಜೊಳ್ಳು, ಪೊಳ್ಳುಗಳೂ ಸಹ ಸಂತರ ವೇಷ ಧರಿಸಿಕೊಂಡಿವೆ.

ಅದೇನೇ ಇರಲಿ, ಸಂತಶಕ್ತಿ ಸರ್ವರಂಗಗಳಲ್ಲೂ ಪ್ರಜ್ವಲಿಸಲು ಆರಂಭಿಸಿರುವ ಈ ಕಾಲಘಟ್ಟ ಇದು.
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ